Homeಮುಖಪುಟಮೋದಿ ತನ್ನ ಆಸ್ತಿ ಕುರಿತು ಸುಳ್ಳು ಹೇಳಿದ್ದಾರೆ: ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಪಿಐಎಲ್

ಮೋದಿ ತನ್ನ ಆಸ್ತಿ ಕುರಿತು ಸುಳ್ಳು ಹೇಳಿದ್ದಾರೆ: ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಪಿಐಎಲ್

- Advertisement -
- Advertisement -

ಸಾಕೇತ್ ಗೋಖಲೆ ಎಂಬ ಮಾಜಿ ಪತ್ರಕರ್ತ ನಿನ್ನೆಯೇ ತನ್ನ ಫೇಸ್‌ಬುಕ್‌ನಲ್ಲಿ ಇಂದು ಮೋದಿಯವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಿದ್ದೇನೆಂದು ಹೇಳಿದ್ದರು. ಅದರಲ್ಲಿ ಏನಿರುತ್ತದೆಂಬುದರ ಬಗ್ಗೆ ಕುತೂಹಲ ಮೂಡಿತ್ತು. ಇಂದು ಅದನ್ನು ದಾಖಲಿಸಿ ವಿವರಗಳನ್ನು ಹಂಚಿಕೊಂಡಿದ್ದಾರೆ. ವಿವರ ಇಂತಿದೆ.

ನಾನು ಕೊನೆಗೂ ಸುಪ್ರೀಮ್ ಕೋರ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪಿಐಎಲ್ ದಾಖಲಿಸುವಲ್ಲಿ ಯಶಸ್ವಿಯಾದೆ. ಇದು ಸಾಧ್ಯವಾಗಿದ್ದು ಎರಡು ತಿಂಗಳ ಕಠಿಣ ತನಿಖೆ ಮತ್ತು ಆಳವಾಗಿ ಅಗೆಯುವಿಕೆಯ ನಂತರ.

ಇದು ಪ್ರಧಾನಿ ಮೋದಿಯವರ ಅಫಿಡವಿಟ್‌ಗೆ ಸಂಬಂಧಿಸಿದ್ದು. ಅವರ ಅಫಿಡವಿಟ್ ಅತ್ಯಂತ ಗಂಭೀರವಾದ ಲೋಪಗಳಿಂದ ಕೂಡಿದೆ. 2012ರ ನಂತರ ಅವರ ಪ್ರಕಟಣೆಯಿಂದ ಕೋಟ್ಯಾಂತರ ರೂ. ಬೆಲೆಯ ಭೂಮಿಯು ಕಾಣೆಯಾಗಿದೆ.

ಮೇಲ್ನೋಟಕ್ಕೆ ಕಾಣುವುದೇನೆಂದರೆ, ಇದೊಂದು ದೊಡ್ಡ ಭೂಹಗರಣ ಆಗಿರುವ ಸಾಧ್ಯತೆ ಇದೆ, ಅದೂ ಚೌಕಿದಾರನೇ ಎಲ್ಲವನ್ನೂ ನೋಡಿಕೊಳ್ಳುತ್ತಿರುವಾಗ.

ಇದರ ಕೆಲವು ಸಂಕ್ಷಿಪ್ತ ಸತ್ಯಾಸತ್ಯತೆಗಳು ಇಂತಿವೆ.

2002ರಲ್ಲಿ ಗುಜರಾತಿನ ಆಗಿನ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಅವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ, 1.3 ಲಕ್ಷ ರೂಪಾಯಿಗೆ ಒಂದು ಪ್ಲಾಟ್ ನೀಡಲಾಗಿತ್ತು; ಪ್ಲಾಟ್ ನಂಬರ್ 411, ಸೆಕ್ಟರ್ 1, ಗಾಂಧಿನಗರ. ಆ ಪ್ಲಾಟ್‌ನ ಅಳತೆ 330 ಚದರ ಮೀಟರ್‌ಗಳು.

2007ರಲ್ಲಿ ತಮ್ಮ ಅಫಿಡವಿಟ್‌ನಲ್ಲಿ ನರೇಂದ್ರ ಮೋದಿಯವರು ಇದನ್ನು ಪ್ರಕಟಿಸಿದರು.

ಆದರೆ 2012ರ ನಂತರ ಏನಾಯಿತೋ, ಆ ಪ್ಲಾಟ್ ಅನ್ನು ತಮ್ಮ ಅಫಿಡವಿಟ್‌ನಲ್ಲಿ ಹೆಸರಿಸುವುದನ್ನು ಕೈಬಿಟ್ಟರು. ಅದರ ಬದಲಿಗೆ, 401/ಏ, ಸೆಕ್ಟರ್ 1, ಗಾಂಧಿನಗರದ ಪ್ಲಾಟ್‌ನ ಕಾಲು ಭಾಗದಷ್ಟು ತಾವು ಹೊಂದಿರುವುದಾಗಿ ಘೋಷಿಸಿದರು.

ಪ್ರಾಸಂಗಿಕವಾಗಿ ಹೇಳಬೇಕಾದ್ದೆಂದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಅದೇ ಪ್ಲಾಟ್ 401/ಏ ನಲ್ಲಿ ಕಾಲು ಭಾಗವನ್ನು ಹೊಂದಿದ್ದಾರೆ.

ಕುತೂಹಲಕಾರಿಯಾದ ಸಂಗತಿಯೆಂದರೆ, ಭೂದಾಖಲೆಗಳಲ್ಲಿ 401/ಏ ಪ್ಲಾಟ್ ಅಸ್ತಿತ್ವದಲ್ಲಿಯೇ ಇಲ್ಲ. ದಾಖಲೆಗಳ ಪ್ರಕಾರ ಪ್ಲಾಟ್ ನಂಬರ್ 411 ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ಆಸ್ತಿ ಎಂದು ಹೇಳುತ್ತವೆ.

ಇನ್ನೂ ಅತ್ಯಂತ ಕುತೂಹಲಕಾರಿಯಾದ ಸಂಗತಿಯೆಂದರೆ, ಆ ಸ್ಥಳಕ್ಕೆ ಭೇಟಿ ನೀಡಿದಾಗ ಕಾಣುವುದೇನೆಂದರೆ, ಆ ಸ್ಥಳದ ಅಕ್ಕಪಕ್ಕದ 8 ಪ್ಲಾಟ್‌ಗಳನ್ನು ಮತ್ತು ಒಂದು ಸರಕಾರಿ ಮೈದಾನವನ್ನು ಸೇರಿಸಿ, ಒಂದು ಬೌಂಡರಿ ಗೋಡೆಯನ್ನು ನಿರ್ಮಿಸಿ, ಪ್ಲಾಟ್ 411 ಎಂಬ ಒಂದೇ ಕಂಪೌಂಡ್ ಕಾಣಸಿಗುತ್ತದೆ.

ಮಾನ್ಯ ಸುಪ್ರೀಮ್ ಕೋರ್ಟಿಗೆ ನನ್ನ ವಿನಂತಿಯೇನೆಂದರೆ, ಸಂಶಯಕ್ಕೀಡು ಮಾಡುತ್ತಿರುವ ಒಂದು ಸಲ ಕಾಣಿಸಿಕೊಳ್ಳುವ ಇನ್ನೊಂದು ಸಲ ಕಣ್ಮರೆಯಾಗುವ ಈ ಆಸ್ತಿಯ ಬಗ್ಗೆ ಎಸ್‌ಐಟಿ ತನಿಖೆ ಆಗಬೇಕು ಮತ್ತು ಇದೊಂದು ಸಂಘಟಿತ ಭೂಹಗರಣವಾಗಿದೆಯೋ ಇಲ್ಲವೋ ಎನ್ನುವುದನ್ನು ತನಿಖೆ ಮಾಡಬೇಕು.

ಈ ರೀತಿ ವಶಪಡಿಸಿಕೊಳ್ಳಲಾದ ಪ್ಲಾಟ್‌ಗಳ ಒಟ್ಟಾರೆ ಮೊತ್ತ 15 ಕೋಟಿಗಳಿಗಿಂತಲೂ ಹೆಚ್ಚು.

ಲೋಕ್ ಪ್ರಹಾರಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಮ್ ಕೋರ್ಟು ಆರ್ಥಿಕ ಆಸ್ತಿಯನ್ನು ಬಚ್ಚಿಡುವುದು ಒಬ್ಬ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಖಂಡಿತವಾಗಿಯೂ ಪರಿಗಣಿಸಬಹುದು ಎಂದು ಹೇಳಿದೆ.

ಪ್ರಧಾನ ಮಂತ್ರಿ ಮೋದಿ 411 ಪ್ಲಾಟ್‌ನ ಒಡೆತನವನ್ನು 7 ವರ್ಷಗಳ ಕಾಲ ಬಚ್ಚಿಟ್ಟಿದ್ದೇಕೆ? 401/ಏ ಪ್ಲಾಟ್‌ನ ಭೂದಾಖಲೆಗಳು ಎಲ್ಲಿವೆ? ಹಾಗೂ ಮೋದಿ ಮತ್ತು ಜೇಟ್ಲಿ ಅವರೊಂದಿಗೆ ಇನ್ಯಾರು ಆ ಪ್ಲಾಟ್‌ನ ಒಡೆತನದಲ್ಲಿದೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಆಸ್ತಿಯಲ್ಲಿ ಮತ್ತು ಗ್ರೌಂಡಿನಲ್ಲಿ ಪರಿಸ್ಥಿತಿಯ ನಡುವೆ ಇಂತಹ ವ್ಯತ್ಯಾಸ ಏಕೆ ಕಾಣುತ್ತಿದೆ?

ಇದಿಷ್ಟು ಕೇಸಿನ ಸಾರಾಂಶ. ಸುಪ್ರೀಂಕೋರ್ಟು ಈ ಕುರಿತು ಏನು ಹೇಳಲಿದೆ? ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವಾಗ ಮೋದಿಯವರು ಯಾವ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸುತ್ತಾರೆ? ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...