Homeಅಂಕಣಗಳುಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

ಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

- Advertisement -
- Advertisement -

ನಿಖಿಲ್ ಕೊಲ್ಫೆ |

ಪೊಳ್ಳು ರಾಷ್ಟ್ರೀಯತೆ ಮತ್ತು ಜನಪ್ರೀತಿಯಿಲ್ಲದ ಭೂಪಟ ಪ್ರೇಮ ಸರ್ವಾಧಿಕಾರದ ಒಂದು ಮುಖ್ಯ ಲಕ್ಷಣ. ಆಸ್ಟ್ರಿಯನ್ ಸಂಜಾತ ಅಡಾಲ್ಫ್ ಹಿಟ್ಲರ್ ಜರ್ಮನ್ ರಾಷ್ಟ್ರೀಯತೆ ಹೆಸರಿನಲ್ಲಿ ಜರ್ಮನಿಯಲ್ಲಿ ಅಧಿಕಾರ ಹಿಡಿದ. ಅವನ ಜರ್ಮನ್ ರಾಷ್ಟ್ರೀಯತೆಯಲ್ಲಿ ಯಹೂದಿಗಳಿಗೆ, ಜಿಪ್ಸಿಗಳಿಗೆ, ಪೋಲಿಷ್ ಸಂಜಾತರಿಗೆ, ಕರಿಯರು, ಮಿಶ್ರ ರಕ್ತದವರಿಗೆ ಸ್ಥಾನವಿರಲಿಲ್ಲ! ಶುದ್ಧರಕ್ತದವರೆಂದು ಅವನು ಭಾವಿಸಿದ್ದ ಅರ್ಯನ್ ಜನಾಂಗದವರಿಗೆ ಮಾತ್ರ ಸ್ಥಾನವಿತ್ತು.
ಅತ ಸುಳ್ಳು ದೇಶಪ್ರೇಮದ ಬೊಂಬಡ ಬಜಾಯಿಸಿದಾಗ ಎಲ್ಲರೂ ಅದಕ್ಕೆ ತಲೆದೂಗಿಸಿದರು. ಎಲ್ಲರೂ ದೇಶಕ್ಕಾಗಿ ಅದನ್ನು ತ್ಯಾಗ ಮಾಡಬೇಕು, ಇದನ್ನು ತ್ಯಾಗ ಮಾಡಬೇಕು ಎಂದು ಹೇಳಿದ. ಕೊನೆಗೆ ಜನರು ತಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಯಿತು.
ತನ್ನ ವಿಚಾರಗಳಿಗೆ ತಲೆಬಾಗುವವರು ಮಾತ್ರ. ದೇಶಪ್ರೇಮಿಗಳು, ಉಳಿದವರೆಲ್ಲ ದೇಶದ್ರೋಹಿಗಳೆಂದು ಆತನ ಭ್ರಮೆ. ಜನರನ್ನು ಪೋಲೆಂಡ್ ಸಹಿತ ನೆರೆಯ ದೇಶಗಳ ಮೇಲೆ ಎತ್ತಿಕಟ್ಟಿ ಆಕ್ರಮಣ ಮಾಡಿ ಜರ್ಮನಿಯನ್ನು ಭೂಪಟದಲ್ಲಿ ವಿಸ್ತರಿಸಿದ. ಅದರೆ, ಜನರದ್ದು ನಾಯಿಪಾಡಾಯಿತು.
ಇದೀಗ ಭಾರತದಲ್ಲಿ ದೇಶಪ್ರೇಮದ ಮತ್ತು ರಾಷ್ಟ್ರೀಯತೆಯ ಮಾತಾಗುತ್ತಿದೆ. ಈ ರಾಷ್ಟ್ರೀಯತೆಯಲ್ಲಿ ಮತೀಯ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ ಯಾವ ಸ್ಥಾನವಿದೆ? ರಾಷ್ಟ್ರೀಯತೆಯ ಹೆಸರಲ್ಲಿ ಮೇಲ್ಜಾತಿ ಪ್ರಾಬಲ್ಯ ಒಪ್ಪಿಕೊಳ್ಳಬೇಕೆ?
ನಮ್ಮಲ್ಲಿಯೂ ದೇಶಕ್ಕಾಗಿ ತ್ಯಾಗ ಮಾಡಿ, ಸಬ್ಸಿಡಿ ತ್ಯಾಗಮಾಡಿ ಇತ್ಯಾದಿ ಹೇಳಲಾಗುತ್ತದೆ. ಗಗನಕ್ಕೇರಿದ ತೈಲ, ಅನಿಲ ಬೆಲೆಯೂ ದೇಶಕ್ಕಾಗಿ ಮಾಡುವ ತ್ಯಾಗವಂತೆ!
ಇಲ್ಲಿ ಕೂಡಾ ಪಾಕಿಸ್ತಾನ, ಬಾಂಗ್ಲ, ನೇಪಾಳ, ಶ್ರೀಲಂಕಾ, ಬರ್ಮಾ ಒಳಗೊಂಡಂತಹ ಅಖಂಡ ಭಾರತದ ಸಾಮ್ರಾಜ್ಯಶಾಹಿ ಕಲ್ಪನೆಗೆ ನೀರುಣಿಸಿ ಬೆಳೆಸುವವರು ಇನ್ನೂ ಇದ್ದಾರೆ. ಭೂಪಟ ಮತ್ತು ಜನಪ್ರೇಮದ ವ್ಯತ್ಯಾಸವನ್ನು, ನಿಜವಾದ ದೇಶಪ್ರೇಮವನ್ನು ಸರ್ವಾಧಿಕಾರಿ ಪ್ರವೃತ್ತಿಯು ಎಂದಿಗೂ ತಿಳಿದುಕೊಳ್ಳಲಾರದು.
ಗಿಲೀಟಿನ ಸುಳ್ಳು ಪ್ರಚಾರ ಸರ್ವಾಧಿಕಾರದ ಮುಖ್ಯ ಲಕ್ಷಣಗಳಲ್ಲಿ ಇನ್ನೊಂದು. ನಾಜಿ ಜರ್ಮನಿಯಲ್ಲಿ ಗೊಬೆಲ್ಸ್ ಅದರ ರೂವಾರಿಯಾಗಿದ್ದ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಅವನ ನಿಲುವಾಗಿತ್ತು. ಅಪಪ್ರಚಾರವು ಅವರ ಪ್ರಚಾರದ ಇನ್ನೊಂದು ಮುಖ.
ಇಂದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹಸಿಹಸಿ ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ನಡೆಯುತ್ತಿವೆ. ಅವುಗಳನ್ನು ಕಾಸಿಗಾಗಿ ಶೇರ್ ಮಾಡುವವರ ಪಡೆಗಳಿವೆ. ವಿದ್ವೇಷದ, ಅವಹೇಳನೆಯ ವೈಯುಕ್ತಿಕ ನಿಂದನೆಯ, ಅಶ್ಲೀಲವಾದ ಬೆದರಿಕೆಯ ಸಂದೇಶಗಳು ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರಿಂದ ಬರುತ್ತಿರುವುದು ಬರೇ ಕಾಕತಾಳೀಯ. ಅಗಿರಲಾರದು!
ಗಾಂಧಿ ಪದತಲದಲ್ಲಿ ಯುವಕ ಮೋದಿ, ಭೋಸರ ಪಕ್ಕದಲ್ಲಿ ವಂದನೆ ಸ್ವೀಕರಿಸುತ್ತಿರುವ ಮೋದಿ, ಭಗತ್ ಸಿಂಗ್‍ಗೆ ಜೈಲಿನಲ್ಲಿ ಮನೆಯೂಟ ನೀಡುತ್ತಿರುವ ಮೋದಿ ಇತ್ಯಾದಿಯಾಗಿ ನಾಜಿಗಳೇ ನಾಚುವಂತಹ ಫೊಟೋಷಾಪ್ ಸುಳ್ಳುಗಳನ್ನು ಹರಿದುಬಿಡಲಾಗುತ್ತದೆ. 1950ರಲ್ಲಿ ಅತ ಹುಟ್ಟಿದಾಗ ಅವರೆಲ್ಲಾ ಮಣ್ಣಲ್ಲಿ ಲೀನವಾಗಿಹೋಗಿದ್ದರೆಂಬ ಸ್ಪಷ್ಟ ಸತ್ಯವೂ ಗೋಚರವಾಗದ ಮುಗ್ಧ ಜನರು ಅವುಗಳನ್ನು ನಂಬುತ್ತಾರೆ. ಇದುವೇ ಗೋಬೆಲ್ಸ್ ತಂತ್ರ.
ಪ್ರಧಾನಿಯವರ ಸೆಲ್ಫಿಗಳಲ್ಲಿ ವ್ಯಕ್ತವಾಗುವ ಸೆಲ್ಫ್ ಮೋಹ ಗಾಬರಿ ಹುಟ್ಟಿಸುತ್ತದೆ. ಅವರು ಲಕ್ಷಾಂತರ ಟ್ವೀಟ್‍ಗಳಿಗೆ ಸ್ವತಃ ಪ್ರತಿಕ್ರಿಯಿಸುತ್ತಾರೆಂದು ನಂಬುವ ಮೂರ್ಖರೂ ಇದ್ದಾರೆ. ಇದು ಸಾಧ್ಯವೆ, ಮತ್ತೆ ಅವರು ಕೆಲಸ ಮಾಡುವುದು ಯಾವಾಗ, ಅವರ ಗಡಿಯಾರದಲ್ಲಿ ದಿನಕ್ಕೆ 48 ಗಂಟೆಗಳಿವೆಯೇ ಎಂದು ಯಾರೂ ಪ್ರಶ್ನೆ ಮಾಡಲು ಹೋಗುವುದಿಲ್ಲ. ಇಂತಹ ಕುರುಡು ನಂಬಿಕೆ, ವ್ಯಕ್ತಿ ವೈಭವೀಕರಣವೇ ಸರ್ವಾಧಿಕಾರಕ್ಕೆ ಮೆಟ್ಟಿಲು.
ಎಲ್ಲಾ ಸರ್ವಾಧಿಕಾರಿಗಳು ಹಿಂದಿನ ಆಡಳಿತವನ್ನು ದೂರಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ. ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯಂತವರೂ ಹಿಂದೆ ಬಿದ್ದಿರಲಿಲ್ಲ. ತಮ್ಮ ತಮ್ಮ ದೇಶಗಳನ್ನು ಸಮೃದ್ಧಿಯ ಶಿಖರಕ್ಕೆ ಕೊಂಡೊಯ್ಯುವ ಭರವಸೆ ನೀಡಿ ವಿನಾಶದ ಪಾತಾಳಕ್ಕೆ ತಳ್ಳಿದರು. ಜನಕೇಂದ್ರಿತವಲ್ಲದ ಮತ್ತು ಮಿಲಿಟರಿ ಯಂತ್ರವನ್ನು ಬಲಪಡಿಸುವ ಕೈಗಾರಿಕೀಕರಣ ಅದಾಗಿತ್ತು. ಹೊಸ ರೀತಿಯ ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‍ಗಳು, ಯುದ್ಧ ವಿಮಾನಗಳು, ಹಡಗುಗಳು, ಜಲಾಂರ್ಗಾಮಿಗಳು, ಸೋನಾರ್, ರಾಡಾರ್ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿ ವಿನಾಶದ ಸಲಕರಣೆಗಳು ಭಾರೀ ಪ್ರಮಾಣದಲ್ಲಿ ನಿರ್ಮಾಣವಾದವು. ಇಂದು ಮಧ್ಯಮ ವರ್ಗದ, ಅದರಲ್ಲೂ ಯುವಕರ ನೆಚ್ಚಿನ ಶೋಕಿಗಳಾಗಿರುವ ಮೋಟಾರ್ ಬೈಕ್ ನಿರ್ಮಾಣವಾದದ್ದು ಜರ್ಮನಿಯಲ್ಲಿ! ಸ್ಕೂಟರ್ ನಿರ್ಮಾಣವಾದದ್ದು ಇಟಲಿಯಲ್ಲಿ! ಅದೂ ಯುದ್ಧದ ಉದ್ದೇಶಕ್ಕಾಗಿ.
ನಮ್ಮಲ್ಲಿಯೂ ಯುದ್ಧಾಸ್ತ್ರಗಳ ಖಾಸಗಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ರಾಫೆಲ್ ಯುದ್ಧ ವಿಮಾನಗಳ ನಿರ್ಮಾಣ ಗುತ್ತಿಗೆ ಸಾರ್ವಜನಿಕ ವಲಯದ ಅನುಭವಿ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‍ಗೆ ಸಿಗದೇ ಅನುಭವವೇ ಇಲ್ಲದ ಅಂಬಾನಿಯ ಹೊಸ ಕಂಪೆನಿಯ ಪಾಲಾಗಿದೆ. ಡ್ರೋನ್ ನಿರ್ಮಾಣದ ಗುತ್ತಿಗೆಯದ್ದೂ ಅದೇ ಕತೆ! ಅಂಬಾನಿ, ಅದಾನಿ ಮುಂತಾದ ಆಗರ್ಭ ಶ್ರೀಮಂತರ ಬೃಹತ್ ಉದ್ದಿಮೆಗಳಿಗೆ ಲಾಭ ಮಾಡಿಕೊಡುವುದರಿಂದ ಸಾಮಾನ್ಯ ಜನರ ಅಭಿವೃದ್ಧಿ ಅಗುವುದು ಹೇಗೆ? ಬಂಡವಾಳ ಹೂಡಿಕೆಯ ಲಾಭ ಕೇವಲ ಉದ್ದಿಮೆಗಳಿಗೆ, ರಾಜಕೀಯ ಪಕ್ಷಗಳ ನಿಧಿಗೆ, ರಾಜಕಾರಣಿಗಳ ಜೇಬಿಗೆ ತಲುಪಿದರೆ ಸಾಕೆ? ರಕ್ಷಣಾ ವಲಯದಂತಹ ಸೂಕ್ಷ್ಮ ಕ್ಷೇತ್ರಗಳನ್ನೂ ಖಾಸಗಿ ಬಂಡವಾಳಗಾರರಿಗೆ ಬಿಟ್ಟುಕೊಡುತ್ತಿರುವುದು ಅಪಾಯಕಾರಿ ನಡೆ. ವಿಕೇಂದ್ರೀಕೃತವಾದ ಜನಪರ ಅಭಿವೃದ್ಧಿಗೆ ತಿಲಾಂಜಲಿ ಬಿಟ್ಟು, ದೊಡ್ಡ ಕೈಗಾರಿಕೆಗಳಿಗೆ ಭೂಮಿ ಒದಗಿಸಿಕೊಡುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದು, ಅದಕ್ಕೆ ಅನುಕೂಲಕರವಾದ ರೈತವಿರೋಧಿ ಭೂಸ್ವಾಧೀನ ಕಾಯಿದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದು ಅಪಾಯದ ಗಂಟೆಯನ್ನು ಮೊಳಗಿಸುತ್ತಿದೆಯೆ?
ಜನಾಂಗ ಜನಾಂಗಗಳನ್ನೇ ನಿರ್ನಾಮ ಮಾಡಿದ ಸರ್ವಾಧಿಕಾರಗಳೆಲ್ಲವೂ ಮೊದಲಿಗೆ ಎಲ್ಲರನ್ನು ಜೊತೆಗೊಯ್ಯುವ ಮಾತಾಡಿವೆ!
ಲಕ್ಷಾಂತರ ಯಹೂದಿಗಳನ್ನು ಯಾತನಾ ಶಿಬಿರಗಳಿಗೆ ತಳ್ಳಿ ಅಮಾನವೀಯವಾಗಿ ಮುಗಿಸಿದ ಹಿಟ್ಲರ್‍ಗೆ ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಡಿತಹೊಂದಿದ್ದ ಯಹೂದಿಗಳು ಬೇಕಾಗಿದ್ದರು. ಅವನು ಅದಕ್ಕಾಗಿ ಅವರನ್ನು ಓಲೈಸಿದ್ದ ಕೂಡಾ. ಅತನ ಸರಕಾರ ಅವರಿಂದ ಬೇಕಾಬಿಟ್ಟಿ ಸಾಲ ಎತ್ತಿದ್ದ. ನಂತರ ಕೈಯೆತ್ತಿ ಅವರ ವಿರುದ್ಧ ಮುಗಿಬಿದ್ದಿದ್ದ.
ನಮ್ಮಲ್ಲಿಯೂ ಇಂತಹ ಮಾತುಗಳು ಕೇಳಿಬರುತ್ತಿವೆ. ಅದರೆ, ವ್ಯವಸ್ಥಿತವಾಗಿ ಸಂಕುಚಿತವಾದ, ಗಂಭೀರವಾದ ದಾಳಿಗಳು ನಿರಂತರವಾಗಿ ಬುದ್ಧಿಜೀವಿಗಳ ಮೇಲೆ, ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆದುಕೊಂಡುಬಂದಿವೆ. ದನ ಸಾಗಾಟ, ಕಾಲಮೇಲೆ ಕಾಲುಹಾಕಿದ್ದು, ಕುದುರೆಯ ಮೇಲೆ ಕುಳಿತದ್ದು ಮುಂತಾದ ಕ್ಷುಲ್ಲಕ ಕಾರಣಗಳಿಗೆ ಮಾತ್ರವಲ್ಲ, ಕಾರಣವೇ ಇಲ್ಲದೇ ದಾಳಿಗಳು, ಕೊಲೆಗಳು, ಅತ್ಯಾಚಾರಗಳು ನಡೆದಿವೆ. ಜೊತೆಗೆ ಪ್ರತೀಕಾರ ಕೃತ್ಯಗಳೂ ಕೆಲವೊಮ್ಮೆ ನಡೆದಿವೆ. ತಾವು ಸಂತರೆಂದು ಹೇಳಿಕೊಳ್ಳುವವರು, ಸಂಸದರು ಕೂಡಾ ಕೊಚ್ಚಿ, ಕೊಲ್ಲಿ, ಬೆಂಕಿಹಚ್ಚಿ, ತಲೆಕಡಿಯಿರಿ, ದೇಶದಿಂದ ಓಡಿಸಿ ಇತ್ಯಾದಿ ಪ್ರಚೋದನಾತ್ಮಕ ಭಾಷೆಯಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ. ಎಲ್ಲರನ್ನೂ ಜೊತೆಗೊಯ್ಯುತ್ತೇವೆ ಎಂದು ಹೇಳುವವರು ಮಾತ್ರ ಇವುಗಳನ್ನು ಖಂಡಿಸದೇ, ಕ್ರಮ ಕೈಗೊಳ್ಳದೆ ಮೌನ ಅನುಮತಿ ನೀಡುತ್ತಿರುವಂತಿದೆ.
ಇದಲ್ಲದೇ ಸಂವಿಧಾನವನ್ನು ಬದಲಾಯಿಸುವ ಮಾತೂ ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳನ್ನು ಮುಂದೆ ವಿವರವಾಗಿ ಚರ್ಚಿಸೋಣ. ಇದು ಕೇವಲ ಪರಿಚಯ ಮಾತ್ರ. ಭಾರತದಂತಹ ವೈವಿಧ್ಯಮಯ ವಿಶಾಲ ಜನಭರಿತ ದೇಶದಲ್ಲಿ ಸರ್ವಾಧಿಕಾರ ತರುವುದು ಸುಲಭದ ಕೆಲಸವೇನಲ್ಲ! ಹಿಂದೆ ಇಂದಿರಾಗಾಂಧಿಯವರ ಕಾಲದಲ್ಲಿ ಇಂತಹ ಪ್ರಯತ್ನ ನಡೆದಿತ್ತು ಮತ್ತು ಅದನ್ನು ಜನತೆಯ ಹೋರಾಟ ವಿಫಲಗೊಳಿಸಿತು ಎಂಬುದನ್ನು
ಮರೆಯದಿರೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...