Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ...

ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ…

- Advertisement -
- Advertisement -

 ಗೌರಿ ಲಂಕೇಶ್

30 ಏಪ್ರಿಲ್, 2008 (`ಕಂಡಹಾಗೆ’ ಸಂಪಾದಕೀಯದಿಂದ)

ಮೊನ್ನೆ ಪ್ರಿಯಾಂಕ ಗಾಂಧಿ, ತನ್ನ ತಂದೆ ರಾಜೀವ್ ಗಾಂಧಿಯನ್ನು ಕೊಂದವರ ತಂಡದಲ್ಲಿದ್ದ, ಈಗ ಆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಳಿನಿ ಎಂಬಾಕೆಯನ್ನು ವೆಲ್ಲೂರ್ ಜೈಲಿನಲ್ಲಿ ಭೇಟಿಯಾಗಿದ್ದರ ಸುದ್ದಿ ಹೊರಬೀಳುತ್ತಿದ್ದಂತೆ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಅವುಗಳಲ್ಲಿ ಬಿಜೆಪಿ ಪಕ್ಷದವರ ಪ್ರತಿಕ್ರಿಯೆಯಂತೂ ತಮಾಷೆಯಾಗಿತ್ತು. ಮೊದಮೊದಲು ಆಕೆ ಹೀಗೇಕೆ ಮಾಡಿದಳು ಎಂದು ನಮಗೆ ಅರ್ಥವೇ ಆಗುತ್ತಿಲ್ಲ ಎಂದ ಬಿಜೆಪಿಯ ವಕ್ತಾರ. ಆದರೂ ಈ ಬಗ್ಗೆ ನಿಮಗೊಂದು ಅಭಿಪ್ರಾಯ ಇರಲೇಬೇಕಲ್ಲಾ ಎಂದು ಒತ್ತಾಯಿಸಿದಾಗ “ವೈಯಕ್ತಿಕ ವಿಷಯಗಳ ಬಗ್ಗೆ ನಾವು ಮಾತಾಡುವುದಿಲ್ಲ” ಎಂದ. ಹೇಳಿಕೇಳಿ, ಅವಕಾಶ ಸಿಕ್ಕಾಗಲೆಲ್ಲ ಸೋನಿಯಾ ಗಾಂಧಿ ಮತ್ತವರ ಮಕ್ಕಳ ಮೇಲೆ ಕಾರಿಕೊಂಡು ಬೀಳುವುದು ಆವರ ಜಾಯಮಾನ, ಆದರೆ ಪ್ರಿಯಾಂಕ-ನಳಿನಿ ಭೇಟಿಯ ಹಿಂದೆ ಯಾವ ರಾಜಕೀಯವೂ ಇರಲಿಲ್ಲ ಎಂದು ಗೊತ್ತಾಗಿ ಬಿಜೆಪಿಗಳು ಸುಮ್ಮನಾದರು.

ಪ್ರಿಯಾಂಕ ವಿಷಯಕ್ಕೆ ಬರುವುದಾದರೆ ಆಕೆ ತನ್ನ ಚಿಕ್ಕವಯಸ್ಸಿನಲ್ಲೇ ಹಿಂಸಾಕೃತ್ಯಗಳನ್ನು ಹತ್ತಿರದಿಂದ ನೋಡಿದವಳು. ಮೊದಲು ಆಕೆಯ ಅಜ್ಜಿ ಇಂದಿರಾಗಾಂಧಿಯನ್ನು ಆಕೆಯ ರಕ್ಷಣಾ ದಳದವರೇ ಕೊಂದು ಹಾಕಿದರು. ಅನಂತರ ಆಕೆಯ ತಂದೆಯನ್ನು ಆತ್ಮಹತ್ಯಾ ದಾಳಿಯಲ್ಲಿ ಕೊಂದು ಹಾಕಲಾಯಿತು. ಈಗ ಪ್ರತಿಕ್ಷಣ ರಕ್ಷಣಾದಳದವರಿಂದ ಸುತ್ತುವರೆದಿರುವ, ಗಾಜಿನ ಅರಮನೆಯಲ್ಲಿ ಬದುಕನ್ನು ಸಾಗಿಸುತ್ತಿರುವ, ಹೆಚ್ಚಾಗಿ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧ್ಯವಿರದ ಸ್ಥಿತಿಯಲ್ಲಿರುವ ಯುವತಿ ಪ್ರಿಯಾಂಕ. ಅಂತಹ ಪರಿಸ್ಥಿತಿಯಲ್ಲೂ ಆಕೆ ತನ್ನ ಮಾನವೀಯತೆಯನ್ನು ಉಳಿಸಿಕೊಂಡು ಸಹಜವಾಗಿ ಬದುಕಲು ಯತ್ನಿಸುತ್ತಿದ್ದಾಳೆ ಎಂಬುದಕ್ಕೆ ನಳಿನಿ ಭೇಟಿ ಪ್ರಕರಣವೇ ಸಾಕ್ಷಿ.

ಯಾವುದೇ ಪ್ರಚಾರವಿಲ್ಲದೆ, ಯಾರ ಗಮನಕ್ಕೂ ಬಾರದ ಪ್ರಿಯಾಂಕ ತನ್ನ ತಂದೆಯ ಸಾವಿಗೆ ಕಾರಣವಾಗಿದ್ದ ನಳಿನಿಯನ್ನು ಭೇಟಿಯಾಗಿದ್ದ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಪ್ರಿಯಾಂಕ ಯಾಕೆ ಆಕೆಯನ್ನು ಭೇಟಿಯಾದಳು? ಅವರಿಬ್ಬರ ನಡುವೆ ಯಾವ ಮಾತುಕತೆ ನಡೆಯಿತು? ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಭೇಟಿ ಆಗುವ ಬಯಕೆ ಪ್ರಿಯಾಂಕಳಲ್ಲಿ ಮೂಡಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದವು.

ಅವುಗಳಿಗೆಲ್ಲಾ ಪ್ರಿಯಾಂಕ ಉತ್ತರಿಸಿದ್ದು ಹೀಗೆ “ಅದು ವೈಯಕ್ತಿಕ ವಿಷಯ. ನಾನು ಸ್ವಇಚ್ಛೆಯಿಂದಲೇ ಆಕೆಯನ್ನು ಭೇಟಿಯಾದೆ. ನನ್ನ ಬದುಕಿನಲ್ಲಿ ಸಂಭವಿಸಿರುವ ಹಿಂಸೆ ಮತ್ತು ಸಾಮರಸ್ಯವನ್ನು ಪಡೆಯಲು ನಾವು ಆಯ್ಕೆ ಮಾಡಿಕೊಂಡ ಮಾರ್ಗ ಅದು. ನನಗೆ ಕೋಪ, ದ್ವೇಷ ಮತ್ತು ಹಿಂಸೆಯಲ್ಲಿ ನಂಬಿಕೆ ಇಲ್ಲ. ಮತ್ತು ಅಂತಹ ಭಾವನೆಗಳು ನನ್ನ ಬದುಕನ್ನೇ ಸ್ವಾಧೀನಪಡಿಸಿಕೊಳ್ಳಲು ನಾನು ಎಂದೂ ಬಿಡುವುದಿಲ್ಲ.”

ಇಂಗ್ಲಿಷ್‍ನಲ್ಲಿ ಒಂದು ಹೇಳಿಕೆ ಇದೆ: “ಟು ಎರ್ ಈಸ್ ಹ್ಯೂಮನ್, ಟು ಫರ್‍ಗೀವ್ ಈಸ್ ಡಿವೈನ್” ಅಂತ. ಹಾಗೆ ಪ್ರಿಯಾಂಕ ಕೂಡ ಸಾಮಾನ್ಯ ಮನುಷ್ಯಳಂತಿದ್ದು ನಳಿನಿ ಬಗ್ಗೆ ಮರೆಯಬಹುದಿತ್ತು. ಅಥವಾ ನಳಿನಿ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ಸುಮ್ಮನಿರಬಹುದಿತ್ತು. ಆದರೆ ಪ್ರಿಯಾಂಕ ಮರೆಯಲಿಲ್ಲ, ಸುಮ್ಮನಿರಲಿಲ್ಲ. ಬದಲಾಗಿ ನಳಿನಿಯನ್ನು ಭೇಟಿಯಾಗಿ, ಅವಳೊಂದಿಗೆ ಸಾಮಾನ್ಯ ಯುವತಿಯರಂತೆ ಬಾಣಂತನ, ಮಕ್ಕಳ ಬಗ್ಗೆ ಚರ್ಚಿಸಿ, ಒಂದು ಉಡುಗೊರೆಯನ್ನು ನೀಡುವ ಮೂಲಕ ಪ್ರಿಯಾಂಕ ತನ್ನ ಎಲ್ಲಾ ದುಃಖ ಮತ್ತು ನೋವುಗಳೊಂದಿಗೆ ಮುಖಾಮುಖಿಯಾಗಿ ತನ್ನ ಮನಸ್ಸಿನಲ್ಲೇ ಅವುಗಳಿಗೆ ಒಂದು ಅಂತ್ಯ ಕಂಡುಕೊಂಡಿದ್ದಾಳಲ್ಲದೆ ತನ್ನ ಮಾನವೀಯತೆಯನ್ನು ಮೆರೆದಿದ್ದಾಳೆ. ಅಂದಹಾಗೆ ರಾಜೀವ್‍ಗಾಂಧಿಯ ಹತ್ಯೆಗೆ ಸಂಬಂಧಪಟ್ಟಂತೆ ನ್ಯಾಯಾಲಯ ನಳನಿಗೆ ಮತ್ತಾಕೆಯ ಗಂಡ ಮುರುಗನ್, ಇಬ್ಬರಿಗೂ ಮರಣದಂಡನೆ ವಿಧಿಸಿತ್ತು. ಆದರೆ ತೀರ್ಪು ಬರುವ ಮುನ್ನವೇ ನಳಿನಿಗೆ ಜೈಲಿನಲ್ಲೇ ಒಂದು ಹೆಣ್ಣುಮಗು ಹುಟ್ಟಿತ್ತು. ಆಗ ನಳಿನಿ ಮತ್ತು ಮುರುಗನ್ ಇಬ್ಬರೂ ಗಲ್ಲಿಗೇರಿಸಲ್ಪಟ್ಟರೆ ಅವರ ಮಗಳು ಅನಾಥೆಯಾಗುತ್ತಾಳೆಂಬ ಕಾರಣಕ್ಕೆ ನಳನಿಗೆ ಮರಣದಂಡನೆ ವಿಧಿಸಬಾರದೆಂದು ರಾಷ್ಟ್ರಪತಿಯವರಿಗೆ ಅಹವಾಲು ಸಲ್ಲಿಸಿದ್ದು ಬೇರಾರು ಅಲ್ಲ. ಮುರುಗನ್ ಮತ್ತು ನಳಿನಿಯ ಕೃತ್ಯದಿಂದ ತನ್ನ ಪ್ರೀತಿಯ ಗಂಡನನ್ನೇ ಕಳೆದುಕೊಂಡಿದ್ದ ಸೋನಿಯಾಗಾಂಧಿ!

ಸೋನಿಯಾ ಗಾಂಧಿಯ ಈ ಕಾಳಜಿಯಿಂದಲೇ ತನ್ನ ಪ್ರಾಣ ಉಳಿಸಿಕೊಂಡ ನಳಿನಿ ಅಂದಿನಿಂದ ಸೋನಿಯಾರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಆಕೆ ಬರೆದ ಪತ್ರಗಳಲ್ಲಿ ಸೋನಿಯಾರನ್ನು ‘ಪ್ರೀತಿಯ ತಾಯಿ’ ಎಂದೇ ಸಂಬೋಧಿಸಿದ್ದಾಳೆ.

ಆದರೆ ವಿಪರ್ಯಾಸ ನೋಡಿ.

ಮಾತೆಯರ ಹೆಸರಲ್ಲಿ ‘ಸೌಂದರ್ಯ ಲಹರಿ’ ಎಂಬ ಅಶ್ಲೀಲ ಶ್ಲೋಕಗಳನ್ನು ಸಾಮೂಹಿಕವಾಗಿ ಮಹಿಳೆಯರಿಂದ ಪಠಿಸುವ ಚೆಡ್ಡಿಗಳಿಗೆ ಇಟಲಿಯಲ್ಲಿ ಜನಿಸಿದ್ದರೂ ಈಗ ಭಾರತೀಯರಾಗಿರುವ ಸೋನಿಯಾರ ಮಾತೃತ್ವ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಭಾರತದ ಪ್ರಧಾನಿಯಾದರೆ ತನ್ನ ಗಂಡ ಬದುಕಿರುವಾಗಲೇ ತಾನು ವಿಧವೆಯಂತೆ ಜೀವಿಸುತ್ತೇನೆ ಎಂದು ಸುಷ್ಮಾ ಸ್ವರಾಜ್‍ನಂತಹ ತಲೆ ಕೆಟ್ಟ ಹೆಂಗಸರು ಪ್ರತಿಭಟಿಸುತ್ತಾರೆ.

ಒಂದೆಡೆ, ತನ್ನ ಗಂಡನನ್ನು ಕಳೆದುಕೊಂಡಿದ್ದರೂ, ಆತನನ್ನು ಕೊಂದವರ ಮಗಳ ಬಗ್ಗೆ ತಾಯಿ ವಾತ್ಸಲ್ಯ ತೋರುವ ಸೋನಿಯಾ. ಇನ್ನೊಂದೆಡೆ, ಗರ್ಭವತಿಯರ ಹೊಟ್ಟೆಯನ್ನೇ ತ್ರಿಶೂಲಗಳಿಂದ ಬಗೆದು ಅದರಲ್ಲಿನ ಭ್ರೂಣವನ್ನು ಹಿಡಿದು ಸಂಭ್ರಮಿಸುವ ಬಿಜೆಪಿಗಳು.

ಇವರ ನಡುವೆ ಯಾರು ಈ ದೇಶಕ್ಕೆ ಹಿತವರು?

ಬರೀ ಟೊಳ್ಳುತನ, ಢೋಂಗಿತನ ತುಂಬಿರುವ ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಪ್ರಿಯಾಂಕಳ ಗಟ್ಟಿತನ ಆಶಾದಾಯಕವಾಗಿದೆ ಎಂಬುದನ್ನು ಬಿಜೆಪಿಗಳ ಹೊರತಾಗಿ ಎಲ್ಲರೂ ನಂಬುತ್ತಾರೆ. ಹ್ಯಾಟ್ಸ್ ಆಫ್ ಟು ಪ್ರಿಯಾಂಕ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...