HomeUncategorizedನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

ನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

- Advertisement -
- Advertisement -

ಬಾಬ್ರಿ ಮಸೀದಿಯ ಧ್ವಂಸ ಒಂದು ರೀತಿಯ ‘ಹಿಂದೂತ್ವ’ದ ಉನ್ಮಾದತೆಯನ್ನು ಯುವಕರಲ್ಲಿ ತುಂಬಿದ್ದ ಸಂದರ್ಭ. ಅಂತಹ ಉನ್ಮಾದಿತರು ಆಗಸ್ಟ್ 15ರಂದು ಬಿಡುಗಡೆಗೊಂಡ ‘ರೋಜಾ’ ಸಿನಿಮಾವನ್ನು ಕಣ್ತುಂಬಿಕೊಂಡು ಬಂದು, ದೇಶಪ್ರೇಮದ ಮಾದರಿಯೊಂದನ್ನು ಹೃದಯಕ್ಕಿಳಿಸಿಕೊಂಡರು. ಅದರ ಪರಿಣಾಮವನ್ನು ಥಿಯೇಟರ್‍ಗಳಲ್ಲೇ ನೋಡಬಹುದಿತ್ತು! ದೇಶದ ಬಗ್ಗೆ ಪ್ರೇಮವಷ್ಟೇ ಆಗಿದ್ದರೆ, ಅದಕ್ಕಿಂತ ಒಳ್ಳೆಯ ಸಂಗತಿ ಇನ್ನೇನಿರಲು ಸಾಧ್ಯ? ಆದರೆ, ಅವರು ಕಾಶ್ಮೀರವನ್ನು ಕಣ್ತುಂಬಿಕೊಂಡ ರೀತಿಯಲ್ಲಿ ದೊಡ್ಡ ಸಮಸ್ಯೆಯಿತ್ತು. ಅದರ ಪ್ರಕಾರ ಕಾಶ್ಮೀರವೆಂದರೆ ಭಾರತವನ್ನು ದ್ವೇಷಿಸುವ ಭಯೋತ್ಪಾದಕರ ತಾಣ ಅಷ್ಟೇ.

ಸುಡುತ್ತಿರುವ ರಾಷ್ಟ್ರಧ್ವಜದ ಮೇಲೆ ಸಿನಿಮಾದ ಹೀರೊ ಅರವಿಂದ ಸ್ವಾಮಿ ಬಿದ್ದು, ತನ್ನ ಬಟ್ಟೆಗಳು ಸುಟ್ಟು ಜೀವಕ್ಕೆ ಅಪಾಯವಿದ್ದರೂ ಧ್ವಜವನ್ನು ರಕ್ಷಿಸುವ ಹೋರಾಟ. ಥಿಯೇಟರಿನಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಆಗ 14-20 ವಯಸ್ಸಿನವರಾಗಿದ್ದವರು ಈಗ 40-47 ವಯಸ್ಸಿನ ಅಜುಬಾಜಿನಲ್ಲಿದ್ದಾರೆ. ಥಿಯೇಟರಿನಲ್ಲಿ ‘ದೇಶಪ್ರೇಮ’ದ ದ್ಯೋತಕವಾಗಿ ಮೊಳಗಿದ್ದ ಘೋಷಣೆಗಳು ಈಗ ದೇಶವೆಂಬ ಥಿಯೇಟರಿನಲ್ಲಿ ಮೊಳಗುತ್ತಿವೆ. ಅದರ ಅರ್ಥವೂ ಸಾರೇ ಜಹಾಂಸೆ ಅಚ್ಛಾ, ಜನಗಣಮನ, ಹಿಂದ್ ದೇಶ್ ಕೇ ನಿವಾಸಿ ಥರದ ಗೀತೆಗಳಲ್ಲಿ ವ್ಯಕ್ತವಾದ ಭಾವಕ್ಕಿಂತ ಭಿನ್ನವಾಗಿದೆ.

***

370ನೇ ವಿಧಿ ರದ್ದಿನ ಕುರಿತು ತುಂಬ ಭಾವುಕರಾಗಿ, ರೋಮಾಂಚಿತರಾಗಿ ‘ಐತಿಹಾಸಿಕ ಕ್ರಮ’ ಎನ್ನುವ ಪೀಳಿಗೆಯ ಬಹುತೇಕರ ಪಾಲಿಗೆ ಕಾಶ್ಮೀರ ಸಮಸ್ಯೆ ಎಂದರೆ ಅಂದು ಮಣಿರತ್ನಂ ತೀರಾ ಜಾಳು ಜಾಳಾಗಿ, ಬಾಲಿಶವಾಗಿ ತೋರಿಸಿದ್ದ, ‘ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು’ ಅವರು ಯತ್ನಿಸುತ್ತಿದ್ದಾರೆ ಎಂಬುದಷ್ಟೇ. 1989ರಲ್ಲಿ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದಾಗ ಶಾಲೆ-ಕಾಲೇಜಿಗೆ ಹೋಗುತ್ತಿದ್ದವರು ಮುಂದೆ ಅಲ್ಲಿ ಉಗ್ರವಾದ ಮತ್ತು ಸೇನಾ ಕಾರ್ಯಾಚರಣೆಗಳ ಕಾರಣಕ್ಕೆ ಸರಿಯಾದ ವಿದ್ಯೆಯನ್ನೇ ಪಡೆಯಲಿಲ್ಲ. ದಿನವೂ ಅಘೋಷಿತ ಬಂದ್ ನೋಡಿಯೇ ಬೆಳೆದ ಅಂಥವರ ಬದುಕು ಈಗ ಸಂದಿಗ್ಧದಲ್ಲಿದೆ. ಆದರೆ ಕಾಶ್ಮೀರದಾಚೆಯ ಭಾರತದಲ್ಲಿರುವ ಯುವ ಸಮೂಹಕ್ಕೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕ ಹೆಮ್ಮೆಯಿದೆ!

‘ರೋಜಾ’ ಅಥವಾ ‘ಮಿಷನ್ ಕಾಶ್ಮೀರ್’- ಇಂತಹ ಜನಪ್ರಿಯ ಸಿನಿಮಾಗಳ ಅಪಾಯವಿರುವುದೇ ಇಲ್ಲಿ ಅನಿಸುತ್ತದೆ. ಪ್ರೇಮಕತೆಯ ಎಳೆ ಇಟ್ಟುಕೊಂಡು ಹೊರಡುವ ಮಣಿರತ್ನಂ, ‘ಕಾಶ್ಮೀರ ಪ್ರಕ್ಷುಬ್ದತೆ’ಯ ಹಿನ್ನೆಲೆಯಲ್ಲಿ ಪ್ರೇಮಕತೆ ಎಂದು ಪ್ರಚಾರ ಪಡೆದರು. ಆದರೆ, ಯಾವ ಗಂಭೀರ ಅಧ್ಯಯನವೂ ಇಲ್ಲದೇ ಅವರು ಹಸಿ ಹಸಿಯಾಗಿ ತೋರಿಸಿದ ಬ್ಯಾಕ್‍ಡ್ರಾಪ್ ಕತೆ ಮತ್ತು ಧ್ವಜ ಕಾಪಾಡುವ ಹೀರೊಯಿಸಂ- ಹಿಂದೂತ್ವದ ರಾಷ್ಟ್ರೀಯತೆಯ ರೂಪಕಗಳೇ ಆಗಿದ್ದವು. ಕಾಶ್ಮೀರವನ್ನು ಭಾರತದೊಡನೆ ಬೆಸೆಯಲು ಬೇಕಾದ ಪ್ರೇಮಕಥೆ ಅದಾಗಿರಲಿಲ್ಲ.

ಮಣಿರತ್ನಂ ತಮ್ಮ ‘ಬಾಂಬೆ’ಯಲ್ಲಿ ನ್ಯೂಟ್ರಲ್ ನೋಟ ಕೊಡಲು ಯತ್ನಿಸಿದ್ದರು. ನಂತರದ ‘ದಿಲ್ ಸೆ’ ಈಶಾನ್ಯ ಭಾರತದ ಸಂಕೀರ್ಣ ಸಮಸ್ಯೆಯನ್ನು ಒಂದು ಸರಳ ರೇಖಾತ್ಮಕ ನೆಲೆಯಲ್ಲಿ ತೋರಿಸಿತ್ತು.

ಕಾಶ್ಮೀರ ಮತ್ತು ಈಶಾನ್ಯ ಭಾರತದ ಕುರಿತು ಬೇರೆ ರೀತಿಯ ಮಾಹಿತಿ ಇಲ್ಲದವರಿಗೆ 370 ವಿಧಿ ರದ್ದು ಐತಿಹಾಸಿಕ ಅನಿಸಿರಲೇಬೇಕು… ಈ ನಡುವೆ 2002ರ ಭೀಕರ ಹತ್ಯಾಕಾಂಡ ಕೂಡ ‘ಅವರಿಗೆ’ ಕಲಿಸಿದ ಪಾಠ ಎಂದು ನಂಬಿಕೊಂಡು ಬಂದವರಿಗೆ ಕಾಶ್ಮೀರದ ವಿಭಜನೆ ಕೂಡ ಐತಿಹಾಸಿಕವೇ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿಯೇ ಇರಬೇಕು. ಅದರ ಇತಿಹಾಸ ಭಾರತದ ಉಳಿದ ಭಾಗಗಳ ಇತಿಹಾಸದ ಜೊತೆಗೆ ಹೊಂದಿಕೊಂಡಿದೆ. ಅದನ್ನು ಆಳಿದವರು ‘ಹಿಂದೂ ರಾಜ’ರು ಎಂಬ ಕಾರಣಕ್ಕೆ ಮಾತ್ರವಲ್ಲದೇ, ಅದರ ಜನಪ್ರಿಯ ನಾಯಕ ಷೇಕ್ ಅಬ್ದುಲ್ಲಾ ಸಹಾ ಸೆಕ್ಯುಲರ್ ಕಾಶ್ಮೀರವನ್ನೇ ಬಯಸಿದ್ದರು ಎಂಬುದನ್ನೂ ಮರೆಯಲಾಗದು. ಅಂತಹ ಕಾಶ್ಮೀರದ ಪ್ರತಿ ಪ್ರಜೆಯನ್ನೂ ಪ್ರೀತಿಯಿಂದ ಗೆಲ್ಲಬೇಕೆಂದರೆ, ಅವರ ಕುರಿತ ಪೂರ್ವಗ್ರಹಗಳನ್ನು ತೊರೆಯಬೇಕಿದೆ. ಇದ್ದುದರಲ್ಲಿ ರಾಜೀó ಗಡಿಯಾಚೆ ಮತ್ತು ಈಚೆಗಿನ ಜನರನ್ನು ಮನುಷ್ಯರನ್ನಾಗಿ ಚಿತ್ರಿಸುವ ಕೆಲಸ ಮಾಡಿದೆ.

****

ಹಿಂದೊಮ್ಮೆ ಇನ್ಪೋಸಿಸ್‍ನ ಎನ್.ಆರ್.ನಾರಾಯಣ ಮೂರ್ತಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈಗ ಸೇನೆಯನ್ನು ಬಳಸಿಕೊಂಡು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿಬಿಟ್ಟರೆ? ಬಹುಪಾಲು ಬೆಂಗಳೂರಿಗರು ಇದೊಂದು ಐತಿಹಾಸಿಕ ಕ್ರಮವೆಂದೇ ಕರೆಯುತ್ತಾರೆ. ಅನ್ಯ ರಾಜ್ಯಗಳ ಪಾಲಿಗೆ ಕೂಡ ಇದು ಐತಿಹಾಸಿಕವೇ ಆಗಿರುತ್ತದೆ.

ಆದರೆ, ಬೆಂಗಳೂರಲ್ಲಿರುವ ಮೂಲ ಕನ್ನಡಿಗರು ಮತ್ತು ಬೆಂಗಳೂರಾಚೆಗಿನ ಪ್ರದೇಶದಲ್ಲಿರುವ ಕನ್ನಡಿಗರ ಪಾಲಿಗೆ ಇದೊಂದು ಐತಿಹಾಸಿಕ ದ್ರೋಹ ಅನ್ನಿಸಿಯೇ ಅನ್ನಿಸುತ್ತದೆ, ಅನ್ನಿಸಲೇ ಬೇಕು….

ಈ ನೆಲೆಯಲ್ಲಿ ನಿಂತು ನೋಡಿದಾಗಲಷ್ಟೇ ಕನ್ನಡಿಗರಿಗೆ ಕಾಶ್ಮೀರದ ಜನರ ಸಂಕಟ ಅರ್ಥವಾದಿತೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...