Homeಅಂಕಣಗಳು'ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?'

‘ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?’

- Advertisement -
- Advertisement -

ಆರೆಸ್ಸೆಸ್ ತತ್ವ ಅಳವಡಿಸಿಕೊಂಡರೆ ನಾವು ಕಾಂಗ್ರೆಸ್ ಪರವಾಗಿಯೂ ಕೆಲಸ ಮಾಡಲು ಸಿದ್ಧ ಎಂದು ಆರೆಸ್ಸೆಸ್ ಸಂಘದ ಅರುಣಕುಮಾರ ಹೇಳಿದ್ದಾರಲ್ಲಾ ಇದೊಂದು ರೀತಿ ಅಜ್ಞಾನದಿಂದ ಕೂಡಿರುವ ಮಾತು. ಕಾಂಗ್ರೆಸ್ ಹುಟ್ಟಿದಾಗಿನಿಂದಲೂ ಹಲವರು ಹಿಂದೂ ಪರವಾದ ಸಿದ್ಧಾಂತಗಳಲ್ಲೇ ಬದುಕಿದ್ದಾರೆ. ಆದರೆ ಜೈನ, ಬೌದ್ಧ, ಸಿಖ್ ಮತ್ತು ಬಸವ ತತ್ವಗಳೆಲ್ಲಾ ಹಿಂದೂಧರ್ಮದಿಂದಲೇ ಸಿಡಿದುಹೋಗಿ ಪ್ರಜ್ವಲಿಸುತ್ತಿರುವ ಧರ್ಮದ ಕಿಡಿಗಳು. ಇನ್ನೂ ಲೋಕಲ್ಲಾಗಿ ಮಾತನಾಡುವುದಾದರೆ ಕಾಂಗ್ರೆಸಿನಲ್ಲಿದ್ದು ತಮ್ಮವನೇನಾದರು ಬಿಜೆಪಿ ಕ್ಯಾಂಡಿಡೇಟ್ ಆದರೆ ಅವನಿಗೆ ಓಟು ಮಾಡುವ ಅಸಾಮಿಗಳೂ ಹೇರಳವಾಗಿದ್ದಾರೆ. ಈ ಪೈಕಿ ಎರಡು ಉದಾಹರಣೆ ಕೊಡುವುದಾದರೆ, ಚಿಕ್ಕಮಗಳೂರಲ್ಲಿ ಅನಾದಿಕಾಲದಿಂದಲೂ ಕಾಂಗ್ರೆಸ್ಸಿಗರಾಗಿರುವ ಒಕ್ಕಲಿಗರು ತಮ್ಮ ಹುಡುಗನನ್ನ ಕೈಬಿಡಲಾದೀತೆ ಎಂದು ಸಿ.ಟಿ.ರವಿಗೆ ಓಟು ಮಾಡುತ್ತಿರಲಾಗಿ, ಅತ್ತ ಶಿವಮೊಗ್ಗದ ಕಾಂಗ್ರೆಸ್ ಕುರುಬರು ಈಶ್ವರಪ್ಪ ನಮ್ಮವನೆಂದು ಓಟು ಮಾಡುವ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಬಿಜೆಪಿ ವಿಷಯದಲ್ಲಿ ಈ ಆಟ ನಡೆಯುವುದಿಲ್ಲ. ಅಲ್ಲಿ ಹೆರಿಗೆ ಡಾಕ್ಟರ್ ಹೆರಿಗೆ ಪೇಷಂಟ್ ಕಾಯುವಂತೆ ಬಿಜೆಪಿ ಮತದಾರರನ್ನು ಕಾಯುವ ವಾಚ್‌ಮನ್‌ಗಳು ಹೇರಳವಾಗಿದ್ದಾರಂತಲ್ಲಾ, ಥೂತ್ತೇರಿ.

*****

ನಮ್ಮ ಸಂಸ್ಕೃತಿ ವಿಷಯ ಮಾತನಾಡುವುದಾದರೆ, ಸಾಮಾಜಿಕವಾಗಿ ಏನೇ ನಡೆದರೂ, ಅದು ಮಹಿಳೆ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಬಂದಿರುವುದು ಅನಾದಿಕಾಲದಿಂದ ನಡೆದುಬಂದಿದೆ. ಮುರುಘಾ ಶರಣರ ಆರೋಪಿತ ದುಷ್ಕೃತ್ಯದಲ್ಲಿ ಸಿಲುಕಿದ್ದವರೆಲ್ಲಾ ಮಕ್ಕಳು. ಇನ್ನು ಪ್ರವಾಹದಿಂದ ಸಂತ್ರಸ್ತರಾಗಿ ಶಾಸಕನಿಂದ ಅನಾಗರಿಕವಾದ ಅವಾಚ್ಯ ಬೈಗುಳ ಕೇಳಿದವರು ಮಹಿಳೆ. ಈ ಪ್ರಕರಣದ ವಿಷಯದಲ್ಲಿ ಮಾಧ್ಯಮದೊಳಗಿರುವ ಶ್ಯಾನುಭೋಗರ ಮಕ್ಕಳು ಕೃತ್ಯದ ವಿಶ್ಲೇಷಣೆ ಬಿಟ್ಟು, ಕಾಂಗ್ರೆಸ್ ಕೈಗೆ ಅನಾಯಾಸವಾಗಿ ಸಿಕ್ಕ ಅಸ್ತ್ರವಿದು ಎಂದುದಲ್ಲದೆ ಶಿಸ್ತಿನ ಪಕ್ಷ ಬಿಜೆಪಿ ಏನು ಮಾಡುತ್ತದೋ ಎಂದು ಕೂಗಿವೆಯಲ್ಲಾ. ಅಂತೂ ಲಿಂಬಾವಳಿ ನಡವಳಿಕೆಯಿಂದ ಅಘಾತವಾಗಿರುವುದು ಟಿವಿಯೊಳಗಿರುವ ಸಂಘಿ ಅಂಕರ್‌ಗಳಿಗೆ. ಶಿಸ್ತಿನ ಪಕ್ಷ ಬಿಜೆಪಿ ಎನ್ನುವುದನ್ನು ವಿಶ್ಲೇಷಿಸುವುವಾದರೆ ಲಿಂಬಾವಳಿಯ ಅನಾಗರಿಕ ನಡತೆಯ ವಿಷಯದಲ್ಲಿ ಯಾವೊಬ್ಬ ಬಿಜೆಪಿಯೂ ಪ್ರತಿಕ್ರಿಯಿಸಿಲ್ಲ. ಇನ್ನು ಬಿಜೆಪಿ ಮಹಿಳೆಯರಂತೂ ಆಕೆಗೆ ತಕ್ಕಶಾಸ್ತಿಯಾಯ್ತು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಇತಿಹಾಸದಲ್ಲಿ ಈವರೆಗೆ ಯಾವೊಬ್ಬ ಶಾಸಕನೂ ಇಷ್ಟು ಅನಾಗರಿಕವಾಗಿ ನಡೆದುಕೊಂಡಿರದ ಕಾರಣವಾಗಿ, ಪ್ರಕರಣದ ಪ್ರಮುಖ ಆರೋಪಿ ಲಿಂಬಾವಳಿಯನ್ನ ಮಾತನಾಡಿಸಬೇಕೆನಿಸಿತಲ್ಲಾ. ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸದಾ ವತ್ಸಲೇ ಮಾತೃಭೂಮಿ”.

“ಹಲೋ ಯಾರ್ರಿ”

“ಸಾರ್ ನಾನು ಯಾಹು ಅಂತ, ಸಾರ್”

“ಯಾಹು ಅಂದರೆ ಯಾರ್ರಿ”

“ಪತ್ರಕರ್ತ ಸಾರ್”

“ಏನೇಳ್ರಿ”

“ನಿಮಗೆ ಧಮಕಿ ಹಾಕಿದ ಮಹಿಳೆ ಮೇಲೆ ಎಫ್‌ಐಆರ್ ಆಯ್ತಂತಲ್ಲಾ ಸಾರ್”

“ಎಫ್‌ಐಆರ್‌ಗಿಂತ ಮೊದ್ಲು ನಾಲ್ಕು ವದಿರಿ ಅವುಳಿಗೆ ಅಂತ ಹೇಳಿದ್ದೆ ನಮ್ಮ ಪೊಲೀಸರಿಗೆ”

“ಯಾಕ್ ಸಾರ್”

“ಮತ್ತೆ ಅವಳ ದುರಹಂಕಾರ ನೋಡ್ರಿ, ರಾಜಕಾಲುವೆ ಒತ್ತುವರಿ ಮಾಡಿದ್ಲು, ಅಲ್ದೆ ನನಿಗೇ ಆವಾಜ್ ಹಾಕ್ತಳೆ”

“ತಪ್ಪು ಸಾರ್ ಜನಪ್ರತಿನಿಧಿಗೆ ಆವಾಜ್ ಹಾಕಬಾರ್ದು”

“ಅದಕ್ಕೆ ಎಫ್‌ಐಆರ್ ಹಾಕಿಸಿದ್ದೀನಿ”

“ವಳೆದಾಯ್ತು ಬುಡಿ ಸಾರ್. ಇನ್ನ ಮುಂದೆ ಯಾರೂ ನಿಮ್ಮತ್ರ ಅರ್ಜಿ ಹಿಡಕೊಂಡು ಬರಲ್ಲ”

“ಜನಕ್ಕೆ ಸದರ ಕೊಡಬಾರ್ದು ಕಂಡ್ರಿ. ಶಾಸಕರು ಅಂದ್ರೆ ಭಯ ಇರಬೇಕು. ಇಲ್ಲ ಅಂದ್ರೆ ಯಲ್ಲಾದಕ್ಕೂ ಅರ್ಜಿ ತಗೊಂಡು ಬರ್ತಾರೆ”

“ಮಹಿಳಾ ಹೋರಾಟಗಾರ್ರು ಆ ಹೆಣ್ಣು ಮಗಳ ಪರ ಪ್ರತಿಭಟನೆ ಮಾಡ್ತೆ ಅವುರೆ.”

“ಮಾಡ್ಲಿ ಬುಡ್ರಿ. ಈ ಮಹಿಳೆಯರು ಆಕೆ ಪರ ಬರ್ತಾರೆ ಅಂದ್ರೆ ಇವುರು ಅವುಳ ತರದೋರೆಯಾ”

“ಅಲ್ಲ ಸಾರ್, ನಿಮ್ಮಲ್ಲಿ ಮಹಿಳೆಯರ ಬಗ್ಗೆ ಇರೋ ಗೌರವ ನೋಡಿದ್ರೆ, ನಿಮ್ಮ ಮಾತಿನ ಪರಿಣಾಮನೆ ನಿಮಗೆ ಗೊತ್ತಿಲ್ಲ ಅನ್ಸುತ್ತೆ”

“ಏನೇಳ್ತಾಯಿದ್ದಿರಿ ನೀವು”

“ಅವತ್ತಿನಿಂದ ಇವತ್ತಿನವರೆಗೂ ಶಿಸ್ತಿನ ಪಕ್ಷವಾದ ನಿಮ್ಮಲ್ಲಿ ಶೀಲವಂತನೇ ಕಾಣಲಿಲ್ಲ. ವಿಕೃತ ಮನಸ್ಸಿನವರೇ ಜಾಸ್ತಿ ಬಿಡಿ ಸಾರ್”

ಥೂತ್ತೇರಿ.


ಇದನ್ನೂ ಓದಿ: ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...