Homeರಾಜಕೀಯಉರ್ಸುಲಾ ಅ್ಯಂಡ್ರೆಸ್‍ಳನ್ನು ಸೋನಿಯಾ ಮಾಡಿದ ಸುಳ್ಳರು

ಉರ್ಸುಲಾ ಅ್ಯಂಡ್ರೆಸ್‍ಳನ್ನು ಸೋನಿಯಾ ಮಾಡಿದ ಸುಳ್ಳರು

- Advertisement -
- Advertisement -

ಪ್ರಿಯಾಂಕ ಗಾಂಧಿಯವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಸುದ್ದಿ ಬಂದಾಗಿನಿಂದ, ಅವರನ್ನು ಅವಹೇಳನ ಮಾಡುವ ಹಲವಾರು ಸುಳ್‍ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಹಿಂದೆ ಸೋನಿಯಾ ಗಾಂಧಿಯವರ ಕುರಿತು ಅಸಹ್ಯ ಸುಳ್ ಒಂದನ್ನು ಬಲಪಂಥೀಯರು ಹರಿಬಿಟ್ಟಿದ್ದರು. ಈಗ ಆ ಸುದ್ದಿಯೂ ಮತ್ತೆ ಓಡಾಡಲು ಆರಂಭಿಸಿದೆ.
ಹೆಣ್ಣು ಮಕ್ಕಳೇ ಎಚ್ಚರ, ಮೋದಿಯ ಉಗ್ರ ಅಭಿಮಾನಿಗಳು (ನಮೋಭಕ್ತರು) ಎಂದುಕೊಳ್ಳುವವರು ನಿಮಗೆ ಗೊತ್ತಿದ್ದರೆ ಹುಷಾರಾಗಿರಿ. ಅವರು ಯಾವಾಗ ನಿಮ್ಮ ಫೋಟೊವನ್ನು ಯಾವುದೋ ಅರೆ ಬೆತ್ತಲೆ ಫೋಟೊದೊಂದಿಗೆ ಕ್ಲಬ್ ಮಾಡಿ ವೈರಲ್ ಮಾಡುವರೋ ಗೊತ್ತಿಲ್ಲ. ಇಂತಹವರು ನನ್ನ ಅಭಿಮಾನಿಗಳಲ್ಲ ಎಂದು ಇವತ್ತಿಗೂ ಮೋದಿಯಾಗಲಿ, ಬಿಜೆಪಿಯಾಗಲಿ ನಿರಾಕರಣೆ ಮಾಡಿಲ್ಲ. ಮೋದಿಯವರು ಟ್ವಿಟರ್‍ನಲ್ಲಿ ಫಾಲೋ ಮಾಡುವ ವ್ಯಕ್ತಿಗಳಲ್ಲಿ ಹಲವಾರು ಲಂಪಟ ಬುದ್ದಿಯ ವಿಕೃತರಿದ್ದಾರೆ. ಅವರ ಟ್ವೀಟ್‍ಗಳನ್ನು ಗಮನಿಸಿದರೆ ಅವರ ಯೋಗ್ಯತೆ, ಅಭಿರುಚಿ ಗೊತ್ತಾಗಿ ಬಿಡುತ್ತದೆ.

ಬಾಂಡ್ ಪಿಚ್ಚರ್ ಫೋಟೊ

ಮಿಥ್ಯ: ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೊವನ್ನು ವೈರಲ್ ಮಾಡಲಾಗಿದ್ದು ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವ ಯತ್ನ ಮಾಡಲಾಗಿದೆ. ಈ ಫೋಟೊದಲ್ಲಿ ಸೋನಿಯಾ ಬೀಚ್ ಉಡುಪಿನಲ್ಲಿ ಗಂಡಸೊಬ್ಬರೊಂದಿಗಿದ್ದಾರೆ ಎಂಬ ಚಿತ್ರಣ ಸೃಷ್ಟಿಸುವುದು ಇದರ ಉದ್ದೇಶ. ‘ಹಲೋ ಕಾಂಗ್ರೆಸ್ಸಿಗರೇ, ನೋಡಿ ನಿಮ್ಮ ನಾಯಕಿ ಸೋನಿಯಾ ಅವಸ್ಥೆಯನ್ನು. ಇದೂ ಸುಳ್ಳು ಅಂತೀರಾ?’ ಎಂದು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಬಲಪಂಥೀಯ ಫೇಸ್‍ಬುಕ್ ಪೇಜ್ ಈ ಸಂಚು ರೂಪಿಸಿದೆ. ಇದು 24 ಗಂಟೆಗಳಲ್ಲಿ 10 ಸಾವಿರ ಬಾರಿ ಶೇರ್ ಆಗಿದೆ.
ಈ ನಕಲಿ ಫೋಟೊ ಇಟ್ಟಕೊಂಡು ‘ದೇಶ ರಕ್ಷಿಸಿ’ ಅಭಿಯಾನ ನಡೆಸುತ್ತಿರುವ ಮುಖೇಡಿ ಗುಂಪುಗಳ ಫೇಸ್Àಬುಕ್ ಪೇಜ್‍ಗಳು: ವಿ ಸಪೋರ್ಟ್ ಪಿಎಂ ಮೋದಿ, ವೋಟ್ ಫಾರ್ ಬಿಜೆಪಿ, ವೋಟ್ ಫಾರ್ ಯೊಗಿ ಆದಿತ್ಯನಾಥ್ ಇತ್ಯಾದಿ.
ಸತ್ಯ: ಈ ಫೋಟೊದಲ್ಲಿರುವುದು ಸೋನಿಯಾ ಅಲ್ಲವೇ ಅಲ್ಲ. ಮೊದಲ ಜೇಮ್ಸ್ ಬಾಂಡ್ ಚಿತ್ರ ‘ಆಡಿ. ಓಔ’ ಚಲನಚಿತ್ರದ ಸೆಟ್‍ನಲ್ಲಿ ಸ್ವಿಸ್ ನಟಿ ಉರ್ಸುಲಾ ಅ್ಯಂಡ್ರೆಸ್ ನಟನೆಯ ಸ್ಟಿಲ್ ಇವು. ಆಕೆಯ ಜೊತೆಗಿರುವಾತ ಬಾಂಡ್ ಪಾತ್ರ ಮಾಡಿದ ಸ್ಕಾಟಿಷ್ ನಟ ಸಿಯಾನ್ ಕಾನರಿ.
ಸತ್ಯ ಇಷ್ಟು ಸಿಂಪಲ್ಲಾಗಿದೆ. ಇದನ್ನು ಕೆಲವರು ವಿವರಿಸಿದರೂ ಸುಳ್ ಸುಬ್ಬರು ವಿಕೃತ ನಗೆಯಲ್ಲೇ ಕಾಲ ಹಾಕುತ್ತಿದ್ದಾರೆ. ಈ ಹಿಂದೆಯೂ ಸೋನಿಯಾ ಗಾಂಧಿ ತೇಜೋವಧೆಗೆ ಸಾಕಷ್ಟು ಯತ್ನ ಮಾಡಲಾಗಿದೆ. ಹಿಂದೆ ಇದೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಪೇಜ್‍ನಲ್ಲಿ ಫೋಟೊಶಾಪ್ ಮಾಡಿ ಸೋನಿಯಾ ಮತ್ತು ಮಾಲ್ಡಿವ್ಸ್‍ನ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಫೋಟೊ ಹಾಕಲಾಗಿತ್ತು. ಸೋನಿಯಾ ಗಯೂಮ್ ತೊಡೆ ಮೇಲೆ ಕುಳಿತಂತೆ ಫೋಟೊ ಸೃಷ್ಟಿಸಲಾಗಿತ್ತು.
ಹಾಲಿವುಡ್ ನಟಿ ರೀಸ್ ವಿಡರ್‍ಸ್ಪೂನ್ ಫೋಟೊ ಹಾಕಿ, ಸೋನಿಯಾ ಯುವತಿಯಾಗಿದ್ದಾಗ ಬಾರ್ ವೇಟ್ರೆಸ್ ಆಗಿದ್ದಳು ಎಂದು ಸುಳ್ ಹರಡಲಾಗಿತ್ತು. ಮರ್ಲಿನ್ ಮನ್ರೋ ಫೋಟೊಕ್ಕೆ ಸೋನಿಯಾ ಮುಖ ಪೇಸ್ಟ್ ಮಾಡಿ, ಬಾರ್‍ಗರ್ಲ್ ಸೋನಿಯಾ ಎಂದು ತಿರುಚಲಾಗಿತ್ತು.
ಸೋನಿಯಾ ಈಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗಲೂ ಅವರ ವಿರುದ್ಧ ವಿಕೃತ ಸುಳ್‍ಗಳನ್ನು ಹರಡಲಾಗುತ್ತಿದೆ. ಈ ವಿಕೃತರ ಮಾಡೆಲ್‍ಗಳೇ ಸಾರ್ವಜನಿಕ ಸಭೆಗಳಲ್ಲೇ ಸುಳ್ಳುಗಳನ್ನು ಸತ್ಯ ಎಂಬಂತೆ ಕಿರುಚುವಾಗ ಇನ್ನೇನಾಗುತ್ತದೆ?
ಫೋಟೊ ಶಿರ್ಷಿಕೆ: ಚಿತ್ರದಲ್ಲಿರುವುದು ಸೋನಿಯಾ ಗಾಂಧಿ ಅಲ್ಲ, ‘ಆಡಿ. ಓಔ’ ಚಲನಚಿತ್ರದಲ್ಲಿ ನಟಿ ಉರ್ಸುಲಾ ಅ್ಯಂಡ್ರೆಸ್, ನಟ ಸಿಯಾನ್ ಕಾನರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...