Homeಸಿನಿಮಾಸಿನಿ ಸುದ್ದಿವಿಷ್ಣು ಸ್ಮಾರಕಕ್ಕೆ ಮೀನಾಮೇಷ ಏಕೆ?

ವಿಷ್ಣು ಸ್ಮಾರಕಕ್ಕೆ ಮೀನಾಮೇಷ ಏಕೆ?

- Advertisement -
- Advertisement -

ಸೋಮಶೇಖರ್ ಚಲ್ಯ |

ಕರ್ನಾಟಕ ಕಂಡ ಸ್ಟಾರ್ ನಟ ಅಂಬರೀಶ್, ಸಾವನ್ನಪ್ಪಿ ವಾರವೇ ಕಳೆದು ಹೋಗಿದೆ. ಇನ್ನು ಅಭಿಮಾನಿಗಳ ಮನದಲ್ಲಿ ಅಂಬರೀಶ್ ನಿಧನ ಕಹಿ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಾ ಇದೆ. ಅದುವೇ ವಿಷ್ಣು ಸ್ಮಾರಕ ವಿವಾದ..

ಕುಚುಕು ಗೆಳೆಯರಂತಿದ್ದ ಅಂಬರೀಶ್ ಹಾಗೂ ವಿಷ್ಣುವರ್ಧನ್, ಇಬ್ಬರೂ ಈಗ ನೆನಪು ಮಾತ್ರ. ಅಂಬರೀಶ್ ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅಲ್ಲದೆ ೧.೫ ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ಬೆನ್ನಲ್ಲೆ ವಿಷ್ಣು ಅಭಿಮಾನಿಗಳು ಹಾಗೂ ವಿಷ್ಣು ಕುಟುಂಬಸ್ಥರು ಸ್ಮಾರಕ ನಿರ್ಮಾಣದ ಧ್ವನಿ ಎತ್ತಿದ್ದಾರೆ.

ಸುಮಾರು ವರ್ಷದಿಂದ ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಹೋರಾಟ ನಡೆಸಲಾಗುತ್ತಿದೆ. ಆದ್ರೆ ಇನ್ನು ವಿಷ್ಣು ಸ್ಮಾರಕ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಡಾ.ರಾಜಕುಮಾರ್ ಹೆಸರಲ್ಲಿ ಫಿಲ್ಮ್ ಯುನಿವರ್ಟಿಸಿ, ಅಂಬಿ ಹೆಸರಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಿಷ್ಣು ನಿಧನರಾಗಿ 9 ವರ್ಷ ಕಳೆಯುತ್ತಾ ಬಂದಿದೆ. ಎಲ್ಲಾ ಸರ್ಕಾರಗಳಿಗೂ ಮನವಿ ಸಲ್ಲಿಸಿದ್ದೇವೆ. ಅದ್ರೆ, ವಿಷ್ಣು ಸ್ಮಾರಕ ವಿಚಾರವನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋದು ವಿಷ್ಣು ಅಳಿಯ ಅನಿರುದ್ಧ ಅವರ ಆರೋಪ.

ವಿಷ್ಣು ಅಭಿಮಾನಿಗಳನ್ನು ಅಗಲಿದ ಮೇಲೆ ಇದುವರೆಗೂ ಐದು ಜನ ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದಾರೆ. ಆದರೆ ಯಾರಿಂದಲೂ ವಿಷ್ಣುಗೆ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇದು ವಿಷ್ಣು ಅಭಿಮಾನಿಗಳು ಮತ್ತು ಕುಟುಂಬಕ್ಕೆ ಭಾವನಾತ್ಮಕ ವಿಚಾರವಾಗುತ್ತಾ ಬೇರೂರುತ್ತಿದೆ. 2009ರಲ್ಲಿ ವಿಷ್ಣುರ ಅಂತ್ಯಸಂಸ್ಕಾರವನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಗಿತ್ತು. ಹಿರಿಯ ನಟ ಬಾಲಕೃಷ್ಣ ಅವರಿಗೆ ಸರ್ಕಾರವೇ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡಲು ಈ ಜಾಗ ನೀಡಿತ್ತು. ಆದರೆ ಬಾಲಕೃಷ್ಣ ನಿಧನದ ನಂತರ ಅವರ ಮಗ 10 ಎಕರೆ ಜಾಗವನ್ನು ಮಾರಾಟ ಮಾಡಲು ಮುಂದಾಗಿದ್ದರು. ಹಾಗಾಗಿ ಅದು ಕುಟುಂಬ ವ್ಯಾಜ್ಯವಾಗಿ ಮಾರ್ಪಟ್ಟಿತ್ತು. ವಿವಾದ ಇತ್ಯರ್ಥವಾಗುವ ಮುನ್ನವೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಕಟ್ಟಲು ಮುಂದಾದ ಸರ್ಕಾರಕ್ಕೆ ಹೈಕೋರ್ಟ್ ತಡೆನೀಡಿದ್ದರಿಂದ ಸ್ಮಾರಕ ನಿರ್ಮಾಣ ಕಗ್ಗಂಟಾಗಿ ಉಳಿಯಿತು.

ತದನಂತರ 2012ರ ಮುಖ್ಯಮಂತ್ರಿ ಸದಾನಂದಗೌಡರು ಅಭಿಮಾನ್ ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಿಲ್ಲ ಬೇರೆಡೆ ಜಾಗ ಕೊಡುತ್ತೇವೆ ಎಂದಿದ್ದರು. ಆಗಲೇ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಇಂಗಿತ ಹೊರಹಾಕಿದ್ದು. ಇದು ಅಭಿಮಾನಿ ಸಂಘದ ಲೀಡರುಗಳಿಗೆ ಇಷ್ಟವಾಗಲಿಲ್ಲ. ಈ ನಡುವೆ ಸಿಎಂ ಗಾದಿಯೇರಿದ ಸಿದ್ದರಾಮಯ್ಯನವರು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣಕ್ಕೆ ಐದು ಎಕರೆ ಜಾಗ ಮಂಜೂರು ಮಾಡಿ 2016ರಲ್ಲಿ ಭೂಮಿ ಪೂಜೆಗೂ ಮುಂದಾಗಿದ್ದರು. ಆದರೆ ಕೃಷಿ ಭೂಮಿ ನೀಡಲು ನಿರಾಕರಿಸಿದ ರೈತರು ಪ್ರತಿಭಟನೆಯಿಂದಾಗಿ ಅದೂ ಈಡೇರಲಿಲ್ಲ.

ಈ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ವಿಷ್ಣು ಸ್ಮಾರಕ ವಿವಾದಕ್ಕೆ ಕುಮಾರಸ್ವಾಮಿಯವರ ಅವಧಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಜ್, ಅಂಬಿ ಸ್ಮಾರಕಗಳ ಜೊತೆ ವಿಷ್ಣು ಸ್ಮಾರಕವನ್ನೂ ಕಂಠೀರವದಲ್ಲೇ ನಿರ್ಮಾಣ ಮಾಡ್ತೀವಿ ಅಂದಿದ್ದು ವಿಷ್ಣು ಕುಟುಂಬ ಮತ್ತು ಅಭಿಮಾನಿಗಳನ್ನು ಸಹಜವಾಗಿಯೇ ಅಸಮಾಧಾನ ಮೂಡಿಸಿದೆ. ಕುಟುಂಬದ ಜೊತೆ ಒಂದು ಸಣ್ಣ ಚರ್ಚೆಯನ್ನೂ ಮಾಡದೆ, ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ನಿರ್ಧಾರ ಪ್ರಕಟಿಸಿರೋದು ಎಷ್ಟು ಸರಿ ಅನ್ನೋದು ಕುಟುಂಬ ಮತ್ತು ಅಭಿಮಾನಿಗಳ ವಾದ.

ವಿಷ್ಣು ನಿಧನರಾದಾಗ ನಮ್ಮ ಕ್ಯಾಪ್ಟನ್ ಗೌರಿ ಲಂಕೇಶ್‌ರವರು ತಮ್ಮ ಸಂಪಾದಕೀಯದಲ್ಲಿ ‘ವಿಷ್ಣು ಬಗ್ಗೆ ಜಗತ್ತು ಇನ್ನಷ್ಟು ಔದಾರ್ಯ ತೋರಬೇಕಿತ್ತು’ ಎಂಬ ಮಾತು ಬರೆದಿದ್ದರು. ಅದ್ಯಾಕೊ ಆ ಮಾತು ಅವರ ಸ್ಮಾರಕಕ್ಕೂ ಅನ್ವಯಿಸುತ್ತಿರುವಂತೆ ಕಾಣುತ್ತೆ.

ಇಲ್ಲಿ ಇಡೀ ಸಮಸ್ಯೆಯನ್ನು ಏಕಾಏಕಿ ಯಾರೋ ಒಬ್ಬರ ಮೇಲೆ ಎತ್ತಿ ಬಿಸಾಡಲಾಗುವುದಿಲ್ಲ. ಯಾವಾಗ ಒಂದು ಕಾರ್ಯಕ್ಕೆ ಒಮ್ಮತ ಮತ್ತು ತಾಳ್ಮೆ ಇಲ್ಲವಾಗುತ್ತೊ ಆಗ ಸಹಜವಾಗಿಯೇ ಗೊಂದಲಕ್ಕೆ ತುತ್ತಾಗುತ್ತಾ ಸಾಗುತ್ತೆ. ಸರ್ಕಾರ ಸ್ಮಾರಕ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವಂತೆ ಕಂಡುಬಂದರು ಅದು ವಿಷ್ಣು ಸ್ಮಾರಕಕ್ಕೆ ಮಾತ್ರ ಸೀಮಿತವಾದುದಲ್ಲ, ರಾಜ್ ಸ್ಮಾರಕಕ್ಕೂ ಸರ್ಕಾರಗಳು ಇಂಥದ್ದೇ ಮೀನಾಮೇಷ ಎಣಿಸುತ್ತಾ ಬಂದಿದ್ದವು. ರಾಜ್ ನಮ್ಮನ್ನಗಲಿದ್ದು 2006ರಲ್ಲಾದರು ಎಂಟು ವರ್ಷಗಳ ನಂತರವೇ ೨೦೧೪ರಲ್ಲಿ ಸ್ಮಾರಕಕ್ಕೆ ಮುಕ್ತಿ ಸಿಕ್ಕಿದ್ದು. ಯಾವ ವಿವಾದವೂ ಇರದಿದ್ದ ಸರ್ಕಾರದ ಜಾಗದಲ್ಲೇ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವುದರ ಬಗ್ಗೆ ರಾಜ್ ಕುಟುಂಬ ಹಲವು ಸಂದರ್ಭಗಳಲ್ಲಿ ಬೇಸರ ಹೊರಹಾಕಿದ್ದಿದೆ. ನಮ್ಮ ಸರ್ಕಾರಗಳ ಕಾರ್ಯವೈಖರಿಯೇ ಹಾಗಿರುತ್ತೆ.

ಅಂತದ್ದರಲ್ಲಿ ಲಿಟಿಗೇಷನ್ ಇರೋ ಜಾಗ ಹಾಗೂ ಸ್ಮಾರಕ ನಿರ್ಮಾಣ ಕುರಿತು ಕುಟುಂಬ, ಅಭಿಮಾನಿ ಬ್ಯಾನರ್ ಸಂಘಗಳ ನಡುವೆಯೇ ಬಿರುಕು ಇರುವಾಗ ಸರ್ಕಾರ ಮುತುವರ್ಜಿ ವಹಿಸೀತೆ? ಈ ಸತ್ಯವನ್ನು ಮೊದಲು ವಿಷ್ಣು ಕುಟುಂಬಸ್ಥರು ಹಾಗೂ ಅಭಿಮಾನಿ ಬ್ಯಾನರ್ ಸಂಘದವರು ಅರ್ಥ ಮಾಡಿಕೊಳ್ಳಬೇಕಿದೆ.

ವಿಷ್ಣುವನ್ನು ಕಳೆದುಕೊಂಡದ್ದು ಅವರ ಕುಟುಂಬಕ್ಕೆ ಹಾಗೂ ಯಾವ ಸಂಘದ ಬ್ಯಾನರೂ ಇಲ್ಲದೆ ಅವರನ್ನು ಆರಾಧಿಸುತ್ತಿದ್ದ ನಿಜ ಅಭಿಮಾನಿಗಳಿಗೆ ಮತ್ತು ಅಭಿಮಾನಿ ಬ್ಯಾನರ್ ಸಂಘಗಳಿಗೆ ಬಹುದೊಡ್ಡ ಎಮೋಷನಲ್ ಸಂಗತಿಯೇ ಆದರು, ಸ್ಮಾರಕ ವಿವಾದವನ್ನೂ ಅದೇ ಎಮೋಷನಲ್ ಆವೇಗದಲ್ಲಿ ಸರಿಪಡಿಸಲು ಮುಂದಾದರೆ ವಿಷಯ ಮತ್ತಷ್ಟು ಕಗ್ಗಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅನಿರುದ್ಧ್ ಆಕ್ರೋಶದ ಮಾತುಗಳಿಗೆ ಸಿಎಂ ಕುಮಾರಸ್ವಾಮಿ ಗರಮ್ಮಾಗಿ ಉತ್ತರ ಕೊಟ್ಟದ್ದು ಇದೇ ಕಗ್ಗಂಟಿನ ಸೂಚನೆ ನೀಡುತ್ತಿವೆ.

ಜನರ ಆಕ್ರೋಶ, ಆವೇಶಗಳಿಗೆ ಸ್ಪಂದಿಸುವ ಸಂವೇದನೆಯನ್ನು ನಮ್ಮ ಸರ್ಕಾರಗಳು ಕಳೆದುಕೊಂಡು ಅದ್ಯಾವ ಕಾಲವೇ ಆಗಿಹೋಗಿದೆ. ಬಹುದೊಡ್ಡ ಸಮೂಹಗಳಾದ ರೈತರು, ಕಾರ್ಮಿಕರು ಬೀದಿಗಿಳಿದ ಪ್ರತಿಭಟಿಸಿದರೂ ಕ್ಯಾರೇ ಅನ್ನದ ಮನಸ್ಥಿತಿಗೆ ಸರ್ಕಾರದ ನರತಂತುಗಳು ಬಂದು ತಲುಪಿರುವ ಸಾಮಾಜಿಕ ವಾಸ್ತವವನ್ನು ವಿಷ್ಣು ಕುಟುಂಬ ಮತ್ತು ಅಭಿಮಾನಿ ಬ್ಯಾನರ್ ಸಂಘಗಳು ಅರ್ಥ ಮಾಡಿಕೊಳ್ಳಬೇಕಿದೆ. ಸ್ಮಾರಕದ ಆಗ್ರಹಕ್ಕೆ ಒಂದು ಕಾರ್ಯಯೋಜನೆಯನ್ನು ಸಿದ್ಧ ಮಾಡಿಕೊಳ್ಳದಿದ್ದರೆ ಹತಾಶೆಯ ನಡುವೆಯೇ ಸ್ಮಾರಕದ ಆಸೆಯನ್ನು ಕೈಚೆಲ್ಲುವ ಕಾಲಬಂದರೂ ಅಚ್ಚರಿಯಿಲ್ಲ. ಈಗಾಗಲೇ ಭಾರತಿಯವರು ‘ಅಭಿಮಾನಿಗಳು ತಮ್ಮ ಹೃದಯದಲ್ಲೇ ವಿಷ್ಣುಗೆ ಕೋಟೆ ಕಟ್ಟಿ ಸ್ಮಾರಕ ನಿರ್ಮಿಸಿದ್ದಾರೆ. ಇನ್ನು ಇಟ್ಟಿಗೆಗಳ ಸ್ಮಾರಕವನ್ನು ಸರ್ಕಾರ ಕಟ್ಟದಿದ್ದರೆ ಏನಂತೆ ಬಿಡಿ’ ಎಂದು ಹತಾಶೆಯಿಂದ ಹೇಳಿದ ಮಾತುಗಳೇ ಅಭಿಮಾನಿಗಳ ಪಾಲಿಗೆ ನಿಜವಾಗಿಬಿಡಲಿವೆ.

ಸರ್ಕಾರದ ಮೇಲೆ ಒತ್ತಡ ಹಾಕುವ ಮುನ್ನ ತಮ್ಮ ನಡುವೆ (ಕುಟುಂಬ ಮತ್ತು ಅಭಿಮಾನಿ ಬ್ಯಾನರ್ ಸಂಘಗಳು) ಬಂದಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳದೆ ಹೋದರೆ ಸರ್ಕಾರಗಳು ಎಷ್ಟೇ ಬದಲಾದರು ಅದೊಂದು ನೆಪದ ಮೇಲೆ ದಿನದೂಡಿಬಿಡುತ್ತವೆ.

ಹಾಗೆ ನೋಡಿದರೆ ಕನ್ನಡ ಇಂಡಸ್ಟ್ರಿಗೆ ಹೊಸ ಮೆರಗು ಕೊಟ್ಟ ಶಂಕರ್‌ನಾಗ್‌ರವರಿಗೆ ಸ್ಮಾರಕ ಕಟ್ಟಬೇಕೆಂಬ ಮಾತು ಯಾವ ಸರ್ಕಾರದಿಂದಲೂ ಬಂದಿಲ್ಲ. ಆದರೆ ವಿಷ್ಣು ಬಗ್ಗೆ ಸರ್ಕಾರದಿಂದಲೇ ಅಂತಹ ಪ್ರಯತ್ನಕ್ಕೆ ಚಾಲನೆ ಸಿಕ್ಕಿರೋದ್ರಿಂದ ಬಲು ನಾಜೂಕಾಗಿ, ಅಷ್ಟೇ ವ್ಯವಸ್ಥಿತವಾಗಿ ಸರ್ಕಾರದಿಂದ ಕೆಲಸ ಮಾಡಿಸಬೇಕಿದೆ. ಆದಷ್ಟೂ ಬೇಗ ಆ ಕೆಲಸವಾಗಲಿ ಅನ್ನೋದು ಪತ್ರಿಕೆಯ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...