Homeಕರ್ನಾಟಕಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

ಚಾನೆಲ್ ಚಿತ್ರಾನ್ನ: ಕಾಶ್ಮೀರದಲ್ಲಿ ಟೆರರಿಸಂ ಅಂತ್ಯಗೊಳಿಸಿದ ಚಾನೆಲ್ಸ್

- Advertisement -
- Advertisement -

ಈ ಮೂರು ದಿನ ತಲೆಚಿಟ್ಟು ಹಿಡಿಯುವಂತೆ ಕಾಶ್ಮೀರ, 370ನೇ ವಿಧಿ ರದ್ದು ಮತ್ತು ಮೋದಿ-ಶಾಗಳ ಐತಿಹಾಸಿಕ ಸಾಧನೆಯ ಬಗ್ಗೆ ಕನ್ನಡದ ಎಲ್ಲ ಚಾನೆಲ್‍ಗಳೂ ವರದಿ, ವಿಶೇಷ ಕಾರ್ಯಕ್ರಮ ಮತ್ತು ಪ್ಯಾನೆಲ್ ಡಿಸ್ಕಸನ್‍ಗಳನ್ನು ನಡೆಸಲಿವೆ. 370ನೇ ವಿಧಿ ರದ್ದು ಎಂಬುದಂತೂ ಅವುಗಳ ಪಾಲಿಗೆ ಪಂಚಮಿಯ ಉಂಡಿ, ಲಾಡೂಗಳನ್ನು ಸವಿದಷ್ಟೇ ಸುಖ ತಂದಿತ್ತು.

ಈ ವಿಷಯವಾಗಿ ಮೊದಲಿನಿಂದಲೂ ಆಗಾಗ ಕಾಶ್ಮೀರ ವಿಷಯದ ಕುರಿತು ಕಾಟಾಚಾರದ ಚರ್ಚೆ ನಡೆಸುತ್ತಿರುವ ಬಂದಿರುವ ಸುವರ್ಣದ ಅಜಿತ್ ಹನುಮಕ್ಕನವರಂತೂ ಕಾಶ್ಮೀರ ಸಮಸ್ಯೆಯ ಆಳ ಅಗಲ ಬಲ್ಲ ಕನ್ನಡಿಗ ತಾವೊಬ್ಬರೇ ಎಂಬಂತೆ, ಚರ್ಚೆಗೆ ಕರೆಸಿಕೊಂಡವರ ಮಾತುಗಳನ್ನೂ ಆಲಿಸದೇ ಕಾಶ್ಮೀರದ ಪುರಾಣವನ್ನು ಪಠಿಸುತ್ತ ಹೋದರು. ಅಜಿತ್ ಜಾಗದಲ್ಲಿ ಸಂಸದ ತೇಜಸ್ವಿ ಸೂರ್ಯರಿದ್ದರೂ ಈ ಪರಿಯ ಸಮರ್ಥನೆ ಸಾಧ್ಯವಿರುತ್ತಿರಲಿಲ್ಲವೇನೋ?

ಪಬ್ಲಿಕ್‍ನ ಹಿರಿಯ ರಂಗನಾಥರು ಕೂಡ ವಾಸ್ತವದ ಕಡೆ ಕಣ್ಣು ಹಾಯಿಸಲು (ಅವರಿಗೆ ಕಾಶ್ಮೀರ ಸಮಸ್ಯೆಯ ತಳಮಟ್ಟದ ವಿವರ ಗೊತ್ತಿದ್ದರೂ!) ಮನಸ್ಸು ಮಾಡಲಿಲ್ಲ. ನೋಟು ರದ್ದತಿಯನ್ನು ಬೆಂಬಲಿಸಿ ಚಿಪ್ ಸಂಶೋಧನೆ ಮಾಡಿದ ಪರಿಯಲ್ಲೇ ಇದರ ಬೆಂಬಲಕ್ಕೂ ನಿಂತರು. ಟಿವಿ 9ನ ರಂಗನಾಥ ಭಾರದ್ವಾಜರಂತೂ ಧ್ವಜ ಹಿಡಿದು ಕುಣಿದಾಡುವುದೊಂದೇ ಬಾಕಿಯಿತ್ತು. ಬಿಟಿವಿ, ಪವರ್ ಟಿವಿ, ಟಿವಿ5…. ಎಲ್ಲದರಲ್ಲೂ ‘370 ರದ್ದತಿಯ ದೇಶಭಕ್ತಿಯದ್ದೇ ಭರಾಟೆ.

ಇದೆಲ್ಲದರ ನಡುವೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ರಾಜ್‍ನ್ಯೂಸ್‍ನ ಮಂಜುಳಾ ಮಾಸ್ತಿಕಟ್ಟೆಯವರೊಬ್ಬರೇ. ಅವರು ಕಾಶ್ಮೀರದ ಜನರ ಪ್ರಸ್ತುತ ಸಂಕಷ್ಟವನ್ನು ತೆರೆದಿಟ್ಟರಲ್ಲದೇ, ದೆಹಲಿ ಆಡಳಿತ ಕಾಶ್ಮೀರದ ಮೇಲೆ 70 ವರ್ಷಗಳಿಂದ ಎಸಗುತ್ತ ಬಂದಿರುವ ದೌರ್ಜನ್ಯವನ್ನು, ಈಗ ಅದನ್ನು ಮೀರಿಸುವಂತೆ ಬಿಜೆಪಿ-ಸಂಘ ಪರಿವಾರ ಕಾಶ್ಮೀರದ ಮೇಲೆ ಮಿಲಿಟರಿ ಆಡಳಿತವನ್ನು ಹೇರುತ್ತಿದೆ ಎಂಬುದನ್ನು ತಮ್ಮ ಪ್ರಶ್ನೆಗಳ ನಡು ನಡುವೆಯೇ ವಿವರಿಸುತ್ತ ಬಂದರು.

ದೇಶದ ಆರ್ಥಿಕತೆ ಎಕ್ಕ ಹಿಡಿದು ಹೋಗುತ್ತಿರುವಾಗ ಮತ್ತದೇ ಕಾಶ್ಮೀರ ಮತ್ತು ಪಾಕಿಸ್ತಾನವೇ ಇವರ ಬಂಡವಾಳವಾಯಿತೇ ಎಂಬ ಪ್ರಶ್ನೆಯನ್ನೂ ಈ ಚಾನೆಲ್‍ಗಳು ಕೇಳಿಕೊಳ್ಳಲಿಲ್ಲ. ಅಂದ ಹಾಗೆ ದೇಶದ ಆರ್ಥಿಕ ಸ್ಥಿತಿ ಸರಿಯಾಗಿಯೇ ಇದೆ ಎಂಬುದೇ ಅವುಗಳ ಅಭಿಪ್ರಾಯವೂ ಆಗಿದೆಯಲ್ಲ?

ಅಂದಂತೆ ಇದೇ ಚಾನೆಲ್‍ಗಳು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಯಾಕಾಗ್ತಿಲ್ಲ ಎಂಬ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ ಅನ್ನಲು ಆಗಲ್ಲ, ಆ ಬಗ್ಗೆ ಅವು ವರದಿ ಮಾಡುತ್ತಿವೆ. ಎಲ್ಲ ದೆಹಲಿಯಲ್ಲೇ ನಿರ್ಧಾರವಾಗುತ್ತೆ ಎಂಬುದನ್ನು ಪಾಸಿಟಿವ್ ಎಂಬಂತೆ ಅವು ಬಿಂಬಿಸುತ್ತಿರುವುದು ನಾಚಿಕೆಗೇಡು. ಹಾಗೆಯೇ, ಕೇಂದ್ರದ ಇಬ್ಬರು ಐಎಎಸ್‍ಗಳನ್ನು ಇಲ್ಲಿ ನೇಮಿಸಲಾಗುತ್ತಂತೆ, ಅವರು ಸರ್ಕಾರದ ಮೇಲೆ ಹದ್ದಿನ ಕಣ್ಣು ಇಡುತ್ತಾರಂತೆ, ಇದು ಚಾಣಕ್ಯನ ತಂತ್ರವಂತೆ! ಇದು ಕೂಡ ಚಾನೆಲ್‍ಗಳ ಪಾಲಿಗೆ ಪಾಸಿಟಿವ್ ನ್ಯೂಸ್! ಜನರನ್ನು ಅವು ಹಾಗೆ ದಾರಿ ತಪ್ಪಿಸುತ್ತಲೂ ಇವೆ.

ಜನರಿಂದ ಚುನಾಯಿತ ಸರ್ಕಾರವೊಂದರ ಮೇಲೆ ಅಧಿಕಾರಿಗಳ ಮೂಲಕ ನಿಯಂತ್ರಣ ಸಾಧಿಸುವುದು ಈ ದೇಶದ ಒಕ್ಕೂಟ ವ್ಯವಸ್ಥೆಗೇ ಮಾಡಿದ ದ್ರೋಹ ಎಂಬ ಅರಿವು ಇದ್ದೂ ಈ ಚಾನೆಲ್‍ಗಳು ‘ಚಾಣಕ್ಯ’ನ ಪರ ನಿಲ್ಲುತ್ತವೆ ಅಂದರೆ, ಇವುಗಳ ಮಾಲಿಕರು ಅವನ ಮುಂದೆ ಮಂಡಿಯೂರಿ ಕುಳಿತಿದ್ದಾರೆ ಎಂದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Ya,,,, absolutely u said it right,,, I always watch Raj news,,,,lts so humble channel,,& I really love the anchor Manjula,,,,& I watch NDTV India & NDTV that s it,, I don’t understand y people are mad about other godi media’s,,

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...