Homeಅಂಕಣಗಳು"ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!"

“ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

- Advertisement -
- Advertisement -

ನೀವು ನಮ್ಮ ರೈಲುಗಳನ್ನು ನೋಡಿದ್ದೀರಾ? ನೋಡದಿದ್ದರೆ ಈಗ ಸರಿಯಾಗಿ ನೋಡಿ. ಎಷ್ಟೇ ದಿನ ತೊಳೆಯದಿದ್ದರೂ ಧೂಳು ಕಾಣದಂತೆ ಕಡುನೀಲಿ ಬಣ್ಣ ಹೊದ್ದು ಸಂಚರಿಸುತ್ತಿದ್ದ ರೈಲುಗಳನ್ನ ಹಿಡಿದುಕೊಂಡು ಹಳದಿ ಬಣ್ಣ ಬಳಿದದ್ದೂ ಅಲ್ಲದೆ, ಅವುಗಳ ಮೇಲೆ ರಕ್ತ ಬಣ್ಣದ ಕೆಂಪು ಪಟ್ಟಿ ಎಳೆದು ಹದಗೆಡಿಸಿದ್ದು ಬಿಜೆಪಿ ಅವದಿಯಲ್ಲಿ. ಇದೂ ಹಾಳುಬಿದ್ದು ಹೋಗಲಿ, ಒಳಗೆ ಕುಳಿತು ಪ್ರಯಾಣ ಮಾಡುವವನಿಗೆ ರೈಲು ಯಾವ ಬಣ್ಣದಲ್ಲಿದ್ದರೇನು. ಆದರೆ ಈ ಹೊಸ ರೈಲು ಬೋಗಿ ನಿರ್ಮಾಪಕರಾದ ಮಂದಮತಿಗಳು ಕೂರಲಾಗದ ಒಂದು ಅನಾಹುತ ಮಾಡಿದ್ದಾರೆ. ಅದೇನೆಂದರೆ, ಸೀಟುಗಳ ಉದ್ದವನ್ನೇ ಕಮ್ಮಿ ಮಾಡಿರುವುದು. ಅದರಿಂದ ಸೀಟುಗಳು ತೊಡೆಗೆ ಒತ್ತಿ ಹಿಂಸೆ ಕೊಡುತ್ತವೆ. ಸರಿಯಾಗಿ ಕೂರಲು ಹೋದರೆ ಬೆನ್ನಿನ ಭಾಗದಲ್ಲಿ ನೋವು ಆರಂಭವಾಗುತ್ತದೆ. ಜನಕ್ಕೆ ತೊಂದರೆ ಕೊಡುವುದೆಂದರೆ ಇದೆ. ಎಷ್ಟೆ, ಆಗಲಿ ಇದು ಪ್ರಜಾಪೀಡಕ ಸರಕಾರ ಆದ್ದರಿಂದ ಈ ಹಿಂದಿನ ಸುಖಕರ ಪ್ರಯಾಣವೀಗ ಹಿಂಸಾಯಾನವಾಗಿದೆ. ರೈಲ್ವೆ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರ ರಿಯಾಯಿತಿ ದರವನ್ನು ರದ್ದು ಮಾಡಿದೆ. ಸಾಮಾಜಿಕವಾಗಿ ಎಲ್ಲರ ತಾತ್ಸಾರಕ್ಕೆ ಗುರಿಯಾದ ವೃದ್ಧರು ರೈಲ್ವೆ ಕಳ್ಳರಿಂದಲೂ ಅವಕೃಪೆಗೊಳಗಾದರಲ್ಲಾ, ಥೂತ್ತೇರಿ.

***

ರೈಲ್ವೆ ಅವಾಂತರ ಇಷ್ಟಕ್ಕೆ ಮುಗಿಯಲಿಲ್ಲ. ಈ ರಾಷ್ಟ್ರದ ಮೇಲೆ ನಿಧಾನವಾಗಿ ಹಿಂದಿ ಹೇರುವ ಸಂಚು ರೂಪಿಸಿರುವ ಬಿಜೆಪಿಗಳು ರೈಲ್ವೆ ನಿಲ್ದಾಣದಲ್ಲಿ ಪ್ರಧಾನವಾಗಿದ್ದ ಕನ್ನಡ ಬೋರ್ಡಿನ ಬದಲು ಹಿಂದಿ ಬಳಸತೊಡಗಿದ್ದಾರೆ. ಒಟ್ಟು ರೈಲ್ವೆ ಬೋಗಿ ಮತ್ತು ನಿಲ್ದಾಣದಿಂದಲೇ ಕನ್ನಡವನ್ನ ಕೊನೆಗಾಣಿಸುತ್ತಿದ್ದಾರೆ. ಇನ್ನು ಬಿಜೆಪಿಗಳ ಇನ್ನೊಂದು ಸಂಚು ಆಶ್ಚರ್ಯ ಹುಟ್ಟಿಸಿದೆ. ಕೆಲ ರೈಲು ಬೋಗಿಗಳ ಹೊಟ್ಟೆಯ ಮೇಲೆ ದೀನದಯಾಳು ಬೋಗಿ ಎಂದು ಬರೆಯಲಾಗಿದೆ. ಈ ದಿನದಯಾಳಿಗೂ ರೈಲ್ವೆ ಬೋಗಿಗೂ ಏನು ಸಂಬಂಧ ಎಂಬುದು ಹೊಸ ತಲೆಮಾರಿಗೆ ತಿಳಿಯುತ್ತಿರುವುದು ಹೀಗೆ: ರೈಲ್ವೆ ಬೋಗಿಗಳು ಈ ರೂಪದಲ್ಲಿ ಇರಬೇಕಾದರೆ ದೀನದಯಾಳರೇ ಇಂತವನ್ನ ತಯಾರಿಸಿ ಹಳಿಗಳ ಮೇಲೆ ಕೂರಿಸಿರಬೇಕು ಅಥವ ರೈಲು ಕಂಡುಹಿಡಿದವರು ಇವರೇ ಇರಬೇಕು ಎಂದು ಅಂದಾಜು ಮಾಡುವ ಸಂಭವವಿದೆ. ಮುಂದೆ ಹರ್ಡಿಕರ್ ಹವಾನಿಯಂತ್ರಿಕ ಬೋಗಿ, ಗೋಳ್ವಾಲ್ಕರ್ ಇಂಜನ್, ಹೆಡೆಗೆವಾರ್ ಕೋಚ್, ವಾಜಪೇಯಿ ಮಹಿಳಾ ಬೋಗಿ ಇಂತಹ ಹೆಸರುಹೊತ್ತ ಬೋಗಿಗಳು ರೈಲ್ವೆ ಹಳಿಗಳ ಮೇಲೆ ಕಾಣಿಸಿಕೊಳ್ಳಹುದಂತಲ್ಲಾ, ಥೂತ್ತೇರಿ.

****

ಕರ್ನಾಟಕದ ಮಟ್ಟಿಗೆ ಈ ವಾರ ಎರಡು ಮಹಾ ಘಟನೆಗಳು ಸಂಭವಿಸಿವೆಯಲ್ಲಾ. ಆ ಎರಡೂ ಘಟನೆಗಳು ಶಿವಮೊಗ್ಗ ಜಿಲ್ಲೆಯ ಜೋಡೆತ್ತಿನಂತಿದ್ದ ಎಡೂರಪ್ಪ ಮತ್ತು ಈಶ್ವರಪ್ಪನವರಿಗೆ ಸಂಬಂಧಿಸಿದ್ದು. ಒಬ್ಬರು ರಾಜಕೀಯದ ರಾಡಿಯಿಂದ ಚುಕ್ತಾ ಆಗಲು ತೀರ್ಮಾನಿಸಿದರೆ ಮತ್ತೊಬ್ಬರು 40 ಪರೆಸೆಂಟ್ ಆಪಾದನೆ ಮಾಡಿ ಸಾವಾದ ಪ್ರಕರಣದಿಂದ ಚುಕ್ತವಾಗಿದ್ದಾರೆ. ಮೊದಲನೆಯದಾಗಿ ತಮ್ಮ ರಾಜಕಾರಣಕ್ಕೆ ಇತಿಶ್ರೀ ಹಾಡಿ, ತಾವು ನಿಂತ ನೆಲವನ್ನ ಮಗನಿಗೆ ಬಿಟ್ಟುಕೊಟ್ಟು ನಿರ್ಗಮಿಸುವ ನಿರ್ಧಾರ ತೆಗೆದುಕೊಂಡಿರುವ ಎಡೂರಪ್ಪನ ಬಗ್ಗೆ ಎಲ್ಲರಿಂದ ಅನುಕಂಪ ವ್ಯಕ್ತವಾಗಿದೆ. ಏಕೆಂದರೆ ಅವರೇ ಇದ್ದಿದ್ದರೆ ಈ ನಾಡು ಈ ರೂಪದ ಕ್ಷೋಭೆಗೆ ಒಳಗಾಗುತ್ತಿರಲಿಲ್ಲ. ಬೆನ್ನು ಮೂಳೆಯಿಲ್ಲದ ಬೊಮ್ಮಾಯಿಯವರಿಂದ ನಡೆದ ಅನಾಹುತಗಳಾವುವೂ ಅವರಿದ್ದರೆ ಸಂಭವಿಸುತ್ತಿರಲಿಲ್ಲ ಶಿಕಾರಿಪುರದಲ್ಲಿ ಮುಸ್ಲಿಮರ ಓಟನ್ನು ತೆಗೆದುಕೊಳ್ಳುತ್ತಿರುವ ಎಡೂರಪ್ಪ ಮುಸ್ಲಿಮರಿಗೂ ಇಷ್ಟವಾದ ವ್ಯಕ್ತಿಯಾಗಿದ್ದರು. ಎಡೂರಪ್ಪನ ಬಗ್ಗೆ ಇನ್ನೊಂದು ರೂಪದ ಅನುಕಂಪ ಯಾವುದೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು ಘನತೆಯಿಂದ ನಿಭಾಯಿಸಲಾಗದೆ, ಬರೀ ಹಗರಣ, ವಿವಾದ ಮತ್ತು ಸ್ವಜನಪಕ್ಷಪಾತ, ಕಾರಾಗೃಹದ ಕೆಟ್ಟ ಕನಸು ಬರೀ ಇಂತದರಲ್ಲೇ ಅವರ ಅವಧಿ ಮುಗಿದಂತೆ ಕಾಣುತ್ತಿದೆ; ಇದನ್ನೆಲ್ಲಾ ಎಡೂರಪ್ಪ ಮಾತ್ರ ತಡೆದುಕೊಳ್ಳುವ ಶಕ್ತಿ ಪಡೆದಿದ್ದರಂತಲ್ಲಾ, ಥೂತ್ತೇರಿ.

*****

ಈ ಬಿಜೆಪಿ ಹಿಂದಿನಿಂದಲೂ ಧನವಂತರು, ಖ್ಯಾತಿವಂತರು ಮತ್ತು ತೋಳ್ಬಲದ ಮಂದಮತಿಗಳನ್ನ ಮನಸೋ ಇಚ್ಛೆ ಬಳಸಿಕೊಂಡು ಒಂದು ಹಂತದಲ್ಲಿ ಬಿಸಾಡಿ ನಡೆಯುತ್ತಿರುವುದು, ಅದರ ಅಜೆಂಡಾದಂತೆಯೇ ನಡೆದು ಬರುತ್ತಿದೆಯಂತಲ್ಲಾ. ಎಡೂರಪ್ಪನ ಮುಖಾಂತರ ಲಿಂಗಾಯತರು ಬಿಜೆಪಿಯ ಪಡಸಾಲೆಗೆ ಬರಬೇಕಿತ್ತು, ಅದೂ ಆಯ್ತು. ಇನ್ನವರ ಅಗತ್ಯವಿಲ್ಲ. ಇನ್ನ ಧನವಂತರಾಗಿ ಮೆರೆದ ರೆಡ್ಡಿಗಳು ಗಣಿಮಣ್ಣಿನಲ್ಲಿ ಮರೆಯಾದರು. ತೋಳ್ಬಲದ ಈಶ್ವರಪ್ಪನ ಕಾಲ ಇನ್ನೊಂದಿಷ್ಟು ದಿನ ನಡೆಯಬಹುದು. ಆದರೆ ನಲವತ್ತು ಪರಸೆಂಟ್ ಆರೋಪ ಮಾಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಈಶ್ವರಪ್ಪನವರ ಮೇಲೆ ಆರೋಪ ಹೊರಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರದ ಪೊಲಿಸ್ ಪೇದೆಗಳು ಎಲ್ಲರ ನಿರೀಕ್ಷೆಯಂತೆ, ’ಪಾಪ ಧರ್ಮವಂತರು, ಸತ್ಯವಂತರು, ನೀತಿವಂತರೂ ಆದ ಈಶ್ವರಪ್ಪನವರಿಗೂ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ; ಅವರು ಬೆಳಗಾವಿ ಕಡೆಯವರು, ಈಶ್ವರಪ್ಪ ಶಿವಮೊಗ್ಗದವರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಉಡುಪಿಯಲ್ಲಿ. ಹೇಗೆ ನೋಡಿದರೂ ಈ ಪ್ರಕರಣಕ್ಕೂ ಈಶ್ವರಪ್ಪರಿಗೂ ಕನಿಷ್ಟ ನಾನೂರು ಕಿಲೋಮೀಟರ್ ದೂರ. ಆದ್ದರಿಂದ ನಾವು ಮಾಡದೆ ಇದ್ದರೂ ಬಿ ರಿಪೋರ್ಟ್ ತಂತಾನೆ ರೂಪುಗೊಳ್ಳುತ್ತದೆ’ ಎಂದು ವಾದಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....