Homeಅಂಕಣಗಳುಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

- Advertisement -
- Advertisement -

ಸದರಿ ಬಿಜೆಪಿ ಸರಕಾರ ರಚನೆಗೊಂಡಿದ್ದೆ ಭ್ರಷ್ಟತೆಯಿಂದ. ಭ್ರಷ್ಟತೆಯಿಂದ ರಚನೆಗೊಂಡ ಸರಕಾರ ಪ್ರಾಮಾಣಿಕವಾಗಿ ಆಡಳಿತ ನಡೆಸಬೇಕೆನ್ನುವುದೇ ಮೂರ್ಖತನ, ಆದ್ದರಿಂದ ಇದು ನಲವತ್ತು ಪರಸೆಂಟಿನ ಸರಕಾರ ಎಂದು ಮೂದಲಿಸಿದರೆ ಅಲ್ಲಿ ಯಾರಿಗೂ ಅವಮಾನವಾಗುವುದಿಲ್ಲವಂತಲ್ಲಾ. ಇದನ್ನ ತಿಳಿಯದ ಕಾಂಗ್ರೆಸ್ಸಿಗರು ಪೇಸಿಎಂ ಪೋಸ್ಟರುಗಳನ್ನು ಕಂಡಕಂಡಲ್ಲಿ ಹಚ್ಚತೊಡಗಿದ್ದಾರೆ. ಅಷ್ಟಕ್ಕೂ ಸಿಎಂಗೂ ಕೂಡ ಇಂತಹ ಅವಹೇಳನಕಾರಿಯಾದ ಪೋಸ್ಟರ್ ಬಗ್ಗೆ ಏನೂ ಅನ್ನಿಸುವುದಿಲ್ಲ, ಏಕೆಂದರೆ ಅವರಿರುವ ಪಾರ್ಟಿಯೇ ಹಾಗೆ, ಅದಕ್ಕೆ ಅವಮಾನ ಮಾಡುವಂತಹ ಪದಗಳೇಯಿಲ್ಲ. ಬಿಜೆಪಿಗಳ ವಿಷಯದಲ್ಲಿ ಅವರಿಗೆ ಸರಿಯಾಗಿ ತಾಗುವ ಕಟು ಟೀಕೆಯ ಪದ ಕನ್ನಡ ಭಾಷೆಯಲ್ಲೇ ಇಲ್ಲದಂತಾಗಿದೆಯಂತಲ್ಲಾ. ಇಂತಹ ಪಾರ್ಟಿಗೆ ಇಲ್ಲವೇ ಇಲ್ಲದ ಮಾನ ಹರಾಜಾಗಿ ಹೋಗಿದೆಯೆಂದು ನಾರಾಯಣಸ್ವಾಮಿ ಎಂಬ ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದಾರಂತಲ್ಲಾ. ಅದಕ್ಕಾಗಿ ಯಾವ ಲಾಯರ್ ಹಿಡಿಯುವುದು ಲಾಯರ್ ಫೀಜ್‌ನ ಯಾರಿಂದ ವಸೂಲು ಮಾಡಬೇಕೆಂಬ ಚಿಂತೆಗೆ ಬಿದ್ದಿದ್ದಾರಂತಲ್ಲಾ, ಥೂತ್ತೇರಿ.

******

ಭ್ರಷ್ಟನ ಅಥವಾ ಲಫಂಗನ ಕೊನೆಯ ಅಸ್ತ್ರ ಜಾತಿಯಂತಲ್ಲಾ. ನಮ್ಮ ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಸೇರಿಕೊಂಡಿರುವ ಲಫಂಗರು ತಾವು ಮಾಡುವ ಭ್ರಷ್ಟ ಕೆಲಸ ಅಥವಾ ವ್ಯಭಿಚಾರದ ಕೆಲಸ- ಇಂತಹ ಯಾವುದೇ ಕೃತ್ಯ ಬಯಲಾದಾಗ ಆತ ಬಳಸುವ ಕಟ್ಟಕಡೆಯ ಅಸ್ತ್ರ ಜಾತಿಯಾಗಿರುತ್ತದೆ. ಏಕೆಂದರೆ ಭಾರತದಲ್ಲಿ ಅದು ಹುಟ್ಟಿನಾಗಿನಿಂದ ಜಾತಿ ಒಂದು ಶಾಪವಾಗಿ ಪರಿಣಮಿಸಿದೆ. ಭ್ರಷ್ಟ ಅಥವಾ ಲಫಂಗನ ಕೃತ್ಯ ಬಯಲಿಗೆಳೆದಾಗ ಆತ ಕೂಗಿಕೊಳ್ಳುವುದೇ “ನೋಡ್ರಪ್ಪ ನಾನು ಇಂಥ ಜಾತಿಲುಟ್ಟಿದ್ದೆ ತಪ್ಪಾ, ನನಿಗೇನಾದ್ರು ಅನ್ಲಿ ನಮ್ಮ ಜಾತಿನೆ ಹಿಡಿದು ಬೈತ ಕುಂತವುರಲ್ಲಾ” ಎಂಬ ಆಕ್ರಂದನ ಅಪರಾಧಿಯ ಬಾಯಲ್ಲಿ ಬರತ್ತಂತಲ್ಲಾ. ಆ ಆಕ್ರಂದನ ಬಂದಿದ್ದೇ ತಡ ಜಾತಿ ಮನಸ್ಸುಗಳು ಮುತ್ತಿಗೊಳ್ಳುತ್ತವೆ. ತಮ್ಮವನನ್ನ ರಕ್ಷಿಸುತ್ತವೆ. ಈಗ ಕರ್ನಾಟಕದಲ್ಲಿ ಆಗುತ್ತಿರುವುದೂ ಅದೆ. ನಲವತ್ತು ಪರಸೆಂಟಿನ ಆರೋಪವೆದುರಿಸುತ್ತಿರುವ ಸರ್ಕಾರದ ಮುಂದಾಳಾದ ಬೊಮ್ಮಾಯಿ ಕುರಿತ ಪೋಸ್ಟರುಗಳು ರಾರಾಜಿಸಿದ ಕೂಡಲೇ ಅನಾದಿಕಾಲದಿಂದಲೂ ನರಿ ಬುದ್ಧಿಯಲ್ಲೇ ಬದುಕುತ್ತಿರುವ ಜನ ಬೇರೆ ದಾರಿಕಾಣದೆ, ನೋಡಿ ಲಿಂಗಾಯಿತ ಮುಖ್ಯಮಂತ್ರಿಗಳನ್ನು ಕಂಡರಾಗದ ಕಾಂಗೈಗಳು ಹೇಗೆ ಭ್ರಷ್ಟತೆಯ ಆಪಾದನೆ ಮಾಡಿ ಅಪಮಾನ ಮಾಡುತ್ತಿವೆ. ಇದು ನಿಜ್ಕಕೂ ಸಾದ ಲಿಂಗಾಯಿತರಿಗೆ ಮಾಡುತ್ತಿರುವ ಅವಮಾನವೆಂದು ಬೊಬ್ಬೆಹೊಡೆದವಂತಲ್ಲಾ, ಥೂತ್ತೇರಿ.

*****

ಕಾಂಗ್ರೆಸ್ ಪಕ್ಷದ ಸಮಸ್ಯೆಗಳು, ಸ್ಫೋಟಗಳು ಯಾವುದನ್ನು ತಲೆಗೆ ಹಚ್ಚಿಕೊಳ್ಳದ ರಾಹುಲಗಾಂಧಿ ಕೇರಳದ ಮುಖಾಂತರ ಕರ್ನಾಟಕವನ್ನು ಪ್ರವೇಶಿಸಲಿದ್ದಾರೆ. ಈ ನಡಿಗೆ ಕಾಂಗ್ರೆಸ್ ರಾಜಕಾರಣದಲ್ಲಿ ಹಿಂದೆಂದೂ ಕಾಣದಿದ್ದ ಸಂತೋಷವನ್ನು ಕೊಟ್ಟಿದೆಯಂತಲ್ಲಾ. ನಡೆಯುವ ಮಾರ್ಗದ ಊರುಗಳ ಮಾಹಿತಿ ಪಡೆಯುತ್ತ, ಅಲ್ಲಿನ ಸಾಹಿತಿಗಳು, ಕಲಾವಿದರು, ಜಾನಪದ ವಿದ್ವಾಂಸರು, ಸ್ವಾತಂತ್ರ್ಯ ಹೋರಾಟಗಾರರ ವಿವರಗಳನ್ನು ರಾಹುಲಗಾಂಧಿ ಪಡೆಯುತ್ತ ಹೋಗುತ್ತಿರಬೇಕಾದರೆ ಈ ಬಗ್ಗೆ ಕಾಂಗ್ರೆಸ್ಸಿನ ರಾಜಕಾರಣಿಗಳನ್ನ ಅವರು ಕೇಳುತ್ತಿಲ್ಲವಂತಲ್ಲಾ. ರಾಹುಲಗಾಂಧಿ ಏನಾದರೂ ಪಾರ್ಟಿ ಸದಸ್ಯರಿಗೆ ಈ ಕೆಲಸ ವಹಿಸಿದ್ದಾದರೆ ಕಲೆ, ಸಾಹಿತ್ಯ, ಸಂಗೀತ, ಜಾನಪದದ ವಿಷಯದಲ್ಲಿ ಗಂಧಗಾಳಿಯಿಲ್ಲದ ಅವರು ತಮ್ಮ ಹತ್ತಿರದ ದೂರದ ಸಂಬಂಧಿಗಳನ್ನ ಕರೆಸಿ ರಾಹುಲಗಾಂಧಿ ಎದುರು ನಿಲ್ಲಿಸಿ ಫೋಟೊ ತೆಗೆಸಿಕೊಳ್ಳಬಲ್ಲರು ಎಂದು ಊಹಿಸಿದ್ದಾರಲ್ಲಾ. ಈ ಊಹೆ ರಾಹುಲಗಾಂಧಿಗೆ ಮೊದಲೇ ಹೊಳೆದು ಕಾಂಗೈ ರಾಜಕಾರಣದ ಆವರಣದಿಂದ ಹೊರಗಿರುವ ನಿಷ್ಠಾವಂತ ವ್ಯಕ್ತಿಗಳನ್ನು ನೇಮಿಸಿದ್ದಾರಂತಲ್ಲಾ. ಈ ನಡುವೆ ಮುಂದಿನ ಚುನಾವಣೆಗೆ ಹೇಳಿಕೊಂಡು ಹೋಗಲು ಯಾವ ಸಾಧನೆಯೂ ಇಲ್ಲದ ಬಿಜೆಪಿಯ ರಾಷ್ಟ್ರೀಯ ನಾಯಕರು ಭಾರತ ಜೋಡೋ ಯಾತ್ರೆ ವಿಫಲಗೊಳಿಸಲು ಪರಿಕರಗಳನ್ನು ತಯಾರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

******

ಮೋದಿಯವರು ಎಪ್ಪತ್ತು ವರ್ಷಗಳ ಹಿಂದೆಯೇ ಭಾರತದಿಂದ ಕಾಲ್ತೆಗೆದ ಚೀತಾಗಳನ್ನು ತರಿಸಿ ಅವುಗಳನ್ನು ಬೋನಿನಿಂದ ಹೊರಬಿಟ್ಟು ಕ್ಲಾಪ್ ತೆಗೆಯದೆ ಕ್ಯಾಮರಾ ಕ್ಲಿಕ್ಕಿಸಿದ್ದು ಭಾರತದಾದ್ಯಂತ ಸುದ್ದಿಯಾಗಿದ್ದು ಹಳೆ ವಿಷಯ. ಸಂಘಿಗಳ ಪ್ರಕಾರ ಮೋದಿ ಕ್ಯಾಮರ ಕ್ಲಿಕ್ಕಿಸಿಲ್ಲ ಚಿರತೆಗಳ ಫೋಟೊ ತೆಗೆಯುವ ಫೋಟೊಗಾಗಿ ಕ್ಯಾಮರ ಹಿಡಿದು ನಿಂತಿದ್ದರು. ಮಾಧ್ಯಮದವರು ಫೋಟೊ ತೆಗೆಯಲು ಪೋಸು ಕೊಡುವಾಗ ತಾವೇ ಫೋಟೊ ತೆಗೆವ ಅಗತ್ಯವಿಲ್ಲ ಎಂಬುದು ಅಜ್ಞಾನಿಗಳಿಗೆ ಅರಿವಾಗಬೇಕೆಂದು ಹೇಳಿರುವ ಬಿಜೆಪಿಗಳು ಈ ಬಗ್ಗೆ ದೇಶದ್ರೋಹದ ಕೇಸು ಹಾಕಲು ಇನ್ನೂ ರೆಡಿಯಾಗಿಲ್ಲವಂತಲ್ಲಾ. ಇದೇನಾದರಾಗಲಿ ನಮಗೆ ಕಿವಿ ಮತ್ತು ಕಣ್ಣು ಸರಿಯಾಗಿದ್ದು, ಅವನ್ನು ಸರಿಯಾಗಿ ತೆರೆದುಕೊಂಡರೆ, ನಮ್ಮ ನಡುವೆ ಹಿಂಡುಹಿಂಡಾಗಿ ಬದುಕಿದ್ದ ಕಾಗೆಯೇ ಕಣ್ಮರೆಯಾಗುತ್ತಿವೆಯಲ್ಲಾ. ಕೆಲವು ಊರುಗಳಲ್ಲಂತೂ ಇಲ್ಲವೇ ಇಲ್ಲ. ಸತ್ತವನಿಗೆ ಕೂಳು ಹಾಕುವಾಗ ಅದನ್ನು ತಿನ್ನಲು ಬರುತ್ತಿದ್ದ ಈ ಕಾಗೆಗಳು ಕಾಣೆಯಾಗುತ್ತಿರುವ ಬಗ್ಗೆ ಯಾವ ಪಕ್ಷಿ ತಜ್ಞನೂ ಬಾಯಿಬಿಟ್ಟಿಲ್ಲ. ಹೊಲದಲ್ಲಿ ಮನೆ ಮೇಲೆ ಎದುರಿನ ಮರದ ಮೇಲೆ ಕುಳಿತು ಕಾಕಾ ಎನ್ನುತ್ತಿದ್ದ ಕಾಗೆ ನಿರ್ನಾಮವಾದರೆ ಗತಿಯೇನು. ಪಕ್ಷಿ ತಜ್ಞರು ನಿಜವಾದ ಕಾರಣ ಹೇಳಿ ಎಚ್ಚರಿಸಬಲ್ಲರೆ? ಅದಕ್ಕಿಂತ ಕಾಗೆ ಕಣ್ಮರೆಯಾದರೆ ಕೋಗಿಲೆಯೂ ನಿರ್ನಾಮವಾಗುತ್ತವಲ್ಲಾ ಎನ್ನಲು ನೋವಾಗುತ್ತದೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಭಾರತಕ್ಕೆ ಚೀತಾಗಳು ಬಂದಿವೆ ಇನ್ನು ಭಯವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...