Homeಅಂಕಣಗಳು“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

- Advertisement -
- Advertisement -

ಬದನೆಕಾಯಿ ಇರೋದು ತಿನ್ನಕ್ಕೆ ಪುರಾಣ ಇರದು ಹೇಳಕ್ಕೆ. ಇದೊಂದು ಹಳ್ಳಿ ಕಡೆಯ ಗಾದೆ. ಇದನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಎಡೂರಪ್ಪನ ಸರಕಾರ ಕೊರೊನಾ ಕಾಯಿಲೆ ನಿಯಂತ್ರಿಸುವ ನಿಷೇಧಗಳನ್ನ ಜನಗಳ ಮೇಲೆ ಹೇರಿ ತಾವು ಮಾತ್ರ ಮದುವೆ ಮುಂಜಿ ಹಬ್ಬಹರಿದಿನಗಳಲ್ಲಿ ಆರಾಮವಾಗಿ ಅಡ್ಡಾಡುತ್ತಿವೆಯಂತಲ್ಲಾ. ಹಾಗೆ ನೋಡಿದರೆ ಈ ಬಿಜೆಪಿಗಳೇ ಹಾಗೆ. ಬಾಯಿಬಿಟ್ಟಕೂಡಲೇ ಪುರಾಣವನ್ನು ಹೇಳುವ ಪ್ರಧಾನಿಯನ್ನ ಪಡೆದಿರುವ ನಾವು, ಅವರ ಸರಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ನಾಯಕರಿಂದ ಇನ್ನೇನು ಪಡೆಯಲು ಸಾಧ್ಯ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನೂರು ಜನ ಸೇರಿ ಮಾಡುತ್ತಿದ್ದ ಅಮ್ಮನ ಹಬ್ಬ ತಡೆದ ಡಿ.ಸಿ, ಸಾಹಸವನ್ನೆ ಗೈದಂತೆ ಹೋಗುತ್ತಿದ್ದರೆ ಅತ್ತ ಎಡೂರಪ್ಪ `ಕೊರೊನ ಪರೋನ ನನಿಗೆ ಬರದಿಲ್ಲ’ ಅನ್ನಂಗೆ ತಪಾಸಣೆ ತಡಾಯ್ದು ಹೋಗುತ್ತಿದ್ದರೆ ಇತ್ತ ದೇವೇಗೌಡರು ನಾಲ್ಕೈದು ಸಾವಿರ ಜನ ಸೇರಿ ಮಾಡಿದ ಮದುವೆಯ ಮಧ್ಯದಲ್ಲಿದ್ದರು. ಇನ್ನ ಈಶ್ವರಪ್ಪನೂ ಕೂಡ ನಾನೇನು ಕಡಿಮೆ ಎನ್ನುವಂತೆ ಹಬ್ಬ ಸಡಗರದಲ್ಲಿದ್ದರಂತಲ್ಲಾ, ಥೂತ್ತೇರಿ.

ಜನ ಸೇರುವ ಹಬ್ಬ, ಹರಿದಿನ ಹುಡುಕುತ್ತ, ತಿರುಗುತ್ತಿರುವ ಈಶ್ವರಪ್ಪ ಬದುಕಿನಲ್ಲಿ ಬಹಳ ಪುರಾಣ ಹೇಳುವ ಮನುಷ್ಯನಂತಲ್ಲಾ. ಮಾಂಸ ನಿಷೇಧವಿದ್ದಾಗಲೇ ಭಕ್ಷಣೆ ಮಾಡಿ ತಾನು ಅಸುರ ಸಂತತಿ ಎಂದು ಹೇಳಿದವರು. ಚಡ್ಡಿಗಳಿಗೆ ಎಡೂರಪ್ಪನಿಗಿಂತಲೂ ಪ್ರಿಯರಾದವರು. ಅದಕ್ಕೇ ಏನೋ ಎಡೂರಪ್ಪನವರು ದಾವಣಗೆರೆ ಉಸ್ತುವಾರಿ ಸಚಿವರನ್ನಾಗಿ ಮಾಡಿಬಿಟ್ಟಿದ್ದಾರೆ. ಲಂಕೇಶ್ ಹೇಳುತ್ತಿದ್ದ ಪ್ರಕಾರ, ದಾವಣಗೆರೆಯಲ್ಲಿ ಒಂದು ಕಲ್ಲು ಬೀಸಿದರೆ ಅದು ಒಬ್ಬ ಲಿಂಗಾಯತನಿಗೇ ತಗಲುತ್ತದಂತೆ. ಮೊದಲು ಸೆಕ್ಯುಲರ್ ಎಂದೇಳುವ ಶ್ಯಾಮನೂರು ಜೊತೆಗಿದ್ದು, ಈಗ ಬಿಜೆಪಿ ಸಿದ್ದೇಶನ ಜೊತೆ ಸೇರಿಕೊಂಡು ಮೋದಿ ಭಜನೆ ಮಾಡುತ್ತಿರುವ ದಾವಣಗೆರೆಗೆ ಈಶ್ವರಪ್ಪನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿರುವುದು ಸೇಡುತೀರಿಸಿಕೊಳ್ಳುವ ಕ್ರಮವೆಂದು ಹೇಳುತ್ತಿದ್ದಾರಲ್ಲಾ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಲಿಂಗಾಯತರೆಲ್ಲಾ ಸೇರಿಕೊಂಡು ಈಶ್ವರಪ್ಪನನ್ನು ಹುಡುಕಿಕೊಡಿ ಎಂದು ಪ್ರತಿಭಟಿಸಿದಾಗ, ಈಶ್ವರಪ್ಪ ಹಬ್ಬದಲ್ಲಿ ಭಾಗವಹಿಸಿ ಕೊರೊನಾ ಗಿರೋನ ಯಲ್ಲ ದೇವೇಗೌಡನಂತ ಮುದುಕರಿಗೆ ಬತ್ತದೆ ಕಂಡ್ರಿ ನಮಗಲ್ಲ ಎಂದರಂತಲ್ಲಾ, ಥೂತ್ತೇರಿ.

ವಿಧಾನಸೌಧದ ಹೊರಗೆ ಈ ಕತೆಯಾದರೆ, ಇನ್ನ ವಿಧಾನಸೌಧದ ಒಳಗಿನ ಕತೆಗಳು ಮನಕರಗುವಂತಿವೆಯಲ್ಲ. ಪ್ರವಾಹ, ಜನರ ಗೋಳು, ದೊರೆಸ್ವಾಮಿ ನಿಂದನೆಯ ವಿಚಾರ ಚರ್ಚೆಯಾಗಲು ಅವಕಾಶ ಕೊಡದೆ ಕಾಗೇರಿ, ಸಂವಿಧಾನ ಚರ್ಚೆಯಾಗಲು ಧಾರಾಳ ಅವಕಾಶಕೊಟ್ಟು, ಅಳುತ್ತ ಹೋದರಂತಲ್ಲ. ಇವರ ಬುದ್ಧವಂತಿಕೆ ಗ್ರಹಿಸುವುದಾದರೆ, ಪ್ರವಾಹಸಂತ್ರಸ್ತರ ವಿಷಯಕ್ಕೆ ಸಮಯ ಕೊಟ್ಟರೆ ಸರಕಾರದ ಮರ್ಯಾದೆ ಹರಾಜಾಗುತ್ತದೆ. ಜನರ ಗೋಳಿನ ಚರ್ಚೆಯೂ ಅಂತಹ ಅನಾಹುತವನ್ನೆ ಮಾಡಬಹುದು. ಇನ್ನ ದೊರೆಸ್ವಾಮಿ ವಿಷಯ ಪಾರ್ಟಿಯಲ್ಲಿ ಅನಾಗರಿಕರ ಅಪೂರ್ವ ಗುಣಗಳನ್ನ ಅನಾವರಣಮಾಡಬಹುದು. ಸಂವಿಧಾನಕ್ಕೆ ಅವಕಾಶ ಕೊಟ್ಟರೆ ಹಾಗಾಗುವುದಿಲ್ಲ. ಚಡ್ಡಿಗಳಿಗೂ ಸಂವಿಧಾನದ ಬಗ್ಗೆ ಗೌರವವಿದೆ ಎಂಬುದು ಜಗಜ್ಜಾಹೀರಾಗುತ್ತದೆ. ಇಂತಹ ಯೋಚನೆಯ ಕಾಗೇರಿ ಹೊಗಳುಭಟ್ಟರ ಸಂತತಿಯವರಾದ ರಮೇಶಕುಮಾರರಿಂದ ಹಿಗಾಮುಗ್ಗ ಹೊಗಳಿಸಿಕೊಂಡು ನಿರ್ಗಮಿಸಿದರಂತಲ್ಲಾ, ಥೂತ್ತೇರಿ.

ಇನ್ನ ವಿಧಾನಪರಿಷತ್‍ನಲ್ಲಿ ಯಾತಕ್ಕೂ ಲಾಯಕ್ ಅಲ್ಲದ ಕೋಟ ಶ್ರೀನಿವಾಸ ಪೂಜಾರಿ ಎಂಬ ಸಭಾನಾಯಕ ಕರ್ನಾಟಕದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇಲ್ಲ ಎಂದು ಬಿಟ್ಟಿದ್ದಾನಲ್ಲ. ಈ ಅಜ್ಞಾನಿಗೆ ಬಹುಶ ದೃಷ್ಟಿದೋಷವಿರಬಹುದು ಇಲ್ಲವೇ ಕೂಪಮಂಡೂಕನಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬಿ.ಜೆ.ಪಿ.ಯ ಭಯಂಕರ ಸುಳ್ಳುಗಾರನಿರಬಹುದು. ಈತನನ್ನ ಹಿಡಿದುಕೊಂಡು ಹೋಗಿ ಅಸ್ಪøಶ್ಯತೆ ಭೀಕರವಾಗಿರುವ ನಮ್ಮ ಹಳ್ಳಿಗಳ ಆಚರಣೆ ತೋರಿಸಬೇಕು. ಅಲ್ಲಿ ಹೊಲೆಯರವನು ಇನ್ನೂ ಅಮ್ಮನಗುಡಿ ಮುಂದೆ ತಮಟೆ ಬಡಿಯುತ್ತಿದ್ದಾನೆ. ಮಾದಿಗರವನು ಕೊಂಡ ಹಾಕುತ್ತಿದ್ದಾನೆ. ಮಡಿವಾಳರವನ್ನು ನೆಡೆಮಡಿಹಾಸಿ ಪತ್ತು ಹಿಡಿಯುತ್ತಿದ್ದಾನೆ. ಕ್ಷೌರಿಕರವನು ವಾಲಗ ಊದುತ್ತಿದ್ದಾನೆ ಇವರೆಲ್ಲಾ ತಮ್ಮತಮ್ಮ ಸ್ಥಾನದಲ್ಲಿ ತಮ್ಮ ಕರ್ತವ್ಯ ಅಂದರೆ ಭಕ್ತಿ ಅರ್ಪಿಸುತ್ತಿದ್ದಾರೆ. ಇನ್ನ ಹೊಟೇಲುಗಳಿಗೆ ಪ್ಲಾಸ್ಟಿಕ್ ಲೋಟ ಬಂದಿರುವುದರಿಂದ ಅದರ ಸಮಸ್ಯೆ ಸಾಲ್ವು ಆಗಿದೆ. ಇಂತಹ ಕೇರಿಗಳಿಗೆ ಈ ಪೂಜಾರಿ ಹೋಗಿ ನೋಡಬೇಕು. ಅವನು ಅಲ್ಲಿಗೆಲ್ಲ ಹೋಗುವುದಿಲ್ಲ. ಸುಳ್ಳುಗಾರ ಜನಕ್ಕೆ ಪ್ರತ್ಯಕ್ಷದ ಅಗತ್ಯವಿಲ್ಲವಂತಲ್ಲಾ, ಥೂತ್ತೇರಿ.

ಪ್ರಭಾಕರ ಕೋರೆಗೆ ಕೆಂಗಲ್ ಹನುಮಂತಯ್ಯ ಸಂಸ್ಕøತಿ ದತ್ತಿ ಪ್ರಶಸ್ತಿ ಪ್ರಾಪ್ತವಾಗಿದೆ. ಕೋರೆಗೆ ಅಭಿನಂದನೆ, ಆದರೆ ಅದನ್ನ ಕೊಡಮಾಡಿದ ಲೀಡರ್ ಬಗ್ಗೆ ಅನುಮಾನ ಎದ್ದಿವೆಯಲ್ಲಾ. ಏಕೆಂದರೆ, ಈ ಪ್ರಶಸ್ತಿಯನ್ನ ಕನ್ನಡ ಸಾಹಿತ್ಯ ಪರಿಷತ್ ಕೊಡುತ್ತದೆ. ಅದರ ಅಧ್ಯಕ್ಷ ಮನುಬಳಿಗಾರ. ಈತ ಪ್ರಶಸ್ತಿ ಕೊಡುವ ಮೊದಲೇ ಸದಸ್ಯರಿಗೆ ಸೂಚನೆ ಕೊಡುವ ಗಿರಾಕಿ. ಆದ್ದರಿಂದ ಕೆಂಗಲ್ ಮತ್ತು ಕೋರೆಗೆ ಜೊತೆಯಾಗಿಯೇ ಅವಮಾನವಾಗಿದೆ. ಕೆಂಗಲ್ ಕರ್ನಾಟಕ ಕಂಡ ಅಪ್ರತಿಮ ನಾಯಕ. ವಿಧಾನಸೌಧ ಕಟ್ಟಿದವರು. ನೆಹರೂಗೆ ಹೆದರದ ಧೀರ. ಇಂದಿರಾಗಾಂಧಿ ಎದುರು ಪಾರ್ಟಿ ಕಟ್ಟಿದವರು. ಭಗವಧ್ಗೀತೆ ಸಾಮಾನ್ಯನೂ ಓದಲೆಂದು ಮುದ್ರಿಸಿ ಹಂಚಿದವರು. ಕನ್ನಡದ ಸಂಸ್ಕøತಿ ಮತ್ತು ರಾಜಕಾರಣದ ಪ್ರತಿನಿಧಿ ಅನ್ನಬಹುದು. ಇಂತಹ ಮಹಾನಾಯಕನ ಹೆಸರಿನ ಪ್ರಶಸ್ತಿ ಕೋರೆಗೆ ಅನವುನ್ಸಾದಾಗ ಬಹುಶ: ಕೋರೆಗೆ ಅಚ್ಚರಿಯಾಗಿರಬಹುದು. ಕೊಟ್ಟವರಾರು ಎಂದು ಗೊತ್ತಾದಾಗ ಈಸಿಕೊಳ್ಳಲು ಸಂಕೋಚವೂ ಆಗಿರಬಹುದು. ಅದಕ್ಕಾಗಿ ಪ್ರಶಸ್ತಿ ಹಣವಾದ 25 ಸಾವಿರವನ್ನು ನೀನೇ ಇಟ್ಟಗಳೊ ಬಳಿಗಾರ ಅನ್ನುವ ಸಂಭವವಿದೆಯೆಂದು ಸಣ್ಣ ಸಂಸ್ಕøತಿ ಜನ ಆಡಿಕೊಳ್ಳುತ್ತಿದ್ದಾರಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...