Homeಕರ್ನಾಟಕಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

ಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

- Advertisement -
- Advertisement -

ಈ ಮೂರು ದಿನ ತಲೆಚಿಟ್ಟು ಹಿಡಿಯುವಂತೆ ಕಾಶ್ಮೀರ, 370ನೇ ವಿಧಿ ರದ್ದು ಮತ್ತು ಮೋದಿ-ಶಾಗಳ ಐತಿಹಾಸಿಕ ಸಾಧನೆಯ ಬಗ್ಗೆ ಕನ್ನಡದ ಎಲ್ಲ ಚಾನೆಲ್‍ಗಳೂ ವರದಿ, ವಿಶೇಷ ಕಾರ್ಯಕ್ರಮ ಮತ್ತು ಪ್ಯಾನೆಲ್ ಡಿಸ್ಕಸನ್‍ಗಳನ್ನು ನಡೆಸಲಿವೆ. 370ನೇ ವಿಧಿ ರದ್ದು ಎಂಬುದಂತೂ ಅವುಗಳ ಪಾಲಿಗೆ ಪಂಚಮಿಯ ಉಂಡಿ, ಲಾಡೂಗಳನ್ನು ಸವಿದಷ್ಟೇ ಸುಖ ತಂದಿತ್ತು.

ಈ ವಿಷಯವಾಗಿ ಮೊದಲಿನಿಂದಲೂ ಆಗಾಗ ಕಾಶ್ಮೀರ ವಿಷಯದ ಕುರಿತು ಕಾಟಾಚಾರದ ಚರ್ಚೆ ನಡೆಸುತ್ತಿರುವ ಬಂದಿರುವ ಸುವರ್ಣದ ಅಜಿತ್ ಹನುಮಕ್ಕನವರಂತೂ ಕಾಶ್ಮೀರ ಸಮಸ್ಯೆಯ ಆಳ ಅಗಲ ಬಲ್ಲ ಕನ್ನಡಿಗ ತಾವೊಬ್ಬರೇ ಎಂಬಂತೆ, ಚರ್ಚೆಗೆ ಕರೆಸಿಕೊಂಡವರ ಮಾತುಗಳನ್ನೂ ಆಲಿಸದೇ ಕಾಶ್ಮೀರದ ಪುರಾಣವನ್ನು ಪಠಿಸುತ್ತ ಹೋದರು. ಅಜಿತ್ ಜಾಗದಲ್ಲಿ ಸಂಸದ ತೇಜಸ್ವಿ ಸೂರ್ಯರಿದ್ದರೂ ಈ ಪರಿಯ ಸಮರ್ಥನೆ ಸಾಧ್ಯವಿರುತ್ತಿರಲಿಲ್ಲವೇನೋ?

ಪಬ್ಲಿಕ್‍ನ ಹಿರಿಯ ರಂಗನಾಥರು ಕೂಡ ವಾಸ್ತವದ ಕಡೆ ಕಣ್ಣು ಹಾಯಿಸಲು (ಅವರಿಗೆ ಕಾಶ್ಮೀರ ಸಮಸ್ಯೆಯ ತಳಮಟ್ಟದ ವಿವರ ಗೊತ್ತಿದ್ದರೂ!) ಮನಸ್ಸು ಮಾಡಲಿಲ್ಲ. ನೋಟು ರದ್ದತಿಯನ್ನು ಬೆಂಬಲಿಸಿ ಚಿಪ್ ಸಂಶೋಧನೆ ಮಾಡಿದ ಪರಿಯಲ್ಲೇ ಇದರ ಬೆಂಬಲಕ್ಕೂ ನಿಂತರು. ಟಿವಿ 9ನ ರಂಗನಾಥ ಭಾರದ್ವಾಜರಂತೂ ಧ್ವಜ ಹಿಡಿದು ಕುಣಿದಾಡುವುದೊಂದೇ ಬಾಕಿಯಿತ್ತು. ಬಿಟಿವಿ, ಪವರ್ ಟಿವಿ, ಟಿವಿ5…. ಎಲ್ಲದರಲ್ಲೂ ‘370 ರದ್ದತಿಯ ದೇಶಭಕ್ತಿಯದ್ದೇ ಭರಾಟೆ.

ಇದೆಲ್ಲದರ ನಡುವೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ರಾಜ್‍ನ್ಯೂಸ್‍ನ ಮಂಜುಳಾ ಮಾಸ್ತಿಕಟ್ಟೆಯವರೊಬ್ಬರೇ. ಅವರು ಕಾಶ್ಮೀರದ ಜನರ ಪ್ರಸ್ತುತ ಸಂಕಷ್ಟವನ್ನು ತೆರೆದಿಟ್ಟರಲ್ಲದೇ, ದೆಹಲಿ ಆಡಳಿತ ಕಾಶ್ಮೀರದ ಮೇಲೆ 70 ವರ್ಷಗಳಿಂದ ಎಸಗುತ್ತ ಬಂದಿರುವ ದೌರ್ಜನ್ಯವನ್ನು, ಈಗ ಅದನ್ನು ಮೀರಿಸುವಂತೆ ಬಿಜೆಪಿ-ಸಂಘ ಪರಿವಾರ ಕಾಶ್ಮೀರದ ಮೇಲೆ ಮಿಲಿಟರಿ ಆಡಳಿತವನ್ನು ಹೇರುತ್ತಿದೆ ಎಂಬುದನ್ನು ತಮ್ಮ ಪ್ರಶ್ನೆಗಳ ನಡು ನಡುವೆಯೇ ವಿವರಿಸುತ್ತ ಬಂದರು.

ದೇಶದ ಆರ್ಥಿಕತೆ ಎಕ್ಕ ಹಿಡಿದು ಹೋಗುತ್ತಿರುವಾಗ ಮತ್ತದೇ ಕಾಶ್ಮೀರ ಮತ್ತು ಪಾಕಿಸ್ತಾನವೇ ಇವರ ಬಂಡವಾಳವಾಯಿತೇ ಎಂಬ ಪ್ರಶ್ನೆಯನ್ನೂ ಈ ಚಾನೆಲ್‍ಗಳು ಕೇಳಿಕೊಳ್ಳಲಿಲ್ಲ. ಅಂದ ಹಾಗೆ ದೇಶದ ಆರ್ಥಿಕ ಸ್ಥಿತಿ ಸರಿಯಾಗಿಯೇ ಇದೆ ಎಂಬುದೇ ಅವುಗಳ ಅಭಿಪ್ರಾಯವೂ ಆಗಿದೆಯಲ್ಲ?

ಅಂದಂತೆ ಇದೇ ಚಾನೆಲ್‍ಗಳು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಯಾಕಾಗ್ತಿಲ್ಲ ಎಂಬ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ ಅನ್ನಲು ಆಗಲ್ಲ, ಆ ಬಗ್ಗೆ ಅವು ವರದಿ ಮಾಡುತ್ತಿವೆ. ಎಲ್ಲ ದೆಹಲಿಯಲ್ಲೇ ನಿರ್ಧಾರವಾಗುತ್ತೆ ಎಂಬುದನ್ನು ಪಾಸಿಟಿವ್ ಎಂಬಂತೆ ಅವು ಬಿಂಬಿಸುತ್ತಿರುವುದು ನಾಚಿಕೆಗೇಡು. ಹಾಗೆಯೇ, ಕೇಂದ್ರದ ಇಬ್ಬರು ಐಎಎಸ್‍ಗಳನ್ನು ಇಲ್ಲಿ ನೇಮಿಸಲಾಗುತ್ತಂತೆ, ಅವರು ಸರ್ಕಾರದ ಮೇಲೆ ಹದ್ದಿನ ಕಣ್ಣು ಇಡುತ್ತಾರಂತೆ, ಇದು ಚಾಣಕ್ಯನ ತಂತ್ರವಂತೆ! ಇದು ಕೂಡ ಚಾನೆಲ್‍ಗಳ ಪಾಲಿಗೆ ಪಾಸಿಟಿವ್ ನ್ಯೂಸ್! ಜನರನ್ನು ಅವು ಹಾಗೆ ದಾರಿ ತಪ್ಪಿಸುತ್ತಲೂ ಇವೆ.

ಜನರಿಂದ ಚುನಾಯಿತ ಸರ್ಕಾರವೊಂದರ ಮೇಲೆ ಅಧಿಕಾರಿಗಳ ಮೂಲಕ ನಿಯಂತ್ರಣ ಸಾಧಿಸುವುದು ಈ ದೇಶದ ಒಕ್ಕೂಟ ವ್ಯವಸ್ಥೆಗೇ ಮಾಡಿದ ದ್ರೋಹ ಎಂಬ ಅರಿವು ಇದ್ದೂ ಈ ಚಾನೆಲ್‍ಗಳು ‘ಚಾಣಕ್ಯ’ನ ಪರ ನಿಲ್ಲುತ್ತವೆ ಅಂದರೆ, ಇವುಗಳ ಮಾಲಿಕರು ಅವನ ಮುಂದೆ ಮಂಡಿಯೂರಿ ಕುಳಿತಿದ್ದಾರೆ ಎಂದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Ya,,,, absolutely u said it right,,, I always watch Raj news,,,,lts so humble channel,,& I really love the anchor Manjula,,,,& I watch NDTV India & NDTV that s it,, I don’t understand y people are mad about other godi media’s,,

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...