Homeಕರ್ನಾಟಕನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ಪಟ್ಟಾಭಿರಾಮ ಸೋಮಯಾಜಿಯವರು "ನನಗೆ ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ" ಎಂದಿದ್ದರು.

- Advertisement -
- Advertisement -

ಪಟ್ಟಾಭಿ ನಮ್ಮನ್ನಗಲಿ ಅವರ ದೇಹ ಬೂದಿಯಾಗಿಯೂ ಆಯಿತು. ಒಂದು ಕಾಲದಲ್ಲಿ ಚಳವಳಿಗಳಲ್ಲಿ ಒಡನಾಡಿಯಾಗಿದ್ದರೂ ಕಳೆದೆರಡು ವರ್ಷಗಳಿಂದ ಸಂಪರ್ಕವೂ ಇರಲಿಲ್ಲ. ಸಂಪರ್ಕವಿರದ ಕಾಲಕ್ಕಾಗಲೀ, ಅವರು ಅಗಲಿದ ಈ ಹೊತ್ತಿಗಾಗಲೀ ಸಂಪರ್ಕವಿಟ್ಟುಕೊಂಡಿರಲಿಲ್ಲ ಎಂಬ ಖೇದ ನನಗಂತೂ ಇಲ್ಲ. ಅವರು ಯಾರನ್ನೂ ಮನಸ್ಸಿಗೆ ಹಚ್ಚಿಕೊಂಡು ಗೆಳೆತನವಿಟ್ಟುಕೊಂಡವರಲ್ಲ. ಹಾಗಿರುವಾಗ ಆತ್ಮೀಯತೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಅಷ್ಟೆ. ಆದರೆ ನಮಗೆ ಒಡನಾಟವಿದ್ದ ಕಾಲದಲ್ಲಿ ಅವರ ಕೋಮುವಾದ ವಿರೋಧೀ ಹೋರಾಟದ ಕಾರಣಕ್ಕಾಗಿ ಅವರ ಉದ್ಯೋಗಕ್ಕೆ ಕುತ್ತು ಬಂದಾಗ ಅವರ ಪರವಾಗಿ ನಾವು ಎರಡೆರಡು ಬಾರಿ ಮಂಗಳೂರು ಯುನಿವರ್ಸಿಟಿಯ ಕುಲಪತಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಒಮ್ಮೆಯಂತೂ ಆಗಿನ ಕುಲಪತಿ‌ ಟಿ.ಸಿ.ಶಿವಶಂಕರ ಮೂರ್ತಿಗೆ ನನ್ನ ಕಟುವಾದ ಮಾತಿನಿಂದ ಸಿಟ್ಟು ಬಂದು ನನ್ನ ಮೇಲೆ ರೇಗಿದ್ದರು.

ಎರಡು ವರ್ಷಗಳ ಹಿಂದೊಮ್ಮೆ ಕರೆಮಾಡಿ, ‘ಜಿ.ರಾಜಶೇಖರ್ ಕುರಿತು ಒಂದು ಪುಸ್ತಕ ತರಬೇಕಿದೆ. ನೀವು ಅವರ ಕುರಿತು ಬರೆದ ಲೇಖನ ಓದಿದೆ, ಚೆನ್ನಾಗಿತ್ತು, ಸ್ವಲ್ಪ ವಿಸ್ತರಿಸಿ ಕೊಡಿ’ ಎಂದು ಕೇಳಿದ್ದರು. ನನ್ನದಾದರೋ ಒಮ್ಮೆ ಬರೆದ ಬಳಿಕ ಅದರಿಂದ ಕಳಚಿಬಿಡುವ ಅಭ್ಯಾಸ. ಅದನ್ನು ಪುನಃ ಬರೆದು ಕೊಡಿ ಎಂದು ಯಾರಾದರೂ ಒಮ್ಮೆ ಅಪೇಕ್ಷಿಸಿದರೆ ನಾನು ಈ ವರೆಗೆ ಯಾರಿಗೂ ಯಾವ ಬರಹವನ್ನು ಕೊಟ್ಟದ್ದಿಲ್ಲ. ಮೂರು ಬಾರಿ ಕೇಳಿದರೆ ಅವರ ಸೀರಿಯಸ್ಸಾಗಿಯೇ ಕೇಳುತ್ತಿದ್ದಾರೆ ಎಂದು ಭಾವಿಸುತ್ತೇನೆ. ಆಗ ಅದನ್ನು ಹುಡುಕಿ ಹಿಗ್ಗಿಸಿಯೋ, ಕುಗ್ಗಿಸಿಯೋ ಕೊಡುತ್ತೇನೆ. ಪಟ್ಟಾಭಿಯವರಲ್ಲಿ ಒಬ್ಬನಿಗೆ ಪದೇ ಪದೇ ಕರೆ ಮಾಡಿ ಅಂಗಲಾಚುವ ಸ್ವಭಾವ ಬಿಲ್ಕುಲ್ ಇರಲಿಲ್ಲ. ಅಂತಹ ಸ್ವಭಾವವನ್ನು ಅವರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ಬಿಗಿ ವ್ಯಕ್ತಿತ್ವ ಅವರದ್ದು.

ಪಟ್ಟಾಭಿ ನನಗಂತಲ್ಲ.. ಅವರ ಹೆಚ್ಚಿನೆಲ್ಲಾ ಒಡನಾಡಿಗಳಿಗೆ ಅರ್ಥವಾಗದ ಒಗಟು. ಒಂಥರಾ ಅಂತರ್ಮುಖಿ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕಾದುದನ್ನು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ನನಗೆ ತಿಳಿದಂತೆ ಮಂಗಳೂರಿನಲ್ಲಿ ಸಹೋದ್ಯೋಗಿಗಳ ಹೊರತುಪಡಿಸಿ ಅವರ ಹೆಚ್ಚಿನೆಲ್ಲಾ ಸಂಪರ್ಕ ಮುಸ್ಲಿಮರ ಜೊತೆಗೇ ಇದ್ದದ್ದು. ಕೋಮುವಾದದ ಪ್ರಬಲ ಶತ್ರುವಾಗಿದ್ದ ಪಟ್ಟಾಭಿ ಆ ವಿಚಾರದಲ್ಲಿ ನೆಹರೂ ಅವರ ಸೈದ್ಧಾಂತಿಕ ಧಾರೆಯವರು. ಅವರು ಬಹುಸಂಖ್ಯಾತ ಕೋಮುವಾದವನ್ನು ವಿರೋಧಿಸಿದಷ್ಟು ಅಲ್ಪಸಂಖ್ಯಾತ ಕೋಮುವಾದದ ವಿರುದ್ಧ ಮಾತನಾಡಿಲ್ಲ. ನೆಹರೂ ಹೇಳುವ ಪ್ರಕಾರ “ಅಲ್ಪಸಂಖ್ಯಾತ ಕೋಮುವಾದ ಸ್ವತಃ ಆ ಸಮುದಾಯಕ್ಕೆ ಮಾರಕ, ಬಹುಸಂಖ್ಯಾತ ಕೋಮುವಾದ ದೇಶಕ್ಕೆ ಮಾರಕ”. ಆದುದರಿಂದಲೋ ಏನೋ ಪಟ್ಟಾಭಿ ಬಹುಸಂಖ್ಯಾತ ಕೋಮುವಾದದ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದರು.

ಸರಕಾರಿ ಉದ್ಯೋಗಿಯಾಗಿಯೂ ಸರಕಾರದ ವಿರುದ್ಧ ಮಾತನಾಡುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದರು. ಪಟ್ಟಾಭಿಯವರಲ್ಲಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವೊಂದಿತ್ತು. “ನಾನು ಮಾತನಾಡುವುದು ಅಧಿಕಾರದಲ್ಲಿ ಕೂತ ವ್ಯಕ್ತಿಯ ಸ್ವಜನ ಪಕ್ಷಪಾತ, ಕೋಮುವಾದ, ಕೆಡುಕು ಇವುಗಳ ವಿರುದ್ಧವೇ ಹೊರತು ಸರಕಾರ ಎಂಬ ಸಂಸ್ಥೆಯ ವಿರುದ್ಧವಲ್ಲ. ನನಗೆ ಅವರ್ಯಾರೂ ತಮ್ಮ ಜೇಬಿನಿಂದ ಸಂಬಳ ಕೊಡುವುದಲ್ಲ. ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ” ಎಂದಿದ್ದರು. ನೋಟೀಸುಗಳ ಮೇಲೆ ನೋಟೀಸು ಹೋದರೂ, ವರ್ಗಾವಣೆಯಾದರೂ, ಅಮಾನತ್ತಾದರೂ ಅವರು ತನ್ನ ವ್ಯವಸ್ಥೆಯ ವಿರೋಧೀ ಮನೋಧರ್ಮವನ್ನು ತ್ಯಜಿಸಲೇ ಇಲ್ಲ.

ಪಟ್ಟಾಭಿ ಅಪ್ಪಟ ಗಾಂಧಿವಾದಿ. ಗಾಂಧಿವಾದವೆಂದರೆ ಗಾಂಧೀಜಿಯ ಉಡುಪಲ್ಲ, ಗಾಂಧೀಜಿಯ ಧಾರ್ಮಿಕ ವಿಶ್ವಾಸವೂ ಅಲ್ಲ, ಗಾಂಧೀಜಿಯ ಆಹಾರ ಶೈಲಿಯೂ ಅಲ್ಲ. ಗಾಂಧೀಜಿ ದೇಶದ ಹಿತಕ್ಕಾಗಿ ಆಯ್ದುಕೊಂಡ ಹೋರಾಟದ ದಾರಿ. ಪಟ್ಟಾಭಿ ಶಾಸ್ತ್ರೋಕ್ತವಾಗಿ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಮದುವೆಯಾದಾಗ ಅವರ ಹಲವು ಒಡನಾಡಿಗಳೇ ಅವರನ್ನು ವಿಮರ್ಶಿಸಿದರು. ಅದನ್ನು ಕೆಲವು ಎಡಬಿಡಂಗಿತನವೆಂದರು. ಪಟ್ಟಾಭಿ ಯಾರಿಗೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆಗ ನಾನು ಪಟ್ಟಾಭಿಯನ್ನು ಹೀಗೆ ಅರ್ಥೈಸಿದ್ದೆ. “ಪಟ್ಟಾಭಿ ಧಾರ್ಮಿಕ ವಿಧಿ ವಿಧಾನಗಳನುಸಾರ ಮದುವೆಯಾದರೆ ತಪ್ಪೇನು? ಅವರೆಲ್ಲಾದರೂ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಟೀಕಿಸಿದ್ದಾರಾ..? ಖಂಡಿತಾ ಇಲ್ಲವಲ್ಲಾ. ಅವರು ವಿರೋಧಿಸಿದ್ದು ಹಿಂದೂಯಿಸಂನ ಹೆಸರಲ್ಲಿ ನಡೆಯುತ್ತಿದ್ದ ಬರ್ಬರತೆಯನ್ನು ಮಾತ್ರವಲ್ಲವೇ..?”
ಅವರು ಮದುವೆಯ ಹೊರತಾಗಿ ವೈಯಕ್ತಿಕವಾಗಿಯೂ ಧಾರ್ಮಿಕ ಆಚರಣೆಗಳನ್ನು ಆಚರಿಸಿದ್ದನ್ನು ಹತ್ತು ವರ್ಷಗಳ ಕಾಲದ ಅವರ ಜೊತೆಗಿನ ಒಡನಾಟದಲ್ಲಿ ಕಂಡಿಲ್ಲ. ಅವರಿಗೆ ಗಾಂಧಿಯ ಬಗ್ಗೆ ಇದ್ದ ಒಲವು ಅಪಾರವಾದುದು. ಭಾರತದ ಸಂಕಟಗಳಿಗೆ ಗಾಂಧಿ ಮಾರ್ಗದಲ್ಲಿ ಪರಿಹಾರ ಕಾಣಬಹುದೆಂದು ಅವರು ನಂಬಿದ್ದರು. ಅವರು ಗಾಂಧಿ ಕುರಿತು ತನ್ನ ಕಾಲೇಜಿನಲ್ಲಿ ಪ್ರತೀ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಕೂಡಾ.

ಓರ್ವ ವ್ಯಕ್ತಿಯ ವ್ಯಕ್ತಿತ್ವದ ದೋಷಗಳನ್ನು ಇಟ್ಟುಕೊಂಡು ಆತ ಸರಿಯಿಲ್ಲ ಎನ್ನುವುದನ್ನು ನಾನಂತೂ ಒಪ್ಪಲಾರೆ. ಆತನಿಂದ ಸಮಾಜಕ್ಕೆ ಹಾನಿಯಾಗದಿದ್ದರಾಯಿತು ಅಷ್ಟೇ. ಹಾಗೆ ಯಾರ ವ್ಯಕ್ತಿತ್ವದಲ್ಲಿ ದೋಷವಿಲ್ಲ ಹೇಳಿ..? ದಿ‌ ಪರ್ಫೆಕ್ಟ್ ಮ್ಯಾನ್ ಎಂದು ಯಾರಿದ್ದಾರೆ..? ಪಟ್ಟಾಭಿ ಕೋಮುವಾದದ ವಿರುದ್ಧ ಯಾವ ನಿಲುವುಗಳನ್ನು ತಾಳಬೇಕಿತ್ತೋ ಆ ನಿಲುವುಗಳನ್ನು ಸದಾ ತಾಳಿದ್ದಾರೆ. ಅವರು ಅಂತಹ ಸಂದರ್ಭಗಳಲ್ಲಿ ಯಾವತ್ತೂ ತನ್ನ ಉದ್ಯೋಗ ಭದ್ರತೆಯ ಕುರಿತು ಯೋಚಿಸಿಲ್ಲ.

ನನ್ನ ತಂಗಿ ಪಟ್ಟಾಭಿಯವರ ವಿದ್ಯಾರ್ಥಿನಿಯಾಗಿದ್ದಳು. ಅವಳು ಹೇಳುವ ಪ್ರಕಾರ ಮತ್ತು ಅವರ ಇತರ ವಿದ್ಯಾರ್ಥಿಗಳು ಹೇಳುವ ಪ್ರಕಾರ ಪಟ್ಟಾಭಿ ಓರ್ವ ಅದ್ಭುತ ಅಧ್ಯಾಪಕ. ಅಕಾಡೆಮಿಕ್ ಆಗಿ ಅವರ ಮೇಲೆ ಬೆರಳು ತೋರಿಸುವ ಅರ್ಹತೆ ಇದ್ದ ಇನ್ನೊಬ್ಬ ಅಧ್ಯಾಪಕ ಇಡೀ ಮಂಗಳೂರು ಯುನಿವರ್ಸಿಟಿಯಲ್ಲಿರಲಿಲ್ಲ. ಹಾಗೆ ಯಾರೂ ಅವರ ವಿರುದ್ಧ ದೂರಿದ್ದು ನನಗಂತೂ ಗೊತ್ತಿಲ್ಲ. ಅವರು ತನ್ನ ಸೈದ್ಧಾಂತಿಕ ಒಲವು ನಿಲುವುಗಳನ್ನು ಕ್ಯಾಂಪಸ್ ಒಳಗೆ ತೋರಿಸಿದ್ದೇ ಇಲ್ಲ. ತರಗತಿಯಲ್ಲಿ ಏನು ಪಾಠ ಮಾಡಬೇಕೋ ಅದನ್ನು ಮಾತ್ರ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಅಧ್ಯಾಪಕರಾದುದರಿಂದ ಶೇಕ್ಸ್ ಪಿಯರ್, ಬ್ರೆಕ್ಟ್ ಮುಂತಾದ ಪಾಶ್ಚಾತ್ಯ ಸಾಹಿತಿ, ನಾಟಕಕಾರರುಗಳ ಸಾಹಿತ್ಯವನ್ನು ಮುಂದಿರಿಸಿಕೊಂಡು ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರಷ್ಟೆ.
ಅವರಿಗೆ ತನ್ನ ಸಹೋದ್ಯೋಗಿಗಳ ಜೊತೆಗೆ ಜಗಳವೂ ಇರಲಿಲ್ಲ. ಯಾಕೆಂದರೆ ಅವರು ಕ್ಯಾಂಪಸ್ ಒಳಗೆ ತನ್ನ ಸಬ್ಜೆಕ್ಟ್ ಹೊರತಾಗಿ ಬೇರೇನನ್ನೂ ಮಾತಾಡುತ್ತಿರಲಿಲ್ಲ. ಅವರು ಕ್ಯಾಂಪಸ್ ಒಳಗೆ ಏನೇ ಮಾತನಾಡುವುದಾದರೂ ಅಳೆದು ತೂಗಿ ಮಾತನಾಡುತ್ತಿದ್ದರು.

ಬಿಜೆಪಿ ಸಂಘಪರಿವಾರವನ್ನು ಶತ್ರುವೆಂದು ಪರಿಗಣಿಸಿದರೂ ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಂತಿದ್ದ ಕಮ್ಯೂನಿಸ್ಟರು, ಜಮಾ‌ಅತೇ ಇಸ್ಲಾಮಿಯವರು, ಪಾಪ್ಯುಲರ್ ಫ್ರಂಟ್‌ನವರು ಹೀಗೆ ಎಲ್ಲರೂ ತಂತಮ್ಮ ಕಾರ್ಯಕ್ರಮಗಳಿಗೆ ಪಟ್ಟಾಭಿಯವರನ್ನು ಆಹ್ವಾನಿಸುತ್ತಿದ್ದರು ಎನ್ನುವುದೇ ಅವರ ವ್ಯಕ್ತಿತ್ವದ ವಿಶೇಷ. ಪಟ್ಟಾಭಿ ಸಂಘಪರಿವಾರದ ತಪ್ಪುಗಳನ್ನು ಖಂಡಿಸುವ, ವಿರೋಧಿಸುವ ಒಂದೇ ಒಂದು ಅವಕಾಶಗಳನ್ನು ಮಿಸ್ ಮಾಡುತ್ತಿರಲಿಲ್ಲ.

ಅವರ ಇಂಗ್ಲಿಷ್ ಜ್ಞಾನ ಅದ್ಭುತವಾಗಿತ್ತು. ಅವರು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರೆ ಶಶಿ ತರೂರ್‌ರನ್ನೂ ಮೀರಿಸುತ್ತಿದ್ದರೇನೋ.. ಅಪಾರವಾದ ವಿದ್ವತ್ತು ಮತ್ತು ಆಳವಾದ ಓದು ಇದ್ದರೂ ಅವರು ಬರೆದದ್ದು ಕಡಿಮೆ. ಬರೆಯುತ್ತಿದ್ದರೆ ಓರ್ವ ಶ್ರೇಷ್ಠ ಗುಣಮಟ್ಟದ ವಿಮರ್ಶಕಗಾಗುತ್ತಿದ್ದರು. ಅವರದ್ದು ಮೌಖಿಕ ಪರಂಪರೆಯಾಗಿತ್ತು. ಬರೆಯಬೇಕಾದುದನ್ನು ಮಾತನಾಡಿಯೇ ಮುಗಿಸುತ್ತಿದ್ದರು.

ಪಟ್ಟಾಭಿಯ ಸಾವಿನಿಂದ ನಾಡು ಒಂದು ಪ್ರಬಲ ಜನಪರವಾದ ಧ್ವನಿಯನ್ನು ಕಳಕೊಂಡಿದೆ. ನಾಡು ಅವರು ಮಾಡಿದ ಕೆಲಸಗಳಿಗಾಗಿ ಅವರನ್ನು ಬಹುಕಾಲ ನೆನಪಿಡುತ್ತೆ. ಸಂತಾಪಗಳು ಪಟ್ಟಾಭಿ ಸರ್…

ಇಸ್ಮತ್ ಪಜೀರ್

(ಕರ್ನಾಟಕ ಕೋಮು ಸೌರ್ಹಾದ ವೇದಿಕೆಯ ಒಡನಾಡಿ)

ಇದನ್ನೂ ಓದಿ: ಹಾಸನ: ಶಾಲೆಯಲ್ಲಿ ಬಕ್ರಿದ್ ಆಚರಣೆ ವಿರುದ್ದ ಹಿಂದುತ್ವ ಸಂಘಟನೆಗಳ ಆಕ್ರೋಶ; ಆಡಳಿತ ಮಂಡಳಿ ಸ್ಪಷ್ಟನೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...