Homeಅಂಕಣಗಳು'ಭಾರತ್ ಸೇವಕ್’ ಸಮಾಜ ಮತ್ತು ನಾನು

‘ಭಾರತ್ ಸೇವಕ್’ ಸಮಾಜ ಮತ್ತು ನಾನು

- Advertisement -
- Advertisement -

1952ರಲ್ಲಿ ನಾನು ಭಾರತ ಸೇವಕ ಸಮಾಜದ ಸಂಚಾಲಕನಾದೆ. ಭಾರತ ಸೇವಕ ಸಮಾಜ ಜವಾಹರ ಲಾಲರ ಕನಸಿನ ಕೂಸು. ಭಾರತ ಸೇವಕ ಸಮಾಜ ಬಡವರ, ದಲಿತರ, ಶೋಷಣೆಗೊಳಗಾದವರ ಸಲುವಾಗಿ ಕೆಲಸ ಮಾಡುವ ಸೇವಾ ಸಂಸ್ಥೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ನುರಿತ ಸಮಾಜ ಸೇವಕರು ತಮ್ಮದೇ ರೀತಿಯಲ್ಲಿ ಪ್ರಯೋಗಾರ್ಥವಾಗಿ ಸಮಾಜದ ಉಪೇಕ್ಷೆಗೊಳಗಾದವರ ಒಳಿತಿಗಾಗಿ ಪ್ರಯೋಗಗಳನ್ನು ನಡೆಸತಕ್ಕ ಜವಾಬ್ದಾರಿ ಸಂಚಾಲಕರ ಮೇಲಿತ್ತು. ಇವರು ಕೈಗೊಂಡ ಪ್ರಯೋಗಗಳು ಪೂರ್ಣ ಫಲ ನೀಡಿದರೆ ಅಂತಹ ಪ್ರಯೋಗಗಳನ್ನು ಪೈಲಟ್ ಪ್ರಾಜೆಕ್ಟ್ ಎಂದು ಭಾರತ ಸರ್ಕಾರ ಅಂಗೀಕರಿಸಿ ಆ ಪ್ರಯೋಗಗಳನ್ನು ದೇಶಾದ್ಯಂತ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತು. ಭಾರತ ಸೇವಕ ಸಮಾಜ ಪರಿಣಾಮಕಾರಿಯಾಗಿ ಪ್ರಯೋಗಗಳನ್ನು ಕೊಡಬೇಕೆಂಬುದು ಸರ್ಕಾರದ ಆಶಯವಾಗಿತ್ತು. ಪ್ರಧಾನಿ ಜವಹರಲಾಲ್ ನೆಹರುರವರು ಭಾರತ ಸೇವಕ ಸಮಾಜದ ರಾಷ್ಟ್ರಾಧ್ಯಕ್ಷರಾಗಿದ್ದರು. ಸಚಿವ ಗುಲ್ಚಾರಿಲಾಲ್ ನಂದ ಅದರ ಕಾರ್ಯಾಧ್ಯಕ್ಷರಾಗಿದ್ದರು.
ಮೈಸೂರು ಸಂಸ್ಥಾನದ ಘಟಕಕ್ಕೆ ಸಂಚಾಲಕನಾದ ಮೇಲೆ ನಾನು ಎರಡು ಕೊಳಗೇರಿಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡತೊಡಗಿದೆ. ಅವುಗಳೆಂದರೆ ಬೆಂಗಳೂರು ವಿಜಯ ಕಾಲೇಜ್ ಹಿಂಭಾಗದಲ್ಲಿರುವ ದಾಸರ ಕಾಲೋನಿ ಹಾಗೂ ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿ ನಗರ. ಜಯನಗರದ ದಾಸರ ಕಾಲೋನಿ ಬಹಳ ಹಳೆಯ ಕೊಳೆಗೇರಿ. ಅಲ್ಲಿನ ನಿವಾಸಿಗಳು ಬ್ರಿಟಿಷ್ ಸೈನ್ಯದ ಕುದುರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಅವರದು 23 ಗುಡಿಸಲುಗಳು ಇದ್ದವು. ಆ ಕೊಳೆಗೇರಿಯ ಸ್ವಚ್ಛತಾ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಗ ವಿದ್ಯಾರ್ಥಿಗಳಾಗಿದ್ದ ಎಂ.ಆರ್.ದೊರೆಸ್ವಾಮಿ, ಮುಂದೆ ಶಾಸಕರಾದ ವಕೀಲ ಸುಬ್ಬಾರೆಡ್ಡಿ ಮುಂತಾದವರು ತೊಡಗಿಸಿಕೊಳ್ಳುತ್ತಿದ್ದರು. ಜಯನಗರ ಆ ಹೊತ್ತಿಗೆ ಉತ್ತಮ ಬಡಾವಣೆಯಾಗಿ ರೂಪಿತವಾಗಿತ್ತು. ಉನ್ನತಾಧಿಕಾರಿಗಳು, ಪ್ರತಿಷ್ಟಿತ ವ್ಯಕ್ತಿಗಳು ಸುಸಜ್ಜಿತ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರಿಗೆ ಈ ಕೊಳೆಗೇರಿ ಅಲ್ಲಿರುವುದು ಸರಿಕಾಣಲಿಲ್ಲ. ದಾಸರ ಕಾಲೋನಿ ಖಾಲಿಮಾಡಿಸಿ, ಅಲ್ಲಿದ್ದವರನ್ನು ಓಡಿಸಿಬಿಡುವ ಪ್ರಯತ್ನದಲ್ಲಿದ್ದರು. ಈ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಯೇ ಉಳಿಸಿ ಅವರ ಜೀವನ ಶೈಲಿ ಬದಲಾಯಿಸಲಿಕ್ಕಾಗಿ ಗುಡಿಸಲುಗಳನ್ನು ತೆಗೆದು ಮನೆಗಳನ್ನು ಕಟ್ಟಿಸಿಕೊಡುವ ತೀರ್ಮಾನ ತೆಗೆದುಕೊಂಡೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಆಗ ದೀನದಯಾಳು ನಾಯ್ಡು ಛೇರ್‍ಮನ್ ಆಗಿದ್ದರು. ಅವರು ಬೆಂಗಳೂರು ನಗರ ಮೇಯರ್ ಆಗಿದ್ದವರು. ಅವರು ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದ್ದರು.
ಅವರ ಮುಖಾಂತರ ದಾಸರ ಕಾಲೋನಿಯ ಗುಡಿಸಲುಗಳನ್ನು ತೆರವುಗೊಳಿಸಿ ಅಲ್ಲಿ ಮನೆಗಳನ್ನು ಕಟ್ಡಿಕೊಡಲು ವಿನಂತಿ ಮಾಡಿಕೊಂಡೆ. ದೀನ ದಯಾಳು ನಾಯ್ಡು ಈ ನನ್ನ ಸಲಹೆಗೆ ಒಪ್ಪಿದರು. ದಾಸರ ಕಾಲೋನಿ ವಾಸಿಗಳು ತಾವೇ ಗುಡಿಸಲುಗಳನ್ನು ತೆಗೆದು ಜಾಗ ಖಾಲಿ ಮಾಡಿಕೊಟ್ಟರು. 23 ಮನೆಗಳನ್ನು ಕಟ್ಟಲಾಯಿತು. ಪ್ರತಿ ಮನೆಗೂ ಒಂದು ಮಲಗುವ ಕೋಣೆ, ಒಂದು ಹಜಾರೆ, ಒಂದು ಅಡುಗೆ ಕೋಣೆಯನ್ನೊಳಗೊಂಡ ಮನೆಗಳು ತಯಾರಾದವು. ಆ ಮನೆಗಳನ್ನು ಕಟ್ಟಿ ಇಲ್ಲಿಗೆ 50 ವರ್ಷಗಳಾಗಿವೆ. ಈಗ ದಾಸರ ಕಾಲೋನಿಯ ಮಕ್ಕಳೆಲ್ಲ ಓದಿ ಮುಂದಕ್ಕೆ ಬಂದಿದ್ದಾರೆ. ಅನೇಕರು ಫ್ಯಾಕ್ಟರಿಗಳಲ್ಲಿ, ಖಾಸಗಿ ಉದ್ಯಮಿಗಳ ಬಳಿ ಕೆಲಸ ಮಾಡುತ್ತಾರೆ. ದಾಸರ ಕಾಲೋನಿಯ ಜನರಿಗೆ ಒಂದು ರೀತಿಯಲ್ಲಿ ಶಾಪವಿಮೋಚನೆ ಆಗಿದೆ. ಕೊಳಗೇರಿಯನ್ನು ಕಾಲಿ ಮಾಡಿಸಲು ತುದಿಗಾಲಲ್ಲಿ ನಿಂತಿದ್ದ ಸಭ್ಯಸ್ಥರಿಗೂ ಅಲ್ಪಸ್ವಲ್ಪ ಸಮಾಧಾನವಾಗಿರಬಹುದು.
ವಾಲ್ಮೀಕಿ ನಗರ ಒಂದು ಹರಿಜನ ಕಾಲೋನಿ. ಸಂಪಂಗಿರಾಮ ನಗರದ ಕಡೆ ಇದ್ದ ಜನರನ್ನು ಬೆಂಗಳೂರು ಬೆಳೆದಂತೆ ದೂಡುತ್ತಾ ಮೈಸೂರು ರೋಡಿಗೆ ತಂದು ದಬ್ಬಿದ್ದರು. ಇಲ್ಲಿನ ಬಹುತೇಕರು ಬೂಟು, ಚಪ್ಪಲಿ ತಯಾರಿಸುವುದರಲ್ಲಿ ಪರಿಣಿತರಿದ್ದರು. ಆ ಏರಿಯಾದಲ್ಲಿ ಒಂದು ಚಪ್ಪಲಿ ಉದ್ಯಮವನ್ನು ನೊಂದಾವಣೆ ಮಾಡಿಸಿ, ಒಂದು ಕಾರ್ಯಾಗಾರ ಕಟ್ಟಿಸಿದೆ. ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ನಿಗಮದಿಂದ 2 ಲಕ್ಷ ರೂಪಾಯಿ ಸಹಾಯಧನ ದೊರಕಿತು. 40 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚಿಗೆ ಮಜೂರಿ ಕೊಡಲಾಯಿತು. ಬಂದ ಕಾಸಿನಿಂದ ಹೋಲ್‍ಸೇಲ್‍ದರದಲ್ಲಿ ಚರ್ಮವನ್ನು ಖರೀದಿಸಲಾಯಿತು. ಕೆಲವು ಯಂತ್ರ ಸಾಮಗ್ರಿಗಳನ್ನೂ ಕೊಳ್ಳಲಾಯಿತು. ಅವರು ತಯಾರಿಸುವ ಬೂಟ್‍ಗೆ ‘ಭಾರತ್ ಸೇವಕ್’ ಎಂದು ನಾಮಕರಣ ಮಾಡಲಾಯಿತು. ಕೆಲಸ ಬಿರುಸಿನಿಂದ ನಡೆಯಿತು. ಶೂ ಅಂಗಡಿಯವರು ಬೂಟು ಚಪ್ಪಲಿಗಳನ್ನು ಹೋಲ್‍ಸೇಲ್ ದರದಲ್ಲಿ ಕೊಂಡುಕೊಳ್ಳುತ್ತಿದ್ದರು.
ಈ ಮಧ್ಯೆ ಒಂದು ಸಮಸ್ಯೆ ಎದುರಾಯಿತು. ಶನಿವಾರ ಕಾರ್ಮಿಕರಿಗೆ ವಾರದ ಬಟವಾಡೆ ಮಾಡಿದರೆ ಅವರು ಸೋಮವಾರ, ಮಂಗಳವಾರ ಕೆಲಸಕ್ಕೆ ಗೈರುಹಾಜರಾಗುತ್ತಿದ್ದರು. ಪಡೆದ ಹಣದ ಬಹುಭಾಗ ಅವರ ಕುಡಿತಕ್ಕೆ ಹೋಗುತ್ತಿತ್ತು. ಇದನ್ನು ಗಮನಿಸಿ ಕೆಲಸಗಾರರಿಗೆ ಶನಿವಾರ 15ರೂ ಕೊಡುವುದು, ಉಳಿದ ಹಣಕ್ಕೆ ಅವರ ಮನೆಗೆ ಬೇಕಾದಷ್ಟು ರೇಷನ್, ಅಕ್ಕಿ, ರಾಗಿ, ನುಚ್ಚು ಹಾಗೂ ಇತರ ಪರಿಗಳನ್ನು ಹೋಲ್‍ಸೇಲ್‍ನಲ್ಲಿ ಕೊಂಡು ತಂದು ಅವರ ಮನೆಗಳಿಗೆ ತಂದು ಹಾಕುವುದೆಂದು ನಿರ್ಧರಿಸಿದೆವು. ಈ ಏರ್ಪಾಡಿನಿಂದ ಅವರ ಮನೆಮಂದಿಗೆ ಊಟ ಸಿಗೋದು ಖಾತ್ರಿಯಾಯ್ತು. ಕೆಲಸಗಾರರು ತಪ್ಪಿಸಿಕೊಳ್ಳದೆ ಪ್ರತಿದಿನವೂ ಕೆಲಸಕ್ಕೆ ಬರುವಂತಾಯಿತು. ಆಗಾಗ ನಾವು ಅವರ ಮನೆಗಳಿಗೆ ಹೋಗಿ ಕೊಡಿಸಿದ್ದ ರೇಷನ್ ಇದೆಯೋ, ಇಲ್ಲ ಮಾರಿಹಾಕಿಬಿಟ್ಟಿದ್ದಾರೆಯೋ ಎಂದು ತನಿಖೆ ನಡೆಸುತ್ತಿದ್ದೆವು.
ಇದಲ್ಲದೆ ಕೊಳಚೆಯಿಂದ ಕೂಡಿದ್ದ ಈ ಸ್ಲಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಅಲ್ಲಿಯ ಯುವಕರ ತಂಡವೊಂದನ್ನು ರಚಿಸಿದೆ. ಸಣ್ಣ ಮಕ್ಕಳಿಗಾಗಿ ಒಂದು ಕ್ರಷ್, 3 ರಿಂದ 5 ವರ್ಷದ ಮಕ್ಕಳಿಗೆ ಒಂದು ನರ್ಸರಿ ಸ್ಥಾಪಿಸಲಾಯಿತು. ಈ ಮಕ್ಕಳಿಗೆಲ್ಲಾ ಹಾಲು, ಹಣ್ಣಿನ ರಸ ಹಂಚುವ ವ್ಯವಸ್ಥೆಯಾಯಿತು. ಕೇರಿಯ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕೆಂದು ಒತ್ತಾಯ ತಂದ ಕಾರಣದಿಂದಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿತು. ಸ್ಲಂನಲ್ಲಿ ಜಗಳವಾದರೆ ಇದನ್ನು ಪರಿಹರಿಸಲು ಊರಿನ ಯಜಮಾನರ ತಂಡವಿತ್ತು. ಇವರು ವಿಚಾರಣೆ ನಡೆಸಿ ಎರಡೂ ಬಣದವರಿಗೂ ಜುಲ್ಮಾನೆ ಹಾಕಿ ಬಂದ ಹಣವನ್ನು ಕುಡಿಯಲು ಬಳಸುತ್ತಿದ್ದರು. ಅದನ್ನೂ ತಪ್ಪಿಸಿ, ಊರಿನ ಎಲ್ಲರ ಸಭೆ ಕರೆದು ಅವರೆದುರಿನಲ್ಲಿ ವ್ಯಾಜ್ಯಗಳನ್ನು ಪರಿಹರಿಸಲು ಆರಂಭಮಾಡಿದೆ. ಕಾಲಕ್ರಮೇಣ ಜಗಳ, ಕದನಗಳು ನಿಂತುಹೋದವು.
ಸ್ಲಂನಲ್ಲಿ ಕೊಳೆತ ಹಣ್ಣುಗಳು, ಕೊಳೆತ ತರಕಾರಿಗಳನ್ನು ಮಾರಲಾಗುತ್ತಿತ್ತು. ಅವನ್ನು ತಪ್ಪಿಸಿ, ತಾಜಾ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ಹೀಗೆ ನನಗೆ ಸಾಮಾಜಿಕ ಜವಾಬ್ದಾರಿಗಳು ಹೆಚ್ಚುತ್ತಿದ್ದಂತೆ, ಹಣಕಾಸಿನ ವಹಿವಾಟು ನೋಡಿಕೊಳ್ಳಲು ಮ್ಯಾಸ್ಕರ್‍ನಾಸ್ ಎಂಬ ಸಜ್ಜನರನ್ನು ವಿನಂತಿಸಿಕೊಂಡೆ. ಅವರು ಚಾಮರಾಜಪೇಟೆಯಿಂದ ಅಸೆಂಬ್ಲಿ ಸದಸ್ಯರಾಗಿದ್ದವರು. ಎಲ್ಲವೂ ಸುಗಮವಾಗಿ ನಡೆಯಲು ಈ ಏರ್ಪಾಟು ನೆರವಿಗೆ ಬಂದಿತು.
ಇದೆಲ್ಲಾ ನಡೆದು 50 ವರ್ಷಗಳಾಗಿವೆ. ದುಶ್ಚಟಗಳು ಗಣನೀಯವಾಗಿ ಇಳಿಮುಖವಾಗಿದ್ದವು. ಈಗ ವಾಲ್ಮೀಕಿ ನಗರದ ನಿವಾಸಿಗಳು ಆರ್ಥಿಕವಾಗಿ ಸುಧಾರಿಸಿದ್ದಾರೆ. ಕಲಿತ ಯುವಕ-ಯುವತಿಯರ ಸಂಖ್ಯೆ ಗಣನೀಯವಾಗಿದೆ. ಡಿಪ್ಲೊಮಾ, ಡಿಗ್ರಿಗಳನ್ನು ಪಡೆದಿದ್ದಾರೆ. ಅಂದು ನಾನು ಮಾಡಿದ ಸೇವೆ ಒಳ್ಳೆಯ ಫಲವನ್ನು ಕೊಟ್ಟಿದೆ ಎಂಬ ಸಮಾಧಾನ ನನಗಿದೆ.
ಸ್ವಾರ್ಥ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿಯಾಗಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜದಿಂದ ಉತ್ತಮ ಸ್ಪಂದನೆ ಸಿಗುತ್ತದೆ ಎಂಬುದಕ್ಕೆ ಇವು ನಿದರ್ಶನ ಎನ್ನಬಹುದು. ರಚನಾತ್ಮಕ ಧೋರಣೆಯಿಂದ, ಸೇವಾ ಭಾವದಿಂದ ಕಾರ್ಯೋನ್ಮುಖರಾಗುವ ಯುವಕ-ಯುವತಿಯರ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿಯೇ ಇದೆ. ಇದು ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯ ಎಂಬುದನ್ನು ಇಂದಿನ ಪೀಳಿಗೆ ಮನಗಾಣುತ್ತದೆ ಎಂಬ ಆಶಾಭಾವ ನನ್ನದು.

 

– ಹೆಚ್.ಎಸ್.ದೊರೆಸಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು ಯಾವುದೇ...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...

ಶಬರಿಮಲೆ ತುಪ್ಪ ಮಾರಾಟ ಹಗರಣ: ತನಿಖೆ ಪೂರ್ಣಗೊಳಿಸಲು ವಿಎಸಿಬಿಗೆ 30 ದಿನ ಕಾಲಾವಕಾಶ ನೀಡಿದ ಕೇರಳ ಹೈಕೋರ್ಟ್ 

ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಭಕ್ತರಿಗೆ ಮಾರಾಟವಾಗುವ ಪವಿತ್ರ ನೈವೇದ್ಯ 'ಆದಿಯ ಸಿಷ್ಟಂ ತುಪ್ಪ' ಮಾರಾಟಕ್ಕೆ ಸಂಬಂಧಿಸಿದಂತೆ ಟಿಡಿಬಿ ನೌಕರರು ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ತನಿಖೆಯನ್ನು ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಜಾಗೃತ...

ಧಾರ್ಮಿಕ ಆಚರಣೆ ಹೆಸರಿನಲ್ಲಿ ನರ್ಮದಾ ನದಿಗೆ 11,000 ಲೀಟರ್ ಹಾಲು ಸುರಿದ ಭಕ್ತರು

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ನರ್ಮದಾ ನದಿ ದಂಡೆಯಲ್ಲಿ ಬುಧವಾರ ನಡೆದ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ 11,000 ಲೀಟರ್ ಹಾಲು ನರ್ಮದಾ ನದಿಗೆ ಸುರಿಯಲಾಗಿದ್ದು, ಇದು ನಂಬಿಕೆ ಮತ್ತು ಪರಿಸರ ಹಾನಿಯ ಕುರಿತು ಚರ್ಚೆಗೆ...

ಪಶ್ಚಿಮ ಬಂಗಾಳ: ಹುಮಾಯೂನ್ ಕಬೀರ್ ಪಕ್ಷದೊಂದಿಗಿನ ಮೈತ್ರಿ ಹಿಂತೆಗೆದುಕೊಂಡ ಎಐಎಂಐಎಂ; ಸ್ವತಂತ್ರ ಸ್ಪರ್ಧೆ ಘೋಷಣೆ

ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹುಮಾಯೂನ್ ಕಬೀರ್ ನೇತೃತ್ವದ ಪಕ್ಷದೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಘೋಷಿಸಿದೆ. ಕಬೀರ್ ಅವರ ಹೇಳಿಕೆಗಳು ಮತ್ತು ಬಹಿರಂಗಪಡಿಸುವಿಕೆಗಳು "ಮುಸ್ಲಿಮರ ಸಮಗ್ರತೆ"ಯ ಬಗ್ಗೆ...

ಏಕನಾಥ್ ಶಿಂಧೆ ಕುರಿತ ಹೇಳಿಕೆ ವಿವಾದ; ‘ಕ್ಷಮೆಯಾಚಿಸುವುದಿಲ್ಲ’ ಎಂದ ಕುನಾಲ್ ಕಮ್ರಾ

ಕೋಮುವಾದಿ ರಾಜಕಾರಣವನ್ನು ವಿರೋಧಿಸುತ್ತಾ ಬಲಪಂಥೀಯ ರಾಜಕೀಯವನ್ನು ವಿಡಂಬನೆ ಮಾಡುವ ಭಾರತದ ಖ್ಯಾತ 'ಸ್ಟಾಂಡಪ್‌ ಕಾಮಿಡಿಯನ್' ಕುನಾಲ್ ಕಮ್ರಾ ಗುರುವಾರ ಮಹಾರಾಷ್ಟ್ರ ಶಾಸಕಾಂಗ ಸಮಿತಿಯ ಮುಂದೆ ಹಾಜರಾದರು. "ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿಕೊಂಡು...