Homeಅಂಕಣಗಳು'ಭಾರತ್ ಸೇವಕ್’ ಸಮಾಜ ಮತ್ತು ನಾನು

‘ಭಾರತ್ ಸೇವಕ್’ ಸಮಾಜ ಮತ್ತು ನಾನು

- Advertisement -
- Advertisement -

1952ರಲ್ಲಿ ನಾನು ಭಾರತ ಸೇವಕ ಸಮಾಜದ ಸಂಚಾಲಕನಾದೆ. ಭಾರತ ಸೇವಕ ಸಮಾಜ ಜವಾಹರ ಲಾಲರ ಕನಸಿನ ಕೂಸು. ಭಾರತ ಸೇವಕ ಸಮಾಜ ಬಡವರ, ದಲಿತರ, ಶೋಷಣೆಗೊಳಗಾದವರ ಸಲುವಾಗಿ ಕೆಲಸ ಮಾಡುವ ಸೇವಾ ಸಂಸ್ಥೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ನುರಿತ ಸಮಾಜ ಸೇವಕರು ತಮ್ಮದೇ ರೀತಿಯಲ್ಲಿ ಪ್ರಯೋಗಾರ್ಥವಾಗಿ ಸಮಾಜದ ಉಪೇಕ್ಷೆಗೊಳಗಾದವರ ಒಳಿತಿಗಾಗಿ ಪ್ರಯೋಗಗಳನ್ನು ನಡೆಸತಕ್ಕ ಜವಾಬ್ದಾರಿ ಸಂಚಾಲಕರ ಮೇಲಿತ್ತು. ಇವರು ಕೈಗೊಂಡ ಪ್ರಯೋಗಗಳು ಪೂರ್ಣ ಫಲ ನೀಡಿದರೆ ಅಂತಹ ಪ್ರಯೋಗಗಳನ್ನು ಪೈಲಟ್ ಪ್ರಾಜೆಕ್ಟ್ ಎಂದು ಭಾರತ ಸರ್ಕಾರ ಅಂಗೀಕರಿಸಿ ಆ ಪ್ರಯೋಗಗಳನ್ನು ದೇಶಾದ್ಯಂತ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತು. ಭಾರತ ಸೇವಕ ಸಮಾಜ ಪರಿಣಾಮಕಾರಿಯಾಗಿ ಪ್ರಯೋಗಗಳನ್ನು ಕೊಡಬೇಕೆಂಬುದು ಸರ್ಕಾರದ ಆಶಯವಾಗಿತ್ತು. ಪ್ರಧಾನಿ ಜವಹರಲಾಲ್ ನೆಹರುರವರು ಭಾರತ ಸೇವಕ ಸಮಾಜದ ರಾಷ್ಟ್ರಾಧ್ಯಕ್ಷರಾಗಿದ್ದರು. ಸಚಿವ ಗುಲ್ಚಾರಿಲಾಲ್ ನಂದ ಅದರ ಕಾರ್ಯಾಧ್ಯಕ್ಷರಾಗಿದ್ದರು.
ಮೈಸೂರು ಸಂಸ್ಥಾನದ ಘಟಕಕ್ಕೆ ಸಂಚಾಲಕನಾದ ಮೇಲೆ ನಾನು ಎರಡು ಕೊಳಗೇರಿಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡತೊಡಗಿದೆ. ಅವುಗಳೆಂದರೆ ಬೆಂಗಳೂರು ವಿಜಯ ಕಾಲೇಜ್ ಹಿಂಭಾಗದಲ್ಲಿರುವ ದಾಸರ ಕಾಲೋನಿ ಹಾಗೂ ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿ ನಗರ. ಜಯನಗರದ ದಾಸರ ಕಾಲೋನಿ ಬಹಳ ಹಳೆಯ ಕೊಳೆಗೇರಿ. ಅಲ್ಲಿನ ನಿವಾಸಿಗಳು ಬ್ರಿಟಿಷ್ ಸೈನ್ಯದ ಕುದುರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಅವರದು 23 ಗುಡಿಸಲುಗಳು ಇದ್ದವು. ಆ ಕೊಳೆಗೇರಿಯ ಸ್ವಚ್ಛತಾ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಗ ವಿದ್ಯಾರ್ಥಿಗಳಾಗಿದ್ದ ಎಂ.ಆರ್.ದೊರೆಸ್ವಾಮಿ, ಮುಂದೆ ಶಾಸಕರಾದ ವಕೀಲ ಸುಬ್ಬಾರೆಡ್ಡಿ ಮುಂತಾದವರು ತೊಡಗಿಸಿಕೊಳ್ಳುತ್ತಿದ್ದರು. ಜಯನಗರ ಆ ಹೊತ್ತಿಗೆ ಉತ್ತಮ ಬಡಾವಣೆಯಾಗಿ ರೂಪಿತವಾಗಿತ್ತು. ಉನ್ನತಾಧಿಕಾರಿಗಳು, ಪ್ರತಿಷ್ಟಿತ ವ್ಯಕ್ತಿಗಳು ಸುಸಜ್ಜಿತ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರಿಗೆ ಈ ಕೊಳೆಗೇರಿ ಅಲ್ಲಿರುವುದು ಸರಿಕಾಣಲಿಲ್ಲ. ದಾಸರ ಕಾಲೋನಿ ಖಾಲಿಮಾಡಿಸಿ, ಅಲ್ಲಿದ್ದವರನ್ನು ಓಡಿಸಿಬಿಡುವ ಪ್ರಯತ್ನದಲ್ಲಿದ್ದರು. ಈ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಯೇ ಉಳಿಸಿ ಅವರ ಜೀವನ ಶೈಲಿ ಬದಲಾಯಿಸಲಿಕ್ಕಾಗಿ ಗುಡಿಸಲುಗಳನ್ನು ತೆಗೆದು ಮನೆಗಳನ್ನು ಕಟ್ಟಿಸಿಕೊಡುವ ತೀರ್ಮಾನ ತೆಗೆದುಕೊಂಡೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಆಗ ದೀನದಯಾಳು ನಾಯ್ಡು ಛೇರ್‍ಮನ್ ಆಗಿದ್ದರು. ಅವರು ಬೆಂಗಳೂರು ನಗರ ಮೇಯರ್ ಆಗಿದ್ದವರು. ಅವರು ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದ್ದರು.
ಅವರ ಮುಖಾಂತರ ದಾಸರ ಕಾಲೋನಿಯ ಗುಡಿಸಲುಗಳನ್ನು ತೆರವುಗೊಳಿಸಿ ಅಲ್ಲಿ ಮನೆಗಳನ್ನು ಕಟ್ಡಿಕೊಡಲು ವಿನಂತಿ ಮಾಡಿಕೊಂಡೆ. ದೀನ ದಯಾಳು ನಾಯ್ಡು ಈ ನನ್ನ ಸಲಹೆಗೆ ಒಪ್ಪಿದರು. ದಾಸರ ಕಾಲೋನಿ ವಾಸಿಗಳು ತಾವೇ ಗುಡಿಸಲುಗಳನ್ನು ತೆಗೆದು ಜಾಗ ಖಾಲಿ ಮಾಡಿಕೊಟ್ಟರು. 23 ಮನೆಗಳನ್ನು ಕಟ್ಟಲಾಯಿತು. ಪ್ರತಿ ಮನೆಗೂ ಒಂದು ಮಲಗುವ ಕೋಣೆ, ಒಂದು ಹಜಾರೆ, ಒಂದು ಅಡುಗೆ ಕೋಣೆಯನ್ನೊಳಗೊಂಡ ಮನೆಗಳು ತಯಾರಾದವು. ಆ ಮನೆಗಳನ್ನು ಕಟ್ಟಿ ಇಲ್ಲಿಗೆ 50 ವರ್ಷಗಳಾಗಿವೆ. ಈಗ ದಾಸರ ಕಾಲೋನಿಯ ಮಕ್ಕಳೆಲ್ಲ ಓದಿ ಮುಂದಕ್ಕೆ ಬಂದಿದ್ದಾರೆ. ಅನೇಕರು ಫ್ಯಾಕ್ಟರಿಗಳಲ್ಲಿ, ಖಾಸಗಿ ಉದ್ಯಮಿಗಳ ಬಳಿ ಕೆಲಸ ಮಾಡುತ್ತಾರೆ. ದಾಸರ ಕಾಲೋನಿಯ ಜನರಿಗೆ ಒಂದು ರೀತಿಯಲ್ಲಿ ಶಾಪವಿಮೋಚನೆ ಆಗಿದೆ. ಕೊಳಗೇರಿಯನ್ನು ಕಾಲಿ ಮಾಡಿಸಲು ತುದಿಗಾಲಲ್ಲಿ ನಿಂತಿದ್ದ ಸಭ್ಯಸ್ಥರಿಗೂ ಅಲ್ಪಸ್ವಲ್ಪ ಸಮಾಧಾನವಾಗಿರಬಹುದು.
ವಾಲ್ಮೀಕಿ ನಗರ ಒಂದು ಹರಿಜನ ಕಾಲೋನಿ. ಸಂಪಂಗಿರಾಮ ನಗರದ ಕಡೆ ಇದ್ದ ಜನರನ್ನು ಬೆಂಗಳೂರು ಬೆಳೆದಂತೆ ದೂಡುತ್ತಾ ಮೈಸೂರು ರೋಡಿಗೆ ತಂದು ದಬ್ಬಿದ್ದರು. ಇಲ್ಲಿನ ಬಹುತೇಕರು ಬೂಟು, ಚಪ್ಪಲಿ ತಯಾರಿಸುವುದರಲ್ಲಿ ಪರಿಣಿತರಿದ್ದರು. ಆ ಏರಿಯಾದಲ್ಲಿ ಒಂದು ಚಪ್ಪಲಿ ಉದ್ಯಮವನ್ನು ನೊಂದಾವಣೆ ಮಾಡಿಸಿ, ಒಂದು ಕಾರ್ಯಾಗಾರ ಕಟ್ಟಿಸಿದೆ. ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ನಿಗಮದಿಂದ 2 ಲಕ್ಷ ರೂಪಾಯಿ ಸಹಾಯಧನ ದೊರಕಿತು. 40 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚಿಗೆ ಮಜೂರಿ ಕೊಡಲಾಯಿತು. ಬಂದ ಕಾಸಿನಿಂದ ಹೋಲ್‍ಸೇಲ್‍ದರದಲ್ಲಿ ಚರ್ಮವನ್ನು ಖರೀದಿಸಲಾಯಿತು. ಕೆಲವು ಯಂತ್ರ ಸಾಮಗ್ರಿಗಳನ್ನೂ ಕೊಳ್ಳಲಾಯಿತು. ಅವರು ತಯಾರಿಸುವ ಬೂಟ್‍ಗೆ ‘ಭಾರತ್ ಸೇವಕ್’ ಎಂದು ನಾಮಕರಣ ಮಾಡಲಾಯಿತು. ಕೆಲಸ ಬಿರುಸಿನಿಂದ ನಡೆಯಿತು. ಶೂ ಅಂಗಡಿಯವರು ಬೂಟು ಚಪ್ಪಲಿಗಳನ್ನು ಹೋಲ್‍ಸೇಲ್ ದರದಲ್ಲಿ ಕೊಂಡುಕೊಳ್ಳುತ್ತಿದ್ದರು.
ಈ ಮಧ್ಯೆ ಒಂದು ಸಮಸ್ಯೆ ಎದುರಾಯಿತು. ಶನಿವಾರ ಕಾರ್ಮಿಕರಿಗೆ ವಾರದ ಬಟವಾಡೆ ಮಾಡಿದರೆ ಅವರು ಸೋಮವಾರ, ಮಂಗಳವಾರ ಕೆಲಸಕ್ಕೆ ಗೈರುಹಾಜರಾಗುತ್ತಿದ್ದರು. ಪಡೆದ ಹಣದ ಬಹುಭಾಗ ಅವರ ಕುಡಿತಕ್ಕೆ ಹೋಗುತ್ತಿತ್ತು. ಇದನ್ನು ಗಮನಿಸಿ ಕೆಲಸಗಾರರಿಗೆ ಶನಿವಾರ 15ರೂ ಕೊಡುವುದು, ಉಳಿದ ಹಣಕ್ಕೆ ಅವರ ಮನೆಗೆ ಬೇಕಾದಷ್ಟು ರೇಷನ್, ಅಕ್ಕಿ, ರಾಗಿ, ನುಚ್ಚು ಹಾಗೂ ಇತರ ಪರಿಗಳನ್ನು ಹೋಲ್‍ಸೇಲ್‍ನಲ್ಲಿ ಕೊಂಡು ತಂದು ಅವರ ಮನೆಗಳಿಗೆ ತಂದು ಹಾಕುವುದೆಂದು ನಿರ್ಧರಿಸಿದೆವು. ಈ ಏರ್ಪಾಡಿನಿಂದ ಅವರ ಮನೆಮಂದಿಗೆ ಊಟ ಸಿಗೋದು ಖಾತ್ರಿಯಾಯ್ತು. ಕೆಲಸಗಾರರು ತಪ್ಪಿಸಿಕೊಳ್ಳದೆ ಪ್ರತಿದಿನವೂ ಕೆಲಸಕ್ಕೆ ಬರುವಂತಾಯಿತು. ಆಗಾಗ ನಾವು ಅವರ ಮನೆಗಳಿಗೆ ಹೋಗಿ ಕೊಡಿಸಿದ್ದ ರೇಷನ್ ಇದೆಯೋ, ಇಲ್ಲ ಮಾರಿಹಾಕಿಬಿಟ್ಟಿದ್ದಾರೆಯೋ ಎಂದು ತನಿಖೆ ನಡೆಸುತ್ತಿದ್ದೆವು.
ಇದಲ್ಲದೆ ಕೊಳಚೆಯಿಂದ ಕೂಡಿದ್ದ ಈ ಸ್ಲಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಅಲ್ಲಿಯ ಯುವಕರ ತಂಡವೊಂದನ್ನು ರಚಿಸಿದೆ. ಸಣ್ಣ ಮಕ್ಕಳಿಗಾಗಿ ಒಂದು ಕ್ರಷ್, 3 ರಿಂದ 5 ವರ್ಷದ ಮಕ್ಕಳಿಗೆ ಒಂದು ನರ್ಸರಿ ಸ್ಥಾಪಿಸಲಾಯಿತು. ಈ ಮಕ್ಕಳಿಗೆಲ್ಲಾ ಹಾಲು, ಹಣ್ಣಿನ ರಸ ಹಂಚುವ ವ್ಯವಸ್ಥೆಯಾಯಿತು. ಕೇರಿಯ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕೆಂದು ಒತ್ತಾಯ ತಂದ ಕಾರಣದಿಂದಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿತು. ಸ್ಲಂನಲ್ಲಿ ಜಗಳವಾದರೆ ಇದನ್ನು ಪರಿಹರಿಸಲು ಊರಿನ ಯಜಮಾನರ ತಂಡವಿತ್ತು. ಇವರು ವಿಚಾರಣೆ ನಡೆಸಿ ಎರಡೂ ಬಣದವರಿಗೂ ಜುಲ್ಮಾನೆ ಹಾಕಿ ಬಂದ ಹಣವನ್ನು ಕುಡಿಯಲು ಬಳಸುತ್ತಿದ್ದರು. ಅದನ್ನೂ ತಪ್ಪಿಸಿ, ಊರಿನ ಎಲ್ಲರ ಸಭೆ ಕರೆದು ಅವರೆದುರಿನಲ್ಲಿ ವ್ಯಾಜ್ಯಗಳನ್ನು ಪರಿಹರಿಸಲು ಆರಂಭಮಾಡಿದೆ. ಕಾಲಕ್ರಮೇಣ ಜಗಳ, ಕದನಗಳು ನಿಂತುಹೋದವು.
ಸ್ಲಂನಲ್ಲಿ ಕೊಳೆತ ಹಣ್ಣುಗಳು, ಕೊಳೆತ ತರಕಾರಿಗಳನ್ನು ಮಾರಲಾಗುತ್ತಿತ್ತು. ಅವನ್ನು ತಪ್ಪಿಸಿ, ತಾಜಾ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ಹೀಗೆ ನನಗೆ ಸಾಮಾಜಿಕ ಜವಾಬ್ದಾರಿಗಳು ಹೆಚ್ಚುತ್ತಿದ್ದಂತೆ, ಹಣಕಾಸಿನ ವಹಿವಾಟು ನೋಡಿಕೊಳ್ಳಲು ಮ್ಯಾಸ್ಕರ್‍ನಾಸ್ ಎಂಬ ಸಜ್ಜನರನ್ನು ವಿನಂತಿಸಿಕೊಂಡೆ. ಅವರು ಚಾಮರಾಜಪೇಟೆಯಿಂದ ಅಸೆಂಬ್ಲಿ ಸದಸ್ಯರಾಗಿದ್ದವರು. ಎಲ್ಲವೂ ಸುಗಮವಾಗಿ ನಡೆಯಲು ಈ ಏರ್ಪಾಟು ನೆರವಿಗೆ ಬಂದಿತು.
ಇದೆಲ್ಲಾ ನಡೆದು 50 ವರ್ಷಗಳಾಗಿವೆ. ದುಶ್ಚಟಗಳು ಗಣನೀಯವಾಗಿ ಇಳಿಮುಖವಾಗಿದ್ದವು. ಈಗ ವಾಲ್ಮೀಕಿ ನಗರದ ನಿವಾಸಿಗಳು ಆರ್ಥಿಕವಾಗಿ ಸುಧಾರಿಸಿದ್ದಾರೆ. ಕಲಿತ ಯುವಕ-ಯುವತಿಯರ ಸಂಖ್ಯೆ ಗಣನೀಯವಾಗಿದೆ. ಡಿಪ್ಲೊಮಾ, ಡಿಗ್ರಿಗಳನ್ನು ಪಡೆದಿದ್ದಾರೆ. ಅಂದು ನಾನು ಮಾಡಿದ ಸೇವೆ ಒಳ್ಳೆಯ ಫಲವನ್ನು ಕೊಟ್ಟಿದೆ ಎಂಬ ಸಮಾಧಾನ ನನಗಿದೆ.
ಸ್ವಾರ್ಥ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿಯಾಗಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜದಿಂದ ಉತ್ತಮ ಸ್ಪಂದನೆ ಸಿಗುತ್ತದೆ ಎಂಬುದಕ್ಕೆ ಇವು ನಿದರ್ಶನ ಎನ್ನಬಹುದು. ರಚನಾತ್ಮಕ ಧೋರಣೆಯಿಂದ, ಸೇವಾ ಭಾವದಿಂದ ಕಾರ್ಯೋನ್ಮುಖರಾಗುವ ಯುವಕ-ಯುವತಿಯರ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿಯೇ ಇದೆ. ಇದು ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯ ಎಂಬುದನ್ನು ಇಂದಿನ ಪೀಳಿಗೆ ಮನಗಾಣುತ್ತದೆ ಎಂಬ ಆಶಾಭಾವ ನನ್ನದು.

 

– ಹೆಚ್.ಎಸ್.ದೊರೆಸಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...