HomeUncategorizedವಿದ್ಯಾರ್ಥಿಗಳು ರಾಜಕಾರಣ ಮಾಡುವುದು ಸರಿಯೇ ತಪ್ಪೆ? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ...

ವಿದ್ಯಾರ್ಥಿಗಳು ರಾಜಕಾರಣ ಮಾಡುವುದು ಸರಿಯೇ ತಪ್ಪೆ? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ…

ವಿದ್ಯಾರ್ಥಿಗಳು ಓದೋದು ಬಿಟ್ಟು ಬೇರೆ ಏನೂ ಮಾಡಬಾರದು ಅನ್ನೋ ಪಕ್ಷದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನೋ ಸಂಘಟನೆ ಯಾಕ ಕಟ್ಟಿದರು?

- Advertisement -
- Advertisement -

ಲೆನಿನ್ ಅವರನ್ನು ಯಾರೋ ಬೇ-ಧಂಧಾ ಪತ್ರಕರ್ತ ರೊಬ್ಬರು ಕೇಳಿದರಂತ. ವಿದ್ಯಾರ್ಥಿಗಳ ಕೆಲಸ ಏನು? ಅವರು ವಿದ್ಯಾರ್ಥಿಗಳಿಗೆ ಐದು ಕೆಲಸಗಳು ಅಂತ ಅಂದರಂತ. ಅದು ಅಧ್ಯಯನ, ಅಧ್ಯಯನ, ಅಧ್ಯಯನ, ಅಧ್ಯಯನ ಹಾಗೂ ಅಧ್ಯಯನ ಅಂತ ಹೇಳಿದರಂತ. ಹಂಗಂತ ಯಾರೋ ಲೆನಿನ್ ವಿರೋಧಿಗಳು ವಾಮಪಂಥದ ಹುಡುಗರು ಪ್ರತಿಭಟನೆ ಮಾಡುವಾಗ ಅದನ್ನು ವಿರೋಧಿಸಲಿಕ್ಕೆ ಹೇಳಿದ್ದಾಗ ಪತ್ರಿಕೆಗಳಲ್ಲಿ ಬಂದಿತ್ತು. ನೋಡಿ ನಿಮ್ಮ ದೇವರೇ ವಿರೋಧ ಮಾಡಿದ್ದಾರೆ. ನೀವು ಯಾಕೆ ಅದನ್ನು ಪಾಲಿಸುತ್ತೀರಿ ಅನ್ನುವ ಅಮೃತವಾಣಿ ಅದು. ಲೆನಿನ್ ಅವರು ಈ ರೀತಿ ಹೇಳಿದ್ದಕ್ಕೆ ಈವರೆಗೆ ಪುರಾವೆ ಇಲ್ಲ. ಮುಂದೆ ಸಿಗಬಹುದು. ಬೇರೆ ಮಹಾನುಭಾವರು ಹೇಳಿರಬಹುದು. ಕೆಲವರಿಗೆ ಇದು ಸರಿ ಅಂತ ಅನ್ನಿಸಲೂ ಬಹುದು.

ನಿಮ್ಮ ಮಾತಿಗೆ ಬೀಗ, ನಮ್ಮ ಪ್ರತ್ಯುತ್ತರ ಲಾಠಿ, ಬೂಟು, ಗೋಲಿಬಾರಿನಿಂದ, ಅಂತ ಆಳುವವರು ಹೇಳಲಿಕ್ಕೆ ಹತ್ಯಾರ. ಎಲ್ಲ ಕಡೆ ಪ್ರತಿಭಟನೆ ಬಂದ್ ಮಾಡಲಿಕ್ಕೆ ಪೊಲೀಸ್ ಹಿಂಸೆಯೊಂದರ ಉಪಯೋಗ ಆಗಲಿಕ್ಕೆ ಹತ್ತೇದ.

ವಾಕ್ ಸ್ವಾತಂತ್ರ್ಯ ಹತ್ತಿಕ್ಕಲಿಕ್ಕೆ ಎಷ್ಟು ಬೇಕೋ ಅಷ್ಟು ಬಲ ಪ್ರಯೋಗ ಆಗಲಿಕ್ಕೆ ಹತ್ತೇದ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹಬ್ಬಿಸಬಾರದು. ಹಾಗೆ ಮಾಡಿದರೆ ಶಿಕ್ಷೆ ಆಗುತ್ತದೆ. ಅವರು ಹಾಗೆ ಮಾಡುತ್ತಾರೋ ಇಲ್ಲವೋ ಅನ್ನುವುದನ್ನು ನೋಡಲು ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಅಂತ ಕೇಂದ್ರ ಸರಕಾರ ಹೇಳೇದ. ದೂರದರ್ಶನ, ಪ್ರಿಂಟ್ ಹಾಗೂ ಇತರ ಮಾಧ್ಯಮಗಳಲ್ಲಿ ಸುಳ್ಳು ಹಬ್ಬಿಸಬಾರದು ಅಂತ ಹೇಳಿ ಕೇಂದ್ರ ವಾರ್ತಾ ಇಲಾಖೆ ಹೊಸ ನಿಯಮಾವಳಿ ಮಾಡೇದ.

ಆಳುವವರು ವಿದ್ಯಾರ್ಥಿಗಳನ್ನು ಹಿಂಸೆ ಪ್ರಚೋದಿಸುತ್ತಿರುವವರು ಕಾಂಗ್ರೆಸ್ಸನವರು ಅಂತ ಹೇಳಿ ಮನಿಯೊಳಗ ಮಲಕೊಂಡವರಿಗೆ ಸುಳ್ಳ -ಸುಳ್ಳ ಪ್ರಚಾರ ಕೊಟ್ಟರು.

ಸುಮ್ಮನೇ ಮನೆಯಲ್ಲಿ ಇರಿ. ಹೊರಗೆ ಹೋದರ ಹೊಡತಾ ತಿಂತೀರಿ ಅಂತ ಹೇಳಿದರು. ವಿದ್ಯಾರ್ಥಿಗಳು ಅಭ್ಯಾಸ ಬಿಟ್ಟು ಬೇರೆ ಮಾಡಬಾರದು ಅಂತ ಸಲಹೆ ಕೊಟ್ಟರು.

ಹಂಗಾರ ಈ ಥರಾ ಪ್ರವಚನ ಮಾಡೋರು ತಾವು ಈ ನಿಯಮಗಳನ್ನ ಪಾಲಿಸಿದರ? ಇಲ್ಲಾ. ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರಿಂದ ಹಿಡದು ಪಕ್ಷದ ಸಾಮಾನ್ಯ ಕಾರ್ಯಕರ್ತರ ವರೆಗೆ ಎಲ್ಲರೂ ವಿದ್ಯಾರ್ಥಿ ರಾಜಕೀಯ ಮಾಡಿಕೊಂಡು ಬಂದವರು. ವಿದ್ಯಾರ್ಥಿಗಳು ಓದೋದು ಬಿಟ್ಟು ಬೇರೆ ಏನೂ ಮಾಡಬಾರದು ಅನ್ನೋ ಪಕ್ಷದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನೋ ಸಂಘಟನೆ ಯಾಕ ಕಟ್ಟಿದರು?

ಆಳುವ ಪಕ್ಷದ ಯಾವಾವ ನಾಯಕರು ವಿದ್ಯಾರ್ಥಿ ರಾಜಕಾರಣದಿಂದ ಬಂದವರು ಅಂತ ನೋಡಿದರ ಸಿಗೋದು ಈ ಪಟ್ಟಿ.

ಅಮಿತ ಶಾ ಅವರು 1983 ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ನಾಯಕರಾಗಿದ್ದರು. ನಂತರ 86 ದಾಗ ಪಕ್ಷ ಸೇರಿದರು. ನಂತರ ಗುಜರಾತಿನ ಸಚಿವರಾಗಿ, ಕೇಂದ್ರದ ಸಚಿವರಾದರು.

ದಿವಂಗತ  ಸುಷ್ಮಾ‌ಸ್ವರಾಜ್ ಅವರು ವಿದ್ಯಾರ್ಥಿ ನಾಯಕಿಯಾಗಿದ್ದರು. ಆ ನಂತರ ಅತಿ ಸಣ್ಣ ವಯಸ್ಸಿನಲ್ಲಿಯೇ ಸಚಿವರಾದರು.

ದಿವಂಗತ ಅನಂತ ಕುಮಾರ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು. 85 ರಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ನಂತರ 87 ರೊಳಗ ಪಕ್ಷ ಸೇರಿದರು.

ಈಗಿನ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು 1964 ರೊಳಗ ಸಂಘ ಪರಿವಾರದ ಸಂಪರ್ಕಕ್ಕ ಬಂದವರು 71 ರೊಳಗ ಗೋರಖಪುರದಾಗ ಎಬಿವಿಪಿ ನಾಯಕರಾಗಿದ್ದರು.

ದಿವಂಗತ ಅರುಣ ಜೇಟಲಿ ಯವರು ದೆಹಲಿಯೊಳಗ 70 ರ ದಶಕದಾಗ ವಿದ್ಯಾರ್ಥಿ ನಾಯಕ ರಾಗಿದ್ದರು. ದೆಹಲಿ ಹಾಗೂ ಇತರ ಪ್ರದೇಶದೊಳಗ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ರೈಲು, ಬಸ್ಸು ಎಲ್ಲಾ ಸುಡಲಾಯಿತು. 77 ರೊಳಗ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ರಾಷ್ಟ್ರ ಘಟಕದ ಕಾರ್ಯದರ್ಶಿಯಾಗಿದ್ದರು.

ನಿತಿನ ಗಡಕರಿ ಅವರು ವಿದ್ಯಾರ್ಥಿ ನಾಯಕರಾಗಿದ್ದರು. 76 ರಲ್ಲಿ ಸೇರಿದ ಸಂಘಟನೆಯ ಕೇಂದ್ರ ಘಟಕದ ನಾಯಕರಾಗಿದ್ದರು. 24 ರ ಸಣ್ಣ ವಯಸ್ಸಿದಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು.

75-77 ರ ತುರ್ತು ಪರಿಸ್ಥಿತಿ ವಿರೋಧ ಮಾಡಿದವರೊಳಗ, ಅದರ ನಂತರ ಬೇರೆ ಬೇರೆ ಪಕ್ಷಗಳನ್ನು ಸೇರಿದವರೊಳಗ ಸಂಘ ಪರಿವಾರದ ಅನೇಕ ನಾಯಕರು ಇದ್ದರು. 80 ರೊಳಗ ಬಿಜೆಪಿ ಹುಟ್ಟಿಕೊಂಡಾಗ ಅದರೊಳಗ ಸೇರಿಕೊಂಡವರೊಳಗ ಅಸಂಖ್ಯರು ತುರ್ತು ಪರಿಸ್ಥಿತಿಯೊಳಗ ವಿದ್ಯಾರ್ಥಿ ರಾಜಕಾರಣ ಮಾಡಿದವರು ಆಗಿದ್ದರು. ಅವರು ಜೈಲಿಗೆ ಹೋಗಿದ್ದವರು.

ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಅವರು ಪುಣೆ ಯೊಳಗ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ಮುಂದಾಳತ್ವ ವಹಿಸಿದ್ದರು. ಕೇಂದ್ರ ಮಂತ್ರಿ ಹಾಗೂ ರಾಜ್ಯದ ಉಸ್ತುವಾರಿ ಆಗಿದ್ದ ಧಮೇರ್ಂದ್ರ ಪ್ರಧಾನ ಅವರು ಒರಿಸಾದ ಎಬಿವಿಪಿ ನಾಯಕರಾಗಿದ್ದರು. ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಂತರ ಬಿಜೆಪಿ ಯುವಾ ಮೋರ್ಚಾದ ಕಾರ್ಯದರ್ಶಿಯಾಗಿದ್ದರು.

ರವಿ ಶಂಕರ ಪ್ರಸಾದ ಅವರು ಬಿಹಾರದಾಗ, ಜಯಪ್ರಕಾಶ ನಾರಾಯಣ ಅವರ ಶಿಷ್ಯರಾಗಿ, ವಿದ್ಯಾರ್ಥಿ ರಾಜಕೀಯ ಮಾಡಿದರು. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಬಿಹಾರ ಹಾಗೂ ಹಿಮಾಚಲ ಪ್ರದೇಶದಾಗ ವಿದ್ಯಾರ್ಥಿ ಚಳವಳಿ ಮಾಡಿದರು. ತಾವು ಅಧಿಕಾರದಲ್ಲಿ ಇರುವವರೆಗೂ ರೈತರ ಬಗ್ಗೆ ಮಾತೇ ಆಡದ ಕೇಂದ್ರ ಕೃಷಿ ಮಂತ್ರಿ ರಾಧಾ ಮೋಹನ ಸಿಂಗ್ ಅವರು ಬಿಹಾರದ ವಿದ್ಯಾರ್ಥಿ ನಾಯಕರಾಗಿದ್ದರು. ಈಗಿನ ಕೃಷಿಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರು ಸಹ ವಿದ್ಯಾರ್ಥಿ ನಾಯಕರಾಗಿದ್ದರು.

ಇನ್ನು ಇತರ ಪಕ್ಷಗಳ ನಾಯಕರಾದ ಲಾಲೂ ಪ್ರಸಾದ ಯಾದವ, ನಿತೀಶ ಕುಮಾರ, ಮಮತಾ ಬ್ಯಾನರ್ಜಿ, ಅಜಯ ಮಾಕನ, ಸೀತಾರಾಂ ಯಚೂರಿ, ಪ್ರಫುಲ್ಲಾ ಕುಮಾರ ಮಹಾಂತ, ವಿಜಯ ಗೋಯಲ್, ಅಲ್ಕಾ ಲಾಂಬಾ, ಡಿ. ರಾಜಾ ಅಂತಹ ವಿದ್ಯಾರ್ಥಿ ನಾಯಕರ ಉದಾಹರಣೆಗಳು ಅನೇಕ.

ಇನ್ನು ಕೆಲವರು ನಮ್ಮ ಸುತ್ತ ಮುತ್ತ  ಇಷ್ಟೆಲ್ಲಾ ನಡೀತಾ ಇದ್ದಾಗ ನಾವೇನು ಮಾಡಬಹುದು? ಬೀದಿ ಹೋರಾಟದ ಪ್ರತಿಕ್ರಿಯೆಗೆ ಭಿನ್ನವಾಗಿಯೂ ಅನೇಕ ಪ್ರತಿಕ್ರಿಯೆಗಳು ಸಾಧ್ಯಅವ. ಜನ ಜಾಗೃತಿ, ಜ್ಞಾನ ವಿಸ್ತಾರ, ವಿವರಣೆ ಸಂಘಟನೆ, ಸಂಪರ್ಕ ಮುಂತಾದ ಕೆಲಸಗಳನ್ನು ಗದ್ದಲವಿಲ್ಲದೇ ಮಾಡೋ ಲಕ್ಷಾಂತರ ಜನ ಈ ದೇಶದಾಗ ಇದ್ದಾರ.

ಈ ರೀತಿಯ ಕ್ರಿಯಾತ್ಮಕ ಪ್ರತಿಕ್ರಿಯೆ ಅಥವಾ ಸೃಜನಾತ್ಮಕ ವಿರೋಧ ಮಾಡುವ ಕೆಲವರು ಯುವಜನರನ್ನ ರಾಷ್ಟ್ರ ಮಟ್ಟದ ಸಂಸ್ಥೆಗಳಿಗೆ ಪ್ರವೇಶ ಕೊಡಿಸುವ ಪರೀಕ್ಷಾ ತರಬೇತಿ ಕೊಡಸತಾರ. ಮಹಾರಾಷ್ಟ್ರದ ವಾರ್ಧಾದ ಹತ್ತಿರ ಇರುವ ನಲಂದಾ ಸಂಸ್ಥೆಯ ಅನೂಪ ಕುಮಾರ ಮತ್ತು ಅವರ ಗುಂಪು ಇದನ್ನ ಸದ್ದಿಲ್ಲದೆ ಮಾಡ್ತದ.

ಬಡ, ಹಿಂದುಳಿದ ಅವಕಾಶ ವಂಚಿತ ಸಮುದಾಯದ ಜನರಿಗೆ ಕಾನೂನು ಶಿಕ್ಷಣ ಕೊಡಿಸುವ ಕೆಲಸವನ್ನು ಬೆಂಗಳೂರಿನ ಕಾನೂನು ನೆರವು ಸಂಸ್ಥೆ ಮಾಡ್ತದ.

ಈ ದೇಶದ ಏಕತೆ ಹಾಗೂ ಅಖಂಡತೆ ಉಳಿದು ಬೆಳೀಲಿಕ್ಕೆ ಯಾರು ಯಾರು ಏನೇನು ಮಾಡಬಹುದೋ ಅದನ್ನು ಮಾಡಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಅಂದರ ಎಲ್ಲ ಅವಕಾಶ ವಂಚಿತರಲ್ಲಿ ಜಾಗೃತಿ ಮೂಡಿಸೋದು, ನಿಮ್ಮ ಹಕ್ಕು ಗಳನ್ನು ನೀವು ಪಡೆದುಕೊಳ್ಳೋದು ಹೆಂಗ ಅಂತ ಹೇಳಿಕೋಡೋದು.

ಇಂಥ ಪ್ರಕ್ಷುಬ್ಧ ಪರಿಸ್ಥಿತಿ ಸಹ ಸಮಾಧಾನದ ಮಂದಹಾಸ ಮೂಡಿಸಬಲ್ಲದು ಅನಲಿಕ್ಕೆ ಒಂದು ಮಾತು ಹೇಳತೇನಿ. ದೆಹಲಿ ಪ್ರತಿಭಟನೆ ಯೊಳಗ ಒಬ್ಬ ಹುಡುಗ ಈ  ಪೋಸ್ಟರ್‌ ಹಿಡಕೊಂಡಿದ್ದ: ಹಿಂದೂ ಮುಸ್ಲೀಮ ರಾಜಿ, ತೋ ಕ್ಯಾ ಕರೇಗಾ ನಾಜಿ? (ಹಿಂದೂ ಮುಸ್ಲಿಂ ಆದರೆ ರಾಜಿ, ಆಗೇನು ಮಾಡ್ತೀಯಾ ನಾಜಿ?) ಸರಳ ಸುಂದರ ಸತ್ಯ, ಅಲ್ಲವೇ?

ಪಶ್ಚಿಮದ ವಿದ್ಯಾರ್ಥಿ ಚಳವಳಿಗೆ ಪ್ರೇರಕ ಶಕ್ತಿಯಾದ ವಿ ಶಾಲ್ ಓವರ್ ಕಂ ಅನ್ನೋ ಜಾನಪದ ಹಾಡನ್ನು ಪೀಟರ್ ಸೀಗಲ್ ಅವರು ಹಾಡಿ ಜನಪ್ರಿಯಗೊಳಿಸಿದರು.

ಅದು ಹಿಂಗದ
ನಾವು ಗೆಲ್ಲತೇವಿ
ನಾವು ಗೆಲ್ಲತೇವಿ ಒಂದು ದಿವಸ
ನನಗ ಅಗದೀ ಖರೆಗೂ
ಅನಸ್ತದ
ನಾವು ಗೆಲ್ಲತೇವಿ
ಕೈಯೊಳಗ ಕೈ ಇಟ್ಟು
ಶಾಂತಿಯಿಂದ ಇರತೇವಿ
ನಾವು ಹೆದರಂಗಿಲ್ಲ
ನಾವು ಗೆಲ್ಲತೇವಿ
ನಾವು ಗೆಲ್ಲತೇವಿ ಒಂದು ದಿವಸ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...