Homeಅಂಕಣಗಳುಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

ಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

- Advertisement -
- Advertisement -

ಭಾರತವನ್ನೂ ಒಳಗೊಂಡಂತೆ ಜಗತ್ತಿನ ಸಾಂಪ್ರದಾಯಿಕ ಸಮಾಜಗಳು ಪರಂಪರೆ, ಧರ್ಮ ಮತ್ತು ಚರಿತ್ರೆಗಳನ್ನು ಪರಿಭಾವಿಸುವ ಪರಿ ಕಾಲದಿಂದ ಕಾಲಕ್ಕೆ ಆತಂಕಗಳನ್ನು ಹುಟ್ಟುಹಾಕುತ್ತಲೇ ಬಂದಿದೆ. ಪರಂಪರೆ, ಸಂಸ್ಕøತಿ, ಚರಿತ್ರೆ, ಧರ್ಮ, ರಾಷ್ಟ್ರೀಯತೆ, ಸಂಪ್ರದಾಯ, ಆಚರಣೆಗಳು ಯಾವತ್ತೂ ಅಬಾಧಿತವಾಗಿರಬೇಕು. ಇವು ಸರ್ವಕಾಲಕ್ಕೂ ಮೂಲರೂಪದಲ್ಲಿಯೇ ಉಳಿಯಬೇಕು. ಬರುವ ತಲೆಮಾರುಗಳು ಇವುಗಳನ್ನು ಖಿಲಗೊಳ್ಳದಂತೆ ಕಾಪಾಡಿಕೊಂಡು ಬರಬೇಕು ಎಂಬ ತಲ್ಲಣರೂಪಿ ಹಪಾಹಪಿ ಈ ಸಮಾಜಗಳಲ್ಲಿ ಉಳಿದುಕೊಂಡು ಬಂದಿದೆ. ಪರಂಪರೆ, ಧರ್ಮ ಇತ್ಯಾದಿಗಳು ನಮ್ಮ ಜೀವನದ ಅನೂಹ್ಯ ಅವಕಾಶದಲ್ಲಿದ್ದು (Sಠಿಚಿಛಿe) ನಮ್ಮ ಬದುಕನ್ನು ರೂಪಿಸುತ್ತಾ ಬಂದಿವೆ ಎಂದು ಈ ಸಮಾಜಗಳು ನಂಬಿಕೊಂಡು ಬಂದಿವೆ. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಸಮಾಜದ ನಿತ್ಯದ ಬದುಕು ಮತ್ತು ಅದರ ಆಗುಹೋಗುಗಳ ನಿಯಂತ್ರಕ ಶಕ್ತಿಗಳಾಗಿ ಪರಂಪರೆ, ಧರ್ಮ ಮತ್ತು ಚರಿತ್ರೆಗಳು ಭಾವಿಸಲ್ಪಟ್ಟಿವೆ. ವರ್ತಮಾನದ ತಲ್ಲಣಗಳು ಬಾಧಿಸುವಾಗೆಲ್ಲ ಈ ಸಮಾಜಗಳು ಚರಿತ್ರೆಯ ಇಲ್ಲವೆ ಪುರಾಣಗಳ ಆವರಣದಲ್ಲಿ ಪರಿಹಾರಗಳನ್ನು ಹುಡುಕಲು ಧಾವಿಸುತ್ತವೆ. ನಿತ್ಯದ ಬವಣೆಗಳನ್ನು ಮತ್ತು ಹಿಂಜರಿಕೆಗಳನ್ನು ನೀಗಿಕೊಳ್ಳಲು ಈ ಸಮುದಾಯಗಳು ಪುರಾಣಗಳ ಕಡೆ ಮುಖ ಮಾಡುವುದು ಒಂದು ಬಗೆಯ ವ್ಯಸನದಂತೆ ಭಾಸವಾಗುತ್ತಿದೆ. ಪರಂಪರೆ, ಚರಿತ್ರೆ, ಸಂಸೃತಿ ಎಂಬ ಅಮೂರ್ತ ಸಂಗತಿಗಳಿಗೆ ವರ್ತಮಾನವನ್ನು ರೂಪಿಸಿಬಿಡುವ ಇಂತಹ ಅಗಾಧ ಶಕ್ತಿ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಇಂತಹ ಪ್ರಶ್ನೆಯನ್ನು ಕೇಳಿಕೊಂಡ ಸಮುದಾಯಗಳು ಮಧ್ಯಕಾಲೀನ ಯುರೋಪಿನ ಹಣೆಬರಹವನ್ನೇ ಬದಲಿಸಿದವು. ಕ್ಯಾಥೋಲಿಕ್ ಚರ್ಚ್‍ನ ಮೂಲಭೂತವಾದ ಮತ್ತು ಅದು ಹುಟ್ಟುಹಾಕಿದ್ದ ಅಂದಿನ ಊಳಿಗಮಾನ್ಯ ದುರಾಡಳಿತವನ್ನು ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ದುಡಿವ ಜನ ಮೂಲೋತ್ಪಾಟನೆ ಮಾಡಿದರು. ಹೊಸ ಯುರೋಪ್ ಜನ್ಮ ತಾಳಿತು. ಯುರೋಪ್ ಪುನರುಜ್ಜೀವನಗೊಂಡು ಹೊಸ ದಿಕ್ಕಿಗೆ ನಡೆದುಕೊಂಡು ಹೋಯಿತು. ಹೊಸ ಬದುಕು ಅರಳಿ ನಿಂತು ಹಳೆಯ ಪರಂಪರೆ, ಸಂಸ್ಕøತಿಯ ಹೆಸರಲ್ಲಿ ಅಸ್ತಿತ್ವದಲ್ಲಿದ್ದ ಮೂಲಭೂತವಾದ ಮತ್ತು ಊಳಿಗಮಾನ್ಯ ದುರಾಡಳಿತಗಳು ಕೊನೆಗೊಂಡವು. ಹಳೆಯ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ಮಧ್ಯಕಾಲೀನ ಯುರೋಪಿನ ಸಮುದಾಯಗಳು ತಮ್ಮ ಬದುಕನ್ನು ಅರಳಿಸುವ ಹೊಸ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಫ್ರಾನ್ಸ್‍ನಲ್ಲಿ ಆದ ರಾಜಕೀಯ ಬದಲಾವಣೆಗಳು, ರಷ್ಯಾ, ಚೀನಾ, ವಿಯಟ್ನಾಮ್, ಭಾರತ ಮತ್ತು ಕ್ಯೂಬಾಗಳ ಮರುಹುಟ್ಟು ಕೇವಲ ಪರಂಪರೆಯ ರೂಢಿಗತ ಸಂಗತಿಗಳಿಂದ ಆದದ್ದಲ್ಲ. ಬದುಕುವ ಸ್ವಾತಂತ್ರ್ಯವನ್ನು ಹಂಬಲಿಸುವ ಜನ ದೇಶಕಾಲಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಪರಂಪರೆ, ಸಂಸ್ಕøತಿ, ಚರಿತ್ರೆಗಳು ಅಪೌರುಷೇಯವಾದವುಗಳಲ್ಲ. ಅವು ಜನರ ಬದುಕಿನ ಉತ್ಪನ್ನಗಳು. ಮನುಷ್ಯನ ಬದುಕು ಬದಲಾದಂತೆ ಇವೂ ಬದಲಾಗುತ್ತವೆ. ಬದಲಾಗದೇ ಇರುವ ಸಂಗತಿಗಳು ಅವಶೇಷಗಳಂತಿದ್ದು, ಒಂದು ದಿನ ನಶಿಸಿ ಹೋಗುತ್ತವೆ. ಆದರೆ ಬದಲಾವಣೆಗಳನ್ನು ಬಯಸದ ಜನ, ಪರಂಪರೆ, ಸಂಸ್ಕøತಿ ಮತ್ತು ಧರ್ಮಗಳ ಹೆಸರಲ್ಲಿ ಅವಶೇಷಗಳನ್ನೇ ಮೋಹಿಸುತ್ತಾ ಬಂದಿದ್ದಾರೆ. ಭಯೋತ್ಪಾದನೆ, ಜಾತಿವಾದ, ಕೋಮುವಾದ, ಫ್ಯಾಸಿಸಮ್‍ಗಳ ಮೂಲಗಳಿರುವುದು ಪರಂಪರೆಯ ಈ ಮೋಹದಲ್ಲಿ. ಬದಲಾವಣೆಗಳನ್ನು ದ್ವೇಷಿಸುವ ಮೂಲಭೂತವಾದ ಜಗತ್ತಿನ ಎಲ್ಲ ಅಮಾಯಕರ ರಕ್ತದ ರುಚಿ ನೋಡಿದೆ, ನೋಡುತ್ತಲೂ ಇದೆ.
ಶಬರಿಮಲೆಯ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಿರುವ ಜನರ ಮೌಢ್ಯವನ್ನು ನೋಡಿ ಮೇಲಿನ ಟಿಪ್ಪಣಿಯನ್ನು ಬರೆಯಬೇಕಾಯಿತು. ಶಬರಿಮಲೆಯ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ತಡೆಯಬಾರದೆಂದೂ, ದೇವಾಲಯ ಪ್ರವೇಶ ಮಹಿಳೆಯರ ಹಕ್ಕು ಎಂದು ಸುಪ್ರಿಮ್ ಕೋರ್ಟ್ ಬಹುಮತದ ತೀರ್ಪು ನೀಡಿದೆ. ಈ ತೀರ್ಪು ಒಂದು ಅರ್ಥದಲ್ಲಿ ಪರಂಪರೆಯನ್ನು ಕುರುಡಾಗಿ ಮೋಹಿಸುವ ಜನರಿಗೆ ಚಾಟಿ ಬೀಸಿದೆ. 1965ರಲ್ಲಿ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಕೇರಳ ಸರ್ಕಾರ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶವನ್ನು ನಿರಾಕರಿಸಿತ್ತು. 10 ರಿಂದ 50 ವರ್ಷಗಳ ವಯಸ್ಸಿನ ಮಹಿಳೆಯರು ಮುಟ್ಟಾಗುವುದರಿಂದ ಅವರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನರ್ಹರು ಎಂಬ ಕೇರಳ ಸರ್ಕಾರದ ನಿರ್ಧಾರ ಈ ತೀರ್ಪಿನಿಂದಾಗಿ ರದ್ದಾದಂತಾಗಿದೆ. ಆದರೆ, ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವುದು ಕೇವಲ ಕೇರಳ ಸರ್ಕಾರದ ನಿರ್ಧಾರವಲ್ಲ. ಆರಾಧನಾ ಸ್ಥಳಗಳ ಪ್ರವೇಶವನ್ನು ನಿರ್ಬಂಧಿಸುವ ವಿಧಿಗಳು ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿವೆ. ಯಾರು ತಪಸ್ಸು ಮಾಡಬೇಕು, ಯಾರು ಓದಬೇಕು, ಜ್ಞಾನವನ್ನು ಪಡೆಯಲು ಯಾರು ಅರ್ಹರು, ಯಾರು ದೇವರಿಗೆ ಹತ್ತಿರವಾಗಬೇಕು, ಯಾರು ದೇವರನ್ನು ಸಮೀಪಿಸಬಹುದು ಎಂಬ ವಿಧಿಗಳು ಹಿಂದೂ ಧರ್ಮಶಾಸ್ತ್ರದಲ್ಲಿ ಪದೇಪದೇ ಸ್ಪಷ್ಟಪಡಿಸಲ್ಪಟ್ಟಿವೆ. ಈ ವಿಧಿಗಳನ್ನು ಪರಂಪರೆಯ ವ್ಯಾಮೋಹಿಗಳು

ಕಾಲದಿಂದ ಕಾಲಕ್ಕೆ ಜೀವಂತವಾಗಿಟ್ಟುಕೊಂಡೇ ಬಂದಿದ್ದಾರೆ. ಕೆಳಜಾತಿಯ ದುಡಿವ ಜನರನ್ನು ಮತ್ತು ಮಹಿಳೆಯರನ್ನು ಆರಾಧನಾ ಸ್ಥಳಗಳಿಂದ ಕಟ್ಟುನಿಟ್ಟಾಗಿ ಬಹಿಷ್ಕರಿಸಿದ್ದು ಮತ್ತು ಅದನ್ನು ಪರಂಪರೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಧರ್ಮವೆಂದರೆ ಅದು ಹಿಂದು ಧರ್ಮ ಮಾತ್ರ. ಹಿಂದೂ ಧರ್ಮದ ಈ ಜೀವವಿರೋಧಿ ಪರಂಪರೆಗೆ ಪರ್ಯಾಯವಾಗಿ ಅನೇಕ ದರ್ಶನಗಳು ಭಾರತದಲ್ಲಿ ಹುಟ್ಟಿವೆ. ಬೌದ್ಧ ದರ್ಶನ ಮತ್ತು ವಚನ ಚಳುವಳಿಯ ಆಶಯಗಳು, ಹಿಂದೂ ಧರ್ಮದ ರೂಢಿಗತ ಚಿಂತನೆಗಳಿಗೆ ಪರ್ಯಾಯಗಳನ್ನು ಮಾತ್ರ ರೂಪಿಸಲಿಲ್ಲ. ಈ ದೇಶದ ಬಹುಸಂಖ್ಯಾತ ದುಡಿವ ಜನರ ಅಂತಃಸ್ಸತ್ವವನ್ನು ನ್ಯಾಯಬದ್ಧಗೊಳಿಸುವ ತತ್ವದರ್ಶನವನ್ನು ರೂಪಿಸಿದವು. ತೀರಾ ಇತ್ತೀಚೆಗೆ, ದೇವಾಲಯ ಪ್ರವೇಶವನ್ನು ಎಲ್ಲ ಜನರ ಹಕ್ಕು ಎಂದು ಪ್ರತಿಪಾದಿಸಿದ್ದು ಅಂಬೇಡ್ಕರ್. ಅದಕ್ಕೂ ಮೊದಲು ನಾರಾಯಣಗುರು ಕೆಳಜಾತಿಗಳ ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಆದರೆ ಪೆರಿಯಾರ್ ಹಿಂದೂ ದೈವಗಳನ್ನು ಮಾತ್ರವಲ್ಲ, ದೇವಾಲಯಗಳನ್ನೇ ನಿರಾಕರಿಸಿದರು. ತನ್ನೆಲ್ಲಾ ಮೂರ್ತಿಭಂಜಕ ಚಿಂತನೆಗಳಿಂದ ಪೆರಿಯಾರ್ ದಲಿತರು ಮತ್ತು ಮಹಿಳೆಯರನ್ನೂ ಒಳಗೊಂಡಂತೆ ಬಹಿಷ್ಕøತ ಭಾರತದ ಬಹುಸಂಖ್ಯಾತ `ಹತಭಾಗ್ಯರು’ ನಡೆಯಬಹುದಾದ ಹಾದಿಗೆ ದಿಕ್ಸೂಚಿಯೇ ಆಗಿದ್ದರು, ಆಗಿದ್ದಾರೆ ಸಹ.

ಮಹಿಳೆಯರು, ಶಬರಿಮಲೆಯ ದೇವಾಲಯ ಪ್ರವೇಶದ ಕುರಿತ ನ್ಯಾಯಾಲಯದ ತೀರ್ಪು ಮೇಲ್ನೋಟಕ್ಕೆ ಕ್ರಾಂತಿಕಾರಿ ನಡೆಯಂತೆ ಕಾಣುತ್ತಿದೆ. ಈ ತೀರ್ಪು ಸಾರಾಂಶದಲ್ಲಿ, ಸಂವಿಧಾನದಲ್ಲಿರುವ ಸಹಜ ಹಕ್ಕುಗಳ ಪ್ರತಿಪಾದನೆ ಮಾಡಿದೆಯಷ್ಟೆ. ನ್ಯಾಯಾಲಯದ ಈ ತೀರ್ಪನ್ನು ಸಂಭ್ರಮಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿಲ್ಲ. ಸಂವಿಧಾನವನ್ನು ಒಪ್ಪದ, ಬಹುಸಂಖ್ಯಾತ ದುಡಿವ ಜನರ ಹಕ್ಕುಗಳನ್ನು ನಿರಾಕರಿಸುವ ಮೂಲಭೂತವಾದಿ ನವಬ್ರಾಹ್ಮಣ್ಯ ಎಲ್ಲೆಡೆ ಸಂಚಯಿಸುತ್ತಿದೆ. ಮುಟ್ಟಾಗುವ ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ಮೂಲಭೂತವಾದಿ ಮನಸ್ಥಿತಿಯ ಹಿಂದೆ ಕೇವಲ ಮಡಿಮೈಲಿಗೆಯ ಕರ್ಮಠತೆ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಜಾತಿಯ ಬಹುಸಂಖ್ಯಾತ ದುಡಿವ ಜನರ ಸಹಜ ಹಕ್ಕುಗಳನ್ನು ದಮನ ಮಾಡುವ ಹುನ್ನಾರು ಈ ಕರ್ಮಠತೆಯ ಹಿಂದೆ ಅಡಗಿ ಕುಳಿತಿದೆ. ಅಂಬೇಡ್ಕರ್, ಅಸ್ಪøಶ್ಯರ ದೇವಾಲಯ ಪ್ರವೇಶವನ್ನು ಅತ್ಯಂತಿಕವೆಂದು ಭಾವಿಸಿರಲಿಲ್ಲ. ಸಾಮಾಜಿಕ ಅಸಮಾನತೆಯನ್ನು ನಿರ್ಲಜ್ಜವಾಗಿ ಸಮರ್ಥಿಸುತ್ತಿದ್ದ ಮತ್ತು ಆಚರಣೆಯಲ್ಲಿಡುತ್ತಿದ್ದ ದೇವಾಲಯಗಳು, ಕೆರೆಗಳು ಮುಂತಾದ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕೆಂದು ಅಂಬೇಡ್ಕರ್ ಬಯಸಿದ್ದರು. ದೇವಾಲಯಗಳು, ದೈವಗಳು, ನಂಬಿಕೆ ಸಂಪ್ರದಾಯಗಳು ಈ ದೇಶದ ಬಹುಸಂಖ್ಯಾತ ದುಡಿವ ಜನರನ್ನು ವಿಮೋಚನೆಗೊಳಿಸಲಾರವು ಎಂಬ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು ‘ಹಿಂದುವಾಗಿ ಸಾಯಲಾರೆ’ ಎಂದು ಬೌದ್ಧ ಧಮ್ಮದ ಕಡೆ ನಡೆದುಹೋದರು. ಅಂಬೇಡ್ಕರ್, ಧರ್ಮವನ್ನು ಮತ್ತು ಅದರ ಕರ್ಮಠ ಆವರಣವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಅವರು ಬೌದ್ಧ ಧಮ್ಮವನ್ನು ನೆಚ್ಚಿಕೊಳ್ಳುವುದರ ಮೂಲಕ ಹೊಸ ಆಧ್ಯಾತ್ಮಿಕ ಅವಕಾಶವನ್ನು ಶೋಷಿತರ ಮುಂದೆ ತೆರೆದಿಟ್ಟರು. ಕರ್ಮಠ ನಂಬಿಕೆಗಳಿಗೆ, ಮೂಲಭೂತವಾದಕ್ಕೆ, ಸಾಂಸ್ಥಿಕ ಧರ್ಮವೊಂದಕ್ಕೆ ಬುದ್ಧನ ಚಿಂತನೆಗಳ ಮೂಲಕ ಎದುರೇಟು ಕೊಟ್ಟರು. ಹೀಗಾಗಿ, ಅಂಬೇಡ್ಕರ್ ಬುದ್ಧಿಸಮ್‍ನ್ನು ಧರ್ಮವನ್ನಾಗಿ ಮಾತ್ರ ಪರಿಭಾವಿಸಲಿಲ್ಲ. ಬುದ್ಧಿಸಮ್ ಶೋಷಿತರ ವಿಮೋಚನೆಯನ್ನು ಸಾಧ್ಯವಾಗಿಸಬಲ್ಲ, ಅಸಮಾನತೆಯ ಆಚರಣೆಗೆ ಆಸ್ಪದ ನೀಡದ ಒಂದು ಪ್ರತಿದರ್ಶನ ಎಂದೇ ಅಂಬೇಡ್ಕರ್ ಭಾವಿಸಿದ್ದರು. ಈ ಮೂಲಕ, ನಿತ್ಯದ ಬದುಕಲ್ಲಿ ತಮಗೆ ಬೇಕಾದದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ನಿರಾಕರಿಸಿಬಿಡುವ ಮುಕ್ತ ಅವಕಾಶವನ್ನು ಅಂಬೇಡ್ಕರ್ ಶೋಷಿತರ ಮುಂದೆ ತೆರೆದಿಟ್ಟರು.
ಸಾವಿರಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವ ದೈವಗಳಿಗೆ ತಮ್ಮ ಸುತ್ತ ನಡೆಯುತ್ತಿರುವ ಕ್ರೂರ ಶೋಷಣೆ ಮತ್ತು ಅಸಮಾನತೆಗಳನ್ನು ತೊಡೆದು ಹಾಕುವ ಸಾಮಥ್ರ್ಯವಿಲ್ಲ ಎಂದಾದ ಮೇಲೆ ಅವುಗಳನ್ನು ನಾವೇಕೆ ಪೂಜಿಸಬೇಕು? ಲಿಂಗಭೇದವನ್ನು, ಅಸ್ಪøಶ್ಯತೆಯನ್ನು ಆಚರಿಸುವ ಕೇಂದ್ರಗಳಂತಿರುವ ದೇವಾಲಯಗಳು ನಮಗೆ ಯಾಕೆ ಬೇಕು? ದೇವಾಲಯ ಪ್ರವೇಶ ನಮಗೆ ವರ್ತಮಾನದ ತುರ್ತಾಗಬೇಕೆ? ಅಂಬೇಡ್ಕರ್ ಹೇಳಿದಂತೆ, ಸಾಮಾಜಿಕ ಗುಲಾಮರಿಗೆ ಅವಕಾಶ ಮಾಡಿಕೊಡುವ ಎಲ್ಲವನ್ನೂ ನಾವು ನಿರಾಕರಿಸುವ ಅಗತ್ಯವಿದೆ. ವಿಮೋಚನೆಗಾಗಿ ಇದು ಸಂಪೂರ್ಣ ನಿರಾಕರಣೆಯ ಹಠಯೋಗ. ನಮಗೀಗ ಬೇಕಿರುವುದು ಲಿಂಗಭೇದ, ಅಸ್ಪøಶ್ಯತೆಯನ್ನ ಆಚರಿಸುವ ಕೂಪಗಳಂತಾಗಿರುವ ದೇವಾಲಯಗಳಲ್ಲ. ನಮ್ಮನ್ನು ಕುಬ್ಜರನ್ನಾಗಿಸುವ ನಂಬಿಕೆ, ಸಂಪ್ರದಾಯ, ಧರ್ಮಗಳು ನಮಗೆ ಬೇಕಿಲ್ಲ. ಮನುಷ್ಯನ ಬದುಕಿನ ಘನತೆಯನ್ನು ಎತ್ತಿಹಿಡಿಯದಿದ್ದಲ್ಲಿ ಅವುಗಳ ವರ್ತಮಾನದ ಅಗತ್ಯವನ್ನು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವುದೇ ಪರಂಪರೆಗೆ ಎಷ್ಟೇ ಸಾವಿರ ವರ್ಷದ ಇತಿಹಾಸವಿರಲಿ, ಆ ಪರಂಪರೆ ವರ್ತಮಾನವನ್ನು ನಿನ್ನೆಗಳಿಗೆ ಬಲಿಕೊಡುವಂತಿದ್ದರೆ ಅದು ನಮಗೆ ಬೇಡ. ಅಂತಹ ಪರಂಪರೆ ನಮ್ಮ ಬದುಕಿಗಿಂತ ಘನವಾದದ್ದೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....