HomeUncategorizedಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

ಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

- Advertisement -
- Advertisement -

ಯಾಹೂ |

ಸಿನಿಮಾ ರಂಗದಲ್ಲಿ ಮತ್ತು ರಾಜಕಾರಣದಲ್ಲಿ ಹಾಗೂ ಖಾಸಗೀ ಬದುಕಿನಲ್ಲಿ ವೈರಿಗಳೇ ಇಲ್ಲದಂತೆ ಬದುಕಿದ ಅಂಬರೀಶ್‍ಗೆ ಗ್ರಹಗತಿಗಳು ಮುನಿಸಿಕೊಂಡಿದ್ದವು ಎಂದು ಟಿ.ವಿ.ಯೊಳಗೆ ಸೇರಿಕೊಂಡಿರುವ ಪುರೋಹಿತ ಪಿಂಡಗಳು ವಾದಿಸತೊಡಗಿವೆಯಂತಲ್ಲಾ. ಈ ಪಿಂಡಗಳ ವಿಶೇಷವೆಂದರೆ, ತ್ರಿಕಾಲಜ್ಞಾನಿಗಳಂತಾಡುವ ಇವು ಯಾವುದೇ ಘಟನೆ ನಡೆಯುವ ಮುನ್ನ ಬಾಯಿ ಬಿಡುವುದಿಲ್ಲ. ವಿಷ್ಣು ತೀರಿಕೊಂಡ ನಂತರವೇ ಅವರಿಗೆ ನಾಗವಲ್ಲಿ ಕಾಟ ಅಮರಿಕೊಂಡಿತ್ತು ಎಂದು ವದರಿದವು. ಸಕ್ಕರೆ ಕಾಯಿಲೆ ದೆಸೆಯಿಂದ ಹೃದಯಾಘಾತಕ್ಕೆ ತುತ್ತಾದ ವಿಷ್ಣುಗೆ ನಾಗವಲ್ಲಿ ಕಾಟವಿತ್ತು, ಯಾಗ ಮಾಡಿಸಿದ್ದರೆ ಸರಿಹೋಗುತ್ತಿತ್ತು ಎನ್ನುವ ಈ ಪಿಂಡಗಳು ಈಗ ಅಂಬರೀಶ್ ಸಾವಿಗೂ ಪುರೋಹಿತಶಾಹಿ ತಂತ್ರವನ್ನೇ ಬಳಸತೊಡಗಿರುವುದು ಕಂಡು ದಿಗಿಲಾಗಿ ಜ್ಯೋತಿಷ್ಯ ಬ್ರಹ್ಮ ಪ್ರಕಾಶ ಮಣ್ಣುರಾಯರಿಗೆ ಫೋನ್ ಮಾಡಲಾಗಿ ರಿಂಗಾಯ್ತು,
ರಿಂಗ್‍ಟೋನ್: “ಹೋನ್ಹೀ ತೋ ಹೋನ್ಹೀ ಹೀ ಹೈ, ಅನ್ಹೋಹ್ಹೀ ನಹೀಂ ಭವತ್ಯೇವ ಭವತವ್ಯಂ….. ಹಲೋ ಯಾರು.”
“ಗುರುಗಳೇ ನಾನು ಪತ್ರಕರ್ತ”
“ಯಾವ ಪತ್ರಿಕೆ.”
“ನ್ಯಾಯಪಥ.”
“ನ್ಯಾಯಪಥ ಅಂದರೆ ಸತ್ಯದ ದಾರಿ.”
“ಹೌದು ಸ್ವಾಮಿ, ನಿಮ್ಮ ಫೋನಿನ ರಿಂಗ್‍ಟೋನ್ ಅರ್ಥ ಆಗಲಿಲ್ಲ.”
“ನಡೆಯಬೇಕಾದದ್ದು ನಡೆದೇ ನಡೆಯುತ್ತದೆ, ನಡೆಯಬೇಕಾದ ರೀತಿಯಲ್ಲೇ ನಡೆಯುತ್ತದೆ ಅಂತ ಅರ್ಥ.”
“ಹಾಗಿದ್ದರೆ ಜ್ಯೋತಿಷ್ಯದ ಅಗತ್ಯವೇನು.”
“ನೀವು ಆಸ್ತಿಕರೋ ನಾಸ್ತಿಕರೋ.”
“ಸದ್ಯಕ್ಕೆ ನಾಸ್ತಿಕ.”
“ಹಾಗಾದರೆ ನಿಮ್ಮೊಟ್ಟಿಗೆ ಮಾತನಾಡಿ ಪ್ರಯೋಜನ ಇಲ್ಲ.”
“ಹಾಗನ್ನಬೇಡಿ ಗುರುವೆ, ನಮ್ಮ ಅಂಬರೀಶಣ್ಣನ ಸಾವಿನ ಬಗ್ಗೆ ತಿಳಕೊಬೇಕು.”
“ನೋಡಿ, ಅಂಬರೀಶ್ ನಮ್ಮನ್ನು ಭೇಟಿಮಾಡಿ ನಾವು ಹೇಳಿದಂತೆ ಕೇಳಿದ್ದರೆ ಬದುಕುತ್ತಿದ್ದರು.”
“ಅದು ಹ್ಯೆಂಗೆ ಗುರುಗಳೇ.”
“ಒಂದು ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಮೃತ್ಯುಂಜಯ ಹೋಮ ಅಂದರೆ ಸಾವನ್ನ ಜಯಿಸುವ ಹೋಮ ಅಲ್ಲವೆ ಗುರು.”
“ಹೌದು.”
“ಈ ಮೃತ್ಯುಂಜಯ ಹೋಮ ಮಾಡಿಸಿದ್ರೆ ಎಷ್ಟು ದಿನ ಬದುಕಬಹುದು.”
“ನೋಡಿ, ನಮಗಿರುವ ಆಯಸ್ಸು ಬ್ರಹ್ಮನದಲ್ಲ ನಾವು ನಮ್ಮ ಆಯಸ್ಸನ್ನ ವೃದ್ಧಿಸಿಕೊಳ್ಳಬೇಕು. ಮರಣದಲ್ಲಿ ನೂರ ಒಂದು ಪ್ರಕಾರಗಳುಂಟು. ನೂರನ್ನ ಜಯಿಸಬಹುದು. ಒಂದನ್ನ ಮಾತ್ರ ಜಯಿಸಲಾಗುವುದಿಲ್ಲ.”
“ಅದ್ಯಾವುದು ಗುರುಗಳೇ.”
“ನಿಜವಾದ ಮರಣ!”
“ಈಗ ಅಂಬರೀಶ್‍ಗೆ ಸಂಭವಿಸಿದ್ದು ನಿಜವಾದ ಮರಣ ಅಲ್ಲವ.”
“ಇಲ್ಲ ಅವರದ್ದು ಭಾವೋದ್ವೇಗದ ಮರಣ. ಅದಕ್ಕಾಗಿ ನಾಗಾರಾಧನೆಯ ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಅದನ್ನ ಅವರಿಗೆ ಹೇಳಬೇಕಾಗಿತ್ತು.”
“ಅವರು ಬಂದು ಕೇಳಬಹುದಿತ್ತು, ನಾವು ಅವರ ಬಳಿಗೆ ಹೋಗುವುದಿಲ್ಲ.”
“ಅವರ ಜೀವ ಮುಖ್ಯ ಅಲ್ಲವೆ?”
“ಅದೌದು. ನಾವು ಸಂಸ್ಕಾರವಂತ ಜ್ಯೋತಿಷಿಗಳು. ಅವರಾಗಿ ಬಂದರೆ ಹೇಳ್ತೇವೆ.”
“ಅವುರಾಗಿ ಬಂದ್ರೆ ಹೇಳೋ ಅಂತವರು, ಈಗ ಟಿವಿಯೊಳಗಡೆ ಬಂದು ಯಾಕೇಳ್ತಿದೀರಿ”
“ನಾವು ಬಂದದ್ದಲ್ಲ ಟಿವಿಯವರು ಕರೆದದ್ದು.”
“ಬಂದು-ಬಳಗದೋರು ಕರೆದ್ರೆ ಹೊಗಬೇಕಾಗತ್ತೆ ಬಿಡಿ. ತಮ್ಮ ಪ್ರಕಾರ ಅಂಬರೀಶ್ ಜಾತಕ ಹೇಗಿತ್ತು ಗುರುಗಳೇ.”
“ಅಂಬರೀಶ್ ಜಾತಕದಲ್ಲಿ ಗುರುವಿನ ಬಲವಿತ್ತು. ಶನಿ ದೂರವಿದ್ದ. ಈಗ ಅವರ ಬಳಿ ಶನಿ ಸಂಚಾರ ಆರಂಭವಾಗಿತ್ತು. ಮೃತ್ಯುಂಜಯ ಹೋಮದಿಂದ ಶನಿಯನ್ನ ದೂರ ಮಾಡಬಹುದಿತ್ತು.”
“ಬ್ರಹ್ಮರ್ಷಿಗಳೇ ನಾಗನ ಆರಾಧನೆ ಯಾಕೆ ಮಾಡ್ತರೆ ಗೊತ್ತೆ.”
“ನಾಗದೋಷ ಪರಿಹಾರಕ್ಕೆ.”
“ಅದಲ್ಲ, ಹಾವುಗಳ ಪೈಕಿ ನಾಗರಹಾವಿಗೆ ವಿಷ ಇದೆ. ಅದು ಕಡುದ್ರೆ ಮನುಷ್ಯ ಸತ್ತೋಗ್ತನೆ. ಪೂಜೆ ಮಾಡಿದ್ರೆ ಅದು ಕಡಿಯಲ್ಲ ಅನ್ನೋ ಕಾರಣಕ್ಕೆ. ಅಂದ್ರೆ ಭಯ ಭಕ್ತಿ ಮೂಡಿಸುತ್ತೆ ಅಲ್ಲವಾ.”
“ಅದೌದು. ಭಯ ನಿವಾರಣೆ ನಮ್ಮ ಕೆಲಸ.”
“ನಿಮ್ಮ ಮೃತ್ಯುಂಜಯ ಹೋಮದಿಂದ ಅರ್ಭುದ ರೋಗ ನಿವಾರಿಸಬಹುದಾ?”
“ಹೌದು.”
“ಹಾಗಾದ್ರೆ ಅನಂತಕುಮಾರ್ ಅದರಲ್ಲೇ ಹೋದರಲ್ಲ. ಅವರ ಸಂಬಂಧಿಯಾದ ನೀನು ಆಗ ಕತ್ತೆ ಕಾಯ್ತಾಯಿದ್ದ?”
“ಯಾಕೆ ಹಾಗೆ ಕೆಟ್ಟ ಮಾತನ್ನಾಡುವುದು ನೀವು.”
“ಸಾರಿ, ಗೋವು ಕಾಯ್ತಾಯಿದ್ರ.”
“ನೋಡಿ ಇವರೆ, ನಿಮ್ಮಂತ ಅಸಂಸ್ಕೃತ ಅಹಂಕಾರಿಗಳನ್ನ ನಾವು ಸಹಿಸಿಕೊಂಡು ಉತ್ತರ ಕೊಡಬೇಕಾಗ್ತದೆ, ಅಂಬರೀಶರು ಭಾವೋದ್ವೇಗದ ವ್ಯಕ್ತಿ. ಆನೆ ನಡೆದದ್ದೇ ದಾರಿ ಅಂತ ಹೇಳುವ ಹಾಗೆ ಅವರು ಯಾರ ಮಾತನ್ನ ಕೇಳಲಿಲ್ಲ. ಕೇಳಿದ್ದರೆ ನಮ್ಮಲ್ಲಿ ಪರಿಹಾರವಿತ್ತು.”
“ಏನು ಪರಿಹಾರ ಹೇಳಿ.”
“ನೋಡಿ ಮನುಷ್ಯನ ಬಾಹ್ಯ ವರ್ತನೆಗೆ ಆಂತರ್ಯದ ಸಮಸ್ಯೆಗಳು ಕಾರಣ. ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಅವುಗಳ ಸಮತೋಲನ ಮುಖ್ಯ. ಅವುಗಳ ಏರುಪೇರಿನಿಂದ ಮನುಷ್ಯ ಕೀಳರಿಮೆಗೆ ತುತ್ತಾಗುವುದುಂಟು. ಆಗ ನಾವು ಆತ್ಮವಿಶ್ವಾಸ ಮೂಡಿಸುತ್ತೇವೆ.”
“ಯಾವ ತರ.”
“ನಮ್ಮ ಹೆಂಡತಿಗೆ ಒಂದಿಷ್ಟು ಉಬ್ಬು ಹಲ್ಲುಗಳಿದ್ದವು.”
“ಹಲ್ಲಿಗೇ ಮುತ್ತು ಕೊಡೋತರ.”
“ಹಾಗಂದುಕೊಳ್ಳಬಹುದು. ಆಗ ನಾನು ಆಕೆಗೆ ಆತ್ಮವಿಶ್ವಾಸ ತುಂಬಿದೆ. ನಿನ್ನ ಹಲ್ಲುಗಳ ಬಗ್ಗೆ ಕೀಳರಿಮೆ ಬೇಡ. ಮನೆಯ ಮೆಟ್ಟಿಲು ಕಲ್ಲುಗಳು, ಮನೆಯ ಹೊರಗಿರುತ್ತವೆ, ಒಳಗಲ್ಲ ಅಂತ ಹಾಸ್ಯ ಮಾಡಿ ಹೇಳಿದೆ. ಆಕೆಗೆ ಕೀಳರಿಮೆ ಹೋಯ್ತು. ನಮ್ಮ ಬದುಕು ಸರಾಗವಾಯ್ತು. ಹೀಗೆ ನಾವು ಮನುಷ್ಯನ ಆಂತರ್ಯದಲ್ಲಿನ ಕೀಳರಿಮೆ ಹೋಗಲಾಡಿಸಿಬಿಡ್ತೇವೆ.”
“ಇದಕ್ಕೂ ಅಂಬರೀಶ್ ವಿಷಯಕ್ಕೂ ಏನು ಸಂಬಂಧ.”
“ಸಂಬಂಧವುಂಟು, ಅಂಬರೀಶ್ರಲ್ಲಿದ್ದ ಭಾವೋದ್ವೇಗ ಕಡಿಮೆ ಮಾಡಿ, ಇನ್ನೂ ಬದುಕುವಂತೆ ಮಾಡ್ತಾಯಿದ್ದೆ.”
“ಮಿಸ್ಟರ್ ಬ್ರಹ್ಮ, ನಿಮ್ಮ ಜೋತಿಷ್ಯ ಪ್ರಧಾನವಾಗಿ ಹೊಟ್ಟೆ ಪಾಡಿಂದು, ಈ ದೇಶದ ಮುಗ್ಧ ಮನಸ್ಸುಗಳ ತಲೆಗೆ ಪುರಾಣ ತುಂಬಿ ದೇಶನೆ ಬಾಳೆಎಲೆ ಮಾಡಿಕೊಂಡು ಉಂಡ್ರಿ ಅಂತ ನಮ್ಮ ತೇಜಸ್ವಿ ಹೇಳತಿದ್ರು. ಏನಾದ್ರು ಮಾಡಿಕೊಂಡು ಹಾಳಾಗೋಗಿ. ಆದ್ರೆ ಅಂಬರೀಶ್ ವಿಷಯದಲ್ಲಿ ಪುರಾಣ ಶುರುಮಾಡಿದ್ರೆ ಸರಿಯಾಗಿ ಮಾಡಬೇಕಾಯ್ತದೆ.”
“ಯಂತ ಮಾಡ್ತಿರಿ.”
“ನಿನ್ನ ರಿಂಗ್‍ಟೋನಿದೆಯಲ್ಲ ಆ ತರ ನಡೆಯಬೇಕಾದ್ದು ನಡದೇ ನಡೆಯುತ್ತೆ. ನಡೆಯಬೇಕಾದ ರೀತಿಯಲ್ಲೇ ನಡೆಯುತ್ತೆ.”
“ನನ್ನನ್ನ ಬೆದರಿಸುತ್ತೀಯ, ಶಾಪ ಕೊಡ್ತೇನೆ.”
“ನಿನ್ನ ಶಾಪ ನನ್ನ ಕೂದಲಿಗೆ ಸಮ.”
“ಛೇ ಕೆಟ್ಟವನೆ.”
ಥೂತ್ತೇರಿ….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...