Homeಅಂಕಣಗಳುಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

- Advertisement -
- Advertisement -

ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ ಮೇಲೆ ನಿಷೇಧವನ್ನು ಹೇರಿಬಿಟ್ಟಿತಲ್ಲಾ. ನಿಷೇಧದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಾಗಾದರೆ ಆರೆಸ್ಸೆಸ್ಸನ್ನು ನಿಷೇಧಿಸಿ ಎಂದು ಕರೆಕೊಟ್ಟ ಕೂಡಲೇ ಬಿಜೆಪಿಯ ತಲೆಕೆಟ್ಟ ಲೀಡರುಗಳು ಸಿದ್ದು ಮೇಲೆ ಬಿದ್ದಿವೆಯಂತಲ್ಲಾ. ಈ ಆರೆಸ್ಸೆಸ್ಸಿಗರು ಮತ್ತು ಲೀಡರುಗಳು ಗಾಂಧಿ ಹತ್ಯೆಯ ನಂತರ ಹುಟ್ಟಿದವರು; ಇವರಿಗೆ ಇತಿಹಾಸ ಗೊತ್ತಿರಲಾರದು. ಗಾಂಧಿ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡ ಇದೆಯೆಂದು ಆರೋಪಿಸಿ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರೇ ಆರೆಸ್ಸೆಸ್ಸನ್ನು ಬ್ಯಾನ್ ಮಾಡಿದ್ದರೆಂದು ಸಿದ್ದು ಇನ್ನೂ ತಮ್ಮ ವಿರೋಧಿಗಳ ಮುಸುಡಿಗೆ ಹೇಳಿಲ್ಲವಂತಲ್ಲಾ, ಥೂತ್ತೇರಿ.

*****

ಸಂಘ ಪರಿವಾರಿಗಳು ಗಾಂಧಿಯನ್ನು ಕೊಂದ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುತ್ತಿವೆ, ಇದಷ್ಟೇ ಅಲ್ಲ, ಮುಂದೆ ಮಾಡಬಹುದಾದ ಧ್ವಂಸದ ಕಾರ್ಯಗಳ ಪಟ್ಟಿಯನ್ನು ಮಾಡುತ್ತಿವೆ. ಬಾಬರಿ ಮಸೀದಿ ವಿಷಯದಲ್ಲಿ ತೀರ್ಪು ನೀಡಿದ ಸಮಯದಲ್ಲಿ ಸುಪ್ರೀಂಕೋರ್ಟು ’ಆಯ್ತು ಸಾಕು ಮಾಡಿ, ಮುಂದೆ ದೇಶದ ಶಾಂತಿ ಬಹಳ ಮುಖ್ಯ’ ಎಂದು ಹೇಳಿದ ಮಾತಿಗೆ ಕಿವುಡಾಗಿ ಕುಂತಿವೆಯೆಲ್ಲಾ. ಹೊಸದಾಗಿ ಹುಟ್ಟಿಕೊಂಡ ಗಾದೆ ಮಾತಿನಂತೆ ’ನಳ್ಳಿ ಹೆಚ್ಚಿದ ಕೆರೆ ಹಾಳು, ಆರೆಸ್ಸೆಸ್ ಹೆಚ್ಚಿದ ಊರ್ ಹಾಳು’ ಎಂಬ ಗಾದೆಯಂತೆ ಈಗ ಬ್ರಾಹ್ಮಣ ವಠಾರದಲ್ಲಿದ್ದ ಆರೆಸ್ಸೆಸ್ ಕವಾಯತು ಊರನ್ನೆಲ್ಲಾ ವ್ಯಾಪಿಸುತ್ತಿದೆ. ಅವುಗಳ ದೀರ್ಘಕಾಲದ ಅಜೆಂಡಾ ಪ್ರಕಾರ ಮುಸ್ಲಿಮರನ್ನ ಬಗ್ಗು ಬಡಿಯುವುದು, ನಂತರ ದಲಿತರ ಮೇಲೆ ಶೂದ್ರರ ಕೈಲಿ ದಾಳಿ ಮಾಡಿಸುವುದು, ಆ ನಂತರ ಸಿಖ್ಖರು, ಯಾದವರು ಹೀಗೆ ನಡೆಯಲಿಚ್ಛಿಸಿರುವ ದೊಡ್ಡ ದೊಂಬಿಯನ್ನೇ ಊಹಿಸಬಹುದು. ತಲೆಕೆಟ್ಟವರಿಗೆ ಮತ್ತು ಬರುವ ಔಷಧಿ ಕೊಡಿಸಿ ಜಗಲಿಯ ಮೇಲೆ ಕೂರಿಸುವ ತನಕ ಇವೆಲ್ಲಾ ನಿರಂತರವಾಗಿ ನಡೆಯುವ ಚೇಷ್ಟೆಗಳೆಂದು ಉಗ್ರ ಗಾಂಧಿವಾದಿಗಳು ಗೊಣಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ತಲುಪಾಯ್ತು. ಮಂಡ್ಯದ ಹತ್ತಿರ ಹೋಗುತ್ತಿದೆ. ಕಳೆದ ಎಂಟು ವರ್ಷಗಳಿಂದ ಬಾಲಿಶ ಹುಡುಗ, ಲಾಲಿಪಾಪು ಮತ್ತು ಅಪ್ರಬುದ್ಧ ಬಾಲ ಭಾಷೆಯ ಹುಡುಗ ಎಂದೆಲ್ಲಾ ಚೆಡ್ಡಿಗಳು ತಮ್ಮ ಜಾಲತಾಣದಲ್ಲಿ ಯಾರ ವಿರುದ್ಧ ಅಪಪ್ರಚಾರ ಮಾಡಿದ್ದವೊ ಅಂತಹ ರಾಹುಲಗಾಂಧಿ, ತಂದೆ ತಾಯಿ ಅಜ್ಜಿ ಮುತ್ತಾತರ ಮಾರ್ಗ ಹುಡುಕುತ್ತ ಹೊರಟವನಂತೆ ಬರುತ್ತಿದ್ದಾನಂತಲ್ಲಾ. ಅವನನ್ನು ನೋಡಲು ರಸ್ತೆ ಬದಿಯಲ್ಲಿ ನಿಂತ ಜನ ಮತ್ತು ಆತನ ಹಿಂದೆ ಕಿಲೋಮಿಟರುಗಟ್ಟಲೆ ಹರಿದು ಬರುತ್ತಿರುವ ಜನಸಾಗರ ನೋಡಿದ ಬಿಜೆಪಿಗಳು ಬೆಚ್ಚಿ ಏನು ಮಾಡಲೂ ತೋಚದೆ ಜಾಥಾದಲ್ಲಿ ಪೇಸಿಎಂ ಟಿಶರ್ಟ್ ಧರಿಸಿದ್ದ ಹುಡುಗರನ್ನ ಹಿಡಿದು ಶರ್ಟ್ ಬಿಚ್ಚಿಕೊಂಡು ಬರಲು ಹೇಳಿವೆಯಂತಲ್ಲಾ. ಒಂದು ಟೀಶರ್ಟ್ ಬಿಚ್ಚಿದರೇನು ಹತ್ತು ಟೀಶರ್ಟ್ ಕೊಡಿಸುತ್ತೇನೆ ಎಂದು ಡಿಕೆಶಿ ಹೇಳಿದ ಕೂಡಲೇ ಮಾಧ್ಯಮದೊಳಗಿರುವ ಶಾನುಭೋಗರ ಹುಡುಗರು ತಮ್ಮ ಕ್ಯಾಮರಾ ಚುರುಕುಗೊಳಿಸಿ ಹೆಜ್ಜೆ ಹಾಕುವಲ್ಲಿ ಹಿಂದೆ ಬಿದ್ದ ಡಿಕೆಶಿ, ಸಿದ್ದರಾಮಯ್ಯನಿಗೆ ಎಡಗೈ ತಾಕಿಸಿದ ಡಿಕೆಶಿ, ರಾಹುಲ್ ಕಾರಿನಲ್ಲಿ ಜಾಗವಿಲ್ಲದೆ ಹಿಂದಿನ ಕಾರಿನಲ್ಲಿ ಹೊರಟ ಡಿಕೆಶಿ ಎಂದು ಅರಚುತ್ತಲೇ ತಮ್ಮ ಚೇಷ್ಟೆಗಳನ್ನು ಮೆರೆಯುತ್ತಿವೆಯಂತಲ್ಲಾ. ನಗು ಕಳೆದುಕೊಂಡ ಜನಕ್ಕೆ ಇನ್ನು ಏನೇನು ಹಾಸ್ಯ ಪ್ರಸಂಗವನ್ನು ಈ ದಸರಾ ಸಮಯದಲ್ಲಿ ಮಾಧ್ಯಮಗಳು ತೋರುತ್ತವೊ ಎಂಬುದು ಮನರಂಜನೆಗೆ ಹಾತೊರೆಯುವ ಜನರ ಮನದಾಳದ ಮಾತಾಗಿದೆಯಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸತ್ಯ ಮತ್ತು ಸತ್ವದ ಹುಡುಕಾಟ ಗೌರಿ. ಕಾಂ ಧ್ಯೇಯೋದ್ದೇಶ.ಹೆಮ್ಮೆಯಾಗುತ್ತದೆ…ಪತ್ರಿಕಾ ಧರ್ಮವನ್ನೇ ಮರೆತ ಮೈಮನ ಮಾರಿಕೊಂಡ ಅದೆಷ್ಟೋ ಮಾಧ್ಯಮಗಳ ನಡುವೆ ಕೆಸರಲ್ಲಿ ಕಮಲ ಅರಳಿದಂತೆ ಅರಳಿ ಮಾಧ್ಯಮ ಅಂದರೆ ಇದಲ್ಲಾ ಇದು ಎಂದು ಅರಹುತ್ತಿರುವ ನಿಷ್ಕಲ್ಮಷ ನಿಷ್ಕಪಟ ಈ ಮಾಧ್ಯಮ ಕಂಡು.ಹೃದಯಾಂತರಾಳದ ಸಲಾಂ ಬಸವ ಶರಣು.
    ಗುಡಿಬಂಡೆ ಫಯಾಜ್ ಅಹಮದ್ ಖಾನ್
    ರಾಜ್ಯಾಧ್ಯಕ್ಷರು. ಕಸಾಪ
    ಕರುನಾಡು ಸಾಹಿತ್ಯ ಪರಿಷತ್ತು.

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...