Homeಅಂತರಾಷ್ಟ್ರೀಯಪಾಲ್ ಥಾಮಸ್ ಆಂಡರ್ಸನ್ - ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |
ಇವನಿಗೆ ಏಳು ಅಕ್ಕಂದಿರಿದ್ದಾರೆ; ಅವರೆಲ್ಲರ ದಾದಾಗಿರಿಯಲ್ಲೇ ತನ್ನ ಬಾಲ್ಯವನ್ನು ಕಳೆದವನು. ಈಗ ತನ್ನದೊಂದು ಬಿಸಿನೆಸ್ ಶುರುಮಾಡಿದ್ದಾನೆ. ಏಕಾಂಗಿತನದಿಂದ, ಮತ್ತಿತರ ಕ್ಷೋಭೆಗಳಿಂದ ಬಳಲುತ್ತಿರುವ ಈತ ಸೆಕ್ಸ್ ಟಾಕ್ ಸೌಲಭ್ಯ ಒದಗಿಸುವ ಒಂದು ಸರ್ವಿಸ್‍ಗೆ ಕರೆ ಮಾಡುತ್ತಾನೆ. ಅವರಿಂದ ಬ್ಲ್ಯಾಕ್‍ಮೇಲ್‍ಗೆ ಒಳಗಾಗುತ್ತಾನೆ.

ಇವನು ಎರಡನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದವ, ಕುಡಿಯುತ್ತಾನೆ, ಯಾವುದೇ ನೈತಿಕತೆಯ ಒತ್ತಡವಿಲ್ಲ. ತನ್ನದೇ ಸಾರಾಯಿ ತಯಾರಿಸುತ್ತಾನೆ. ಈತ ಒಂದು ಧಾರ್ಮಿಕ ಚಳವಳಿಯನ್ನು ನಡೆಸುತ್ತಿರುವ ವ್ಯಕ್ತಿ, ದಿ ಮಾಸ್ಟರ್‍ನೊಂದಿಗೆ ಸೇರಿಕೊಳ್ಳುತ್ತಾನೆ. ದಿ ಮಾಸ್ಟರ್‍ನ ಅಸಂಬದ್ಧ ಧಾರ್ಮಿಕ ಚಳವಳಿ, ಇವರಿಬ್ಬರ ಸಂಬಂಧ.

ಈತ 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ತೈಲ ನಿಕ್ಷೇಪಗಳನ್ನು ಹುಡುಕಿ ತನ್ನದೇ ಆದ ಸಾಮ್ರಾಜ್ಯ ಕಟ್ಟಲು ಹೊರಟವ. ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯೂ ಆಗುತ್ತಾನೆ. ಅವನ ನೈತಿಕತೆ ಏನು?

ಈತ ಒಂದು ಹೊಟೇಲ್‍ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿರುವ ಹುಡುಗ. ಒಬ್ಬ ನೀಲಿ ಚಿತ್ರಗಳ ನಿರ್ದೇಶಕ ಸಂಪರ್ಕಕ್ಕೆ ಬರುತ್ತಾನೆ. ಈ ನಿರ್ದೇಶಕ ಈ ಹುಡುಗನನ್ನು ನೀಲಿಚಿತ್ರಗಳ ಸ್ಟಾರ್ ಆಗುವಂತೆ ಮಾಡುತ್ತಾನೆ. ಇವನಿಗೆ ತಾನು ನಿಜವಾದ ಸ್ಟಾರ್ ಅಲ್ಲ ಎಂದು ಗೊತ್ತಿಲ್ಲ. ಹಿಂಸೆ, ಮಾದಕವಸ್ತು, ನಿರಾಶೆ, ಸೋಲುಗಳ ಪಯಣಕ್ಕೆ ಕಾಲಿಡುತ್ತಾನೆ ಈ ಸ್ಟಾರ್.

ಈತ 20ನೇ ಶತಮಾನದ ಪ್ರಾರಂಭದ ಲಂಡನ್ನಿನ ಖ್ಯಾತ ವಿನ್ಯಾಸಕಾರ. ಯಶಸ್ಸಿನ ತುತ್ತುಂಗದಲ್ಲಿರುವ ಈತ ತನ್ನದೇ ಆತ ನಿಯಮಗಳನ್ನು ರಚಿಸಿಕೊಂಡು, ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಜೀವಿಸುತ್ತಾನೆ.

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಮನುಷ್ಯನ ಕ್ರೌರ್ಯ, ರಾಜಕೀಯ, ಆರ್ಥಿಕ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ, ಜನರ ಜೀವನ ಹೇಗೆ ಇವೆಲ್ಲವುಗಳಿಂದ ಪರಿಣಾಮವಾಗುತ್ತೆ ಎನ್ನುವುದನ್ನು ತಮ್ಮ ಚಿತ್ರಗಳಲ್ಲಿ ಪರಿಶೀಲಿಸುತ್ತಾರೆ. ಇನ್ನೂ ಕೆಲವರಿಗೆ ವೀಕ್ಷಕರ ಮನರಂಜನೆಯೇ ಮುಖ್ಯ. ಪಾಲ್ ಥಾಮಸ್ ಆ್ಯಂಡರ್ಸನ್ ನಮ್ಮ ಸಮಾಜದ, ಮನುಷ್ಯರ ವಿಕೃತಿಗಳನ್ನು ಕೆದಕುತ್ತಾರೆ. ಸಮಾಜ ತಾನು ಮಾಡಿಕೊಂಡಿರುವ, ಅವುಗಳ ಉಲ್ಲಂಘನೆಯಾದಲ್ಲಿ ಉಲ್ಲಂಘಿಸಿದ ವ್ಯಕ್ತಿಯು ಅಪರಾಧಿಯೆಂದು ಪರಿಗಣಿಸಲಾಗುತ್ತದೆ ಅಥವಾ ಹುಚ್ಚನೆಂದು ಕರೆಯಲಾಗುತ್ತದೆ. ಈ ಅಪರಾಧಿಗಳ, ಹುಚ್ಚರ ಕಥೆಗಳನ್ನೂ ಯಾರಾದರೂ ಹೇಳಬೇಕಲ್ಲವೇ. ಅವರೂ ನಮ್ಮ ಸಮಾಜದ ಅವಿಭಾಜ್ಯ ಅಂಗವಲ್ಲವೇ?

ಪಾಲ್ ಥಾಮಸ್ ಅ್ಯಂಡರ್ಸನ್ ಹುಟ್ಟಿದ್ದು 1970ರಲ್ಲಿ ಅಮೆರಿಕದ ಲಾಸ್ ಅಂಜೆಲಿಸ್‍ನಲ್ಲಿ. ಇವರ ತಂದೆ ಪಾಲ್‍ಗೆ ಚಿಕ್ಕವನಾಗಿದ್ದಾಗಲೇ ಒಂದು ಕ್ಯಾಮೆರಾ ತಂದುಕೊಟ್ಟರು. ಪಾಲ್ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಮೊದಲ ಸಿನೆಮಾ ನಿರ್ದೇಶಿಸಿದ. ಸಿನೆಮಾ ಧ್ಯಾನದಲ್ಲೇ ಬೆಳೆದ ಪಾಲ್‍ಗೆ ಚಿತ್ರನಿರ್ದೇಶಕ ಆಗುವುದನ್ನು ಬಿಟ್ಟರೆ ಬೇರಾವ ಆಯ್ಕೆಯೂ ಇದ್ದಿಲ್ಲ. ಹಲವಾರು ಶಾಲೆಗಳಲ್ಲಿ ಓದಿದ ಪಾಲ್ ನ್ಯೂಯಾರ್ಕ್‍ನ ಒಂದು ಫಿಲ್ಮ್ ಸ್ಕೂಲಿಗೆ ಸೇರಿ, ಎರಡೇ ದಿನಗಳಲ್ಲಿ ಅಲ್ಲಿಂದ ಹೊರಬಿದ್ದು, ತನ್ನ ಶುಲ್ಕವನ್ನು ಮರುಪಡೆದು ಕಾಫಿ ಆ್ಯಂಡ್ ಸಿಗಾರೇಟ್ಸ್ ಎನ್ನುವ ಕಿರುಚಿತ್ರವನ್ನು ನಿರ್ಮಿಸಿದ. 1996ರಲ್ಲಿ ತನ್ನ ಕಿರುಚಿತ್ರವನ್ನೇ ಇಟ್ಟುಕೊಂಡು ಹಾರ್ಡ್ ಏಯ್ಟ್ ಎನ್ನುವ ತನ್ನ ಮೊದಲ ಪೂರ್ಣಪ್ರಮಾಣದ ಚಿತ್ರವನ್ನು ನಿರ್ದೇಶಿಸಿದ ಪಾಲ್ ಮೊದಲ ಚಿತ್ರದಲ್ಲೇ ತಾನೊಬ್ಬ ಪ್ರತಿಭಾವಂತ ಎನ್ನುವ ಝಲಕ್ ಈ ಸಿನೆಮಾದಲ್ಲಿ ತೋರಿಸಿದ.

ಅಂಕಣದ ಪ್ರಾರಂಭದಲ್ಲಿದ್ದದ್ದು ಪಾಲ್ ಆ್ಯಂಡರ್ಸನ್ ಅವರ ಚಿತ್ರಗಳಲ್ಲಿಯ ಮುಖ್ಯಪಾತ್ರಗಳ ಸಣ್ಣ ಪರಿಚಯ. 1997ರಲ್ಲಿ ಬೂಗೀ ನೈಟ್ಸ್ ಎನ್ನುವ ಚಿತ್ರ 70ರ ದಶಕದಲ್ಲಿ ಪಾರ್ನ್ ಸ್ಟಾರ್ ಆಗಿದ್ದ ಜಾನ್ ಹೋಮ್ಸ್ ಅವರ ಜೀವನವನ್ನು ಆಧರಿಸಿತ್ತು. ಪಾರ್ನ್ ಸಿನೆಮಾಗಳ ಜಗತ್ತಿನ ಬಗ್ಗೆ ಯಾವುದೇ ತೀರ್ಪನ್ನು ನೀಡದೇ, ಹಿಂಸೆ, ಮಾದಕವಸ್ತುಗಳ ಬಳಕೆಯನ್ನು ವೈಭವೀಕರಿಸದೇ , ಆ ಜಗತ್ತನ್ನು ಇದ್ದ ಹಾಗೇ ಚಿತ್ರಿಸಿ, ಕ್ಲಿಷ್ಟ ಪಾತ್ರಗಳನ್ನು ಸರಳವಾಗಿ ಚಿತ್ರಿಸಲಾದ ಬೂಗೀ ನೈಟ್ಸ್‍ನಿಂದ ಪಾಲ್ ಹಾಲಿವುಡ್‍ನಲ್ಲಿ ಪ್ರಮುಖ ನಿರ್ದೇಶಕರಲ್ಲೊಬ್ಬರಾದರು. ಈ ಚಿತ್ರ ನಿರ್ಮಾಪಕರಿಗೆ ಎಷ್ಟು ಇಷ್ಟವಾಯಿತೆಂದರೆ, ಮುಂದಿನ ಸಿನೆಮಾ ನಿನಗೆ ತೋಚಿದಂತೇ ಮಾಡು, ನಮ್ಮ ಯಾವ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಚಿತ್ರದ ನಿರ್ಮಾಪಕರು ಪಾಲ್‍ಗೆ ಹೇಳಿಬಿಟ್ಟರು. ಅದರ ಪರಿಣಾಮವಾಗಿ ಬಂದಿದ್ದು ಮಾಗ್ನೋಲಿಯಾ ಎನ್ನುವ ಅದ್ಭುತ ಚಿತ್ರ. ಅನೇಕ ಮುಖ್ಯಪಾತ್ರಗಳು, ಕಥೆಗಳನ್ನು ಹೊಂದಿದ ಈ ಚಿತ್ರ ಅಮೆರಿಕದ ಕೆಟ್ಟುಹೋಗುತ್ತಿರುವ ಕುಟುಂಬ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಮುಖ್ಯವಾಗಿ ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧ, ಸಂಬಂಧದ ಕೊರತೆ, ತಮ್ಮ ನಿರೀಕ್ಷೆಗಳನ್ನು ಮಕ್ಕಳಲ್ಲಿ ಬಲವಂತವಾಗಿ ಹುಡುಕುವುದು, ತಮ್ಮ ಸಮಸ್ಯೆಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಈ ಚಿತ್ರದ ನಾಲ್ಕೂ ಕಥೆಗಳು ಹುಡುಕುತ್ತವೆ. ಮೂರು ಗಂಟೆ ಎಂಟು ನಿಮಿಷದ ಈ ಚಿತ್ರ ಅಂತ್ಯವಾಗುವುದು ಬೈಬಲ್‍ನಲ್ಲಿ ಬರುವ ಒಂದು ಕಥಾನಕದೊಂದಿಗೆ. ಇದರ ನಂತರ ಆ್ಯಡಮ್ ಸ್ಯಾಂಡ್ಲರ್‍ನೊಂದಿಗೆ ಪಂಚ್ ಡ್ರಂಕ್ ಲವ್ ಎನ್ನುವ ಕಾಮೆಡಿ ನಿರ್ದೇಶಿಸಿದ ಪಾಲ್, ತಮ್ಮ ಜೀವನದ ಅತೀ ಮಹತ್ವದ ಸಿನೆಮಾ ‘ದೇರ್ ವಿಲ್ ಬಿ ಬ್ಲಡ್’ಗೆ ಕೈ ಹಾಕಿದರು.

ದೇರ್ ವಿಲ್ ಬಿ ಬ್ಲಡ್ ಚಿತ್ರವು ಅಪ್ಟನ್ ಸಿನ್‍ಕ್ಲೇರ್ ಎನ್ನುವ ಅಮೆರಿಕದ ಬರಹಗಾರ 1926ರಲ್ಲಿ ಬರೆದ ‘ಆಯಿಲ್’ ಎನ್ನುವ ಕಾದಂಬರಿಯನ್ನಾಧರಿಸಿ ಮಾಡಿದ ಚಿತ್ರ ಎಂದು ಹೇಳಲಾಗಿತ್ತು. ಚಿತ್ರದಿಂದ ಪ್ರಭಾವಿತನಾದ ನಾನು ಆ ಕಾದಂಬರಿಯನ್ನು ಕೊಂಡು ಓದಿದಾಗ ಕಾಡಿದ್ದು ಒಂದು ರೀತಿಯ ನಿರಾಸೆ. ಮೊದಲ ಕೆಲವು ಪುಟಗಳನ್ನಷ್ಟೇ ತನ್ನ ಚಿತ್ರಕ್ಕೆ ಬಳಸಿಕೊಂಡ ಪಾಲ್ ಮುಂದಿನ ಎಲ್ಲವನ್ನೂ ಬದಲಿಸಿದ್ದಾರೆ. ಪಾತ್ರಗಳ ಮೂಲ ವ್ಯಕ್ತಿತ್ವದಿಂದ ಸಂಪೂರ್ಣ ಕಥೆಯನ್ನು ಇನ್ನೊಂದು ಸಲ ಬರೆದರು ಪಾಲ್. 19ನೇ ಶತಮಾನದ ಅಂತ್ಯದಲ್ಲಿ ಆರಂಭವಾಗುವ ಇದರ ಕಥೆ, ನಾಯಕ ಅಮೆರಿಕದ ಅತಿ ದೊಡ್ಡ ತೈಲ ಸಾಮ್ರಾಜ್ಯವನ್ನು ಕಟ್ಟಿದ್ದನ್ನು ತೋರಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ಕಥಾನಾಯಕನ ವ್ಯಕ್ತಿತ್ವ ಪ್ರೇಕ್ಷಕರ ದಂಗುಬಡಿಸಿತು. ಈ ಚಿತ್ರದಲ್ಲಿಯ ಯಾವ ಪಾತ್ರಗಳು ಬದಲಾಗುವುದಿಲ್ಲ, ಮಹಿಳಾಪಾತ್ರಗಳೇ ಇಲ್ಲ, ನಿಷ್ಕರುಣೆಯ, ಪಟ್ಟುಬಿಡದ ಪಾತ್ರಗಳು. ಇಂತಹ ಕ್ಲಿಷ್ಟ ಪಾತ್ರಗಳಿದ್ದರೂ ಕಥೆಯನ್ನು ಸರಳವಾಗಿಯೇ ಹೇಳಲಾಗಿದೆ. ಕಥಾನಾಯಕನ ಜೀವನವನ್ನು ನೋಡಿ ದುಃಖಿಸಬೇಕೇ, ಸಂತೋಷಪಡಬೇಕೇ ತಿಳಿಯುವುದಿಲ್ಲ. ಇಂಥವರು ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದರೆ ಆಶ್ಚರ್ಯವಲ್ಲ. ವಿಶ್ವದ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರಾದ ಡ್ಯಾನಿಯಲ್ ಡೇ ಲೆವಿಸ್ ಅವರನ್ನು ನಾಯಕನ ಪಾತ್ರವನ್ನು ಮಾಡಲು ಸಂತೋಷದಿಂದಲೇ ಒಪ್ಪಿಕೊಂಡರು. (ಅತ್ಯಂತ ಚ್ಯೂಸಿ ನಟನಾದ ಡ್ಯಾನಿಯಲ್, ಮೂರು ಶ್ರೇಷ್ಠ ನಟ ಆಸ್ಕರ್ ಪ್ರಶಸ್ತಿ ಗೆದ್ದ ಏಕೈಕ ವ್ಯಕ್ತಿ). ಈ ಪಾತ್ರದ ತಯಾರಿಗೆ ಒಂದು ವರ್ಷ ತೆಗೆದುಕೊಂಡ ಡ್ಯಾನಿಯಲ್, ತಮ್ಮ ಜೀವನದ ಕೊನೆಯ ಚಿತ್ರವನ್ನೂ ಪಾಲ್ ಜೊತೆಗೇ ಮಾಡಿ ಅಭಿನಯಕ್ಕೆ ವಿದಾಯ ಹೇಳಿದ್ದಾರೆ.

ದೇರ್ ವಿಲ್ ಬಿ ಬ್ಲಡ್ ನಂತರ ಇನ್ಹರಂಟ್ ವಾೈಸ್ ಮತ್ತು ಮಾಸ್ಟರ್ ಎನ್ನುವ ಚಿತ್ರಗಳಲ್ಲೂ ನಮ್ಮ ನಾಗರಿಕ ಸಮಾಜವು ಒಪ್ಪದ ಪಾತ್ರಗಳನ್ನೇ ವಿಶ್ಲೇಷಿಸಿದ ಪಾಲ್ 2017ರಲ್ಲಿ ಫ್ಯಾಂಟಮ್ ಥ್ರೆಡ್ ಎನ್ನುವ ಚಿತ್ರವನ್ನು ನಿರ್ದೇಶಿಸಿದರು. ಲಂಡನ್ನಿನ 20ನೇ ಶತಮಾನದ ಪ್ರಾರಂಭ, ಅಲ್ಲಿಯ ಖ್ಯಾತ ವಿನ್ಯಾಸಕಾರ, ತನ್ನ ಕಟ್ಟುನಿಟ್ಟಿನ ಜೀವನ ನಡೆಸುತ್ತಿದ್ದಾಗ ಅವನ ಜೀವನದಲ್ಲಿ, ಮನೆಯಲ್ಲಿ ಕಾಲಿಡುವ ಅವನ ಗೆಳತಿ, ಅವಳಿಂದಾಗುವ ಅಲ್ಲೋಲಕಲ್ಲೋಲಗಳು.
ಎಂಟು ಚಿತ್ರಗಳನ್ನು ನಿರ್ದೇಶಿಸಿದ ಪಾಲ್ ಥಾಮಸ್ ಆ್ಯಂಡರ್ಸನ್‍ಗೆ ಈಗ 48 ವರ್ಷ ವಯಸ್ಸು. ಜಗತ್ತಿನ ಚಿತ್ರಪ್ರೇಮಿಗಳೆಲ್ಲ ಅವರಿಂದ ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳನ್ನು ಹುಸಿಯಾಗಿಸಲಾರರು ಎನ್ನುವುದ ನನ್ನ ಖಚಿತ ನಂಬಿಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...