Homeಮುಖಪುಟದೇಶ ಆರ್ಥಿಕ ಬಿಕ್ಕಟ್ಟಿಗೆ ಹೋಗುತ್ತಿದೆ ಎನ್ನಲು ಆಧಾರಗಳು ಬೇಕೆ?

ದೇಶ ಆರ್ಥಿಕ ಬಿಕ್ಕಟ್ಟಿಗೆ ಹೋಗುತ್ತಿದೆ ಎನ್ನಲು ಆಧಾರಗಳು ಬೇಕೆ?

- Advertisement -
- Advertisement -

ಬಹುಶಃ ಕೇಂದ್ರ ಸರ್ಕಾರದ ಸಮರ್ಥಕರೂ ಸಹ ದೇಶದ ಆರ್ಥಿಕತೆಯ ಸ್ಥಿತಿಗತಿ ಅದ್ಭುತವಾಗಿದೆ ಎಂದು ಹೇಳುತ್ತಿಲ್ಲ. ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣಕ್ಕೆ ನಿರುದ್ಯೋಗದ ದರ ಏರಿದೆ ಎಂಬ ಸುದ್ದಿ ಚುನಾವಣೆಗೆ ಮುಂಚೆಯೇ ಓಡಾಡುತ್ತಿತ್ತು. ಆದರೆ, ಅಧಿಕೃತವಾಗಿ ಸರ್ಕಾರದ ಅಂಕಿಅಂಶಗಳೇ ಅದನ್ನು ಖಾತರಿ ಪಡಿಸಿದ್ದು ಚುನಾವಣೆಯ ನಂತರ. ಕಳೆದ 20 ದಿನದಲ್ಲಿ ಆರ್ಥಿಕತೆಯ ದುಸ್ಥಿತಿಯ ಕುರಿತು ಹಲವು ಪತ್ರಿಕಾವರದಿಗಳು ಬರತೊಡಗಿದವು. ಅದರಲ್ಲೂ ಕಾಫಿ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡ ನಂತರವಂತೂ ಹಲವರು ಈ ಬಗ್ಗೆ ಮಾತನಾಡಲಾರಂಭಿಸಿದರು.

ಇಂದಿನ ರಾಜಕೀಯ ವಾತಾವರಣದಲ್ಲಿ ಅಭಿಪ್ರಾಯಗಳು ಒಂದೋ ಈ ಕಡೆಗೆ ಅಥವಾ ಆ ಕಡೆಗೆ ಎಂಬಂತಾಗಿದೆ. ಪ್ರತಿಯೊಬ್ಬರ ಅಭಿಪ್ರಾಯವನ್ನು ರಾಜಕೀಯ ಒಲವಿನ ಕನ್ನಡಕದಿಂದಲೇ ನೋಡಲಾಗುತ್ತದೆ. ಹೀಗಾಗಿ ದೇಶದ ಆರ್ಥಿಕತೆಯ ಕುರಿತು ನಾವು ಚರ್ಚಿಸಬೇಕೆಂದರೆ ವಸ್ತುಸ್ಥಿತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೋಡುವ ಅಗತ್ಯವಿದೆ. ಉದ್ದಿಮೆಪತಿಗಳ, ಆರ್ಥಿಕತಜ್ಞರ ಅನಿಸಿಕೆಗಳೂ ಮುಖ್ಯವೇ. ಆದರೆ ಅದಕ್ಕಿಂತಲೂ ಜನಸಾಮಾನ್ಯರ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತಿದೆ ಎಂಬುದು ಇನ್ನೂ ಮುಖ್ಯ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿರುವ ಪರಿಣಿತರಿಂದ ಸರಣಿ ಲೇಖನಗಳನ್ನು ‘ನ್ಯಾಯಪಥ’ ಪ್ರಕಟಿಸಲಿದೆ. ಆ ಸರಣಿಯಲ್ಲಿ ಮೊದಲ ಲೇಖನವನ್ನು ಡಾ.ಬಿ.ಸಿ.ಬಸವರಾಜು ಅವರು ಬರೆದಿದ್ದಾರೆ. ಉದ್ದಿಮೆ ಕ್ಷೇತ್ರ ಮತ್ತು ಒಟ್ಟಾರೆ ಆರ್ಥಿಕತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳನ್ನು ಬಹಳ ಸರಳವಾಗಿ ಅವರು ಮುಂದಿಟ್ಟಿದ್ದಾರೆ. ಓದುಗರೂ ಸಹ ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಕೋರುತ್ತೇವೆ.

“ಈಗ ದೇಶದಲ್ಲಿ ಬಹುತೇಕ ಸರಕುಗಳಿಗೆ ಬೇಡಿಕೆಯೇ ಇಲ್ಲ, ಯಾವ ವಲಯಕ್ಕೂ ಬಂಡವಾಳ ಹರಿದು ಬರ್ತಾ ಇಲ್ಲ. ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ಅನ್ನುವುದೇನು ಸ್ವರ್ಗದಿಂದ ಧುಮುಕಿಬಿಡುತ್ತಾ?” ಅಂತ ಬಜಾಜ್ ಕಂಪನಿಯ ಮುಖ್ಯಸ್ಥ ಎಂಬತ್ತೊಂದು ವರ್ಷದ ರಾಹುಲ್ ಬಜಾಜ್ ಮೊನ್ನೆ ಕೇಳಿದ್ದಾರೆ.

ರಾಹುಲ್ ಬಜಾಜ್

ಹೌದು, ಯಾವುದೇ ದೇಶದ ಆರ್ಥಿಕ ಅಭಿವೃದ್ಧಿ ಆಗಬೇಕೆಂದರೆ ಮುಖ್ಯವಾಗಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರಬೇಕು. ಆ ಹೆಚ್ಚಿನ ಬೇಡಿಕೆ ಪೂರೈಸಲು ವಿವಿಧ ವಲಯದ ಕೈಗಾರಿಕೆಗಳು ಮತ್ತು ಕಂಪನಿಗಳು ಹೆಚ್ಚೆಚ್ಚು ಉತ್ಪಾದನೆ ಮಾಡುತ್ತವೆ. ಹಾಗೆಯೇ ಇಲ್ಲಿಯ ಬೇಡಿಕೆಯನ್ನು ಕಂಡು ಇನ್ನೂ ಹೆಚ್ಚಿನ ಬಂಡವಾಳ ಹೂಡಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಮುಂದೆ ಬರುತ್ತವೆ. ಹೀಗೆ ಒಂದಕ್ಕೊಂದು ಪೂರಕವಾದ ಬೆಳವಣಿಗೆ ಒಟ್ಟಾರೆ ದೇಶದ ಉತ್ತಮ ಆರ್ಥಿಕ ಅಭಿವೃದ್ಧಿಯನ್ನು ಸಾಧ್ಯವಾಗಿಸುತ್ತದೆ.

ಆದರೆ, ರಾಹುಲ್ ಬಜಾಜ್ ಮೇಲೆ ಹೇಳಿರುವಂತೆ ಈಗ ಭಾರತದ ಆರ್ಥಿಕ ಪರಿಸ್ಥಿತಿ ಬಹಳ ಕಳವಳಕಾರಿಯಾಗಿದ್ದು, ಈ ಪರಿಸ್ಥಿತಿಯಿಂದ ಚೇತರಿಕೆ ಸದ್ಯದಲ್ಲಿ ಸುಲಭವಿಲ್ಲ ಎಂಬುದು ಅನೇಕ ಪರಿಣತರ ಅಭಿಪ್ರಾಯವಾಗಿದೆ.

ಈಗ ದೇಶದಲ್ಲಿ ಯಾವುದೇ ರೀತಿಯ ಸರಕುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂಬುದು ಮತ್ತು ಅದರಿಂದಾಗಿ ಹಲವು ಅಭಿವೃದ್ಧಿ ವಲಯಗಳ ಬೆಳವಣಿಗೆ ಆತಂಕಕಾರಿ ಅನಿಸುವಷ್ಟು ಕಡಿಮೆಯಾಗಿದೆ ಎನ್ನುವುದು ಈ ಕೆಳಗಿನ ಅಂಕಿಅಂಶಗಳನ್ನು ನೋಡಿದರೆ ಗೊತ್ತಾಗುತ್ತದೆ.

1. ಗ್ರಾಹಕ ಸರಕುಗಳ ಮಾರಾಟ ಗಣನೀಯವಾಗಿ ಕಡಿಮೆಯಾಗಿದ್ದು ಇದರಿಂದಾಗಿ ಗ್ರಾಹಕ ಸರಕು ತಯಾರಿಕಾ ಕಂಪನಿಗಳ ಬೆಳವಣಿಗೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಬೆಳವಣಿಗೆ ದರ ಕಳೆದ ವರ್ಷದ ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ 11% ಇದ್ದಿದ್ದು ಈಗ 2019 ರ ಮೊದಲ ತ್ರೈಮಾಸಿಕದಲ್ಲಿ 7% ಗೆ ಇಳಿದಿದೆ. ಹಾಗೆಯೇ ದೊಡ್ಡ ಕಂಪನಿಗಳಾದ ಐಟಿಸಿ ಮತ್ತು ಗೋದ್ರೆಜ್ ಕೂಡ ಈ ಬಾರಿ ಸಿಂಗಲ್ ಡಿಜಿಟ್ ಬೆಳವಣಿಗೆಯನ್ನಷ್ಟೇ ಸಾಧಿಸಿವೆ.

2. ಅದೇರೀತಿ ಅತೀ ಪ್ರಮುಖ ಆಟೋಮೊಬೈಲ್ ವಲಯ ಕೂಡ ಬೆಳವಣಿಗೆಯಲ್ಲಿ ಭಾರೀ ಕುಸಿತ ಕಂಡಿದೆ. ಐದು ಲಕ್ಷ ಪ್ಯಾಸೆಂಜರ್ ಗಾಡಿಗಳು ಮತ್ತು ಮೂವತ್ತು ಲಕ್ಷ ದ್ವಿಚಕ್ರ ವಾಹನಗಳು ( ಹಾಗೂ ಸಾವಿರಾರು ಟ್ರ್ಯಾಕ್ಟರುಗಳು, ಹೆವಿ ವಾಹನ ಇತ್ಯಾದಿ) ಮಾರಾಟವಾಗದೆ ಉಳಿದಿವೆ. ಮಾರುತಿ ಕಂಪನಿಯ ವ್ಯಾಪಾರವೊಂದೇ 30% ರಷ್ಟು ಕುಸಿತ ಕಂಡಿದೆ.

ಕಳೆದ ಜುಲೈನಲ್ಲಿ 11 ರಲ್ಲಿ 9 ಆಟೋಮೊಬೈಲ್ ಕಂಪನಿಗಳು ಮಾರಾಟದಲ್ಲಿ ಡಬಲ್ ಡಿಜಿಟ್ ಇಳಿಕೆ ಪ್ರಮಾಣ ದಾಖಲಿಸಿವೆ.
ಆಟೋಮೊಬೈಲ್ ಕಂಪನಿಗಳು ಈ ದೇಶದಲ್ಲಿ 37 ಮಿಲಿಯನ್‍ನಷ್ಟು ಜನರಿಗೆ ಉದ್ಯೋಗ ಒದಗಿಸಿದ್ದು ದೇಶದ ಒಟ್ಟು ಆದಾಯಕ್ಕೆ ಶೇ 7ರಷ್ಟು ಕೊಡುಗೆ ಸಲ್ಲಿಸುತ್ತಿವೆ.

ಆದರೆ, ಈಗಿನ ಪರಿಸ್ಥಿತಿಯಲ್ಲಿ ಈ ಕಂಪನಿಗಳು ಜಿಡಿಪಿಗೆ ಕೊಡುಗೆ ಕೊಡುವುದಿರಲಿ, ತಮ್ಮಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವುದೂ ಕಷ್ಟವಾಗಲಿದೆ. ಇದರಿಂದಾಗಿ ನಿರುದ್ಯೋಗ ಹೆಚ್ಚುವುದರ ಜೊತೆಗೆ ಜನರ ಕೊಳ್ಳುವ ಶಕ್ತಿ ಮತ್ತಷ್ಟು ಕಡಿಮೆಯಾಗಿ ಬೇಡಿಕೆ ಮತ್ತಷ್ಟು ಕುಸಿದು ಆರ್ಥಿಕ ಚೇತರಿಕೆ ಮತ್ತಷ್ಟು ಕಠಿಣವಾಗಲಿದೆ.

ಈಗಾಗಲೇ ಟಾಟಾ ಮೋಟಾರ್ಸ್‍ನವರು ಕುಸಿದ ಬೇಡಿಕೆಯಿಂದಾಗಿ ನಾಲ್ಕೈದು ಬಾರಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ತಲಾ ಹದಿನೈದು ದಿನಗಳಷ್ಟೇ ಉತ್ಪಾದನಾ ಕೆಲಸ ಮಾಡಿದೆ.

3. ಆಯಿಲ್ ಮತ್ತು ಗ್ಯಾಸ್, ಕಲ್ಲಿದ್ದಲು, ಸ್ಟೀಲ್, ಶಕ್ತಿ, ಸಿಮೆಂಟ್ ಮತ್ತು ಫರ್ಟಿಲೈಸರ್‍ನಂತಹ ಎಂಟು ಕೋರ್ ಇಂಡಸ್ಟ್ರಿಗಳು 2019 ರ ಜೂನ್ ತಿಂಗಳಿನಲ್ಲಿ ಕೇವಲ 0.2% ನಷ್ಟು ಮಾತ್ರ ಬೆಳವಣಿಗೆ ದಾಖಲಿಸಿವೆ. ಕಳೆದ ವರ್ಷದ ಜೂನ್‍ನಲ್ಲಿ ಇವುಗಳ ಬೆಳವಣಿಗೆ ದರ 8% ನಷ್ಟಿತ್ತು.

ದೇಶದ ಒಟ್ಟಾರೆ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (Index of industrial production)ನಲ್ಲಿ ಎಂಟು ಪ್ರಮುಖ ಇಂಡಸ್ಟ್ರಿಗಳ ವೇಯ್ಟೇಜ್ 40.27% ಇದೆ. ಇಷ್ಟು ವೇಯ್ಟೇಜ್ ಇರುವಂತಹ ಈ ಇಂಡಸ್ಟ್ರಿಗಳು ಒಟ್ಟಿಗೆ ಕೇವಲ 0.2% ಬೆಳವಣಿಗೆ ತೋರಿಸಿರುವುದು ಜೂನ್ ತಿಂಗಳಿನಲ್ಲಿ ಇಡೀ ಕೈಗಾರಿಕಾ ವಲಯದ ಉತ್ಪಾದನಯೇ ಅತಿ ಕಡಿಮೆಯಿರುವುದನ್ನು ಬಿಂಬಿಸುತ್ತಿದೆ.

ಹೀಗೆ ಅತ್ಯಂತ ಪ್ರಮುಖವಾದ ಗ್ರಾಹಕ ಸರಕು ಉತ್ಪಾದನಾ ವಲಯ, ಆಟೋಮೊಬೈಲ್ ವಲಯ ಮತ್ತು ಭಾರೀ ಕೈಗಾರಿಕಾ ವಲಯಗಳೆಲ್ಲದರ ಕುಂಠಿತ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಅನೇಕ ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕುವ ಇಲ್ಲವೇ ಹೊಸದಾಗಿ ಯಾರನ್ನೂ ಉದ್ಯೋಗಕ್ಕೆ ತೆಗೆದುಕೊಳ್ಳದಂತ ಕ್ರಮಗಳಿಗೆ ಕೈಹಾಕಲಿವೆ. ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತಷ್ಟು ಕುಸಿಯಲಿದ್ದು ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ.

ಈಗಾಗಲೇ ದೇಶಿಯ ಉಳಿತಾಯ ಅತಿಕಡಿಮೆ ಮಟ್ಟಕ್ಕೆ ತಲುಪಿದ್ದು 2008ಕ್ಕೆ ಹೋಲಿಸಿದರೆ 7% ಪಾಯಿಂಟುಗಳಷ್ಟು ಕಡಿಮೆಯಾಗಿದೆ. ಇದರಿಂದಾಗಿ ಸಾರ್ವಜನಿಕ ಬಂಡವಾಳ ಹೂಡಿಕೆಗೆ ಸರ್ಕಾರದ ಬಳಿ ಸಂಪನ್ಮೂಲದ ಕೊರತೆ ಎದುರಾಗಲಿದೆ. ಇವತ್ತು ಭಾರತದಲ್ಲಿ ಉದ್ಯೋಗದಲ್ಲಿ ತೊಡಗಿರುವವರ ಸಂಖ್ಯೆ ಅವರ ಮೇಲೆ ಅವಲಂಬಿತರಾಗಿರುವವರ ಸಂಖ್ಯೆಗಿಂತಲೂ ಜಾಸ್ತಿಯಿದೆ. ಈ ಅನುಕೂಲವಿದ್ದೂ ಕೂಡ ಒಟ್ಟಾರೆ ಸಾರ್ವಜನಿಕ ದೇಶೀಯ ಉಳಿತಾಯ ಕಡಿಮೆಯಿರುವುದು ದೇಶದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿರುವುದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿವೆ.

ಒಂದು ಕಡೆ ದೇಶೀಯ ಉಳಿತಾಯ ಕಡಿಮೆಯಾಗಿದೆ. ಇನ್ನೊಂದೆಡೆ ಮೊದಲ ತ್ರೈಮಾಸಿಕದಲ್ಲಿ ಒಟ್ಟು ತೆರಿಗೆ ಸಂಗ್ರಹ ಕೇವಲ 1.4% ರಷ್ಟು ಮಾತ್ರ ಬೆಳವಣಿಗೆಯಾಗಿದೆ. ಇದರಿಂದಾಗಿ ಇಡೀ ವರ್ಷದ ತೆರಿಗೆ ಸಂಗ್ರಹದ ಗುರಿ ಮುಟ್ಟಲು ಮುಂಬರುವ ಪ್ರತಿ ತ್ರಾಸಿಕದಲ್ಲಿ 23.3% ರಷ್ಟು ತೆರಿಗೆ ಸಂಗ್ರಹದ ಬೆಳವಣಿಗೆ ಸಾಧಿಸಬೇಕಿದ್ದು ಇದು ನಿಜಕ್ಕೂ ಕಷ್ಟಸಾಧ್ಯವಾದದ್ದಾಗಿದೆ.

ಜೊತೆಗೆ ಭಾರತದ ರಫ್ತಿನ ಸಾಮಥ್ರ್ಯ ಕೂಡ ಕಡಿಮೆಯಾಗಿದ್ದು ಇದು ವಿದೇಶಿ ವಿನಿಮಯದ ಮೇಲೆ ಬೀರುವ ನಕಾರಾತ್ಮಕ ಪರಿಣಾಮದಿಂದಾಗಿ ಕೈಗಾರೀಕರಣಕ್ಕೆ ಬೇಕಾಗುವ ಭಾರೀ ಬಂಡವಾಳ ಸರಕುಗಳನ್ನು ಹೊರಗಿನಿಂದ ತರಿಸಿಕೊಳ್ಳಲು ಕಷ್ಟವಾಗಿದ್ದು, ಇದು ಈಗಾಗಲೇ ನರಳುತ್ತಿರುವ ಕೈಗಾರಿಕಾ ವಲಯದ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರಲಿದೆ.

ಒಟ್ಟಾರೆಯಾಗಿ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ಪ್ರಸಕ್ತ ಸ್ಥಿತಿ ಮತ್ತು ದಿಕ್ಕನ್ನು ತೋರುವ ಯಾವುದೇ ದಿಕ್ಸೂಚಿಗಳನ್ನು (ಈ ಲೇಖನದಲ್ಲಿ ಕೆಲ ಪ್ರಮುಖ ದಿಕ್ಸೂಚಿಗಳನ್ನು ಮಾತ್ರ ಪರಿಗಣಿಸಲಾಗಿದೆ) ನೋಡಿದರೂ ದೇಶದ ಆರ್ಥಿಕತೆ ನಿರಾಶಾದಾಯಕವಾಗಿರುವುದನ್ನು ಬಿಂಬಿಸುತ್ತಿವೆ.

ಹೊಸ ಸರ್ಕಾರ ಬಂದ ಐವತ್ತು ದಿನಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿರುವವರು 12 ಲಕ್ಷ ಕೋಟಿಯಷ್ಟು ಬಂಡವಾಳ ಕಳೆದುಕೊಂಡಿರುವುದು ಕೂಡ ಆರ್ಥಿಕ ಹಿಂಜರಿಕೆಯನ್ನು ತೋರಿಸುತ್ತಿದೆ.

ಮೋಹನ್ ದಾಸ್ ಪೈ, ಕಿರಣ್ ಮುಜುಮ್‍ದಾರ್ ಷಾರಂತವರೂ ಕೂಡ ಕೇಂದ್ರದ ತೆರಿಗೆ ನೀತಿಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಮಾತಾಡತೊಡಗಿರುವುದು ಆರ್ಥಿಕ ಹಿನ್ನಡೆಯನ್ನು ಎತ್ತಿ ತೋರಿಸುತ್ತಿದೆ.

ಒಟ್ಟಿನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಕೈಹಾಕದಿದ್ದರೆ ರಾಹುಲ್ ಬಜಾಜ್ ಹೇಳಿದಂತೆ ಅಭಿವೃದ್ಧಿ ಸ್ವರ್ಗದಿಂದ ಉದುರುತ್ತದೆಂದು ಕಾಯುತ್ತಾ ಕೂರಬೇಕಾಗುತ್ತದೆ ಅಷ್ಟೆ. ಆದರೆ ಆ ಅವಧಿಯಲ್ಲಿ ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೇಶದಲ್ಲಿ ಆರ್ಥಿಕ ಸ್ಥಿತಿ ಕಷ್ಟದಲ್ಲಿ ಇದೆ. ಔದ್ಯೋಗಿಕ ಕ್ಷೇತ್ರದಲ್ಲಿ ಉತ್ಪಾದನೆ ಇಳಿದಿದೆ. ಕಾರಣ ಬೇಡಿಕೆ ಕಡಿಮೆ ಆಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ತೆರಿಗೆ ಸಂಗ್ರಹ ಕೂಡಾ ಕಡಿಮೆ ಆಗಿದೆ. ಇದಕ್ಕೆ ಕಾರಣ ಕಾರು, ಸ್ಕೂಟರ್, ಟಿವಿ ಫ್ರಿಡ್ಜ್ ಮುಂತಾದ ಕನ್ಸೂಮರ್ ಗೂಡ್ಸ್ ಗಳಿಗೆ ಬೇಡಿಕೆ ಕುಸಿದಿರುವುದು.
    ನಮ್ಮ ದೇಶದ ಆರ್ಥಿಕ ನೀತಿಗಳನ್ನು ಸರಿಪಡಿಸಲು ಇದು ಒಳ್ಳೆಯ ಬೆಳವಣಿಗೆ.
    ಕನ್ಸೂಮರ್ ಗೂಡ್ಸ್ ಗಳ ಉತ್ಪಾದನೆ ಪ್ರಧಾನವಾಗಿ ರಫ್ತು ಮಾಡುವ ಉದ್ದೇಶ ಕ್ಕೋಸ್ಕರ ಉಳಿಸಿಕೊಳ್ಳಬಹುದು. ಇದೀಗ ದೀರ್ಘಕಾಲಿಕ ಯೋಜನೆಗಳೆಡೆ ಬಂಡವಾಳ ಹೂಡಿಕೆ ಅಗತ್ಯ ಇದೆ. ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಗಮನ ನೀಡಬೇಕು. ಅಪಾರ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ. ನಗರೀಕರಣ ಕಡಿಮೆ ಆಗುತ್ತದೆ. ಹಳ್ಳಿಗಳು ಬದುಕುವಂತೆ ಮಾಡುವ ಅಗತ್ಯ ಇದೆ. ಅದೇ ಅಭಿವೃದ್ಧಿ.

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...