Homeಕಥೆಸಣ್ಣ ಕಥೆ: ತ್ರೀ ಸೆವೆಂಟಿ ದೇಶದೊಳು...

ಸಣ್ಣ ಕಥೆ: ತ್ರೀ ಸೆವೆಂಟಿ ದೇಶದೊಳು…

- Advertisement -
- Advertisement -

ಮಳೆ ಬಂದು ನಿಂತಿತ್ತು. ಒಂದು ವಾರದಿಂದಲೂ ಬಿಟ್ಟೂಬಿಡದೆ ಸುರಿದ ಪರಿಣಾಮ ಹೊರಗೆ ಬರಲು ಆಗಿರಲಿಲ್ಲ.

ಪರಮಗ್ರಂಥದ ಪಠಣವೂ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು. ಸಾವಿರಾರು ಮೈಲಿ ದೂರದಿಂದ ಬಂದು ಧರ್ಮಪ್ರಚಾರ ಮಾಡುವುದೆಂದರೆ ಸುಮ್ಮನೆ ಆದೀತೆ ?

ಅಪರೂಪಕ್ಕೆಂಬಂತೆ ಹೊರಬಂದ ಶುಭ್ರ ಶ್ವೇತ ವಸ್ತ್ರಧಾರಿ ಕಾಶ್ಮೀರಿ ಮುಲ್ಲಾರ ಮನಸ್ಸಿನಲ್ಲಿ ತಳಮಳವಿತ್ತು. ಆಗೊಮ್ಮೆ ಈಗೊಮ್ಮೆ ಬೆಳ್ಳಗಿನ ಮುಖದ ಅಂದ ಹೆಚ್ಚಿಸಿದ ಕಪ್ಪು ಗಡ್ಡವನ್ನೊಮ್ಮೆ ಸವರಿಕೊಳ್ಳುವರು. ಸುರಿದೂ ಸುರಿದು ಸುಸ್ತಾಗಿರುವಂತೆ ತೋರುವ ಮೋಡಗಳಿಗೆ ಮತ್ತೆ ಸುರಿಸುವ ತಾಕತ್ತಿರಲಿಲ್ಲ. ಮಳೆ ನಿಂತಿತೆಂದು ಹೊಂಬಣ್ಣದ ಸೂರ್ಯ ಮರೆಯಿಂದ ಬರಲು ಹವಣಿಸುತಿದ್ದ. ಅದ್ಯಾರು ಹೇಳಿದರೋ ಏನೋ… ಹಾವೇರಿಗೆ ಹಾಯಬಾರದು ಹಾನಗಲ್ಲನಲ್ಲಿ ಸಾಯಬಾರದು ಅಂತ!. ಎಂಥಾ ಆಹ್ಲಾದಕರ ಊರುಗಳಿವು! ಎಷ್ಟು ಒಳ್ಳೆಯ ಜನರಿವರು!.

ತುಂಬಿ ಹರಿವ ಧರ್ಮಾನದಿಯ ಕಾಲುವೆಯಲಿ ಇಳಿಬಿಟ್ಟ ತನ್ನ ಎರಡೂ ಕಾಲುಗಳನ್ನೊಮ್ಮೆ ನೋಡಿಕೊಳ್ಳುತ್ತ, ಅದೆಷ್ಟು ಹೊತ್ತು ಕುಳಿತಿದ್ದರೋ ….ದೂರದಲ್ಲಿನ ನೀರಿನ ಸೆಳೆತದ ಸದ್ದೂ ಕೇಳಿಸುತ್ತಿತ್ತು.

ತಲೆ ತುಂಬ ಏನೇನೋ ಯೋಚನೆಗಳು… ಸುಮ್ಮನೆ ತಲೆಯೆತ್ತಿ ಆಕಾಶ ನೋಡಿದರು. ಬೆಳ್ಳಗಿದ್ದ ಮೋಡಗಳೆಲ್ಲ ನಿಧಾನವಾಗಿ ಕಪ್ಪಗೆ ತಿರುಗುತ್ತಿದ್ದವು. ಮನಸ್ಸು ದುಗುಡಗೊಳ್ಳುತ್ತಾ ಹೋಯಿತು.

ಅನ್ಯಮನಸ್ಕರಾದ ಮುಲ್ಲಾರು ದೂರ ದಿಗಂತದತ್ತ ದಿಟ್ಟಿಸಿದರು. ಇಂತಹದೇ ಒಂದು ಸಂಜೆಯ ವಿಹಾರದಲ್ಲಿ ಪಂಡಿತರು “ಭೂಮಿ, ಆಕಾಶಗಳೆಲ್ಲವೂ ರೆಕ್ಕೆಬಿಚ್ಚಿ ಹಾರುತ್ತಿರುವ ಹಕ್ಕಿಗಳು ರಾಮನ, ಅಲ್ಲಾಹನ, ಯೇಸುವಿನ ಕೀರ್ತನೆಗಳನ್ನು ಹಾಡುವಂತೆ ಹಾರುವುದನ್ನು ನಾವು ನೋಡುತ್ತಿದ್ದೇವೆ. ಪ್ರತಿಯೊಂದು ಪ್ರಾಣಿ, ಪಕ್ಷಿಗಳಿಗೂ ನಮ್ಮ ಆರಾಧನೆ, ನಮಾಜಿನ ಕ್ರಮ: ಪ್ರಾರ್ಥನೆಗಳ ಕ್ರಮ ಗೊತ್ತಿದೆ. ಇವೆಲ್ಲವುಗಳನೂ ಆ ದೇವರು ಅರಿತಿರುತ್ತಾನೆ” ಎಂದು ಹೇಳಿದ್ದು ಎಷ್ಟು ಸತ್ಯವಲ್ಲವೆ? ತಾನು ಕುಳಿತಿದ್ದ ಜಾಗೆ, ಸುತ್ತಲಿನ ವಾತಾವರಣದ ಪ್ರಭಾವವೋ.. ಮುಸ್ಸಂಜೆಯಲಿ ಆವರಿಸಿದ ಕತ್ತಲಿಗೋ …ಮನಸ್ಸು ತೆರೆದುಕೊಳ್ಳತೊಡಗಿತ್ತು. ಅದರಲ್ಲೂ ಪಂಡಿತರು ದೂರವಾಣಿ ಕರೆ ಮಾಡಿ ಮಾತನಾಡಿದ ಕಾಲದಿಂದಲೂ ಹೀಗೆಯೇ ಮಡುಗಟ್ಟಿದ ದುಗುಡ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು.

“ಕಾಶ್ಮೀರದ ಸಮಸ್ಯೆಗೆ ಪರಿಹಾರಗಳೇನೂ ಇಲ್ಲವೇ?” ನಿಟ್ಟುಸಿರುಗೈದಿದ್ದೆ.
“ನೋಡಿ, ಇಪ್ಪತ್ತನೆ ಶತಮಾನವಿದೆಯಲ್ಲ ಇದು ಹಿಂಸಾತ್ಮಕ ಶತಮಾನ. ನಾವು ಮನುಷ್ಯರೇ
ಸೃಷ್ಟಿಸಿಕೊಂಡ ದುರಂತಗಳಿಂದಾಗಿ ಈಗಾಗಲೆ ಹದಿನೆಂಟು ಇಪ್ಪತ್ತು ಕೋಟಿ ಜನರ ಮಾರಣಹೋಮವಾಗಿದೆ. ಇಡೀ ಮನುಷ್ಯಕುಲವೇ ಶಾಶ್ವತವಾಗಿ ಹಿನ್ನಡೆ ಅನುಭವಿಸುವಂತಹ ಸ್ಥಿತಿಗೆ ತಲುಪಿದ್ದೇವೆ” ಎಂದಿದ್ದರು.

ಪಂಡಿತರು…ಪಂಡಿತರೇ.  ಎಷ್ಟೆಲ್ಲ ವಿಷಯಗಳನ್ನು ತಿಳಿದುಕೊಂಡಿರುವರಲ್ಲ ಎಂದು ಹೆಮ್ಮೆಯೆನಿಸುತ್ತಿತ್ತು.

* * *
ನಾಕರ ಕತ್ತರಿಯಲ್ಲಿ ಬಸ್ಸಿಗೆ ಕಾಯುತ್ತಿದ್ದವರ್ಯಾರೋ ಮಧ್ಯವಯಸ್ಕ ತಂದೆತಾಯಿ ಮಗುವನ್ನೆತ್ತಿಕೊಂಡು ಬಂದರು.

“ಊರಿಗೆ ಹೊಂಟಿದ್ವಿರೀ ಸಾಹೇಬರಾ ಮಗಂಗೆ ಉಸಾರಿಲ್ರಿ, ಹಲಕುರ್ಕಿ ಡಾಕುಟ್ರುತ್ರ ತೋರಿಸ್ಕಂದು, ಗ್ರಾಮದೇವತಿ ದ್ಯಾಮವ್ವ ಗುಡಿ ಪೂಜಾರತ್ರ ಅಂತ್ರ ಹಾಕಿಸ್ಕೊಂಡು ಬಂದ್ವಿ. ಅಂಗಾ ನೀವು ಕುಂತಿದ್ರೀ…ಆಶೀರ್ವಾದ ಮಾಡ್ಸಿದ್ರಾತು ಅನಕಂಡು ಬಂದೇವರಿ…ಆಶೀರ್ವಾದ ಮಾಡ್ರಿ ಸಾಹೇಬರ” ಒಂದೇಸಮನೆ ಮಾತಾಡುತ್ತಿದ್ದವರನ್ನೆ ದಿಟ್ಟಿಸಿದರು. ಅವರು ಹೇಳಿದ ಒಂದೂ ಮಾತು ತನಗೆ ತಿಳಿಯುವ ಭಾಷೆಯದ್ದಾಗಿರಲಿಲ್ಲ. ಭಾವಕ್ಕೆ ಭಾಷೆಯ ಹಂಗಿಲ್ಲವಲ್ಲ? ಎಲ್ಲವೂ ಅರ್ಥವಾಗಿತ್ತು.

ಕಣ್ಣುಮುಚ್ಚಿ ದೇವನ ಧ್ಯಾನಿಸಿ ಮಗುವಿನ ತಲೆಮೇಲೆ ಮೃದುವಾಗಿ ಕೈಯಿಟ್ಟು ಸವರಿದರು. ಹೆಗಲ ಮೇಲೆ ಮಲಗಿದ್ದ ಮಗು ಮಿಸುಕಾಡಿ ಎಚ್ಚರಗೊಂಡಿತು. ಎದುರಿಗಿನ ಗಡ್ಡಧಾರಿಯ ನೋಡಿ ಯಾರೀತ..? ಎಂಬಂತೆ ಅಪ್ಪನೆಡೆಗೊಮ್ಮೆ ಅವ್ವನೆಡೆಗೊಮ್ಮೆ ನೋಡಿ…ತುಟಿಯಂಚಿನಲ್ಲಿ ಆ ದಣಿವಿನಲ್ಲೂ ನಗೆಯ ಎಸಳು ಬಿಸಾಕಿ ಮತ್ತೆ ಹೆಗಲಿಗೊರಗಿತು.

ಅಷ್ಟಕ್ಕೆ ಆ ತಾಯಿಯ ಸಂಭ್ರಮ ಎಷ್ಟಿತ್ತು? ಬದುಕು ಸಾರ್ಥಕ ಅಂತನ್ನಿಸೋದು ಇಂತಹ ಕ್ಷಣಗಳಲ್ಲಿಯೇ.

“ಭಾಳ ಛಲೋದಾತ್ರೀ.. ಸಾಬರೆ, ಮದ್ವಿಯಾಗಿ ಹದ್ನೈದು ವರ್ಸಕ್ಕ ಹುಟ್ಟ್ಯಾನ್ರೀ.. ಅಂಗಾಗಿ” ಎಂದವಳ ಮಾತು ನಿಲ್ಲಿಸಿ, ಸುಧಾರಿಸಿಕೊಂಡು ಮತ್ತೆ “ಮುಂಜಾಕಿಂದ ಮಕ್ಕಣದೆ ಮಾಡ್ತಾನರಿ,… ಇವಾಗ ನಿಮ್ಮನ ನೋಡಿ ನಕ್ಕುದ್ದು ನೋಡ್ರಿ” ಕೃತಜ್ಞತೆಯ ಭಾರದಿಂದ ಅವರ ಕಣ್ಣಾಲಿಗಳು ತುಂಬಿದ್ದವು.

ಆಯ್ತು… ನೀವಿನ್ನು ಹೋಗಿ ಬನ್ನಿ ಎನ್ನುವವರಂತೆ ಎದ್ದು ನಿಂತರು. ಅವರು ಹೋಗುವುದನ್ನೆ ಎಷ್ಟೋ ಹೊತ್ತು ನೋಡುತ್ತಾ ನಿಂತುಬಿಟ್ಟರು.
* * *

ಸೈತಾನನು ಯಾರ ತಲೆಯಲ್ಲಿ ಇರುತ್ತಾನೋ ಅವನು ಅನುಮಾನ ಪಡುತ್ತಾನೆ… ಎಂದೇನೋ ಇಂದು ಮುಂಜಾನೆ ಬೋಧಿಸಿದ್ದು ನೆನಪಾಯಿತು. ಹೌದು, ಈ ಮಾತೇಕೆ ಪದೇಪದೇ ನೆನಪಾಗುತ್ತಿದೆ? ಪಂಡಿತರ ಪೋನ್‌  ಕರೆ ಬಂದಾಗಿನಿಂದಲೂ ಹೀಗೆಯೇ ಆಗುತ್ತಿದೆ. ಕಾಶ್ಮೀರ ಬಿಟ್ಟು ಬಂದು ಎರಡು ತಿಂಗಳ ಮೇಲಾಯಿತು. ಮೊದಮೊದಲು ಇಲ್ಲಿಗೆ ಬಂದಾಗ ಹೇಗೋ ಏನೋ ಅನ್ನಿಸಿತ್ತು. ಭಾಷೆ, ಆಚಾರ ವಿಚಾರ ಎಲ್ಲದರ ಬಗ್ಗೆಯೂ ದುಗುಡ, ಆತಂಕದಿಂದಲೇ ಬಂದಿದ್ದರು. ಅಲ್ಲಿಗೆ ಬಂದ ಮೇಲೆಯೇ ಗೊತ್ತಾದದ್ದು, ದೇಶವೆಂಬ ಈ ತಾಯಿ ಗರ್ಭದೊಳಗೆ  ಎಷ್ಟೊಂದು ಧರ್ಮಗಳ ಭ್ರೂಣಗಳಿವೆ? ಎನಿಸಿತ್ತು. ಗೆಳೆಯ ಪದ್ಮಚರಣ ಪಂಡಿತರ ಮಾತುಗಳು, ಧರ್ಮಗ್ರಂಥಗಳ ಸರಳಾನುವಾದವನ್ನು ಸಂದರ್ಭಕ್ಕೆ ತಕ್ಕಂತೆ ಹೇಗೆಲ್ಲ ಬಳಸುತ್ತಿದ್ದರು. ನಾನು ಹೇಳಿದ ಪ್ರವಾದಿಗಳ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಧರ್ಮಗ್ರಂಥಗಳು ಬೇರೆಯಾದರೂ ಚಿಂತನಾಕ್ರಮದಲ್ಲಿನ ಸಾಮ್ಯತೆಯನ್ನು ಎತ್ತಿ ತೋರಿಸುತ್ತಿದ್ದರು. ತಾಸುಗಟ್ಟಲೆ ಪಂಡಿತರ ಮನೆಯಲ್ಲಿ, ನಮ್ಮ ಮನೆಯಲ್ಲಿ ಚರ್ಚೆಗಳಾಗುತ್ತಿದ್ದವು. ಆಗೆಲ್ಲ ಕಾಶ್ಮೀರವೂ…. ಸುಂದರವಾಗಿಯೇ ಇತ್ತು.
* * *

ರಾಜಕೀಯದ ಮಾತು ಬಂತೆಂದರೆ ಮುಗಿಯಿತು. ವೇಳೆ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಆಗೆಲ್ಲ ಪದ್ಮಚರಣ ಪಂಡಿತರು ಹೇಳಿದ ಮಾತುಗಳು ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿವೆ.

ನೋಡು ಗೆಳೆಯಾ, ಕಾಶ್ಮೀರದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ಸಂಘರ್ಷಕ್ಕಿಂತಲೂ ಜನಾಂಗೀಯ ಸಂಘರ್ಷ ಹುಟ್ಟುಹಾಕಿದ ಪ್ರಭುತ್ವ ಎಲ್ಲರಿಗೂ ಗೊತ್ತಿರುವಂಥದ್ದೆ. ಆ ಸಂದರ್ಭದಲ್ಲಿ ಶ್ರೀನಗರದ ಬೀದಿಯೊಂದರಲ್ಲಿ ಪಂಡಿತರ ಹೆಣ ಬಿತ್ತು. ಧರ್ಮಸಂಘರ್ಷದಲ್ಲಿ ಅಸುನೀಗಿದ ಆ ಬಡಪಾಯಿ ಪಂಡಿತನ ಹೆಣದ ಅಂತ್ಯಸಂಸ್ಕಾರಕ್ಕೂ ಯಾರೂ ಬರಲಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಒಬ್ಬ ಯುವಕ, ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡಿಬಂದಿದ್ದ ಯುವಕನೊಬ್ಬನೆ ಆ ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಹೆಣವನ್ನು ಹೆಗಲ ಮೇಲೆ ಹೊತ್ತು, ಕಾಶ್ಮೀರಿ ಪಂಡಿತರ ಧರ್ಮದನುಸಾರವೇ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಾನೆ. ಆತ ಬೇರಾರೂ ಅಲ್ಲ ಷೇಕ್ ಅಬ್ದುಲ್ಲಾ!. ಇಂತಹ ಅನೇಕ ವಿಷಯಗಳನ್ನು ಹೇಳ್ತಿರ್ತಾರೆ. ಪಂಡಿತರ ಜೊತೆ ಮಾತಾಡ್ತ ಕುಳಿತರೆ ವೇಳೆಯ ಪರಿವೇ ಇರುವುದಿಲ್ಲ. ವರ್ತಮಾನದ ರಾಜಕೀಕರಣಗೊಂಡ ಧರ್ಮಗಳ ಸ್ಥಿತಿ ನೆನೆದು, ಬಲಿಪಶುವಾಗುವ ಮುಗ್ಧಜನರ ನೆನೆದು ದುಃಖಿತರಾಗುತ್ತಿದ್ದುದೂ ಉಂಟು.

ಆಗ ನನಗೆ ಗೊತ್ತಿರುವ ಪ್ರವಾದಿಗಳ ಕೆಲಸಾಲುಗಳನ್ನು ಉಲ್ಲೇಖಿಸುತ್ತಿದ್ದೆ.

“ಹೆದರಬೇಡ, ನಾನು ರಾಜನಲ್ಲ. ನಿನ್ನಂತೆಯೇ ಸಾಮಾನ್ಯ ಮನುಷ್ಯ. ನೀನು ತಿನ್ನುವ ವಸ್ತುಗಳನ್ನೇ ನಾನೂ ತಿನ್ನುತ್ತೇನೆ. ನಿನ್ನ ಮೇಲೆ ಬೀರುವ ಸೂರ್ಯನೇ ನನ್ನ ಮೇಲೆಯೂ ಪ್ರಕಾಶ ಬೀರುತ್ತಾನೆ”ಎಂದು ಮಹಮ್ಮದರು ಹೇಳಿದ್ದನ್ನು ಹೇಳುತ್ತಿದ್ದೆ.

ಆದರೆ, ಈಗ್ಗೆ ಎರಡು ತಿಂಗಳಿಂದ ಮಾತಾಡಲು ಸಾಧ್ಯವಾಗಿಲ್ಲ. ಫೋನಿನಲ್ಲಿ  ಮಾತನಾಡಿದ್ದರೂ ಎಷ್ಟು ಮಾತಾಡಬಹುದು? ಉಭಯರ ಕುಶಲೋಪರಿಯಲ್ಲಿ ವೇಳೆ ಸರಿದುಹೋಗಿರುತ್ತದೆ.

ಈ ದಿನದ ಕರೆ…. ಎಂದಿನಂತಿರಲಿಲ್ಲ. ಧ್ವನಿಯ ತರಂಗಗಳಲ್ಲಿಯೆ ಪಂಡಿತರ ಆತಂಕವನ್ನು ಗ್ರಹಿಸಬಲ್ಲವ ನಾನು. ಪಂಡಿತರ ಗ್ರಹಿಕೆಯಂತೂ ಭಾಳ ವಿಶಿಷ್ಟದ್ದು. ವಿಭಿನ್ನ ಗ್ರಹಿಕೆಗಳನ್ನು ಒಟ್ಟುಗೂಡಿಸಿ ತೋರಿಸುವ ಮೂಲಕ ನಾವು ಎಂದೂ ಯೋಚಿಸಿರದ ಹೊಸ ಭಾರತವೊಂದನ್ನು ತೋರಿಸುತ್ತಿದ್ದರು. ನಾನು ನಿರಾಶನಾದಾಗಲೆಲ್ಲ” ಇಲ್ಲ ಸಹೋದರ, ಭಾರತಕ್ಕೆ ಉಜ್ವಲ ಭವಿಷ್ಯವಿದೆ” ಎಂದೇ ಹೇಳುತ್ತಿದ್ದರು. ಅವರ ಇಂಥಾ ಆಶಾವಾದ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಿತ್ತೆಂದರೆ ಆ ದಿನ ನಾನು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೆ. ಅವರೊಂದಿಗೆ ಮಾತಾಡದೆ ಇರಲು ಸಾಧ್ಯವೇ ಇರಲಿಲ್ಲ.

ಮಧ್ಯಾಹ್ನದ ಸಂಭಾಷಣೆ ಮತ್ತೆ ಮತ್ತೆ ಕೇಳುತಿದೆ.
“ಟೀವಿ ನೋಡಿದಿರಾ..? ಇವತ್ತು?” ಆ ಕಡೆಯಿಂದ ಪಂಡಿತರ ಧ್ವನಿ ಎಂದಿನಂತಿರಲಿಲ್ಲ.
“ಹ್ಞೂಂ.. ನೋಡಿದೆ ಪಂಡಿತರೆ…. ಏನ್ ಸಮಾಚಾರ..?”
ಅಲ್ಲಿ ತಾವು ಹೇಗಿದ್ದೀರಿ ?

“ನನಗೇನೂ ತೊಂದರೆಯಿಲ್ಲ. ಕರ್ನಾಟಕವೆಂದರೆ ಸೌಹಾರ್ದತೆಗೆ ಇನ್ನೊಂದು ಹೆಸರು” ಎಂದಿದ್ದಕ್ಕೆ ಸಮಾಧಾನದ ಉಸಿರೆಳೆದ ಸದ್ದೂ ಕೇಳಿಸಿತ್ತು.

ತಾವು…. ಕುಟುಂಬ ಎಲ್ಲರೂ ಸೌಖ್ಯವಾಗಿದ್ದೀರಿ ತಾನೆ? ಕೇಳಿದ್ದೆ.
“ಎಲ್ಲಾ ಸರಿಯಿದೆ.

ಮನೇಲೇನೂ ತೊಂದ್ರೆಯಿಲ್ಲ…. ಆದರೆ ಊರು ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಇಲ್ಲಿನ ಚಿಂತೆ ನನಗೆ ಬಿಡಿ, ನಾನು ಎರಡೂ ಮನೆ ಕಡೆ ನೋಡಿಕೊಳ್ಳುವೆ. ನೀವು ಸದ್ಯ ಇಲ್ಲಿಗೆ ಬರುವುದು ಬೇಡ….” ಕರೆ ನಿಂತುಹೋಯಿತು. ಇನ್ನೂ ಏನೇನು ಹೇಳುತ್ತಿದ್ದರೋ ಏನೋ ಪಂಡಿತರು… ಮಕ್ಕಳು ಮನೆ… ಎಲ್ಲವೂ ದೂರವಾಗುತ್ತಿರುವ ಹಾಗೆ ಭಾಸವಾಯಿತು.

ಪಂಡಿತರ ಮಾತಿನಲ್ಲಿ ದುಗುಡ ಆವರಿಸಿತ್ತೆ..?
ಈಗ ತಾನು ಅವರೊಡನೆ ಇರಬೇಕಿತ್ತು… ಛೇ.. ಎಂಥಾ ಕಷ್ಟವೋ ಏನೋ.. ಮನಸ್ಸು ಚಡಪಡಿಸತೊಡಗಿತು.

” ಓ…ಸತ್ಯ ವಿಶ್ವಾಸಿಗಳೇ…. ನೀವು ನ್ಯಾಯದ ದೃಢವಾಹಕರೂ ಅಲ್ಲಾಹನಿಗಾಗಿ ಸಾಕ್ಷ್ಯವಹಿಸುವವರೂ ಆಗಿರಿ…” ಪ್ರಾರ್ಥಿಸುವುದರ ಹೊರತು ಬೇರೆ ದಾರಿಯಿರಲಿಲ್ಲ.
* * *

ಪ್ರತಿ ಬಾರಿಯೂ ಇಲ್ಲಿಗೆ ಬಂದಾಗಲೊಮ್ಮೆ ಹೋಗುವಾಗ ಗೆಳೆಯ ಪದ್ಮಚರಣ ಪಂಡಿತರಿಗೆ ಏನಾದರೊಂದು ಗಿಫ್ಟ್ ತೆಗೆದುಕೊಂಡು ಹೋಗಿ ಕೊಡುವುದು ಹವ್ಯಾಸವಾಗಿತ್ತು. ಆಗೆಲ್ಲ ಪಂಡಿತರು ಮುಜುಗರದಿಂದಲೆ ಪಡೆದುಕೊಂಡು ಸಂತೋಷಿಸಿ ಮನೆಮಂದಿಗೆಲ್ಲ ತೋರಿಸಿ ಖುಷಿಪಡುತ್ತಿದ್ದರು.

ಆಗಲೂ ಪಂಡಿತರು, ಸುಲೇಮಾನ್ ಅಮೀರ್ ಅಲ್ಲಾಹನ ಪ್ರವಾದಿ ಏನು ಹೇಳಿದ್ದಾರೆ ಗೊತ್ತೆ..? ಎಂದು ಕೇಳಿ,

“ರಕ್ತ ಸಂಬಂಧಿಯಲ್ಲದ ವ್ಯಕ್ತಿಗೆ ಏನಾದರೂ ಕೊಡುಗೆ ನೀಡುವುದು ದಾನವಾಗಿದೆ” ಎಂದು ಹೇಳಿದ್ದಾರೆ ಎನ್ನುವಾಗ ಎಲಾ… ಗೆಳೆಯರೇ.. ಅದ್ಯಾವಾಗ ಕುರಾನನ್ನು ಇಷ್ಟು ಚೆನ್ನಾಗಿ ಪಠಣ ಮಾಡಿದ್ದಾರೆ ಎಂದು ಅಭಿಮಾನವುಂಟಾಗುತ್ತಿತ್ತು.
ಪಂಡಿತ ಗೆಳೆಯಾ… ನೀವು ರಕ್ತಸಂಬಂಧಿಗಿಂತಲೂ ಹೆಚ್ಚು ನಮಗೆ… ಎಂದಿದ್ದೆ.
ಪಂಡಿತ ಪದ್ಮಚರಣರು ನನ್ನ ಕೈಯನ್ನು ಹಿಡಿದು ಮೆದುವಾಗಿ ಒತ್ತಿದ್ದರು.
* * *

ಮೋಡಗಳೀಗ ಸಂಪೂರ್ಣ ಕಪ್ಪಾಗಿದ್ದವು. ದುಃಖ ಮಡುಗಟ್ಟಿದವನು ಯಾವಾಗ ಬೇಕಾದರೂ ಮತ್ತೆ ಅಳುವವನಂತೆ ತೋರುತ್ತಿದ್ದವು. ಸಂಜೆ ಕತ್ತಲೊಳಗೆ ಲೀನವಾಗುವ ಸಮಯ.

ನನ್ನ ಪ್ರೀತಿಯ ಬಂಧುಗಳೇ, ನನ್ನ ಸುಂದರ ಕಾಶ್ಮೀರದಲ್ಲಿ ಯಾವುದೇ ಗಲಾಟೆಗಳಿಲ್ಲ, ದೊಂಬಿಗಳೂ ಇಲ್ಲ. ಈ ಪ್ರದೇಶದ ಸೌಂದರ್ಯ ಸವಿಯಲು, ಶಿವನ ದರುಶನಕೆ ಈ ಶಿವರಾತ್ರಿಗೆ ಕುಟುಂಬ ಸಮೇತರಾಗಿ ಭೇಟಿ ಕೊಡಿ…. ಹೀಗೆ ಒಂದು ಮಧ್ಯರಾತ್ರಿಯ ಹೊತ್ತಲ್ಲಿ ಮಗಳು ಆಯೇಷಾ ಹದಿನೈದು ಪೈಸೆಯ ಕಾರ್ಡುಗಳಲಿ ಬರೆದೇ ಬರೆಯುತ್ತಿದ್ದಳು. ಹೌದು ಮಗಳೇ, ಕಾಶ್ಮೀರಕ್ಕೆ, ಇಲ್ಲಿನ ಕಾಕಾನ ಅಂಗಡಿಗೆ ಜನ ಬಂದು ಹೋದರೆ ಮಾತ್ರ ಹೊಟ್ಟೆ ತುಂಬೋದು! ಎಂಥಾ ಸತ್ಯ ಮಕ್ಕಳಿಗೆ ಅರ್ಥವಾಗಿದೆ. ನಮ್ಮನ್ನಾಳುವವರಿಗೇಕೆ ಅರ್ಥವಾಗುತ್ತಿಲ್ಲ ಎನ್ನಿಸಿತ್ತು. ಗಾಢ ಚಿಂತೆಯಲ್ಲಿ ಮೈಮರೆತಿದ್ದವರಿಗೆ ಕಾಲಬುಡದಲ್ಲಿ ಏನೋ ಹೋದಂತಾಗಿ ವಾಸ್ತವಕ್ಕೆ ಬಂದರು. ತಿರುಗಿ ನೋಡಿದರೆ ಸಣ್ಣ ಗಾತ್ರದ ಮೊಲವೊಂದು ಓಡುತ್ತಿತ್ತು.

ಭಾರವಾದ ಹೆಜ್ಜೆಗಳೊಂದಿಗೆ ಊರಕಡೆಗೆ ಬಂದರು.

ಕಲಾಲರ ಶ್ರೀ ಭವಾನಿ ಸ್ಟೋರ್ಸ್‍ನಲ್ಲಿ ಪ್ರತಿ ಬಾರಿ ಹೀಗೆ ಊರಿಗೆ ಮರಳುವಾಗ ಏನಾದರೂ ಕೊಳ್ಳುವುದು ವಾಡಿಕೆ. ಗೆಳೆಯ ಪದ್ಮಚರಣ ಪಂಡಿತರಿಗೆ ಕೈ ಗಡಿಯಾರ ಕೊಡುವ ಮನಸ್ಸಾಯಿತು. ಕಲಾಲರ ಮಗ ಗಲ್ಲಾಪೆಟ್ಟಿಗೆ ಮೇಲೆ ಕುಳಿತಿದ್ದ. ಹಣೆಯಲ್ಲಿ ಕೆಂಪು ತಿಲಕವಿತ್ತು. ಪಂಡಿತರ ಹಣೆಯಲ್ಲಿ ಇದ್ದರೂ.. ಆಪ್ಯಾಯಮಾನವೆನಿಸುತ್ತಿತ್ತು. ಆದರೆ… ಕಲಾಲರ ಮಗ ಮುಲ್ಲಾರನ್ನೊಮ್ಮೆ ಅಪಾದಮಸ್ತಕ ದಿಟ್ಟಿಸಿದವನೆ ನಿರ್ಲಕ್ಷಿಸಿದವನಂತೆ ಕುಳಿತ. ಅವರಿಗೆ ಏನು ಬೇಕೋ ಕೇಳಿ ಕೊಡು ಎಂದು ಅಂಗಡಿಯಲಿದ್ದ ಆಳಿಗೆ ಹೇಳಿದ. ಮಾಲೀಕ ಕಲಾಲರಿದ್ದಿದ್ದರೆ.. ಹೀಗೆ ಮಾಡುತ್ತಿರಲಿಲ್ಲ. ಇರಲಿಯೆಂದು ನಿಟ್ಟುಸಿರುಗೈದರು. ಕೆಲಸದವನು ತೋರಿಸಿದ ಕೈ ಗಡಿಯಾರಗಳ ಪೈಕಿ ಒಂದನ್ನು ಖರೀದಿಸಿದರು.
* * *

ಕೈ ಗಡಿಯಾರದ ಮುಳ್ಳು ತಿರುಗುತ್ತಿದ್ದವು. ಎದೆಯ ಸದ್ದೂ ಕೇಳಿಸುತ್ತಿತ್ತು. ಕಣ್ಣಂಚಿನಲ್ಲಿದ್ದ ನೀರು ಇಳಿಯುವುದಕ್ಕೂ ಅವಡುಗಚ್ಚಿ ತಡೆಹಿಡಿದಿದ್ದ ಮಡುಗಟ್ಟಿದ್ದ ಮೋಡಗಳು ಸುರಿಯುವುದಕ್ಕೂ ಸರಿಹೋಯಿತು.

ಮುಲ್ಲಾರ ಕಣ್ಣು ತುಂಬಿ ಹರಿಯುತ್ತಿದ್ದುದನ್ನು ಆ ಕತ್ತಲಲ್ಲಿ ಯಾರೂ ಗುರುತಿಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...