Homeಅಂಕಣಗಳುಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

ಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

- Advertisement -
- Advertisement -

ಬಿ. ಶ್ರೀಪಾದ ಬಟ್ |

ಹಂಪಿ ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ವಿವಾದವನ್ನು ಗಮನಿಸಿದಾಗ ಅಲ್ಲಿನ ಕುಲಪತಿಗಳಾದ ಮಲ್ಲಿಕಾ ಘಂಟಿಯವರಿಗೆ ಯಾರು ವಿದ್ಯಾಸಾದಕರು, ಯಾರು ವಿ

ದ್ವಂಸಕರು ಎಂಬುದರ ಅರಿವು ಇಲ್ಲದೆ ಹೋಯಿತೆ ಎನ್ನುವ ಪ್ರಶ್ನೆ ಮೂಡುತ್ತದೆ. ವಿಶಯವೇನೆಂದರೆ ಕನ್ನಡ ವಿವಿಯ ನುಡಿಹಬ್ಬದ ಪ್ರಯುಕ್ತ ಡಿಸೆಂಬರ್ 31, 2018-ಜನವರಿ 1, 2019 ರಂದು ಆಯೋಜಿಸಲಾಗಿದ್ದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಬಕ್ಕೆ ಸುಳ್ಳು ಬಿತ್ತಿ ದ್ವೇಶವನ್ನು ಬೆಳೆಸಿದ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಅತಿಥಿಗಳನ್ನಾಗಿ ಕರೆದಿದ್ದು ಇಡೀ ವಿವಾದದ ಕೇಂದ್ರವಾಗಿದೆ. ಸದರಿ ಪತ್ರಕರ್ತರನ್ನು ಯಾವ ಅರ್ಹತೆಯ ಮೇಲೆ ಆಹ್ವಾನಿಸಿದ್ದೀರಿ ಎಂದು ಪ್ರಜ್ನಾವಂತರು ಪ್ರಶ್ನಿಸಿ

ಹಂಪಿ ವಿಶ್ವವಿದ್ಯಾಲಯ

ದ್ದಾರೆ. ಏಕೆಂದರೆ ವಿಶ್ವೇಶ್ವರ ಭಟ್ಟ ಎನ್ನುವ ಪತ್ರಕರ್ತ ಕನ್ನಡ ಪತ್ರಿಕೋದ್ಯಮವನ್ನು ಅದೋಗತಿಗಿಳಿಸಿದ, ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದಲ್ಲಿ, ತುಚ್ಚವಾಗಿ ಬರೆದಂತಹ ವ್ಯಕ್ತಿ. ಹಿಂದುತ್ವ ಮತಾಂದತೆಯ ವಿಶವನ್ನು ತ

ನ್ನ ಪತ್ರಿಕೆಯಲ್ಲಿ ದಿನನಿತ್ಯ ಪ್ರಚಾರ ಮಾಡಿದ, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡೆಸಿದ ಈ ಭಟ್ಟರನ್ನು ವಿಶಭಟ್ಟ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಈ ಮುಂಚೆ ಕನ್ನಡ ವಿವಿಯ ಕುಲಪತಿಗಳಾಗಿದ್ದ ಎಂ.ಎಂ. ಕಲ್ಬುರ್ಗಿಯವರ ವಿರುದ್ದ ಸುಳ್ಳುಗಳನ್ನು ಅಪಪ್ರಚಾರ ಮಾಡಲು ತಾನು ಸಂಪಾದಕನಾಗಿದ್ದ ದಿನಪತ್ರಿಕೆ ಮತ್ತು ಟಿವಿ ಚಾನಲ್ ನಲ್ಲಿ ಮತಾಂದರಿಗೆ ಸಂಪೂರ್ಣ ಅವಕಾಶವನ್ನು ಕೊಟ್ಟ ಈ ವಿ.ಭಟ್ಟರಿಗೆ ಸಂವಿದಾನ ಮೇಲೆಯೂ ಗೌರವವಿಲ್ಲ. ಸಂವಿದಾನದ ನೀತಿಸಂಹಿತೆಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸುತ್ತಿರುವ ಹಂಪಿ ವಿವಿಯು ಸಂವಿದಾನ ವಿರೋದಿಯಾದಂತಹ ವಿಶ್ವೇಶ್ವರ ಭಟ್ಟರನ್ನು ಅತಿಥಿಯನ್ನಾಗಿ ಆಯ್ಕೆ ಮಾಡುವುದು ಸಹ ಪ್ರಜಾತಾಂತ್ರಿಕ ವಿರೋದಿ ಎನಿಸಿಕೊಳ್ಳುತ್ತದೆ

ಆದರೆ ಮಲ್ಲಿಕಾ ಘಂಟಿಯವರು ಸಿಂಡಿಕೇಟ್ ಸದಸ್ಯರ ಸಬೆ ನಡೆಸದೆ, ಹಿರಿಯ ಪ್ರಾದ್ಯಾಪಕರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಈ ನಿರ್ಣಯವನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ. ಸ್ವತಃ ಉಪಕುಲಪತಿಗಳೆ ಒಂದೆಡೆ ಇದು ನನ್ನ ನಿರ್ದಾರ ಎಂದು ಹೇಳಿದ್ದಾರೆ. ಅಕ್ಕ ಮಹಾದೇವಿ “ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಯ್ಯ, ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಯ್ಯ” ಎಂದು ಕೇಳುತ್ತಾಳೆ. ಪ್ರಜ್ನಾವಂತರು ಇದೇ ಪ್ರಶ್ನೆಯನ್ನು ಇಂದು ಕುಲಪತಿಗಳಿಗೆ ಕೇಳುತ್ತಿದ್ದಾರೆ.

ವಿವಿಯ ಆಡಳಿತ ಮಂಡಳಿ ಮತ್ತು ಕುಲಪತಿಗಳ ಈ ಆಯ್ಕೆಯನ್ನು ವಿರೋದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋದ ವ್ಯಕ್ತವಾಯಿತು. ಸಾಹಿತಿ, ಲೇಖಕ, ಪತ್ರಕರ್ತರು, ಹೋರಾಟಗಾರರು ವಿಶ್ವೇಶ್ವರ ಬಟ್ಟರಂತಹ ಜೀವವಿರೋದಿ ಪತ್ರಕರ್ತರನ್ನು ಆಹ್ವಾನಿಸಿದ್ದನ್ನು ಸಾಮೂಹಿಕವಾಗಿ ಖಂಡಿಸಿ ಪತ್ರವನ್ನು ಬರೆದರು. ವಿವಿಯ ಈ ನಡೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶ್ವೇಶ್ವರ ಭಟ್ಟರ ಆಯ್ಕೆಯ ಈ ನಿರ್ದಾರವನ್ನ ಕೈಬಿಡಬೇಕು ಎಂದು ಆಗ್ರಹಿಸಿದರು. ಕವಿಗಳಿಗೆ ಕವಿ-ಕಾವ್ಯ ಗೋಶ್ಟಿಯಲ್ಲಿ ಬಾಗವಹಿಸಬಾರದೆಂದು ಮನವಿಯನ್ನು ಸಹ ಮಾಡಲಾಯಿತು.

ಮಲ್ಲಿಕಾ ಘಂಟಿ

ಕವಿ, ಲೇಖಕರಾದ ಲಕ್ಷ್ಮೀಪತಿ ಕೋಲಾರ, ಹನುಮಂತ ಹಾಲಗೇರಿ, ಕೆ.ಪಿ.ನಟರಾಜ, ರಮೇಶ್ ಗಬ್ಬೂರು, ಜಾಜಿ ದೇವೆಂದ್ರಪ್ಪ, ಅರುಣ್ ಜೋಳದ ಕೂಡ್ಲಿಗಿ ಅವರು ಕವಿಗೋಶ್ಟಿಯಲ್ಲಿ ಭಾಗವಹಿಸದಿರಲು ನಿರ್ದರಿಸಿದರು.

ಹಂಪಿ ವಿವಿಯ ಬಯಲು ಚಿಂತನ ಸಂಶೋದನ ವಿದ್ಯಾರ್ಥಿ ಬಳಗದವರು ಕುಲಪತಿ ಕಚೇರಿ ಎದುರು ಪ್ರತಿಬಟಿಸಿದರು. ಮುಂದೊದಗಬಹುದಾದ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಲೆಕ್ಕಿಸದೆ ನ್ಯಾಯದ ಪರವಾಗಿ ಬೆಂಬಲಿಸಿದ ಅಲ್ಲಿನ ಸ್ನಾತಕೋತ್ತರ, ಸಂಶೋದನ ವಿದ್ಯಾರ್ಥಿಗಳ ಈ ದಿಟ್ಟತೆ ಇಡೀ ವಿವಾದಕ್ಕೆ ಹೊಸ ತಿರುವನ್ನು ತಂದಿತು. ಮೌನವಾಗಿದ್ದೀರಿ ಯಾಕೆ ಎನ್ನುವ ಪ್ರಶ್ನೆಗೆ ಗುರಿಯಾಗಿದ್ದ ವಿ.ವಿ.ಯ ಪ್ರಾದ್ಯಾಪಕರು ಕುಲಪತಿಗಳ ಏಕಪಕ್ಷೀಯ ನಿರ್ದಾರದ ವಿರುದ್ದ ತಮ್ಮ ಪ್ರತಿಭಟನೆ ದಾಖಲಿಸಿದರು. (ಆದರೆ ಕೆಲ ಪ್ರಾದ್ಯಾಪಕರು ವಿ.ಭಟ್ಟನನ್ನು ಆಹ್ವಾನಿಸಿದ್ದು ಗೊತ್ತಾದ ತಕ್ಷಣ ಕುಲಪತಿಗಳಿಗೆ ತಮ್ಮ ವಿರೋದವನ್ನು ವ್ಯಕ್ತಪಡಿಸಿದ್ದರು)

ಮೇಲಿನ ಎಲ್ಲಾ ಒತ್ತಡಗಳಿಗೆ ಮಣಿದ ಮಲ್ಲಿಕಾ ಘಂಟಿಯವರು ಎರಡು ದಿನದ ಸಮಾರೋಪ ಸಮಾರಂಬವನ್ನೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೂ ಸಹ ತಮ್ಮದೇನು ತಪ್ಪಿಲ್ಲ ಎಂಬಂತೆ ವಿ.ಭಟ್ಟರನ್ನು ಕರೆಸುವ ತಮ್ಮ ನಿರ್ದಾರವನ್ನು ಪದೆ ಪದೆ ಸಮರ್ಥಿಸಿಕೊಂಡರು. ಈ ಸಮರ್ಥನೆಯ ಭರದಲ್ಲಿ ಇಡೀ ವಿವಾದವನ್ನು ಎಡಪಂಥೀಯ ವರ್ಸಸ್ ಬಲಪಂಥೀಯ ಎಂದು ಶರಾ ಬರೆದುಬಿಟ್ಟರು. ತಮ್ಮ ಈ ಹತಾಶ ಹೇಳಿಕೆಯ ಮೂಲಕ ಜನತೆಯನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮಾಡಿದರು. ಆದರೆ ಪತ್ರಕರ್ತ ವೇಶದ ಒಬ್ಬ ಜೀವವಿರೋದಿ ವ್ಯಕ್ತಿಯನ್ನು ಹಂಪಿ ವಿವಿಯಂತಹ ಉನ್ನತ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಆಹ್ವಾನಿಸುವುದರ ವಿರುದ್ದ ಮಾತ್ರ ಇಲ್ಲಿ ಪ್ರತಿಬಟನೆ ಇತ್ತು ಹೊರತಾಗಿ ಯಾವುದೆ ಸಿದ್ದಾಂತಗಳ ನಡುವಿನ ಜಗಳವಂತೂ ಅಲ್ಲವೆ ಅಲ್ಲ . ಕನ್ನಡ ವಿವಿಯ ಘನತೆ ಮತ್ತು ವೈಚಾರಿಕ ಪರಂಪರೆಯನ್ನು ಕಾಪಾಡುವ ಕಳಕಳಿಯೂ ಇಲ್ಲಿನ ಪ್ರಜ್ನಾವಂತರ ಪ್ರತಿಭಟನೆಯ ಮೂಲ ಆಶಯವಾಗಿತ್ತು. ಮುಂದಿನ ಪೀಳಿಗೆಗೆ ಕನ್ನಡ ವಿವಿ ಒಂದು ಅರ್ಥಪೂರ್ಣ ಮಾದರಿಯಾಗಿರಬೇಕು ಎಂಬುದೆ ಈ ಪ್ರತಿರೋದದ ಪ್ರಜ್ನೆಯಾಗಿತ್ತು. ಬಲಪಂಥೀಯರನ್ನು ಕರೆಸುವುದಕ್ಕೆ ಯಾವುದೆ ಬಗೆಯ ವಿರೋದ ವ್ಯಕ್ತಪಡಿಸುವುದು ಪ್ರಜಾಪ್ರಬುತ್ವ ವಿರೋದಿ ನಡವಳಿಕೆಯಾಗುತ್ತದೆ ಎನ್ನುವ ಸ್ಪಶ್ಟ ತಿಳುವಳಿಕೆ ಮೇಲಿನ ಪ್ರಜ್ನಾವಂತರಿಗಿದೆ. ಮತ್ತು ಇಂತಹ ಫ್ಯಾಸಿಸ್ಟ್ ವರ್ತನೆಯನ್ನು ಕಾಲಕಾಲಕ್ಕೆ ಖಂಡಿಸುತ್ತಲೆ ಬಂದಿದ್ದಾರೆ.

ಕಡೆಗೂ ಕಾಡುವುದೇನೆಂದರೆ “ಎಲ್ಲಾ ಬಿಟ್ಟ ಮಗ ಭಂಗಿ ಯಾಕೆ ನೆಟ್ಟ” ??

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...