Homeರಾಜಕೀಯಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

ಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

- Advertisement -
- Advertisement -
ನಹುಷ |
ಅವಿಭಜಿತ ದಕ್ಷಿಣ ಕನ್ನಡದ ಬಿಜೆಪಿ ಬಲಾಢ್ಯ ಬಂಟರ ಮತ್ತು  ಬೂಟಾಟಿಕೆಯ  ಬ್ರಾಹ್ಮಣರ ಪ್ರೈವೇಟ್  ಲಿಮಿಟೆಡ್ ಎಂಬುದನ್ನು  ಮುಗಿದ ಅಸೆಂಬ್ಲಿ ಚುನಾವಣೆ  ನಿಸ್ಸಂಶಯವಾಗಿ  ಸಾಬೀತುಮಾಡಿದೆ!  ಬಹುಸಂಖ್ಯಾತ ಬಿಲ್ಲವರು  ಮತ್ತು ಮೊಗವೀರ, ಕೊಟ್ಟಾರಿ,  ಕುಲಾಲ, ದೇವಾಡಿಗ,  ಕೋಟೆ ಕ್ಷತ್ರಿಯ, ಗಾಣಿಗ,  ಗಟ್ಟಿ,  ನಲಿಕೆ,  ಮರಾಠಿ….. ಮುಂತಾದ ಸಣ್ಣ-ಪುಟ್ಟ ಜಾತಿಯ  ಮುಗ್ಧ ಶೂದ್ರರನ್ನು ಹಿಂದೂತ್ವದ ರಕ್ತಪಿಪಾಸು ಘನಘೋರ ಯುದ್ಧಕ್ಕೆ ಕಾಲಾಳುಗಳಂತೆ ಬಳಸಿ ಬಲಿಹಾಕುವ ಸಂಘ ಪರಿವಾರದ ಹಿಂದೂತ್ವದ  ಸೂತ್ರಧಾರರು ಅಧಿಕಾರ,  ಸುಖ, ಸೌಭಾಗ್ಯಗಳನ್ನು  ಜನಿವಾರಿಗಳಿಗೆ, ಪಾಳೆಗಾರಿ ಬಂಟರ ತುಂಟರಿಗಷ್ಟೇ  ಸೀಮಿತ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಸರಿಸುಮಾರು ಶೇ.24ರಷ್ಟು ಮುಸ್ಲಿಮರಿದ್ದಾರೆ. ಅವರಷ್ಟೇ ಬಿಲ್ಲವರಿದ್ದಾರೆ. ಈ  ಬಿಲ್ಲವರ ಜತೆ ಇತರ  ಹಿಂದುಳಿದ  ಜನಾಂಗದ ಸಣ್ಣಸಣ್ಣ ಜಾತಿಗಳನ್ನು  ಸೇರಿಸಿದರೆ ಶೇಕಡಾ ಹತ್ತರಷ್ಟಿರುವ  ಬಂಟರು  ಮತ್ತು ಅದಕ್ಕಿಂತ ಕಡಿಮೆ ಇರುವ  ಬ್ರಾಹ್ಮಣರು ಯಾವ ಲೆಕ್ಕಕ್ಕೂ  ಇಲ್ಲ. ಆದರೆ ತೋಳ್ಬಲದ  ಬಂಟರು ಮತ್ತು ತಾಂತ್ರಿಕ ವಿಪ್ರರು ಹಿಂದುಳಿದ  ವರ್ಗದವರನ್ನ  “ಮಂಗ”  ಮಾಡಿ ಬಿಜೆಪಿಯಲ್ಲಿ ಬೆಣ್ಣೆಯನ್ನು ತಿನ್ನುತ್ತಿದ್ದಾರೆ.  ಕರಾವಳಿಗೆ ಹಿಂದೂತ್ವದ ಅಮಲೇರಿರುವುದು ಕರಾರುವಾಕ್ಕಾಗಿ  ಗ್ರಹಿಸಿದ್ದ ಸಂಸದ  ನಳಿನ್ ಕುಮಾರ್ ಕುಟೀಲು  ಎಂಬ  ಬೆಂಕಿ ನವಾಬ  ಮತ್ತು  ವಿಶ್ವ ಬಂಟರ   ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಲಾಡಿ ಸೇರಿಕೊಂಡು  ಸ್ವ-ಜಾತಿಯ ಹೆಚ್ಚು ಕ್ಯಾಂಡಿಡೇಟ್‍ಗಳನ್ನು ಬಿಜೆಪಿಯಿಂದ  ಅಖಾಡಕ್ಕೆ  ಇಳಿಸುವಂತೆ  ಷಡ್ಯಂತ್ರ ಹೆಣೆದಿದ್ದರು.  ಒಂದು  ಹಂತದಲ್ಲಿ ನಳಿನ್, “ಗುರು” ಕಲ್ಲಡ್ಕ ಭಟ್ಟರಿಗೇ ರೋಪು ಹಾಕಿ  ಜಾತಿಬಂಧುಗಳಿಗೆ ಟಿಕೆಟ್ ಕೊಡಿಸಲು ಹಾರಾಡಿದ್ದರು.  ಬೆಚ್ಚಿಬಿದ್ದ ಕಲ್ಲಡ್ಕ ಕಟೀಲ್‍ಗೆ ಶರಣಾಗಿ ಹೋಗಿದ್ದರು.
ಕಲ್ಲಡ್ಕ ಭಟ್

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ  12  ಸಾಮಾನ್ಯ ಕ್ಷೇತ್ರಗಳ ಪೈಕಿ ಆರರಲ್ಲಿ ಬಂಟರ ಬಹಾದ್ದೂರರಿಗೆ ಟಿಕೆಟ್ ಕೊಡಿಸಲು  ನಳಿನ್-ಮಾಲಾಡಿ ರೈ  ಯಶಸ್ವಿಯಾದರು. ಬೈಂದೂರಲ್ಲಿ  ಸುಕುಮಾರ  ಶಟ್ಟಿ,  ಕುಂದಾಪುರದಲ್ಲಿ ಹಾಲಾಡಿ  ಶ್ರೀನಿವಾಸ್  ಶೆಟ್ಟಿ,  ಸುರತ್ಕಲ್‍ನಲ್ಲಿ ಡಾ|| ಭರತ್  ಶೆಟ್ಟಿ, ಉಳ್ಳಾಲದಲ್ಲಿ  ಸಂತೋಷ  ಶೆಟ್ಟಿ,   ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಎಂಬ  ಲಾಟ್‍ಪೂಟ್  ಬಂಟರಿಗೆ  ಬಿಜೆಪಿ ಹೈಕಮಾಂಡ್ ಕಲ್ಲಡ್ಕ ಭಟ್ಟರಿಗೆ ಟಿಕೆಟ್ ಕೊಡಬೇಕಾಗಿ ಬಂತು! 23  ಹಿಂದೂಗಳನ್ನು  ಸಾಬರು ಕಾಂಗ್ರೆಸ್‍ನ  ಸಿದ್ದು  ಸರಕಾರದ  ಸಹಕಾರದಲ್ಲಿ ಕೊಂದು ಹಾಕಿದರೆಂಬ ನಳಿನ್, ಅನಂತ್‍ಕುಮಾರ್ ಹೆಗಡೆ, ಶೋಭಾ, ಕಲ್ಲಡ್ಕ ಮತ್ತವರ ಬಾಸ್‍ಗಳಾದ ಆದಿತ್ಯನಾಥ,  ಅಮಿತ್ ಶಾಗಳ  ಬೊಬ್ಬೆಗೆ ಕರಾವಳಿಯ  ಬಿಲ್ಲವ  ಮತ್ತಿತರ ಹಿಂದುಳಿದ ವರ್ಗದ ಜನರು ಬ್ರೈನ್‍ವಾಶ್ ಆಗಿದ್ದು ಆರರಲ್ಲಿ ಐದು ಬಂಟರು  ಸಾರಾಸಗಟಾಗಿ  ಶಾಸಕರಾಗಲು  ನೆರವಾಯ್ತು.  ಇದನ್ನು ಮೊದಲೇ ಅಂದಾಜಿಸಿದ್ದ  ನಳಿನ್ ಮತ್ತು ಮಾಲಾಡಿಗುತ್ತು ರೈ,  ಈಗ  ಕರಾವಳಿ ಬಿಜೆಪಿಯಲ್ಲಿ ಬಂಟರ ಸಾಮ್ರಾಜ್ಯ  ಸ್ಥಾಪಿಸಿ ಅಟ್ಟಹಾಸಗೈಯ್ಯುತ್ತಿದ್ದಾರೆ.

ಟಿಕೆಟ್  ಹಂಚಿಕೆಯಾದಾಗ  ಬಿಜೆಪಿಯ ಬಿಲ್ಲವ  ಮುಂದಾಳುಗಳು  ಬೇಸರ ಮಾಡಿಕೊಂಡಿದ್ದರು.  ಇದು ಬಿಜೆಪಿಗೆ ಉಲ್ಟಾ  ಹೊಡೆದು ಕಾಂಗ್ರೆಸ್‍ಗೆ  ಅನುಕೂಲ  ಮಾಡಿಕೊಡುತ್ತದೆಂದು  ರಾಜಕೀಯ  ಪಂಡಿತರು ತರ್ಕ  ಮಾಡಿದ್ದರು.  ದುರಂತವೆಂದರೆ  ಜನವಾರಿಗಳ  ಮತ್ತು  ಬಂಟರ  ನಳಿನ್‍ನ  ಹಿಂದೂತ್ವದ  ಹೋರಾಟದಲ್ಲಿ ಹೆಚ್ಚು  ಹಾನಿಗೊಳಗಾಗಿದ್ದಲ್ಲದೇ  ಜೀವಬಲಿ ಕೊಡಬೇಕಾಗಿ ಬಂದಿದ್ದ  ಬಿಲ್ಲವರಿಗೆ ತಮಗಾದ ಅನ್ಯಾಯ, ಮೋಸ, ವಂಚನೆ ಅರ್ಥವೇ ಆಗಲಿಲ್ಲ. ಹೆಚ್ಚಿನ ಬಿಲ್ಲವರು ಸಂಘ  ಸರದಾರರ  ಹುಸಿ  ಹಿಂದೂತ್ವದ ಮಾತುಗಾರಿಕೆಗೆ ಮರುಳಾಗಿ ಪರಂಪರಾಗತ ಬಂಟರ ಭೂಪರಿಗೆ ಕಣ್ಮುಚ್ಚಿ ಓಟು ಒತ್ತಿದ್ದಾರೆ.  ಕಾರ್ಕಳದಲ್ಲಿ  ಗೆದ್ದ  ಬಾಬಾಬುಡನ್‍ಗಿರಿ-ದತ್ತಪೀಠ  ಭಾನ್ಗಡಿಯ ಬೈಪ್ರಾಡಕ್ಟು ಸುನೀಲ್ ಕುಮಾರ್ ಎಂಬ ಅರೆಬಿಲ್ಲವ-ಅರೆಬ್ರಾಹ್ಮಣ ಒಬ್ಬನೇ ಬಿಜಿಪಿಯ ಘೋಷಿತ  ಬಿಲ್ಲವ ಶಾಸಕ ಇಡೀ ಅವಿಭಜಿತ ದಕ್ಷಿಣ ಕನ್ನಡಕ್ಕೆ!! ಬಿಜಿಪಿ ಟಿಕೇಟ್ ದಯಪಾಲಿಸಿದ್ದ ಏಕೈಕ ಬಿಲ್ಲವ ಸುನೀಲ್‍ಕುಮಾರ.
ಪುತ್ತೂರಿನಲ್ಲಿ  ಬಿಜಿಪಿ ಅಭ್ಯರ್ಥಿಯಾಗಿದ್ದ  ಸಂಜೀವ್ ಮಡಂದೂರ್ ಎಂಬಾತ ಕೇಂದ್ರದ  ನಾಮಕಾವಸ್ಥೆ ಮಂತ್ರಿ ಸದಾನಂದಗೌಡರ ಹತ್ತಿರತ್ತಿರದ ಸಂಬಂಧಿ ಬಂಟ-ಗೌಡ ಕೋಟಾದ ಕ್ಯಾಂಡಿಡೇಟ್. ಹೀಗಾಗಿ ಬರೋಬ್ಬರಿ ಏಳು ಮಂದಿಗೆ ಬಂಟರ  ಲಾಬಿಯಿಂದಾಗಿ ಟಿಕೆಟ್ ಸಿಕ್ಕಿತ್ತು. ಮಡಂದೂರುಗೆ ಸದಾನಂದಗೌಡರಿಗಿಂತ ಸಂಸದ ನಳೀನ್ ಎಂದರೆ ಹೆಚ್ಚು ನಿಷ್ಠೆ. ಬಂಟ-ಗೌಡ ಕೋಟಾದಲ್ಲಿ ಕಮಲ ಹಿಡಿದುಕೊಂಡು ಅಖಾಡಕ್ಕೆ ಇಳಿದವರಲ್ಲಿ ಉಳ್ಳಾಲದ ಸಂತೋಷ ಶೆಟ್ಟಿ ಒಬ್ಬನ ಬಿಟ್ಟರೆ ಉಳಿದವರೆಲ್ಲರೂ   ಕೇಸರಿ ಶಾಸಕರಾಗಿದ್ದಾರೆ. ಬಂಟರ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿಕೊಳ್ಳಲು ಸಂಸದ ನಳಿನ್  ಮತ್ತು ವಿಶ್ವ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ವiಲಾಡಿ ತುಂಬ  ವ್ಯವಸ್ಥಿತ-ರಹಸ್ಯ ಕಾರ್ಯಾಚರಣೆಗೆ  ಇಳಿದಿದ್ದರು. ಹಿಂದುಳಿದ ವರ್ಗದ ಬಿಲ್ಲವರು  ಮತ್ತು ಇತರೆ ಅಮಾಯಕ ಜಾತಿ ಜನಗಳಿಗೆ  ಟೋಪಿ ಏರಿಸಿ ಸ್ವಜಾತಿ ಹುರಿಯಾಳುಗಳ  ಎಂಎಲ್‍ಎ ಮಾಡಿಕೊಳ್ಳಲು ಬಂಟರಿಗೆ ಜಾತಿ ದುರಭಿಮಾನದ ಬೂಸ್ಟ್ ಕುಡಿಸಿ ಪ್ರಚೋದಿಸಿದರು.
ಬಿಜಿಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ಒಂದು ವಾಟ್ಸಪ್ ಪ್ರಕಟಣೆ ರವಾನಿಸಿದ್ದರು. ಸ್ವಜಾತಿ ಬಂಟರ   ವಲಯದಲ್ಲಿ ಹರಿದಾಡಿದ ಆ ಸಂದೇಶ “ಬಂಟತ್ವ” ಕೆರಳಿಸುವ ಒಕ್ಕಣೆಯಿಂದ ಕೂಡಿದೆ. ತಾನು ಮತ್ತು ಸಂಸದ ನಳಿನ್ ಸರದಾರ ಸೇರಿಕೊಂಡು ಬರೋಬ್ಬರಿ ಆರು ಬಂಟರು ಬಿಜೆಪಿ  ಟಿಕೆಟ್ ಪಡೆಯುವಂತೆ ಮಾಡಿದ್ದೇವೆ. ಈಗ ಇವರೆಲ್ಲರನ್ನ ಗೆಲ್ಲಿಸಿಕೊಳ್ಳುವ ಸವಾಲು  ಬಂಟರ ಮೇಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಬಂಟರ ಮತ್ತು ಬ್ರಾಹ್ಮಣರ ನಾಡಾಗಿದ್ದು ಅದನ್ನ ಉಳಿಸಿಕೊಳ್ಳಲು ಆರೂ ಬಂಟರ ಆಯ್ಕೆಗೆ ಬಂಟರು  ಭಿನ್ನಾಭಿಪ್ರಾಯ ಮರೆತು ಬಿಜೆಪಿಗೆ ಮತ ಹಾಕುವ ಮತ್ತು ಹಾಕಿಸುವ ಕೆಲಸ  ಮಾಡಬೇಕಾಗಿದೆ. ಈ ತಂತ್ರಗಾರಿಕೆ ಹಿಂದುಳಿದ ವರ್ಗದವರಿಗೆ ತಿಳಿಯದಂತೆ ಗೌಪ್ಯವಾಗಿ ಕಾರ್ಯಾಚರಣೆ ಮಾಡಬೇಕೆಂದು ಮಲಾಡಿಗುತ್ತಾ ರೈ ಸಂದೇಶ ಕಳಿಸಿದ್ದರು.
ಬಿಜೆಪಿಯ ಆರೂ ಬಂಟ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸ್ವಜಾತಿ ಬಾಂಧವರಿಗೆ  ಬಂಟರ ಸಂಘದ ಅಧ್ಯಕ್ಷ  ಮಲಾಡಿಗುತ್ತಾ ರೈ  ಪ್ರಚೋದಿಸಿರುವುದರ ಹಿಂದಿನ    ಮರ್ಮ ಕತೂಹಲಕಾರಿಯಾಗಿದೆ. ಸದರಿ ಆರು ಬಂಟರು ಗೆದ್ದರಷ್ಟೇ ಮುಂಬರುವ ಲೋಕಸಭಾ ಎಲೆಕ್ಷನ್‍ನಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ  ಬಂಟರ ಜಯಪ್ರಕಾಶ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್‍ಗೆ ಟಿಕೆಟ್ ಸುಲಭವಾಗಿ ದಕ್ಕುತ್ತದೆ ಎಂಬುದು ಮಲಾಡಿಗುತ್ತ ರೈ ಲೆಕ್ಕಾಚಾರ. ಆಗ ಮಾತ್ರ  ಬಂಟರ ಹಿತಾಸಕ್ತಿಯ ರಕ್ಷಣೆ ಸಾಧ್ಯವೆಂಬ ಭಾವನೆ ಬಂಟರಲ್ಲಿ ಬಿತ್ತಲು ರೈ ಮಸಲತ್ತು ಮಾಡಿದ್ದಾನೆ. ಇದರ ಹಿಂದೆ ನಳಿನ್‍ನ ಕುಟಿಲತೆ ಅಡಗಿದೆ ಎಂಬುದು ಕಟ್ಟರ್ ಚೆಡ್ಡಿಗಳೇ ಈಗ ಪಿಸುಗುಡುತ್ತಿದ್ದಾರೆ. ನಳಿನ್‍ನ ಕಂಡರೆ  ಮೂಗುಮುರಿಯುವ ಕಲ್ಲಡ್ಕ ಕಮಾಂಡ್ ಕೂಡ ಈಗ ಬಂಟರ ಅಧ್ಯಕ್ಷನ “ವಾಟ್ಸ್‍ಆಪ್ ಆಂದೋಲನ”ದ ರೂವಾರಿ ನಳಿನ್  ಎಂದೇ ಕಂಡವರ ಮುಂದೆ ಬಡಬಡಿಸುತ್ತಿದೆ.
ಸೊರಕೆ

ಬಿಜೆಪಿ ಬಿಡಾರದಲ್ಲಿ ಹರಿದಾಡುತ್ತಿರುವ ಮತ್ತೊಂದು ಚರ್ಚೆಯ ಪ್ರಕಾರ ಇದು  ನಳಿನನ್ನು ಹಣಿಯಲು ಬ್ರಾಹ್ಮಣೋತ್ತಮರ್ಯಾರೋ ಮಾಡಿದ ಕಿತಾಪತಿ. ಬಿಲ್ಲವರು ತಿರುಗಿಬಿದ್ದು ಬಂಟ ಕ್ಯಾಂಡಿಡೇಟ್‍ಗಳನ್ನೆಲ್ಲಾ ಸೋಲಿಸಿದರೆ ನಳಿನ್ ಬಿಜೆಪಿಯಲ್ಲಿ ಕಿಮ್ಮತ್ತು ಕಳೆದುಕೊಳ್ಳುತ್ತಾರೆ. ಆಗ ಮತ್ತೆ ಕಲ್ಲಡ್ಕ ಭಟ್ಟರದೇ ಏಕಮೇವಾದ್ವಿತೀಯ ದರ್ಬಾರು  ಸ್ಥಾಪಿತವಾಗುತ್ತದೆಂದು ಬಂಟರ ಸಂಘದ ಅಧ್ಯಕ್ಷನ ಹೆಸರಿನಲ್ಲಿ ಇಂಥದೊಂದು  ಸಂದೇಶ ರವಾನಿಸಲಾಗಿದೆಯಂತೆ. “ದಕ್ಷಿಣ ಕನ್ನಡ  ಮತ್ತು ಉಡುಪಿಯು  ಬಂಟರ-ಬ್ರಾಹ್ಮಣರ ನಾಡು” ಎಂಬ ವಾಕ್ಯ ಮಲಾಡಿಗುತ್ತು ರೈನ ಸಂದೇಶದಲ್ಲಿರುವುದು ಬ್ರಾಹ್ಮಣರ ಭೂಪನ ಕುಚೋದ್ಯದ ಅನುಮಾನ ಹುಟ್ಟುಹಾಕಿದೆ.

ಇದೆಲ್ಲಾ ಬಿಜೆಪಿಯ ಒಳಸುಳಿ ರಾಜಕಾರಣ ಏನೇಇರಲಿ, ಸಂಘಪರಿವಾರದ  ಬ್ರಾಹ್ಮಣರ-ಬಲಾಢ್ಯ ಬಂಟರ ಷಡ್ಯಂತ್ರಕ್ಕೆ ಬಲಿಬೀಳುತ್ತಿರುವ ಬಿಲ್ಲವರಿಗೆ ಬುದ್ಧಿ ಬರುವುದು ಎಂದು? ಹುಸಿ ಹಿಂದೂತ್ವಕ್ಕೆ ಮರುಳಾಗಿ ಬಿಲ್ಲವರು ತಮ್ಮವರ ಆಹುತಿ ಕೊಡುತ್ತಾ  ಬಿಜೆಪಿಗೆ ಬೆಂಬಲಿಸುತ್ತಾ ಹೋದರೆ ಮೇಲುವರ್ಗದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ. ಇದು ಬಿಲ್ಲವರ ಸ್ವಾಮಿಗೆ, ಜನಾರ್ದನ  ಪೂಜಾರಿ,  ವಿನಯ್ ಕುಮಾರ್ ಸೊರಕೆ,  ಶ್ರೀನಿವಾಸ್  ಪೂಜಾರಿ,  ರುಕ್ಮಯ್ಯ ಪೂಜಾರಿಯಂತ ಬಿಲ್ಲವರ   ಭೂಪರಿಗೆ, ಬಿಲ್ಲವರ ಸಂಘದ ಸರದಾರರಿಗೆಲ್ಲಾ ಅರ್ಥವಾಗೋದು ಯಾವಾಗ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...