Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ...

ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ…

- Advertisement -
- Advertisement -

 ಗೌರಿ ಲಂಕೇಶ್

30 ಏಪ್ರಿಲ್, 2008 (`ಕಂಡಹಾಗೆ’ ಸಂಪಾದಕೀಯದಿಂದ)

ಮೊನ್ನೆ ಪ್ರಿಯಾಂಕ ಗಾಂಧಿ, ತನ್ನ ತಂದೆ ರಾಜೀವ್ ಗಾಂಧಿಯನ್ನು ಕೊಂದವರ ತಂಡದಲ್ಲಿದ್ದ, ಈಗ ಆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಳಿನಿ ಎಂಬಾಕೆಯನ್ನು ವೆಲ್ಲೂರ್ ಜೈಲಿನಲ್ಲಿ ಭೇಟಿಯಾಗಿದ್ದರ ಸುದ್ದಿ ಹೊರಬೀಳುತ್ತಿದ್ದಂತೆ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಅವುಗಳಲ್ಲಿ ಬಿಜೆಪಿ ಪಕ್ಷದವರ ಪ್ರತಿಕ್ರಿಯೆಯಂತೂ ತಮಾಷೆಯಾಗಿತ್ತು. ಮೊದಮೊದಲು ಆಕೆ ಹೀಗೇಕೆ ಮಾಡಿದಳು ಎಂದು ನಮಗೆ ಅರ್ಥವೇ ಆಗುತ್ತಿಲ್ಲ ಎಂದ ಬಿಜೆಪಿಯ ವಕ್ತಾರ. ಆದರೂ ಈ ಬಗ್ಗೆ ನಿಮಗೊಂದು ಅಭಿಪ್ರಾಯ ಇರಲೇಬೇಕಲ್ಲಾ ಎಂದು ಒತ್ತಾಯಿಸಿದಾಗ “ವೈಯಕ್ತಿಕ ವಿಷಯಗಳ ಬಗ್ಗೆ ನಾವು ಮಾತಾಡುವುದಿಲ್ಲ” ಎಂದ. ಹೇಳಿಕೇಳಿ, ಅವಕಾಶ ಸಿಕ್ಕಾಗಲೆಲ್ಲ ಸೋನಿಯಾ ಗಾಂಧಿ ಮತ್ತವರ ಮಕ್ಕಳ ಮೇಲೆ ಕಾರಿಕೊಂಡು ಬೀಳುವುದು ಆವರ ಜಾಯಮಾನ, ಆದರೆ ಪ್ರಿಯಾಂಕ-ನಳಿನಿ ಭೇಟಿಯ ಹಿಂದೆ ಯಾವ ರಾಜಕೀಯವೂ ಇರಲಿಲ್ಲ ಎಂದು ಗೊತ್ತಾಗಿ ಬಿಜೆಪಿಗಳು ಸುಮ್ಮನಾದರು.

ಪ್ರಿಯಾಂಕ ವಿಷಯಕ್ಕೆ ಬರುವುದಾದರೆ ಆಕೆ ತನ್ನ ಚಿಕ್ಕವಯಸ್ಸಿನಲ್ಲೇ ಹಿಂಸಾಕೃತ್ಯಗಳನ್ನು ಹತ್ತಿರದಿಂದ ನೋಡಿದವಳು. ಮೊದಲು ಆಕೆಯ ಅಜ್ಜಿ ಇಂದಿರಾಗಾಂಧಿಯನ್ನು ಆಕೆಯ ರಕ್ಷಣಾ ದಳದವರೇ ಕೊಂದು ಹಾಕಿದರು. ಅನಂತರ ಆಕೆಯ ತಂದೆಯನ್ನು ಆತ್ಮಹತ್ಯಾ ದಾಳಿಯಲ್ಲಿ ಕೊಂದು ಹಾಕಲಾಯಿತು. ಈಗ ಪ್ರತಿಕ್ಷಣ ರಕ್ಷಣಾದಳದವರಿಂದ ಸುತ್ತುವರೆದಿರುವ, ಗಾಜಿನ ಅರಮನೆಯಲ್ಲಿ ಬದುಕನ್ನು ಸಾಗಿಸುತ್ತಿರುವ, ಹೆಚ್ಚಾಗಿ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧ್ಯವಿರದ ಸ್ಥಿತಿಯಲ್ಲಿರುವ ಯುವತಿ ಪ್ರಿಯಾಂಕ. ಅಂತಹ ಪರಿಸ್ಥಿತಿಯಲ್ಲೂ ಆಕೆ ತನ್ನ ಮಾನವೀಯತೆಯನ್ನು ಉಳಿಸಿಕೊಂಡು ಸಹಜವಾಗಿ ಬದುಕಲು ಯತ್ನಿಸುತ್ತಿದ್ದಾಳೆ ಎಂಬುದಕ್ಕೆ ನಳಿನಿ ಭೇಟಿ ಪ್ರಕರಣವೇ ಸಾಕ್ಷಿ.

ಯಾವುದೇ ಪ್ರಚಾರವಿಲ್ಲದೆ, ಯಾರ ಗಮನಕ್ಕೂ ಬಾರದ ಪ್ರಿಯಾಂಕ ತನ್ನ ತಂದೆಯ ಸಾವಿಗೆ ಕಾರಣವಾಗಿದ್ದ ನಳಿನಿಯನ್ನು ಭೇಟಿಯಾಗಿದ್ದ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಪ್ರಿಯಾಂಕ ಯಾಕೆ ಆಕೆಯನ್ನು ಭೇಟಿಯಾದಳು? ಅವರಿಬ್ಬರ ನಡುವೆ ಯಾವ ಮಾತುಕತೆ ನಡೆಯಿತು? ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಭೇಟಿ ಆಗುವ ಬಯಕೆ ಪ್ರಿಯಾಂಕಳಲ್ಲಿ ಮೂಡಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದವು.

ಅವುಗಳಿಗೆಲ್ಲಾ ಪ್ರಿಯಾಂಕ ಉತ್ತರಿಸಿದ್ದು ಹೀಗೆ “ಅದು ವೈಯಕ್ತಿಕ ವಿಷಯ. ನಾನು ಸ್ವಇಚ್ಛೆಯಿಂದಲೇ ಆಕೆಯನ್ನು ಭೇಟಿಯಾದೆ. ನನ್ನ ಬದುಕಿನಲ್ಲಿ ಸಂಭವಿಸಿರುವ ಹಿಂಸೆ ಮತ್ತು ಸಾಮರಸ್ಯವನ್ನು ಪಡೆಯಲು ನಾವು ಆಯ್ಕೆ ಮಾಡಿಕೊಂಡ ಮಾರ್ಗ ಅದು. ನನಗೆ ಕೋಪ, ದ್ವೇಷ ಮತ್ತು ಹಿಂಸೆಯಲ್ಲಿ ನಂಬಿಕೆ ಇಲ್ಲ. ಮತ್ತು ಅಂತಹ ಭಾವನೆಗಳು ನನ್ನ ಬದುಕನ್ನೇ ಸ್ವಾಧೀನಪಡಿಸಿಕೊಳ್ಳಲು ನಾನು ಎಂದೂ ಬಿಡುವುದಿಲ್ಲ.”

ಇಂಗ್ಲಿಷ್‍ನಲ್ಲಿ ಒಂದು ಹೇಳಿಕೆ ಇದೆ: “ಟು ಎರ್ ಈಸ್ ಹ್ಯೂಮನ್, ಟು ಫರ್‍ಗೀವ್ ಈಸ್ ಡಿವೈನ್” ಅಂತ. ಹಾಗೆ ಪ್ರಿಯಾಂಕ ಕೂಡ ಸಾಮಾನ್ಯ ಮನುಷ್ಯಳಂತಿದ್ದು ನಳಿನಿ ಬಗ್ಗೆ ಮರೆಯಬಹುದಿತ್ತು. ಅಥವಾ ನಳಿನಿ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ಸುಮ್ಮನಿರಬಹುದಿತ್ತು. ಆದರೆ ಪ್ರಿಯಾಂಕ ಮರೆಯಲಿಲ್ಲ, ಸುಮ್ಮನಿರಲಿಲ್ಲ. ಬದಲಾಗಿ ನಳಿನಿಯನ್ನು ಭೇಟಿಯಾಗಿ, ಅವಳೊಂದಿಗೆ ಸಾಮಾನ್ಯ ಯುವತಿಯರಂತೆ ಬಾಣಂತನ, ಮಕ್ಕಳ ಬಗ್ಗೆ ಚರ್ಚಿಸಿ, ಒಂದು ಉಡುಗೊರೆಯನ್ನು ನೀಡುವ ಮೂಲಕ ಪ್ರಿಯಾಂಕ ತನ್ನ ಎಲ್ಲಾ ದುಃಖ ಮತ್ತು ನೋವುಗಳೊಂದಿಗೆ ಮುಖಾಮುಖಿಯಾಗಿ ತನ್ನ ಮನಸ್ಸಿನಲ್ಲೇ ಅವುಗಳಿಗೆ ಒಂದು ಅಂತ್ಯ ಕಂಡುಕೊಂಡಿದ್ದಾಳಲ್ಲದೆ ತನ್ನ ಮಾನವೀಯತೆಯನ್ನು ಮೆರೆದಿದ್ದಾಳೆ. ಅಂದಹಾಗೆ ರಾಜೀವ್‍ಗಾಂಧಿಯ ಹತ್ಯೆಗೆ ಸಂಬಂಧಪಟ್ಟಂತೆ ನ್ಯಾಯಾಲಯ ನಳನಿಗೆ ಮತ್ತಾಕೆಯ ಗಂಡ ಮುರುಗನ್, ಇಬ್ಬರಿಗೂ ಮರಣದಂಡನೆ ವಿಧಿಸಿತ್ತು. ಆದರೆ ತೀರ್ಪು ಬರುವ ಮುನ್ನವೇ ನಳಿನಿಗೆ ಜೈಲಿನಲ್ಲೇ ಒಂದು ಹೆಣ್ಣುಮಗು ಹುಟ್ಟಿತ್ತು. ಆಗ ನಳಿನಿ ಮತ್ತು ಮುರುಗನ್ ಇಬ್ಬರೂ ಗಲ್ಲಿಗೇರಿಸಲ್ಪಟ್ಟರೆ ಅವರ ಮಗಳು ಅನಾಥೆಯಾಗುತ್ತಾಳೆಂಬ ಕಾರಣಕ್ಕೆ ನಳನಿಗೆ ಮರಣದಂಡನೆ ವಿಧಿಸಬಾರದೆಂದು ರಾಷ್ಟ್ರಪತಿಯವರಿಗೆ ಅಹವಾಲು ಸಲ್ಲಿಸಿದ್ದು ಬೇರಾರು ಅಲ್ಲ. ಮುರುಗನ್ ಮತ್ತು ನಳಿನಿಯ ಕೃತ್ಯದಿಂದ ತನ್ನ ಪ್ರೀತಿಯ ಗಂಡನನ್ನೇ ಕಳೆದುಕೊಂಡಿದ್ದ ಸೋನಿಯಾಗಾಂಧಿ!

ಸೋನಿಯಾ ಗಾಂಧಿಯ ಈ ಕಾಳಜಿಯಿಂದಲೇ ತನ್ನ ಪ್ರಾಣ ಉಳಿಸಿಕೊಂಡ ನಳಿನಿ ಅಂದಿನಿಂದ ಸೋನಿಯಾರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಆಕೆ ಬರೆದ ಪತ್ರಗಳಲ್ಲಿ ಸೋನಿಯಾರನ್ನು ‘ಪ್ರೀತಿಯ ತಾಯಿ’ ಎಂದೇ ಸಂಬೋಧಿಸಿದ್ದಾಳೆ.

ಆದರೆ ವಿಪರ್ಯಾಸ ನೋಡಿ.

ಮಾತೆಯರ ಹೆಸರಲ್ಲಿ ‘ಸೌಂದರ್ಯ ಲಹರಿ’ ಎಂಬ ಅಶ್ಲೀಲ ಶ್ಲೋಕಗಳನ್ನು ಸಾಮೂಹಿಕವಾಗಿ ಮಹಿಳೆಯರಿಂದ ಪಠಿಸುವ ಚೆಡ್ಡಿಗಳಿಗೆ ಇಟಲಿಯಲ್ಲಿ ಜನಿಸಿದ್ದರೂ ಈಗ ಭಾರತೀಯರಾಗಿರುವ ಸೋನಿಯಾರ ಮಾತೃತ್ವ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಭಾರತದ ಪ್ರಧಾನಿಯಾದರೆ ತನ್ನ ಗಂಡ ಬದುಕಿರುವಾಗಲೇ ತಾನು ವಿಧವೆಯಂತೆ ಜೀವಿಸುತ್ತೇನೆ ಎಂದು ಸುಷ್ಮಾ ಸ್ವರಾಜ್‍ನಂತಹ ತಲೆ ಕೆಟ್ಟ ಹೆಂಗಸರು ಪ್ರತಿಭಟಿಸುತ್ತಾರೆ.

ಒಂದೆಡೆ, ತನ್ನ ಗಂಡನನ್ನು ಕಳೆದುಕೊಂಡಿದ್ದರೂ, ಆತನನ್ನು ಕೊಂದವರ ಮಗಳ ಬಗ್ಗೆ ತಾಯಿ ವಾತ್ಸಲ್ಯ ತೋರುವ ಸೋನಿಯಾ. ಇನ್ನೊಂದೆಡೆ, ಗರ್ಭವತಿಯರ ಹೊಟ್ಟೆಯನ್ನೇ ತ್ರಿಶೂಲಗಳಿಂದ ಬಗೆದು ಅದರಲ್ಲಿನ ಭ್ರೂಣವನ್ನು ಹಿಡಿದು ಸಂಭ್ರಮಿಸುವ ಬಿಜೆಪಿಗಳು.

ಇವರ ನಡುವೆ ಯಾರು ಈ ದೇಶಕ್ಕೆ ಹಿತವರು?

ಬರೀ ಟೊಳ್ಳುತನ, ಢೋಂಗಿತನ ತುಂಬಿರುವ ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಪ್ರಿಯಾಂಕಳ ಗಟ್ಟಿತನ ಆಶಾದಾಯಕವಾಗಿದೆ ಎಂಬುದನ್ನು ಬಿಜೆಪಿಗಳ ಹೊರತಾಗಿ ಎಲ್ಲರೂ ನಂಬುತ್ತಾರೆ. ಹ್ಯಾಟ್ಸ್ ಆಫ್ ಟು ಪ್ರಿಯಾಂಕ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...