Homeಸಿನಿಮಾಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ....

ಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ….

- Advertisement -
- Advertisement -
ಕನ್ನಡಿಗರು ಭಾವನಾ ಜೀವಿಗಳು, ಕರ್ನಾಟಕದಲ್ಲಿ ಭಾವನೆಗಳಿಗೆ ಬೆಲೆ ಜಾಸ್ತಿ ಎಂಬ ಮಾತುಗಳು ಚಿತ್ರರಂಗದಲ್ಲಿ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಅಂತೆಯೇ ಕೆಲವು ಸಿನಿಮಾಗಳಲ್ಲಿ ಕನ್ನಡಿಗರು ಸೆಂಟಿಮೆಂಟಲ್ ಫೂಲ್ಸ್ ಎಂದೂ ಸಹ ನಯವಾಗಿ ಬೈಸಿಕೊಂಡಿರುವುದೂ ಇದೆ. ಕನ್ನಡ ಚಿತ್ರರಂಗವು ಸೆಂಟಿಮೆಂಟ್‍ಗೆ ಹೆಚ್ಚು ಹೊತ್ತು ಕೊಡುತ್ತಾ ಬಂದಿದೆ, ಸಂಬಂಧಗಳ ಭಾವನೆಗಳನ್ನಿಟ್ಟುಕೊಂಡು ಮಾಡಿದ ಸಿನಿಮಾಗಳು ಫೈಲ್ ಆಗಿದ್ದೇ ಇಲ್ಲ.
ಅದರಲ್ಲೂ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದಷ್ಟು ಅನುಕಂಪ. ಅಮ್ಮ ಎಂದರೆ ಸ್ಥೈರ್ಯ, ಅಮ್ಮಾ ಎಂದರೆ ಅನುಕಂಪ, ತಾಯಿಯೇ ಸ್ಫೂರ್ತಿ ಎಂಬ ಹೆಗ್ಗಳಿಕೆ ಕನ್ನಡಿಗರದು. ಹೆತ್ತವಳು ಕಣ್ಣೆದುರೇ ಮರೆಯಾಗುತ್ತಾಳೆಂದಾಗ ಅವಳನ್ನು ಉಳಿಸಿಕೊಳ್ಳಲು ಮಗನ ಒದ್ದಾಟ ಹಾಗೂ ತಳಮಳವನ್ನು ಕಥೆಯನ್ನಾಗಿಟ್ಟುಕೊಂಡು ನಿರ್ದೇಶಕ ಕೆ.ಎಂ.ಚೈತನ್ಯ ‘ಅಮ್ಮ ಐ ಲವ್ ಯೂ’ ಸಿನಿಮಾ ಮಾಡಿದ್ದಾರೆ.
ಪ್ರೀತಿಯ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರ ಅಮ್ಮ ಮಗನ ಸೆಂಟಿಮೆಂಟ್ ಅಷ್ಟೇ ಅಲ್ಲದೆ ಸಮಾಜದ ಹಲವು ಸಂಬಂಧಗಳನ್ನು ಬೆಸೆಯುವ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಭಿಕ್ಷುಕರ ಬದುಕಿನ ತೊಳಲಾಟದೊಂದಿಗೆ ಬದುಕಿನ ಅರ್ಥವನ್ನು ಕಟ್ಟಿಕೊಟ್ಟಿದೆ.
ಸಿದ್ದಾರ್ಥ್ ತನ್ನ ಹೆತ್ತ ತಾಯಿ ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವಳನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳನ್ನು ಸುತ್ತಿದರು ತಾಯಿ ಗುಣಮುಖಳಾಗದಿದ್ದ ಚಿಂತೆಯಲ್ಲಿದ್ದವನು ಒಬ್ಬ ಸನ್ಯಾಸಿಯ ಮಾತು ಕೇಳಿ ತನ್ನ ವೈಚಾರಿಕತೆಯನ್ನು ಬದಿಗೊತ್ತಿ ಶ್ರೀಮಂತಿಯ ವೇಷ ಮರೆಸಿ ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆಯ ಅಜ್ಞಾತವಾಸಕ್ಕೆ ತೆರಳುತ್ತಾನೆ, ಇಲ್ಲಿ ತಾಯಿಯ ಮೇಲಿನ ಮಮತೆ ಔಷಧಿಗಳಿಂದ ಸಾಧ್ಯವಾಗದ್ದು ಹರಕೆಯಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಲಾರದು. ಇಂತಹ ಸಂದರ್ಭಗಳು ಜನರು ಮೌಢ್ಯದ ಮೊರೆಹೊಗುವ ಪರಿಸ್ಥಿತಿಗೆ ಕನ್ನಡಿ ಇಟ್ಟಂತೆ ತಿಳಿಸುತ್ತವೆ.
ಆ ದಿನಗಳಲ್ಲಿ ಭಿಕ್ಷುಕರ ನೋವು-ನಲಿವು, ಅವರು ಎದುರಿಸುವ ಮಾನಸಿಕ ದೈಹಿಕ ಹಿಂಸೆಗಳನ್ನು ಬಿಡಿಸಿಟ್ಟಿರುವ ಚಿತ್ರ, ಭಿಕ್ಷುಕರೆಂದರೆ ಅಸಹ್ಯ ಪಡುವ ಜನರು ಹಾಗೂ ಕೆಲವು ಸಿನಿಮಾಗಳನ್ನು ನೋಡಿ ಭಿಕ್ಷುಕರು ಭಾರಿ ಸಂಪಾದಿಸುತ್ತಾರೆಂದು ಅವರನ್ನು ದೂಷಿಸುವ ಜನರಿಗೆ ಭಿಕ್ಷುಕರನ್ನು ಕಾಮೆಡಿ ಸೀನ್‍ಗಳಾಗಿ ತೋರುವ ಬೇರೆಲ್ಲ ಸಿನಿಮಾಗಳಿಗಿಂತ ಭಿಕ್ಷುಕರ ಬದುಕಿನ ನೈಜತೆಯನ್ನು ಚಿತ್ರಿಸಿದೆ. ಭಿಕ್ಷುಕರೂ ಮನುಷ್ಯರೇ ಅವರಿಗೂ ಒಂದು ಬದುಕಿದೆ, ಉಳ್ಳವರ ಮಧ್ಯೆ ಅವರ ದೌರ್ಜನ್ಯಗಳಿಂದ ತೊಳಲಾಡುವ ಇಲ್ಲದವರ ಬದುಕಿನ ಪ್ರತಿಬಿಂಬವಾಗಿ ಭಿಕ್ಷುಕರ ಬದುಕು ಕಾಣದೆ ಇರಲಾರದು.
ಮಾಲೀಕನ ಕೈ ಕೆಳಗೆ ದುಡಿದು ಕಷ್ಟದ ದಿನಗಳಲ್ಲಿ ಎದುರಿಸಿ ಉದ್ಯಮಿಯಾಗಿ ಬೆಳೆದುಬಂದ ಸಿದ್ದಾರ್ಥನ ತಾಯಿ, ಕಂಪನಿಯ ಮಾಲಕಿಯಾಗಿ, ದುಡಿಯುವ ಜನರ ಸ್ನೇಹಿತೆಯಾಗಿದ್ದು, ನೌಕರರನ್ನು ರೋಬೋಟ್‍ಗಳಂತೆ ದುಡಿಸಿಕೊಳ್ಳುವ ವ್ಯವಸ್ಥೆಯೊಳಗೆ ಕಷ್ಟದ ಅರಿವಿರುವ ತಾಯಿ ತನ್ನ ಕಂಪನಿಯಲ್ಲಿ ದುಡಿಯುವ ಶ್ರಮಿಕರ ಹಿತವನ್ನೂ ಕಾಯುವ, ಅವರ ಬದುಕಿನಲ್ಲಿ ನೆರವಾಗುತ್ತಾ ಎಲ್ಲರನ್ನೂ ನಿಸ್ವಾರ್ಥವಾಗಿ ಒಳಗೊಳ್ಳುವಳು, ಈ ಒಳಗೊಳ್ಳುವಿಕೆ ಇಲ್ಲದವರ ಶ್ರಮದಿಂದ ಉಳ್ಳವರು ಕಟ್ಟಿಕೊಳ್ಳುವ ಮೊಹಲ್ಲಗಳ ಮಧ್ಯೆ ಸದೃಢ ಸಮಾಜದಲ್ಲಿ ದುಡಿಯುವ ಕೈಗಳಿಸಿ ತಮ್ಮ ಶ್ರಮಕ್ಕೆ ಸಿಗಬೇಕಾದ ಪಾಲಿನ ಸಂಕೇತವಾಗಿದೆ. ತಮ್ಮ ದುಡಿವ ಕೈಗಳಿಗೆ ಕೆಲಸಕೊಟ್ಟ ಅವಳ ಉಳಿವಿಗಾಗಿ ಪ್ರಾರ್ಥಿಸುವ ಸಿಬ್ಬಂದಿಗಳು, ಮಾಲಿಕ ಮತ್ತು ಶ್ರಮಿಕರ ಹೊಂದಾಣಿಕೆಗೆ ಸ್ಪೂರ್ತಿ ತುಂಬುತ್ತದೆ.
ಮತ್ತೊಂದೆಡೆ ಇಂದಿನ ಯುವಜನರು ಸಮಾಜದಲ್ಲಿ ಮಾಡಬೇಕಾದ ಸಹಾಯಾಸ್ತದ ಕನಿಷ್ಟ ಮೌಲ್ಯವನ್ನು ತೋರಿಸುವ ನಾಯಕಿಯ ಪಾತ್ರ, ತಾಯಿಗಾಗಿ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ. ಈ ಎಲ್ಲಾ ಪಾತ್ರಗಳೂ ಜೀವನ ಸಂಗ್ರಾಮದ ಹಲವು ದಿಕ್ಕುಗಳನ್ನು ತೋರುತ್ತವೆ.

ಪ್ರೀತಿ, ಮಮತೆಯ ಹುಡುಕಾಟದೊಂದಿಗೆ ಸಾಗುವ ಚಿತ್ರ ನೋಡುಗರ ಮನತಟ್ಟುವ ಕಥಾಹಂದರವನ್ನು ಒಳಗೊಂಡಿದೆ. ಆದರೆ ಇಂತಹ ಕತೆಯನ್ನು ತೆರೆಯ ಮೇಲೆ ನಿರೂಪಿಸುವಾಗ ಪ್ರೇಕ್ಷಕರ ಮನಸಲ್ಲಿ ಕ್ಯೂರಿಯಾಸಿಟಿಯನ್ನಾಗಲಿ ಅಥವಾ ನೋಡುಗರ ಗಮನ ಮತ್ತೊಂದೆಡೆಗೆ ಜಾರದಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ತಂಡ ಕೊಂಚ ಎಡವಿದೆಯಾದರೂ, ಭಿಕ್ಷುಕನ ಪಾತ್ರದಲ್ಲಿ ಚಿರು, ಹಾಗೂ ನಾಯಕಿಯಾಗಿ ಹೊಸ ನಟಿ ನಿಶ್ಚಿಕಾ ಸೌಂದರ್ಯ ಉತ್ತಮ ಅಭಿನಯ ನೀಡಿದ್ದಾರೆ.


ಕಳೆದುಹೋದ ಖಳನಾಯಕ

ವಿಷ್ಣುವರ್ಧನ್, ಅಂಬರೀಶ್, ಶಿವರಾಜ್‍ಕುಮಾರ್‍ರಂಥಹ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಖಳನಾಯಕನಾಗಿ ಅಭಿನಯಿಸುತ್ತಿದ್ದ ಧೀಮಂತ ಕಲಾವಿದ, ಖ್ಯಾತ ನಾಟಕಕಾರ ಸದಾಶಿವ ಸಾಲ್ಯನ್ ಇಹಲೋಕ ತ್ಯಜಿಸಿದ್ದಾರೆ. 1988ರಲ್ಲಿ ತುಳು ಭಾಷೆಯ ‘ಭಾಗ್ಯವಂತೆದಿ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸಾಲ್ಯನ್ ಕನ್ನಡ, ತುಳು, ಹಿಂದಿ, ಮರಾಠಿ ಭಾಷೆಯಲ್ಲಿ ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ್ದರು, 500ಕ್ಕೂ ಹೆಚ್ಚು ರಂಗ ಪ್ರಯೋಗಗಳಲ್ಲ್ಲಿ ಅಭಿನಯಿಸಿದ ಮುಂಬೈ-ಕರ್ನಾಟಕದ ಏಕೈಕ ರಂಗಕಲಾವಿದನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮುಂಬೈನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯೂ ಆಗಿದ್ದ ಇವರು 2004ಅಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲಿನ ಸ್ವಾಧಿನ ಕಳೆದುಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದವರು.


ಕುಂಬಳಕಾಯಿ ಕಳ್ಳ ಕೋಕಿಲ?
ಸಿನಿಮಾ ರಂಗದ ಸ್ಟಾರ್‍ಗಳು, ನಿರ್ದೇಶಕರು, ನಿರ್ಮಾಪಕರಿಗಾಗಲೀ ಭೂಗತ ಪಾತಕಿಗಳೊಂದಿಗಿನ ಒಡನಾಟ ಮಾಮೂಲಿಯಾದದ್ದು. ಎಷ್ಟೋ ನಿರ್ಮಾಪಕರೇ ರೌಡಿ ಶೀಟರ್ ಬ್ಯಾಗ್ರೌಂಡ್ ಹೊಂದಿರುತ್ತಾರೆ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಲ್ಲ. ಅಂತೆಯೇ ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿಯನ್ನು ಬಹಳ ದಿನಗಳಿಂದ ಹುಡುಕುತ್ತಿದ್ದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ರೌಡಿ ರವಿ ಜತೆ ಹಾಸ್ಯನಟ ಸಾಧುಕೋಕಿಲ ಒಡನಾಟ ಇಟ್ಟುಕೊಂಡಿದ್ದರೆಂದು ಯಾರೋ ಹಬ್ಬಿಸಿದ
ಗಾಳಿಸುದ್ದಿಯನ್ನು ಕೇಳಿ ಹೆದರಿದ ಸಾಧು ಸಿಸಿಬಿ ಕಚೇರಿಗೆ ದೌಡಾಯಿಸಿದ್ದಾರೆ. ನನಗೂ ರೌಡಿಗೂ ಯಾವ ಸಂಬಂಧವೂ ಇಲ್ಲ, ಈ ಪ್ರಕರಣದಲ್ಲಿ ನನ್ನ ಹೆಸರು ಬರುತ್ತಿದೆಯಂತೆ ಎಂದು ಅಧಿಕಾರಿಯ ಎದುರು ಕುಂಯ್ಯೋಮರ್ರೋ ಎಂದರಂತೆ. ಅದಕ್ಕೆ ಆ ಅಧಿಕಾರಿ ನಿನಗೆ ರೌಡಿಯ ಜತೆ ಒಡನಾಟವಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ, ಹೇಳೋಕೆ ಯಾವ ಪುರಾವೆಯೂ ಇಲ್ಲ, ‘ಕುಂಬಳಕಾಯಿ ಕಳ್ಳ ಅಂದ್ರೆ ನೀನ್ಯಾಕೆ ಹೆಗಲು ಮುಟ್ಟಿ ನೋಡ್ಕೋತೀಯಾ’, ಹಾಗೇನಾದರೂ ಇದ್ದರೆ ನಾವೆ ಕರೆಯುತ್ತಿದ್ದೆವು ಎಂದು ಮಂಗಳಾರತಿ ಮಾಡಿ ಕಳಿಸಿದ್ದಾರೆ. ಸಾಧುವಿನ ಈ ಅತಿಗಾಬರಿಯ ವರ್ತನೆ ಅದ್ಯಾವುದೋ ಕೆಟ್ಟ ಕ್ಷಣಗಳ ಮುನ್ಸೂಚನೆಯಂತೆ ಕಾಣುತ್ತಿದೆ. ಹಾಗೇನಾದರೂ ಸಾಧು ಇಂತಹ ಕ್ರಿಮಿನಲ್‍ಗಳ ಒಡನಾಟ ಇಟ್ಟುಕೊಂಡಿದ್ದರೆ, ಅಂತಹವುಗಳನ್ನು ಕತ್ತರಿಸಿಕೊಂಡು ಹೊರಬರಲಿ. ಯಾಕೆಂದರೆ, ಅವರ ಪ್ರತಿಭೆಗೆ ಈ ಬಗೆಯ ಮಸಿ ಹತ್ತಿಕೊಂಡು ಮಂಕಾಗುವುದು ಯಾರಿಗೂ ಇಷ್ಟವಿಲ್ಲ.
– ಸೋಮಶೇಖರ್ ಚಲ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...