Homeಅಂಕಣಗಳು"ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!"

“ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

- Advertisement -
- Advertisement -

ನೀವು ನಮ್ಮ ರೈಲುಗಳನ್ನು ನೋಡಿದ್ದೀರಾ? ನೋಡದಿದ್ದರೆ ಈಗ ಸರಿಯಾಗಿ ನೋಡಿ. ಎಷ್ಟೇ ದಿನ ತೊಳೆಯದಿದ್ದರೂ ಧೂಳು ಕಾಣದಂತೆ ಕಡುನೀಲಿ ಬಣ್ಣ ಹೊದ್ದು ಸಂಚರಿಸುತ್ತಿದ್ದ ರೈಲುಗಳನ್ನ ಹಿಡಿದುಕೊಂಡು ಹಳದಿ ಬಣ್ಣ ಬಳಿದದ್ದೂ ಅಲ್ಲದೆ, ಅವುಗಳ ಮೇಲೆ ರಕ್ತ ಬಣ್ಣದ ಕೆಂಪು ಪಟ್ಟಿ ಎಳೆದು ಹದಗೆಡಿಸಿದ್ದು ಬಿಜೆಪಿ ಅವದಿಯಲ್ಲಿ. ಇದೂ ಹಾಳುಬಿದ್ದು ಹೋಗಲಿ, ಒಳಗೆ ಕುಳಿತು ಪ್ರಯಾಣ ಮಾಡುವವನಿಗೆ ರೈಲು ಯಾವ ಬಣ್ಣದಲ್ಲಿದ್ದರೇನು. ಆದರೆ ಈ ಹೊಸ ರೈಲು ಬೋಗಿ ನಿರ್ಮಾಪಕರಾದ ಮಂದಮತಿಗಳು ಕೂರಲಾಗದ ಒಂದು ಅನಾಹುತ ಮಾಡಿದ್ದಾರೆ. ಅದೇನೆಂದರೆ, ಸೀಟುಗಳ ಉದ್ದವನ್ನೇ ಕಮ್ಮಿ ಮಾಡಿರುವುದು. ಅದರಿಂದ ಸೀಟುಗಳು ತೊಡೆಗೆ ಒತ್ತಿ ಹಿಂಸೆ ಕೊಡುತ್ತವೆ. ಸರಿಯಾಗಿ ಕೂರಲು ಹೋದರೆ ಬೆನ್ನಿನ ಭಾಗದಲ್ಲಿ ನೋವು ಆರಂಭವಾಗುತ್ತದೆ. ಜನಕ್ಕೆ ತೊಂದರೆ ಕೊಡುವುದೆಂದರೆ ಇದೆ. ಎಷ್ಟೆ, ಆಗಲಿ ಇದು ಪ್ರಜಾಪೀಡಕ ಸರಕಾರ ಆದ್ದರಿಂದ ಈ ಹಿಂದಿನ ಸುಖಕರ ಪ್ರಯಾಣವೀಗ ಹಿಂಸಾಯಾನವಾಗಿದೆ. ರೈಲ್ವೆ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರ ರಿಯಾಯಿತಿ ದರವನ್ನು ರದ್ದು ಮಾಡಿದೆ. ಸಾಮಾಜಿಕವಾಗಿ ಎಲ್ಲರ ತಾತ್ಸಾರಕ್ಕೆ ಗುರಿಯಾದ ವೃದ್ಧರು ರೈಲ್ವೆ ಕಳ್ಳರಿಂದಲೂ ಅವಕೃಪೆಗೊಳಗಾದರಲ್ಲಾ, ಥೂತ್ತೇರಿ.

***

ರೈಲ್ವೆ ಅವಾಂತರ ಇಷ್ಟಕ್ಕೆ ಮುಗಿಯಲಿಲ್ಲ. ಈ ರಾಷ್ಟ್ರದ ಮೇಲೆ ನಿಧಾನವಾಗಿ ಹಿಂದಿ ಹೇರುವ ಸಂಚು ರೂಪಿಸಿರುವ ಬಿಜೆಪಿಗಳು ರೈಲ್ವೆ ನಿಲ್ದಾಣದಲ್ಲಿ ಪ್ರಧಾನವಾಗಿದ್ದ ಕನ್ನಡ ಬೋರ್ಡಿನ ಬದಲು ಹಿಂದಿ ಬಳಸತೊಡಗಿದ್ದಾರೆ. ಒಟ್ಟು ರೈಲ್ವೆ ಬೋಗಿ ಮತ್ತು ನಿಲ್ದಾಣದಿಂದಲೇ ಕನ್ನಡವನ್ನ ಕೊನೆಗಾಣಿಸುತ್ತಿದ್ದಾರೆ. ಇನ್ನು ಬಿಜೆಪಿಗಳ ಇನ್ನೊಂದು ಸಂಚು ಆಶ್ಚರ್ಯ ಹುಟ್ಟಿಸಿದೆ. ಕೆಲ ರೈಲು ಬೋಗಿಗಳ ಹೊಟ್ಟೆಯ ಮೇಲೆ ದೀನದಯಾಳು ಬೋಗಿ ಎಂದು ಬರೆಯಲಾಗಿದೆ. ಈ ದಿನದಯಾಳಿಗೂ ರೈಲ್ವೆ ಬೋಗಿಗೂ ಏನು ಸಂಬಂಧ ಎಂಬುದು ಹೊಸ ತಲೆಮಾರಿಗೆ ತಿಳಿಯುತ್ತಿರುವುದು ಹೀಗೆ: ರೈಲ್ವೆ ಬೋಗಿಗಳು ಈ ರೂಪದಲ್ಲಿ ಇರಬೇಕಾದರೆ ದೀನದಯಾಳರೇ ಇಂತವನ್ನ ತಯಾರಿಸಿ ಹಳಿಗಳ ಮೇಲೆ ಕೂರಿಸಿರಬೇಕು ಅಥವ ರೈಲು ಕಂಡುಹಿಡಿದವರು ಇವರೇ ಇರಬೇಕು ಎಂದು ಅಂದಾಜು ಮಾಡುವ ಸಂಭವವಿದೆ. ಮುಂದೆ ಹರ್ಡಿಕರ್ ಹವಾನಿಯಂತ್ರಿಕ ಬೋಗಿ, ಗೋಳ್ವಾಲ್ಕರ್ ಇಂಜನ್, ಹೆಡೆಗೆವಾರ್ ಕೋಚ್, ವಾಜಪೇಯಿ ಮಹಿಳಾ ಬೋಗಿ ಇಂತಹ ಹೆಸರುಹೊತ್ತ ಬೋಗಿಗಳು ರೈಲ್ವೆ ಹಳಿಗಳ ಮೇಲೆ ಕಾಣಿಸಿಕೊಳ್ಳಹುದಂತಲ್ಲಾ, ಥೂತ್ತೇರಿ.

****

ಕರ್ನಾಟಕದ ಮಟ್ಟಿಗೆ ಈ ವಾರ ಎರಡು ಮಹಾ ಘಟನೆಗಳು ಸಂಭವಿಸಿವೆಯಲ್ಲಾ. ಆ ಎರಡೂ ಘಟನೆಗಳು ಶಿವಮೊಗ್ಗ ಜಿಲ್ಲೆಯ ಜೋಡೆತ್ತಿನಂತಿದ್ದ ಎಡೂರಪ್ಪ ಮತ್ತು ಈಶ್ವರಪ್ಪನವರಿಗೆ ಸಂಬಂಧಿಸಿದ್ದು. ಒಬ್ಬರು ರಾಜಕೀಯದ ರಾಡಿಯಿಂದ ಚುಕ್ತಾ ಆಗಲು ತೀರ್ಮಾನಿಸಿದರೆ ಮತ್ತೊಬ್ಬರು 40 ಪರೆಸೆಂಟ್ ಆಪಾದನೆ ಮಾಡಿ ಸಾವಾದ ಪ್ರಕರಣದಿಂದ ಚುಕ್ತವಾಗಿದ್ದಾರೆ. ಮೊದಲನೆಯದಾಗಿ ತಮ್ಮ ರಾಜಕಾರಣಕ್ಕೆ ಇತಿಶ್ರೀ ಹಾಡಿ, ತಾವು ನಿಂತ ನೆಲವನ್ನ ಮಗನಿಗೆ ಬಿಟ್ಟುಕೊಟ್ಟು ನಿರ್ಗಮಿಸುವ ನಿರ್ಧಾರ ತೆಗೆದುಕೊಂಡಿರುವ ಎಡೂರಪ್ಪನ ಬಗ್ಗೆ ಎಲ್ಲರಿಂದ ಅನುಕಂಪ ವ್ಯಕ್ತವಾಗಿದೆ. ಏಕೆಂದರೆ ಅವರೇ ಇದ್ದಿದ್ದರೆ ಈ ನಾಡು ಈ ರೂಪದ ಕ್ಷೋಭೆಗೆ ಒಳಗಾಗುತ್ತಿರಲಿಲ್ಲ. ಬೆನ್ನು ಮೂಳೆಯಿಲ್ಲದ ಬೊಮ್ಮಾಯಿಯವರಿಂದ ನಡೆದ ಅನಾಹುತಗಳಾವುವೂ ಅವರಿದ್ದರೆ ಸಂಭವಿಸುತ್ತಿರಲಿಲ್ಲ ಶಿಕಾರಿಪುರದಲ್ಲಿ ಮುಸ್ಲಿಮರ ಓಟನ್ನು ತೆಗೆದುಕೊಳ್ಳುತ್ತಿರುವ ಎಡೂರಪ್ಪ ಮುಸ್ಲಿಮರಿಗೂ ಇಷ್ಟವಾದ ವ್ಯಕ್ತಿಯಾಗಿದ್ದರು. ಎಡೂರಪ್ಪನ ಬಗ್ಗೆ ಇನ್ನೊಂದು ರೂಪದ ಅನುಕಂಪ ಯಾವುದೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು ಘನತೆಯಿಂದ ನಿಭಾಯಿಸಲಾಗದೆ, ಬರೀ ಹಗರಣ, ವಿವಾದ ಮತ್ತು ಸ್ವಜನಪಕ್ಷಪಾತ, ಕಾರಾಗೃಹದ ಕೆಟ್ಟ ಕನಸು ಬರೀ ಇಂತದರಲ್ಲೇ ಅವರ ಅವಧಿ ಮುಗಿದಂತೆ ಕಾಣುತ್ತಿದೆ; ಇದನ್ನೆಲ್ಲಾ ಎಡೂರಪ್ಪ ಮಾತ್ರ ತಡೆದುಕೊಳ್ಳುವ ಶಕ್ತಿ ಪಡೆದಿದ್ದರಂತಲ್ಲಾ, ಥೂತ್ತೇರಿ.

*****

ಈ ಬಿಜೆಪಿ ಹಿಂದಿನಿಂದಲೂ ಧನವಂತರು, ಖ್ಯಾತಿವಂತರು ಮತ್ತು ತೋಳ್ಬಲದ ಮಂದಮತಿಗಳನ್ನ ಮನಸೋ ಇಚ್ಛೆ ಬಳಸಿಕೊಂಡು ಒಂದು ಹಂತದಲ್ಲಿ ಬಿಸಾಡಿ ನಡೆಯುತ್ತಿರುವುದು, ಅದರ ಅಜೆಂಡಾದಂತೆಯೇ ನಡೆದು ಬರುತ್ತಿದೆಯಂತಲ್ಲಾ. ಎಡೂರಪ್ಪನ ಮುಖಾಂತರ ಲಿಂಗಾಯತರು ಬಿಜೆಪಿಯ ಪಡಸಾಲೆಗೆ ಬರಬೇಕಿತ್ತು, ಅದೂ ಆಯ್ತು. ಇನ್ನವರ ಅಗತ್ಯವಿಲ್ಲ. ಇನ್ನ ಧನವಂತರಾಗಿ ಮೆರೆದ ರೆಡ್ಡಿಗಳು ಗಣಿಮಣ್ಣಿನಲ್ಲಿ ಮರೆಯಾದರು. ತೋಳ್ಬಲದ ಈಶ್ವರಪ್ಪನ ಕಾಲ ಇನ್ನೊಂದಿಷ್ಟು ದಿನ ನಡೆಯಬಹುದು. ಆದರೆ ನಲವತ್ತು ಪರಸೆಂಟ್ ಆರೋಪ ಮಾಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಈಶ್ವರಪ್ಪನವರ ಮೇಲೆ ಆರೋಪ ಹೊರಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರದ ಪೊಲಿಸ್ ಪೇದೆಗಳು ಎಲ್ಲರ ನಿರೀಕ್ಷೆಯಂತೆ, ’ಪಾಪ ಧರ್ಮವಂತರು, ಸತ್ಯವಂತರು, ನೀತಿವಂತರೂ ಆದ ಈಶ್ವರಪ್ಪನವರಿಗೂ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ; ಅವರು ಬೆಳಗಾವಿ ಕಡೆಯವರು, ಈಶ್ವರಪ್ಪ ಶಿವಮೊಗ್ಗದವರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಉಡುಪಿಯಲ್ಲಿ. ಹೇಗೆ ನೋಡಿದರೂ ಈ ಪ್ರಕರಣಕ್ಕೂ ಈಶ್ವರಪ್ಪರಿಗೂ ಕನಿಷ್ಟ ನಾನೂರು ಕಿಲೋಮೀಟರ್ ದೂರ. ಆದ್ದರಿಂದ ನಾವು ಮಾಡದೆ ಇದ್ದರೂ ಬಿ ರಿಪೋರ್ಟ್ ತಂತಾನೆ ರೂಪುಗೊಳ್ಳುತ್ತದೆ’ ಎಂದು ವಾದಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...