Homeಅಂಕಣಗಳುಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

ಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

- Advertisement -
- Advertisement -

| ವಾಸು.ಎಚ್.ವಿ |

ಒಂದುವೇಳೆ ಅಂದು ಪತ್ರಿಕೆಯ ತಯಾರಿಯ ಕೆಲಸ ಇರದೇ ಇದ್ದಿದ್ದರೆ, ನೋಟು ರದ್ದತಿಯ ಒಂದು ವರ್ಷದ ಪರಿಣಾಮಗಳ ಕುರಿತಂತೆ ಕಾರ್ಯಕ್ರಮ ರೂಪಿಸಲು ನಾವು ಬಸವನಗುಡಿಯ ಕಚೇರಿಯಲ್ಲೇ ಸಭೆ ಸೇರಬೇಕಾಗಿತ್ತು. ಮೇಡಂ (ಗೌರಿ ಲಂಕೇಶ್) ಹಿಂದಿನ ದಿನವೇ ‘ಮರೀ, ನಾಳೆ ಆಫೀಸಿನಲ್ಲಿ ಆಗಲ್ಲ, ಗುರುವಾರದ ನಂತರವಾದರೆ ಇಲ್ಲೇ ಮಾಡಿಕೊಳ್ಳಬಹುದು’ ಎಂದಿದ್ದರು. ಅಂದಿನ ಸಭೆಯಲ್ಲಿ ದಕ್ಷಿಣ ಬೆಂಗಳೂರಿನ ಕೆಲವರು ಇರಲೇಬೇಕಿದ್ದುದರಿಂದ, ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಸೇರಿಕೊಂಡಿದ್ದೆವು. ಸಭೆ ಮುಗಿಸಿ ಹೊರಡುವ ಹೊತ್ತಿಗೆ ಮೇಡಂ ಹತ್ಯೆಯ ಷಾಕಿಂಗ್ ಸುದ್ದಿ ಗೊತ್ತಾಯಿತು.

ಭಾರೀ ದುಃಖ ಹಾಗೂ ಆತಂಕದಿಂದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತು ನಾನು ಮೇಡಂ ಮನೆಯ ಕಡೆಗೆ ಹೊರಟೆವು. ನಮ್ಮ ಮುಂದಿನ ಸಾರ್ವಜನಿಕ ಕೆಲಸದ ಜವಾಬ್ದಾರಿಯ ಪ್ರಯಾಣವೂ ಇನ್ನು ಮುಂದೆ ಬೇರೆಯಾಗುತ್ತದೆಂಬ ಕಲ್ಪನೆ ಆಗ ನಮ್ಮಿಬ್ಬರಿಗೂ ಇರಲಿಲ್ಲ. ರಾಜರಾಜೇಶ್ವರಿ ನಗರದ ಮನೆಯ ಮುಂದೆ ಕಳೆದ ಕೆಲವು ಗಂಟೆಗಳಲ್ಲೇ ಮುಂದಿನ ಜವಾಬ್ದಾರಿ ಅರ್ಥವಾಗತೊಡಗಿತು. ಕಚೇರಿಯ ಸಿಬ್ಬಂದಿ ಅಲ್ಲಿಗೆ ಬಂದು ತಲುಪಿದಾಗ ಮರುದಿನ ಪತ್ರಿಕೆ ಮುದ್ರಣಕ್ಕೆ ಹೋಗಬೇಕೆಂಬುದು ನೆನಪಾಯಿತು.

ಅಲ್ಲಿಂದ ಆಚೆಗೆ ಹಲವು ಬೆಳವಣಿಗೆಗಳು ನಡೆದವು. ಅದುವರೆಗಿನ ನಮ್ಮ ಇತರ ಜವಾಬ್ದಾರಿಗಳಿಂದ ಸ್ವಲ್ಪ ಸ್ವಲ್ಪ ಬಿಡಿಸಿಕೊಂಡು, ಇದೀಗ ಪತ್ರಿಕೆಯ ನೊಗಕ್ಕೆ ಹೆಗಲು ಕೊಡುವ ಕೆಲಸವನ್ನು ಪತ್ರಿಕೆಯ ಹಿಂದಿನ ಸಿಬ್ಬಂದಿಯ ಜೊತೆಗೆ ನಾವೂ ಮಾಡುತ್ತಿದ್ದೇವೆ.

ಇದು ಹಿಂದಿನ ಗೌರಿ ಲಂಕೇಶ್ ಪತ್ರಿಕೆಯ ಯಥಾರೂಪವಲ್ಲ. ಸ್ವತಃ ಮೇಡಂ ಈಗ ಭೌತಿಕವಾಗಿ ಇಲ್ಲ. ಅವರ ಬದಲಿಗೆ ರಾಜ್ಯ ಮತ್ತು ದೇಶಗಳ ಗಡಿ ದಾಟಿ ಸತ್ಯ ನುಡಿಯುವ ದಿಟ್ಟತೆಗೆ ಪ್ರತೀಕವಾಗಿರುವ ಗೌರಿಯವರ ನೆನಪು ಹಾಗೂ ಬಲಿದಾನದ ಔನ್ನತ್ಯ ಇಲ್ಲೇ ನಮ್ಮೊಂದಿಗಿದೆ.

ಸೆಪ್ಟೆಂಬರ್ 12ರಂದು ನಡೆದ ಪ್ರತಿರೋಧ ಸಮಾವೇಶದ ಹೊತ್ತಿಗೇ ಅದು ಸ್ಪಷ್ಟವಾಗತೊಡಗಿತ್ತು. ಗೌರಿಯವರ ರೇಖಾಚಿತ್ರವೊಂದನ್ನು ಕಲಾವಿದ ವಿಜಯ್ ಮತ್ತು ಗೆಳೆಯರು ತಯಾರಿಸಿದ್ದರು. ಆ ಚಿತ್ರ ಎಲ್ಲೆಡೆ ಕಾಣತೊಡಗಿತ್ತು. ಬ್ಯಾನರ್, ಎದೆಬಿಲ್ಲೆ, ತಲೆಪಟ್ಟಿ ಹೀಗೆ. ಸಾವಿರಗಟ್ಟಲೇ ಸಂಖ್ಯೆಯಲ್ಲಿ ಬಂದವರೆಲ್ಲರ ಹೃದಯದಲ್ಲಿ, ಮನಸ್ಸಿನಲ್ಲಿ ಮಾತ್ರವಲ್ಲದೇ ಭೌತಿಕವಾಗಿಯೂ ಗೌರಿಯವರ ಫೋಟೋ ಎದ್ದು ಕಾಣುತ್ತಿತ್ತು. ಆ ದಿನದ ಮಟ್ಟಿಗಂತೂ ಎಲ್ಲೆಲ್ಲೂ ಕಾಣುವ ಚೆಗೆವಾರನ ಫೋಟೋದಂತೆ ಗೌರಿಯವರ ಚಿತ್ರ ಕಾಣುತ್ತಿತ್ತು. ಅಲ್ಲಿಂದಾಚೆಗೆ ದೇಶದ ಮತ್ತು ಪ್ರಪಂಚದ ನೂರಾರು ಕಡೆ ಗೌರಿಯವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದವು. ಎಲ್ಲೆಡೆ ಬೆಳೆಯುತ್ತಿದ್ದ ಬಲಪಂಥೀಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದ ಪ್ರಜಾತಂತ್ರವಾದಿಗಳಿಗೆ ಗೌರಿ ತಮ್ಮ ಪ್ರತಿನಿಧಿ ಎನಿಸಿತು.

ಭಾರತವೆಂಬ ದೇಶದ ಕಲ್ಪನೆಗೇ ಅಪಾಯ ತಂದೊಡ್ಡಿದ್ದವರು ಸರ್ಕಾರ ಮತ್ತು ಸಮಾಜದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಬದಲಾಗುತ್ತಿದ್ದ ಕಾಲಘಟ್ಟವದು. ಅಂತಹ ಹೊತ್ತಿನಲ್ಲಿ ಸಾಮಾನ್ಯ ಜನರನ್ನೆಲ್ಲಾ ತಲುಪಬಹುದಾದ ಮಾಧ್ಯಮ, ಕಥನ, ಭಾಷೆ ಹಾಗೂ ಭಾವ ಏನಿರಬೇಕು ಎಂದು ಯೋಚಿಸುವ ನಿಟ್ಟಿನಲ್ಲಿ ಗೌರಿಯವರ ಪ್ರಯತ್ನ ಇರಲಿಲ್ಲ. ಅವರಷ್ಟೇ ಅಲ್ಲದೇ, ದೇಶದ ಬಹುತೇಕ ಪ್ರಜಾತಂತ್ರವಾದಿಗಳು ಅಂತಹ ಹುಡುಕಾಟಕ್ಕೆ ತೊಡಗಿರಲಿಲ್ಲ. ಭಾರತದ ಪ್ರಜಾತಂತ್ರ ವಿಸ್ತಾರಗೊಂಡ 60, 70, 80ರ ದಶಕದ ಪರಿಭಾಷೆಯೇ ಚಾಲ್ತಿಯಲ್ಲಿತ್ತು. ಆದರೆ, ಎಷ್ಟೋ ‘ದೊಡ್ಡವರು’ ಪ್ರತಿರೋಧದ ಗಟ್ಟಿ ದನಿಯನ್ನೂ ಮೊಳಗಿಸದೇ ಇದ್ದಾಗ ಗೌರಿ ಲಂಕೇಶ್ ಒಂದಿನಿತೂ ಹಿಂಜರಿಯಲಿಲ್ಲ. ಅದಕ್ಕಾಗಿ ಅವರೆಂದಿಗೂ ನಮಗೆ ಮಾದರಿಯಾಗಿ ನಿಲ್ಲುತ್ತಾರೆ. ಎರಡು ವರ್ಷದ ನಂತರವೂ ನಮ್ಮೆದೆಯೊಳಗೆ ಪ್ರತಿರೋಧದ ಪ್ರತೀಕ ಗೌರಿಯವರು ಮಾಸದೇ ಉಳಿದಿರುವುದೇ ಅದಕ್ಕೆ ಸಾಕ್ಷಿ.

‘ನಿನ್ನನ್ನು ಕೊಲ್ಲಬೇಕು’ ಎಂದು ಫೇಸ್‍ಬುಕ್‍ನಲ್ಲಿ ಬರೆದ ಯುವಕನಿಗೆ, ‘ಮಗೂ, ನನ್ನನ್ನು ಕೊಲ್ಲುವ ಮಾತನಾಡುತ್ತಿರುವ ನೀನೂ ನನ್ನ ಮಗನೇ. ಆದರೆ, ನಿನಗೆ ನಿನ್ನ ಚಿಂತನೆ ದೇಶವನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು ಎಂಬ ವಾಸ್ತವದ ಅರಿವಿಲ್ಲ’ ಎಂದು ಪ್ರೀತಿಯಿಂದ ಬರೆದಿದ್ದ ಗೌರಿಯವರ ನಡೆ ಬಹುಶಃ ನಮಗೆ ದಾರಿ ತೋರಬಹುದು.
ಪತ್ರಿಕಾ ಸಂಸ್ಥೆಯ ಆರ್ಥಿಕ ಸ್ಥಿತಿ ಅತ್ಯಂತ ಸುಸ್ಥಿತಿಯಲ್ಲಿ ಎಂದೂ ಇಲ್ಲದಿದ್ದರೂ, ನಿರಂತರ ಶ್ರಮ ಹಾಗೂ ನೈತಿಕವಾದ ರೀತಿಯಲ್ಲಿಯೇ ಸಂಪನ್ಮೂಲ ಹೊಂದಿಸುವ ಒದ್ದಾಟದಲ್ಲೇ ಸಂಸ್ಥೆಯನ್ನು ನಡೆಸುತ್ತಾ ಬಂದ ಅವರ ನಿಲುವು ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಜೂನ್ 2016ರಲ್ಲಿ ಮೇಡಂ ಇದ್ದಾಗಲೇ ತೀರ್ಮಾನಿಸಿದಂತೆ, ಪತ್ರಿಕೆಯೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ವೆಬ್ ಮತ್ತು ಇನ್ನಿತರ ಸಾಧ್ಯತೆಗಳಿಗೆ ಅಪ್‍ಡೇಟ್ ಆಗುವ ನಿಟ್ಟಿನಲ್ಲಿ ನಾವು ಸತತವಾಗಿ ಮುನ್ನಡೆಯುತ್ತಿರಬೇಕಿದೆ.

ನಿಂದಿಸುವ, ಅಪಪ್ರಚಾರಗಳನ್ನು ಮಾಡುವ, ದ್ವೇಷಿಸುವ ಜನರು, ಹಿತಶತ್ರುಗಳು ಅಂದೂ ಇದ್ದರು; ಮುಂದೆಯೂ ಇರುತ್ತಾರೆ. ಆದರೆ, ಅದು ಉನ್ನತ ಆಶಯದತ್ತ ಸಾಗಬೇಕಾದ ನಮ್ಮ ಸಂಕಲ್ಪವನ್ನು ಅಲುಗಾಡಿಸಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಬದಲಾದ ಕಾಲಘಟ್ಟದಲ್ಲಿ ಬದಲಾಗಬೇಕಾದ ಮಾಧ್ಯಮದ ಸ್ವರೂಪ, ಪರಿಭಾಷೆಗಳು ಮತ್ತು ಕಥನದ ಕುರಿತು ಗಂಭೀರವಾಗಿ ಆಲೋಚಿಸಿ ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಿದೆ. ಆ ದಿಕ್ಕಿನಲ್ಲಿ ನಮ್ಮಲ್ಲಿರುವ ಆಲೋಚನೆಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಮಾಲೋಚನಾ ಸಭೆಗಳು, ಚರ್ಚಾಗೋಷ್ಠಿಗಳನ್ನು ಆಯೋಜಿಸಲು ಗೆಳೆಯರು ಉತ್ಸುಕತೆ ತೋರಿದ್ದಾರೆ. ಖುದ್ದಾಗಿ ಇಲ್ಲವೇ ಪತ್ರದ ಮುಖಾಂತರ ನಿಮ್ಮೆಲ್ಲರ ಜೊತೆ ನಡೆಯುವ ಸಂವಾದದಲ್ಲಿ, ನಿಮ್ಮ ಆಲೋಚನೆಗಳನ್ನೂ ಒಳಗೊಂಡು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆಂಬ ಭರವಸೆ ನೀಡಬಯಸುತ್ತೇವೆ.

ಮೇಡಂ ಇಲ್ಲವಾದ ಎರಡು ವರ್ಷದ ಈ ದಿನದಂದು ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿರುವುದನ್ನು ಅರ್ಥ ಮಾಡಿಕೊಂಡಿದ್ದೇವೆಂದು ತಂಡದ ಪರವಾಗಿ ಹೇಳಬಯಸುತ್ತೇನೆ. ನಾವು ನೀವೆಲ್ಲರೂ ಜೊತೆಗೂಡಿ ಸಾಗಬೇಕಾದ ದಾರಿ ಇದು. ಜೊತೆಗೂಡಿದರೆ ಮಾತ್ರ ಸಾಗುವ ದಾರಿಯೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜವಾಗಿ ಆ ಕೆಲಸವನ್ನು ನಾವು ನಮ್ಮ ನೀವುಗಳು ಕೂಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮಾನಮನಸ್ಕರ ಸಮಾನತೆಯ ಸಭೆ ಮಾಡಬೇಕಿರುವದು.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...