Homeಅಂಕಣಗಳುಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

- Advertisement -
- Advertisement -

ಸದರಿ ಬಿಜೆಪಿ ಸರಕಾರ ರಚನೆಗೊಂಡಿದ್ದೆ ಭ್ರಷ್ಟತೆಯಿಂದ. ಭ್ರಷ್ಟತೆಯಿಂದ ರಚನೆಗೊಂಡ ಸರಕಾರ ಪ್ರಾಮಾಣಿಕವಾಗಿ ಆಡಳಿತ ನಡೆಸಬೇಕೆನ್ನುವುದೇ ಮೂರ್ಖತನ, ಆದ್ದರಿಂದ ಇದು ನಲವತ್ತು ಪರಸೆಂಟಿನ ಸರಕಾರ ಎಂದು ಮೂದಲಿಸಿದರೆ ಅಲ್ಲಿ ಯಾರಿಗೂ ಅವಮಾನವಾಗುವುದಿಲ್ಲವಂತಲ್ಲಾ. ಇದನ್ನ ತಿಳಿಯದ ಕಾಂಗ್ರೆಸ್ಸಿಗರು ಪೇಸಿಎಂ ಪೋಸ್ಟರುಗಳನ್ನು ಕಂಡಕಂಡಲ್ಲಿ ಹಚ್ಚತೊಡಗಿದ್ದಾರೆ. ಅಷ್ಟಕ್ಕೂ ಸಿಎಂಗೂ ಕೂಡ ಇಂತಹ ಅವಹೇಳನಕಾರಿಯಾದ ಪೋಸ್ಟರ್ ಬಗ್ಗೆ ಏನೂ ಅನ್ನಿಸುವುದಿಲ್ಲ, ಏಕೆಂದರೆ ಅವರಿರುವ ಪಾರ್ಟಿಯೇ ಹಾಗೆ, ಅದಕ್ಕೆ ಅವಮಾನ ಮಾಡುವಂತಹ ಪದಗಳೇಯಿಲ್ಲ. ಬಿಜೆಪಿಗಳ ವಿಷಯದಲ್ಲಿ ಅವರಿಗೆ ಸರಿಯಾಗಿ ತಾಗುವ ಕಟು ಟೀಕೆಯ ಪದ ಕನ್ನಡ ಭಾಷೆಯಲ್ಲೇ ಇಲ್ಲದಂತಾಗಿದೆಯಂತಲ್ಲಾ. ಇಂತಹ ಪಾರ್ಟಿಗೆ ಇಲ್ಲವೇ ಇಲ್ಲದ ಮಾನ ಹರಾಜಾಗಿ ಹೋಗಿದೆಯೆಂದು ನಾರಾಯಣಸ್ವಾಮಿ ಎಂಬ ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದಾರಂತಲ್ಲಾ. ಅದಕ್ಕಾಗಿ ಯಾವ ಲಾಯರ್ ಹಿಡಿಯುವುದು ಲಾಯರ್ ಫೀಜ್‌ನ ಯಾರಿಂದ ವಸೂಲು ಮಾಡಬೇಕೆಂಬ ಚಿಂತೆಗೆ ಬಿದ್ದಿದ್ದಾರಂತಲ್ಲಾ, ಥೂತ್ತೇರಿ.

******

ಭ್ರಷ್ಟನ ಅಥವಾ ಲಫಂಗನ ಕೊನೆಯ ಅಸ್ತ್ರ ಜಾತಿಯಂತಲ್ಲಾ. ನಮ್ಮ ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಸೇರಿಕೊಂಡಿರುವ ಲಫಂಗರು ತಾವು ಮಾಡುವ ಭ್ರಷ್ಟ ಕೆಲಸ ಅಥವಾ ವ್ಯಭಿಚಾರದ ಕೆಲಸ- ಇಂತಹ ಯಾವುದೇ ಕೃತ್ಯ ಬಯಲಾದಾಗ ಆತ ಬಳಸುವ ಕಟ್ಟಕಡೆಯ ಅಸ್ತ್ರ ಜಾತಿಯಾಗಿರುತ್ತದೆ. ಏಕೆಂದರೆ ಭಾರತದಲ್ಲಿ ಅದು ಹುಟ್ಟಿನಾಗಿನಿಂದ ಜಾತಿ ಒಂದು ಶಾಪವಾಗಿ ಪರಿಣಮಿಸಿದೆ. ಭ್ರಷ್ಟ ಅಥವಾ ಲಫಂಗನ ಕೃತ್ಯ ಬಯಲಿಗೆಳೆದಾಗ ಆತ ಕೂಗಿಕೊಳ್ಳುವುದೇ “ನೋಡ್ರಪ್ಪ ನಾನು ಇಂಥ ಜಾತಿಲುಟ್ಟಿದ್ದೆ ತಪ್ಪಾ, ನನಿಗೇನಾದ್ರು ಅನ್ಲಿ ನಮ್ಮ ಜಾತಿನೆ ಹಿಡಿದು ಬೈತ ಕುಂತವುರಲ್ಲಾ” ಎಂಬ ಆಕ್ರಂದನ ಅಪರಾಧಿಯ ಬಾಯಲ್ಲಿ ಬರತ್ತಂತಲ್ಲಾ. ಆ ಆಕ್ರಂದನ ಬಂದಿದ್ದೇ ತಡ ಜಾತಿ ಮನಸ್ಸುಗಳು ಮುತ್ತಿಗೊಳ್ಳುತ್ತವೆ. ತಮ್ಮವನನ್ನ ರಕ್ಷಿಸುತ್ತವೆ. ಈಗ ಕರ್ನಾಟಕದಲ್ಲಿ ಆಗುತ್ತಿರುವುದೂ ಅದೆ. ನಲವತ್ತು ಪರಸೆಂಟಿನ ಆರೋಪವೆದುರಿಸುತ್ತಿರುವ ಸರ್ಕಾರದ ಮುಂದಾಳಾದ ಬೊಮ್ಮಾಯಿ ಕುರಿತ ಪೋಸ್ಟರುಗಳು ರಾರಾಜಿಸಿದ ಕೂಡಲೇ ಅನಾದಿಕಾಲದಿಂದಲೂ ನರಿ ಬುದ್ಧಿಯಲ್ಲೇ ಬದುಕುತ್ತಿರುವ ಜನ ಬೇರೆ ದಾರಿಕಾಣದೆ, ನೋಡಿ ಲಿಂಗಾಯಿತ ಮುಖ್ಯಮಂತ್ರಿಗಳನ್ನು ಕಂಡರಾಗದ ಕಾಂಗೈಗಳು ಹೇಗೆ ಭ್ರಷ್ಟತೆಯ ಆಪಾದನೆ ಮಾಡಿ ಅಪಮಾನ ಮಾಡುತ್ತಿವೆ. ಇದು ನಿಜ್ಕಕೂ ಸಾದ ಲಿಂಗಾಯಿತರಿಗೆ ಮಾಡುತ್ತಿರುವ ಅವಮಾನವೆಂದು ಬೊಬ್ಬೆಹೊಡೆದವಂತಲ್ಲಾ, ಥೂತ್ತೇರಿ.

*****

ಕಾಂಗ್ರೆಸ್ ಪಕ್ಷದ ಸಮಸ್ಯೆಗಳು, ಸ್ಫೋಟಗಳು ಯಾವುದನ್ನು ತಲೆಗೆ ಹಚ್ಚಿಕೊಳ್ಳದ ರಾಹುಲಗಾಂಧಿ ಕೇರಳದ ಮುಖಾಂತರ ಕರ್ನಾಟಕವನ್ನು ಪ್ರವೇಶಿಸಲಿದ್ದಾರೆ. ಈ ನಡಿಗೆ ಕಾಂಗ್ರೆಸ್ ರಾಜಕಾರಣದಲ್ಲಿ ಹಿಂದೆಂದೂ ಕಾಣದಿದ್ದ ಸಂತೋಷವನ್ನು ಕೊಟ್ಟಿದೆಯಂತಲ್ಲಾ. ನಡೆಯುವ ಮಾರ್ಗದ ಊರುಗಳ ಮಾಹಿತಿ ಪಡೆಯುತ್ತ, ಅಲ್ಲಿನ ಸಾಹಿತಿಗಳು, ಕಲಾವಿದರು, ಜಾನಪದ ವಿದ್ವಾಂಸರು, ಸ್ವಾತಂತ್ರ್ಯ ಹೋರಾಟಗಾರರ ವಿವರಗಳನ್ನು ರಾಹುಲಗಾಂಧಿ ಪಡೆಯುತ್ತ ಹೋಗುತ್ತಿರಬೇಕಾದರೆ ಈ ಬಗ್ಗೆ ಕಾಂಗ್ರೆಸ್ಸಿನ ರಾಜಕಾರಣಿಗಳನ್ನ ಅವರು ಕೇಳುತ್ತಿಲ್ಲವಂತಲ್ಲಾ. ರಾಹುಲಗಾಂಧಿ ಏನಾದರೂ ಪಾರ್ಟಿ ಸದಸ್ಯರಿಗೆ ಈ ಕೆಲಸ ವಹಿಸಿದ್ದಾದರೆ ಕಲೆ, ಸಾಹಿತ್ಯ, ಸಂಗೀತ, ಜಾನಪದದ ವಿಷಯದಲ್ಲಿ ಗಂಧಗಾಳಿಯಿಲ್ಲದ ಅವರು ತಮ್ಮ ಹತ್ತಿರದ ದೂರದ ಸಂಬಂಧಿಗಳನ್ನ ಕರೆಸಿ ರಾಹುಲಗಾಂಧಿ ಎದುರು ನಿಲ್ಲಿಸಿ ಫೋಟೊ ತೆಗೆಸಿಕೊಳ್ಳಬಲ್ಲರು ಎಂದು ಊಹಿಸಿದ್ದಾರಲ್ಲಾ. ಈ ಊಹೆ ರಾಹುಲಗಾಂಧಿಗೆ ಮೊದಲೇ ಹೊಳೆದು ಕಾಂಗೈ ರಾಜಕಾರಣದ ಆವರಣದಿಂದ ಹೊರಗಿರುವ ನಿಷ್ಠಾವಂತ ವ್ಯಕ್ತಿಗಳನ್ನು ನೇಮಿಸಿದ್ದಾರಂತಲ್ಲಾ. ಈ ನಡುವೆ ಮುಂದಿನ ಚುನಾವಣೆಗೆ ಹೇಳಿಕೊಂಡು ಹೋಗಲು ಯಾವ ಸಾಧನೆಯೂ ಇಲ್ಲದ ಬಿಜೆಪಿಯ ರಾಷ್ಟ್ರೀಯ ನಾಯಕರು ಭಾರತ ಜೋಡೋ ಯಾತ್ರೆ ವಿಫಲಗೊಳಿಸಲು ಪರಿಕರಗಳನ್ನು ತಯಾರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

******

ಮೋದಿಯವರು ಎಪ್ಪತ್ತು ವರ್ಷಗಳ ಹಿಂದೆಯೇ ಭಾರತದಿಂದ ಕಾಲ್ತೆಗೆದ ಚೀತಾಗಳನ್ನು ತರಿಸಿ ಅವುಗಳನ್ನು ಬೋನಿನಿಂದ ಹೊರಬಿಟ್ಟು ಕ್ಲಾಪ್ ತೆಗೆಯದೆ ಕ್ಯಾಮರಾ ಕ್ಲಿಕ್ಕಿಸಿದ್ದು ಭಾರತದಾದ್ಯಂತ ಸುದ್ದಿಯಾಗಿದ್ದು ಹಳೆ ವಿಷಯ. ಸಂಘಿಗಳ ಪ್ರಕಾರ ಮೋದಿ ಕ್ಯಾಮರ ಕ್ಲಿಕ್ಕಿಸಿಲ್ಲ ಚಿರತೆಗಳ ಫೋಟೊ ತೆಗೆಯುವ ಫೋಟೊಗಾಗಿ ಕ್ಯಾಮರ ಹಿಡಿದು ನಿಂತಿದ್ದರು. ಮಾಧ್ಯಮದವರು ಫೋಟೊ ತೆಗೆಯಲು ಪೋಸು ಕೊಡುವಾಗ ತಾವೇ ಫೋಟೊ ತೆಗೆವ ಅಗತ್ಯವಿಲ್ಲ ಎಂಬುದು ಅಜ್ಞಾನಿಗಳಿಗೆ ಅರಿವಾಗಬೇಕೆಂದು ಹೇಳಿರುವ ಬಿಜೆಪಿಗಳು ಈ ಬಗ್ಗೆ ದೇಶದ್ರೋಹದ ಕೇಸು ಹಾಕಲು ಇನ್ನೂ ರೆಡಿಯಾಗಿಲ್ಲವಂತಲ್ಲಾ. ಇದೇನಾದರಾಗಲಿ ನಮಗೆ ಕಿವಿ ಮತ್ತು ಕಣ್ಣು ಸರಿಯಾಗಿದ್ದು, ಅವನ್ನು ಸರಿಯಾಗಿ ತೆರೆದುಕೊಂಡರೆ, ನಮ್ಮ ನಡುವೆ ಹಿಂಡುಹಿಂಡಾಗಿ ಬದುಕಿದ್ದ ಕಾಗೆಯೇ ಕಣ್ಮರೆಯಾಗುತ್ತಿವೆಯಲ್ಲಾ. ಕೆಲವು ಊರುಗಳಲ್ಲಂತೂ ಇಲ್ಲವೇ ಇಲ್ಲ. ಸತ್ತವನಿಗೆ ಕೂಳು ಹಾಕುವಾಗ ಅದನ್ನು ತಿನ್ನಲು ಬರುತ್ತಿದ್ದ ಈ ಕಾಗೆಗಳು ಕಾಣೆಯಾಗುತ್ತಿರುವ ಬಗ್ಗೆ ಯಾವ ಪಕ್ಷಿ ತಜ್ಞನೂ ಬಾಯಿಬಿಟ್ಟಿಲ್ಲ. ಹೊಲದಲ್ಲಿ ಮನೆ ಮೇಲೆ ಎದುರಿನ ಮರದ ಮೇಲೆ ಕುಳಿತು ಕಾಕಾ ಎನ್ನುತ್ತಿದ್ದ ಕಾಗೆ ನಿರ್ನಾಮವಾದರೆ ಗತಿಯೇನು. ಪಕ್ಷಿ ತಜ್ಞರು ನಿಜವಾದ ಕಾರಣ ಹೇಳಿ ಎಚ್ಚರಿಸಬಲ್ಲರೆ? ಅದಕ್ಕಿಂತ ಕಾಗೆ ಕಣ್ಮರೆಯಾದರೆ ಕೋಗಿಲೆಯೂ ನಿರ್ನಾಮವಾಗುತ್ತವಲ್ಲಾ ಎನ್ನಲು ನೋವಾಗುತ್ತದೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಭಾರತಕ್ಕೆ ಚೀತಾಗಳು ಬಂದಿವೆ ಇನ್ನು ಭಯವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...