Homeರಾಜಕೀಯಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

ಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

- Advertisement -
- Advertisement -
ನಹುಷ |
ಅವಿಭಜಿತ ದಕ್ಷಿಣ ಕನ್ನಡದ ಬಿಜೆಪಿ ಬಲಾಢ್ಯ ಬಂಟರ ಮತ್ತು  ಬೂಟಾಟಿಕೆಯ  ಬ್ರಾಹ್ಮಣರ ಪ್ರೈವೇಟ್  ಲಿಮಿಟೆಡ್ ಎಂಬುದನ್ನು  ಮುಗಿದ ಅಸೆಂಬ್ಲಿ ಚುನಾವಣೆ  ನಿಸ್ಸಂಶಯವಾಗಿ  ಸಾಬೀತುಮಾಡಿದೆ!  ಬಹುಸಂಖ್ಯಾತ ಬಿಲ್ಲವರು  ಮತ್ತು ಮೊಗವೀರ, ಕೊಟ್ಟಾರಿ,  ಕುಲಾಲ, ದೇವಾಡಿಗ,  ಕೋಟೆ ಕ್ಷತ್ರಿಯ, ಗಾಣಿಗ,  ಗಟ್ಟಿ,  ನಲಿಕೆ,  ಮರಾಠಿ….. ಮುಂತಾದ ಸಣ್ಣ-ಪುಟ್ಟ ಜಾತಿಯ  ಮುಗ್ಧ ಶೂದ್ರರನ್ನು ಹಿಂದೂತ್ವದ ರಕ್ತಪಿಪಾಸು ಘನಘೋರ ಯುದ್ಧಕ್ಕೆ ಕಾಲಾಳುಗಳಂತೆ ಬಳಸಿ ಬಲಿಹಾಕುವ ಸಂಘ ಪರಿವಾರದ ಹಿಂದೂತ್ವದ  ಸೂತ್ರಧಾರರು ಅಧಿಕಾರ,  ಸುಖ, ಸೌಭಾಗ್ಯಗಳನ್ನು  ಜನಿವಾರಿಗಳಿಗೆ, ಪಾಳೆಗಾರಿ ಬಂಟರ ತುಂಟರಿಗಷ್ಟೇ  ಸೀಮಿತ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಸರಿಸುಮಾರು ಶೇ.24ರಷ್ಟು ಮುಸ್ಲಿಮರಿದ್ದಾರೆ. ಅವರಷ್ಟೇ ಬಿಲ್ಲವರಿದ್ದಾರೆ. ಈ  ಬಿಲ್ಲವರ ಜತೆ ಇತರ  ಹಿಂದುಳಿದ  ಜನಾಂಗದ ಸಣ್ಣಸಣ್ಣ ಜಾತಿಗಳನ್ನು  ಸೇರಿಸಿದರೆ ಶೇಕಡಾ ಹತ್ತರಷ್ಟಿರುವ  ಬಂಟರು  ಮತ್ತು ಅದಕ್ಕಿಂತ ಕಡಿಮೆ ಇರುವ  ಬ್ರಾಹ್ಮಣರು ಯಾವ ಲೆಕ್ಕಕ್ಕೂ  ಇಲ್ಲ. ಆದರೆ ತೋಳ್ಬಲದ  ಬಂಟರು ಮತ್ತು ತಾಂತ್ರಿಕ ವಿಪ್ರರು ಹಿಂದುಳಿದ  ವರ್ಗದವರನ್ನ  “ಮಂಗ”  ಮಾಡಿ ಬಿಜೆಪಿಯಲ್ಲಿ ಬೆಣ್ಣೆಯನ್ನು ತಿನ್ನುತ್ತಿದ್ದಾರೆ.  ಕರಾವಳಿಗೆ ಹಿಂದೂತ್ವದ ಅಮಲೇರಿರುವುದು ಕರಾರುವಾಕ್ಕಾಗಿ  ಗ್ರಹಿಸಿದ್ದ ಸಂಸದ  ನಳಿನ್ ಕುಮಾರ್ ಕುಟೀಲು  ಎಂಬ  ಬೆಂಕಿ ನವಾಬ  ಮತ್ತು  ವಿಶ್ವ ಬಂಟರ   ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಲಾಡಿ ಸೇರಿಕೊಂಡು  ಸ್ವ-ಜಾತಿಯ ಹೆಚ್ಚು ಕ್ಯಾಂಡಿಡೇಟ್‍ಗಳನ್ನು ಬಿಜೆಪಿಯಿಂದ  ಅಖಾಡಕ್ಕೆ  ಇಳಿಸುವಂತೆ  ಷಡ್ಯಂತ್ರ ಹೆಣೆದಿದ್ದರು.  ಒಂದು  ಹಂತದಲ್ಲಿ ನಳಿನ್, “ಗುರು” ಕಲ್ಲಡ್ಕ ಭಟ್ಟರಿಗೇ ರೋಪು ಹಾಕಿ  ಜಾತಿಬಂಧುಗಳಿಗೆ ಟಿಕೆಟ್ ಕೊಡಿಸಲು ಹಾರಾಡಿದ್ದರು.  ಬೆಚ್ಚಿಬಿದ್ದ ಕಲ್ಲಡ್ಕ ಕಟೀಲ್‍ಗೆ ಶರಣಾಗಿ ಹೋಗಿದ್ದರು.
ಕಲ್ಲಡ್ಕ ಭಟ್

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ  12  ಸಾಮಾನ್ಯ ಕ್ಷೇತ್ರಗಳ ಪೈಕಿ ಆರರಲ್ಲಿ ಬಂಟರ ಬಹಾದ್ದೂರರಿಗೆ ಟಿಕೆಟ್ ಕೊಡಿಸಲು  ನಳಿನ್-ಮಾಲಾಡಿ ರೈ  ಯಶಸ್ವಿಯಾದರು. ಬೈಂದೂರಲ್ಲಿ  ಸುಕುಮಾರ  ಶಟ್ಟಿ,  ಕುಂದಾಪುರದಲ್ಲಿ ಹಾಲಾಡಿ  ಶ್ರೀನಿವಾಸ್  ಶೆಟ್ಟಿ,  ಸುರತ್ಕಲ್‍ನಲ್ಲಿ ಡಾ|| ಭರತ್  ಶೆಟ್ಟಿ, ಉಳ್ಳಾಲದಲ್ಲಿ  ಸಂತೋಷ  ಶೆಟ್ಟಿ,   ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಎಂಬ  ಲಾಟ್‍ಪೂಟ್  ಬಂಟರಿಗೆ  ಬಿಜೆಪಿ ಹೈಕಮಾಂಡ್ ಕಲ್ಲಡ್ಕ ಭಟ್ಟರಿಗೆ ಟಿಕೆಟ್ ಕೊಡಬೇಕಾಗಿ ಬಂತು! 23  ಹಿಂದೂಗಳನ್ನು  ಸಾಬರು ಕಾಂಗ್ರೆಸ್‍ನ  ಸಿದ್ದು  ಸರಕಾರದ  ಸಹಕಾರದಲ್ಲಿ ಕೊಂದು ಹಾಕಿದರೆಂಬ ನಳಿನ್, ಅನಂತ್‍ಕುಮಾರ್ ಹೆಗಡೆ, ಶೋಭಾ, ಕಲ್ಲಡ್ಕ ಮತ್ತವರ ಬಾಸ್‍ಗಳಾದ ಆದಿತ್ಯನಾಥ,  ಅಮಿತ್ ಶಾಗಳ  ಬೊಬ್ಬೆಗೆ ಕರಾವಳಿಯ  ಬಿಲ್ಲವ  ಮತ್ತಿತರ ಹಿಂದುಳಿದ ವರ್ಗದ ಜನರು ಬ್ರೈನ್‍ವಾಶ್ ಆಗಿದ್ದು ಆರರಲ್ಲಿ ಐದು ಬಂಟರು  ಸಾರಾಸಗಟಾಗಿ  ಶಾಸಕರಾಗಲು  ನೆರವಾಯ್ತು.  ಇದನ್ನು ಮೊದಲೇ ಅಂದಾಜಿಸಿದ್ದ  ನಳಿನ್ ಮತ್ತು ಮಾಲಾಡಿಗುತ್ತು ರೈ,  ಈಗ  ಕರಾವಳಿ ಬಿಜೆಪಿಯಲ್ಲಿ ಬಂಟರ ಸಾಮ್ರಾಜ್ಯ  ಸ್ಥಾಪಿಸಿ ಅಟ್ಟಹಾಸಗೈಯ್ಯುತ್ತಿದ್ದಾರೆ.

ಟಿಕೆಟ್  ಹಂಚಿಕೆಯಾದಾಗ  ಬಿಜೆಪಿಯ ಬಿಲ್ಲವ  ಮುಂದಾಳುಗಳು  ಬೇಸರ ಮಾಡಿಕೊಂಡಿದ್ದರು.  ಇದು ಬಿಜೆಪಿಗೆ ಉಲ್ಟಾ  ಹೊಡೆದು ಕಾಂಗ್ರೆಸ್‍ಗೆ  ಅನುಕೂಲ  ಮಾಡಿಕೊಡುತ್ತದೆಂದು  ರಾಜಕೀಯ  ಪಂಡಿತರು ತರ್ಕ  ಮಾಡಿದ್ದರು.  ದುರಂತವೆಂದರೆ  ಜನವಾರಿಗಳ  ಮತ್ತು  ಬಂಟರ  ನಳಿನ್‍ನ  ಹಿಂದೂತ್ವದ  ಹೋರಾಟದಲ್ಲಿ ಹೆಚ್ಚು  ಹಾನಿಗೊಳಗಾಗಿದ್ದಲ್ಲದೇ  ಜೀವಬಲಿ ಕೊಡಬೇಕಾಗಿ ಬಂದಿದ್ದ  ಬಿಲ್ಲವರಿಗೆ ತಮಗಾದ ಅನ್ಯಾಯ, ಮೋಸ, ವಂಚನೆ ಅರ್ಥವೇ ಆಗಲಿಲ್ಲ. ಹೆಚ್ಚಿನ ಬಿಲ್ಲವರು ಸಂಘ  ಸರದಾರರ  ಹುಸಿ  ಹಿಂದೂತ್ವದ ಮಾತುಗಾರಿಕೆಗೆ ಮರುಳಾಗಿ ಪರಂಪರಾಗತ ಬಂಟರ ಭೂಪರಿಗೆ ಕಣ್ಮುಚ್ಚಿ ಓಟು ಒತ್ತಿದ್ದಾರೆ.  ಕಾರ್ಕಳದಲ್ಲಿ  ಗೆದ್ದ  ಬಾಬಾಬುಡನ್‍ಗಿರಿ-ದತ್ತಪೀಠ  ಭಾನ್ಗಡಿಯ ಬೈಪ್ರಾಡಕ್ಟು ಸುನೀಲ್ ಕುಮಾರ್ ಎಂಬ ಅರೆಬಿಲ್ಲವ-ಅರೆಬ್ರಾಹ್ಮಣ ಒಬ್ಬನೇ ಬಿಜಿಪಿಯ ಘೋಷಿತ  ಬಿಲ್ಲವ ಶಾಸಕ ಇಡೀ ಅವಿಭಜಿತ ದಕ್ಷಿಣ ಕನ್ನಡಕ್ಕೆ!! ಬಿಜಿಪಿ ಟಿಕೇಟ್ ದಯಪಾಲಿಸಿದ್ದ ಏಕೈಕ ಬಿಲ್ಲವ ಸುನೀಲ್‍ಕುಮಾರ.
ಪುತ್ತೂರಿನಲ್ಲಿ  ಬಿಜಿಪಿ ಅಭ್ಯರ್ಥಿಯಾಗಿದ್ದ  ಸಂಜೀವ್ ಮಡಂದೂರ್ ಎಂಬಾತ ಕೇಂದ್ರದ  ನಾಮಕಾವಸ್ಥೆ ಮಂತ್ರಿ ಸದಾನಂದಗೌಡರ ಹತ್ತಿರತ್ತಿರದ ಸಂಬಂಧಿ ಬಂಟ-ಗೌಡ ಕೋಟಾದ ಕ್ಯಾಂಡಿಡೇಟ್. ಹೀಗಾಗಿ ಬರೋಬ್ಬರಿ ಏಳು ಮಂದಿಗೆ ಬಂಟರ  ಲಾಬಿಯಿಂದಾಗಿ ಟಿಕೆಟ್ ಸಿಕ್ಕಿತ್ತು. ಮಡಂದೂರುಗೆ ಸದಾನಂದಗೌಡರಿಗಿಂತ ಸಂಸದ ನಳೀನ್ ಎಂದರೆ ಹೆಚ್ಚು ನಿಷ್ಠೆ. ಬಂಟ-ಗೌಡ ಕೋಟಾದಲ್ಲಿ ಕಮಲ ಹಿಡಿದುಕೊಂಡು ಅಖಾಡಕ್ಕೆ ಇಳಿದವರಲ್ಲಿ ಉಳ್ಳಾಲದ ಸಂತೋಷ ಶೆಟ್ಟಿ ಒಬ್ಬನ ಬಿಟ್ಟರೆ ಉಳಿದವರೆಲ್ಲರೂ   ಕೇಸರಿ ಶಾಸಕರಾಗಿದ್ದಾರೆ. ಬಂಟರ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿಕೊಳ್ಳಲು ಸಂಸದ ನಳಿನ್  ಮತ್ತು ವಿಶ್ವ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ವiಲಾಡಿ ತುಂಬ  ವ್ಯವಸ್ಥಿತ-ರಹಸ್ಯ ಕಾರ್ಯಾಚರಣೆಗೆ  ಇಳಿದಿದ್ದರು. ಹಿಂದುಳಿದ ವರ್ಗದ ಬಿಲ್ಲವರು  ಮತ್ತು ಇತರೆ ಅಮಾಯಕ ಜಾತಿ ಜನಗಳಿಗೆ  ಟೋಪಿ ಏರಿಸಿ ಸ್ವಜಾತಿ ಹುರಿಯಾಳುಗಳ  ಎಂಎಲ್‍ಎ ಮಾಡಿಕೊಳ್ಳಲು ಬಂಟರಿಗೆ ಜಾತಿ ದುರಭಿಮಾನದ ಬೂಸ್ಟ್ ಕುಡಿಸಿ ಪ್ರಚೋದಿಸಿದರು.
ಬಿಜಿಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ಒಂದು ವಾಟ್ಸಪ್ ಪ್ರಕಟಣೆ ರವಾನಿಸಿದ್ದರು. ಸ್ವಜಾತಿ ಬಂಟರ   ವಲಯದಲ್ಲಿ ಹರಿದಾಡಿದ ಆ ಸಂದೇಶ “ಬಂಟತ್ವ” ಕೆರಳಿಸುವ ಒಕ್ಕಣೆಯಿಂದ ಕೂಡಿದೆ. ತಾನು ಮತ್ತು ಸಂಸದ ನಳಿನ್ ಸರದಾರ ಸೇರಿಕೊಂಡು ಬರೋಬ್ಬರಿ ಆರು ಬಂಟರು ಬಿಜೆಪಿ  ಟಿಕೆಟ್ ಪಡೆಯುವಂತೆ ಮಾಡಿದ್ದೇವೆ. ಈಗ ಇವರೆಲ್ಲರನ್ನ ಗೆಲ್ಲಿಸಿಕೊಳ್ಳುವ ಸವಾಲು  ಬಂಟರ ಮೇಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಬಂಟರ ಮತ್ತು ಬ್ರಾಹ್ಮಣರ ನಾಡಾಗಿದ್ದು ಅದನ್ನ ಉಳಿಸಿಕೊಳ್ಳಲು ಆರೂ ಬಂಟರ ಆಯ್ಕೆಗೆ ಬಂಟರು  ಭಿನ್ನಾಭಿಪ್ರಾಯ ಮರೆತು ಬಿಜೆಪಿಗೆ ಮತ ಹಾಕುವ ಮತ್ತು ಹಾಕಿಸುವ ಕೆಲಸ  ಮಾಡಬೇಕಾಗಿದೆ. ಈ ತಂತ್ರಗಾರಿಕೆ ಹಿಂದುಳಿದ ವರ್ಗದವರಿಗೆ ತಿಳಿಯದಂತೆ ಗೌಪ್ಯವಾಗಿ ಕಾರ್ಯಾಚರಣೆ ಮಾಡಬೇಕೆಂದು ಮಲಾಡಿಗುತ್ತಾ ರೈ ಸಂದೇಶ ಕಳಿಸಿದ್ದರು.
ಬಿಜೆಪಿಯ ಆರೂ ಬಂಟ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸ್ವಜಾತಿ ಬಾಂಧವರಿಗೆ  ಬಂಟರ ಸಂಘದ ಅಧ್ಯಕ್ಷ  ಮಲಾಡಿಗುತ್ತಾ ರೈ  ಪ್ರಚೋದಿಸಿರುವುದರ ಹಿಂದಿನ    ಮರ್ಮ ಕತೂಹಲಕಾರಿಯಾಗಿದೆ. ಸದರಿ ಆರು ಬಂಟರು ಗೆದ್ದರಷ್ಟೇ ಮುಂಬರುವ ಲೋಕಸಭಾ ಎಲೆಕ್ಷನ್‍ನಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ  ಬಂಟರ ಜಯಪ್ರಕಾಶ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್‍ಗೆ ಟಿಕೆಟ್ ಸುಲಭವಾಗಿ ದಕ್ಕುತ್ತದೆ ಎಂಬುದು ಮಲಾಡಿಗುತ್ತ ರೈ ಲೆಕ್ಕಾಚಾರ. ಆಗ ಮಾತ್ರ  ಬಂಟರ ಹಿತಾಸಕ್ತಿಯ ರಕ್ಷಣೆ ಸಾಧ್ಯವೆಂಬ ಭಾವನೆ ಬಂಟರಲ್ಲಿ ಬಿತ್ತಲು ರೈ ಮಸಲತ್ತು ಮಾಡಿದ್ದಾನೆ. ಇದರ ಹಿಂದೆ ನಳಿನ್‍ನ ಕುಟಿಲತೆ ಅಡಗಿದೆ ಎಂಬುದು ಕಟ್ಟರ್ ಚೆಡ್ಡಿಗಳೇ ಈಗ ಪಿಸುಗುಡುತ್ತಿದ್ದಾರೆ. ನಳಿನ್‍ನ ಕಂಡರೆ  ಮೂಗುಮುರಿಯುವ ಕಲ್ಲಡ್ಕ ಕಮಾಂಡ್ ಕೂಡ ಈಗ ಬಂಟರ ಅಧ್ಯಕ್ಷನ “ವಾಟ್ಸ್‍ಆಪ್ ಆಂದೋಲನ”ದ ರೂವಾರಿ ನಳಿನ್  ಎಂದೇ ಕಂಡವರ ಮುಂದೆ ಬಡಬಡಿಸುತ್ತಿದೆ.
ಸೊರಕೆ

ಬಿಜೆಪಿ ಬಿಡಾರದಲ್ಲಿ ಹರಿದಾಡುತ್ತಿರುವ ಮತ್ತೊಂದು ಚರ್ಚೆಯ ಪ್ರಕಾರ ಇದು  ನಳಿನನ್ನು ಹಣಿಯಲು ಬ್ರಾಹ್ಮಣೋತ್ತಮರ್ಯಾರೋ ಮಾಡಿದ ಕಿತಾಪತಿ. ಬಿಲ್ಲವರು ತಿರುಗಿಬಿದ್ದು ಬಂಟ ಕ್ಯಾಂಡಿಡೇಟ್‍ಗಳನ್ನೆಲ್ಲಾ ಸೋಲಿಸಿದರೆ ನಳಿನ್ ಬಿಜೆಪಿಯಲ್ಲಿ ಕಿಮ್ಮತ್ತು ಕಳೆದುಕೊಳ್ಳುತ್ತಾರೆ. ಆಗ ಮತ್ತೆ ಕಲ್ಲಡ್ಕ ಭಟ್ಟರದೇ ಏಕಮೇವಾದ್ವಿತೀಯ ದರ್ಬಾರು  ಸ್ಥಾಪಿತವಾಗುತ್ತದೆಂದು ಬಂಟರ ಸಂಘದ ಅಧ್ಯಕ್ಷನ ಹೆಸರಿನಲ್ಲಿ ಇಂಥದೊಂದು  ಸಂದೇಶ ರವಾನಿಸಲಾಗಿದೆಯಂತೆ. “ದಕ್ಷಿಣ ಕನ್ನಡ  ಮತ್ತು ಉಡುಪಿಯು  ಬಂಟರ-ಬ್ರಾಹ್ಮಣರ ನಾಡು” ಎಂಬ ವಾಕ್ಯ ಮಲಾಡಿಗುತ್ತು ರೈನ ಸಂದೇಶದಲ್ಲಿರುವುದು ಬ್ರಾಹ್ಮಣರ ಭೂಪನ ಕುಚೋದ್ಯದ ಅನುಮಾನ ಹುಟ್ಟುಹಾಕಿದೆ.

ಇದೆಲ್ಲಾ ಬಿಜೆಪಿಯ ಒಳಸುಳಿ ರಾಜಕಾರಣ ಏನೇಇರಲಿ, ಸಂಘಪರಿವಾರದ  ಬ್ರಾಹ್ಮಣರ-ಬಲಾಢ್ಯ ಬಂಟರ ಷಡ್ಯಂತ್ರಕ್ಕೆ ಬಲಿಬೀಳುತ್ತಿರುವ ಬಿಲ್ಲವರಿಗೆ ಬುದ್ಧಿ ಬರುವುದು ಎಂದು? ಹುಸಿ ಹಿಂದೂತ್ವಕ್ಕೆ ಮರುಳಾಗಿ ಬಿಲ್ಲವರು ತಮ್ಮವರ ಆಹುತಿ ಕೊಡುತ್ತಾ  ಬಿಜೆಪಿಗೆ ಬೆಂಬಲಿಸುತ್ತಾ ಹೋದರೆ ಮೇಲುವರ್ಗದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ. ಇದು ಬಿಲ್ಲವರ ಸ್ವಾಮಿಗೆ, ಜನಾರ್ದನ  ಪೂಜಾರಿ,  ವಿನಯ್ ಕುಮಾರ್ ಸೊರಕೆ,  ಶ್ರೀನಿವಾಸ್  ಪೂಜಾರಿ,  ರುಕ್ಮಯ್ಯ ಪೂಜಾರಿಯಂತ ಬಿಲ್ಲವರ   ಭೂಪರಿಗೆ, ಬಿಲ್ಲವರ ಸಂಘದ ಸರದಾರರಿಗೆಲ್ಲಾ ಅರ್ಥವಾಗೋದು ಯಾವಾಗ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆನಡಾದಲ್ಲಿ ನೆಲಮಂಗಲ ಮೂಲದ 37ವರ್ಷದ ಟೆಕ್ಕಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪರಿಚಿತ ಗುಂಪು 

ಬೆಂಗಳೂರು: ಕೆನಡಾದ ಟೊರೊಂಟೊದಲ್ಲಿರುವ ಜನನಿಬಿಡ ಶಾಪಿಂಗ್ ಸೆಂಟರ್‌ನ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಬೆಂಗಳೂರು ಮೂಲದ 37 ವರ್ಷದ ಟೆಕ್ಕಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ಬಳಿಯ ತ್ಯಾಮಗೊಂಡ್ಲು ನಿವಾಸಿ...

ತೆಲಂಗಾಣ| ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆತ್ಮಹತ್ಯೆಗೆ ಶರಣು; ಕುಟುಂಬದಿಂದ ಬೆದರಿಕೆ ಆರೋಪ

ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಯಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಿಂದ ವರದಿಯಾಗಿದೆ. ಸೋಮವಾರ ತಡರಾತ್ರಿ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ಪುರಸಭೆಯಲ್ಲಿ ಈ ಘಟನೆ ನಡೆದಿದೆ. ಮಕ್ತಲ್ ಪುರಸಭೆಯ...

ದ್ವೇಷ ಭಾಷಣ : ಅಸ್ಸಾಂ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಮ್ಯುನಿಸ್ಟ್ ಪಕ್ಷಗಳು

ಮುಸ್ಲಿಮರ ವಿರುದ್ಧ ಪದೇ ಪದೇ ದ್ವೇಷ ಕಾರುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ -ಸಿಪಿಐ (ಎಂ)) ಮತ್ತು ಕಮ್ಯುನಿಷ್ಟ್...

ಬಿಹಾರ: ಬಹುಜನ ಸಮುದಾಯಗಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೋಧ್ ಗಯಾದಲ್ಲಿ ಬಹುಜನ ವಿದ್ವಾಂಸರ ಸಮ್ಮೇಳನ

ಭಾರತದ ಪ್ರಮುಖ ವಿಶ್ವವಿದ್ಯಾಲಯಗಳ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಬೋಧ್ ಗಯಾದಲ್ಲಿ ಒಟ್ಟುಗೂಡಿ ಬಹುಜನ ಸಮುದಾಯಕ್ಕೆ ಸಮಾನತೆ ಮತ್ತು ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಉನ್ನತ ಶಿಕ್ಷಣದ ಪಾತ್ರದ ಕುರಿತು ಚರ್ಚಿಸಿದರು. ಫೆಬ್ರವರಿ...

ಭಾರತೀಯ ಬಿಷಪ್‌ಗಳ ಸಂಸ್ಥೆಯ ಮುಖ್ಯಸ್ಥರಾಗಿ ದಲಿತ ಕಾರ್ಡಿನಲ್ ಪೂಲಾ ಆಯ್ಕೆ

ಭಾರತೀಯ ಬಿಷಪ್‌ಗಳ ಸಂಸ್ಥೆಯ ಮುಖ್ಯಸ್ಥರಾಗಿ ದಲಿತ ಕಾರ್ಡಿನಲ್ ಪೂಲಾ ಅವರು ಆಯ್ಕೆಯಾಗಿದ್ದಾರೆ. ಭಾರತದ ಕ್ಯಾಥೋಲಿಕ್‌ಗಳಲ್ಲಿ ಸುಮಾರು ಮೂರನೇ ಎರಡರಷ್ಟು ಜನಸಂಖ್ಯೆ ದಲಿತರೇ ಇದ್ದಾರೆ ಎಂದು ನಂಬಲಾಗಿದ್ದರೂ, ಅವರು ಧಾರ್ಮಿಕ ಆಚರಣೆ ಮತ್ತು ಬಿಷಪ್‌...

ಪಶ್ಚಿಮ ಬಂಗಾಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.9) ಹಲವಾರು ನಿರ್ದೇಶನಗಳನ್ನು ನೀಡಿದೆ. ಚುನಾವಣಾ ಆಯೋಗವು ನಿಯೋಜಿಸಿರುವ ಮೈಕ್ರೋ-ಅಬ್ಸರ್ವರ್‌ಗಳ (ಸೂಕ್ಷ್ಮ ವೀಕ್ಷಕರು) ಬದಲಿಗೆ ಗ್ರೂಪ್...

ಮುಸ್ಲಿಮರಿಗೆ ಗುಂಡಿಕ್ಕುವಂತೆ ವಿಡಿಯೋ ಹಂಚಿಕೆ: ಅಸ್ಸಾಂ ಸಿಎಂ ವಿರುದ್ಧ ಓವೈಸಿ ದೂರು: ದ್ವೇಷ ಭಾಷಣ ಆದೇಶ ಉಲ್ಲೇಖ 

ಅಸ್ಸಾಂ ಬಿಜೆಪಿ ಘಟಕದ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತು ಈಗ ಅಳಿಸಲಾದ ವೀಡಿಯೊದಲ್ಲಿ, ಮುಸ್ಲಿಮರ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಆರೋಪಿಸಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ...

ನರವಾಣೆ ಪುಸ್ತಕಕ್ಕೆ ಹೆದರಿ ಪ್ರಧಾನಿ ಲೋಕಸಭೆಗೆ ಬರುತ್ತಿಲ್ಲ : ರಾಹುಲ್ ಗಾಂಧಿ

ಪ್ರತಿಪಕ್ಷಗಳು ಎತ್ತಿರುವ ವಿಷಯಗಳಿಂದ, ವಿಶೇಷವಾಗಿ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಪುಸ್ತಕದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯಗೊಂಡಿದ್ದಾರೆ. ಹಾಗಾಗಿ, ಅವರು ರಾಷ್ಟ್ರಪತಿಯ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ...

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....