Homeಅಂಕಣಗಳುಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

- Advertisement -
- Advertisement -

ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ ಮೇಲೆ ನಿಷೇಧವನ್ನು ಹೇರಿಬಿಟ್ಟಿತಲ್ಲಾ. ನಿಷೇಧದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಾಗಾದರೆ ಆರೆಸ್ಸೆಸ್ಸನ್ನು ನಿಷೇಧಿಸಿ ಎಂದು ಕರೆಕೊಟ್ಟ ಕೂಡಲೇ ಬಿಜೆಪಿಯ ತಲೆಕೆಟ್ಟ ಲೀಡರುಗಳು ಸಿದ್ದು ಮೇಲೆ ಬಿದ್ದಿವೆಯಂತಲ್ಲಾ. ಈ ಆರೆಸ್ಸೆಸ್ಸಿಗರು ಮತ್ತು ಲೀಡರುಗಳು ಗಾಂಧಿ ಹತ್ಯೆಯ ನಂತರ ಹುಟ್ಟಿದವರು; ಇವರಿಗೆ ಇತಿಹಾಸ ಗೊತ್ತಿರಲಾರದು. ಗಾಂಧಿ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡ ಇದೆಯೆಂದು ಆರೋಪಿಸಿ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರೇ ಆರೆಸ್ಸೆಸ್ಸನ್ನು ಬ್ಯಾನ್ ಮಾಡಿದ್ದರೆಂದು ಸಿದ್ದು ಇನ್ನೂ ತಮ್ಮ ವಿರೋಧಿಗಳ ಮುಸುಡಿಗೆ ಹೇಳಿಲ್ಲವಂತಲ್ಲಾ, ಥೂತ್ತೇರಿ.

*****

ಸಂಘ ಪರಿವಾರಿಗಳು ಗಾಂಧಿಯನ್ನು ಕೊಂದ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುತ್ತಿವೆ, ಇದಷ್ಟೇ ಅಲ್ಲ, ಮುಂದೆ ಮಾಡಬಹುದಾದ ಧ್ವಂಸದ ಕಾರ್ಯಗಳ ಪಟ್ಟಿಯನ್ನು ಮಾಡುತ್ತಿವೆ. ಬಾಬರಿ ಮಸೀದಿ ವಿಷಯದಲ್ಲಿ ತೀರ್ಪು ನೀಡಿದ ಸಮಯದಲ್ಲಿ ಸುಪ್ರೀಂಕೋರ್ಟು ’ಆಯ್ತು ಸಾಕು ಮಾಡಿ, ಮುಂದೆ ದೇಶದ ಶಾಂತಿ ಬಹಳ ಮುಖ್ಯ’ ಎಂದು ಹೇಳಿದ ಮಾತಿಗೆ ಕಿವುಡಾಗಿ ಕುಂತಿವೆಯೆಲ್ಲಾ. ಹೊಸದಾಗಿ ಹುಟ್ಟಿಕೊಂಡ ಗಾದೆ ಮಾತಿನಂತೆ ’ನಳ್ಳಿ ಹೆಚ್ಚಿದ ಕೆರೆ ಹಾಳು, ಆರೆಸ್ಸೆಸ್ ಹೆಚ್ಚಿದ ಊರ್ ಹಾಳು’ ಎಂಬ ಗಾದೆಯಂತೆ ಈಗ ಬ್ರಾಹ್ಮಣ ವಠಾರದಲ್ಲಿದ್ದ ಆರೆಸ್ಸೆಸ್ ಕವಾಯತು ಊರನ್ನೆಲ್ಲಾ ವ್ಯಾಪಿಸುತ್ತಿದೆ. ಅವುಗಳ ದೀರ್ಘಕಾಲದ ಅಜೆಂಡಾ ಪ್ರಕಾರ ಮುಸ್ಲಿಮರನ್ನ ಬಗ್ಗು ಬಡಿಯುವುದು, ನಂತರ ದಲಿತರ ಮೇಲೆ ಶೂದ್ರರ ಕೈಲಿ ದಾಳಿ ಮಾಡಿಸುವುದು, ಆ ನಂತರ ಸಿಖ್ಖರು, ಯಾದವರು ಹೀಗೆ ನಡೆಯಲಿಚ್ಛಿಸಿರುವ ದೊಡ್ಡ ದೊಂಬಿಯನ್ನೇ ಊಹಿಸಬಹುದು. ತಲೆಕೆಟ್ಟವರಿಗೆ ಮತ್ತು ಬರುವ ಔಷಧಿ ಕೊಡಿಸಿ ಜಗಲಿಯ ಮೇಲೆ ಕೂರಿಸುವ ತನಕ ಇವೆಲ್ಲಾ ನಿರಂತರವಾಗಿ ನಡೆಯುವ ಚೇಷ್ಟೆಗಳೆಂದು ಉಗ್ರ ಗಾಂಧಿವಾದಿಗಳು ಗೊಣಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ತಲುಪಾಯ್ತು. ಮಂಡ್ಯದ ಹತ್ತಿರ ಹೋಗುತ್ತಿದೆ. ಕಳೆದ ಎಂಟು ವರ್ಷಗಳಿಂದ ಬಾಲಿಶ ಹುಡುಗ, ಲಾಲಿಪಾಪು ಮತ್ತು ಅಪ್ರಬುದ್ಧ ಬಾಲ ಭಾಷೆಯ ಹುಡುಗ ಎಂದೆಲ್ಲಾ ಚೆಡ್ಡಿಗಳು ತಮ್ಮ ಜಾಲತಾಣದಲ್ಲಿ ಯಾರ ವಿರುದ್ಧ ಅಪಪ್ರಚಾರ ಮಾಡಿದ್ದವೊ ಅಂತಹ ರಾಹುಲಗಾಂಧಿ, ತಂದೆ ತಾಯಿ ಅಜ್ಜಿ ಮುತ್ತಾತರ ಮಾರ್ಗ ಹುಡುಕುತ್ತ ಹೊರಟವನಂತೆ ಬರುತ್ತಿದ್ದಾನಂತಲ್ಲಾ. ಅವನನ್ನು ನೋಡಲು ರಸ್ತೆ ಬದಿಯಲ್ಲಿ ನಿಂತ ಜನ ಮತ್ತು ಆತನ ಹಿಂದೆ ಕಿಲೋಮಿಟರುಗಟ್ಟಲೆ ಹರಿದು ಬರುತ್ತಿರುವ ಜನಸಾಗರ ನೋಡಿದ ಬಿಜೆಪಿಗಳು ಬೆಚ್ಚಿ ಏನು ಮಾಡಲೂ ತೋಚದೆ ಜಾಥಾದಲ್ಲಿ ಪೇಸಿಎಂ ಟಿಶರ್ಟ್ ಧರಿಸಿದ್ದ ಹುಡುಗರನ್ನ ಹಿಡಿದು ಶರ್ಟ್ ಬಿಚ್ಚಿಕೊಂಡು ಬರಲು ಹೇಳಿವೆಯಂತಲ್ಲಾ. ಒಂದು ಟೀಶರ್ಟ್ ಬಿಚ್ಚಿದರೇನು ಹತ್ತು ಟೀಶರ್ಟ್ ಕೊಡಿಸುತ್ತೇನೆ ಎಂದು ಡಿಕೆಶಿ ಹೇಳಿದ ಕೂಡಲೇ ಮಾಧ್ಯಮದೊಳಗಿರುವ ಶಾನುಭೋಗರ ಹುಡುಗರು ತಮ್ಮ ಕ್ಯಾಮರಾ ಚುರುಕುಗೊಳಿಸಿ ಹೆಜ್ಜೆ ಹಾಕುವಲ್ಲಿ ಹಿಂದೆ ಬಿದ್ದ ಡಿಕೆಶಿ, ಸಿದ್ದರಾಮಯ್ಯನಿಗೆ ಎಡಗೈ ತಾಕಿಸಿದ ಡಿಕೆಶಿ, ರಾಹುಲ್ ಕಾರಿನಲ್ಲಿ ಜಾಗವಿಲ್ಲದೆ ಹಿಂದಿನ ಕಾರಿನಲ್ಲಿ ಹೊರಟ ಡಿಕೆಶಿ ಎಂದು ಅರಚುತ್ತಲೇ ತಮ್ಮ ಚೇಷ್ಟೆಗಳನ್ನು ಮೆರೆಯುತ್ತಿವೆಯಂತಲ್ಲಾ. ನಗು ಕಳೆದುಕೊಂಡ ಜನಕ್ಕೆ ಇನ್ನು ಏನೇನು ಹಾಸ್ಯ ಪ್ರಸಂಗವನ್ನು ಈ ದಸರಾ ಸಮಯದಲ್ಲಿ ಮಾಧ್ಯಮಗಳು ತೋರುತ್ತವೊ ಎಂಬುದು ಮನರಂಜನೆಗೆ ಹಾತೊರೆಯುವ ಜನರ ಮನದಾಳದ ಮಾತಾಗಿದೆಯಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸತ್ಯ ಮತ್ತು ಸತ್ವದ ಹುಡುಕಾಟ ಗೌರಿ. ಕಾಂ ಧ್ಯೇಯೋದ್ದೇಶ.ಹೆಮ್ಮೆಯಾಗುತ್ತದೆ…ಪತ್ರಿಕಾ ಧರ್ಮವನ್ನೇ ಮರೆತ ಮೈಮನ ಮಾರಿಕೊಂಡ ಅದೆಷ್ಟೋ ಮಾಧ್ಯಮಗಳ ನಡುವೆ ಕೆಸರಲ್ಲಿ ಕಮಲ ಅರಳಿದಂತೆ ಅರಳಿ ಮಾಧ್ಯಮ ಅಂದರೆ ಇದಲ್ಲಾ ಇದು ಎಂದು ಅರಹುತ್ತಿರುವ ನಿಷ್ಕಲ್ಮಷ ನಿಷ್ಕಪಟ ಈ ಮಾಧ್ಯಮ ಕಂಡು.ಹೃದಯಾಂತರಾಳದ ಸಲಾಂ ಬಸವ ಶರಣು.
    ಗುಡಿಬಂಡೆ ಫಯಾಜ್ ಅಹಮದ್ ಖಾನ್
    ರಾಜ್ಯಾಧ್ಯಕ್ಷರು. ಕಸಾಪ
    ಕರುನಾಡು ಸಾಹಿತ್ಯ ಪರಿಷತ್ತು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...