Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ...

ಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ಸಿಟ್ಟು ಬಂದು ಅದನ್ನ ವಾಪಸ್ಸು ಕಳಿಸಿದನಂತೆ..

- Advertisement -
- Advertisement -

ಕಾಲ ಸರದು ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ದೇವೇಗೌಡ್ರು ಪಿ.ಡಬ್ಲೂ.ಡಿ ಮಿನಿಸ್ಟರಾದರು. ವಿಷ್ ಮಾಡಣ ಅಂತ ಹೋಗಿದ್ದೆ. “ಡಾಕ್ಟರ್, ಮರತ್ರ” ಅಂದೆ. “ಬನ್ನಿ ಡಾಕ್ಟರೆ, ಅದ್ಯೆಲ್ಲ ಏನು ಬಿಡಿ” ಅಂದ್ರು ಗೌಡ್ರು. ಆಗ ಅವ್ರು ಯಲ್ಲ ಇಷ್ಟ ಪಡೋ ರಾಜಕಾರಣಿಯಾಗಿದ್ರು. ಜನತಾಪಕ್ಷದ ಘಟಾನುಘಟಿ ನಾಯಕರಿಂದ ಹಿಡಿದು ಚಂದ್ರಶೇಖರವರಿಗೆ ಎಲ್ರೂ ಮೆಚ್ಚೊ ರಾಜಕಾರಣಿಯಾಗಿದ್ರು. ಆದ್ರೆ ಕ್ರಮೇಣ ಪುತ್ರವ್ಯಾಮೋಹ ಕುಟುಂಬ ವ್ಯಾಮೋಹಕ್ಕೆ ತುತ್ತಾಗಿ ಸಮರ್ಥ ಜನತಾದಳ ಪಕ್ಷನ ನಾಶಮಾಡಿಬಿಟ್ರು. ಅವುರಂಗೆ ಮಾಡದೆಯಿದ್ರೆ ಇಲ್ಲೊಂದು ಸಮರ್ಥವಾದ ಪ್ರಾದೇಶಿಕ ಪಕ್ಷ ಇರದು. ಅವರು ನಮ್ಮಣ್ಣನ ಕಂಡ್ರೆ ದ್ವೇಷ ಕಾರೋರು. ನಾನು ಕೃಷ್ಣಪ್ಪನ ತಮ್ಮನಾದ್ರು ದೇವೇಗೌಡ್ರ ಅಭಿಮಾನಿಯಾಗಿದ್ದೆ. ಅದನ್ನ ಗೌಡ್ರು ಗ್ರಹಿಸಲಿಲ್ಲ. ರಾಜಕಾರಣದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ದ್ವೇಷ ಹುಟ್ಟಾಕಬಾರ್ದು. ನಾನು ಗಮನಿಸಿದಂಗೆ ಇವರುಗಳಲ್ಲಿ ಸಿದ್ಧಾಂತಗಳೇ ಯಿಲ್ಲ. ಬರೀ ದ್ವೇಷದ ರಾಜಕಾರಣನೇ ತುಂಬ್ಯದೆ. ಆಗ ಎಲ್ಲಂದ್ರಲ್ಲಿ ಬೇರೆಬೇರೆ ಪಾರ್ಟಿಯವರು ಕುತಗಂಡು ಕಾರ್ಡ್ಸ್ ಆಡದನ್ನ ನೋಡಿದ್ದೆ. ಈಗ ಅಂತ ವಾತಾವರಣನೇ ಯಿಲ್ಲ. ಶಾಸಕರ ದಿನಾಚರಣೆನೆ ನಿಂತುಹೋಗ್ಯದೆ. ಲೀಡ್ರುಗಳ ಮಾಡೋ ಭಾಷಣ ಬದ್ಲಾಗ್ಯದೆ. ಯಲ್ಲ ಒಂದೇ ತರ ಮಾತಾಡ್ತ ಅವುರೆ. ತಮ್ಮ ಸೇಡಿನ ಮಾತು ಕಾರ್ಯಕರ್ತರ ಮೇಲೆ ಏನು ಪರಿಣಾಮ ಮಾಡ್ತದೆ ಅನ್ನೋ ಜವಾಬ್ದಾರಿನೇ ಯಿಲ್ಲ.

ಈ ರಾಜಕಾರಣ ದಾರಿ ತಪ್ಪಿದ ಕಾಲದಲ್ಲಿ ಲಂಕೇಶ್ ಪತ್ರಿಕೆ ತಗದ್ರು. ಆಗ ನಮಗೊಂದು ದನಿ ಸಿಕ್ಕಿದಂಗಾಗಿತ್ತು. ಲಂಕೇಶ್‌ನ ವಾರವಾರ ಕಾಯ್ತಿದ್ದೋ. ಅದರಲ್ಲಿ ನಮ್ಮ ರಾಮಣ್ಣನ ಕತೆನೂ ಬಂದಿದ್ದೊ. ಲಂಕೇಶ್ ನಮ್ಮ ಮೇಷ್ಟ್ರಾಗಿದ್ದುದ್ದು ಅಲ್ದೇ ಪರಿಚಯನೂ ಇದ್ದಿದ್ರಿಂದ ರಾಮಣ್ಣನೂ ನಾನು ಲಂಕೇಶ್ ಆಫೀಸಿಗೋದೊ. ನಮ್ಮನ್ನ ನೋಡಿದೇಟಿಗೆ ಖುಷಿಯಾಗಿ ಬನ್ನಿ ಬನ್ನಿ ಅಂದರು. ನಾವು ಹೋಗಿ ಕೂತಗತ್ತಿದ್ದಂಗೆ ಕಾಫಿ ತರೋಕೇಳಿ ಸಿಗರೇಟಚ್ಚಿಗಂಡ್ರು. ಯಾವಾಗ್ಲೋ ಒಂದು ಸಿಗರೇಟ್ ಸೇದೋ ರಾಮಣ್ಣನೂ ಒಂದ್ ಸಿಗರೇಟ್ ಹಚ್ಚಿದ. ಲಂಕೇಶ್ ಹೊಗೆ ನಾನ್ಯಾಕ್ ಕುಡಿಬೇಕು ಅಂತ ಹಚ್ಚಿದನೇನೋ. “ಈ ರಾಮಣ್ಣನ ಕತೆ ಕಳುಸು ಅಂದ್ರೆ ಅದ್ಯಾವುದೋ ಕಕ್ಕಸ್ ಮ್ಯಾಲೆ ಬರದ ಕತೆ ಕಳುಸ್ತಾನೆ. ಅವ ಹಾಕಕ್ಕಾದತೆ” ಅಂದ್ರು. ರಾಮಣ್ಣ ನಗಾಡಿದ. ಲಂಕೇಶ್ ಏನೇ ಇದ್ರು ಎದುರಿಗೆ ಹೇಳಿಬುಡೋರು. ಅದವುರ ಜಾಯಮಾನ. ಕತೆ ಅಥವಾ ಲೇಖನ ಚನ್ನಾಗಿದೇ ಚನ್ನಾಗಿಲ್ಲ ಅನ್ನದ ಎದುರಿಗೇ ಹೇಳತಿದ್ರು. ರಾಮಣ್ಣನದೊಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ. ರಾಮಣ್ಣನಿಗೆ ಸಿಟ್ಟು ಬಂದು ಅದ ವಾಪಸ್ಸು ಕಳಿಸಿದನಂತೆ. ನನ್ನ ಕತಿಗೆ ಇಷ್ಟು ಕಡಿಮ ಬ್ಯಲೆ ಕಟ್ಟಿದ್ರಲ್ಲ ಅಂತ ಇವನ ಸಿಟ್ಟು. ಆದ್ರೆ ರಾಮಣ್ಣ ಸಂಬಳ ತಗೊಳೊ ಡಾಕ್ಟರು. ಉದಯೋನ್ಮುಖ ಲೇಖಕರಿಗೆ ಜಾಸ್ತಿ ಸಂಭಾವನೆ ಕಳಿಸ್ತಿದ್ಧ ಲಂಕೇಶ್, ರಾಮಣ್ಣನಿಗೆ ಕಡಿಮೆ ಕಳಿಸಿದ್ರಿಂದ ಅಮ್ಯಾಲೆ ಕತೆ ಕಳ್ಸದ್ನೆ ಬುಟ್ಟುಬುಟ್ಟ. ಇದು ಆಮ್ಯಾಲಿನ ಕತೆ, ಆದ್ರೆ ಈ ಕ್ಷಣ ನಮ್ಮ ಸಮಂಧ ಚನ್ನಾಗಿತ್ತು. ಆದ್ರಿಂದ “ನಡಿರಿ ಜಾರ್ಜ್ ಮನೆಗೋಗಣ” ಅಂತ ಎದ್ರು. “ನೀವೋಗಿ ಸಾರ್ ನಾವು ಬರಲ್ಲ” ಅಂದೆ. ಅದಕವ್ರು, “ಕರದಿಲ್ಲ ಅಂತ ಬರದಿಲ್ಲವ. ನಮ್ಮ ಇಂಡಿಯನ್ ಕಲ್ಚರಲ್ಲಿ ಯಾರೂ ಒಬ್ಬರೇ ಹೋಗಲ್ಲ. ಯರಡು ಮೂರು ಜನನಾದ್ರು ಹೋಯ್ತರೆ. ಅದೇನಪರಾಧ ಅಲ್ಲ. ಸುಮ್ಮನೆ ಬನ್ನಿ ಹೋಗೋಣ” ಅಂತ ಹೊರಟೇಬುಟ್ರು. ನಾವಿಲ್ಲ ಅನ್ನಕ್ಗಾದೆ ಹಿಂಬಾಲಿಸಿದೊ. ಅಲ್ಲಿಗೋದ್ರೆ ಜಾರ್ಜ್ ಫರ್ನಾಂಡಿಸ್ ಭಾಳ ಖುಷಿಯಾಗಿ ಓಡಾಡ್ತಾ ಹಂದಿ ಮಾಂಸದ ಕರಿ, ಬ್ರೆಡ್ ಸಪ್ಲೈ ಮಾಡಿದ್ರು. ನಾನು ತಿನ್ನಲಿಲ್ಲ. ಲಂಕೇಶ್‌ಗೇನು ಅಂದ್ರೆ ಜೊತೆಲಿದ್ದೋರ್ಯಲ್ಲ ಕುಡಿಬೇಕು ತಿನ್ನಬೇಕು. ಅದ್ಕೆ ಅವುರು “ಕಮಲಾಕ್ಷ ಉಣ್ಣಲಿಲ್ಲ, ನಡಿರಿ ಪ್ರೆಸ್ ಕ್ಲಬ್ಬಿಗೋಗನ ಅಂತ ಹೊರಟ್ರು. ಸರಿ ಅಲ್ಲಿಗೂ ಹೋದೊ. ಆಲನಳ್ಳಿ ಕೃಷ್ಣನ ವಿಷ್ಯ ತಗಂಡು ಒಬ್ಬರಾದ ಮ್ಯಾಲೆ ಒಬ್ಬರು ನಗಿಸಿದ್ರು. ಅವುನು ಮಾಡಿದ್ದ ಜಮೀನು ಅದರ ಕತೆನ್ಯಲ್ಲ ಹೇಳಿದ ಮ್ಯಾಲೆ, “ಅಲ್ಲೋ ರಾಮಣ್ಣ ಆಲನಳ್ಳಿ ಎಂ.ಪಿಗೆ ನಿಂತಗತನಂತೆ. ಏನಾಗ್ಯದಯ್ಯ ಅವುನಿಗೆ” ಅಂದ್ರು. “ಸುಮ್ಮನಂಗಂತನೆ ಕಂಡ್ರಿ. ಅದವುನ ಕಡಿಂದ ಹಬ್ಬೊ ಸುದ್ದಿನೆ ವರತು ಕಾಂಗ್ರೆಸ್ ಅಥವಾ ಜನತಾ ಪಕ್ಷದಿಂದ ಯಾರಾರ ಬಾಯಿ ಬುಟ್ಟವರ. ಅವುನಾಸೆ ಒಂದೊಂದಲ್ಲ. ಯಾವುದೂ ಆಗದಿಲ್ಲ ಬುಡಿ” ಅಂದ ರಾಮಣ್ಣ. ಅಲ್ಲೊಂದು ನೆನಪಲ್ಲುಳಿಯೋ ಪಾರ್ಟಿಯಾಯ್ತು. ಲಂಕೇಶ್ ಜಾರ್ಜ್ ವಿಷಯ ಬರಿತ “ನಮ್ಮ ಫರ್ನಾಂಡಿಸ್ ಒಬ್ಬ ಡ್ರೈವರ್ ಮನೆಲೂ ಕುಡಿತ ಮಾತನಾಡೊ ಸರಳ ವ್ಯಕ್ತಿ” ಅಂತ ಟಿಪ್ಪಣಿ ಹಾಕಿದ್ರು. ಮುಂದೆ ಫರ್ನಾಂಡಿಸ್ ಲಂಕೇಶ್ ವಿರೋಧಿಸುತ್ತಿದ್ದ ಬಿ.ಜೆ.ಪಿಗೋಗಿ ರಕ್ಷಣಾ ಸಚಿವರಾದ್ರು. ಎಮರ್ಜೆನ್ಸಿಲಿ ತನ್ನನ್ನು ಕೊಲ್ಲಕ್ಕೆ ಅಂತ ಸಂಚುಮಾಡಿದ ಕಾಂಗ್ರೆಸ್‌ಗಿಂತ ಬಿ.ಜೆ.ಪಿನೆ ವಾಸಿ ಅಂತ ತೀರ್ಮಾನ ತಗಂಡ್ರು. ಆ ನಂತರ ಮೆಮೋರಿ ಕಳಕಂಡು ಹೆಚ್ಚುಕಮ್ಮಿ ಹನ್ನೆರಡೊರ್ಷ ಮಲಗಿದ್ರಲ್ಲಯ್ಯಾ. ಅದಮಾತ್ರ ನ್ಯನಿಸಿಗಳಕ್ಕಾಗದಿಲ್ಲ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

ರಾಮಣ್ಣನಿಗೆ ಮೊದಲ ಶಾಕ್ ಕೊಟ್ಟ ಸಾವು ಆಲನಳ್ಳಿದು. ಅವುಗ್ಯಲ್ಲಾರಿಗೂ ಅವನು ತುಂಟ ಹುಡುಗನಂತೆ ಕಂಡಿದ್ದ. ರಾಮಣ್ಣನಿಗಂತೂ ಅತ್ಮೀಯ ಜೀವ. ಕೃಷ್ಣ ಬರಿಯದನ್ಯಲ್ಲ ಬರದು ಬೇರೆ ಏನ್ನೋ ಹುಡಿಕ್ಕಂಡು ತಿರಗಂಗಾಗಿದ್ದ. ಬರವಣಿಗೇಲಿ ಮಾಡಿದ ಹೆಸರ್‌ನ ರಾಜಕಾರಣಕ್ಕೆ ಬಳಸಿಗಂಡು ಎಂಎಲ್ಲೆನೋ ಎಂಎಲ್ಸಿನೋ ಆಯ್ತಿನಿ ಅಂತಿದ್ದ. ಆದ್ರೆ ಮಾಡೋರ್ಯಾರು ರಾಜಕಾರಣಕ್ಕೆ ಬೇಕಾದ ತಾಳ್ಮೆನೆ ಇರಲಿಲ್ಲ. ಜಗಳಗಂಟ. ಆದ್ರು ಕನಸ ಹೊತ್ತಗಂಡ ತಿರಿಗನು. ಆಟೈಮಲ್ಲಿ ’ಸುಟ್ಟ ತಿಕದ ದೇವರು’ ಅಂತ ಲಂಕೇಶ್ ಪತ್ರಿಕೆಲಿ ಕಥೆ ಬರೆದಿದ್ದ, ಓದಿದ್ದೆ. ‘ಅರಗಿನ ಅರಮನೆ’ ಅಂತ ಕಾದಂಬರಿ ಶುರುಮಾಡಿದ್ದ. ಅದು ಅರ್ಧಕ್ಕೆ ನಿಂತೋಯ್ತು. ಪಾಪ ಸಾಯೋ ವಯಸಲ್ಲ. ಅರ್ಧಕ್ಕೆ ವಂಟೋದ. ನಮ್ಮ ರಾಮಣ್ಣ ಆಗ ಭಾರಿ ಘಾಸಿಯಾಗಿದ್ದ. ಜೊತೆಲಿ ಹುಟ್ಟಿದೋನೆ ತೀರಿಕಂಡ ಅನ್ನೋಂಗಾಗಿದ್ದ. ಆ ದುಃಖ ಮರಿಯಕ್ಕೆ ಆಲನಳ್ಳಿ ಮಗ ಪ್ರದ್ಯುಮ್ನ ಅಪ್ಪನ ಹೆಸರುಳಿಸೋ ಕತೆಗಾರಾಯ್ತನೆ ಅಂತಿದ್ದ. ಅಂಗಾದತೆ ಯಲ್ಲ. ಸಾವು ನ್ಯನಪಾಯ್ತವೆ, ಅಂಗೆ ಕೃಷ್ಣನ ಸಾವು ನ್ಯನಪಾಯ್ತು.

ಒಂದು ಸತಿ ಲಂಕೇಶ್ ನಮ್ಮ ಕೇಶವ ಮೂರ್ತಿ ಮನಿಗೆ ಬಂದಿದ್ರು. ಅದೇನು ವಿಶೇಷ ಅಲ್ಲ. ಮೈಸೂರಿಗೋಗುವಾಗ ಬಂದು ಹೋಗರು. ಆಗ ನಾನೂ ಹೋಗಿದ್ದೆ. ಊಟ ಮಾಡಿ ಹೊಂಟ ನಂತರ ಲಂಕೇಶ್ ಕಾರಿನ ಗೇರಾಕಿದ್ದ ನೋಡಿ “ಇದೇನ್ ಸಾರ್ ಹಿಂಗ್ ಗೇರಾಕಿದ್ರಿ, ಆ ತರ ಹಾಕಿದ್ರೆ ಗೇರೇರದಿಲ್ಲ” ಅಂದೆ. ಇನ್ನೋಂದ್ ಸತಿ ಹೆಚ್.ಎಲ್.ಕೆ, ಕೆ.ಎಂ. ಶ್ರೀನಿವಾಸ ಗೌಡ ನಮ್ಮ ಮನೆ ಟೆರೇಸ್ ಮ್ಯಾಲೆ ಸೇರಿದ್ದೋ. ಲಂಕೇಶ್ ಬರಿತಿದ್ದ ಚುಟುಕು ಕವನಕ್ಕೆ ನೀಲು ಅಂತ ಹೆಸರಾಯ್ಕಂಡು, ಅವಳು ಮಂಡ್ಯದೋಳು ಅನ್ನೋ ಸೂಚನೆ ಕೊಟ್ಟಿದ್ರು. ಆಗ ಮಂಡ್ಯಕ್ಕೆ ತುಂಬಾ ಬರೋರು. ಆದ್ರಿಂದ ನೀಲು ಮತ್ತೆ ಲಂಕೆಶ್ ಬಗ್ಗೆ ಕತೆ ಕಟ್ಟಿ ಮಾತಾಡೋರು.

“ಅದ ನಾನು ಕೇಳಿದ್ದೆ ಕಣಣ್ಣ. ಶಶಿಕುಮಾರ ಅನ್ನೋ ರಾಜಕಾರಣಿ “ನಿಮ್ಮ ಲಂಕೇಶ ನೀಲು ಅಂತ ದಲಿತರ ಹೆಣ್ಣಮಗಳ ಇಟ್ಟಗಂಡವುನೆ, ಮಂಡ್ಯದೋಳು. ಅವುಳೇನೋ ಕವನ ಪವನ ಬರಿತಳಂತೆ. ಒಂದಿನ ದಲಿತರಿಂದ್ಲೇ ಏಟು ಬೀಳ್ತವೆ ನೋಡು ಅಂತ ಹೆದರಿಸಿದ್ದ ಕಣಣ್ಣ”. ಅಂತ ಗಾಸಿಪ್ಪು ಕೇಳಕ್ಕೆ ಲಂಕೇಶ್‌ಗಿಷ್ಟ. ಗಾಸಿಪ್ ಹಬ್ಬಿಸದು ಎಂಜಾಯ್ ಮಾಡದು. ಈ ನೀಲು ಬಗ್ಗೆ ಅಂಗೆ ಮಾಡಿದ್ರು. ಕ್ರಮೇಣ ಜನಕ್ಕೆ ನೀಲು ಅಂದ್ರೆ ಲಂಕೇಶ್ ಅನ್ನದು ಗೊತ್ತಾಯ್ತು. ರಾಮಣ್ಣ ಲಂಕೇಶರ ಸಾಹಿತ್ಯ ಮೆಚ್ಚಿಗಂಡಿದ್ದ. ಆದ್ರೆ ವ್ಯಕ್ತಿತ್ವ ಒಪ್ಪಿಗಂಡಿರಲಿಲ್ಲ. ‘ಅವುನೊಂಥರ ಪ್ಯೂಡಲ್ ಗುಣದೋನು’ ಅಂತಿದ್ದ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ಕ್ರಮೇಣ ಲಂಕೇಶಿಂದ್ಲೂ ರಾಮಣ್ಣ ದೂರಾದ. ಕೆಲ ಹುಡುಗ್ರು ಲಂಕೇಶ್ ಪತ್ರಿಕೆ ಬಿಟ್ಟು ಈ ವಾರ ಅಂತ ಪತ್ರಿಕೆ ತಗುದ್ರು. ಅದರ ಚಂದಾ ಮಾಡಿಸದ್ರಿಂದ ಹಿಡಿದು, ಅದನ್ನು ಲಂಕೇಶ್ ಪತ್ರಿಕೆ ಎದುರಿಗೆ ನಿಲ್ಸಕ್ಕೆ ನೋಡಿದ. ಅಟೋತ್ತಿಗೆ ರವಿಕಾಂತೇ ಗೌಡನು ಬ್ಯಳದು ಲೇಖನ ಬರಿಯಂಗಾಗಿದ್ದ. ಈ ವಾರಗೆ ಅವುನೂ ಬರಿತಿದ್ದ. ಆದ್ರು ಅದು ಒಂದು ದನಿಯಾಗದೆ ಸ್ವರಗೋಯ್ತು. ರಾಮಣ್ಣನೂ ಸುಮ್ಮನಾದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....