Homeಕರ್ನಾಟಕಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

ಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

- Advertisement -
- Advertisement -

ಈ ಮೂರು ದಿನ ತಲೆಚಿಟ್ಟು ಹಿಡಿಯುವಂತೆ ಕಾಶ್ಮೀರ, 370ನೇ ವಿಧಿ ರದ್ದು ಮತ್ತು ಮೋದಿ-ಶಾಗಳ ಐತಿಹಾಸಿಕ ಸಾಧನೆಯ ಬಗ್ಗೆ ಕನ್ನಡದ ಎಲ್ಲ ಚಾನೆಲ್‍ಗಳೂ ವರದಿ, ವಿಶೇಷ ಕಾರ್ಯಕ್ರಮ ಮತ್ತು ಪ್ಯಾನೆಲ್ ಡಿಸ್ಕಸನ್‍ಗಳನ್ನು ನಡೆಸಲಿವೆ. 370ನೇ ವಿಧಿ ರದ್ದು ಎಂಬುದಂತೂ ಅವುಗಳ ಪಾಲಿಗೆ ಪಂಚಮಿಯ ಉಂಡಿ, ಲಾಡೂಗಳನ್ನು ಸವಿದಷ್ಟೇ ಸುಖ ತಂದಿತ್ತು.

ಈ ವಿಷಯವಾಗಿ ಮೊದಲಿನಿಂದಲೂ ಆಗಾಗ ಕಾಶ್ಮೀರ ವಿಷಯದ ಕುರಿತು ಕಾಟಾಚಾರದ ಚರ್ಚೆ ನಡೆಸುತ್ತಿರುವ ಬಂದಿರುವ ಸುವರ್ಣದ ಅಜಿತ್ ಹನುಮಕ್ಕನವರಂತೂ ಕಾಶ್ಮೀರ ಸಮಸ್ಯೆಯ ಆಳ ಅಗಲ ಬಲ್ಲ ಕನ್ನಡಿಗ ತಾವೊಬ್ಬರೇ ಎಂಬಂತೆ, ಚರ್ಚೆಗೆ ಕರೆಸಿಕೊಂಡವರ ಮಾತುಗಳನ್ನೂ ಆಲಿಸದೇ ಕಾಶ್ಮೀರದ ಪುರಾಣವನ್ನು ಪಠಿಸುತ್ತ ಹೋದರು. ಅಜಿತ್ ಜಾಗದಲ್ಲಿ ಸಂಸದ ತೇಜಸ್ವಿ ಸೂರ್ಯರಿದ್ದರೂ ಈ ಪರಿಯ ಸಮರ್ಥನೆ ಸಾಧ್ಯವಿರುತ್ತಿರಲಿಲ್ಲವೇನೋ?

ಪಬ್ಲಿಕ್‍ನ ಹಿರಿಯ ರಂಗನಾಥರು ಕೂಡ ವಾಸ್ತವದ ಕಡೆ ಕಣ್ಣು ಹಾಯಿಸಲು (ಅವರಿಗೆ ಕಾಶ್ಮೀರ ಸಮಸ್ಯೆಯ ತಳಮಟ್ಟದ ವಿವರ ಗೊತ್ತಿದ್ದರೂ!) ಮನಸ್ಸು ಮಾಡಲಿಲ್ಲ. ನೋಟು ರದ್ದತಿಯನ್ನು ಬೆಂಬಲಿಸಿ ಚಿಪ್ ಸಂಶೋಧನೆ ಮಾಡಿದ ಪರಿಯಲ್ಲೇ ಇದರ ಬೆಂಬಲಕ್ಕೂ ನಿಂತರು. ಟಿವಿ 9ನ ರಂಗನಾಥ ಭಾರದ್ವಾಜರಂತೂ ಧ್ವಜ ಹಿಡಿದು ಕುಣಿದಾಡುವುದೊಂದೇ ಬಾಕಿಯಿತ್ತು. ಬಿಟಿವಿ, ಪವರ್ ಟಿವಿ, ಟಿವಿ5…. ಎಲ್ಲದರಲ್ಲೂ ‘370 ರದ್ದತಿಯ ದೇಶಭಕ್ತಿಯದ್ದೇ ಭರಾಟೆ.

ಇದೆಲ್ಲದರ ನಡುವೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ರಾಜ್‍ನ್ಯೂಸ್‍ನ ಮಂಜುಳಾ ಮಾಸ್ತಿಕಟ್ಟೆಯವರೊಬ್ಬರೇ. ಅವರು ಕಾಶ್ಮೀರದ ಜನರ ಪ್ರಸ್ತುತ ಸಂಕಷ್ಟವನ್ನು ತೆರೆದಿಟ್ಟರಲ್ಲದೇ, ದೆಹಲಿ ಆಡಳಿತ ಕಾಶ್ಮೀರದ ಮೇಲೆ 70 ವರ್ಷಗಳಿಂದ ಎಸಗುತ್ತ ಬಂದಿರುವ ದೌರ್ಜನ್ಯವನ್ನು, ಈಗ ಅದನ್ನು ಮೀರಿಸುವಂತೆ ಬಿಜೆಪಿ-ಸಂಘ ಪರಿವಾರ ಕಾಶ್ಮೀರದ ಮೇಲೆ ಮಿಲಿಟರಿ ಆಡಳಿತವನ್ನು ಹೇರುತ್ತಿದೆ ಎಂಬುದನ್ನು ತಮ್ಮ ಪ್ರಶ್ನೆಗಳ ನಡು ನಡುವೆಯೇ ವಿವರಿಸುತ್ತ ಬಂದರು.

ದೇಶದ ಆರ್ಥಿಕತೆ ಎಕ್ಕ ಹಿಡಿದು ಹೋಗುತ್ತಿರುವಾಗ ಮತ್ತದೇ ಕಾಶ್ಮೀರ ಮತ್ತು ಪಾಕಿಸ್ತಾನವೇ ಇವರ ಬಂಡವಾಳವಾಯಿತೇ ಎಂಬ ಪ್ರಶ್ನೆಯನ್ನೂ ಈ ಚಾನೆಲ್‍ಗಳು ಕೇಳಿಕೊಳ್ಳಲಿಲ್ಲ. ಅಂದ ಹಾಗೆ ದೇಶದ ಆರ್ಥಿಕ ಸ್ಥಿತಿ ಸರಿಯಾಗಿಯೇ ಇದೆ ಎಂಬುದೇ ಅವುಗಳ ಅಭಿಪ್ರಾಯವೂ ಆಗಿದೆಯಲ್ಲ?

ಅಂದಂತೆ ಇದೇ ಚಾನೆಲ್‍ಗಳು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಯಾಕಾಗ್ತಿಲ್ಲ ಎಂಬ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ ಅನ್ನಲು ಆಗಲ್ಲ, ಆ ಬಗ್ಗೆ ಅವು ವರದಿ ಮಾಡುತ್ತಿವೆ. ಎಲ್ಲ ದೆಹಲಿಯಲ್ಲೇ ನಿರ್ಧಾರವಾಗುತ್ತೆ ಎಂಬುದನ್ನು ಪಾಸಿಟಿವ್ ಎಂಬಂತೆ ಅವು ಬಿಂಬಿಸುತ್ತಿರುವುದು ನಾಚಿಕೆಗೇಡು. ಹಾಗೆಯೇ, ಕೇಂದ್ರದ ಇಬ್ಬರು ಐಎಎಸ್‍ಗಳನ್ನು ಇಲ್ಲಿ ನೇಮಿಸಲಾಗುತ್ತಂತೆ, ಅವರು ಸರ್ಕಾರದ ಮೇಲೆ ಹದ್ದಿನ ಕಣ್ಣು ಇಡುತ್ತಾರಂತೆ, ಇದು ಚಾಣಕ್ಯನ ತಂತ್ರವಂತೆ! ಇದು ಕೂಡ ಚಾನೆಲ್‍ಗಳ ಪಾಲಿಗೆ ಪಾಸಿಟಿವ್ ನ್ಯೂಸ್! ಜನರನ್ನು ಅವು ಹಾಗೆ ದಾರಿ ತಪ್ಪಿಸುತ್ತಲೂ ಇವೆ.

ಜನರಿಂದ ಚುನಾಯಿತ ಸರ್ಕಾರವೊಂದರ ಮೇಲೆ ಅಧಿಕಾರಿಗಳ ಮೂಲಕ ನಿಯಂತ್ರಣ ಸಾಧಿಸುವುದು ಈ ದೇಶದ ಒಕ್ಕೂಟ ವ್ಯವಸ್ಥೆಗೇ ಮಾಡಿದ ದ್ರೋಹ ಎಂಬ ಅರಿವು ಇದ್ದೂ ಈ ಚಾನೆಲ್‍ಗಳು ‘ಚಾಣಕ್ಯ’ನ ಪರ ನಿಲ್ಲುತ್ತವೆ ಅಂದರೆ, ಇವುಗಳ ಮಾಲಿಕರು ಅವನ ಮುಂದೆ ಮಂಡಿಯೂರಿ ಕುಳಿತಿದ್ದಾರೆ ಎಂದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Ya,,,, absolutely u said it right,,, I always watch Raj news,,,,lts so humble channel,,& I really love the anchor Manjula,,,,& I watch NDTV India & NDTV that s it,, I don’t understand y people are mad about other godi media’s,,

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...