Homeಅಂಕಣಗಳುಯಾವ ಧರ್ಮವೂ ಮಹಿಳೆಯರ ಪರವಲ್ಲ....

ಯಾವ ಧರ್ಮವೂ ಮಹಿಳೆಯರ ಪರವಲ್ಲ….

- Advertisement -
- Advertisement -

ಕಳೆದ ವಾರ ತೀರಿಕೊಂಡ ಪೋಪ್ ಜಾನ್ ಪಾಲ್ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆಯ ಶ್ರದ್ಧಾಂಜಲಿಗಳೇ ಕೇಳಿಬರುತ್ತಿವೆ. ಆತ ಶಾಂತಿಪ್ರಿಯರಾಗಿದ್ದರು ಎಂದೂ, ಮಾನವತಾವಾದಿಯಾಗಿದ್ದರು ಎಂದೂ, ಶೋಷಿತರ ಪರವಾಗಿದ್ದರೆಂದೂ ಅವರನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಆದರೆ ಅದೇ ಜಾನ್ ಪಾಲ್ ಮಹಿಳಾ ಹಕ್ಕುಗಳ ವಿರೋಧಿಯಾಗಿದ್ದರೆಂದೂ, ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ನಿರಾಕರಿಸಿದ್ದರೆಂದೂ, ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಗಳಿಗೆ ಬೆಂಬಲ ನೀಡಿದ್ದರೆಂದೂ ಯಾರೂ ಹೇಳುತ್ತಿಲ್ಲ! ಹಾಗೆ ಯಾರಾದರೂ ಹೇಳಿದ್ದರೂ ಹೊಗಳುಭಟ್ಟರ ಆರ್ಭಟದಲ್ಲಿ ಈ `ಅಪಸ್ವರ’ ಗಳು ಯಾರ ಕಿವಿಗೂ ಬಿದ್ದಂತಿಲ್ಲ!

ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡ ಧರ್ಮಾಧಿಕಾರಿಗಳಲ್ಲಿ ಪೋಪ್ ಮೊದಲನೆ ಯವರೂ ಅಲ್ಲ; ಖಂಡಿತವಾಗಿ ಕೊನೆಯವರೂ ಅಲ್ಲ. ಏಕೆಂದರೆ ಕ್ರಿಶ್ಚಿಯನ್ ಧರ್ಮ ಮಾತ್ರವಲ್ಲ, ಜಗತ್ತಿನ ಬಹಳಷ್ಟು ಪ್ರಮುಖ ಧರ್ಮಗಳೂ ಮಹಿಳಾ ವಿರೋಧಿಯೇ ಆಗಿವೆ.

ಪೈಗಂಬರದು ಮಹಿಳೆಯರನ್ನು ಬುರ್ಕಾಗಳಲ್ಲಿ ಇರಿಸಿ ಅವರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ಕಾಣಿ ಎಂದು ಹೇಳಿರಲಿಲ್ಲ. ಒಂದು ದಿನ ಪೈಗಂಬರರು ಬಹಳ ದಣಿದಿದ್ದರೂ ಅವರೊಂದಿಗೆ ಮಾತುಕತೆಗೆಂದು ಬಂದಿದ್ದ ಇಬ್ಬರು ಅತಿಥಿ ಗಳು ಅದೆಷ್ಟೇ ಹೊತ್ತಾದರೂ ಹೊರಡಲಿಲ್ಲ ವಾದ್ದರಿಂದ, ಪೈಗಂಬರರು ತಮ್ಮ ಓರ್ವ ಮಡದಿ ಇದ್ದ ಕೋಣೆಯ ಬಾಗಿಲಿಗೆ ಪರದೆಯನ್ನು ಹಾಕಿ ನಿದ್ದೆಗೆ ಸಜ್ಜಾದರು. ಅದನ್ನೇ ನೆಪವಾಗಿಸಿಕೊಂಡು ಇವತ್ತು ಮುಸ್ಲಿಂ ಮಹಿಳೆಯರನ್ನು ಬುರ್ಕಾಗಳಲ್ಲಿ ಇರಿಸಿ ಅವರನ್ನು ಶೋಷಿಸಲಾಗುತ್ತಿದೆ.

ಅಂತಹ ಮೇಧಾವಿ ಗೌತಮ ಬುದ್ಧ ಕೂಡ ಒಂದು ರೀತಿಯಲ್ಲಿ ಮಹಿಳಯರ ಬಗ್ಗೆ ತಾರತಮ್ಯ ನೀತಿ ಅನುಸರಿಸಿದ್ದ. ಆತ ತನ್ನ ಮಡದಿ ಯಶೋಧರೆ ಸೇರಿದಂತೆ ಇತರ ಮಹಿಳೆಯರನ್ನು ಅನುಯಾಯಿ ಗಳಾಗಿ ಸ್ವೀಕರಿಸಿದರೂ, ಮಹಿಳೆಯರು ಬಿಕ್ಕುಗಳಾ ಗಲು ಪ್ರಾರಂಭದಲ್ಲಿ ಅನುಮತಿ ನೀಡಿರಲಿಲ್ಲ. ಬುದ್ಧನ ಚಿಕ್ಕಮ್ಮ ಮಹಾಪ್ರಜಾಪತಿ ತಾನು ಬಿಕ್ಕು ಆಗಬೇಕೆಂದು ಕೇಳಿಕೊಂಡಾಗ ಬುದ್ಧ ನಿರಾಕರಿಸಿದ. ಕೊನೆಗೆ ಬುದ್ಧನ ಆಪ್ತ ಶಿಷ್ಯ ಆನಂದ ಮಹಿಳೆಯರ ಪರವಾಗಿ ವಾದಿಸಿದ ನಂತರ “ಪುರುಷ ಬಿಕ್ಕುಗಳಿಗೆ ಮಹಿಳಾ ಬಿಕ್ಕುಗಳನ್ನು ಹಿರಿಯರು-ಕಿರಿಯರು ಎಂಬ ಭೇದಭಾವವಿಲ್ಲದೆ ಗೌರವಿಸಬೇಕು; ಪುರುಷ ಬಿಕ್ಕುಗಳನ್ನು ಯಾವುದೇ ಕಾರಣಕ್ಕೂ ಮಹಿಳಾ ಬಿಕ್ಕುಗಳು ಟೀಕಿಸಬಾರದು” ಎಂಬಂತಹ ಷರತ್ತುಗಳನ್ನು ಹೇರಿದ ನಂತರವೇ ಒಪ್ಪಿಗೆ ನೀಡಿದ್ದ ಗೌತಮ ಬುದ್ಧ.

ಇನ್ನು ಮನುವಾದಿ `ಹಿಂದೂ’ ಧರ್ಮದ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಪುರೋಹಿತಶಾಹಿ ವ್ಯವಸ್ಥೆಯಲ್ಲಿ ಶೂದ್ರರಿಗೂ, ದಲಿತರಿಗೂ, ಮಹಿಳೆಯ ರಿಗೂ ಒಂದು ಸ್ಥಾನ, ಮೇಲುಜಾತಿಯ ಪುರುಷರಿಗೆ ಮಾತ್ರ ಮತ್ತೊಂದು ಸ್ಥಾನ….

ಹಾಗೆ ನೋಡಿದರೆ ಮಹಿಳೆಯರನ್ನು ಸಮಾನರೆಂದು ಕಾಣುವ ಒಂದೇ ಒಂದು ಧರ್ಮವೂ ಇದ್ದಂತಿಲ್ಲ. ಮಹಿಳಾ ಹಕ್ಕುಗಳು, ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬಿ ತನ… ಇವೆಲ್ಲವನ್ನು ಗುರುತಿಸಿ, ಅವರನ್ನು ಸಮಾನರಾಗಿ ಕಾಣುವ ಒಂದೇ ಒಂದು ಗ್ರಂಥ ಯಾವುದು ಗೊತ್ತಾ?

ನಮ್ಮ ದೇಶದ ಸಂವಿಧಾನ! ಅದನ್ನೇ ಇನ್ನು ಮುಂದೆ ಎಲ್ಲಾ ಭಾರತೀಯ ನಾರಿಯರು ತಮ್ಮ ಧರ್ಮ ಗ್ರಂಥವನ್ನಾಗಿಸಿಕೊಂಡರೆ ಹೇಗೆ?!

ಗೌರಿ ಲಂಕೇಶ್
ಏಪ್ರಿಲ್ 20, 2005 (`ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...