HomeUncategorizedವಿದ್ಯಾರ್ಥಿಗಳು ರಾಜಕಾರಣ ಮಾಡುವುದು ಸರಿಯೇ ತಪ್ಪೆ? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ...

ವಿದ್ಯಾರ್ಥಿಗಳು ರಾಜಕಾರಣ ಮಾಡುವುದು ಸರಿಯೇ ತಪ್ಪೆ? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ…

ವಿದ್ಯಾರ್ಥಿಗಳು ಓದೋದು ಬಿಟ್ಟು ಬೇರೆ ಏನೂ ಮಾಡಬಾರದು ಅನ್ನೋ ಪಕ್ಷದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನೋ ಸಂಘಟನೆ ಯಾಕ ಕಟ್ಟಿದರು?

- Advertisement -
- Advertisement -

ಲೆನಿನ್ ಅವರನ್ನು ಯಾರೋ ಬೇ-ಧಂಧಾ ಪತ್ರಕರ್ತ ರೊಬ್ಬರು ಕೇಳಿದರಂತ. ವಿದ್ಯಾರ್ಥಿಗಳ ಕೆಲಸ ಏನು? ಅವರು ವಿದ್ಯಾರ್ಥಿಗಳಿಗೆ ಐದು ಕೆಲಸಗಳು ಅಂತ ಅಂದರಂತ. ಅದು ಅಧ್ಯಯನ, ಅಧ್ಯಯನ, ಅಧ್ಯಯನ, ಅಧ್ಯಯನ ಹಾಗೂ ಅಧ್ಯಯನ ಅಂತ ಹೇಳಿದರಂತ. ಹಂಗಂತ ಯಾರೋ ಲೆನಿನ್ ವಿರೋಧಿಗಳು ವಾಮಪಂಥದ ಹುಡುಗರು ಪ್ರತಿಭಟನೆ ಮಾಡುವಾಗ ಅದನ್ನು ವಿರೋಧಿಸಲಿಕ್ಕೆ ಹೇಳಿದ್ದಾಗ ಪತ್ರಿಕೆಗಳಲ್ಲಿ ಬಂದಿತ್ತು. ನೋಡಿ ನಿಮ್ಮ ದೇವರೇ ವಿರೋಧ ಮಾಡಿದ್ದಾರೆ. ನೀವು ಯಾಕೆ ಅದನ್ನು ಪಾಲಿಸುತ್ತೀರಿ ಅನ್ನುವ ಅಮೃತವಾಣಿ ಅದು. ಲೆನಿನ್ ಅವರು ಈ ರೀತಿ ಹೇಳಿದ್ದಕ್ಕೆ ಈವರೆಗೆ ಪುರಾವೆ ಇಲ್ಲ. ಮುಂದೆ ಸಿಗಬಹುದು. ಬೇರೆ ಮಹಾನುಭಾವರು ಹೇಳಿರಬಹುದು. ಕೆಲವರಿಗೆ ಇದು ಸರಿ ಅಂತ ಅನ್ನಿಸಲೂ ಬಹುದು.

ನಿಮ್ಮ ಮಾತಿಗೆ ಬೀಗ, ನಮ್ಮ ಪ್ರತ್ಯುತ್ತರ ಲಾಠಿ, ಬೂಟು, ಗೋಲಿಬಾರಿನಿಂದ, ಅಂತ ಆಳುವವರು ಹೇಳಲಿಕ್ಕೆ ಹತ್ಯಾರ. ಎಲ್ಲ ಕಡೆ ಪ್ರತಿಭಟನೆ ಬಂದ್ ಮಾಡಲಿಕ್ಕೆ ಪೊಲೀಸ್ ಹಿಂಸೆಯೊಂದರ ಉಪಯೋಗ ಆಗಲಿಕ್ಕೆ ಹತ್ತೇದ.

ವಾಕ್ ಸ್ವಾತಂತ್ರ್ಯ ಹತ್ತಿಕ್ಕಲಿಕ್ಕೆ ಎಷ್ಟು ಬೇಕೋ ಅಷ್ಟು ಬಲ ಪ್ರಯೋಗ ಆಗಲಿಕ್ಕೆ ಹತ್ತೇದ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹಬ್ಬಿಸಬಾರದು. ಹಾಗೆ ಮಾಡಿದರೆ ಶಿಕ್ಷೆ ಆಗುತ್ತದೆ. ಅವರು ಹಾಗೆ ಮಾಡುತ್ತಾರೋ ಇಲ್ಲವೋ ಅನ್ನುವುದನ್ನು ನೋಡಲು ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಅಂತ ಕೇಂದ್ರ ಸರಕಾರ ಹೇಳೇದ. ದೂರದರ್ಶನ, ಪ್ರಿಂಟ್ ಹಾಗೂ ಇತರ ಮಾಧ್ಯಮಗಳಲ್ಲಿ ಸುಳ್ಳು ಹಬ್ಬಿಸಬಾರದು ಅಂತ ಹೇಳಿ ಕೇಂದ್ರ ವಾರ್ತಾ ಇಲಾಖೆ ಹೊಸ ನಿಯಮಾವಳಿ ಮಾಡೇದ.

ಆಳುವವರು ವಿದ್ಯಾರ್ಥಿಗಳನ್ನು ಹಿಂಸೆ ಪ್ರಚೋದಿಸುತ್ತಿರುವವರು ಕಾಂಗ್ರೆಸ್ಸನವರು ಅಂತ ಹೇಳಿ ಮನಿಯೊಳಗ ಮಲಕೊಂಡವರಿಗೆ ಸುಳ್ಳ -ಸುಳ್ಳ ಪ್ರಚಾರ ಕೊಟ್ಟರು.

ಸುಮ್ಮನೇ ಮನೆಯಲ್ಲಿ ಇರಿ. ಹೊರಗೆ ಹೋದರ ಹೊಡತಾ ತಿಂತೀರಿ ಅಂತ ಹೇಳಿದರು. ವಿದ್ಯಾರ್ಥಿಗಳು ಅಭ್ಯಾಸ ಬಿಟ್ಟು ಬೇರೆ ಮಾಡಬಾರದು ಅಂತ ಸಲಹೆ ಕೊಟ್ಟರು.

ಹಂಗಾರ ಈ ಥರಾ ಪ್ರವಚನ ಮಾಡೋರು ತಾವು ಈ ನಿಯಮಗಳನ್ನ ಪಾಲಿಸಿದರ? ಇಲ್ಲಾ. ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರಿಂದ ಹಿಡದು ಪಕ್ಷದ ಸಾಮಾನ್ಯ ಕಾರ್ಯಕರ್ತರ ವರೆಗೆ ಎಲ್ಲರೂ ವಿದ್ಯಾರ್ಥಿ ರಾಜಕೀಯ ಮಾಡಿಕೊಂಡು ಬಂದವರು. ವಿದ್ಯಾರ್ಥಿಗಳು ಓದೋದು ಬಿಟ್ಟು ಬೇರೆ ಏನೂ ಮಾಡಬಾರದು ಅನ್ನೋ ಪಕ್ಷದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನೋ ಸಂಘಟನೆ ಯಾಕ ಕಟ್ಟಿದರು?

ಆಳುವ ಪಕ್ಷದ ಯಾವಾವ ನಾಯಕರು ವಿದ್ಯಾರ್ಥಿ ರಾಜಕಾರಣದಿಂದ ಬಂದವರು ಅಂತ ನೋಡಿದರ ಸಿಗೋದು ಈ ಪಟ್ಟಿ.

ಅಮಿತ ಶಾ ಅವರು 1983 ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ನಾಯಕರಾಗಿದ್ದರು. ನಂತರ 86 ದಾಗ ಪಕ್ಷ ಸೇರಿದರು. ನಂತರ ಗುಜರಾತಿನ ಸಚಿವರಾಗಿ, ಕೇಂದ್ರದ ಸಚಿವರಾದರು.

ದಿವಂಗತ  ಸುಷ್ಮಾ‌ಸ್ವರಾಜ್ ಅವರು ವಿದ್ಯಾರ್ಥಿ ನಾಯಕಿಯಾಗಿದ್ದರು. ಆ ನಂತರ ಅತಿ ಸಣ್ಣ ವಯಸ್ಸಿನಲ್ಲಿಯೇ ಸಚಿವರಾದರು.

ದಿವಂಗತ ಅನಂತ ಕುಮಾರ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು. 85 ರಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ನಂತರ 87 ರೊಳಗ ಪಕ್ಷ ಸೇರಿದರು.

ಈಗಿನ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು 1964 ರೊಳಗ ಸಂಘ ಪರಿವಾರದ ಸಂಪರ್ಕಕ್ಕ ಬಂದವರು 71 ರೊಳಗ ಗೋರಖಪುರದಾಗ ಎಬಿವಿಪಿ ನಾಯಕರಾಗಿದ್ದರು.

ದಿವಂಗತ ಅರುಣ ಜೇಟಲಿ ಯವರು ದೆಹಲಿಯೊಳಗ 70 ರ ದಶಕದಾಗ ವಿದ್ಯಾರ್ಥಿ ನಾಯಕ ರಾಗಿದ್ದರು. ದೆಹಲಿ ಹಾಗೂ ಇತರ ಪ್ರದೇಶದೊಳಗ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ರೈಲು, ಬಸ್ಸು ಎಲ್ಲಾ ಸುಡಲಾಯಿತು. 77 ರೊಳಗ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ರಾಷ್ಟ್ರ ಘಟಕದ ಕಾರ್ಯದರ್ಶಿಯಾಗಿದ್ದರು.

ನಿತಿನ ಗಡಕರಿ ಅವರು ವಿದ್ಯಾರ್ಥಿ ನಾಯಕರಾಗಿದ್ದರು. 76 ರಲ್ಲಿ ಸೇರಿದ ಸಂಘಟನೆಯ ಕೇಂದ್ರ ಘಟಕದ ನಾಯಕರಾಗಿದ್ದರು. 24 ರ ಸಣ್ಣ ವಯಸ್ಸಿದಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು.

75-77 ರ ತುರ್ತು ಪರಿಸ್ಥಿತಿ ವಿರೋಧ ಮಾಡಿದವರೊಳಗ, ಅದರ ನಂತರ ಬೇರೆ ಬೇರೆ ಪಕ್ಷಗಳನ್ನು ಸೇರಿದವರೊಳಗ ಸಂಘ ಪರಿವಾರದ ಅನೇಕ ನಾಯಕರು ಇದ್ದರು. 80 ರೊಳಗ ಬಿಜೆಪಿ ಹುಟ್ಟಿಕೊಂಡಾಗ ಅದರೊಳಗ ಸೇರಿಕೊಂಡವರೊಳಗ ಅಸಂಖ್ಯರು ತುರ್ತು ಪರಿಸ್ಥಿತಿಯೊಳಗ ವಿದ್ಯಾರ್ಥಿ ರಾಜಕಾರಣ ಮಾಡಿದವರು ಆಗಿದ್ದರು. ಅವರು ಜೈಲಿಗೆ ಹೋಗಿದ್ದವರು.

ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಅವರು ಪುಣೆ ಯೊಳಗ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ಮುಂದಾಳತ್ವ ವಹಿಸಿದ್ದರು. ಕೇಂದ್ರ ಮಂತ್ರಿ ಹಾಗೂ ರಾಜ್ಯದ ಉಸ್ತುವಾರಿ ಆಗಿದ್ದ ಧಮೇರ್ಂದ್ರ ಪ್ರಧಾನ ಅವರು ಒರಿಸಾದ ಎಬಿವಿಪಿ ನಾಯಕರಾಗಿದ್ದರು. ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಂತರ ಬಿಜೆಪಿ ಯುವಾ ಮೋರ್ಚಾದ ಕಾರ್ಯದರ್ಶಿಯಾಗಿದ್ದರು.

ರವಿ ಶಂಕರ ಪ್ರಸಾದ ಅವರು ಬಿಹಾರದಾಗ, ಜಯಪ್ರಕಾಶ ನಾರಾಯಣ ಅವರ ಶಿಷ್ಯರಾಗಿ, ವಿದ್ಯಾರ್ಥಿ ರಾಜಕೀಯ ಮಾಡಿದರು. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಬಿಹಾರ ಹಾಗೂ ಹಿಮಾಚಲ ಪ್ರದೇಶದಾಗ ವಿದ್ಯಾರ್ಥಿ ಚಳವಳಿ ಮಾಡಿದರು. ತಾವು ಅಧಿಕಾರದಲ್ಲಿ ಇರುವವರೆಗೂ ರೈತರ ಬಗ್ಗೆ ಮಾತೇ ಆಡದ ಕೇಂದ್ರ ಕೃಷಿ ಮಂತ್ರಿ ರಾಧಾ ಮೋಹನ ಸಿಂಗ್ ಅವರು ಬಿಹಾರದ ವಿದ್ಯಾರ್ಥಿ ನಾಯಕರಾಗಿದ್ದರು. ಈಗಿನ ಕೃಷಿಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರು ಸಹ ವಿದ್ಯಾರ್ಥಿ ನಾಯಕರಾಗಿದ್ದರು.

ಇನ್ನು ಇತರ ಪಕ್ಷಗಳ ನಾಯಕರಾದ ಲಾಲೂ ಪ್ರಸಾದ ಯಾದವ, ನಿತೀಶ ಕುಮಾರ, ಮಮತಾ ಬ್ಯಾನರ್ಜಿ, ಅಜಯ ಮಾಕನ, ಸೀತಾರಾಂ ಯಚೂರಿ, ಪ್ರಫುಲ್ಲಾ ಕುಮಾರ ಮಹಾಂತ, ವಿಜಯ ಗೋಯಲ್, ಅಲ್ಕಾ ಲಾಂಬಾ, ಡಿ. ರಾಜಾ ಅಂತಹ ವಿದ್ಯಾರ್ಥಿ ನಾಯಕರ ಉದಾಹರಣೆಗಳು ಅನೇಕ.

ಇನ್ನು ಕೆಲವರು ನಮ್ಮ ಸುತ್ತ ಮುತ್ತ  ಇಷ್ಟೆಲ್ಲಾ ನಡೀತಾ ಇದ್ದಾಗ ನಾವೇನು ಮಾಡಬಹುದು? ಬೀದಿ ಹೋರಾಟದ ಪ್ರತಿಕ್ರಿಯೆಗೆ ಭಿನ್ನವಾಗಿಯೂ ಅನೇಕ ಪ್ರತಿಕ್ರಿಯೆಗಳು ಸಾಧ್ಯಅವ. ಜನ ಜಾಗೃತಿ, ಜ್ಞಾನ ವಿಸ್ತಾರ, ವಿವರಣೆ ಸಂಘಟನೆ, ಸಂಪರ್ಕ ಮುಂತಾದ ಕೆಲಸಗಳನ್ನು ಗದ್ದಲವಿಲ್ಲದೇ ಮಾಡೋ ಲಕ್ಷಾಂತರ ಜನ ಈ ದೇಶದಾಗ ಇದ್ದಾರ.

ಈ ರೀತಿಯ ಕ್ರಿಯಾತ್ಮಕ ಪ್ರತಿಕ್ರಿಯೆ ಅಥವಾ ಸೃಜನಾತ್ಮಕ ವಿರೋಧ ಮಾಡುವ ಕೆಲವರು ಯುವಜನರನ್ನ ರಾಷ್ಟ್ರ ಮಟ್ಟದ ಸಂಸ್ಥೆಗಳಿಗೆ ಪ್ರವೇಶ ಕೊಡಿಸುವ ಪರೀಕ್ಷಾ ತರಬೇತಿ ಕೊಡಸತಾರ. ಮಹಾರಾಷ್ಟ್ರದ ವಾರ್ಧಾದ ಹತ್ತಿರ ಇರುವ ನಲಂದಾ ಸಂಸ್ಥೆಯ ಅನೂಪ ಕುಮಾರ ಮತ್ತು ಅವರ ಗುಂಪು ಇದನ್ನ ಸದ್ದಿಲ್ಲದೆ ಮಾಡ್ತದ.

ಬಡ, ಹಿಂದುಳಿದ ಅವಕಾಶ ವಂಚಿತ ಸಮುದಾಯದ ಜನರಿಗೆ ಕಾನೂನು ಶಿಕ್ಷಣ ಕೊಡಿಸುವ ಕೆಲಸವನ್ನು ಬೆಂಗಳೂರಿನ ಕಾನೂನು ನೆರವು ಸಂಸ್ಥೆ ಮಾಡ್ತದ.

ಈ ದೇಶದ ಏಕತೆ ಹಾಗೂ ಅಖಂಡತೆ ಉಳಿದು ಬೆಳೀಲಿಕ್ಕೆ ಯಾರು ಯಾರು ಏನೇನು ಮಾಡಬಹುದೋ ಅದನ್ನು ಮಾಡಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಅಂದರ ಎಲ್ಲ ಅವಕಾಶ ವಂಚಿತರಲ್ಲಿ ಜಾಗೃತಿ ಮೂಡಿಸೋದು, ನಿಮ್ಮ ಹಕ್ಕು ಗಳನ್ನು ನೀವು ಪಡೆದುಕೊಳ್ಳೋದು ಹೆಂಗ ಅಂತ ಹೇಳಿಕೋಡೋದು.

ಇಂಥ ಪ್ರಕ್ಷುಬ್ಧ ಪರಿಸ್ಥಿತಿ ಸಹ ಸಮಾಧಾನದ ಮಂದಹಾಸ ಮೂಡಿಸಬಲ್ಲದು ಅನಲಿಕ್ಕೆ ಒಂದು ಮಾತು ಹೇಳತೇನಿ. ದೆಹಲಿ ಪ್ರತಿಭಟನೆ ಯೊಳಗ ಒಬ್ಬ ಹುಡುಗ ಈ  ಪೋಸ್ಟರ್‌ ಹಿಡಕೊಂಡಿದ್ದ: ಹಿಂದೂ ಮುಸ್ಲೀಮ ರಾಜಿ, ತೋ ಕ್ಯಾ ಕರೇಗಾ ನಾಜಿ? (ಹಿಂದೂ ಮುಸ್ಲಿಂ ಆದರೆ ರಾಜಿ, ಆಗೇನು ಮಾಡ್ತೀಯಾ ನಾಜಿ?) ಸರಳ ಸುಂದರ ಸತ್ಯ, ಅಲ್ಲವೇ?

ಪಶ್ಚಿಮದ ವಿದ್ಯಾರ್ಥಿ ಚಳವಳಿಗೆ ಪ್ರೇರಕ ಶಕ್ತಿಯಾದ ವಿ ಶಾಲ್ ಓವರ್ ಕಂ ಅನ್ನೋ ಜಾನಪದ ಹಾಡನ್ನು ಪೀಟರ್ ಸೀಗಲ್ ಅವರು ಹಾಡಿ ಜನಪ್ರಿಯಗೊಳಿಸಿದರು.

ಅದು ಹಿಂಗದ
ನಾವು ಗೆಲ್ಲತೇವಿ
ನಾವು ಗೆಲ್ಲತೇವಿ ಒಂದು ದಿವಸ
ನನಗ ಅಗದೀ ಖರೆಗೂ
ಅನಸ್ತದ
ನಾವು ಗೆಲ್ಲತೇವಿ
ಕೈಯೊಳಗ ಕೈ ಇಟ್ಟು
ಶಾಂತಿಯಿಂದ ಇರತೇವಿ
ನಾವು ಹೆದರಂಗಿಲ್ಲ
ನಾವು ಗೆಲ್ಲತೇವಿ
ನಾವು ಗೆಲ್ಲತೇವಿ ಒಂದು ದಿವಸ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...