- Advertisement -
ದೇಶ ಎದುರಿಸುತ್ತಿರುವ ಮುಖ್ಯ ಸಮಸ್ಯೆ ನಿರುದ್ಯೋಗ. ನಮ್ಮ ಯುವಕರಿಗೆ ಉದ್ಯೋಗ ಪಡೆಯಲು ಸಹಾಯ ಮಾಡುವ ಯಾವುದೇ ಕಾರ್ಯತಂತ್ರದ ಕಲ್ಪನೆಯನ್ನು ನಾನು ನೋಡಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನಾನು ಯುದ್ದತಂತ್ರದ ವಿಷಯವನ್ನು ನೋಡಿದ್ದೇನೆ. ಆದರೆ ಕೇಂದ್ರ ಕಲ್ಪನೆ ಇಲ್ಲ.ಇದನ್ನು ಸರ್ಕಾರ ಚನ್ನಾಗಿ ವಿವರಿಸುತ್ತದೆ. ಸಾಕಷ್ಟು ಪುನರಾವರ್ತನೆ, ಗಲಾಟೆ – ಇದು ಸರ್ಕಾರದ ಮನಸ್ಥಿತಿ. ಎಲ್ಲಾ ಮಾತುಕತೆ ಇದ್ದರೂ ಏನೂ ಆಗುತ್ತಿಲ್ಲ. ಬಹುಶಃ ಇದು ಇತಿಹಾಸದಲ್ಲಿಯೇ ಅತಿ ದೀರ್ಘವಾದ ಬಜೆಟ್ ಭಾಷಣವಾಗಿರಹುದು. ಆದರೆ ಅದರಲ್ಲಿ ಏನೂ ಇರಲಿಲ್ಲ. ಅದು ಟೊಳ್ಳಾಗಿತ್ತು ಎಂದು ಆರೋಪಿಸಿದ್ದಾರೆ.
ಇದೇ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಕೋರ್ ವಲಯದ ಬೆಳವಣಿಗೆಯಲ್ಲಿ ಗಂಭೀರ ಕುಸಿತವಾಗಿದೆ. ಅದನ್ನು ಹೇಗೆ ಪರಿಹರಿಸಬೇಕೆಂಬುದರ ಕುರಿತು ಮಾರ್ಗಸೂಚನಿಯನ್ನು ವಿನ್ಯಾಸಗೊಳಿಸಲು ಬಜೆಟ್ ವಿಫಲವಾಗಿದ ಎಂದು ದೂರಿದೆ.
ಬಜೆಟ್ ನಿಷ್ಕಪಟವಾಗಿದೆ. ಬೆಳವಣಿಗೆಗೆ ಪ್ರಚೋದನೆಯ ಕೊರತೆ ಇದೆ. ಉದ್ಯೋಗ ಸೃಷ್ಟಿಗೆ ಸ್ಪಷ್ಟ ಮಾರ್ಗಸೂಚಿ ಇಲ್ಲ. ದೀರ್ಘ ಬಜೆಟ್ ಭಾಷಣವಾಗಿದ್ದು ಹೆಚ್ಚು ನೀರಸವಾಗಿದೆ . ಇದು ಅಚ್ಚೇ ದಿನ್ ಎಂದು ಗೇಲಿ ಮಾಡಿದೆ.
ಹೊಸ ಭಾರತದ ನಂತರ ಸರ್ಕಾರವು 5 ಟ್ರಿಲಿಯನ್ ಅಮೇರಿಕನ್ ಡಾಲರ್ ಆರ್ಥಿಕ ಗುರಿಯನ್ನು ಸಹ ಬಜೆಟ್ ನಲ್ಲಿ ಕೈಬಿಟ್ಟಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
- Advertisement -