Homeಸಿನಿಮಾಕ್ರೀಡೆ2026ರ ಫಿಫಾ ವಿಶ್ವಕಪ್‌ಗೆ 48 ತಂಡಗಳು: ಭಾರತ ಫುಟ್ಬಾಲ್ ತಂಡ ಅರ್ಹತೆ ಪಡೆಯುವುದೆ?

2026ರ ಫಿಫಾ ವಿಶ್ವಕಪ್‌ಗೆ 48 ತಂಡಗಳು: ಭಾರತ ಫುಟ್ಬಾಲ್ ತಂಡ ಅರ್ಹತೆ ಪಡೆಯುವುದೆ?

1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಅರ್ಹತೆ ಪಡೆದಿತ್ತು. ಆದರೆ ಕಾರಣಾಂತರಗಳಿಂದ ಟೂರ್ನಿಯಲ್ಲಿ ಭಾಗವಹಿಸಲಾಗಲಿಲ್ಲ.

- Advertisement -
- Advertisement -

ಕತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ಮುಕ್ತಾಯಗೊಂಡಿದೆ. 34 ಲಕ್ಷ ಮಂದಿ ನೇರವಾಗಿ ಪಂದ್ಯಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರೆ ಕೋಟ್ಯಾಂತರ ಜನ ಟಿವಿ, ಮೊಬೈಲ್‌ಗಳಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಶ್ರೇಷ್ಠ ಆಟ ಪ್ರದರ್ಶಿಸಿದ ಅರ್ಜೆಂಟೀನಾ ತಂಡ ಚಾಂಪಿಯನ್ ಆದರೆ ದಿಟ್ಟ ಪ್ರತಿರೋಧ ತೋರಿದ ಫ್ರಾನ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈಗ ಎಲ್ಲರ ಕಣ್ಣು 2026ರ ಫಿಫಾ ವಿಶ್ವಕಪ್‌ನತ್ತ ಹೊರಳುತ್ತಿದೆ. ಆ ವಿಶ್ವಕಪ್‌ನಲ್ಲಿ 32 ತಂಡಗಳ ಬದಲಿಗೆ 48 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಭಾರತವು ಮುಂದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವುದೇ ಎಂಬ ಚರ್ಚೆಗಳು ಆರಂಭವಾಗಿವೆ.

ಭಾರತ ಫುಟ್ಬಾಲ್ ತಂಡವು ಒಲಿಂಪಿಕ್ಸ್‌ ಸೇರಿದಂತೆ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಸಹ ಫಿಫಾ ವಿಶ್ವಕಪ್‌ನಲ್ಲಿ ಇದುವರೆಗೂ ಪಾಲ್ಗೊಂಡಿಲ್ಲ. 1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ ಅರ್ಹತೆ ಪಡೆದಿತ್ತು. ಆದರೆ ಅಭ್ಯಾಸಕ್ಕೆ ಸಮಯವಿಲ್ಲದಿರುವುದು, ಶೂ ಹಾಕಿ ಆಡಿ ಅಭ್ಯಾಸವಿಲ್ಲದಿರುವುದು, ದುಬಾರಿ ಪ್ರಯಾಣ ವೆಚ್ಚ, ಒಲಿಂಪಿಕ್ಸ್‌ಗೆ ಹೆಚ್ಚಿನ ಮಹತ್ವ.. ಇತ್ಯಾದಿ ಕಾರಣಗಳಿಂದ ಆಗ ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿಯಿತು. ಅಲ್ಲಿಂದ ಇಲ್ಲಿಯವರೆಗೂ ಅದು ಪ್ರಯತ್ನಿಸುತ್ತಿದ್ದರೂ ಸಹ ಕನಸು ಕೈಗೂಡಿಲ್ಲ. ಮುಂದಿನ ವಿಶ್ವಕಪ್‌ನಲ್ಲಿ ಸಾಧ್ಯತೆಯಂತೂ ಇದೆ. ಆದರೆ ಅದಕ್ಕೆ ಭಾರತದ ಸಂಘಟಿತ ಪ್ರದರ್ಶನ ಬೇಕಿದೆ.

ಆತಿಥ್ಯ ವಹಿಸಲಿರುವ ಮೂರು ದೇಶಗಳು

ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂರು ತಂಡಗಳು ಸೇರಿ 2026ರ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸುತ್ತಿವೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ತಂಡಗಳು ಒಟ್ಟು ಸೇರಿ ಟೂರ್ನಿ ಸಂಘಟಿಸುತ್ತಿವೆ. ಮೊರಾಕ್ಕೊ ಸಹ ಆತಿಥ್ಯ ವಹಿಸಲು ಬಿಡ್ಡಿಂಗ್ ಮಾಡಿತ್ತು. ಆದರೆ ಈ ಮೂರು ತಂಡಗಳ ಒಕ್ಕೂಟ ಬಿಡ್ಡಿಂಗ್ ಗೆದ್ದುಕೊಂಡಿವೆ. 2026ರ ಜೂನ್-ಜುಲೈ ತಿಂಗಳಿನಲ್ಲಿ ಪಂದ್ಯಾವಳಿ ನಡೆಯಲಿದೆ.

48 ತಂಡಗಳ ನಡುವ ಕಾಲ್ಚೆಂಡಿನ ಕದನ

1930ರಲ್ಲಿ ಉದ್ಘಾಟನಾ ವಿಶ್ವಕಪ್ ಪಂದ್ಯಾವಳಿಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಆನಂತರ 1934 ರಿಂದ 1978 ರವರೆಗೆ 16 ತಂಡಗಳು ಭಾಗವಹಿಸುತ್ತಿದ್ದವು. 1982 ರಲ್ಲಿ ತಂಡಗಳ ಸಂಖ್ಯೆಯನ್ನು 24 ಕ್ಕೆ ಹೆಚ್ಚಿಸಲಾಯಿತು. 1998 ರಲ್ಲಿ 32 ತಂಡಗಳಿಗೆ ಏರಿಸಲಾಗಿತ್ತು 2022ರವರೆಗೂ 32 ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿದ್ದವು. 2026ರಿಂದ  48 ತಂಡಗಳಿಗೆ ವಿಸ್ತರಿಸಲು ಫಿಫಾ ಮುಂದಾಗಿದೆ. ಇದರಿಂದ ಆಫ್ರಿಕಾ ಮತ್ತು ಏಷ್ಯಾ ಖಂಡದ ಹೆಚ್ಚಿನ ರಾಷ್ಟ್ರಗಳು ಭಾಗವಹಿಸಲು ಅನುಕೂಲವಾಗುತ್ತದೆ. ಇನ್ನು ಮುಂದೆ ಆಫ್ರಿಕಾದ 5 ರಾಷ್ಟ್ರಗಳ ಬದಲಿಗೆ 9 ರಾಷ್ಟ್ರಗಳು ಮತ್ತು ಏಷ್ಯಾದ 4 ರಾಷ್ಟ್ರಗಳ ಬದಲಿಗೆ 8 ಅಥವಾ 9 ರಾಷ್ಟ್ರಗಳು ಅರ್ಹತೆ ಪಡೆಯಲಿವೆ.

ಫಾರ್ಮ್ಯಾಟ್

ಯಾವ ಮಾದರಿಯಲ್ಲಿ ಟೂರ್ನಿ ಆಡಿಲಾಗುತ್ತದೆ ಎಂದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಕೆಲವು ವಿಧಾನಗಳನ್ನು ಚರ್ಚಿಸಲಾಗುತ್ತಿದೆ. ಅವುಗಳೆಂದರೆ

  1. 48 ತಂಡಗಳನ್ನು ತಲಾ ಮೂರು ತಂಡಗಳನ್ನೊಳಗೊಂಡ 16 ಗುಂಪುಗಳಾಗಿ ವಿಭಾಗಿಸುವುದು. ಗುಂಪು ಹಂತದಲ್ಲಿ ಪ್ರತಿ ಗುಂಪಿನಲ್ಲಿ ಒಂದು ತಂಡಕ್ಕೆ ಎರಡು ಪಂದ್ಯಗಳು ಸಿಗಲಿವೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ 32 ತಂಡಗಳು ನಾಕೌಟ್ ಹಂತ ತಲುಪುತ್ತವೆ. ಅಲ್ಲಿಂದ ಸತತ 4 ಪಂದ್ಯ ಗೆದ್ದ ಎರಡು ತಂಡಗಳು ಫೈನಲ್ ತಲುಪುತ್ತವೆ. ಆ ಎರಡು ತಂಡಗಳಿಗೆ ಫೈನಲ್ ಸೇರಿ ಒಟ್ಟು 7 ಪಂದ್ಯಗಳು ಸಿಗುತ್ತವೆ. (2022ರ ಫಿಫಾ ಕ್ರೀಡಾಕೂಟದಲ್ಲಿಯೂ ಫೈನಲ್ ತಲುಪಿದ್ದ ಅರ್ಜೇಂಟೀನಾ, ಫ್ರಾನ್ಸ್ ಮತ್ತು ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕ್ರೊವೇಶಿಯಾ ಮತ್ತು ಮೊರಾಕ್ಕೊ ತಂಡಗಳು ತಲಾ 7 ಪಂದ್ಯಗಳನ್ನು ಆಡಿದ್ದವು) ಈ ವಿಧಾನ ಅಳವಡಿಸಿದ್ದಲ್ಲಿ ಒಟ್ಟು 80 ಪಂದ್ಯಗಳು ನಡೆಯಲಿವೆ. (2022ರಲ್ಲಿ 64 ಪಂದ್ಯಗಳು ನಡೆದಿವೆ.)

2. 48 ತಂಡಗಳನ್ನು ತಲಾ ನಾಲ್ಕು ತಂಡಗಳನ್ನೊಳ 12 ಗುಂಪುಗಳಾಗಿ ವಿಭಾಗಿಸುವುದು. ಗುಂಪು ಹಂತದಲ್ಲಿ ಪ್ರತಿ ಗುಂಪಿನಲ್ಲಿ ಒಂದು ತಂಡಕ್ಕೆ ಮೂರು ಪಂದ್ಯಗಳು ಸಿಗಲಿವೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ 24 ತಂಡಗಳು ನಾಕೌಟ್ ಹಂತ ತಲುಪುತ್ತವೆ. ಅಲ್ಲದೆ ಮೂರನೇ ಸ್ಥಾನ ಪಡೆದ ಬೆಸ್ಟ್ 8 ತಂಡಗಳು ಸಹ ನಾಕೌಟ್ ಪ್ರವೇಶಿಸ ಪಡೆಯುತ್ತವೆ. ಅಲ್ಲಿಂದ ಸತತ 4 ಪಂದ್ಯ ಗೆದ್ದ ಎರಡು ತಂಡಗಳು ಫೈನಲ್ ತಲುಪುತ್ತವೆ. ಆ ಎರಡು ತಂಡಗಳಿಗೆ ಫೈನಲ್ ಸೇರಿ ಒಟ್ಟು 8 ಪಂದ್ಯಗಳು ಸಿಗುತ್ತವೆ. ಈ ವಿಧಾನ ಅಳವಡಿಸಿದ್ದಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ಒಟ್ಟಿನಲ್ಲಿ 48 ತಂಡಗಳ ಸೇರ್ಪಡೆಯಿಂದ ಪ್ರಶಸ್ತಿ ಗೆಲ್ಲಬೇಕಾದರೆ ತಂಡವೊಂದು ನಾಕೌಟ್ ಹಂತದಲ್ಲಿ ಸತತ ಐದು ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯಿದೆ. 2022ರ ಚಾಂಪಿಯನ್ ಅರ್ಜೆಂಟೀನಾ ನಾಕೌಟ್ ಹಂತದಿಂದ ಸತತ 4 ಪಂದ್ಯ ಗೆದ್ದು ಪ್ರಶಸ್ತಿ ಎತ್ತಿಹಿಡಿದಿದೆ.

ಭಾರತ ಅರ್ಹತೆ ಪಡೆಯುವುದೇ?

48 ತಂಡಗಳಲ್ಲಿ ಆತಿಥ್ಯ ವಹಿಸುತ್ತಿರುವ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳು ಸಹಜವಾಗಿ ಅರ್ಹತೆ ಪಡೆಯುತ್ತವೆ. ಅಲ್ಲದೆ CONCACAF ಎಂದು ಕರೆಯಲ್ಪಡುವ ಆ ಭಾಗದ ಇನ್ನೂ ಮೂರು ದೇಶಗಳಿಗೆ ಸ್ಥಾನ ಲಭಿಸಲಿದೆ.

2022ರ ಕತಾರ್ ವಿಶ್ವಕಪ್ ಕ್ರೇಜ್ ಭಾರತದಲ್ಲಿ ದೊಡ್ಡ ಮೊಟ್ಟದಲ್ಲಿತ್ತು. ಕೇರಳ ಅತಿ ಹೆಚ್ಚಿನ ಭಾವುಕತೆ ಪ್ರದರ್ಶಿಸಿದರೆ ಉಳಿದ ರಾಜ್ಯಗಳ ಜನರು ಸಹ ತೀವ್ರ ಆಸಕ್ತಿಯಿಂದ ಫುಲ್ಟಾಲ್ ಪಂದ್ಯಗಳನ್ನು ನೋಡಿದರು. ಹಾಗಾಗಿ ಮುಂದಿನ ವಿಶ್ವಕಪ್ ವೇಳೆಗಾದರೂ ನಮ್ಮ ದೇಶ ಈ ಮಹತ್ವದ ಪಂದ್ಯಾವಳಿಯಲ್ಲಿ ಭಾಗವಹಿಸಲಿ ಎಂದು ಹಾರೈಸುತ್ತಿದ್ದಾರೆ.

ಏಷ್ಯಾ ಖಂಡದಿಂದ 8 ತಂಡಗಳು ಮತ್ತು 1 ತಂಡ ಇಂಟರ್ ಕಾನ್ಫಿಡರೇಷನ್ ಪ್ಲೇ ಆಫ್ ಮೂಲಕ ಒಟ್ಟು 9 ತಂಡಗಳು ಫಿಫಾ 2026ರಲ್ಲಿ ಭಾಗವಹಿಸುವ ಅವಕಾಶ ಹೊಂದಿವೆ. ಆ ತಂಡಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗುತ್ತಿದೆ.

ಸದ್ಯಕ್ಕೆ ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ (AFC) ಅಡಿಯಲ್ಲಿ 47 ತಂಡಗಳು ನೊಂದಾಯಿಸಿಕೊಂಡಿವೆ. ಫಿಫಾ ರ್ಯಾಂಕಿಂಗ್ ಆಧಾರದಲ್ಲಿ ಏಷ್ಯಾದ ತಂಡಗಳಿಗೂ ರ್ಯಾಂಕಿಂಗ್ ನೀಡಿ 1ರಿಂದ25ರ ವರೆಗೆಗಿನ ಒಂದು ಪಟ್ಟಿ ಮತ್ತು 26 ರಿಂದ 47 ರ್ಯಾಂಕಿಂಗ್‌ವರೆಗಿನ ಮತ್ತೊಂದು ಪಟ್ಟಿ ಮಾಡಿ ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗುತ್ತದೆ. ಭಾರತವು ಸದ್ಯ ಫಿಫಾ ರ್ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿದ್ದು, ಏಷ್ಯಾದಲ್ಲಿ 19ನೇ ಸ್ಥಾನ ಪಡೆದು ಮೊದಲ ಪಟ್ಟಿಯಲ್ಲಿದೆ.

ಮೊದಲನೇ ಹಂತದಲ್ಲಿ 26 ರಿಂದ 47 ರ್ಯಾಂಕಿಂಗ್‌ವರೆಗಿನ 22 ತಂಡಗಳು ತಮ್ಮ ದೇಶ ಮತ್ತು ಹೊರಗೆ ಲೀಗ್‌ಗಳಲ್ಲಿ ಆಡಿ ಗೆದ್ದ 11 ತಂಡಗಳನ್ನು ಎರಡನೇ ಹಂತಕ್ಕೆ ಕಳಿಸಲಾಗುತ್ತದೆ.

ಎರಡನೇ ಹಂತದಲ್ಲಿ ಈ 11 ತಂಡಗಳು ಮತ್ತು 1ರಿಂದ 25ರ ಏಷ್ಯಾದ ರ್ಯಾಂಕಿಂಗ್ ಪಡೆದ 25 ತಂಡಗಳನ್ನು ಸೇರಿಸಿ 36 ತಂಡಗಳನ್ನು ತಲಾ 4 ತಂಡಗಳ 9 ಗುಂಪು ಮಾಡಲಾಗುತ್ತದೆ. ಗುಂಪಿನ ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ 18 ತಂಡಗಳು ಮೂರನೇ ಹಂತ ತಲುಪುತ್ತವೆ ಮತ್ತು AFC ಏಷ್ಯನ್ ಕಪ್‌ಗೆ ಅರ್ಹತೆ ಪಡೆಯುತ್ತವೆ.

ಮೂರನೇ ಹಂತದಲ್ಲಿ 18 ತಂಡಗಳನ್ನು ತಲಾ 6 ತಂಡಗಳ ಮೂರು ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಪ್ರತಿ ತಂಡವು ತಮ್ಮ ಗುಂಪಿನ ಇತರ ತಂಡಗಳೊಂದಿಗೆ 5 ಪಂದ್ಯಗಳನ್ನು ಆಡುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ 6 ತಂಡಗಳು ಫಿಫಾ 2026ರ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತವೆ. 3 ಮತ್ತು 4 ನೇ ಸ್ಥಾನ ಪಡೆದ 6 ತಂಡಗಳು ನಾಲ್ಕನೇ ಹಂತ ತಲುಪುತ್ತವೆ.

ನಾಲ್ಕನೇ ಹಂತದಲ್ಲಿ 6 ತಂಡಗಳನ್ನು ತಲಾ 3 ತಂಡಗಳ ಎರಡು ಗುಂಪು ಮಾಡಿ ಆಡಿಸಲಾಗುತ್ತದೆ. ಪ್ರತಿ ತಂಡಕ್ಕೂ 2 ಪಂದ್ಯ ಸಿಗುತ್ತವೆ. ಮೊದಲ ಸ್ಥಾನ ಪಡೆದ ಎರಡು ತಂಡಗಳು ಫಿಫಾ 2026ರ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತವೆ. ಎರಡನೇ ಸ್ಥಾನ ಪಡೆದ 2 ತಂಡಗಳು ಐದನೇ ಹಂತ ಪ್ರವೇಶಿಸುತ್ತವೆ.

ಐದನೇ ಹಂತದಲ್ಲಿ ಎರಡು ತಂಡಗಳು ಇಂಟರ್-ಕಾನ್ಫೆಡರೇಶನ್ ಪ್ಲೇ-ಆಫ್‌ಗಳಲ್ಲಿ ಏಷ್ಯನ್ ಪ್ರಾತಿನಿಧ್ಯವನ್ನು ನಿರ್ಧರಿಸಲು ಪ್ಲೇ-ಆಫ್ ಟೈನಲ್ಲಿ ಸ್ಪರ್ಧಿಸುತ್ತವೆ. ಗೆದ್ದ ಒಂದು ತಂಡ ಫಿಫಾ 2026ರ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತದೆ.

ಭಾರತ ತಂಡವು ಏಷ್ಯನ್ ರ್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದ್ದು ನೇರ ಎರಡನೇ ಹಂತಕ್ಕೆ ಪ್ರವೇಶ ಪಡೆದಿದೆ. ಆದರೆ ಅದು ಉತ್ತಮ ಪ್ರದರ್ಶನ ತೋರಿ ಗೆಲುವು ಪಡೆದರೆ 2026ರ ಫಿಫಾ ಟೂರ್ನಿಯಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...