Homeರಾಜಕೀಯಪರಮಪಾಪಿ ಪೋಸ್ಟ್‍ಕಾರ್ಡ್ ಪೋರ್ಟಲ್

ಪರಮಪಾಪಿ ಪೋಸ್ಟ್‍ಕಾರ್ಡ್ ಪೋರ್ಟಲ್

- Advertisement -
- Advertisement -

ಮಲ್ಲಿ |

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸುಳ್ ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವುದು ಪೋಸ್ಟ್‍ಕಾರ್ಡ್ ಪೋರ್ಟಲ್. ಕುಳಿತರೆ ಸುಳ್ಳು, ನಿಂತರೆ ಸುಳ್ಳು, ಉಸಿರಾಡಿದರೆ ಸುಳ್ಳು, ಹೂಸಿದರೆ ಸುಳ್ಳು-ಇದು ಪೋಸ್ಟ್‍ಕಾರ್ಡ್ ಸಂಸ್ಥಾಪಕ ಚೆಡ್ಡಿ ಮಹೇಶ ಹೆಗಡೆಯ ಧ್ಯೇಯವಾಕ್ಯ. ಆತ ಪದವಿ ಓದಿದವರನ್ನೂ ಯಾಮಾರಿಸುವಂತೆ ಸುಳ್ ಸುದ್ದಿ ಹರಡುತ್ತಾನೆ. ಈಗಷ್ಟೇ ಕೇಂದ್ರ ಸರ್ಕಾರ ‘ಕಾಂಗ್ರೆಸ್’ನ ಪ್ರಣಬ್ ಮುಖರ್ಜಿಗೆ ಭಾರತರತ್ನ ನೀಡಿದೆ. ಅದಿರಲಿ, ಈಗ ನಾವು ಪ್ರಸ್ತಾಪಿಸುತ್ತಿರುವ ವಿಷಯ ಎಂದರೆ, ಪ್ರಣಬ್ ಮುಖರ್ಜಿ ಸೋನಿಯಾ ಗಾಂಧಿ ವಿರುದ್ಧ ತಮ್ಮ ನಾಲ್ಕನೇ ಪುಸ್ತಕದಲ್ಲಿ ಕಿಡಿ ಕಾರಿದ್ದಾರೆ ಎಂದು ಪೋಸ್ಟ್‍ಕಾರ್ಡ್ ಹೇಳುತ್ತ ಬಂದ ಸುಳ್ ಸುದ್ದಿಯ ಕುರಿತು. ಐದು ತಿಂಗಳ ಹಿಂದೆಯೇ ಈ ಕೆಲಸವನ್ನು ಅದು ಶುರು ಮಾಡಿತ್ತು.
ಇನ್ನೂ ಪುಸ್ತಕವೇ ಪ್ರಕಟವಾಗಿಲ್ಲ. ಅದರ ಒಂದು ಸಣ್ಣ ಭಾಗವನ್ನು ಸುಳ್ಳನ್ನೇ ಉಸಿರಾಡುವ ಪೋಸ್ಟ್‍ಕಾರ್ಡ್ ಡಾಟ್ ನ್ಯೂಸ್ ಪ್ರಕಟಿಸಿತ್ತು ಮತ್ತು ಅದು ಆಗಾಗ ವೈರಲ್ ಆಗುತ್ತಲೇ ಇದೆ, ಚುನಾವಣೆ ಬಂತಲ್ಲ, ಮತ್ತಷ್ಟು ಜೋರಾಗಿಯೇ ಹರಡಲಿದೆ.
ಮಿಥ್ಯ: ಪೋಸ್ಟ್‍ಕಾರ್ಡ್ ಪ್ರಕಾರ, ಮಾಜಿ ರಾಷ್ಟ್ರÀಪತಿ ಪ್ರಣಬ್ ಮುಖರ್ಜಿ ಅವರ ಪುಸ್ತಕದಿಂದ ಆಯ್ದ ಭಾಗ ಹೀಗಿದೆ:
“ನರೆಂದ್ರ ಮೋದಿಯವರ ಒಂದನೇ ವರ್ಷದ ಆಡಳಿತ ಮುಗಿದಾಗ, ಅವರು ಅಲ್ಲಿವರೆಗೆ ಮಾಡಿದ್ದ ಕೆಲಸಗಳನ್ನು ಮೆಚ್ಚಿ ನಾನು ಅವರನ್ನು ಹೊಗಳಿದ್ದೆ. ಸೋನಿಯಾ ಗಾಂಧಿಯವರಿಗೆ ಇದು ಸಿಟ್ಟು ಬರಿಸಿತು.

ರಾಷ್ಟಪತಿಯವರ ಪುಸ್ತಕದಿಂದ ಆಯ್ದ ಭಾಗ ಎಂದು ಪುಟ್ಟಾಪೂರಾ ಸುಳ್ ಬರೆದ ಪೋಸ್ಟ್‍ಕಾರ್ಡ್.

ಒಮ್ಮೆ ಸಂಸತ್ತಿನಲ್ಲಿ ಭಾಷಣ ಮುಗಿಸಿ ಹೊರಬರುವಾಗ ಸೋನಿಯಾ ನನಗೆ ಎದುರಾದರು. ಅವರ ಜೊತೆಗಿದ್ದ ಗುಲಾಮ್ ನಬಿ ಅಜಾದ್ ಮತ್ತು ಮಣಶಂಕರ್ ಅಯ್ಯರ್ ನನಗೆ ಗೌರವದಿಂದ ಹಾರೈಸಿದರು. ಆದರೆ ಸೋನಿಯಾ ಸುಮ್ಮನೆ ನಿಂತಿದ್ದರು. ನಾನೇ ಮೊದಲು ಅವರಿಗೆ ಹಾರೈಸಬೇಕೆಂದು ಅವರು ಬಯಸಿದ್ದರು. ಅವರ ಎದುರು ಈ ದೇಶದ ಪ್ರಥಮ ಪ್ರಜೆ ನಿಂತಿದ್ದಾರೆ ಎಂಬುದನ್ನೇ ಅವರು ಮರೆತಿದ್ದರು.
ಪ್ರಣಬ್ ಮುಖರ್ಜಿಯಾಗಿ ಅಲ್ಲ, ಈ ದೇಶದ ರಾಷ್ಟ್ರಪತಿ ನಾನು ಎಂಂಬುದನ್ನು ಅವರು ಒಪ್ಪಿಕೊಳ್ಳಬೇಕಿತ್ತು.
ಸೋನಿಯಾರ ಈ ವರ್ತನೆ ನನ್ನೊಳಗೆ ತೀವ್ರ ನೋವನ್ನು ಉಂಟು ಮಾಡಿತು…”
ಮೇಲಿನ ಘಟನೆ 2015ರ ಮೇನಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‍ಕಾರ್ಡ್ ಪ್ರಕಾರ ಇದು ಪ್ರಣಬ್ ಮುಖರ್ಜಿ ಅವರ ಪುಸ್ತಕದ ಒಂದು ಭಾಗ. ಇದನ್ನು ನಂಬಿದ ಅಮಾಯಕರು ಮತ್ತು ಸುಳ್ಳೆಂದು ಗೊತ್ತಿರುವ ಸಾವಿರಾರು ಕಿರಾತಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತ ಅನಗತ್ಯವಾಗಿ ಸೋನಿಯಾ ಗಾಂಧಿಯವರ ಮೇಲೆ ಆಕ್ರಮಣ ನಡೆಸುತ್ತಲೇ ಬಂದಿದ್ದಾರೆ.
ಸತ್ಯ: ಪ್ರಣಬ್ ಅವರ ಉದ್ದೇಶಿತ ಪುಸ್ತಕ 2018ರ ಡಿಸೆಂಬರ್‍ನಲ್ಲಿ ಪ್ರಕಟನೆಯಾಗಲಿದೆ ಎಂದು ಅದರ ಪ್ರಕಟಣಾ ಹಕ್ಕು ಪಡೆದಿರುವ ರೂಪಾ ಪ್ರಕಾಶನ ಸಂಸ್ಥೆ ಹೇಳಿತ್ತು. (ಈಗಲೂ ದು ಪ್ರಕಟವಾಗಿಲ್ಲ) ಅಂದರೆ ಪ್ರಣಬ್‍ರವರು ಈಗಾಗಲೇ ಕಾಗದದಲ್ಲಿ ಬರೆದಿರಬಹುದಾದ ಅಥವಾ ಕಂಪ್ಯೂಟರ್‍ನಲ್ಲಿ ಕೀ-ಇನ್ ಮಾಡಿರಬಹುದಾದ ಕಾಪಿಯನ್ನು ಪೋಸ್ಟ್‍ಕಾರ್ಡ್ ಕದ್ದಿರಬಹುದು ಅಂತಾ ಭಾವಿಸೋಕೂ ಆಸ್ಪದವಿಲ್ಲ. ಏಕೆಂದರೆ ಆಗ ಪ್ರಕಾಶಕರು ಮತ್ತು ಪ್ರಣಬ್ ಮುಖರ್ಜಿ ಕಚೇರಿ ಪ್ರಕಾರ ಅವರಿನ್ನೂ ಬರೆಯಲು ಶುರೂನೇ ಮಾಡಿರಲಿಲ್ಲ!

ಸೋನಿಯಾ ಗಾಂಧಿಯವರ ಜೊತೆ ಪ್ರಣಬ್ ಮುಖರ್ಜಿ

ಈ ಮೊದಲು ಪ್ರಣಬ್ ಬರೆದ ದ ಡೆಮಾಕ್ರಟಿಕ್ ಡಿಕೇಡ್, ದ ಟರ್ಬುಲೆಂಟ್ ಇಯರ್ಸ್ ಮತ್ತು ದ ಕೊಅಲಾಯನ್ಸ್ ಇಯರ್ಸ್- ಪುಸ್ತಕಗಳಲ್ಲಿ ಪ್ರಣಬ್ ಮೇಲಿನ ವಿಷಯ ಬರೆದಿಲ್ಲ, ಬರೆಯಲು ಸಾಧ್ಯವೂ ಇಲ್ಲ. ಏಕೆಂದರೆ ಇವು ಯಾವುವು 2004ರ ನಂತರದ ವಿಷಯ ಒಳಗೊಂಡಿಲ್ಲ. ಹಾಗಾದರೆ ಬರಲಿರುವ ನಾಲ್ಕನೇ ಪುಸ್ತಕ ‘ದ ಪ್ರೆಸಿಡೆನ್ಸಿಯಲ್ ಇಯರ್ಸ್’ ಪುಸ್ತಕದಲ್ಲಿ ಮೇಲಿನಂತೆ ಬರೆಯಬಹುದೇನೋ ಎಂದು ಗೆಸ್ ಮಾಡಲೂ ಆಗಲ್ಲ. ಏಕೆಂದರೆ ಪ್ರಣಬ್ ಎಂದೂ ಸಾರ್ವಜನಿಕವಾಗಿ ಸೋನಿಯಾರ ಬಗ್ಗೆ ಆಕ್ಷೇಪದ ಮಾತು ಆಡಿಲ್ಲ.
ಆಗ ಸ್ಪಷ್ಟೀಕರಣ ನೀಡಿದ್ದ ಪ್ರಣಬ್ ಕಚೇರಿ, ‘ಉದ್ದೇಶಿತ ಪುಸ್ತಕ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಎಂದು ಘೋಷಿಸುವಲ್ಲಿಗೆ ಮುಗಿಯುತ್ತದೆ. ರಾಷ್ಟ್ರಪತಿಯಾದ ನಂತರದ ಘಟನೆಗಳು ಇದರಲ್ಲಿ ಬರುವುದೇ ಇಲ್ಲ. ಈ ಪುಸ್ತಕವು 2004-2012ರವರೆಗಿನ ಅವಧಿಗೆ ಸಿಮೀತ. ಇನ್ನು ಮೇ, 2015ರ ವಿಷಯ (ಅಂದರೆ ಪೋಸ್ಟ್‍ಕಾರ್ಡ್‍ನ ಸುಳ್ಳು) ಇದರಲ್ಲಿ ಹೇಗೆ ಬರಲು ಸಾಧ್ಯ?’ ಎಂದು ಪ್ರಕಟಣೆ ನೀಡುವ ಮೂಲಕ ಪೋಸ್ಟ್‍ಕಾರ್ಡ್ ಕುತಂತ್ರವನ್ನು ಬಯಲು ಮಾಡಿತ್ತು.

(ಕೃಪೆ:Altnews.com)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...