Homeಅಂಕಣಗಳುಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

- Advertisement -
- Advertisement -

ಉತ್ತರಪ್ರದೇಶದ ಮೊದಲ ಎರಡು ಹಂತಗಳ ಮತದಾನದಲ್ಲಿ ಬಿಜೆಪಿ ಮುಳುಗುವ ನಿಶ್ಚಿತ ಸುಳಿವುಗಳು ಮೇಲೆ ತೇಲಿವೆ. ಮೋದಿ-ಶಾ-ಯೋಗಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ರಾಜ್ಯವು ಬಿಜೆಪಿ ಬಡಿದೆಬ್ಬಿಸಬಹುದಾದ ಭಾವೋದ್ವೇಗದ ಬಿರುಗಾಳಿಗೆ ಸಿಕ್ಕರೆ ಅಚ್ಚರಿಪಡಬೇಕಿಲ್ಲ.

ಹಾಲಿ ಯೋಗಿ ಸರ್ಕಾರ ಮಾತ್ರವಲ್ಲ, ಎರಡು ವರ್ಷಗಳ ನಂತರ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ಅಳಿವು ಉಳಿವನ್ನೂ ಪ್ರಭಾವಿಸುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಏಳು ಹಂತದ ಮತದಾನ ಜರುಗಿದೆ. ಸೋಮವಾರ ಎರಡನೆಯ ಹಂತದ ಮತದಾನ ಮುಗಿದಿದ್ದು ಬಿಜೆಪಿಯನ್ನು ಕಳವಳಕ್ಕೆ ತಳ್ಳಿದೆ.

ಕಳೆದ ಸಲ ಬೀಸಿದ್ದ ಬಿಜೆಪಿ ಪರ ಗಾಳಿ ಈ ಸಲ ಕಂಡುಬಂದಿಲ್ಲ. ಪರವಾದ ಗಾಳಿ ಒತ್ತಟ್ಟಿಗಿರಲಿ, ಮೊದಲ ಎರಡು ಹಂತಗಳಲ್ಲಿ ಎದುರು ಗಾಳಿ ಬೀಸಿರುವ ಸೂಚನೆಗಳಿವೆ. ಬಿಜೆಪಿ ಬೆಂಬಲಿಗರು ಉತ್ಸಾಹ ಕಳೆದುಕೊಂಡಿದ್ದು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ಕಳೆದುಕೊಳ್ಳುವ ದುಸ್ಥಿತಿ ಎದುರಿಸಿದೆ.

ಜಯಂತ್ ಚೌಧರಿ

ಉತ್ತರಪ್ರದೇಶದಲ್ಲಿ ಉಳಿದ ಆರು ಹಂತಗಳಲ್ಲಿ ತಡವಾಗಿಯಾದರೂ ತನ್ನ ರಣತಂತ್ರ ಬದಲಿಸಿ ಬಿಜೆಪಿಗೆ ಚುನಾವಣೆಗಳನ್ನು ಗೆದ್ದುಕೊಡುವ ಜಾದೂಗಾರ ಅಮಿತ್ ಶಾ ’ಚಮತ್ಕಾರ’ ಮಾಡದೆ ಹೋದರೆ ಸೋಲು ಗೋಡೆ ಮೇಲಿನ ಬರೆಹ.

ಹಿಂದೂ-ಮುಸ್ಲಿಮ್ ಧ್ರುವೀಕರಣ, ಯಾದವೇತರ ಹಿಂದುಳಿದ ಜಾತಿಗಳು ಮತ್ತು ಮೇಲ್ಜಾತಿಗಳ ಸಾಮಾಜಿಕ ಎಂಜಿನಿಯರಿಂಗ್‌ನ ಬಿಜೆಪಿ ತಂತ್ರಗಳು ಶಿಖರ ಮುಟ್ಟಿಬಿಟ್ಟಿವೆ. ಅಲ್ಲಿಂದ ಕೆಳಗೆ ಇಳಿಯಬೇಕೇ ವಿನಾ ಮೇಲೇರುವ ಸಾಧ್ಯತೆ ಇಲ್ಲ. ಶಿಖರದಲ್ಲೇ ಉಳಿಯುವ ಶಕ್ತಿಯೂ ಬಿಜೆಪಿಗೆ ಉಳಿದಿಲ್ಲ. ಧ್ರುವೀಕರಣದ ಹೊಸ ಪ್ರಯತ್ನಗಳು ಫಲ ನೀಡುತ್ತಿಲ್ಲ. ಧ್ರುವೀಕರಣದ ಬೆಂಕಿಗೆ ಅರಿವಿಲ್ಲದೆ ತುಪ್ಪ ಸುರಿಯುವ ತಪ್ಪುಗಳನ್ನು ಪ್ರತಿಪಕ್ಷಗಳು ಮಾಡುತ್ತಿಲ್ಲ.

ಯೋಗಿ-ಮೋದಿ ಅವರನ್ನು ಅಭಿವೃದ್ಧಿ ಕಾರ್ಯಗಳ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿದೆ. ಈ ದಿಸೆಯಲ್ಲಿ ಇಬ್ಬರ ಸಾಧನೆಗಳೂ ನಿರಾಶಾದಾಯಕ.

2014ರ ಲೋಕಸಭೆ, 2017ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಉತ್ತರಪ್ರದೇಶದ ಮತದಾರರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ಅಭೂತಪೂರ್ವ ಗೆಲುವು ಗಳಿಸಿಕೊಟ್ಟಿದ್ದಾರೆ. ಮೂರು ಚುನಾವಣೆಗಳ ಸತತ ಗೆಲುವು ಆಳುವ ಪಕ್ಷ ಬಿಜೆಪಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡಿಸಿದ್ದುಂಟು.

ಆದರೆ ಇತ್ತೀಚೆಗೆ ಸಿಡಿದಿರುವ ಸಂಕೇತಗಳು ಬಿಜೆಪಿಯ ನಿದ್ದೆ ಕೆಡಿಸಿವೆ. ದೆಹಲಿಯ ಗಡಿಗಳಲ್ಲಿ ಹದಿಮೂರು ತಿಂಗಳ ಕಾಲ ಜರುಗಿದ ರೈತ ಚಳವಳಿ ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಯ ಕಾಲಕೆಳಗಿನ ನೆಲವನ್ನು ನಡುಗಿಸಿದೆ. ಚುನಾವಣೆಗಳಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬೀಸುವ ಗಾಳಿ ಈ ದೈತ್ಯ ರಾಜ್ಯದ ಇತರೆ ಸೀಮೆಗಳ ಮೇಲೂ ಪ್ರಭಾವ ಬೀರುತ್ತದೆಂಬ ನಂಬಿಕೆಗೆ ಆಧಾರಗಳಿವೆ.

ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳಲ್ಲಿ ಕರ್ನಾಟಕದ ಒಕ್ಕಲಿಗ ಜನಾಂಗಕ್ಕೆ ಹೋಲಿಸಬಹುದಾದ ಉತ್ತರ ಭಾರತದ ಬಲಿಷ್ಠ ಜಾತಿ ಜಾಟರದು. ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಅವರ ಜನಸಂಖ್ಯಾ ಪ್ರಮಾಣ ಶೇ.20ಕ್ಕೂ ಹೆಚ್ಚು. ರಾಜ್ಯದಲ್ಲಿ ಇವರ ಪ್ರಮಾಣ ಶೇ.2ರಷ್ಟು. ಮೊದಲ ಹಂತದ ಮತದಾನ ಜರುಗಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಜನಾಂಗದ ಪ್ರಭಾವ ಮಾಮೂಲಾಗಿಯೇ ಬಲು ದಟ್ಟ.

ಮೋದಿಯವರು ಮೂರು ಕೃಷಿ ಕಾನೂನುಗಳನ್ನು ವಾಪಸು ತೆಗೆದುಕೊಂಡ ನಂತರ ರೈತರ ನೈತಿಕ ಸ್ಥೈರ್ಯ ಎತ್ತರದಲ್ಲಿದೆ. ಗೋರಕ್ಷಣೆಯ ಹೆಸರಿನಲ್ಲಿ ಯೋಗಿ ಸರ್ಕಾರ ತಂದಿರುವ ಕಾನೂನಿನ ಫಲವಾಗಿ ಬೀಡಾಡಿ ದನಗಳು ಹಿಂಡುಹಿಂಡಾಗಿ ಹೊಲಗಳನ್ನು ನುಗ್ಗಿ ಮೇಯುತ್ತಿವೆ. ಅಡುಗೆ ಅನಿಲ ಸಿಲಿಂಡರ್ ದರ, ಟ್ರ್ಯಾಕ್ಟರುಗಳಿಗೆ ತುಂಬಿಸಬೇಕಿರುವ ಡೀಸೆಲ್ ದರ ಮುಗಿಲು ಮುಟ್ಟಿರುವ ಕುರಿತು ಭಾರೀ ಅಸಮಾಧಾನ ನೆಲೆಸಿದೆ. ಮೂರೂ ಚುನಾವಣೆಗಳಲ್ಲಿ ಬಲವಾಗಿ ಬಿಜೆಪಿಯ ಕೈಹಿಡಿದಿದ್ದ ಯುವಜನರು ನಿರುದ್ಯೋಗ ಸಮಸ್ಯೆಯಿಂದ ಭ್ರಮನಿರಸನ ಹೊಂದಿದ್ದಾರೆ.

ಇದೇ ಹತ್ತರಂದು ನಡೆದ ಮೊದಲ ಹಂತದ ಮತದಾನ ಹನ್ನೊಂದು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ 58 ಸೀಟುಗಳಲ್ಲಿ ಪಕ್ಷಗಳ ಹಣೆಬರೆಹ ಬರೆಯಲಿದೆ. ಕಳೆದ ಬಾರಿ ಮೊದಲ ಹಂತದ ಈ 58 ಸೀಟುಗಳ ಪೈಕಿ 53ನ್ನು ಮತ್ತು ಎರಡನೆಯ ಹಂತದ 55 ಸೀಟುಗಳ ಪೈಕಿ 38ನ್ನು ಗೆದ್ದು ವಿಕ್ರಮ ಸ್ಥಾಪಿಸಿತ್ತು ಬಿಜೆಪಿ. ಕಳೆದ ಮೂರು ಚುನಾವಣೆಗಳಲ್ಲಿ ಜಾಟರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯತ್ತ ಸರಿದಿದ್ದರು. ಚರಣಸಿಂಗ್ ನಿಧನದ ನಂತರ ಅವರ ಮಗ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಸರಸವಾಡಿದ ಕಾರಣ ಮುಸ್ಲಿಮರು ಲೋಕದಳದಿಂದ ದೂರವಾಗಿದ್ದರು. ಅಜಿತ್ ಸಿಂಗ್ ನಿಧನದ ನಂತರ ಪಕ್ಷದ ಆಡಳಿತಸೂತ್ರ ಅವರ ಮಗ ಜಯಂತ್ ಚೌಧರಿ ಕೈಯಲ್ಲಿದೆ. ಸಮಾಜವಾದಿ ಪಕ್ಷದ ತಲೆಯಾಳು ಅಖಿಲೇಶ್ ಸಿಂಗ್ ಈ ಸಲ ಹಲವು ಸಣ್ಣ ಪಕ್ಷಗಳನ್ನು ಸೆಳೆದು ಬಣ್ಣಬಣ್ಣದ ಬೆಚ್ಚನೆಯ ಕೌದಿ ಹೊಲಿದಿದ್ದಾರೆ. ಪಕ್ಷ ಕಳೆದುಕೊಂಡಿರುವ ಜನಾಧಾರವನ್ನು ಮರಳಿ ಗಳಿಸಲು ಹಗಲಿರುಳು ಶ್ರಮಿಸಿರುವ ಜಯಂತ್ ಮತ್ತು ಅಖಿಲೇಶ್ ಚುನಾವಣಾ ಮೈತ್ರಿ ಮಾಡಿಕೊಂಡಿರುವುದು ಇಬ್ಬರ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ದೆಹಲಿ ಗಡಿಗಳಲ್ಲಿ ಜರುಗಿದ ರೈತ ಚಳವಳಿಯು ಅವರ ಈ ಪ್ರಯತ್ನಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರ ಲೋಕದಳವನ್ನು ಸೋಲಿಸಿದ್ದ ಜಾಟ ಜನಾಂಗ ಅದಕ್ಕಾಗಿ ಪಶ್ಚಾತ್ತಾಪಪಡುತ್ತಿದೆ. ಬಿಜೆಪಿ ಹುಟ್ಟಿ ಹಾಕಿದ ಹಿಂದೂ-ಮುಸ್ಲಿಮ್ ಧ್ರುವೀಕರಣದ ಅಲೆಯಲ್ಲಿ ತೇಲಿಹೋಗಿದ್ದ ಬಹುತೇಕ ಜಾಟರು ಈ ಸಲ ಬಿಜೆಪಿಗೆ ಎದುರಾಗಿ ನಿಂತಿದ್ದಾರೆ.

ಉತ್ತರಪ್ರದೇಶದಲ್ಲಿ ಯಾದವರದು ಸಂಖ್ಯಾಬಾಹುಳ್ಯದಲ್ಲಿ ಪ್ರಭಾವೀ ಹಿಂದುಳಿದ ಜಾತಿ. ಇವರ ಪ್ರಾಬಲ್ಯದಿಂದ ಅಸಮಾಧಾನಗೊಂಡ ಇತರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಾಂಗಗಳನ್ನು ಒಲಿಸಿಕೊಂಡಿದ್ದು ಬಿಜೆಪಿಗೆ ಕಳೆದ ಮೂರು ಚುನಾವಣೆಗಳಲ್ಲಿ ಭಾರೀ ಶಕ್ತಿ ನೀಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ ಅವರ ಕಾರ್ಯವೈಖರಿಯಿಂದ ಕುದಿಯುತ್ತಿದ್ದ ಕೆಲ ಪ್ರಮುಖ ಓ.ಬಿ.ಸಿ. ನಾಯಕರು ಪಕ್ಷ ತೊರೆದು ಅಖಿಲೇಶ್ ಅವರೊಂದಿಗೆ ಕೈ ಜೋಡಿಸಿರುವ ವಿದ್ಯಮಾನ ಬಿಜೆಪಿಯ ಶಕ್ತಿಯನ್ನು ಕುಂದಿಸಿರುವುದರಲ್ಲಿ ಅನುಮಾನವಿಲ್ಲ. ತಮ್ಮ ಜಾತಿ ರಜಪೂತರ ಪಕ್ಷಪಾತಿಯೆಂದು ಆಡಳಿತದಲ್ಲಿ ಢಾಳಾಗಿ ತೋರಿಸಿಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ ಅವರು ಬಿಜೆಪಿಯ ಕಟ್ಟರ್ ಬೆಂಬಲಿಗರಾಗಿದ್ದ ಬ್ರಾಹ್ಮಣರನ್ನೂ ಸಾಕಷ್ಟು ಎದುರು ಹಾಕಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಶೇ.12ಕ್ಕೂ ಹೆಚ್ಚು ಪ್ರಮಾಣದಲ್ಲಿರುವ ಬ್ರಾಹ್ಮಣರು ಈಗಲೂ ಬಿಜೆಪಿಯ ಬೆಂಬಲಿಗರೇ. ಆದರೆ ಕಳೆದ ಮೂರೂ ಚುನಾವಣೆಗಳಲ್ಲಿ ಕಂಡುಬಂದಿದ್ದ ಅವರ ಅಖಂಡ ಬೆಂಬಲದಲ್ಲಿ ಈ ಸಲ ಬಿರುಕುಗಳು ಮೂಡಿವೆ.

ಪಶ್ಚಿಮ ಉತ್ತರಪ್ರದೇಶ ಸೀಮೆಯಲ್ಲಿ ಮುಸಲ್ಮಾನರ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳ ಲೆಕ್ಕ ಹಿಡಿದರೆ ಈ ಪ್ರಮಾಣ ಶೇ.35. ಲಾಗಾಯತಿನಿಂದ ಚೌಧರಿ ಚರಣಸಿಂಗ್ ಅವರ ಅನುಯಾಯಿಗಳು. ಜಯಂತ್ ಚೌಧರಿ ಕಾಲದಲ್ಲಿ ಲೋಕದಳದಿಂದ ದೂರ ಸರಿದಿದ್ದರು. 2013ರಲ್ಲಿ ಬಿಜೆಪಿ ಬಡಿದೆಬ್ಬಿಸಿದ್ದ ಕೋಮುವಾದಿ ಧ್ರುವೀಕರಣವನ್ನು ರೈತ ಚಳವಳಿ ಕರಗಿಸಿರುವ ನಿಚ್ಚಳ ಸೂಚನೆಗಳಿವೆ. ಜಾಟರು ಮತ್ತು ಮುಸಲ್ಮಾನರು ಪುನಃ ಹತ್ತಿರವಾಗಿದ್ದಾರೆ. ಇಬ್ಬರ ಸಂಯುಕ್ತ ಶಕ್ತಿ ಬಿಜೆಪಿಗೆ ಮುಳುವಾಗಬಲ್ಲದು. ಮಾಯಾವತಿ ಅವರ ಬಿ.ಎಸ್.ಪಿ. ಮತ್ತು ಅಖಿಲೇಶ್-ಜಯಂತ್ ಅವರ ಮೈತ್ರಿಕೂಟದ ನಡುವೆ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ ವಿರುದ್ಧ ಮಾಯಾವತಿ ಅವರ ವಿರೋಧ ಇತ್ತೀಚಿನ ದಿನಗಳಲ್ಲಿ ಮೊಂಡಾಗಿರುವ ಬೆಳವಣಿಗೆಯನ್ನು ಮುಸಲ್ಮಾನರು ಗಮನಿಸಿದ್ದಾರೆ.

ಮೋದಿ ಮತ್ತು ಶಾ ಕ್ರೊನಾಲಜಿಸೋಮವಾರ ಮತದಾನ ನಡೆದ ಉತ್ತರಪ್ರದೇಶದ ಹನ್ನೊಂದು ಜಿಲ್ಲೆಯ ಐದರಲ್ಲಿ ಮುಸಲ್ಮಾನರ ಮತದಾರರ ಪ್ರಮಾಣ ಶೇ.40ರಿಂದ 50. ರಾಂಪುರದಲ್ಲಿ ಶೇ.60. ಮುರಾದಾಬಾದಿನಲ್ಲಿ ಶೇ.47, ಬಿಜನೂರಿನಲ್ಲಿ ಶೇ.43, ಶಹಜಹಾನಪೂರ ಮತ್ತು ಮುಝಫ್ಫರ್ ಪುರದಲ್ಲಿ ಶೇ.41. ಈ ಮತಗಳು ಕಳೆದ ಸಲದಂತೆ ಬಿ.ಎಸ್.ಪಿ. ಮತ್ತು ಸಮಾಜವಾದಿ ಪಾರ್ಟಿಯ ನಡುವೆ ದೊಡ್ಡ ಪ್ರಮಾಣದಲ್ಲಿ ಚದುರಿರುವ ಸಂಕೇತಗಳಿಲ್ಲ. ಈ ಬೆಳವಣಿಗೆ ಬಿಜೆಪಿಗೆ ಒಳ್ಳೆಯ ಸುದ್ದಿಯೇನೂ ಅಲ್ಲ. ಕಡೆಯ ಗಳಿಗೆಯ ತನಕ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸದೆ ಗೋಡೆಯ ಮೇಲೆ ಕುಳಿತುಕೊಳ್ಳುವ ಮತದಾರರ ಸಂಖ್ಯೆ ಸಣ್ಣದೇನೂ ಅಲ್ಲ. ಅವರು ಕಡೆಯ ನಿಮಿಷಗಳಲ್ಲಿ ಗೆಲ್ಲುವ ಪಕ್ಷದತ್ತ ವಾಲುತ್ತಾರೆ. ಈ ಬಾಬತ್ತಿನಲ್ಲಿಯೂ ಬಿಜೆಪಿ ಏಟು ತಿನ್ನುವ ಸಾಧ್ಯತೆಯೇ ಹೆಚ್ಚು.

ರಾಜ್ಯದ ಉಳಿದ ಭಾಗಗಳಾದ ಬುಂದೇಲಖಂಡ ಮತ್ತು ಅವಧದಲ್ಲಿ ಬಿಜೆಪಿ ಅಷ್ಟಾಗಿ ಶಕ್ತಿಗುಂದಿಲ್ಲ. ಪೂರ್ವಾಂಚಲದಲ್ಲಿ ಸಮಸಮ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ. ಒಂದು ಮತ್ತು ಎರಡನೆಯ ಹಂತದ ಒಟ್ಟು ಸೀಟುಗಳ ಸಂಖ್ಯೆ 113. ಈ ಪೈಕಿ 91 ಸೀಟು ಬಾಚಿದ್ದ ಬಿಜೆಪಿ ಈ ಸಲ ಭಾರೀ ನಷ್ಟ ಎದುರಿಸಲಿದೆ.

ಪಶ್ಚಿಮ ಯುಪಿಯ ಗಾಳಿ ಇತರೆಡೆಗೆ ಬೀಸಿದ್ದನ್ನು ಕಳೆದ ಚುನಾವಣೆಗಳಲ್ಲಿ ಕಂಡುಬಂದಿದೆ. ಈ ಗಾಳಿಯನ್ನು ತಡೆದು ನಿಲ್ಲಿಸಲು ಬಿಜೆಪಿ ಯಾವ ತಂತ್ರ ಬಳಸಲಿದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...