Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ...

ಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ಸಿಟ್ಟು ಬಂದು ಅದನ್ನ ವಾಪಸ್ಸು ಕಳಿಸಿದನಂತೆ..

- Advertisement -
- Advertisement -

ಕಾಲ ಸರದು ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ದೇವೇಗೌಡ್ರು ಪಿ.ಡಬ್ಲೂ.ಡಿ ಮಿನಿಸ್ಟರಾದರು. ವಿಷ್ ಮಾಡಣ ಅಂತ ಹೋಗಿದ್ದೆ. “ಡಾಕ್ಟರ್, ಮರತ್ರ” ಅಂದೆ. “ಬನ್ನಿ ಡಾಕ್ಟರೆ, ಅದ್ಯೆಲ್ಲ ಏನು ಬಿಡಿ” ಅಂದ್ರು ಗೌಡ್ರು. ಆಗ ಅವ್ರು ಯಲ್ಲ ಇಷ್ಟ ಪಡೋ ರಾಜಕಾರಣಿಯಾಗಿದ್ರು. ಜನತಾಪಕ್ಷದ ಘಟಾನುಘಟಿ ನಾಯಕರಿಂದ ಹಿಡಿದು ಚಂದ್ರಶೇಖರವರಿಗೆ ಎಲ್ರೂ ಮೆಚ್ಚೊ ರಾಜಕಾರಣಿಯಾಗಿದ್ರು. ಆದ್ರೆ ಕ್ರಮೇಣ ಪುತ್ರವ್ಯಾಮೋಹ ಕುಟುಂಬ ವ್ಯಾಮೋಹಕ್ಕೆ ತುತ್ತಾಗಿ ಸಮರ್ಥ ಜನತಾದಳ ಪಕ್ಷನ ನಾಶಮಾಡಿಬಿಟ್ರು. ಅವುರಂಗೆ ಮಾಡದೆಯಿದ್ರೆ ಇಲ್ಲೊಂದು ಸಮರ್ಥವಾದ ಪ್ರಾದೇಶಿಕ ಪಕ್ಷ ಇರದು. ಅವರು ನಮ್ಮಣ್ಣನ ಕಂಡ್ರೆ ದ್ವೇಷ ಕಾರೋರು. ನಾನು ಕೃಷ್ಣಪ್ಪನ ತಮ್ಮನಾದ್ರು ದೇವೇಗೌಡ್ರ ಅಭಿಮಾನಿಯಾಗಿದ್ದೆ. ಅದನ್ನ ಗೌಡ್ರು ಗ್ರಹಿಸಲಿಲ್ಲ. ರಾಜಕಾರಣದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ದ್ವೇಷ ಹುಟ್ಟಾಕಬಾರ್ದು. ನಾನು ಗಮನಿಸಿದಂಗೆ ಇವರುಗಳಲ್ಲಿ ಸಿದ್ಧಾಂತಗಳೇ ಯಿಲ್ಲ. ಬರೀ ದ್ವೇಷದ ರಾಜಕಾರಣನೇ ತುಂಬ್ಯದೆ. ಆಗ ಎಲ್ಲಂದ್ರಲ್ಲಿ ಬೇರೆಬೇರೆ ಪಾರ್ಟಿಯವರು ಕುತಗಂಡು ಕಾರ್ಡ್ಸ್ ಆಡದನ್ನ ನೋಡಿದ್ದೆ. ಈಗ ಅಂತ ವಾತಾವರಣನೇ ಯಿಲ್ಲ. ಶಾಸಕರ ದಿನಾಚರಣೆನೆ ನಿಂತುಹೋಗ್ಯದೆ. ಲೀಡ್ರುಗಳ ಮಾಡೋ ಭಾಷಣ ಬದ್ಲಾಗ್ಯದೆ. ಯಲ್ಲ ಒಂದೇ ತರ ಮಾತಾಡ್ತ ಅವುರೆ. ತಮ್ಮ ಸೇಡಿನ ಮಾತು ಕಾರ್ಯಕರ್ತರ ಮೇಲೆ ಏನು ಪರಿಣಾಮ ಮಾಡ್ತದೆ ಅನ್ನೋ ಜವಾಬ್ದಾರಿನೇ ಯಿಲ್ಲ.

ಈ ರಾಜಕಾರಣ ದಾರಿ ತಪ್ಪಿದ ಕಾಲದಲ್ಲಿ ಲಂಕೇಶ್ ಪತ್ರಿಕೆ ತಗದ್ರು. ಆಗ ನಮಗೊಂದು ದನಿ ಸಿಕ್ಕಿದಂಗಾಗಿತ್ತು. ಲಂಕೇಶ್‌ನ ವಾರವಾರ ಕಾಯ್ತಿದ್ದೋ. ಅದರಲ್ಲಿ ನಮ್ಮ ರಾಮಣ್ಣನ ಕತೆನೂ ಬಂದಿದ್ದೊ. ಲಂಕೇಶ್ ನಮ್ಮ ಮೇಷ್ಟ್ರಾಗಿದ್ದುದ್ದು ಅಲ್ದೇ ಪರಿಚಯನೂ ಇದ್ದಿದ್ರಿಂದ ರಾಮಣ್ಣನೂ ನಾನು ಲಂಕೇಶ್ ಆಫೀಸಿಗೋದೊ. ನಮ್ಮನ್ನ ನೋಡಿದೇಟಿಗೆ ಖುಷಿಯಾಗಿ ಬನ್ನಿ ಬನ್ನಿ ಅಂದರು. ನಾವು ಹೋಗಿ ಕೂತಗತ್ತಿದ್ದಂಗೆ ಕಾಫಿ ತರೋಕೇಳಿ ಸಿಗರೇಟಚ್ಚಿಗಂಡ್ರು. ಯಾವಾಗ್ಲೋ ಒಂದು ಸಿಗರೇಟ್ ಸೇದೋ ರಾಮಣ್ಣನೂ ಒಂದ್ ಸಿಗರೇಟ್ ಹಚ್ಚಿದ. ಲಂಕೇಶ್ ಹೊಗೆ ನಾನ್ಯಾಕ್ ಕುಡಿಬೇಕು ಅಂತ ಹಚ್ಚಿದನೇನೋ. “ಈ ರಾಮಣ್ಣನ ಕತೆ ಕಳುಸು ಅಂದ್ರೆ ಅದ್ಯಾವುದೋ ಕಕ್ಕಸ್ ಮ್ಯಾಲೆ ಬರದ ಕತೆ ಕಳುಸ್ತಾನೆ. ಅವ ಹಾಕಕ್ಕಾದತೆ” ಅಂದ್ರು. ರಾಮಣ್ಣ ನಗಾಡಿದ. ಲಂಕೇಶ್ ಏನೇ ಇದ್ರು ಎದುರಿಗೆ ಹೇಳಿಬುಡೋರು. ಅದವುರ ಜಾಯಮಾನ. ಕತೆ ಅಥವಾ ಲೇಖನ ಚನ್ನಾಗಿದೇ ಚನ್ನಾಗಿಲ್ಲ ಅನ್ನದ ಎದುರಿಗೇ ಹೇಳತಿದ್ರು. ರಾಮಣ್ಣನದೊಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ. ರಾಮಣ್ಣನಿಗೆ ಸಿಟ್ಟು ಬಂದು ಅದ ವಾಪಸ್ಸು ಕಳಿಸಿದನಂತೆ. ನನ್ನ ಕತಿಗೆ ಇಷ್ಟು ಕಡಿಮ ಬ್ಯಲೆ ಕಟ್ಟಿದ್ರಲ್ಲ ಅಂತ ಇವನ ಸಿಟ್ಟು. ಆದ್ರೆ ರಾಮಣ್ಣ ಸಂಬಳ ತಗೊಳೊ ಡಾಕ್ಟರು. ಉದಯೋನ್ಮುಖ ಲೇಖಕರಿಗೆ ಜಾಸ್ತಿ ಸಂಭಾವನೆ ಕಳಿಸ್ತಿದ್ಧ ಲಂಕೇಶ್, ರಾಮಣ್ಣನಿಗೆ ಕಡಿಮೆ ಕಳಿಸಿದ್ರಿಂದ ಅಮ್ಯಾಲೆ ಕತೆ ಕಳ್ಸದ್ನೆ ಬುಟ್ಟುಬುಟ್ಟ. ಇದು ಆಮ್ಯಾಲಿನ ಕತೆ, ಆದ್ರೆ ಈ ಕ್ಷಣ ನಮ್ಮ ಸಮಂಧ ಚನ್ನಾಗಿತ್ತು. ಆದ್ರಿಂದ “ನಡಿರಿ ಜಾರ್ಜ್ ಮನೆಗೋಗಣ” ಅಂತ ಎದ್ರು. “ನೀವೋಗಿ ಸಾರ್ ನಾವು ಬರಲ್ಲ” ಅಂದೆ. ಅದಕವ್ರು, “ಕರದಿಲ್ಲ ಅಂತ ಬರದಿಲ್ಲವ. ನಮ್ಮ ಇಂಡಿಯನ್ ಕಲ್ಚರಲ್ಲಿ ಯಾರೂ ಒಬ್ಬರೇ ಹೋಗಲ್ಲ. ಯರಡು ಮೂರು ಜನನಾದ್ರು ಹೋಯ್ತರೆ. ಅದೇನಪರಾಧ ಅಲ್ಲ. ಸುಮ್ಮನೆ ಬನ್ನಿ ಹೋಗೋಣ” ಅಂತ ಹೊರಟೇಬುಟ್ರು. ನಾವಿಲ್ಲ ಅನ್ನಕ್ಗಾದೆ ಹಿಂಬಾಲಿಸಿದೊ. ಅಲ್ಲಿಗೋದ್ರೆ ಜಾರ್ಜ್ ಫರ್ನಾಂಡಿಸ್ ಭಾಳ ಖುಷಿಯಾಗಿ ಓಡಾಡ್ತಾ ಹಂದಿ ಮಾಂಸದ ಕರಿ, ಬ್ರೆಡ್ ಸಪ್ಲೈ ಮಾಡಿದ್ರು. ನಾನು ತಿನ್ನಲಿಲ್ಲ. ಲಂಕೇಶ್‌ಗೇನು ಅಂದ್ರೆ ಜೊತೆಲಿದ್ದೋರ್ಯಲ್ಲ ಕುಡಿಬೇಕು ತಿನ್ನಬೇಕು. ಅದ್ಕೆ ಅವುರು “ಕಮಲಾಕ್ಷ ಉಣ್ಣಲಿಲ್ಲ, ನಡಿರಿ ಪ್ರೆಸ್ ಕ್ಲಬ್ಬಿಗೋಗನ ಅಂತ ಹೊರಟ್ರು. ಸರಿ ಅಲ್ಲಿಗೂ ಹೋದೊ. ಆಲನಳ್ಳಿ ಕೃಷ್ಣನ ವಿಷ್ಯ ತಗಂಡು ಒಬ್ಬರಾದ ಮ್ಯಾಲೆ ಒಬ್ಬರು ನಗಿಸಿದ್ರು. ಅವುನು ಮಾಡಿದ್ದ ಜಮೀನು ಅದರ ಕತೆನ್ಯಲ್ಲ ಹೇಳಿದ ಮ್ಯಾಲೆ, “ಅಲ್ಲೋ ರಾಮಣ್ಣ ಆಲನಳ್ಳಿ ಎಂ.ಪಿಗೆ ನಿಂತಗತನಂತೆ. ಏನಾಗ್ಯದಯ್ಯ ಅವುನಿಗೆ” ಅಂದ್ರು. “ಸುಮ್ಮನಂಗಂತನೆ ಕಂಡ್ರಿ. ಅದವುನ ಕಡಿಂದ ಹಬ್ಬೊ ಸುದ್ದಿನೆ ವರತು ಕಾಂಗ್ರೆಸ್ ಅಥವಾ ಜನತಾ ಪಕ್ಷದಿಂದ ಯಾರಾರ ಬಾಯಿ ಬುಟ್ಟವರ. ಅವುನಾಸೆ ಒಂದೊಂದಲ್ಲ. ಯಾವುದೂ ಆಗದಿಲ್ಲ ಬುಡಿ” ಅಂದ ರಾಮಣ್ಣ. ಅಲ್ಲೊಂದು ನೆನಪಲ್ಲುಳಿಯೋ ಪಾರ್ಟಿಯಾಯ್ತು. ಲಂಕೇಶ್ ಜಾರ್ಜ್ ವಿಷಯ ಬರಿತ “ನಮ್ಮ ಫರ್ನಾಂಡಿಸ್ ಒಬ್ಬ ಡ್ರೈವರ್ ಮನೆಲೂ ಕುಡಿತ ಮಾತನಾಡೊ ಸರಳ ವ್ಯಕ್ತಿ” ಅಂತ ಟಿಪ್ಪಣಿ ಹಾಕಿದ್ರು. ಮುಂದೆ ಫರ್ನಾಂಡಿಸ್ ಲಂಕೇಶ್ ವಿರೋಧಿಸುತ್ತಿದ್ದ ಬಿ.ಜೆ.ಪಿಗೋಗಿ ರಕ್ಷಣಾ ಸಚಿವರಾದ್ರು. ಎಮರ್ಜೆನ್ಸಿಲಿ ತನ್ನನ್ನು ಕೊಲ್ಲಕ್ಕೆ ಅಂತ ಸಂಚುಮಾಡಿದ ಕಾಂಗ್ರೆಸ್‌ಗಿಂತ ಬಿ.ಜೆ.ಪಿನೆ ವಾಸಿ ಅಂತ ತೀರ್ಮಾನ ತಗಂಡ್ರು. ಆ ನಂತರ ಮೆಮೋರಿ ಕಳಕಂಡು ಹೆಚ್ಚುಕಮ್ಮಿ ಹನ್ನೆರಡೊರ್ಷ ಮಲಗಿದ್ರಲ್ಲಯ್ಯಾ. ಅದಮಾತ್ರ ನ್ಯನಿಸಿಗಳಕ್ಕಾಗದಿಲ್ಲ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

ರಾಮಣ್ಣನಿಗೆ ಮೊದಲ ಶಾಕ್ ಕೊಟ್ಟ ಸಾವು ಆಲನಳ್ಳಿದು. ಅವುಗ್ಯಲ್ಲಾರಿಗೂ ಅವನು ತುಂಟ ಹುಡುಗನಂತೆ ಕಂಡಿದ್ದ. ರಾಮಣ್ಣನಿಗಂತೂ ಅತ್ಮೀಯ ಜೀವ. ಕೃಷ್ಣ ಬರಿಯದನ್ಯಲ್ಲ ಬರದು ಬೇರೆ ಏನ್ನೋ ಹುಡಿಕ್ಕಂಡು ತಿರಗಂಗಾಗಿದ್ದ. ಬರವಣಿಗೇಲಿ ಮಾಡಿದ ಹೆಸರ್‌ನ ರಾಜಕಾರಣಕ್ಕೆ ಬಳಸಿಗಂಡು ಎಂಎಲ್ಲೆನೋ ಎಂಎಲ್ಸಿನೋ ಆಯ್ತಿನಿ ಅಂತಿದ್ದ. ಆದ್ರೆ ಮಾಡೋರ್ಯಾರು ರಾಜಕಾರಣಕ್ಕೆ ಬೇಕಾದ ತಾಳ್ಮೆನೆ ಇರಲಿಲ್ಲ. ಜಗಳಗಂಟ. ಆದ್ರು ಕನಸ ಹೊತ್ತಗಂಡ ತಿರಿಗನು. ಆಟೈಮಲ್ಲಿ ’ಸುಟ್ಟ ತಿಕದ ದೇವರು’ ಅಂತ ಲಂಕೇಶ್ ಪತ್ರಿಕೆಲಿ ಕಥೆ ಬರೆದಿದ್ದ, ಓದಿದ್ದೆ. ‘ಅರಗಿನ ಅರಮನೆ’ ಅಂತ ಕಾದಂಬರಿ ಶುರುಮಾಡಿದ್ದ. ಅದು ಅರ್ಧಕ್ಕೆ ನಿಂತೋಯ್ತು. ಪಾಪ ಸಾಯೋ ವಯಸಲ್ಲ. ಅರ್ಧಕ್ಕೆ ವಂಟೋದ. ನಮ್ಮ ರಾಮಣ್ಣ ಆಗ ಭಾರಿ ಘಾಸಿಯಾಗಿದ್ದ. ಜೊತೆಲಿ ಹುಟ್ಟಿದೋನೆ ತೀರಿಕಂಡ ಅನ್ನೋಂಗಾಗಿದ್ದ. ಆ ದುಃಖ ಮರಿಯಕ್ಕೆ ಆಲನಳ್ಳಿ ಮಗ ಪ್ರದ್ಯುಮ್ನ ಅಪ್ಪನ ಹೆಸರುಳಿಸೋ ಕತೆಗಾರಾಯ್ತನೆ ಅಂತಿದ್ದ. ಅಂಗಾದತೆ ಯಲ್ಲ. ಸಾವು ನ್ಯನಪಾಯ್ತವೆ, ಅಂಗೆ ಕೃಷ್ಣನ ಸಾವು ನ್ಯನಪಾಯ್ತು.

ಒಂದು ಸತಿ ಲಂಕೇಶ್ ನಮ್ಮ ಕೇಶವ ಮೂರ್ತಿ ಮನಿಗೆ ಬಂದಿದ್ರು. ಅದೇನು ವಿಶೇಷ ಅಲ್ಲ. ಮೈಸೂರಿಗೋಗುವಾಗ ಬಂದು ಹೋಗರು. ಆಗ ನಾನೂ ಹೋಗಿದ್ದೆ. ಊಟ ಮಾಡಿ ಹೊಂಟ ನಂತರ ಲಂಕೇಶ್ ಕಾರಿನ ಗೇರಾಕಿದ್ದ ನೋಡಿ “ಇದೇನ್ ಸಾರ್ ಹಿಂಗ್ ಗೇರಾಕಿದ್ರಿ, ಆ ತರ ಹಾಕಿದ್ರೆ ಗೇರೇರದಿಲ್ಲ” ಅಂದೆ. ಇನ್ನೋಂದ್ ಸತಿ ಹೆಚ್.ಎಲ್.ಕೆ, ಕೆ.ಎಂ. ಶ್ರೀನಿವಾಸ ಗೌಡ ನಮ್ಮ ಮನೆ ಟೆರೇಸ್ ಮ್ಯಾಲೆ ಸೇರಿದ್ದೋ. ಲಂಕೇಶ್ ಬರಿತಿದ್ದ ಚುಟುಕು ಕವನಕ್ಕೆ ನೀಲು ಅಂತ ಹೆಸರಾಯ್ಕಂಡು, ಅವಳು ಮಂಡ್ಯದೋಳು ಅನ್ನೋ ಸೂಚನೆ ಕೊಟ್ಟಿದ್ರು. ಆಗ ಮಂಡ್ಯಕ್ಕೆ ತುಂಬಾ ಬರೋರು. ಆದ್ರಿಂದ ನೀಲು ಮತ್ತೆ ಲಂಕೆಶ್ ಬಗ್ಗೆ ಕತೆ ಕಟ್ಟಿ ಮಾತಾಡೋರು.

“ಅದ ನಾನು ಕೇಳಿದ್ದೆ ಕಣಣ್ಣ. ಶಶಿಕುಮಾರ ಅನ್ನೋ ರಾಜಕಾರಣಿ “ನಿಮ್ಮ ಲಂಕೇಶ ನೀಲು ಅಂತ ದಲಿತರ ಹೆಣ್ಣಮಗಳ ಇಟ್ಟಗಂಡವುನೆ, ಮಂಡ್ಯದೋಳು. ಅವುಳೇನೋ ಕವನ ಪವನ ಬರಿತಳಂತೆ. ಒಂದಿನ ದಲಿತರಿಂದ್ಲೇ ಏಟು ಬೀಳ್ತವೆ ನೋಡು ಅಂತ ಹೆದರಿಸಿದ್ದ ಕಣಣ್ಣ”. ಅಂತ ಗಾಸಿಪ್ಪು ಕೇಳಕ್ಕೆ ಲಂಕೇಶ್‌ಗಿಷ್ಟ. ಗಾಸಿಪ್ ಹಬ್ಬಿಸದು ಎಂಜಾಯ್ ಮಾಡದು. ಈ ನೀಲು ಬಗ್ಗೆ ಅಂಗೆ ಮಾಡಿದ್ರು. ಕ್ರಮೇಣ ಜನಕ್ಕೆ ನೀಲು ಅಂದ್ರೆ ಲಂಕೇಶ್ ಅನ್ನದು ಗೊತ್ತಾಯ್ತು. ರಾಮಣ್ಣ ಲಂಕೇಶರ ಸಾಹಿತ್ಯ ಮೆಚ್ಚಿಗಂಡಿದ್ದ. ಆದ್ರೆ ವ್ಯಕ್ತಿತ್ವ ಒಪ್ಪಿಗಂಡಿರಲಿಲ್ಲ. ‘ಅವುನೊಂಥರ ಪ್ಯೂಡಲ್ ಗುಣದೋನು’ ಅಂತಿದ್ದ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ಕ್ರಮೇಣ ಲಂಕೇಶಿಂದ್ಲೂ ರಾಮಣ್ಣ ದೂರಾದ. ಕೆಲ ಹುಡುಗ್ರು ಲಂಕೇಶ್ ಪತ್ರಿಕೆ ಬಿಟ್ಟು ಈ ವಾರ ಅಂತ ಪತ್ರಿಕೆ ತಗುದ್ರು. ಅದರ ಚಂದಾ ಮಾಡಿಸದ್ರಿಂದ ಹಿಡಿದು, ಅದನ್ನು ಲಂಕೇಶ್ ಪತ್ರಿಕೆ ಎದುರಿಗೆ ನಿಲ್ಸಕ್ಕೆ ನೋಡಿದ. ಅಟೋತ್ತಿಗೆ ರವಿಕಾಂತೇ ಗೌಡನು ಬ್ಯಳದು ಲೇಖನ ಬರಿಯಂಗಾಗಿದ್ದ. ಈ ವಾರಗೆ ಅವುನೂ ಬರಿತಿದ್ದ. ಆದ್ರು ಅದು ಒಂದು ದನಿಯಾಗದೆ ಸ್ವರಗೋಯ್ತು. ರಾಮಣ್ಣನೂ ಸುಮ್ಮನಾದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...