Homeಮುಖಪುಟಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

ಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

- Advertisement -
- Advertisement -

ಸಂತ ತುಕಾರಾಂ ಎಂದರೆ ನಮಗೆ ಡಾ ರಾಜ್ ಅಭಿನಯದ “ಜಯತು ಜಯ ವಿಠಲ” ಎಂದು ಹಾಡಿಕೊಂಡು, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ, ಸದಾ ಸಾಧು ಸ್ವಭಾವದ ಆಕಳಂತೆ ಇದ್ದು, ಪಡಬಾರದ ಪಾಡನ್ನೆಲ್ಲಾ ಪಟ್ಟ ಭಕ್ತನ ಕಾಪಾಡದ ದೇವರು ಕೊನೆಗೆ ನನ್ನ ಹತ್ತಿರ ನೆಮ್ಮದಿಯಾಗಿರು ಎಂದು ಪುಷ್ಪಕವಿಮಾನದಲ್ಲಿ ಬಂದು ಕರೆದುಕೊಂಡು ಹೋಗುವ ಚಿತ್ರವು ಮನಸ್ಸಿನಲ್ಲಿ ಬಂದರೆ ಅದು ನಮ್ಮ ತಪ್ಪಲ್ಲ. ಪೌರಾಣಿಕದ ಬೂದಿಯಲ್ಲಿ ಇತಿಹಾಸದ ಕೆಂಡವನ್ನು ಮರೆಮಾಡುತ್ತಾ ಒಂದು ನಿರ್ದಿಷ್ಟ ಮನಸ್ಥಿತಿಯಿಂದ ಬರಹಗಾರರು ಸಾಮಾಜಿಕ ಸಾಮರಸ್ಯದಲ್ಲಿ, ಧಾರ್ಮಿಕ ಸಮಾನತೆಯಲ್ಲಿ, ಆಧ್ಯಾತ್ಮಿಕ ಔನ್ನತ್ಯದಲ್ಲಿ ಕ್ರಾಂತಿಕಾರಿ ಸಿಂಹಗಳಾಗಿದ್ದವರನ್ನೂ ಮುಂದೆ ಕುರಿಗಳಂತೆ ತೋರಿಬಿಡುತ್ತಾರೆ ಎಂದು ಸಾಳುಂಖೆ ಎಚ್ಚರಿಸುತ್ತಾರೆ.

ಕಳೆದ ಮೂರು ಶತಮಾನಗಳಿಂದ ತುಕಾರಾಮ ಮಹಾರಾಷ್ಟ್ರದ ಜನರ ಹೃದಯದಲ್ಲಿ ಸಂವೇದನೆಯಾದ. ಅವನ ಅಭಂಗಗಳು ಮರಾಠ ಸಂಸ್ಕೃತಿಯ ಭಾಗವಾಗುವಷ್ಟು ನಾಡು ಅವನನ್ನು ಪ್ರೀತಿಸಿತು. ಅದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಬೇಕಾದರೆ ಮನಸ್ಸಿನಲ್ಲಿರುವ ಹಳೆಯ ಸಂತ ತುಕಾರಾಮನ ಪ್ರತಿಮೆಯನ್ನು ದೂರ ಮಾಡಬೇಕಾಗುತ್ತದೆ ಎನ್ನುವರು ಸಾಳುಂಖೆ. ಏಕೆಂದರೆ ಅದು ಅವನ ಮೂಲ ವ್ಯಕ್ತಿತ್ವಕ್ಕೆ ಹೋಲುವುದಿಲ್ಲ. ದಿವಾಳಿಯಾಗಿ, ಅಸಹಾಯಕನಾಗಿ ದೇವರ ಭಕ್ತನಾಗಿ, ಸರಿಯಾಗಿ ಸಂಸಾರ ತೂಗಿಸಲಾಗದೇ, ಸದಾ ತಾಳ ಕುಟ್ಟುತ್ತಾ ಕುಳಿತುಕೊಂಡು, ವ್ಯವಹಾರ ಶೂನ್ಯ, ಮುಗ್ಧ ಭೋಳೆ ಸಂತನಂತೆ (ಅದೇ ಸಂತ ತುಕಾರಾಂ ಚಿತ್ರದಲ್ಲಿ ತೋರಿಸುವಂತೆ) ಇರಿಸಲಾಗಿದೆ. ಆದರೆ ಧರ್ಮದ ಹೆಸರಿನಲ್ಲಿ ಅನೀತಿಯ ವ್ಯಾಪಾರ ನಡೆಸುತ್ತಿದ್ದ ಧಾರ್ಮಿಕಸತ್ತೆಯ ವಿರುದ್ಧವಾಗಿ ಇವನು ಮಹಾನ್ ಯೋಧನಂತೆ ಹೋರಾಡಿದ್ದ. ಅತ್ಯಂತ ಪ್ರಬಲ ಮತ್ತು ಮಜಬೂತಾಗಿರುವ ಸಮಾಜ ವ್ಯವಸ್ಥೆಯ ಮೂಲಕ್ಕೆ ಸಿಡಿಮದ್ದು ಇರಿಸುವ ಕಾರ್ಯವನ್ನು ಅವನು ಬದುಕಿನ ಉದ್ದಕ್ಕೂ ಮಾಡುತ್ತಲೇ ಬಂದಿದ್ದ.

ತುಕಾರಾಮನ ಜೀವನದ ಕ್ರಾಂತಿಕಾರಕ ಅನೇಕ ಘಟನೆಗಳನ್ನು ನಿರ್ಲಕ್ಷಿಸಿ, ಅವನನ್ನು ಸಂತನಾಗಿ ತೋರುವ ಧಾವಂತದಲ್ಲಿ ಮರೆಮಾಚಲಾಗಿರುವ ಸಂಗತಿಗಳ ಮೇಲೆ ಸಾಳುಂಖೆ ಬೆಳಕು ಚೆಲ್ಲುತ್ತಾರೆ.

ತನ್ನ ಅಭಂಗಗಳಲ್ಲಿ ತುಕಾರಾಮ ಬುವಾ ಡಾಂಭಿಕ ವ್ಯವಸ್ಥೆಯ ಮೇಲೆ ನೇರಾನೇರ ಪ್ರಹಾರ ಮಾಡುತ್ತಾರೆ. ಧಾರ್ಮಿಕತೆಯು ಮಾಡುವ ಅನ್ಯಾಯಗಳನ್ನು ಖಂಡಿಸಿ ಬರೆಯುತ್ತಿದ್ದ ಅವನ ಅಭಂಗಗಳನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿಬಿಡುವ ಶಿಕ್ಷೆ ಕೊಡುವುದು ತಿಳಿದಿರುವುದೇ. ಆದರೆ ಹೊಡೆದು, ಬಡಿದು, ನಿಂದಿಸಿ ನಾನಾ ರೀತಿಯಲ್ಲಿ ಹಿಂಸೆಗಳನ್ನು ಕೊಟ್ಟರೂ, “ತುಂಡು ಮಾಡಿ ಕೊಚ್ಚಿ ಹಾಕಿದರೂ ಹೆದರಲಾರೆ” ಎನ್ನುವ ತುಕಾರಾಮ ಅಭಂಗಗಳನ್ನು ಬರೆಯುತ್ತಾನೆ.

ಧಾರ್ಮಿಕನಾಗಿಯೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ತುಕಾರಾಮ ಸತ್ತದ್ದೂ ನಿಗೂಢವೇ. ಇಂದ್ರಾಣಿ ನದಿಯ ತೀರದಲ್ಲಿ ಕೀರ್ತನೆ ಹಾಡುತ್ತಿದ್ದಾಗ ಅದೃಶ್ಯನಾದ ಎಂಬ ಐತಿಹ್ಯವನ್ನು ಬೇಧಿಸಿದರೆ ರಾಮೇಶ್ವರ ಭಟ್ಟ ತುಕಾರಾಮನ ಮೇಲೆ ಖಟ್ಲೆ ಹೂಡಿದವನು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡವನು, ಬಹಿಷ್ಕಾರ ಹಾಕಿಸಿದವನು, ಗಡಿಪಾರಿನ ಆಜ್ಞೆ ಮಾಡಿಸಿದವನು, ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಮುಳುಗಿಸಿದವನು, ಅಂತವನು ಸಾರುವುದೇನೆಂದರೆ, ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದನೆಂದು. ಅಂದರೆ ಹೆಣವೂ ಕೂಡ ಸಿಗದಂತೆ ಮುಗಿಸಿದರೇ?

ತುಕಾರಾಮನ ವೈಕುಂಠಯಾನ ಹೇಗೆ ಹತ್ಯೆಯಾಗಿದ್ದಿರಬಹುದೆಂದು ಸಾಳುಂಖೆ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತಾರೆ.

ಒಟ್ಟಾರೆ ತುಕಾರಾಮನೆಂಬ ಕ್ರಾಂತಿಕಾರಿಯನ್ನು ಅವನ ಸಾಮಾಜಿಕ ಹೋರಾಟದ ಮತ್ತು ಆಧ್ಯಾತ್ಮಿಕತೆಯ ಮೌಲ್ಯದ ಸಮೇತ ಪರಿಚಯಿಸಿ ಕೊಡುವ ಸಾಳುಂಖೆಯವರ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ತಂದಿದ್ದಾರೆ. ಪುಟಪುಟದಲ್ಲೂ ನಮ್ಮ ಭಾರತದ ಧಾರ್ಮಿಕತೆಯಲ್ಲಿ ತನ್ನ ಕ್ರೌರ್ಯ ಮತ್ತು ಅಸಹನೆಯನ್ನು ಮೆರೆದ ಧಾರ್ಮಿಕಸತ್ತೆಯ ದೌರ್ಜನ್ಯದ ಅನಾವರಣವಾಗುತ್ತದೆ. ಜೊತೆಗೆ ತುಕಾರಾಮನ ಹೋರಾಟದ ಘನತೆ ಮತ್ತು ತಾತ್ವಿಕತೆಯು ಪುಟಕ್ಕಿಟ್ಟಂತೆ ಹೊಳೆಯುತ್ತದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇದನ್ನು ಪ್ರಕಟಿಸಿ ಸಂತ ಯೋಧನ ಅರಿಯುವಲ್ಲಿ ಉಪಕರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಂತ ತುಕಾರಾಮನ ನಿಜ ಚರಿತ್ರೆಯನ್ನು ತಿಳಿಸಿರುವ ಡಾ.ಸಾಳುಂಕೆ ಮತ್ತು ಚಂದ್ರಕಾಂತ ಪೋಕಳೆಯವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...

ಯುವತಿಯನ್ನು ಬಂಧಿಸಿಟ್ಟು ಚಿತ್ರಹಿಂಸೆ : ಆರೋಪಿಯ ಬಂಧನ

ಯುವಕನೋರ್ವ ತನ್ನ ಲಿವ್-ಇನ್ ಸಂಗಾತಿಯಾದ 19 ವರ್ಷದ ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಗುರುಗಾಂವ್‌ನ ಸೆಕ್ಟರ್ 69ರಲ್ಲಿ ನಡೆದಿದೆ. ಆರೋಪಿಯನ್ನು ದೆಹಲಿಯ ನರೇಲಾ ನಿವಾಸಿ 19 ವರ್ಷದ ಶಿವಂ ಎಂದು ಗುರುತಿಸಲಾಗಿದೆ....

ಕೋಝಿಕ್ಕೋಡ್‌: ಆಹಾರ ಸೇವಿಸಿ, ಬಿಲ್ ಪಾವತಿಸಲು ನಿರಾಕರಿಸಿದ ಮೂವರ ತಂಡದಿಂದ ರೆಸ್ಟೋರೆಂಟ್ ಧ್ವಂಸ

ಕೋಝಿಕ್ಕೋಡ್ (ಕೇರಳ): ಆಹಾರ ಸೇವಿಸಿ, ಹಣ ನೀಡಲು ನಿರಾಕರಿಸಿದ ಮೂವರು ಸದಸ್ಯರ ಗುಂಪೊಂದು ಬಿಲ್ ಕೇಳಿದ್ದಕ್ಕೆ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,...

ಲೈಂಗಿಕ ದೌರ್ಜನ್ಯ ಆರೋಪ : ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವಿಶೇಷ ಪೋಕ್ಸೋ ನ್ಯಾಯಾಲಯ...

ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ...

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...

ಕ್ಷುಲ್ಲಕ ಕಾರಣಕ್ಕೆ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಿರಿಯ ವಯಸ್ಕರು ಸೇರಿದಂತೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ದುಷ್ಕರ್ಮಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 15ರಂದು ಜಿಲ್ಲೆಯ ರುದಾಯನ್ ಪಟ್ಟಣದಲ್ಲಿ...

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...