Homeಅಂಕಣಗಳುಭಾರತದ ಫ್ಯಾಸಿಸ್ಟ್ ಪ್ರಜಾಪ್ರಭುತ್ವ

ಭಾರತದ ಫ್ಯಾಸಿಸ್ಟ್ ಪ್ರಜಾಪ್ರಭುತ್ವ

- Advertisement -
- Advertisement -

ಭಾರತ ಒಂದು ಪ್ರಜಾಪ್ರಭುತ್ವ ಆಗಿರುವ ಕುರಿತು ಸಿನಿಕರಲ್ಲಿದ್ದ ಅನುಮಾನಗಳನ್ನು ಅಂತಿಮವಾಗಿ ಪ್ರಸಕ್ತ ಆಡಳಿತವು ದೃಢೀಕರಿಸಿದೆ. ಭಾರತದ ಪ್ರಧಾನ ಸರ್ಕಾರಿ ವಕೀಲರಾದ ಮುಕುಲ್ ರೋಹಟಗಿ “ಪ್ರಜೆಗಳು ತಮಗೆ ತಮ್ಮ ದೇಹದ ಮೇಲೆ `ಸಂಪೂರ್ಣ’ ಹಕ್ಕು ಇದೆಯೆಂದು ಸಾಧಿಸಲು ಸಾಧ್ಯವಿಲ್ಲ’’ ಎಂದು ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವೊಂದರ ಮುಂದೆ ಹೇಳಿದ್ದಾರೆ. ಆತ್ಮಹತ್ಯೆ, ಮದ್ಯಪಾನ, ಗರ್ಭಪಾತಗಳಿಗೆ ಸಂಬಂಧಿಸಿದ ಕಾನೂನುಗಳೆ ಮೊದಲಾದ ನಿದರ್ಶನಗಳೊಂದಿಗೆ ಅವರು ಹರಿಬಿಟ್ಟ ಆಡಂಬರಯುತ ವಾಕ್ಪ್ರವಾಹದ ವೈಖರಿ ಹೇಗಿತ್ತೆಂದರೆ ಅದನ್ನು ಆಲಿಸಿದ ನ್ಯಾ| ಎ.ಕೆ.ಸಿಕ್ರಿ ಮತ್ತು ನ್ಯಾ| ಅಶೋಕ್ ಭೂಷಣ್‍ರಿಗೂ ಮುಜುಗರ ಎನಿಸಿದೆ. ಆದರೆ ಪ್ರಾಸಂಗಿಕವಾಗಿ ಸರ್ಕಾರಿ ವಕೀಲರ ಮಾತುಗಳು ಪ್ರಜಾಸತ್ತೆಯ ಮುಖವಾಡ ಧರಿಸಿರುವ ಕ್ರೂರ ಮೃಗದ ಕೋರೆಹಲ್ಲುಗಳ ದರ್ಶನವನ್ನು ಮಾಡಿಸಿದೆ. ವಾಸ್ತವದಲ್ಲಿ ರೋಹಟಗಿ ಹೇಳಿಕೆಯ ಅರ್ಥ ಏನೆಂದರೆ ಭಾರತದ ಪ್ರಭುತ್ವವು ಸಾರ್ವಭೌಮರೆನ್ನಲಾದ ಭಾರತೀಯರನ್ನು ತನಗಿಷ್ಟಬಂದಾಗ ಬಲಿ ತೆಗೆದುಕೊಳ್ಳಬಹುದು.

ಮುಸೊಲಿನಿ ತನ್ನ ಫ್ಯಾಸಿಸ್ಟ್ ಸಿದ್ಧಾಂತದಲ್ಲಿ ಸಾರಿದ್ದೂ ಇದನ್ನೆ. ಫ್ಯಾಸಿಸ್ಟ್ ಸಿದ್ಧಾಂತ ಪ್ರಭುತ್ವದ ಪ್ರಾಧಾನ್ಯವನ್ನು ಒತ್ತಿಹೇಳಿತು. ವ್ಯಕ್ತಿಯ ಹಿತಾಸಕ್ತಿಗಳು ಪ್ರಭುತ್ವದ ಹಿತಾಸಕ್ತಿಗಳ ಜತೆ ತಾಳೆಯಾದಾಗಲಷ್ಟೆ ಅದು ವ್ಯಕ್ತಿಯನ್ನು ಸ್ವೀಕರಿಸಿತು. ಭಾರತದಲ್ಲಿ ಪ್ರಭುತ್ವದಿಂದ ರದ್ದುಪಡಿಸಲಾಗದಂತಹ ನಿರ್ದಿಷ್ಟ ಹಕ್ಕುಗಳನ್ನು ಪ್ರಜೆಗಳಿಗೆ ನೀಡಿರುವ ಒಂದು ಉದಾರವಾದಿ ಪ್ರಜಾಸತ್ತೆ ಇದೆಯೆಂದು ಎಣಿಸಲಾಗಿತ್ತು. ಫ್ಯಾಸಿಸಂ ಈ ಉದಾರವಾದಿ ಕಲ್ಪನೆಯನ್ನು ತಿರಸ್ಕರಿಸಿ ಪ್ರಭುತ್ವದ ಹಕ್ಕುಗಳನ್ನು ಪುನಃ ದೃಢಪಡಿಸುತ್ತದೆ. “ಸ್ವಾತಂತ್ರ್ಯದ ಕಲ್ಪನೆ ಅಬಾಧಿತವಲ್ಲ ಏಕೆಂದರೆ ಜೀವನದಲ್ಲಿ ಯಾವುದೂ ಯಾವತ್ತೂ ನಿರ್ಬಂಧರಹಿತವಲ್ಲ. ಸ್ವಾತಂತ್ರ್ಯ ಒಂದು ಹಕ್ಕಲ್ಲ, ಕರ್ತವ್ಯ. ಅದು ದಾನವಾಗಿ ಸಿಕ್ಕಿರುವುದಲ್ಲ, ಗೆದ್ದುಕೊಂಡದ್ದು. ಅದು ಸಮಾನತೆಯಲ್ಲ, ಸೌಲಭ್ಯ” ಎಂದು ಫ್ಯಾಸಿಸಂ ಸಿದ್ಧಾಂತ ಹೇಳುತ್ತದೆ. ಇತ್ತೀಚಿನ ದಿನಗಳಲ್ಲಿ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್‍ರಂಥವರು ಇದೇ ಸುಪರಿಚಿತ ವಾಕ್ಯಗಳನ್ನು ಹರಿಬಿಡುತ್ತಿದ್ದಾರೆ. ಭಾರತದ ಪ್ರಭುತ್ವ ತನ್ನ ಪುನರಾವರ್ತಿತ ಹೇಳಿಕೆಗಳ ಮೂಲಕ ತಾನು ಫ್ಯಾಸಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿರುವುದನ್ನು ದೃಢಪಡಿಸಿದೆ.

ಇಲ್ಲಿಯತನಕ ನಮಗೆ ತಿಳಿಸಿರುವುದೇನೆಂದರೆ ನಮಗೆಲ್ಲ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳೆಂದು ಪ್ರತಿಷ್ಠಾಪಿಸಲಾಗಿರುವ ಕೆಲವು ನಿರ್ದಿಷ್ಟ ಹಕ್ಕುಗಳಿವೆ. ಸಂವಿಧಾನದ ವಿಧಿ 19 ಆರು ಹಕ್ಕುಗಳ ಕುರಿತು ಹೇಳುತ್ತದೆ: ವಾಕ್ಸಾ ್ವತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು; ಶಾಂತಿಯುತವಾಗಿ, ಆಯುಧಗಳಿಲ್ಲದೆ ಸಭೆ ಸೇರುವ ಹಕ್ಕು; ಸಂಘಟನೆ ಅಥವಾ ಕಾರ್ಮಿಕ ಸಂಘಗಳನ್ನು ಸ್ಥಾಪಿಸುವ ಹಕ್ಕು; ಭಾರತದ ಸರಹದ್ದಿನೊಳಗಿರುವ ಯಾವುದೇ ಭಾಗದಲ್ಲಿ ವಾಸ ಮಾಡುವ ಮತ್ತು ನೆಲೆ ನಿಲ್ಲುವ ಹಕ್ಕು; ಯಾವುದೆ ವೃತ್ತಿಯಲ್ಲಿ ತೊಡಗುವ ಅಥವಾ ಯಾವುದೆ ಕಸುಬು, ವ್ಯಾಪಾರ ಅಥವಾ ಉದ್ದಿಮೆ ನಡೆಸುವ ಹಕ್ಕು. ಸಂವಿಧಾನದಲ್ಲಿ ನಮೂದಿಸಲಾಗಿರುವ ನಿರ್ದಿಷ್ಟ ಸಂದರ್ಭಗಳಲ್ಲಿ ಶಾಸನಸಭೆಗಳು ಈ ಹಕ್ಕುಗಳನ್ನು ಮೊಟಕುಗೊಳಿಸಬಹುದು ಎಂಬರ್ಥದಲ್ಲಿ ಅವು ಅನಿರ್ಬಂಧಿತ ಅಲ್ಲವೆಂದು ನಮಗೆ ಗೊತ್ತಿತ್ತು. ಉದಾಹರಣೆಗೆ ರಾಷ್ಟ್ರೀಯ ಭದ್ರತೆ, ವಿದೇಶಿ ರಾಷ್ಟ್ರಗಳೊಂದಿಗೆ ಸ್ನೇಹಯುತ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ನ್ಯಾಯಾಂಗ ನಿಂದನೆ, ಮಾನನಷ್ಟ, ಅಪರಾಧಕ್ಕೆ ಪ್ರಚೋದನೆ ಮತ್ತು ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗಳ ಪ್ರಶ್ನೆಗಳಿದ್ದಾಗ ವಿಧಿ 19 (2)ರ ಮೂಲಕ ವಾಕ್ಸಾ ್ವತಂತ್ರ್ಯದ ಮೇಲೆ ನಿರ್ದಿಷ್ಟ ನಿರ್ಬಂಧಗಳನ್ನು ಹೇರುವ ಅಧಿಕಾರವನ್ನು ಶಾಸನಸಭೆಗಳಿಗೆ ನೀಡಲಾಗಿದೆ. ಸಾಕಷ್ಟು ಅಸ್ಪಷ್ಟತೆಯಿಂದ ಕೂಡಿದ ಈ ಅನೇಕ ನಿರ್ಬಂಧಗಳನ್ನು ಆಳ್ವಿಕರು ದುರುಪಯೋಗಪಡಿಸುವ ಸಂಭವವಿದೆಯಾದರೂ ಸಂವಿಧಾನ ಅವರಲ್ಲಿ ಕನಿಷ್ಠ ಮಟ್ಟದ ನೈತಿಕತೆಯನ್ನು ನಿರೀಕ್ಷಿಸುತ್ತದೆ. ಈ ನಿರ್ಬಂಧಗಳನ್ನು ಕ್ರಮಬದ್ಧವಾಗಿ ರಚಿಸಲಾದ ಕಾಯ್ದೆಯ ಮೂಲಕ ಮಾತ್ರ ಹೇರಬಹುದಾಗಿದೆ ಹೊರತು ಕಾರ್ಯಾಂಗದ ಮೂಲಕ ಅಲ್ಲ. ಆದರೆ ಇಂದು ಇದು ಎಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದೆ ಎಂದರೆ ನೇರವಾಗಿ ಬಾಯ್ಮುಚ್ಚಿಸುವ ವಿದ್ಯಮಾನಗಳು ನಡೆಯುತ್ತಿವೆ.

ನೀವು ಸರ್ಕಾರದ ಸ್ತುತಿಗೀತೆಗಳನ್ನು ಹಾಡಿದರೆ ಓಕೆ. ಅದು ಬಿಟ್ಟು ಬೇರೆ ಏನನ್ನೆ ಹೇಳಿದರೂ ಪ್ರಾಣಾಪಾಯ ಕಾದಿದೆ. ನಿಮ್ಮ ಮೇಲೆ ರಾಜದ್ರೋಹದಡಿ ಅಥವಾ ಅಸ್ತಿತ್ವದಲ್ಲಿರುವ ಹತ್ತುಹಲವು ಕಠೋರ ಕಾಯ್ದೆಗಳ ಪೈಕಿ ಯಾವುದಾದರೂ ಒಂದರಡಿ ಸುಲಭದಲ್ಲಿ ದೂರು ದಾಖಲಾಗಿ ಫಾಸಿಗೆ ಹಾಕಬಹುದು, ತಪ್ಪಿದಲ್ಲಿ ಜೀವಾವಧಿ ಶಿಕ್ಷೆಯಾಗಬಹುದು. ಅಫ್ಜಲ್ ಗುರುವನ್ನು ಅಥವಾ ಯಾಕುಬ್ ಮೆನನ್‍ನನ್ನು ಗಲ್ಲಿಗೇರಿಸಿದುದರ ವಿರುದ್ಧ ಮಾತನಾಡಿದರೆ ಅಥವಾ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯವರು, ನಂತರ ಜೆಎನ್‍ಯುನ ಎಡಪಂಥೀಯ ವಿದ್ಯಾರ್ಥಿಗಳು ಮಾಡಿದ ಹಾಗೆ ಎಬಿವಿಪಿಯ ಗೂಂಡಾಗಿರಿಯನ್ನು ಪ್ರತಿಭಟಿಸಿದರೆ ರೋಹಿತ್ ವೆಮುಲಾನಿಗೆ ಯಾವ ಅವಸ್ಥೆ ಆಗಿತ್ತೊ ಅದೇ ಸ್ಥಿತಿಯತ್ತ ನೀವೂ ತಳ್ಳಲ್ಪಡಬಹುದು ಅಥವಾ ಕನ್ಹಯ್ಯ ಕುಮಾರ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಒಮಾರ್ ಖಲೀದರ ಹಾಗೆ ಸೆರೆವಾಸ ಅನುಭವಿಸಬೇಕಾಗಿ ಬರಬಹುದು. ರೂಢಿಯ ಕಾಮಗಾರಿಗಳನ್ನು ಗುತ್ತಿಗೆಗೆ ನೀಡುವ ಕಾರ್ಮಿಕವಿರೋಧಿ ನೀತಿಯ ವಿರುದ್ಧ ಮಾತನಾಡಿದರೆ, ಕಂಪೆನಿಯ ಮ್ಯಾನೇಜ್‍ಮೆಂಟನ್ನು ಟೀಕಿಸಿದರೆ ವರ್ಷಗಳ ಕಾಲ ಜೈಲಲ್ಲಿದ್ದು ಈಗ ಜೀವಾವಧಿ ಶಿಕ್ಷೆಗೊಳಗಾದ ಮಾರುತಿ ಸುಜುಕಿ ಕಾರ್ಮಿಕರ ಗತಿಯೆ ನಿಮಗೂ ಬಂದೊದಗಬಹುದು. ಸರ್ಕಾರ ಬಲವಂತವಾಗಿ ಭೂಸ್ವಾಧೀನ ಮಾಡುತ್ತಿರುವುದರ ವಿರುದ್ಧ ಮಾತಾಡಿದರೆ `ಮಾವೊವಾದಿ’ ಹಣೆಪಟ್ಟಿ ನಿಮ್ಮದಾಗಬಹುದು ಅಥವಾ ನಿಮ್ಮನ್ನು ಸೀದಾ ಪರಲೋಕಕ್ಕೆ ರವಾನಿಸಬಹುದು. ಸಮಾಜದಲ್ಲಿ ‘ಅನ್ಯ’ರಾಗಿರುವ ಮುಸ್ಲಿಮರಂತೂ ಹೇಗೂ ದೇಶದ್ರೋಹಿಗಳು, ಭಯೋತ್ಪಾದಕರು. ಬಸ್ತರ್ ಅಥವಾ ನಿಯಾಮಗಿರಿಯ ಆದಿವಾಸಿಗಳು ಪ್ರಭುತ್ವ ಅರಣ್ಯಗಳನ್ನು ಕಾನೂನುಬಾಹಿರವಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವುದರ ವಿರುದ್ಧ ಮಾತಾಡಿದ ಮಾತ್ರಕ್ಕೆ ಪ್ರಭುತ್ವ ಅವರ ಮೇಲೆ ಕುತ್ಸಿತ ಯುದ್ಧ ನಡೆಸುತ್ತದೆ. ಭದ್ರತಾ ಪಡೆಗಳನ್ನು ಛೂಬಿಟ್ಟು ಅವರ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಸಿ ಊನರನ್ನಾಗಿಸುತ್ತದೆ, ಶಿಕ್ಷೆಯ ಭಯವಿಲ್ಲದೆ ಅವರ ಯುವಕರನ್ನು ಕೊಲ್ಲುತ್ತದೆ. ನೀವೇನಾದರೂ ಪ್ರಭುತ್ವವು ಮಾನವಹಕ್ಕು ಕಾರ್ಯಕರ್ತರ ಮೇಲೆ ನಡೆಸುವ ಅನ್ಯಾಯಗಳನ್ನು ವಿರೋಧಿಸಿ ಅವರ ಪರ ನಿಂತಿರಾದರೆ ಡಾ| ಬಿನಾಯಕ್ ಸೆನ್, ಸೋನಿ ಸೋರಿ ಅಥವಾ ಜಿ.ಎನ್. ಸಾಯಿಬಾಬಾರಿಗೆ ಆದ ಗತಿಯೆ ನಿಮಗೂ ಬರಬಹುದು. ಕಳೆದ ಡಿಸೆಂಬರ್‍ನಲ್ಲಿ ಬಸ್ತರ್‍ನಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಸತ್ಯಶೋಧನೆಗಾಗಿ ತೆರಳುತ್ತಿದ್ದ ತೆಲಂಗಾಣ ಪ್ರಜಾತಾಂತ್ರಿಕ ವೇದಿಕೆಯ ಏಳು ಸದಸ್ಯರ ತಂಡವೊಂದನ್ನು ದಾರಿಮಧ್ಯದಲ್ಲೆ ಬಂಧಿಸಲಾಯಿತು. ಜಾಮೀನು ನಿರಾಕರಿಸಲಾಗಿರುವುದರಿಂದ ಅವರಿನ್ನೂ ಸುಕ್ಮಾ ಜೈಲಿನಲ್ಲಿದ್ದಾರೆ. ಇಲ್ಲಿ ಪೊಲೀಸರು ಕಟ್ಟಿದ ಕತೆಯಷ್ಟೆ ಇದೆ ಹೊರತು ಪುರಾವೆಯ ಸಣ್ಣ ಚೂರಾದರೂ ಇಲ್ಲ. ಇವೆಲ್ಲವೂ ಭಿನ್ನ ಭಿನ್ನ ಘಟನೆಗಳಲ್ಲ, ಇಡೀ ದೇಶಕ್ಕೆ ವ್ಯಾಪಿಸಿರುವ ವಿದ್ಯಮಾನಗಳು.

ನಿಜವಾಗಿ ಇದೆಲ್ಲವೂ ನೀವು ಯಾರೊಡನೆ ಮಾತಾಡಬೇಕು, ಏನು ಮಾತಾಡಬೇಕು; ಏನು ತಿನ್ನಬೇಕು, ಎಲ್ಲಿ ತಿನ್ನಬೇಕು; ಯಾವಾಗ ನಿಲ್ಲಬೇಕು, ಯಾವಾಗ ಕೂರಬೇಕು; ಯಾರನ್ನು ಪ್ರೀತಿಸಬೇಕು, ಯಾರನ್ನು ದ್ವೇಷಿಸಬೇಕು ಎಂದು ಪ್ರಭುತ್ವವು ಜನರಿಗೆ ಹೇಳುವಂತಹ ಕುಲಗೆಟ್ಟ ಮಟ್ಟಕ್ಕೆ ಇಳಿದಿದೆ. ನಮ್ಮನ್ನೆಲ್ಲ ಪ್ರಭುತ್ವದ ಸೇವೆಯಲ್ಲಿರುವ ಯಂತ್ರಮಾನವರನ್ನಾಗಿ ಮಾಡಲಾಗಿದೆ. ಜನರಿಗಿಂತಲೂ ಕದನಶೀಲ ದೇಶಭಕ್ತಿಯ ರಾಷ್ಟ್ರೀಯತೆಯನ್ನೆ ಮುಖ್ಯವಾಗಿಸಿದ ಪ್ರಭುತ್ವ ತನ್ನ ಆಜ್ಞೆಗಳ ಅನುಷ್ಠಾನಕ್ಕೆ ಹಿಂದೂತ್ವವಾದಿ ಗ್ಯಾಂಗುಗಳನ್ನು ಛೂಬಿಟ್ಟಿದೆ. ಇದು ಮುಸೊಲಿನಿಯ ಕರಿಷರಟು ಪಡೆ ಮತ್ತು ಹಿಟ್ಲರನ ಕಂದುಷರಟು ಪಡೆಗಳನ್ನು ನೆನಪಿಸುತ್ತದೆ. ಹಿಂದೂತ್ವದ ಮೂಲಪುರುಷರಾದ ಸಾವರ್ಕರ್, ಮೂಂಜೆ, ಗೋಲ್ವಲ್ಕರರು ಮುಸೊಲಿನಿ, ಹಿಟ್ಲರ್‍ರತ್ತ ಆಕರ್ಷಿತರಾಗಿದ್ದರ ಕುರಿತು ರಾಶಿಗಟ್ಟಲೆ ವಿವರಗಳು ಲಭ್ಯವಿವೆ. ಇದರ ಹೊರತಾಗಿಯೂ ಅದರ ಸಂಘಟನಾ ಉಗಮಸ್ಥಾನವಾದ ಆರೆಸ್ಸೆಸ್‍ಗೂ ಇಟೆಲಿಯ ಎಂವಿಎಸ್‍ಎನ್‍ಗೂ ((ಒiಟiziಚಿ ಗಿoಟoಟಿಣಚಿಡಿiಚಿ ಠಿeಡಿ ಟಚಿ Siಛಿuಡಿezzಚಿ ಓಚಿzioಟಿಚಿಟe;ಒಗಿSಓ; “ಗಿoಟuಟಿಣಚಿಡಿಥಿ ಒiಟiಣiಚಿ ಜಿoಡಿ ಓಚಿಣioಟಿಚಿಟ Seಛಿuಡಿiಣಥಿ “; “ರಾಷ್ಟ್ರೀಯ ಭದ್ರತೆಗಾಗಿ ಸ್ವಇಚ್ಛೆಯ ಪ್ರಜಾಸೇನೆ”É) ಹತ್ತಿರದ ಹೋಲಿಕೆಗಳಿರುವುದು ಗಮನಾರ್ಹ. ಮೂಲತಃ ನ್ಯಾಷನಲ್ ಫ್ಯಾಸಿಸ್ಟ್ ಪಕ್ಷದ ಅರೆಸೇನಾ ಪಡೆಯಾಗಿದ್ದ ಈ ಎಂವಿಎಸ್‍ಎನ್ 1923ರ ನಂತರ ಇಟೆಲಿ ಸಾಮ್ರಾಜ್ಯದ ಸ್ವಇಚ್ಛೆಯ ಪ್ರಜಾಸೇನೆಯಾಗಿ ಪರಿಣಮಿಸಿತ್ತು. ಭಾರತದಲ್ಲಿರುವ ನಾವು ಕಳೆದ ಎರಡೂವರೆ ವರ್ಷಗಳಲ್ಲಿ ಫ್ಯಾಸಿಸ್ಟ್ ಆಡಳಿತ ಹೇಗಿರುತ್ತದೆ ಎಂಬುದರ ಮೂಲ ಕಾರ್ಯಮಾದರಿಯನ್ನು ಕಂಡಿರುವೆವು. ಅದು ಹೆಚ್ಚುಕಡಿಮೆ “ಒಂದು ಜನ, ಒಂದು ಸಾಮ್ರಾಜ್ಯ, ಒಬ್ಬ ನಾಯಕ” ಎನ್ನುವುದರ ಮಾದರಿಯಾಗಿದೆ.

ತಾನೊಂದು ಪ್ರಜಾಪ್ರಭುತ್ವ ಅಥವಾ ಇನ್ನೂ ಖಚಿತವಾಗಿ, ವಿಶ್ವದ ಅತಿ ದೊಡ್ಡ ಕಾರ್ಯನಿರತ ಪ್ರಜಾಪ್ರಭುತ್ವ ಎಂದು ಭಾರತ ಹಕ್ಕುಸಾಧಿಸುತ್ತಿರುವುದು ಕೇವಲ ನಿಯಮಿತವಾಗಿ ನಡೆಸಲಾಗುವ ಚುನಾವಣೆಗಳ ಆಧಾರದಲ್ಲಿ. ಸದರಿ ಚುನಾವಣೆಗಳು ಜನರ ಸಂಕಲ್ಪದ ಅಭಿವ್ಯಕ್ತಿಗಿಂತ ಹೆಚ್ಚಾಗಿ ಭಾರಿ ಧನಬಲ ಮತ್ತು ಜನಬಲದೊಂದಿಗೆ ನಡೆಸುವ ವಾಡಿಕೆಯ ಆಚರಣೆಗಳಾಗಿದ್ದರೂ ಅವು ಪ್ರಜಾತಂತ್ರದ ಭ್ರಮೆಯೊಂದನ್ನು ಮುಂದುವರಿಸುತ್ತಾ ಬಂದಿವೆ. ಭಾರಿ ಹೊಗಳಿಕೆಗೆ ಪಾತ್ರವಾದ ನಮ್ಮ ಸಂವಿಧಾನ ಕೊಟ್ಟಿರುವ ಆ ಇಡೀ ಚೌಕಟ್ಟು ವಾಸ್ತವವಾಗಿ ಸ್ಥಳೀಯ ಆಳುವ ವರ್ಗಗಳ ಜನವಿರೋಧಿ ಒಳಸಂಚುಗಳನ್ನು ಹೊರಗೆಡವುತ್ತದೆ. ಭ್ರಮೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ದಮನಿತರ ಉದ್ಧಾರಕನಾದ ಅಂಬೇಡ್ಕರರು ಚೌಕಟ್ಟಿನ ಪ್ರಧಾನ ಕರ್ತೃ ಎಂದು ಬಿಂಬಿಸಲಾಯಿತು. ಸಂವಿಧಾನ ಜಾರಿಗೆ ಬಂದ ಎರಡು ವರ್ಷಗಳಲ್ಲಿ ಆ ಕೋರೈಸುವ ಹೊಗಳಿಕೆಯ ಬೆಳಕಿನಿಂದ ಹೊರಬಂದ ಅಂಬೇಡ್ಕರರು ಅದನ್ನು ಅತ್ಯಂತ ಕಟು ಶಬ್ದಗಳಲ್ಲಿ ನಿರಾಕರಿಸಿದರಾದರೂ ಅದರಿಂದೇನೂ ಉಪಯೋಗವಾಗಿಲ್ಲ. ಸಂವಿಧಾನ ನೀಡಿರುವುದು ಕೇವಲ ರಾಜಕೀಯ ಪ್ರಜಾಸತ್ತೆ; ಪೂರಕವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಸೇರಿಸದಿದ್ದರೆ ರಾಜಕೀಯ ಪ್ರಜಾಸತ್ತೆ ಉಳಿಯದು ಎಂದು ಎಚ್ಚರಿಸಿದರಾದರೂ ಅದು ಕಾರ್ಯಕಾರಿಯಾಗಿಲ್ಲ. ಕಾನೂನುರೀತ್ಯಾ ಪ್ರಜಾಪ್ರಭುತ್ವವು ಕಾರ್ಯತಃ ಯಾವತ್ತಿಗೂ ಶ್ರೀಮಂತರ ಪ್ರಭುತ್ವವಾಗಿದೆ. ಅದು ವ್ಯವಸ್ಥಿತ, ಕೇಂದ್ರೀಕೃತ, ನಿರಂಕುಶ ಅಧಿಕಾರದ ಪ್ರಜಾಪ್ರಭುತ್ವವಾಗಿ ಮಾರ್ಪಾಡಾಗಲು ಸ್ವಲ್ಪ ಸಮಯ ಬೇಕಿತ್ತು ಅಷ್ಟೆ. ಫ್ಯಾಸಿಸಂ ಅಂದರೆ ಇದೇ – ವ್ಯವಸ್ಥಿತ, ಕೇಂದ್ರೀಕೃತ, ನಿರಂಕುಶ ಅಧಿಕಾರದ ಪ್ರಜಾಪ್ರಭುತ್ವ. ಬೇಸರದ ಸಂಗತಿ ಏನೆಂದರೆ ತಲೆಬರಹದಲ್ಲಿರುವ ವಿರೋಧಾಭಾಸ ಭಾರತದ ನೈಜಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...