Homeಅಂಕಣಗಳುನೂರುನೋಟ | ಚುನಾವಣಾ ಆಯೋಗವನ್ನು ಸರಿಪಡಿಸುವುದು ಬಹಳ ಮುಖ್ಯ

ನೂರುನೋಟ | ಚುನಾವಣಾ ಆಯೋಗವನ್ನು ಸರಿಪಡಿಸುವುದು ಬಹಳ ಮುಖ್ಯ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ಕರ್ನಾಟಕ 2018ರ ವಿಧಾನಸಭಾ ಚುನಾವಣೆಗಳು ಮುಗಿದಿದೆ. ಈ ಚುನಾವಣೆಯ ಫಲಿತಾಂಶವನ್ನು ಅವಲೋಕನ ಮಾಡುವುದರ ಅಗತ್ಯತೆ ಇದೆ. ಭಾಜಪ ಚುನಾವಣೆಯಲ್ಲಿ 104 ಸ್ಥಾನಗಳನ್ನು ಕಾಂಗ್ರೆಸ್ 78 ಸ್ಥಾನಗಳನ್ನು ಜನತಾದಳ (ಜಾತ್ಯತೀತ) 38 ಸ್ಥಾನಗಳನ್ನು ಪಕ್ಷೇತರರು 2 ಸ್ಥಾನಗಳನ್ನು ಗಳಿಸಿದ್ದಾರೆ.ಅಂದರೆ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ.ಈ ಸಂದರ್ಭದಲ್ಲಿ ರಾಷ್ಟ್ರಿಯ ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಸಂಧಿಸಿ ನಮ್ಮ ಬೆಂಬಲ ನೀಡುತ್ತೇವೆ ಜಾತ್ಯತೀತ ಜನತಾದಳ ಸರ್ಕಾರ ರಚಿಸಲಿ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಜನತಾಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದಂತೆ ತಾವೇ ಸರ್ಕಾರ ರಚಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಬಂದಿವೆ. ಕರ್ನಾಟಕದಲ್ಲಿ ಭಾಜಪ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಮೋದಿಯವರ ಮಹತ್ವಾಕಾಂಕ್ಷೆಗೆ ಕೊಡಲಿ ಪೆಟ್ಟು ಬಿದ್ದಿದೆ. 2019ರ ಲೋಕಸಭೆಯ ಚುನಾವಣೆಯ ಮೇಲೆ ಬಿಜೆಪಿಯ ಈ ಹಿನ್ನಡೆ ತನ್ನ ಪ್ರಭಾವ ಬೀರುವುದೆಂಬುದು ಶತಃಸಿದ್ದ

2019ರ ಲೋಕಸಭಾ ಚುನಾವಣೆಗಳಲ್ಲಿ ಮೋದಿ ಮತ್ತು ಭಾರತೀಯ ಜನತಾಪಕ್ಷಗಳನ್ನು ಪರಾಭವಗೊಳಿಸಲು ವಿರೋಧಪಕ್ಷಗಳು ಈಗಾಗಲೇ ಧ್ರುವೀಕರಣದ ಮಾತುಕತೆಗಳನ್ನು ಆರಂಭ ಮಾಡಿವೆ. ಒಂದು ಕಡೆ ಪ್ರಾಂತೀಯ ಪಕ್ಷಗಳೆಲ್ಲ ಒಂದಾಗಿ ಬಿಜೆಪಿಯನ್ನು ಎದುರಿಸುವ ನಿರ್ಧಾರ ಮಾಡಿದ್ದಾರೆ. ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳೆಲ್ಲ ಕೂಡಿಕೊಂಡು ಬಿಜೆಪಿಯನ್ನು ಪರಾಭವಗೊಳಿಸುವ ಬಗೆಗೆ ಮಾತುಕತೆ ನಡೆಯುತ್ತಿದೆ.

ಈ ಎರಡೂ ಬಣಗಳು ಒಟ್ಟಾಗಿ ಕೂಡಿಕೊಂಡು ಭಾರತೀಯ ಜನತಾಪಕ್ಷವನ್ನು ಎದುರಿಸುದಾದರೆ ಮೋದಿಯನ್ನು ಮಣಿಸುವುದು ಮತ್ತಷ್ಟು ಸುಲಭವಾಗಬಹುದು. ಅವು ಬೇರೆ ಬೇರೆಯಾಗಿ ಚುನಾವಣೆಯನ್ನು ಎದುರಿಸುವ ಸಂದರ್ಭ ಏರ್ಪಟ್ಟರೂ ಮೋದಿ ಮತ್ತು ಬಿಜೆಪಿಯನ್ನು ಪರಾಭವಗೊಳಿಸುವುದು ಈ ಎರಡೂ ತಂಡಗಳ ಏಕೈಕಗುರಿಯಾಗಿರುವುದರಿಂದ ಅದು ಸ್ವಾಗತಾರ್ಹವೇ.

2019ರ ಚುನಾವಣಾ ಹೋರಾಟದ ರಾಜಕೀಯದಲ್ಲಿ ಬದಲಾವಣೆ ತರಲು ಬಯಸುವ ನಮ್ಮ ಪಾತ್ರವೇನು ಎಂಬುವುದನ್ನ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದು ಅಗತ್ಯ.

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯನ್ನು ಎದುರಿಸಲು ಕೋಮುಸೌಹಾರ್ದವೇದಿಕೆಯ ನೇತೃತ್ವದಲ್ಲಿ ನಡೆದ ಸಂಘಟಿತ ಪ್ರಯತ್ನ ತುಂಬಾ ಪರಿಣಾಮಕಾರಿಯಾಗಿತ್ತು. ಈ ಸಂದರ್ಭದಲ್ಲಿ ಕೈಜೋಡಿಸಿದ ಎಲ್ಲಕೋಮುವಿರೋದಿ üಸಂಸ್ಥೆಗಳಿಗೆ ನನ್ನ ಮೆಚ್ಚುಗೆಯನ್ನು ಸೂಚಿಸುತ್ತೇನೆ. ಈ ಸಂಘಟಿತ ಪ್ರಯತ್ನದಲ್ಲಿ ಪ್ರಮುಖಪಾತ್ರ ವಹಿಸಿದ ಜನತೆಯ ಪರವಾಗಿ ಕೈಗೊಂಡ ಈ ಮತದಾರರ ಜಾಗೃತಿ ಕಾರ್ಯಕ್ರಮ ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಅವಧಿ ಇರುವಾಗಲೇ ಕರ್ನಾಟಕದಲ್ಲಿ ಮುಂದುವರಿಯಬೇಕಲ್ಲದೆ ಉತ್ತರ ಭಾರತದಲ್ಲೂ ಈ ಪ್ರಚಾರಕಾರ್ಯ ನಡೆಸಬೇಕಿದೆ. ಕರ್ನಾಟಕದಲ್ಲಿ ಈಗಾಗಲೇ ರೂಪಿತವಾಗಿರುವ ಪ್ರಭಾವಿ ವ್ಯಕ್ತಿಗಳ ತಂಡ ಉತ್ತರಭಾರತದ ಎಲ್ಲ ರಾಜ್ಯಗಳಿಗೂ ಭೇಟಿಕೊಟ್ಟು ಅಲ್ಲಿಯೂ ಇಂತಹ ಮೋದಿ ವಿರೋಧಿ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲು ಕೂಡಲೇ ಕಾರ್ಯೋನ್ಮುಖವಾಗಬೇಕು. ಹೀಗೆ ಅಲ್ಲಿ ಅಸ್ತಿತ್ವದಲ್ಲಿರುವ ಮೋದಿ ವಿರೋಧಿ ಸಂಸ್ಥೆಗಳು ಸಮರೋಪಾದಿಯಲ್ಲಿ ಮತದಾರರಮಧ್ಯೆ ಕೆಲಸ ಮಾಡುವುದಾದರೆ ಬಿಜೆಪಿಯ ಹಾಗೂ ಮೋದಿಯ ಪ್ರಭಾವವನ್ನು ಪರಿಣಾಮಕಾರಿಯಾಗಿ ಕುಗ್ಗಿಸಲು ಬರುತ್ತದೆ.

ಮೋದಿಯನ್ನು ಪರಾಭವಗೊಳಿಸುವುದು ಎಷ್ಟು ಮುಖ್ಯವೋ ಚುನಾವಣಾ ಆಯೋಗವನ್ನು ಪರಿಣಾಮಕಾರಿಯಾಗಿ ಕಾರ್ಯತತ್ಪರವಾಗುವಂತೆ ಮಾಡುವುದು ಅಷ್ಟೇ ಮುಖ್ಯ. ಚುನಾವಣಾ ಆಯೋಗ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಶಾಂತಿಯುತವಾಗಿ ಚುನಾವಣೆಗಳನ್ನು ನಡೆಸುತ್ತಿರುವುದಕ್ಕೆ ತನ್ನಬೆನ್ನನ್ನು ತಾನೇತಟ್ಟಿಕೊಳ್ಳುತ್ತಿದೆ.

ಚುನಾವಣೆಯಿಂದ ಚುನಾವಣೆಗೆ ರಾಜಕೀಯ ಭ್ರಷ್ಟಾಚಾರ ಹೆಚ್ಚುತ್ತಿದೆ. ಹಣ,ಹೆಂಡ, ಬಟ್ಟೆ ಸೀರೆ,ತಾಳಿ,ಬೆಳ್ಳಿ ಸಾಮಾನುಗಳೆಲ್ಲವನ್ನು ಮತದಾರರಿಗೆ ಹಂಚುವ ಪ್ರಯತ್ನ ಹೆಚ್ಚುಹೆಚ್ಚಾಗಿ ಬೆಳೆಯುತ್ತಿದೆ. ಈಗ ನಡೆದ ಚುನಾವಣೆಯಲ್ಲಿ 50-60 ಕೋಟಿರೂ.ಗಳನ್ನು ಹಂಚುವುದರಿಂದ ಆಯೋಗ ವಶಪಡಿಸಿಕೊಂಡಿದೆ.ಇದಕ್ಕೆ ಶೇ.100ರಷ್ಟು ಹಣ ಮತದಾರರಲ್ಲಿಗೆ ರಾಜಕೀಯ ಪಕ್ಷಗಳು ಹಂಚಿದ್ದಾರೆ. ಕರ್ನಾಟಕ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಕೇಳಿದರೆ ಜಫ್ತಿಮಾಡಲಾದ ಎಲ್ಲ ಹಣವನ್ನು ಹುಜೂರ್ ಟ್ರಜರಿಗೆ ಕಟ್ಟಿದ್ದೇವೆ. ವಶಪಡಿಸಿಕೊಂಡ ಕುಡಿತಗಳನ್ನೆಲ್ಲ ನಾಶ ಮಾಡಿದ್ದೇವೆ ಎನ್ನುತ್ತಾರೆ.

ಪೊಲೀಸ್‍ ವರಿಷ್ಠರ ಕಚೇರಿಯ ಮುಖ್ಯಸ್ಥರನ್ನು ಕೇಳಿದರೆ ವಶ ಪಡಿಸಿಕೊಂಡ ಉಳಿದ ವಸ್ತುಗಳು ಆಯಾ ಪೊಲೀಸ್ ಠಾಣೆಯ ವಶದಲ್ಲಿದ್ದು ಅವರುಕಳ್ಳದಾಸ್ತಾನುದಾರರು ಕಳ್ಳಸಾಗಾಣಿಕೆದಾರರ ಕೇಸು ಹಾಕಿದ್ದಾರೆಎನ್ನುತ್ತಾರೆ.ಇದರ ಮಾಹಿತಿಯನ್ನು ನಮಗೆಕೊಡಲು ಎಸ್ಪಿಗಳಿಗೆ ಚುನಾವಣಾಧಿಕಾರಿಗಳು ಸುತ್ತೋಲೆ ಕಳಿಸಿದರೂ ಕೆಲದಿನಗಳನಂತರ ಇಬ್ಬರು ಎಸಿಪಿಗಳು ನಮ್ಮಜಿಲ್ಲೆಗಳಲ್ಲಿ ಅಂತಹದ್ದೇನುಪ್ರಸಂಗಗಳು ನಡೆದಿಲ್ಲ ಎಂದು ಬರೆದರು. ಉಳಿದ ಜಿಲ್ಲೆಗಳ ಎಸ್ಪಿಗಳು ಮೌನತಾಳಿದರು. ಉತ್ತರ ಬರೆಯುವ ಗೋಜಿಗೆ ಹೋಗಲಿಲ್ಲ.

ಈ ಭ್ರಷ್ಟಾಚಾರವನ್ನು ತೊಡೆದುಹಾಕಲು ಕಠಿಣ ಕ್ರಮಕೈಗೊಳ್ಳಿ, 2008 ಮತ್ತು 2013ರಲ್ಲಿ ನಡೆದಿರುವ ಎರಡು ಚುನಾವಣೆಗಳಲ್ಲಿ ಸಂಭವಿಸಿರುವ ಅವ್ಯವಹಾರಗಳ ವಿವರ, ಅದನ್ನು ಯಾವಪಕ್ಷದವರು ಎಸಗಿದ್ದಾರೆ, ಯಾರು ಮಾಡಿದ್ದಾರೆ ಎಂಬವವರ ಮೇಲೆಯಾವಾಗ ಕಟ್ಲೆ ಹೂಡಲಾಯಿತು, ಏನು ಶಿಕ್ಷೆಯಾಯಿತು, ಹಾಗೆ ಹಿಡಿದ ಸಾಮಗ್ರಿಗಳು ಯಾರು ವಶದಲ್ಲಿವೆ ಇವೆಲ್ಲದರ ವಿವರಗಳನ್ನೊಳಗೊಂಡ ಒಂದು ಶ್ವೇತಪತ್ರವನ್ನು 3ತಿಂಗಳೊಳಗೆ ಹೊರಡಿಸಬೇಕೆಂದು ಚುನಾವಣಾಧಿಕಾರಿಗಳನ್ನು ಒತ್ತಾಯ ಮಾಡಲು ಒಂದು ಅನಿರ್ದಿಷ್ಟ ಕಾಲದ ಧರಣಿಯನ್ನು ಅವರಕಚೇರಿಯ ಮುಂದೆ ನಡೆಸಬೇಕು.

ಕೇಂದ್ರದ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಇಷ್ಟೊಂದು ಭ್ರಷ್ಟಾಚಾರ ಹತ್ತಾರು ವರ್ಷಗಳಿಂದ ನಡೆಯುತ್ತಿದ್ದರೂ ಅದಕ್ಕೆ ಪರಿಣಾಮಕಾರಿಯಾದ ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮುಂದಿನ ಚುನಾವಣೆ ವೇಳೆಗಾದರೂ ಹಣ, ಹೆಂಡ ಮತ್ತು ಇತರ ಸಾಮಗ್ರಿಗಳನ್ನು ಮತದಾರರಿಗೆ ಹಂಚುವ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಈ ಕರ್ತವ್ಯವನ್ನು ನೀವು ನಿರ್ವಹಿಸದೆ ಕರ್ತವ್ಯ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಚುನಾವಣೆ ನಡೆಸದಂತೆ ಕೇಂದ್ರಚುನಾವಣಾ ಕಮೀಷನ್ ವಿರುದ್ಧ ಶಾಂತಿಯುತ ಹೋರಾಟ ನಡೆಸುವುದಾಗಿ ಪತ್ರ ಬರೆಯಬೇಕು.

ಅಲ್ಲದೆ ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣೆಗಳಲ್ಲಿ ನಡೆಯುವ ಎಲ್ಲಕ್ರಮಗಳನ್ನು ತಡೆಯಲು ಹಾಲಿ ಜಾರಿಯಲ್ಲಿರುವ ಎಲ್ಲ ಚುನಾವಣಾ ಕಾನೂನುಗಳನ್ನು ಮುಂಜಾಗ್ರತವಾಗಿ ಪರಿಷ್ಕರಿಸಿ ದ್ವೇಷಮುಕ್ತವಾದ ಕಾನೂನುಗಳನ್ನು ಜಾರಿಗೆ ಕೊಡಬೇಕೆಂದು ಒತ್ತಾಯಿಸುವ ಪತ್ರವನ್ನು ಬರೆಯಬೇಕು. ಈ ವರ್ಷ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮತ್ತೆ ಮುಂದಿನ ಚುನಾವಣೆಗೆನಿಂತರೆಅವರು ಇದಕ್ಕೆಹಿಂದೆ ನಡೆದ ಚುನಾವಣೆಯ ವೇಳೆ ಕೊಟ್ಟ ತಮ್ಮ ಆಸ್ತಿಯ ವಿವರಗಳಿಗೂ ಈ ವರ್ಷ ಕೊಟ್ಟಿರುವ ವಿವರಗಳಿಗೂ ತುಂಬಾ ಅಂತರವಿದ್ದರೆ ಅದನ್ನು ನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದಾರಾ ಇಲ್ಲವೆ ಅನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದೀರಾ ಎಂಬುದನ್ನು ಪತ್ತೆ ಮಾಡಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಚುನಾವಣಾ ಆಯೋಗದವರನ್ನು ಕೇಳಬೇಕು.

ಸ್ವತಂತ್ರ ಭಾರತದಲ್ಲಿ ಚುನಾವಣೆಗಳು ಕಳೆದ ಅರವತ್ತು ವರ್ಷಕ್ಕೆ ಮೇಲ್ಪಟ್ಟು ನಡೆಯುತ್ತಿದ್ದರೂ ಚುನಾವಣೆ ಕಾನೂನನ್ನು ಆಮೂಲಾಗ್ರವಾಗಿ ಪರಿಗಣಿಸುವ ಕೆಲಸ ಇಂದಿಗೂ ನಡೆದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...