Homeರಾಜಕೀಯಉರ್ಸುಲಾ ಅ್ಯಂಡ್ರೆಸ್‍ಳನ್ನು ಸೋನಿಯಾ ಮಾಡಿದ ಸುಳ್ಳರು

ಉರ್ಸುಲಾ ಅ್ಯಂಡ್ರೆಸ್‍ಳನ್ನು ಸೋನಿಯಾ ಮಾಡಿದ ಸುಳ್ಳರು

- Advertisement -
- Advertisement -

ಪ್ರಿಯಾಂಕ ಗಾಂಧಿಯವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಸುದ್ದಿ ಬಂದಾಗಿನಿಂದ, ಅವರನ್ನು ಅವಹೇಳನ ಮಾಡುವ ಹಲವಾರು ಸುಳ್‍ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಹಿಂದೆ ಸೋನಿಯಾ ಗಾಂಧಿಯವರ ಕುರಿತು ಅಸಹ್ಯ ಸುಳ್ ಒಂದನ್ನು ಬಲಪಂಥೀಯರು ಹರಿಬಿಟ್ಟಿದ್ದರು. ಈಗ ಆ ಸುದ್ದಿಯೂ ಮತ್ತೆ ಓಡಾಡಲು ಆರಂಭಿಸಿದೆ.
ಹೆಣ್ಣು ಮಕ್ಕಳೇ ಎಚ್ಚರ, ಮೋದಿಯ ಉಗ್ರ ಅಭಿಮಾನಿಗಳು (ನಮೋಭಕ್ತರು) ಎಂದುಕೊಳ್ಳುವವರು ನಿಮಗೆ ಗೊತ್ತಿದ್ದರೆ ಹುಷಾರಾಗಿರಿ. ಅವರು ಯಾವಾಗ ನಿಮ್ಮ ಫೋಟೊವನ್ನು ಯಾವುದೋ ಅರೆ ಬೆತ್ತಲೆ ಫೋಟೊದೊಂದಿಗೆ ಕ್ಲಬ್ ಮಾಡಿ ವೈರಲ್ ಮಾಡುವರೋ ಗೊತ್ತಿಲ್ಲ. ಇಂತಹವರು ನನ್ನ ಅಭಿಮಾನಿಗಳಲ್ಲ ಎಂದು ಇವತ್ತಿಗೂ ಮೋದಿಯಾಗಲಿ, ಬಿಜೆಪಿಯಾಗಲಿ ನಿರಾಕರಣೆ ಮಾಡಿಲ್ಲ. ಮೋದಿಯವರು ಟ್ವಿಟರ್‍ನಲ್ಲಿ ಫಾಲೋ ಮಾಡುವ ವ್ಯಕ್ತಿಗಳಲ್ಲಿ ಹಲವಾರು ಲಂಪಟ ಬುದ್ದಿಯ ವಿಕೃತರಿದ್ದಾರೆ. ಅವರ ಟ್ವೀಟ್‍ಗಳನ್ನು ಗಮನಿಸಿದರೆ ಅವರ ಯೋಗ್ಯತೆ, ಅಭಿರುಚಿ ಗೊತ್ತಾಗಿ ಬಿಡುತ್ತದೆ.

ಬಾಂಡ್ ಪಿಚ್ಚರ್ ಫೋಟೊ

ಮಿಥ್ಯ: ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೊವನ್ನು ವೈರಲ್ ಮಾಡಲಾಗಿದ್ದು ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವ ಯತ್ನ ಮಾಡಲಾಗಿದೆ. ಈ ಫೋಟೊದಲ್ಲಿ ಸೋನಿಯಾ ಬೀಚ್ ಉಡುಪಿನಲ್ಲಿ ಗಂಡಸೊಬ್ಬರೊಂದಿಗಿದ್ದಾರೆ ಎಂಬ ಚಿತ್ರಣ ಸೃಷ್ಟಿಸುವುದು ಇದರ ಉದ್ದೇಶ. ‘ಹಲೋ ಕಾಂಗ್ರೆಸ್ಸಿಗರೇ, ನೋಡಿ ನಿಮ್ಮ ನಾಯಕಿ ಸೋನಿಯಾ ಅವಸ್ಥೆಯನ್ನು. ಇದೂ ಸುಳ್ಳು ಅಂತೀರಾ?’ ಎಂದು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಬಲಪಂಥೀಯ ಫೇಸ್‍ಬುಕ್ ಪೇಜ್ ಈ ಸಂಚು ರೂಪಿಸಿದೆ. ಇದು 24 ಗಂಟೆಗಳಲ್ಲಿ 10 ಸಾವಿರ ಬಾರಿ ಶೇರ್ ಆಗಿದೆ.
ಈ ನಕಲಿ ಫೋಟೊ ಇಟ್ಟಕೊಂಡು ‘ದೇಶ ರಕ್ಷಿಸಿ’ ಅಭಿಯಾನ ನಡೆಸುತ್ತಿರುವ ಮುಖೇಡಿ ಗುಂಪುಗಳ ಫೇಸ್Àಬುಕ್ ಪೇಜ್‍ಗಳು: ವಿ ಸಪೋರ್ಟ್ ಪಿಎಂ ಮೋದಿ, ವೋಟ್ ಫಾರ್ ಬಿಜೆಪಿ, ವೋಟ್ ಫಾರ್ ಯೊಗಿ ಆದಿತ್ಯನಾಥ್ ಇತ್ಯಾದಿ.
ಸತ್ಯ: ಈ ಫೋಟೊದಲ್ಲಿರುವುದು ಸೋನಿಯಾ ಅಲ್ಲವೇ ಅಲ್ಲ. ಮೊದಲ ಜೇಮ್ಸ್ ಬಾಂಡ್ ಚಿತ್ರ ‘ಆಡಿ. ಓಔ’ ಚಲನಚಿತ್ರದ ಸೆಟ್‍ನಲ್ಲಿ ಸ್ವಿಸ್ ನಟಿ ಉರ್ಸುಲಾ ಅ್ಯಂಡ್ರೆಸ್ ನಟನೆಯ ಸ್ಟಿಲ್ ಇವು. ಆಕೆಯ ಜೊತೆಗಿರುವಾತ ಬಾಂಡ್ ಪಾತ್ರ ಮಾಡಿದ ಸ್ಕಾಟಿಷ್ ನಟ ಸಿಯಾನ್ ಕಾನರಿ.
ಸತ್ಯ ಇಷ್ಟು ಸಿಂಪಲ್ಲಾಗಿದೆ. ಇದನ್ನು ಕೆಲವರು ವಿವರಿಸಿದರೂ ಸುಳ್ ಸುಬ್ಬರು ವಿಕೃತ ನಗೆಯಲ್ಲೇ ಕಾಲ ಹಾಕುತ್ತಿದ್ದಾರೆ. ಈ ಹಿಂದೆಯೂ ಸೋನಿಯಾ ಗಾಂಧಿ ತೇಜೋವಧೆಗೆ ಸಾಕಷ್ಟು ಯತ್ನ ಮಾಡಲಾಗಿದೆ. ಹಿಂದೆ ಇದೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಪೇಜ್‍ನಲ್ಲಿ ಫೋಟೊಶಾಪ್ ಮಾಡಿ ಸೋನಿಯಾ ಮತ್ತು ಮಾಲ್ಡಿವ್ಸ್‍ನ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಫೋಟೊ ಹಾಕಲಾಗಿತ್ತು. ಸೋನಿಯಾ ಗಯೂಮ್ ತೊಡೆ ಮೇಲೆ ಕುಳಿತಂತೆ ಫೋಟೊ ಸೃಷ್ಟಿಸಲಾಗಿತ್ತು.
ಹಾಲಿವುಡ್ ನಟಿ ರೀಸ್ ವಿಡರ್‍ಸ್ಪೂನ್ ಫೋಟೊ ಹಾಕಿ, ಸೋನಿಯಾ ಯುವತಿಯಾಗಿದ್ದಾಗ ಬಾರ್ ವೇಟ್ರೆಸ್ ಆಗಿದ್ದಳು ಎಂದು ಸುಳ್ ಹರಡಲಾಗಿತ್ತು. ಮರ್ಲಿನ್ ಮನ್ರೋ ಫೋಟೊಕ್ಕೆ ಸೋನಿಯಾ ಮುಖ ಪೇಸ್ಟ್ ಮಾಡಿ, ಬಾರ್‍ಗರ್ಲ್ ಸೋನಿಯಾ ಎಂದು ತಿರುಚಲಾಗಿತ್ತು.
ಸೋನಿಯಾ ಈಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗಲೂ ಅವರ ವಿರುದ್ಧ ವಿಕೃತ ಸುಳ್‍ಗಳನ್ನು ಹರಡಲಾಗುತ್ತಿದೆ. ಈ ವಿಕೃತರ ಮಾಡೆಲ್‍ಗಳೇ ಸಾರ್ವಜನಿಕ ಸಭೆಗಳಲ್ಲೇ ಸುಳ್ಳುಗಳನ್ನು ಸತ್ಯ ಎಂಬಂತೆ ಕಿರುಚುವಾಗ ಇನ್ನೇನಾಗುತ್ತದೆ?
ಫೋಟೊ ಶಿರ್ಷಿಕೆ: ಚಿತ್ರದಲ್ಲಿರುವುದು ಸೋನಿಯಾ ಗಾಂಧಿ ಅಲ್ಲ, ‘ಆಡಿ. ಓಔ’ ಚಲನಚಿತ್ರದಲ್ಲಿ ನಟಿ ಉರ್ಸುಲಾ ಅ್ಯಂಡ್ರೆಸ್, ನಟ ಸಿಯಾನ್ ಕಾನರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...