ಬಕ್ರೀದ್ ಹಬ್ಬದ ಹಿನ್ನೆಲೆ ಶಾಲೆಯಲ್ಲಿ ಮಕ್ಕಳು ಸಾಮೂಹಿಕ ನಮಾಜ್ ಮಾಡಿರುವ ಆರೋಪ ಹಾಸನದಲ್ಲಿ ಕೇಳಿ ಬಂದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್ ನ್ಯಾಷನಲ್ ಶಾಲೆಯ ವಿರುದ್ಧ ಹಿಂದುತ್ವ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದು, ಮಕ್ಕಳನ್ನು ಒಟ್ಟಿಗೆ ಸೇರಿಸಿ ಮುಸ್ಲಿಂ ಧರ್ಮದ ಶ್ಲೋಕ ಹೇಳಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಸಾಮೂಹಿಕವಾಗಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ ಮೂರು ಮುಸ್ಲಿಂ ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿವೆ. ಬೇರೆ ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವೈರಲ್ ಆಗಿರೋ ವಿಡಿಯೋಗೆ ಸ್ಪಷ್ಟನೆ ನೀಡಿದೆ.
ಶಾಲೆ ಆಡಳಿತ ಮಂಡಳಿ ಸ್ಪಷ್ಟನೆ
ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ, ಕೇವಲ ಭಾವೈಕ್ಯತೆ ಮೂಡಿಸುವ ಉದ್ಧೇಶದಿಂದ ಆಚರಣೆ ಮಾಡಿದ್ದೇವೆ. ಮುಸ್ಲಿಂ ಸಮುದಾಯದ ಮೂರು ಮಕ್ಕಳು ಮಾತ್ರ ನಮಾಜ್ ಮಾಡಿದ್ದಾರೆ. ಉಳಿದ ಮಕ್ಕಳು ಕಣ್ಮುಚ್ಚಿ ಕುಳಿತಿದ್ದರು ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ನಾವು ಶಾಲೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಕೇವಲ ಮುಸ್ಲಿಂ ಹಬ್ಬ ಮಾತ್ರವಲ್ಲ ಎಲ್ಲಾ ಧರ್ಮದ ಹಬ್ಬಗಳ ಪರಿಚಯ ಮಾಡಲು ಸಾಂಕೇತಿಕ ಆಚರಣೆ ಮಾಡಲಾಗುತ್ತಿದೆ. ಈಗ ನೀವು ಬೇಡ ಎಂದು ಹೇಳಿದ ಮೇಲೆ ನಾವು ಆಚರಣೆ ಮಾಡಿಸಲ್ಲ ಎಂದು ಶಿಕ್ಷಕ ವರ್ಗ ಹೇಳಿದೆ.
ಮಕ್ಕಳು ಕಾರ್ಯಕ್ರಮ ನೀಡುತ್ತಿರುವ ವೇಳೆ ಇನ್ನುಳಿದವರು ಗಲಾಟೆ ಮಾಡಬಾರದು ಎಂದು ಕಣ್ಣುಚ್ಚಿ ಕುಳಿತುಕೊಳ್ಳಲು ಸೂಚನೆ ನೀಡಲಾಗಿತ್ತು. ಕುರಾನ್ ಪಠಣೆ ಮಾಡಿಸಲಾಗಿದೆಯಾ ಅಥವಾ ಇಲ್ಲವೇ ಎಂಬುದನ್ನು ಮಕ್ಕಳನ್ನು ಕೇಳಿ ತಿಳಿದುಕೊಳ್ಳಿ, ಇದು ಕೇವಲ ಮೂರು ಮಕ್ಕಳಿಂದ ನಡೆದ ಕಾರ್ಯಕ್ರಮವಾಗಿದೆ. ನಿಮಗೆ ಅನುಮಾನ ಇದ್ದರೆ ಮಕ್ಕಳ ಜೊತೆ ಮಾತನಾಡಬಹುದು ಎಂದು ಶಿಕ್ಷಕರು ಹೇಳಿದ್ದಾರೆ.
ಸೋಮವಾರ ಹೋರಾಟಕ್ಕೆ ಕರೆ
ಶಾಲೆಯಲ್ಲಿ ಮುಸ್ಲಿಂ ಧರ್ಮ ಸಾಮೂಹಿಕ ಆಚರಣೆ ಖಂಡಿಸಿ ಸೋಮವಾರ ಹೋರಾಟಕ್ಕೆ ಹಿಂದುತ್ವ ಸಂಘಟನೆಗಳು ಕರೆ ನೀಡಿದೆ. ಸದ್ಯ ಶಾಲೆಯ ಈ ಕಾರ್ಯಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ.
#Hindutva groups are up in arms against Jnanasagar international School in #Hassan for celebrating #Bakrid in school. They protested in front of the school. And have called for a bandh on Monday. The management has clarified they celebrate all festivals. #Karnataka pic.twitter.com/s7cbBkvHmh
— Imran Khan (@KeypadGuerilla) July 1, 2023
School should not succumb to hinduthva terrorist group because School is creating hormony among different faiths
If Ganesha festival celebrated these people do not have any issue