Homeಅಂತರಾಷ್ಟ್ರೀಯಪಾಲ್ ಥಾಮಸ್ ಆಂಡರ್ಸನ್ - ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |
ಇವನಿಗೆ ಏಳು ಅಕ್ಕಂದಿರಿದ್ದಾರೆ; ಅವರೆಲ್ಲರ ದಾದಾಗಿರಿಯಲ್ಲೇ ತನ್ನ ಬಾಲ್ಯವನ್ನು ಕಳೆದವನು. ಈಗ ತನ್ನದೊಂದು ಬಿಸಿನೆಸ್ ಶುರುಮಾಡಿದ್ದಾನೆ. ಏಕಾಂಗಿತನದಿಂದ, ಮತ್ತಿತರ ಕ್ಷೋಭೆಗಳಿಂದ ಬಳಲುತ್ತಿರುವ ಈತ ಸೆಕ್ಸ್ ಟಾಕ್ ಸೌಲಭ್ಯ ಒದಗಿಸುವ ಒಂದು ಸರ್ವಿಸ್‍ಗೆ ಕರೆ ಮಾಡುತ್ತಾನೆ. ಅವರಿಂದ ಬ್ಲ್ಯಾಕ್‍ಮೇಲ್‍ಗೆ ಒಳಗಾಗುತ್ತಾನೆ.

ಇವನು ಎರಡನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದವ, ಕುಡಿಯುತ್ತಾನೆ, ಯಾವುದೇ ನೈತಿಕತೆಯ ಒತ್ತಡವಿಲ್ಲ. ತನ್ನದೇ ಸಾರಾಯಿ ತಯಾರಿಸುತ್ತಾನೆ. ಈತ ಒಂದು ಧಾರ್ಮಿಕ ಚಳವಳಿಯನ್ನು ನಡೆಸುತ್ತಿರುವ ವ್ಯಕ್ತಿ, ದಿ ಮಾಸ್ಟರ್‍ನೊಂದಿಗೆ ಸೇರಿಕೊಳ್ಳುತ್ತಾನೆ. ದಿ ಮಾಸ್ಟರ್‍ನ ಅಸಂಬದ್ಧ ಧಾರ್ಮಿಕ ಚಳವಳಿ, ಇವರಿಬ್ಬರ ಸಂಬಂಧ.

ಈತ 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ತೈಲ ನಿಕ್ಷೇಪಗಳನ್ನು ಹುಡುಕಿ ತನ್ನದೇ ಆದ ಸಾಮ್ರಾಜ್ಯ ಕಟ್ಟಲು ಹೊರಟವ. ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯೂ ಆಗುತ್ತಾನೆ. ಅವನ ನೈತಿಕತೆ ಏನು?

ಈತ ಒಂದು ಹೊಟೇಲ್‍ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿರುವ ಹುಡುಗ. ಒಬ್ಬ ನೀಲಿ ಚಿತ್ರಗಳ ನಿರ್ದೇಶಕ ಸಂಪರ್ಕಕ್ಕೆ ಬರುತ್ತಾನೆ. ಈ ನಿರ್ದೇಶಕ ಈ ಹುಡುಗನನ್ನು ನೀಲಿಚಿತ್ರಗಳ ಸ್ಟಾರ್ ಆಗುವಂತೆ ಮಾಡುತ್ತಾನೆ. ಇವನಿಗೆ ತಾನು ನಿಜವಾದ ಸ್ಟಾರ್ ಅಲ್ಲ ಎಂದು ಗೊತ್ತಿಲ್ಲ. ಹಿಂಸೆ, ಮಾದಕವಸ್ತು, ನಿರಾಶೆ, ಸೋಲುಗಳ ಪಯಣಕ್ಕೆ ಕಾಲಿಡುತ್ತಾನೆ ಈ ಸ್ಟಾರ್.

ಈತ 20ನೇ ಶತಮಾನದ ಪ್ರಾರಂಭದ ಲಂಡನ್ನಿನ ಖ್ಯಾತ ವಿನ್ಯಾಸಕಾರ. ಯಶಸ್ಸಿನ ತುತ್ತುಂಗದಲ್ಲಿರುವ ಈತ ತನ್ನದೇ ಆತ ನಿಯಮಗಳನ್ನು ರಚಿಸಿಕೊಂಡು, ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಜೀವಿಸುತ್ತಾನೆ.

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಮನುಷ್ಯನ ಕ್ರೌರ್ಯ, ರಾಜಕೀಯ, ಆರ್ಥಿಕ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ, ಜನರ ಜೀವನ ಹೇಗೆ ಇವೆಲ್ಲವುಗಳಿಂದ ಪರಿಣಾಮವಾಗುತ್ತೆ ಎನ್ನುವುದನ್ನು ತಮ್ಮ ಚಿತ್ರಗಳಲ್ಲಿ ಪರಿಶೀಲಿಸುತ್ತಾರೆ. ಇನ್ನೂ ಕೆಲವರಿಗೆ ವೀಕ್ಷಕರ ಮನರಂಜನೆಯೇ ಮುಖ್ಯ. ಪಾಲ್ ಥಾಮಸ್ ಆ್ಯಂಡರ್ಸನ್ ನಮ್ಮ ಸಮಾಜದ, ಮನುಷ್ಯರ ವಿಕೃತಿಗಳನ್ನು ಕೆದಕುತ್ತಾರೆ. ಸಮಾಜ ತಾನು ಮಾಡಿಕೊಂಡಿರುವ, ಅವುಗಳ ಉಲ್ಲಂಘನೆಯಾದಲ್ಲಿ ಉಲ್ಲಂಘಿಸಿದ ವ್ಯಕ್ತಿಯು ಅಪರಾಧಿಯೆಂದು ಪರಿಗಣಿಸಲಾಗುತ್ತದೆ ಅಥವಾ ಹುಚ್ಚನೆಂದು ಕರೆಯಲಾಗುತ್ತದೆ. ಈ ಅಪರಾಧಿಗಳ, ಹುಚ್ಚರ ಕಥೆಗಳನ್ನೂ ಯಾರಾದರೂ ಹೇಳಬೇಕಲ್ಲವೇ. ಅವರೂ ನಮ್ಮ ಸಮಾಜದ ಅವಿಭಾಜ್ಯ ಅಂಗವಲ್ಲವೇ?

ಪಾಲ್ ಥಾಮಸ್ ಅ್ಯಂಡರ್ಸನ್ ಹುಟ್ಟಿದ್ದು 1970ರಲ್ಲಿ ಅಮೆರಿಕದ ಲಾಸ್ ಅಂಜೆಲಿಸ್‍ನಲ್ಲಿ. ಇವರ ತಂದೆ ಪಾಲ್‍ಗೆ ಚಿಕ್ಕವನಾಗಿದ್ದಾಗಲೇ ಒಂದು ಕ್ಯಾಮೆರಾ ತಂದುಕೊಟ್ಟರು. ಪಾಲ್ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಮೊದಲ ಸಿನೆಮಾ ನಿರ್ದೇಶಿಸಿದ. ಸಿನೆಮಾ ಧ್ಯಾನದಲ್ಲೇ ಬೆಳೆದ ಪಾಲ್‍ಗೆ ಚಿತ್ರನಿರ್ದೇಶಕ ಆಗುವುದನ್ನು ಬಿಟ್ಟರೆ ಬೇರಾವ ಆಯ್ಕೆಯೂ ಇದ್ದಿಲ್ಲ. ಹಲವಾರು ಶಾಲೆಗಳಲ್ಲಿ ಓದಿದ ಪಾಲ್ ನ್ಯೂಯಾರ್ಕ್‍ನ ಒಂದು ಫಿಲ್ಮ್ ಸ್ಕೂಲಿಗೆ ಸೇರಿ, ಎರಡೇ ದಿನಗಳಲ್ಲಿ ಅಲ್ಲಿಂದ ಹೊರಬಿದ್ದು, ತನ್ನ ಶುಲ್ಕವನ್ನು ಮರುಪಡೆದು ಕಾಫಿ ಆ್ಯಂಡ್ ಸಿಗಾರೇಟ್ಸ್ ಎನ್ನುವ ಕಿರುಚಿತ್ರವನ್ನು ನಿರ್ಮಿಸಿದ. 1996ರಲ್ಲಿ ತನ್ನ ಕಿರುಚಿತ್ರವನ್ನೇ ಇಟ್ಟುಕೊಂಡು ಹಾರ್ಡ್ ಏಯ್ಟ್ ಎನ್ನುವ ತನ್ನ ಮೊದಲ ಪೂರ್ಣಪ್ರಮಾಣದ ಚಿತ್ರವನ್ನು ನಿರ್ದೇಶಿಸಿದ ಪಾಲ್ ಮೊದಲ ಚಿತ್ರದಲ್ಲೇ ತಾನೊಬ್ಬ ಪ್ರತಿಭಾವಂತ ಎನ್ನುವ ಝಲಕ್ ಈ ಸಿನೆಮಾದಲ್ಲಿ ತೋರಿಸಿದ.

ಅಂಕಣದ ಪ್ರಾರಂಭದಲ್ಲಿದ್ದದ್ದು ಪಾಲ್ ಆ್ಯಂಡರ್ಸನ್ ಅವರ ಚಿತ್ರಗಳಲ್ಲಿಯ ಮುಖ್ಯಪಾತ್ರಗಳ ಸಣ್ಣ ಪರಿಚಯ. 1997ರಲ್ಲಿ ಬೂಗೀ ನೈಟ್ಸ್ ಎನ್ನುವ ಚಿತ್ರ 70ರ ದಶಕದಲ್ಲಿ ಪಾರ್ನ್ ಸ್ಟಾರ್ ಆಗಿದ್ದ ಜಾನ್ ಹೋಮ್ಸ್ ಅವರ ಜೀವನವನ್ನು ಆಧರಿಸಿತ್ತು. ಪಾರ್ನ್ ಸಿನೆಮಾಗಳ ಜಗತ್ತಿನ ಬಗ್ಗೆ ಯಾವುದೇ ತೀರ್ಪನ್ನು ನೀಡದೇ, ಹಿಂಸೆ, ಮಾದಕವಸ್ತುಗಳ ಬಳಕೆಯನ್ನು ವೈಭವೀಕರಿಸದೇ , ಆ ಜಗತ್ತನ್ನು ಇದ್ದ ಹಾಗೇ ಚಿತ್ರಿಸಿ, ಕ್ಲಿಷ್ಟ ಪಾತ್ರಗಳನ್ನು ಸರಳವಾಗಿ ಚಿತ್ರಿಸಲಾದ ಬೂಗೀ ನೈಟ್ಸ್‍ನಿಂದ ಪಾಲ್ ಹಾಲಿವುಡ್‍ನಲ್ಲಿ ಪ್ರಮುಖ ನಿರ್ದೇಶಕರಲ್ಲೊಬ್ಬರಾದರು. ಈ ಚಿತ್ರ ನಿರ್ಮಾಪಕರಿಗೆ ಎಷ್ಟು ಇಷ್ಟವಾಯಿತೆಂದರೆ, ಮುಂದಿನ ಸಿನೆಮಾ ನಿನಗೆ ತೋಚಿದಂತೇ ಮಾಡು, ನಮ್ಮ ಯಾವ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಚಿತ್ರದ ನಿರ್ಮಾಪಕರು ಪಾಲ್‍ಗೆ ಹೇಳಿಬಿಟ್ಟರು. ಅದರ ಪರಿಣಾಮವಾಗಿ ಬಂದಿದ್ದು ಮಾಗ್ನೋಲಿಯಾ ಎನ್ನುವ ಅದ್ಭುತ ಚಿತ್ರ. ಅನೇಕ ಮುಖ್ಯಪಾತ್ರಗಳು, ಕಥೆಗಳನ್ನು ಹೊಂದಿದ ಈ ಚಿತ್ರ ಅಮೆರಿಕದ ಕೆಟ್ಟುಹೋಗುತ್ತಿರುವ ಕುಟುಂಬ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಮುಖ್ಯವಾಗಿ ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧ, ಸಂಬಂಧದ ಕೊರತೆ, ತಮ್ಮ ನಿರೀಕ್ಷೆಗಳನ್ನು ಮಕ್ಕಳಲ್ಲಿ ಬಲವಂತವಾಗಿ ಹುಡುಕುವುದು, ತಮ್ಮ ಸಮಸ್ಯೆಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಈ ಚಿತ್ರದ ನಾಲ್ಕೂ ಕಥೆಗಳು ಹುಡುಕುತ್ತವೆ. ಮೂರು ಗಂಟೆ ಎಂಟು ನಿಮಿಷದ ಈ ಚಿತ್ರ ಅಂತ್ಯವಾಗುವುದು ಬೈಬಲ್‍ನಲ್ಲಿ ಬರುವ ಒಂದು ಕಥಾನಕದೊಂದಿಗೆ. ಇದರ ನಂತರ ಆ್ಯಡಮ್ ಸ್ಯಾಂಡ್ಲರ್‍ನೊಂದಿಗೆ ಪಂಚ್ ಡ್ರಂಕ್ ಲವ್ ಎನ್ನುವ ಕಾಮೆಡಿ ನಿರ್ದೇಶಿಸಿದ ಪಾಲ್, ತಮ್ಮ ಜೀವನದ ಅತೀ ಮಹತ್ವದ ಸಿನೆಮಾ ‘ದೇರ್ ವಿಲ್ ಬಿ ಬ್ಲಡ್’ಗೆ ಕೈ ಹಾಕಿದರು.

ದೇರ್ ವಿಲ್ ಬಿ ಬ್ಲಡ್ ಚಿತ್ರವು ಅಪ್ಟನ್ ಸಿನ್‍ಕ್ಲೇರ್ ಎನ್ನುವ ಅಮೆರಿಕದ ಬರಹಗಾರ 1926ರಲ್ಲಿ ಬರೆದ ‘ಆಯಿಲ್’ ಎನ್ನುವ ಕಾದಂಬರಿಯನ್ನಾಧರಿಸಿ ಮಾಡಿದ ಚಿತ್ರ ಎಂದು ಹೇಳಲಾಗಿತ್ತು. ಚಿತ್ರದಿಂದ ಪ್ರಭಾವಿತನಾದ ನಾನು ಆ ಕಾದಂಬರಿಯನ್ನು ಕೊಂಡು ಓದಿದಾಗ ಕಾಡಿದ್ದು ಒಂದು ರೀತಿಯ ನಿರಾಸೆ. ಮೊದಲ ಕೆಲವು ಪುಟಗಳನ್ನಷ್ಟೇ ತನ್ನ ಚಿತ್ರಕ್ಕೆ ಬಳಸಿಕೊಂಡ ಪಾಲ್ ಮುಂದಿನ ಎಲ್ಲವನ್ನೂ ಬದಲಿಸಿದ್ದಾರೆ. ಪಾತ್ರಗಳ ಮೂಲ ವ್ಯಕ್ತಿತ್ವದಿಂದ ಸಂಪೂರ್ಣ ಕಥೆಯನ್ನು ಇನ್ನೊಂದು ಸಲ ಬರೆದರು ಪಾಲ್. 19ನೇ ಶತಮಾನದ ಅಂತ್ಯದಲ್ಲಿ ಆರಂಭವಾಗುವ ಇದರ ಕಥೆ, ನಾಯಕ ಅಮೆರಿಕದ ಅತಿ ದೊಡ್ಡ ತೈಲ ಸಾಮ್ರಾಜ್ಯವನ್ನು ಕಟ್ಟಿದ್ದನ್ನು ತೋರಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ಕಥಾನಾಯಕನ ವ್ಯಕ್ತಿತ್ವ ಪ್ರೇಕ್ಷಕರ ದಂಗುಬಡಿಸಿತು. ಈ ಚಿತ್ರದಲ್ಲಿಯ ಯಾವ ಪಾತ್ರಗಳು ಬದಲಾಗುವುದಿಲ್ಲ, ಮಹಿಳಾಪಾತ್ರಗಳೇ ಇಲ್ಲ, ನಿಷ್ಕರುಣೆಯ, ಪಟ್ಟುಬಿಡದ ಪಾತ್ರಗಳು. ಇಂತಹ ಕ್ಲಿಷ್ಟ ಪಾತ್ರಗಳಿದ್ದರೂ ಕಥೆಯನ್ನು ಸರಳವಾಗಿಯೇ ಹೇಳಲಾಗಿದೆ. ಕಥಾನಾಯಕನ ಜೀವನವನ್ನು ನೋಡಿ ದುಃಖಿಸಬೇಕೇ, ಸಂತೋಷಪಡಬೇಕೇ ತಿಳಿಯುವುದಿಲ್ಲ. ಇಂಥವರು ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದರೆ ಆಶ್ಚರ್ಯವಲ್ಲ. ವಿಶ್ವದ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರಾದ ಡ್ಯಾನಿಯಲ್ ಡೇ ಲೆವಿಸ್ ಅವರನ್ನು ನಾಯಕನ ಪಾತ್ರವನ್ನು ಮಾಡಲು ಸಂತೋಷದಿಂದಲೇ ಒಪ್ಪಿಕೊಂಡರು. (ಅತ್ಯಂತ ಚ್ಯೂಸಿ ನಟನಾದ ಡ್ಯಾನಿಯಲ್, ಮೂರು ಶ್ರೇಷ್ಠ ನಟ ಆಸ್ಕರ್ ಪ್ರಶಸ್ತಿ ಗೆದ್ದ ಏಕೈಕ ವ್ಯಕ್ತಿ). ಈ ಪಾತ್ರದ ತಯಾರಿಗೆ ಒಂದು ವರ್ಷ ತೆಗೆದುಕೊಂಡ ಡ್ಯಾನಿಯಲ್, ತಮ್ಮ ಜೀವನದ ಕೊನೆಯ ಚಿತ್ರವನ್ನೂ ಪಾಲ್ ಜೊತೆಗೇ ಮಾಡಿ ಅಭಿನಯಕ್ಕೆ ವಿದಾಯ ಹೇಳಿದ್ದಾರೆ.

ದೇರ್ ವಿಲ್ ಬಿ ಬ್ಲಡ್ ನಂತರ ಇನ್ಹರಂಟ್ ವಾೈಸ್ ಮತ್ತು ಮಾಸ್ಟರ್ ಎನ್ನುವ ಚಿತ್ರಗಳಲ್ಲೂ ನಮ್ಮ ನಾಗರಿಕ ಸಮಾಜವು ಒಪ್ಪದ ಪಾತ್ರಗಳನ್ನೇ ವಿಶ್ಲೇಷಿಸಿದ ಪಾಲ್ 2017ರಲ್ಲಿ ಫ್ಯಾಂಟಮ್ ಥ್ರೆಡ್ ಎನ್ನುವ ಚಿತ್ರವನ್ನು ನಿರ್ದೇಶಿಸಿದರು. ಲಂಡನ್ನಿನ 20ನೇ ಶತಮಾನದ ಪ್ರಾರಂಭ, ಅಲ್ಲಿಯ ಖ್ಯಾತ ವಿನ್ಯಾಸಕಾರ, ತನ್ನ ಕಟ್ಟುನಿಟ್ಟಿನ ಜೀವನ ನಡೆಸುತ್ತಿದ್ದಾಗ ಅವನ ಜೀವನದಲ್ಲಿ, ಮನೆಯಲ್ಲಿ ಕಾಲಿಡುವ ಅವನ ಗೆಳತಿ, ಅವಳಿಂದಾಗುವ ಅಲ್ಲೋಲಕಲ್ಲೋಲಗಳು.
ಎಂಟು ಚಿತ್ರಗಳನ್ನು ನಿರ್ದೇಶಿಸಿದ ಪಾಲ್ ಥಾಮಸ್ ಆ್ಯಂಡರ್ಸನ್‍ಗೆ ಈಗ 48 ವರ್ಷ ವಯಸ್ಸು. ಜಗತ್ತಿನ ಚಿತ್ರಪ್ರೇಮಿಗಳೆಲ್ಲ ಅವರಿಂದ ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳನ್ನು ಹುಸಿಯಾಗಿಸಲಾರರು ಎನ್ನುವುದ ನನ್ನ ಖಚಿತ ನಂಬಿಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...