Homeಸಿನಿಮಾಸಿನಿ ಸುದ್ದಿವಿಷ್ಣು ಸ್ಮಾರಕಕ್ಕೆ ಮೀನಾಮೇಷ ಏಕೆ?

ವಿಷ್ಣು ಸ್ಮಾರಕಕ್ಕೆ ಮೀನಾಮೇಷ ಏಕೆ?

- Advertisement -
- Advertisement -

ಸೋಮಶೇಖರ್ ಚಲ್ಯ |

ಕರ್ನಾಟಕ ಕಂಡ ಸ್ಟಾರ್ ನಟ ಅಂಬರೀಶ್, ಸಾವನ್ನಪ್ಪಿ ವಾರವೇ ಕಳೆದು ಹೋಗಿದೆ. ಇನ್ನು ಅಭಿಮಾನಿಗಳ ಮನದಲ್ಲಿ ಅಂಬರೀಶ್ ನಿಧನ ಕಹಿ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಾ ಇದೆ. ಅದುವೇ ವಿಷ್ಣು ಸ್ಮಾರಕ ವಿವಾದ..

ಕುಚುಕು ಗೆಳೆಯರಂತಿದ್ದ ಅಂಬರೀಶ್ ಹಾಗೂ ವಿಷ್ಣುವರ್ಧನ್, ಇಬ್ಬರೂ ಈಗ ನೆನಪು ಮಾತ್ರ. ಅಂಬರೀಶ್ ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅಲ್ಲದೆ ೧.೫ ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ಬೆನ್ನಲ್ಲೆ ವಿಷ್ಣು ಅಭಿಮಾನಿಗಳು ಹಾಗೂ ವಿಷ್ಣು ಕುಟುಂಬಸ್ಥರು ಸ್ಮಾರಕ ನಿರ್ಮಾಣದ ಧ್ವನಿ ಎತ್ತಿದ್ದಾರೆ.

ಸುಮಾರು ವರ್ಷದಿಂದ ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಹೋರಾಟ ನಡೆಸಲಾಗುತ್ತಿದೆ. ಆದ್ರೆ ಇನ್ನು ವಿಷ್ಣು ಸ್ಮಾರಕ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಡಾ.ರಾಜಕುಮಾರ್ ಹೆಸರಲ್ಲಿ ಫಿಲ್ಮ್ ಯುನಿವರ್ಟಿಸಿ, ಅಂಬಿ ಹೆಸರಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಿಷ್ಣು ನಿಧನರಾಗಿ 9 ವರ್ಷ ಕಳೆಯುತ್ತಾ ಬಂದಿದೆ. ಎಲ್ಲಾ ಸರ್ಕಾರಗಳಿಗೂ ಮನವಿ ಸಲ್ಲಿಸಿದ್ದೇವೆ. ಅದ್ರೆ, ವಿಷ್ಣು ಸ್ಮಾರಕ ವಿಚಾರವನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋದು ವಿಷ್ಣು ಅಳಿಯ ಅನಿರುದ್ಧ ಅವರ ಆರೋಪ.

ವಿಷ್ಣು ಅಭಿಮಾನಿಗಳನ್ನು ಅಗಲಿದ ಮೇಲೆ ಇದುವರೆಗೂ ಐದು ಜನ ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದಾರೆ. ಆದರೆ ಯಾರಿಂದಲೂ ವಿಷ್ಣುಗೆ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇದು ವಿಷ್ಣು ಅಭಿಮಾನಿಗಳು ಮತ್ತು ಕುಟುಂಬಕ್ಕೆ ಭಾವನಾತ್ಮಕ ವಿಚಾರವಾಗುತ್ತಾ ಬೇರೂರುತ್ತಿದೆ. 2009ರಲ್ಲಿ ವಿಷ್ಣುರ ಅಂತ್ಯಸಂಸ್ಕಾರವನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಗಿತ್ತು. ಹಿರಿಯ ನಟ ಬಾಲಕೃಷ್ಣ ಅವರಿಗೆ ಸರ್ಕಾರವೇ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡಲು ಈ ಜಾಗ ನೀಡಿತ್ತು. ಆದರೆ ಬಾಲಕೃಷ್ಣ ನಿಧನದ ನಂತರ ಅವರ ಮಗ 10 ಎಕರೆ ಜಾಗವನ್ನು ಮಾರಾಟ ಮಾಡಲು ಮುಂದಾಗಿದ್ದರು. ಹಾಗಾಗಿ ಅದು ಕುಟುಂಬ ವ್ಯಾಜ್ಯವಾಗಿ ಮಾರ್ಪಟ್ಟಿತ್ತು. ವಿವಾದ ಇತ್ಯರ್ಥವಾಗುವ ಮುನ್ನವೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಕಟ್ಟಲು ಮುಂದಾದ ಸರ್ಕಾರಕ್ಕೆ ಹೈಕೋರ್ಟ್ ತಡೆನೀಡಿದ್ದರಿಂದ ಸ್ಮಾರಕ ನಿರ್ಮಾಣ ಕಗ್ಗಂಟಾಗಿ ಉಳಿಯಿತು.

ತದನಂತರ 2012ರ ಮುಖ್ಯಮಂತ್ರಿ ಸದಾನಂದಗೌಡರು ಅಭಿಮಾನ್ ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಿಲ್ಲ ಬೇರೆಡೆ ಜಾಗ ಕೊಡುತ್ತೇವೆ ಎಂದಿದ್ದರು. ಆಗಲೇ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಇಂಗಿತ ಹೊರಹಾಕಿದ್ದು. ಇದು ಅಭಿಮಾನಿ ಸಂಘದ ಲೀಡರುಗಳಿಗೆ ಇಷ್ಟವಾಗಲಿಲ್ಲ. ಈ ನಡುವೆ ಸಿಎಂ ಗಾದಿಯೇರಿದ ಸಿದ್ದರಾಮಯ್ಯನವರು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣಕ್ಕೆ ಐದು ಎಕರೆ ಜಾಗ ಮಂಜೂರು ಮಾಡಿ 2016ರಲ್ಲಿ ಭೂಮಿ ಪೂಜೆಗೂ ಮುಂದಾಗಿದ್ದರು. ಆದರೆ ಕೃಷಿ ಭೂಮಿ ನೀಡಲು ನಿರಾಕರಿಸಿದ ರೈತರು ಪ್ರತಿಭಟನೆಯಿಂದಾಗಿ ಅದೂ ಈಡೇರಲಿಲ್ಲ.

ಈ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ವಿಷ್ಣು ಸ್ಮಾರಕ ವಿವಾದಕ್ಕೆ ಕುಮಾರಸ್ವಾಮಿಯವರ ಅವಧಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಜ್, ಅಂಬಿ ಸ್ಮಾರಕಗಳ ಜೊತೆ ವಿಷ್ಣು ಸ್ಮಾರಕವನ್ನೂ ಕಂಠೀರವದಲ್ಲೇ ನಿರ್ಮಾಣ ಮಾಡ್ತೀವಿ ಅಂದಿದ್ದು ವಿಷ್ಣು ಕುಟುಂಬ ಮತ್ತು ಅಭಿಮಾನಿಗಳನ್ನು ಸಹಜವಾಗಿಯೇ ಅಸಮಾಧಾನ ಮೂಡಿಸಿದೆ. ಕುಟುಂಬದ ಜೊತೆ ಒಂದು ಸಣ್ಣ ಚರ್ಚೆಯನ್ನೂ ಮಾಡದೆ, ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ನಿರ್ಧಾರ ಪ್ರಕಟಿಸಿರೋದು ಎಷ್ಟು ಸರಿ ಅನ್ನೋದು ಕುಟುಂಬ ಮತ್ತು ಅಭಿಮಾನಿಗಳ ವಾದ.

ವಿಷ್ಣು ನಿಧನರಾದಾಗ ನಮ್ಮ ಕ್ಯಾಪ್ಟನ್ ಗೌರಿ ಲಂಕೇಶ್‌ರವರು ತಮ್ಮ ಸಂಪಾದಕೀಯದಲ್ಲಿ ‘ವಿಷ್ಣು ಬಗ್ಗೆ ಜಗತ್ತು ಇನ್ನಷ್ಟು ಔದಾರ್ಯ ತೋರಬೇಕಿತ್ತು’ ಎಂಬ ಮಾತು ಬರೆದಿದ್ದರು. ಅದ್ಯಾಕೊ ಆ ಮಾತು ಅವರ ಸ್ಮಾರಕಕ್ಕೂ ಅನ್ವಯಿಸುತ್ತಿರುವಂತೆ ಕಾಣುತ್ತೆ.

ಇಲ್ಲಿ ಇಡೀ ಸಮಸ್ಯೆಯನ್ನು ಏಕಾಏಕಿ ಯಾರೋ ಒಬ್ಬರ ಮೇಲೆ ಎತ್ತಿ ಬಿಸಾಡಲಾಗುವುದಿಲ್ಲ. ಯಾವಾಗ ಒಂದು ಕಾರ್ಯಕ್ಕೆ ಒಮ್ಮತ ಮತ್ತು ತಾಳ್ಮೆ ಇಲ್ಲವಾಗುತ್ತೊ ಆಗ ಸಹಜವಾಗಿಯೇ ಗೊಂದಲಕ್ಕೆ ತುತ್ತಾಗುತ್ತಾ ಸಾಗುತ್ತೆ. ಸರ್ಕಾರ ಸ್ಮಾರಕ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವಂತೆ ಕಂಡುಬಂದರು ಅದು ವಿಷ್ಣು ಸ್ಮಾರಕಕ್ಕೆ ಮಾತ್ರ ಸೀಮಿತವಾದುದಲ್ಲ, ರಾಜ್ ಸ್ಮಾರಕಕ್ಕೂ ಸರ್ಕಾರಗಳು ಇಂಥದ್ದೇ ಮೀನಾಮೇಷ ಎಣಿಸುತ್ತಾ ಬಂದಿದ್ದವು. ರಾಜ್ ನಮ್ಮನ್ನಗಲಿದ್ದು 2006ರಲ್ಲಾದರು ಎಂಟು ವರ್ಷಗಳ ನಂತರವೇ ೨೦೧೪ರಲ್ಲಿ ಸ್ಮಾರಕಕ್ಕೆ ಮುಕ್ತಿ ಸಿಕ್ಕಿದ್ದು. ಯಾವ ವಿವಾದವೂ ಇರದಿದ್ದ ಸರ್ಕಾರದ ಜಾಗದಲ್ಲೇ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವುದರ ಬಗ್ಗೆ ರಾಜ್ ಕುಟುಂಬ ಹಲವು ಸಂದರ್ಭಗಳಲ್ಲಿ ಬೇಸರ ಹೊರಹಾಕಿದ್ದಿದೆ. ನಮ್ಮ ಸರ್ಕಾರಗಳ ಕಾರ್ಯವೈಖರಿಯೇ ಹಾಗಿರುತ್ತೆ.

ಅಂತದ್ದರಲ್ಲಿ ಲಿಟಿಗೇಷನ್ ಇರೋ ಜಾಗ ಹಾಗೂ ಸ್ಮಾರಕ ನಿರ್ಮಾಣ ಕುರಿತು ಕುಟುಂಬ, ಅಭಿಮಾನಿ ಬ್ಯಾನರ್ ಸಂಘಗಳ ನಡುವೆಯೇ ಬಿರುಕು ಇರುವಾಗ ಸರ್ಕಾರ ಮುತುವರ್ಜಿ ವಹಿಸೀತೆ? ಈ ಸತ್ಯವನ್ನು ಮೊದಲು ವಿಷ್ಣು ಕುಟುಂಬಸ್ಥರು ಹಾಗೂ ಅಭಿಮಾನಿ ಬ್ಯಾನರ್ ಸಂಘದವರು ಅರ್ಥ ಮಾಡಿಕೊಳ್ಳಬೇಕಿದೆ.

ವಿಷ್ಣುವನ್ನು ಕಳೆದುಕೊಂಡದ್ದು ಅವರ ಕುಟುಂಬಕ್ಕೆ ಹಾಗೂ ಯಾವ ಸಂಘದ ಬ್ಯಾನರೂ ಇಲ್ಲದೆ ಅವರನ್ನು ಆರಾಧಿಸುತ್ತಿದ್ದ ನಿಜ ಅಭಿಮಾನಿಗಳಿಗೆ ಮತ್ತು ಅಭಿಮಾನಿ ಬ್ಯಾನರ್ ಸಂಘಗಳಿಗೆ ಬಹುದೊಡ್ಡ ಎಮೋಷನಲ್ ಸಂಗತಿಯೇ ಆದರು, ಸ್ಮಾರಕ ವಿವಾದವನ್ನೂ ಅದೇ ಎಮೋಷನಲ್ ಆವೇಗದಲ್ಲಿ ಸರಿಪಡಿಸಲು ಮುಂದಾದರೆ ವಿಷಯ ಮತ್ತಷ್ಟು ಕಗ್ಗಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅನಿರುದ್ಧ್ ಆಕ್ರೋಶದ ಮಾತುಗಳಿಗೆ ಸಿಎಂ ಕುಮಾರಸ್ವಾಮಿ ಗರಮ್ಮಾಗಿ ಉತ್ತರ ಕೊಟ್ಟದ್ದು ಇದೇ ಕಗ್ಗಂಟಿನ ಸೂಚನೆ ನೀಡುತ್ತಿವೆ.

ಜನರ ಆಕ್ರೋಶ, ಆವೇಶಗಳಿಗೆ ಸ್ಪಂದಿಸುವ ಸಂವೇದನೆಯನ್ನು ನಮ್ಮ ಸರ್ಕಾರಗಳು ಕಳೆದುಕೊಂಡು ಅದ್ಯಾವ ಕಾಲವೇ ಆಗಿಹೋಗಿದೆ. ಬಹುದೊಡ್ಡ ಸಮೂಹಗಳಾದ ರೈತರು, ಕಾರ್ಮಿಕರು ಬೀದಿಗಿಳಿದ ಪ್ರತಿಭಟಿಸಿದರೂ ಕ್ಯಾರೇ ಅನ್ನದ ಮನಸ್ಥಿತಿಗೆ ಸರ್ಕಾರದ ನರತಂತುಗಳು ಬಂದು ತಲುಪಿರುವ ಸಾಮಾಜಿಕ ವಾಸ್ತವವನ್ನು ವಿಷ್ಣು ಕುಟುಂಬ ಮತ್ತು ಅಭಿಮಾನಿ ಬ್ಯಾನರ್ ಸಂಘಗಳು ಅರ್ಥ ಮಾಡಿಕೊಳ್ಳಬೇಕಿದೆ. ಸ್ಮಾರಕದ ಆಗ್ರಹಕ್ಕೆ ಒಂದು ಕಾರ್ಯಯೋಜನೆಯನ್ನು ಸಿದ್ಧ ಮಾಡಿಕೊಳ್ಳದಿದ್ದರೆ ಹತಾಶೆಯ ನಡುವೆಯೇ ಸ್ಮಾರಕದ ಆಸೆಯನ್ನು ಕೈಚೆಲ್ಲುವ ಕಾಲಬಂದರೂ ಅಚ್ಚರಿಯಿಲ್ಲ. ಈಗಾಗಲೇ ಭಾರತಿಯವರು ‘ಅಭಿಮಾನಿಗಳು ತಮ್ಮ ಹೃದಯದಲ್ಲೇ ವಿಷ್ಣುಗೆ ಕೋಟೆ ಕಟ್ಟಿ ಸ್ಮಾರಕ ನಿರ್ಮಿಸಿದ್ದಾರೆ. ಇನ್ನು ಇಟ್ಟಿಗೆಗಳ ಸ್ಮಾರಕವನ್ನು ಸರ್ಕಾರ ಕಟ್ಟದಿದ್ದರೆ ಏನಂತೆ ಬಿಡಿ’ ಎಂದು ಹತಾಶೆಯಿಂದ ಹೇಳಿದ ಮಾತುಗಳೇ ಅಭಿಮಾನಿಗಳ ಪಾಲಿಗೆ ನಿಜವಾಗಿಬಿಡಲಿವೆ.

ಸರ್ಕಾರದ ಮೇಲೆ ಒತ್ತಡ ಹಾಕುವ ಮುನ್ನ ತಮ್ಮ ನಡುವೆ (ಕುಟುಂಬ ಮತ್ತು ಅಭಿಮಾನಿ ಬ್ಯಾನರ್ ಸಂಘಗಳು) ಬಂದಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳದೆ ಹೋದರೆ ಸರ್ಕಾರಗಳು ಎಷ್ಟೇ ಬದಲಾದರು ಅದೊಂದು ನೆಪದ ಮೇಲೆ ದಿನದೂಡಿಬಿಡುತ್ತವೆ.

ಹಾಗೆ ನೋಡಿದರೆ ಕನ್ನಡ ಇಂಡಸ್ಟ್ರಿಗೆ ಹೊಸ ಮೆರಗು ಕೊಟ್ಟ ಶಂಕರ್‌ನಾಗ್‌ರವರಿಗೆ ಸ್ಮಾರಕ ಕಟ್ಟಬೇಕೆಂಬ ಮಾತು ಯಾವ ಸರ್ಕಾರದಿಂದಲೂ ಬಂದಿಲ್ಲ. ಆದರೆ ವಿಷ್ಣು ಬಗ್ಗೆ ಸರ್ಕಾರದಿಂದಲೇ ಅಂತಹ ಪ್ರಯತ್ನಕ್ಕೆ ಚಾಲನೆ ಸಿಕ್ಕಿರೋದ್ರಿಂದ ಬಲು ನಾಜೂಕಾಗಿ, ಅಷ್ಟೇ ವ್ಯವಸ್ಥಿತವಾಗಿ ಸರ್ಕಾರದಿಂದ ಕೆಲಸ ಮಾಡಿಸಬೇಕಿದೆ. ಆದಷ್ಟೂ ಬೇಗ ಆ ಕೆಲಸವಾಗಲಿ ಅನ್ನೋದು ಪತ್ರಿಕೆಯ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...