Homeಮುಖಪುಟಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

ಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

- Advertisement -
- Advertisement -

ಸಂತ ತುಕಾರಾಂ ಎಂದರೆ ನಮಗೆ ಡಾ ರಾಜ್ ಅಭಿನಯದ “ಜಯತು ಜಯ ವಿಠಲ” ಎಂದು ಹಾಡಿಕೊಂಡು, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ, ಸದಾ ಸಾಧು ಸ್ವಭಾವದ ಆಕಳಂತೆ ಇದ್ದು, ಪಡಬಾರದ ಪಾಡನ್ನೆಲ್ಲಾ ಪಟ್ಟ ಭಕ್ತನ ಕಾಪಾಡದ ದೇವರು ಕೊನೆಗೆ ನನ್ನ ಹತ್ತಿರ ನೆಮ್ಮದಿಯಾಗಿರು ಎಂದು ಪುಷ್ಪಕವಿಮಾನದಲ್ಲಿ ಬಂದು ಕರೆದುಕೊಂಡು ಹೋಗುವ ಚಿತ್ರವು ಮನಸ್ಸಿನಲ್ಲಿ ಬಂದರೆ ಅದು ನಮ್ಮ ತಪ್ಪಲ್ಲ. ಪೌರಾಣಿಕದ ಬೂದಿಯಲ್ಲಿ ಇತಿಹಾಸದ ಕೆಂಡವನ್ನು ಮರೆಮಾಡುತ್ತಾ ಒಂದು ನಿರ್ದಿಷ್ಟ ಮನಸ್ಥಿತಿಯಿಂದ ಬರಹಗಾರರು ಸಾಮಾಜಿಕ ಸಾಮರಸ್ಯದಲ್ಲಿ, ಧಾರ್ಮಿಕ ಸಮಾನತೆಯಲ್ಲಿ, ಆಧ್ಯಾತ್ಮಿಕ ಔನ್ನತ್ಯದಲ್ಲಿ ಕ್ರಾಂತಿಕಾರಿ ಸಿಂಹಗಳಾಗಿದ್ದವರನ್ನೂ ಮುಂದೆ ಕುರಿಗಳಂತೆ ತೋರಿಬಿಡುತ್ತಾರೆ ಎಂದು ಸಾಳುಂಖೆ ಎಚ್ಚರಿಸುತ್ತಾರೆ.

ಕಳೆದ ಮೂರು ಶತಮಾನಗಳಿಂದ ತುಕಾರಾಮ ಮಹಾರಾಷ್ಟ್ರದ ಜನರ ಹೃದಯದಲ್ಲಿ ಸಂವೇದನೆಯಾದ. ಅವನ ಅಭಂಗಗಳು ಮರಾಠ ಸಂಸ್ಕೃತಿಯ ಭಾಗವಾಗುವಷ್ಟು ನಾಡು ಅವನನ್ನು ಪ್ರೀತಿಸಿತು. ಅದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಬೇಕಾದರೆ ಮನಸ್ಸಿನಲ್ಲಿರುವ ಹಳೆಯ ಸಂತ ತುಕಾರಾಮನ ಪ್ರತಿಮೆಯನ್ನು ದೂರ ಮಾಡಬೇಕಾಗುತ್ತದೆ ಎನ್ನುವರು ಸಾಳುಂಖೆ. ಏಕೆಂದರೆ ಅದು ಅವನ ಮೂಲ ವ್ಯಕ್ತಿತ್ವಕ್ಕೆ ಹೋಲುವುದಿಲ್ಲ. ದಿವಾಳಿಯಾಗಿ, ಅಸಹಾಯಕನಾಗಿ ದೇವರ ಭಕ್ತನಾಗಿ, ಸರಿಯಾಗಿ ಸಂಸಾರ ತೂಗಿಸಲಾಗದೇ, ಸದಾ ತಾಳ ಕುಟ್ಟುತ್ತಾ ಕುಳಿತುಕೊಂಡು, ವ್ಯವಹಾರ ಶೂನ್ಯ, ಮುಗ್ಧ ಭೋಳೆ ಸಂತನಂತೆ (ಅದೇ ಸಂತ ತುಕಾರಾಂ ಚಿತ್ರದಲ್ಲಿ ತೋರಿಸುವಂತೆ) ಇರಿಸಲಾಗಿದೆ. ಆದರೆ ಧರ್ಮದ ಹೆಸರಿನಲ್ಲಿ ಅನೀತಿಯ ವ್ಯಾಪಾರ ನಡೆಸುತ್ತಿದ್ದ ಧಾರ್ಮಿಕಸತ್ತೆಯ ವಿರುದ್ಧವಾಗಿ ಇವನು ಮಹಾನ್ ಯೋಧನಂತೆ ಹೋರಾಡಿದ್ದ. ಅತ್ಯಂತ ಪ್ರಬಲ ಮತ್ತು ಮಜಬೂತಾಗಿರುವ ಸಮಾಜ ವ್ಯವಸ್ಥೆಯ ಮೂಲಕ್ಕೆ ಸಿಡಿಮದ್ದು ಇರಿಸುವ ಕಾರ್ಯವನ್ನು ಅವನು ಬದುಕಿನ ಉದ್ದಕ್ಕೂ ಮಾಡುತ್ತಲೇ ಬಂದಿದ್ದ.

ತುಕಾರಾಮನ ಜೀವನದ ಕ್ರಾಂತಿಕಾರಕ ಅನೇಕ ಘಟನೆಗಳನ್ನು ನಿರ್ಲಕ್ಷಿಸಿ, ಅವನನ್ನು ಸಂತನಾಗಿ ತೋರುವ ಧಾವಂತದಲ್ಲಿ ಮರೆಮಾಚಲಾಗಿರುವ ಸಂಗತಿಗಳ ಮೇಲೆ ಸಾಳುಂಖೆ ಬೆಳಕು ಚೆಲ್ಲುತ್ತಾರೆ.

ತನ್ನ ಅಭಂಗಗಳಲ್ಲಿ ತುಕಾರಾಮ ಬುವಾ ಡಾಂಭಿಕ ವ್ಯವಸ್ಥೆಯ ಮೇಲೆ ನೇರಾನೇರ ಪ್ರಹಾರ ಮಾಡುತ್ತಾರೆ. ಧಾರ್ಮಿಕತೆಯು ಮಾಡುವ ಅನ್ಯಾಯಗಳನ್ನು ಖಂಡಿಸಿ ಬರೆಯುತ್ತಿದ್ದ ಅವನ ಅಭಂಗಗಳನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿಬಿಡುವ ಶಿಕ್ಷೆ ಕೊಡುವುದು ತಿಳಿದಿರುವುದೇ. ಆದರೆ ಹೊಡೆದು, ಬಡಿದು, ನಿಂದಿಸಿ ನಾನಾ ರೀತಿಯಲ್ಲಿ ಹಿಂಸೆಗಳನ್ನು ಕೊಟ್ಟರೂ, “ತುಂಡು ಮಾಡಿ ಕೊಚ್ಚಿ ಹಾಕಿದರೂ ಹೆದರಲಾರೆ” ಎನ್ನುವ ತುಕಾರಾಮ ಅಭಂಗಗಳನ್ನು ಬರೆಯುತ್ತಾನೆ.

ಧಾರ್ಮಿಕನಾಗಿಯೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ತುಕಾರಾಮ ಸತ್ತದ್ದೂ ನಿಗೂಢವೇ. ಇಂದ್ರಾಣಿ ನದಿಯ ತೀರದಲ್ಲಿ ಕೀರ್ತನೆ ಹಾಡುತ್ತಿದ್ದಾಗ ಅದೃಶ್ಯನಾದ ಎಂಬ ಐತಿಹ್ಯವನ್ನು ಬೇಧಿಸಿದರೆ ರಾಮೇಶ್ವರ ಭಟ್ಟ ತುಕಾರಾಮನ ಮೇಲೆ ಖಟ್ಲೆ ಹೂಡಿದವನು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡವನು, ಬಹಿಷ್ಕಾರ ಹಾಕಿಸಿದವನು, ಗಡಿಪಾರಿನ ಆಜ್ಞೆ ಮಾಡಿಸಿದವನು, ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಮುಳುಗಿಸಿದವನು, ಅಂತವನು ಸಾರುವುದೇನೆಂದರೆ, ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದನೆಂದು. ಅಂದರೆ ಹೆಣವೂ ಕೂಡ ಸಿಗದಂತೆ ಮುಗಿಸಿದರೇ?

ತುಕಾರಾಮನ ವೈಕುಂಠಯಾನ ಹೇಗೆ ಹತ್ಯೆಯಾಗಿದ್ದಿರಬಹುದೆಂದು ಸಾಳುಂಖೆ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತಾರೆ.

ಒಟ್ಟಾರೆ ತುಕಾರಾಮನೆಂಬ ಕ್ರಾಂತಿಕಾರಿಯನ್ನು ಅವನ ಸಾಮಾಜಿಕ ಹೋರಾಟದ ಮತ್ತು ಆಧ್ಯಾತ್ಮಿಕತೆಯ ಮೌಲ್ಯದ ಸಮೇತ ಪರಿಚಯಿಸಿ ಕೊಡುವ ಸಾಳುಂಖೆಯವರ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ತಂದಿದ್ದಾರೆ. ಪುಟಪುಟದಲ್ಲೂ ನಮ್ಮ ಭಾರತದ ಧಾರ್ಮಿಕತೆಯಲ್ಲಿ ತನ್ನ ಕ್ರೌರ್ಯ ಮತ್ತು ಅಸಹನೆಯನ್ನು ಮೆರೆದ ಧಾರ್ಮಿಕಸತ್ತೆಯ ದೌರ್ಜನ್ಯದ ಅನಾವರಣವಾಗುತ್ತದೆ. ಜೊತೆಗೆ ತುಕಾರಾಮನ ಹೋರಾಟದ ಘನತೆ ಮತ್ತು ತಾತ್ವಿಕತೆಯು ಪುಟಕ್ಕಿಟ್ಟಂತೆ ಹೊಳೆಯುತ್ತದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇದನ್ನು ಪ್ರಕಟಿಸಿ ಸಂತ ಯೋಧನ ಅರಿಯುವಲ್ಲಿ ಉಪಕರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಂತ ತುಕಾರಾಮನ ನಿಜ ಚರಿತ್ರೆಯನ್ನು ತಿಳಿಸಿರುವ ಡಾ.ಸಾಳುಂಕೆ ಮತ್ತು ಚಂದ್ರಕಾಂತ ಪೋಕಳೆಯವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...