Homeಮುಖಪುಟಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ

ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ

ಉರ್ದು ಹೆಸರಿನ ಸಂಸ್ಥೆಯ ಮೂಲಕ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಳಸಿ ಖರೀದಿಸಿದ ಸಂಸ್ಥೆಗೆ ಬಜರಂಗದಳದ ಮಾಜಿ ಸಂಚಾಲಕ,ಬಿಜೆಪಿ ನಾಯಕನೇ ಮುಖ್ಯಸ್ಥ!

- Advertisement -
- Advertisement -

“ಇಲ್ಲಿ ಮುಸ್ಲಿಮರ ವಸತಿ ಯೋಜನೆ ಬರುತ್ತಿದೆ” ಎಂದು ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ಸಣ್ಣ ರೈತರು ಸೇರಿದಂತೆ ಇತರರಿಂದ ಸುಮಾರು 200 ಎಕರೆ ಭೂಮಿಯನ್ನು ಬಿಜೆಪಿ ಬೆಂಬಲಿತ ಹಿಂದುತ್ವ ಸಂಘಟನೆ ಖರೀಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರೈತರಿಂದ ಭೂಮಿ ಖರೀದಿಸುವಾಗ “ತಂಝೀಮ್-ಎ-ಝಾರ್ಖೆಜ್” ಎಂಬ ಉರ್ದು ಹೆಸರಿನ ಸಂಸ್ಥೆಯ ಮೂಲಕ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಳಸಿ ಖರೀದಿಸಲಾಗಿದೆ ಎಂದು ಮೋಸ ಹೋಗಿರುವ ರೈತರು ಆರೋಪಿಸಿದ್ದಾರೆ. ಇದೀಗ ತಾವು ಮಾರಾಟ ಮಾಡಿರುವ ಪ್ರದೇಶದಲ್ಲಿ ವಸತಿ ಕಾಲೋನಿ ರೂಪುಗೊಳ್ಳುತ್ತಿರುವುದರಿಂದ ರೈತರು ವಿಚಾರಣೆ ನಡೆಸುವಂತೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2000 ರಲ್ಲಿ ರಾಜ್ಯದ ಖಾರ್ಗೋನ್ ಪಟ್ಟಣದ ಹೊರವಲಯದಲ್ಲಿರುವ ಭೂಮಿಯನ್ನು ರೈತರು ಅದರಲ್ಲೂ ಸಣ್ಣ ರೈತರು ಮಾರಾಟ ಮಾಡಿದ್ದರು. ಈ ಪ್ರದೇಶದಲ್ಲಿ ಮುಸ್ಲಿಮರ ವಸತಿ ಯೋಜನೆ ಬರುತ್ತಿದೆ ಎಂದು ಹೇಳಿದ್ದರಿಂದ ‘ನಾವು ಭೂಮಿಯನ್ನು ಮಾರಾಟ ಮಾಡಿ ಮೋಸ ಹೋಗಿದ್ದೇವೆ’ ಎಂದು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: BJP ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆಯ ನಡುವೆ ದಲಿತ-ಮುಸ್ಲಿಂ ಜೋಡಿ ಮದುವೆ

2007 ರಲ್ಲಿ ಭೂಮಿಯ ಖರೀದಿಯ ಎಲ್ಲಾ ಒಪ್ಪಂದಗಳು ಮುಗಿದ ನಂತರ ಸಂಸ್ಥೆಯ “ತಂಝೀಮ್-ಎ-ಝಾರ್ಖೆಜ್” ಎಂಬ ಹೆಸರನ್ನು “ಪ್ರೊಫೆಸರ್ ಪಿ.ಸಿ. ಮಹಾಜನ್ ಫೌಂಡೇಶನ್” ಎಂದು ಬದಲಾಯಿಸಲಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಇದರಲ್ಲಿ ಯಾವುದೇ ಮೋಸ ನಡೆದಿಲ್ಲ ಎಂದು ರೈತರ ಆರೋಪವನ್ನು ನಿರಾಕರಿಸಿದ್ದಾರೆ.

ಪ್ರಸ್ತುತ ಆಡಳಿತಾರೂಢ ಬಿಜೆಪಿಯ ನಾಯಕ ರಂಜೀತ್ ಸಿಂಗ್ ದಂಡಿರ್‌ ಅವರು ಈ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ರಂಜೀತ್‌ ಸಿಂಗ್‌ ಅವರು ಈ ಹಿಂದೆ ಬಜರಂಗದಳದ ರಾಜ್ಯ ಸಹ ಸಂಚಾಲಕರಾಗಿದ್ದರು. ಅಲ್ಲದೆ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

“ನಾವು ಭೂಮಿಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇವೆ” ಎಂದು ಸಂಸ್ಥೆಯ ನಿರ್ದೇಶಕ ರವಿ ಮಹಾಜನ್ ಹೇಳಿದ್ದಾರೆ. ಸಂಸ್ಥೆಯ ಭೂಮಿಯಲ್ಲಿ ವಸತಿ ನಿವೇಶನಗಳ ಜೊತೆಗೆ ಬಿಡಾಡಿ ಹಸುಗಳಿಗೆ ಗೋಶಾಲೆ ಅಥವಾ ಆಶ್ರಯ ತಾಣವನ್ನೂ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಆದರೆ ರೈತರು, ತಮ್ಮನ್ನು ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮನ್ನು ಸಂಪರ್ಕಿಸುವ ಏಜೆಂಟ್‌ಗಳು ಮುಸ್ಲಿಮರು ಎಂದು ನಾವು ಭಾವಿಸಿದ್ದೆವು ಅವರು ಹೇಳುತ್ತಾರೆ.

ಇದನ್ನೂ ಓದಿ: ಸಕಲೇಶಪುರ: ದಲಿತರ ಮೇಲೂ ಪ್ರಕರಣ ದಾಖಲು; ಬಜರಂಗದಳ ವಿರುದ್ಧ ಪ್ರತಿಭಟನೆ 

“2004 ರಲ್ಲಿ ಜಾಕಿರ್ ಎಂಬ ವ್ಯಕ್ತಿ ನಮ್ಮ ಬಳಿಗೆ ಬಂದು, ‘ನಿಮ್ಮ ಸುತ್ತಮುತ್ತಲಿನ ಎಲ್ಲಾ ಭೂಮಿಯನ್ನು ಖರೀದಿಸಿದ್ದೇನೆ. ಇಲ್ಲಿ ಶೀಘ್ರದಲ್ಲೇ ಕಸಾಯಿಖಾನೆ ಇರುತ್ತದೆ. ನಿಮ್ಮ ಭೂಮಿಯನ್ನು ಮುಸ್ಲಿಮರಿಗೆ ಮಾರಾಟ ಮಾಡಿ. ಹೇಗಿದ್ದರೂ ಇಲ್ಲಿ ನಮ್ಮ ಸಮುದಾಯ ಬಂದು ನೆಲೆಸುತ್ತಿದೆ’ ಎಂದು ಹೇಳಿದ್ದರು. ಹೀಗೆ ಹೇಳಿದಾಗ ನಾನು ಕೂಡಾ ನನ್ನ ಭೂಮಿಯನ್ನು ಮಾರಾಟ ಮಾಡಿದ್ದೇನೆ” ಎಂದು ಭೂಮಿ ಕಳೆದುಕೊಂಡಿರುವ ರೈತ ನಂದಕಿಶೋರ್ ಕುಶ್ವಾಹ ಹೇಳಿದ್ದಾರೆ. ಅವರ ಐದು ಎಕರೆ ಭೂಮಿಗೆ 40 ಸಾವಿರ ರೂ. ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಖರೀದಿ ಮಾಡಲಾಗಿರುವ ಭೂಮಿಯಲ್ಲಿ ಹಜ್ ಭವನ ರಚಿಸಲಾಗುವುದು ಮತ್ತು ಸ್ಮಶಾನವನ್ನು ಸಹ ಸ್ಥಾಪಿಸಲಾಗುವುದು ಎಂದು ತಮಗೆ ತಿಳಿಸಲಾಗಿತ್ತು ಎಂದು ಇತರ ರೈತರು ಹೇಳಿದ್ದಾರೆ.

ಮುಸ್ಲಿಮರ ಹೆಸರಿನಲ್ಲಿ ಭಯ ಹುಟ್ಟು ಹಾಕಿ ರೈತರಿಂದ 200 ಎಕರೆ ಭೂಮಿ ಖರೀದಿಸಿದ ಹಿಂದುತ್ವ ಸಂಘಟನೆ | Naanu Gauri

ತಂಝೀಮ್-ಎ-ಝಾರ್ಖೆಜ್ ಎಂಬ ಸಂಸ್ಥೆಯನ್ನು 2002 ರಲ್ಲಿ ಹಿಂದೂಗಳ ಗುಂಪು ರಚಿಸಿತು. ಅವರು ನಂತರ ಜಾಕಿರ್ ಶೇಖ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಅದಕ್ಕೆ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು.

ವಿವಾದದ ಬಗ್ಗೆ NDTV ಜೊತೆಗೆ ಮಾತನಾಡಿದ ಜಾಕಿರ್‌,“ಸಂಸ್ಥೆಯ ಉದ್ದೇಶವು ಸಾಮಾಜಿಕ ಉದ್ದೇಶಕ್ಕಾಗಿ ಕೆಲಸ ಮಾಡುವುದು ಎಂದು ನಾನು ಭಾವಿಸಿದೆ. ಆದರೆ ನಾನು ಯಾರನ್ನೂ ಅವರ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಲಿಲ್ಲ ಅಥವಾ ದಾರಿ ತಪ್ಪಿಸಲಿಲ್ಲ. ಪ್ರಕಾಶ್ ಸ್ಮೃತಿ ಸೇವಾ ಸಂಸ್ಥಾನ ಎಂಬ ಅದೇ ಗುಂಪಿನಿಂದ ರಚಿಸಲ್ಪಟ್ಟ ಮತ್ತೊಂದು ಸಂಸ್ಥೆಯು ಕೆಲವು ಭೂಮಿಯನ್ನು ಖರೀದಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಕಲೇಶಪುರ: ದನ ಸಾಗಿಸುತ್ತಿದ್ದಾನೆಂದು ದಲಿತ ಮುಖಂಡನ ಮೇಲೆ ಬಜರಂಗದಳದ ದುಷ್ಕರ್ಮಿಗಳಿಂದ ಹಲ್ಲೆ

200 ಎಕರೆಯಲ್ಲಿ, 150 ಎಕರೆಯನ್ನು 11 ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಖರೀದಿಸಲಾಗಿದೆ. ಉಳಿದ ಐವತ್ತು ಎಕರೆ ಭೂಮಿಯನ್ನು ಸಣ್ಣ ರೈತರಿಂದ ಖರೀದಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

“ಬಬ್ಲು ಖಾನ್ ಎಂಬ ವ್ಯಕ್ತಿ ತನ್ನ ತಂದೆಯ ಬಳಿಗೆ ಬಂದಿದ್ದರು. ನಾವು ನಮ್ಮಲ್ಲಿದ್ದ ಒಂಬತ್ತು ಎಕರೆಗಳನ್ನು ಮಾರಾಟ ಮಾಡಿದ್ದೇವೆ” ಎಂದು ದೀಪಕ್ ಕುಶ್ವಾಹ ಎಂಬ ರೈತರೊಬ್ಬರು ಹೇಳಿದ್ದಾರೆ.

“ಹಜ್ ಸಮಿತಿ ರಚನೆಯಾಗುತ್ತದೆ. ಮುಸ್ಲಿಮರು ಇಲ್ಲಿ ಬಂದು ನೆಲೆಸುತ್ತಾರೆ ಎಂದು ನನ್ನ ಸಂಬಂಧಿಕರು ಭಾವಿಸಿದ್ದರು. ಅದಕ್ಕಾಗಿ ಅವರು ಭಯಭೀತರಾಗಿ ಭೂಮಿಯನ್ನು ಮಾರಾಟ ಮಾಡಿದರು. ಕೊನೆಯಲ್ಲಿ ನಾನು ಕೂಡಾ ನನ್ನ ಭೂಮಿಯನ್ನೂ ಮಾರಿದೆ” ಎಂದು ಸಂಜಯ್ ಸಿಂಘ್ವಿ ಎಂಬ ಉದ್ಯಮಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಮುಖ್ಯಸ್ಥ, ಬಿಜೆಪಿ ನಾಯಕ ರಂಜೀತ್ ಸಿಂಗ್‌ ದಂಡಿರ್, “ನಾನು ಇಲ್ಲಿ ಚಿರಪರಿಚಿತನಾಗಿರುವುದರಿಂದ ಎಲ್ಲದಕ್ಕೂ ನನ್ನ ಹೆಸರನ್ನು ಎಳೆಯಲಾಗುತ್ತಿದೆ” ಎಂದು ಹೇಳಿದ್ದಾರೆ. ಅವರು ತಾನು ಎದುರಿಸುತ್ತಿರುವ ಕೆಲವು ಪ್ರಕರಣಗಳ ಬಗ್ಗೆ ಮಾತನಾಡಿ,“ನಾನು ಏಳು ಬಾರಿ ಜೈಲು ವಾಸ ಅನುಭವಿಸಿದ್ದೇನೆ; ನನ್ನ ಮೇಲೆ ಕೊಲೆ ಆರೋಪಗಳಿವೆ – ಏಕೆಂದರೆ ನನ್ನ ಜೀವನದುದ್ದಕ್ಕೂ ನಾನು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆ: ಮಸೀದಿ ವೀಕ್ಷಣೆ ಪ್ರವಾಸ ರದ್ದು ಮಾಡಿದ ಶಿಶುವಿಹಾರ

ಸಂಸ್ಥೆಯ ಹೆಸರು ಮತ್ತು ಭೂಮಿಯ ಬಳಕೆಯ ಬಗ್ಗೆ ಮಾತನಾಡಿದ ಅವರು,“ನಮಗೆ ಖಾರ್ಗೋನ್ ಪ್ರದೇಶದಲ್ಲಿ ಗೋಶಾಲೆ ಬೇಕು. ಅದನ್ನು ಇಲ್ಲಿ ನಿರ್ಮಿಸಿ ಸಮಾಜಕ್ಕೆ ಮತ್ತು ಗೋವುಗಳಿಗೆ ಏನಾದರೂ ಒಳ್ಳೆಯದನ್ನು ಮಾಡಬಹುದು ಎಂದು ನಾನು ಭಾವಿಸಿದೆ. ಆದರೆ ಅದಕ್ಕೆ ನಾವು ತಂಝೀಮ್-ಎ-ಝಾರ್ಖೆಜ್ ಎಂದು ಹೆಸರಿಟ್ಟರೆ ಏನು ಸಮಸ್ಯೆ ಎಂದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.

“ಆದರೆ ಇದೀಗ ಸಂಸ್ಥೆಯ ನಿರ್ದೇಶಕರಾಗಿರುವ ರವಿ ಮಹಾಜನ್ ಅವರ ತಂದೆಯ ಹೆಸರನ್ನು ಇಡಲಾಗಿದೆ. ತಂಝೀಮ್-ಎ-ಝಾರ್ಖೆಜ್‌ನ ಅರ್ಥ ಪಾಳುಭೂಮಿಯನ್ನು ಫಲವತ್ತಾಗಿಸುವುದು. ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಭಾವಿಸಿ, ಇದೀಗ ಅದರ ಹೆಸರನ್ನು ಬದಲಾಯಿಸಿದ್ದೇವೆ” ಎಂದು ರಂಜೀತ್ ಸಿಂಗ್‌ ದಂಡಿರ್ ಹೇಳಿದ್ದಾರೆ.

“ಎಲ್ಲಾ ಆಪಾದನೆಗಳು ಕೇವಲ ದಾರಿತಪ್ಪಿಸುವಂತಿವೆ. ಅವೆಲ್ಲವೂ ಅಪ-ಪ್ರಚಾರದ ಭಾಗವಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಕೆಲಸಗಳನ್ನು ಮಾಡಲಾಗಿದೆ. ಬಡವರಿಗೆ ಮನೆ ಸಿಕ್ಕಿದೆ. ಈ ಭೂಮಿ ಬರಡಾಗಿತ್ತು. ನೆಲದಡಿಯಲ್ಲಿ 700 ಅಡಿಗಳಷ್ಟು ನೀರು ಇರಲಿಲ್ಲ. ನಾನು ಅಣ್ಣಾ ಹಜಾರೆ ಮತ್ತು ಬಾಬಾ ಆಮ್ಟೆ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಸಮಾಜಕ್ಕೆ ಸಂದೇಶ ನೀಡಲು ನಾವು ಇಲ್ಲಿನ ಭೂಮಿಯನ್ನು ಹಸಿರು ಮಾಡಲು ಬಯಸಿದ್ದೇವೆ” ಎಂದು ರಂಜೀತ್ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: ಭದ್ರಾವತಿ: ಬಜರಂಗದಳದ ದುಷ್ಕರ್ಮಿಗಳಿಂದ ದಾಂಧಲೆ; 6 ಮಂದಿ ವಿರುದ್ಧ ಎಫ್‌ಐಆರ್‌

ವಿವಾದದ ಕುರಿತು ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದೆ. “ನಮ್ಮ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಮಸ್ಯೆ ಮಾರಾಟಗಾರ ಮತ್ತು ಖರೀದಿದಾರರ ನಡುವಿನದ್ದು. ಅವರಿಗೆ ತಮ್ಮದೇ ಆದ ಆರ್ಥಿಕ ಹಿತಾಸಕ್ತಿ ಇದೆ” ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಹೇಳಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಕುಮಾರ್ ಪುರುಷೋತ್ತಮ್, ಸೇರಿದಂತೆ ಪೊಲೀಸರು ಹಾಗೂ ಅಧಿಕಾರಿಗಳು ಪ್ರತಿಕ್ರಿಯಿಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...