Homeಅಂಕಣಗಳುಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

- Advertisement -
- Advertisement -

ಪಂಡಿತರ ಮಾತುಗಳಲ್ಲಿ ಅರ್ಧದಷ್ಟನ್ನಾದರೂ ಮತದಾರರು ಸುಳ್ಳಾಗಿಸಿದ್ದಾರೆ. ಮತದಾರರು ನೀಡಿರುವ ತೀರ್ಪಿನಲ್ಲಿ ಹಲವು ಪಾಠಗಳಿವೆ. ಅದನ್ನು ಗಮನಿಸಬೇಕು. ಮತದಾರರೂ ಸುಳ್ಳುಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿರುವಾಗ ಅವರನ್ನು ಎಚ್ಚರಿಸುವ ಕರ್ತವ್ಯ ವಿದ್ವಾಂಸರಿಗಿರುವುದಿಲ್ಲವೆಂದಲ್ಲ. ಆದರೆ, ಸಮಷ್ಟಿಯಾಗಿ ಜನರು ನೀಡುವ ತೀರ್ಪುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಅಂತಹ ಹಲವು ಸಂಗತಿಗಳನ್ನು ಈ ಚುನಾವಣೆಯು ಮುಂದಿಟ್ಟಿದೆ.
ತೆಲಂಗಾಣದಲ್ಲಿ ಟಿಆರ್‍ಎಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಆದರೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೆಸಿಆರ್ ವಿನೂತನವಾಗಿ ಜಾರಿಗೊಳಿಸಿದ್ದರು. ಅದಕ್ಕೆದುರಾಗಿ ಕಾಂಗ್ರೆಸ್‍ಗೆ ಸರಿಯಾದ ನಾಯಕತ್ವವೂ ಇರಲಿಲ್ಲ; ಸರಿಯಾದ ಕಾರ್ಯಕ್ರಮವೂ ಇರಲಿಲ್ಲ; ಅಖಿಲ ಭಾರತ ಮಟ್ಟಕ್ಕೆ ಸೂಕ್ತವಾಗಬಹುದಾದ ಮಹಾಘಟಬಂಧನವು, ತೆಲಂಗಾಣಕ್ಕೆ ಪ್ರಜಾಕೂಟಮಿಯಾಗಿ ಒದಗಿ ಬರಲಿಲ್ಲ.
ಇಂತಹ ತೆಲಂಗಾಣದಲ್ಲಿ ಮೊದಲು ಟಿಆರ್‍ಎಸ್ ಗೆಲುವು ಶತಸ್ಸಿದ್ಧ ಎಂದು ಮಾಧ್ಯಮಗಳು ನುಡಿದಿದ್ದವು. ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆ ಸೇರಿದಾಗ ಟಿಆರ್‍ಎಸ್ ಅಧಿಕಾರಕ್ಕೆ ಬರುವುದಿಲ್ಲವೆಂಬ ಸಮೀಕ್ಷೆಗಳು ಬಂದವು. ಈಗ ನೋಡಿದರೆ ಟಿಡಿಪಿಯ ಜೊತೆಗೆ ಹೋಗಿದ್ದರಿಂದಲೇ ಟಿಆರ್‍ಎಸ್ ಇನ್ನೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ತೆಲಂಗಾಣ ಸಂಸದೆ ಕೆಸಿಆರ್ ಮಗಳು ಕವಿತಾ ಹೇಳಿದಂತೆ, ‘ಅಲೆ ಮೊದಲಿಂದಲೂ ಟಿಆರ್‍ಎಸ್ ಪರವಾಗಿಯೇ ಇತ್ತು. ಚಂದ್ರಬಾಬು ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದರಿಂದ ಅಥವಾ ಮಾಧ್ಯಮಗಳು ಬಯಸುವ ಸಿಇಓ ಅವರಾಗಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಯಿತು’. ಮಾಧ್ಯಮಗಳು ತಮ್ಮ ಪೂರ್ವಗ್ರಹಕ್ಕೆ ತಕ್ಕಂತೆ ಭಾರೀ ದೊಡ್ಡ ಸುಳ್ಳುಗಳನ್ನು ನಂಬಿಕೊಂಡು ಹೇಳುವ ಸಾಧ್ಯತೆಗಳಿವೆ.
ರಾಜಸ್ತಾನದ ಒನ್ ಟು ಒನ್ ಫೈಟ್‍ನಲ್ಲಿ ಕಾಂಗ್ರೆಸ್ ಭಾರೀ ದೊಡ್ಡ ಗೆಲುವನ್ನು ಪಡೆಯುತ್ತದೆಂಬ ಭವಿಷ್ಯವು ಮೊದಲಿಂದ ಮತಗಟ್ಟೆ ಸಮೀಕ್ಷೆಯವರೆಗೆ ಬರುತ್ತಿತ್ತು. ಜನರಿಗೆ ಬಿಜೆಪಿಯ ಬಗೆಗಿದ್ದ ಸಿಟ್ಟು ಸ್ಪಷ್ಟವಾಗಿ ವ್ಯಕ್ತವಾಗಿದೆ; ಆದರೆ ಕಾಂಗ್ರೆಸ್ ಅವರ ಸ್ಪಷ್ಟ ಆಯ್ಕೆಯಾಗಿಲ್ಲವೆಂಬುದು ಅದರ ತಿಣುಕಾಟದ ಗೆಲುವಿನಲ್ಲೂ, ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರ ಗೆಲುವಿನಲ್ಲೂ ಗೊತ್ತಾಗುತ್ತಿದೆ. ಅಂದರೆ ಹೊಸ ಭರವಸೆ ಇರದೇ ಇದ್ದಲ್ಲಿ, ಒಮ್ಮೆ ಅವರು, ಇನ್ನೊಮ್ಮೆ ಇವರು ಎಂಬುದು ಸಹಜ ಸತ್ಯವಲ್ಲ ಎಂಬುದೇ ಇದರ ಸಾರಾಂಶ.
ಕಾಂಗ್ರೆಸ್‍ನ ತಿಣುಕಾಟಕ್ಕೆ ಟಿಕೆಟ್ ಹಂಚಿಕೆಯಲ್ಲಿನ ಸಮಸ್ಯೆಯೇ ಕಾರಣವೆಂದೂ, ಸ್ಥಳೀಯವಾಗಿ ದೊಡ್ಡ ಜಾತಿಯ ನಾಯಕನನ್ನು ಪ್ರೊಜೆಕ್ಟ್ ಮಾಡದೇ ಇದ್ದುದೇ ಸಮಸ್ಯೆಯೆಂದು ಹೇಳುತ್ತಿರುವುದೂ ವಾಸ್ತವವಲ್ಲ. ಹಾಗೆ ನೋಡಿದರೆ, ಭಾರೀ ಗೆಲುವನ್ನು ಪಡೆದಿರುವ ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಯಾರನ್ನೂ ಪ್ರೊಜೆಕ್ಟ್ ಮಾಡಿರಲಿಲ್ಲ. ಅದರ ಹಿರಿಯ ನಾಯಕ ಅಜಿತ್ ಜೋಗಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಹಳ ಕಾಲವಾಗಿತ್ತು.ಹಾಗೆಯೇ ಛತ್ತೀಸ್‍ಗಢದಲ್ಲಿ ರಮಣ್‍ಸಿಂಗ್ ಗೆಲ್ಲುತ್ತಾರೆ ಎಂಬುದನ್ನು ಬಹುತೇಕರು ಬಿಂಬಿಸುತ್ತಿದ್ದರು. ಕಾಂಗ್ರೆಸ್‍ಗಿದ್ದ ಅನಾನುಕೂಲತೆಗಳ ನಡುವೆಯೂ ಇದಕ್ಕೇನು ಕಾರಣ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವ ಅಗತ್ಯವಿದೆ. ತಾನು ಇದ್ದುದರಲ್ಲಿ ಸೇಫ್ ಆದ ಭವಿಷ್ಯ ನುಡಿಯಬೇಕೆಂದು ಕರ್ನಾಟಕದ ಸಂದೀಪ್ ಶಾಸ್ತ್ರಿಯವರು ತನ್ನ ಲೇಖನದಲ್ಲಿ ಹಿಂದಿ ರಾಜ್ಯಗಳ ಚುನಾವಣೆಯ ಫಲಿತಾಂಶ 2:1 ಆಗಿರುತ್ತದೆ ಅಂದಿದ್ದರು. ಅದೂ ಸುಳ್ಳಾಯಿತು.ಅದೇನೇ ಇರಲಿ, ಇದು ಮೋದಿ ಮಾದರಿಯ ರಾಜಕಾರಣದ ವಿರುದ್ಧದ ಸ್ಪಷ್ಟ ಸಂದೇಶವಾಗಿದೆ. ರಾಹುಲ್‍ಗಾಂಧಿ ಭರವಸೆ ಮೂಡಿಸಿದ್ದಾರಾದರೂ ಅವರಿಗೆ ಈ ಚುನಾವಣೆಯು ಹಲವು ಎಚ್ಚರಿಕೆಗಳನ್ನು ನೀಡಿದೆ. ರಾಜಸ್ತಾನವು ಒಂದು ಎಚ್ಚರಿಕೆಯಾಗಿದ್ದರೆ, ಮಿಜೋರಾಂ ಇನ್ನೊಂದು ಎಚ್ಚರಿಕೆಯಾಗಿದೆ. ದೇಶವು ಕಾಂಗ್ರೆಸ್ ಮುಕ್ತವಾಗಿರದಿದ್ದರೂ ಈಶಾನ್ಯ ಭಾರತವು ಕಾಂಗ್ರೆಸ್ ಮುಕ್ತವಾಗಿದೆ. ಬಹುತೇಕ ಬುಡಕಟ್ಟು ಜನರು, ಕ್ರಿಶ್ಚಿಯನ್ನರು ಇರುವ ಈ ಪ್ರದೇಶದಲ್ಲಿ ಕಾಂಗ್ರೆಸ್ ‘ಸಹಜ ಆಯ್ಕೆ’ಯಲ್ಲ ಎಂಬುದು ಗಮನಾರ್ಹ. ಆ ಭಾಗದಲ್ಲಿ ಮುಂಚಿನಿಂದಲೂ ಹಲವು ಬಗೆಯ ‘ವಿಚ್ಛಿದ್ರತೆ’ಗೆ ಸ್ವತಃ ಕಾಂಗ್ರೆಸ್ಸೇ ಕಾರಣವಾಗಿತ್ತು. ಈಗದು ಅವಕಾಶವಾದಿತನಕ್ಕೆ ಕಾರಣವಾಗಿದ್ದು, ಅದರ ನೇರ ಹೊಣೆಯನ್ನು ಕಾಂಗ್ರೆಸ್ಸೇ ಹೊರಬೇಕು.
ಇದರೊಂದಿಗೆ ಇನ್ನೊಂದು ಅಂಶ, ದಕ್ಷಿಣ ಭಾರತವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಮುಕ್ತವಾಗಿದೆ. ಕರ್ನಾಟಕದಲ್ಲಿ ಇವೆರಡೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಎರಡೂ ದೊಡ್ಡ ಪಕ್ಷಗಳು ಎಂದು ಹೇಳಿಕೊಳ್ಳಬಹುದು ಮತ್ತು ಕೇರಳದಲ್ಲಿ ಪ್ರತಿ ಎರಡು ಚುನಾವಣೆಯಲ್ಲಿ ಒಂದು ಸಾರಿ ಗೆಲ್ಲುತ್ತೇನೆಂದು ಭಾವಿಸಬಹುದಾದರೂ ಈ ಸದ್ಯ ಎರಡೂ ಪಕ್ಷಗಳಿಗೆ ದಕ್ಷಿಣ ಭಾರತದಲ್ಲಿ ಮುಖ್ಯಮಂತ್ರಿಗಳಿಲ್ಲ. ಅಂದರೆ, ತಾವು ಅಖಿಲ ಭಾರತ ಪಕ್ಷ ಎಂದು ಹೆಚ್ಚು ಕೊಚ್ಚಿಕೊಳ್ಳುವಂತಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಗಳಾಚೆ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಇರುವ ಸಮಾನ ಅಂಶವೆಂದರೆ ಅವೆಲ್ಲವೂ ವ್ಯಕ್ತಿ ಅಥವಾ ಕುಟುಂಬವೊಂದರ ಕಪಿಮುಷ್ಟಿಯಲ್ಲಿರುವ ಪಕ್ಷಗಳು. ತೆಲಂಗಾಣದಲ್ಲಿ ಗೆದ್ದಿರುವ ಟಿಆರ್‍ಎಸ್ ಸೇರಿದಂತೆ. ಇದನ್ನು ದಾಟಿ ನಿಜಕ್ಕೂ ಫೆಡರಲ್ ಆದ ಪರ್ಯಾಯ ಶಕ್ತಿಗೆ ದೇಶದಲ್ಲಿ ಅವಕಾಶ ಈಗಲೂ ಉಳಿದುಕೊಂಡಿದೆ.
ಅಂತಿಮವಾಗಿ, ಪ್ರಗತಿಪರ ಆಲೋಚನೆಯುಳ್ಳವರಿಗೆ ಈ ಫಲಿತಾಂಶವು ನೆಮ್ಮದಿ ತಂದಿರಬಹುದು. ಇದರೊಂದಿಗೆ 2014-16ಕ್ಕೆ ಹೋಲಿಸಿದರೆ ಬಿಜೆಪಿ ದುರ್ಬಲವೂ ಆಗಬಹುದು. ಆದರೆ, 2009ರ ಚುನಾವಣೆಯವರೆಗೆ ಒಂದು ರೀತಿಯ ಮತಗಳಿಕೆಯ ಸ್ಥಗಿತತೆ ಮತ್ತು ಕೆಲವು ಜಾತಿಕೋಟೆಗಳನ್ನು ದಾಟಲಾಗಿರದ ಬಿಜೆಪಿಯು 2014ರ ನಂತರ ಅವೆಲ್ಲವನ್ನೂ ದಾಟಿತು ಮತ್ತು ದೇಶದ ಮೂಲೆಮೂಲೆಗಳಲ್ಲೂ ಬಲ ಪಡೆದುಕೊಂಡಿತು. ಬಿಜೆಪಿ ಮಾತ್ರವಲ್ಲದೇ, ಆರೆಸ್ಸೆಸ್‍ನ ಮತೀಯ ರಾಜಕಾರಣ ಹಾಗೂ ಸುಳ್ಳಿನ ಬಲ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇಂತಹ ಪ್ರಜಾತಂತ್ರ ವಿರೋಧಿ ವಿದ್ಯಮಾನಗಳನ್ನು ಸೋಲಿಸಿ, ನಿಜವಾದ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಭಿನ್ನ ಹೊಸದಾರಿಯನ್ನು ತುಳಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...