Homeಅಂಕಣಗಳುಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

ಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

- Advertisement -
- Advertisement -

ಪಾಕೀಸ್ತಾನದಲ್ಲೂ ಮೋದಿ ಭಕ್ತರಿದ್ದಾರೆ, ಅವರೆಲ್ಲಾ ಮೋದಿ ಆಡಳಿತಕ್ಕೆ ಒಳಪಡಲು ಹಾತೊರೆಯುತ್ತಿದ್ದಾರೆ ಎಂದು ನಮ್ಮ ಈಶ್ವರಪ್ಪನವರು ಹೇಳಿದ್ದಾರಲ್ಲಾ. ಕೇಳಿದ ಕೂಡಲೇ ಬೆಚ್ಚಿಬೀಳುವಂತಹ ಈ ಸಂಗತಿಯ ಬಗ್ಗೆ ಈಶ್ವರಪ್ಪರನ್ನೇ ಕೇಳಿದರೆ ಹೇಗೆ ಅನ್ನಿಸಿ ಫೋನ್ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್: ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ…’

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿದ್ದಿರಿ, ಬನ್ರಿ ಮಾತಾಡಣ.”

“ಮಾತಾಡಸಕ್ಕೆ ಅಂತ ಫೋನು ಮಾಡಿದೆ ಸಾರ್.”

“ಏನಿಸೇಷ?”

“ತಾವು ಶಿವಮೊಗ್ಗದ ಖಾಸಗಿ ಬಸ್ಟಾಂಡಲ್ಲಿ ನಿಂತುಕೊಂಡು ಪಾಕೀಸ್ತಾನದ ಜನರು ಉಸುರಾಡದೆ ಕಷ್ಟ ಆಗಿದೆ. ಆದ್ರಿಂದ ಅವುರೆಲ್ಲಾ ಮೋದಿಯಂತವರು ನಮ್ಮ ದೇಶದ ಪ್ರಧಾನಿಯಾಗಬೇಕು ಅಂತ ಬಯಸಿದ್ದಾರೆ, ಅಲ್ಲಿ ಜನಕ್ಕೆ ಮೋದಿ ಆಡಳಿತದ ಒಲವಿದೆ ಅಂದಿದೀರಿ ಸಾರ್.”

“ಹೌದು ಹೇಳೀದ್ದಿನಿ, ಅದರಲ್ಲಿ ತಪ್ಪೇನು?”

“ಹಾಗಂತ ನಿಮಿಗೆ ಯಾರೇಳಿದ್ರು ಸಾರ್…”

“ಯಾರು ಹೇಳಕ್ಕೆ ಬಂದಿಲ್ಲ. ಪಾಕೀಸ್ತಾನದ ಸ್ಥಿತಿ ನೋಡಿದ್ರೆ, ನಾವೆ ಊಹೆ ಮಾಡಬಹುದು ಕಂಡ್ರಿ.”

“ಪಾಕೀಸ್ತಾನದವು ಹ್ವಟ್ಟಿಗಿಲ್ದೆಯಿದ್ರು ಮೋದಿ ಬಗ್ಗೆ ತಿಳಕತ್ತವೆ ಸಾರ್. ಗುಜರಾತ್ ಗಲಭೆ ಆಯ್ತಲ್ಲಾ, ಆಗಿನಿಂದ ಏನು ಮಾಡ್ತರೆ, ಏನೇಳ್ತರೆ ಅನ್ನದ ತಿಳಕತ್ತಾ ಅವುರೆ. ಅಂಥೊರು ಮೋದಿ ಆಡಳಿತದ ಬಗ್ಗೆ ಒಲವು ತೋರತರೆ ಅಂತಿರಲ್ಲಾ ಹ್ಯಂಗೇ?”

“ಮೋದಿ ಆಡಳಿತದಲ್ಲಿ ಹತ್ತೊರಸದಿಂದ ಗಲಭೆ ಆಗಿಲ್ಲ. ಜನಾಂಗದ ಘರ್ಷಣೆ ನಡೆದಿಲ್ಲ. ಕೊಲೆ ಸುಲಿಗೆ ಏನೂ ನಡದಿಲ್ಲ. ಇಡೀ ದೇಶ ತುಂಗಾ ನದಿಯಂಗೆ ಪ್ರಶಾಂತವಾಗಿ ಹರಿತಾ ಅದೆ.”

“ತುಂಗಾ ನದಿಗೆ ಸೇರಿದಂಗೆ ಮನೆಕಟ್ಟಿಗೊಂಡು ನೀವೀ ಮಾತೇಳದು ಸರಿ; ಆದ್ರೆ ತಾವು ಮಂತ್ರಿಯಾಗಿದ್ದಾಗ 144ನೇ ಸೆಕ್ಷನ್ ಜಾರಿಯಾಗಿದ್ರು ಎಂ.ಪಿಯಾದಿಯಾಗಿ ಮೆರವಣಿಗೆ ತಗದು ಮುಸ್ಲಿಮರ ಕೇರಿಗೆ ನುಗ್ಗಿ ಮನೆನ್ಯಲ್ಲ ಲೂಟಿ ಮಾಡಿ, ಹಲ್ಲೆ ಮಾಡುದ್ರಲ್ಲ ಸಾರ್, ಇದ ಮರತುಬುಟ್ರ?”

“ಅದು ಅಮಾಯಕನ ಕೊಲೆ ಮಾಡಿದ್ದಕ್ಕೆ ನಡೆದ ಪ್ರತಿಭಟನೆ ಕಂಡ್ರಿ.”

“ಪ್ರತಿಭಟನೆಲಿ ಹಿಂಸೆ ಇರಬವುದೊ?”

“ಕೈ ಮೀರಿದಾಗ ಏನೂ ಮಾಡಕ್ಕಾಗದಿಲ್ಲ.”

“ಅದು ಸಾರ್ವಜನಿಕರ ವಿಷಯ. ನೀವು ಮಂತ್ರಿಯಾಗಿದ್ದು ನಿಮ್ಮ ಲೀಡರ್‌ಶಿಪ್ಪಲ್ಲೆ ದೊಂಬಿ ನಡಿತು ಸಾರ್.”

“ಪುನಃ ಅದ್ನೆ ಹೇಳ್ತಿರಲ್ರೀ. ನಾವು ಮೆರವಣಿಗೆ ಹೋಗುವಾಗ ಯಾವನೊ ನಿಮ್ಮಂಥೋನು ಸಾಬರ ಮನಿಗೆ ನುಗ್ಗಿ ಟಿ.ವಿ ಹೊತ್ತಗಂಡು ಬಂದು ಬೀದಿಗಾಕಿದ. ಆಗ ಮೆತ್ತಗಾಕಪ್ಪ ವಡದೋಗತ್ತೆ ಅನ್ನಕ್ಕಾಗತ್ತ. ಇನ್ನೊಬ್ಬ ಪ್ರಿಜ್ ತಂದು ಯಸ್ದ. ಮತ್ತೊಬ್ಬ ಗುಜರಿ ಸಾಮನು ತಂದು ಚಲ್ಲಿದ. ಅಂತವರನ್ನ ತಡಿಯಕ್ಕಾಗತ್ತ?”

“ಆಗಲ್ಲ ಸಾರ್, ಅಂತ ಕ್ಯಲಸ ಮಾಡೋರ ಲೀಡ್ರು ನೀವೆ ಹಿಂದಿರುವಾಗ ಇನ್ನ ಅವುರನ್ನ್ ತಡಿಯಕ್ಕಾಗಲ್ಲ. ಇದು ಪಾಕೀಸ್ತಾನದವರಿಗೆ ಗೊತ್ತಿಲ್ಲವೆ?”

“ಅದ್ಯಂಗೆ ಗೊತ್ತಾಗತ್ತೆರಿ? ಪಾಕೀಸ್ತಾನ ಎಲ್ಲೀ ಶಿವಮೊಗ್ಗ ಎಲ್ಲಿ…”

ಇದನ್ನೂ ಓದಿ: ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

“ಮಂಡ್ಯದ ಹಿಜಾಬ್ ಹುಡುಗಿ ವಿಷಯ ಸಂಗ್ರಹಿಸಿರೋರಿಗೆ ನಿಮ್ಮ ವಿಷಯ ತಿಳಿಯಲ್ವ ಸಾರ್?”

“ತಿಳಿಲಿ ಬುಡ್ರಿ, ಅವುರೇನು ಮಾಡ್ತರೆ?”

“ಅಲ್ಲ ಸಾರ್ ಇಡೀ ದೇಶದಲ್ಲಿ ಬಿಜೆಪಿ ಮಂತ್ರಿಗಳು ಶಾಸಕರೆಲ್ಲಾ ನಿಮ್ಮಂಗೆ ಇರುವಾಗ, ಇದ ತಿಳಕಂಡ ಪಾಕಿಸ್ತಾನಿಗಳು ಅದ್ಯಂಗೆ ಮೋದಿ ಆಡಳಿತವೇ ಚಂದ ಅಂತರೆ ಅನ್ನದೆ ನಮಿಗೆ ಸಮಸ್ಯೆ.”

“ಪಾಕೀಸ್ತಾನದಲ್ಲಿ ಈಗೇನು ನ್ಯಡಿತಾ ಅದೆ ಗೊತ್ತೇನ್ರಿ?”

“ಗೊತ್ತು ಸಾರ್. ಆ ದೇಶ ಪಾಲಾದಾಗಿಂದ ನ್ಯಟ್ಟಗಿಲ್ಲ. ಆ ದೇಶಕ್ಕೆ ಮೋದಿಯಂತ ಪ್ರಧಾನಿಗಳು ಬಂದು ಹೋಗ್ಯವುರೆ, ಆದ್ರೆ ನೆಹರು, ಶಾಸ್ತ್ರಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ತರದವುರು ಬಂದಿಲ್ಲ. ಅದ್ಕೆ ಆ ದೇಶ ಅಂಗಿರದು.”

“ನಾನೇಳಿದ್ದು ಈ ಕ್ಷಣಕ್ಕೆ ಆ ಜನ ಮೋದಿ ಆಡಳಿತ ಬೇಕು ಅಂತರೆ ಅಂತ.”

“ನೋಡಿ ಸಾರ್, ಮೋದಿ ನಿಮ್ಮ ಆರಾಧ್ಯ ದೈವ ಇರಬಹುದು, ಆದ್ರೆ ಅವರು ಈ ದೇಶಕ್ಕೆ ಸುಳ್ಳು ಹೇಳ್ಯವುರೆ.”

“ಏನು ಸುಳ್ಳೇಳಿದ್ದಾರ್ರೀ?”

“ಅವುರು ಮಾತಾಡೊ ಐದು ಮಾತಲ್ಲಿ ಮೂರು ಸುಳ್ಳಿರತವೆ ಸಾರ್.”

“ಒಂದೇ ಒಂದು ಸುಳ್ಳು ತೋರಿಸಿ, ನಾನು ರಾಜಕೀಯ ನಿವೃತ್ತಿ ತಗತಿನಿ.”

“ನಿಮ್ಮ ನಿವೃತ್ತಿನ ಬಿಜೆಪಿನೇ ಮಾಡಿದೆ ಸಾರ್, ನೀವು ಸುಮ್ಮನೆ ಅದನ್ನ ಒಪ್ಪಿಗಳದೆ ಸಕ್ರಿಯವಾಗಿದ್ದೀರಿ.”

“ಬಿಜೆಪಿ ಎಲ್ಲಿ ಮಾಡಿದೆ ರೀ?”

“ಸಾರ್ ನಲವತ್ತು ಪರಸೆಂಟ್ ಕಮಿಷನ್ ವಿಷಯದಲ್ಲಿ ಪೇ ಸಿಎಂ ಬೊಮ್ಮಾಯಿ ನಿಮ್ಮ ರಾಜಿನಾಮೆ ತಗಂಡ್ರು. ಸರಕಾರನೆ ಅತ್ಮಹತ್ಯೆ ವಿಷಯದಲ್ಲಿ ಬಿ ರಿಪೋರ್ಟು ಹಾಕ್ಸಿದ್ರೂ, ಸರಕಾರದ ಅವಧಿ ಮಿಗಿಯೋವರಿಗ್ರೂ, ನಿಮ್ಮನ್ನ ತಿರಗ ಮಂತ್ರಿ ಮಾಡಲಿಲ್ಲ. ಟಿಕೆಟ್‌ನೂ ಕೊಡಲಿಲ್ಲ ಇದರರ್ಥ ಏನೂ ಅಂತ?”

“ಬಿ ರಿಪೋರ್ಟು ಬಂತಲ್ಲ. ನಾನು ಆ ವಿಷಯದಲ್ಲಿ ನಿರಪರಾಧಿ ಅಂತ ಆಯ್ತು, ಇನ್ನ ಟಿಕೆಟ್ ವಿಷಯದಲ್ಲಿ ಯುವಕನಿಗೆ ಕೊಟ್ರು ಅದು ಪಾರ್ಟಿ ತೀರ್ಮಾನ. ನಮ್ಮಲ್ಲಿ ವಂಶಾಡಳಿತ ಇಲ್ಲ.”

“ವಿಜಯೇಂದ್ರ, ರಾಘವೇಂದ್ರ, ಎಡೂರಪ್ಪ ಬೇರೆಬೇರೆ ಜಾತಿನ?”

“ಅದ್ಕೆ ನಾನೀಗ ಹಾವೇರಿಗೆ ನನ್ನ ಮಗನ್ನ ನಿಲ್ಲುಸ್ತಿನಿ.”

“ಟಿಕೆಟ್ ಕೊಡದೆ ಹೋದ್ರೆ?”

“ಪಾರ್ಟಿ ಕೆಲಸ ಮಾಡ್ತಿವಿ. ಮುಸ್ಲಿಂ ಗೂಂಡಾಗಳ ವಿರುದ್ಧ ಹೋರಾಡ್ತಿವಿ.”

“ದ್ವೇಷ ವಳ್ಳೆದಲ್ಲ ಸಾರ್.”

“ಅದ್ನನಿಗೂ ಗೊತ್ತು ಕಂಡ್ರಿ, ಬಿಜೆಪಿಲಿ ರಾಜಕಾರಣ ಮಾಡಬೇಕಾದ್ರೆ ಹಿಂಸೆ ಮಾತಾಡಬೇಕು, ಜನಗಳನ್ನ ಸುಳ್ಳು ಸುಳ್ಳೆ ಪ್ರಚೋದಿಸಬೇಕು.”

“ಇನ್ನೊಂದು ಮಾತಾಡಿದ್ದೀರಿ ಸಾರ್ ನೀವು ಬಸ್ಟಾಂಡಲ್ಲಿ. ಅಧಿಕಾರದಾಸೆಗೆ ಕಾಂಗ್ರೆಸ್‌ನವರು ದೇಶ ತುಂಡು ಮಾಡಿದ್ರು. ಈಗ್ಲಾರ ಕ್ಷಮೆ ಕೇಳಿದ್ರೆ ಪಾಕೀಸ್ತಾನ ಭಾರತದ ತೆಕ್ಕೆಗೆ ಸೇರತದೆ ಅಂದಿದೀರಿ.”

“ಹೌದು, ಅದರಲ್ಲಿ ತಪ್ಪೇನು?”

“ಪಾಕೀಸ್ತಾನ ಏನು ಅಂತ ಗೊತ್ತ ಸಾ ನಿಮಿಗೆ, ಅಲ್ಲಿ ಚುನಾಯಿತ ಸರಕಾರ ಅಂತ ಒಂದಿರುತ್ತೆ. ಅದಕ್ಕೆ ಪರ್ಯಾಯವಾಗಿ ಮಿಲಿಟ್ರಿನೂ ಆಡಳಿತ ನಡಸತ್ತೆ. ಇವುರ ನಡುವೆ ಭಯೋತ್ಪಾದಕರು, ಗೂಂಡಾಗಳು ಬೇರೆ ಅವುರೆ. ಈ ಮೂರು ಸಂಘಟನೆ ಕವುಲುಗಳೂ ಸ್ವತಂತ್ರವಾಗಿ ಅಪಾಯಕಾರಿಗಳಾಗಿವೆ. ಇಂತ ದೇಶನ ಭಾರತಕ್ಕೆ ಸೇರಿಕೊಳ್ಳುತ್ತೆ ಅಂತಿರಲ್ಲಾ, ಈ ಶತಮಾನದ ಜೋಕು ಸಾರ್ ಇದು.”

“ಅದ್ಯಂಗ್ರಿ ಜೋಕು. ನಮ್ಮ ಮಾತ್ಯಲ್ಲ ನಿಮಗೆ ಜೋಕಾಗಿ ಕಾಣತ್ತೆ.”

“ನೀವೇಳದೆಂಗೆ ಅಂದ್ರೆ, ಹುಚ್ಚರ ಜೊತೆಗೆ ತಿಕ್ಕಲ್ರು ಸೇರಿಕಂಡ್ರೆ ಎಷ್ಟು ಚನ್ನಾಗಿರುತ್ತೆ ಅನ್ನಂಗೆ ಮಾತಾಡ್ತಿರಿ.”

“ಯಾರ್ರಿ ತಿಕ್ಕಲ್ರು?”

“ತಿಕ್ಕಲರಲ್ಲ ಬಿಡಿ. ಅಸಾಮಾನ್ಯ ದೇಶಭಕ್ತರೆ ಅಂತ ಮಾತಾಡಣ. ಮಣಿಪುರ ಯಾವ ದೇಶದಲ್ಲಿದೆ ಸಾರ್? ಅದರ ಬಗ್ಗೆ ಮಾತಾಡದ ಬುಟ್ಟು ಪಾಕೀಸ್ತಾನದ ಬಗ್ಗೆ ಮಾತಾಡ್ತಿರಿ. ಅಲ್ಲಿ ಜನಾಂಗಿಯ ಹತ್ಯೆ ಶುರುವಾಗಿ, ಮೂರು ತಿಂಗಳಾಯ್ತು, ಪ್ರಧಾನಿ ಆ ವಿಷಯದಲ್ಲೂ ಬಾಯಿ ಬಿಡಕ್ಕೆ ಮೂರು ತಿಂಗಳಾಯ್ತು. ಅದೂ ಬಲವಂತವಾಗಿ ಸಂಸತ್ತಿಗೆ ಬಂದು ಎರಡು ಗಂಟೆ ಕಾಂಗ್ರೆಸ್‌ಗೆ ಬೈದು, ಐದು ನಿಮಿಷ ಮಣಿಪುರದ ಬಗ್ಗೆ ಮಾತಾಡಿದ್ರು. ಇದು ಸರಿನ?”

“ಮೋದಿ ಬಗ್ಗೆ ಮಾತಾಡಬೇಡಿ.”

“ಮಾತಾಡ್ತಿನಿ ಸಾರ್, ಅವರು ನಮ್ಮ ದೇಶದ ಪ್ರಧಾನಿ, ಅವುರ ಈ ದೇಶಕ್ಕೆ ಹೇಳಿರೊ ಸುಳ್ಳು ಯಾವುದು ಅಂದ್ರೇ: ಚೀನಾ ದೇಶ ನಮ್ಮ ದೇಶದ ಹುಲ್ಲುಗಾವಲನ್ನು ಅಕ್ರಮಿಸಿದೆ. ಇದು ಗೊತ್ತಿದ್ದೂ ಮೋದಿ ಒಂದಿಂಚು ಭೂಮಿಯನ್ನು ಚೀನಾ ಅಕ್ರಮಿಸಿಕೊಂಡಿಲ್ಲ ಅಂದ್ರು. ಪ್ರಧಾನಿ ಸುಳ್ಳಿಗೆ ಗಡಿಲಿದ್ದ ಸೈನಿಕರೆ ದಂಗುಬಡದವುರೆ ಗೊತ್ತೆ?”

“ರೀ ಚೀನಾದವುರು ಅಕ್ರಮಿಸಿರೋದು ಹುಲ್ಲುಗಾವಲು. ಆ ಹುಲ್ಲುಗಾವುಲಲ್ಲಿ ಗೋವು ಮೇಯ್‌ಸ್ತರೆ. ಗೋವು ಯಲ್ಲಾರಿಗೂ ಒಂದೆ. ಇದೂ ಒಂದು ಸುದ್ದಿ ಅಂತ ಹೇಳ್ತಿರಿ ನೀವು.”

“ಇನ್ನೊಂದು ವಿಷಯ ಸಾರ್, ನಿಮಗೆ ಗೊತ್ತಿರಲಿ ದೇಶಕ್ಕೆ ಸ್ವಾತಂತ್ರ ಬಂದಾಗ ನಿಮ್ಮ ಸಾವರಕರು ಮತ್ತೆ ಇತರರು ಇನ್ನು ಮುಂದೆ ಈ ದೇಶ ಹಿಂದೂ ರಾಷ್ಟ್ರವಾಗತ್ತೆ ಅಂದ್ರು. ಇವುರಂಗಂದ ಕೂಡ್ಲೆ ಜಿನ್ನಾ ಹಿಂದೂ ದೇಶದಲ್ಲಿ ನಾವಿರಲ್ಲ ಪಾಕೀಸ್ತಾನ ಕೊಡಿ ಅಂದ. ಅಂಗಾಗಿ ನಿಮ್ಮವುರ ಮಾತಿಂದ ದೇಶ ಒಡದು, ನಮ್ಮನಮ್ಮ ದಾರಿಲಿ ಆಗ್ಲೆ 75 ವರ್ಷ ನ್ಯಡದಿದ್ದೀವಿ. ಆ ದೇಶನೂ ಅವನತಿ ಅಂಚಿಗೆ ಬಂದಿದೆ. ತಿರಗ ಮೋದಿ ಬಂದ್ರೆ ನಾವೂ ಸರ್ವನಾಶದ ಹಾದಿಗೆ ಬೀಳ್ತಿವಿ. ಇಂಥದೊಂದು ಸ್ಥಿತಿಲಿ ನೀವು ಪಾಕೀಸ್ತಾನ ಸೇರಿಸಿಗಳಕ್ಕೆ ಹಾತೊರೆಯದರ ಬದ್ಲು ಶಿವಮೊಗ್ಗದ ಮಿಳಘಟ್ಟ, ಟಿಪ್ಪು ನಗರ ಮಂಡಿ ಕಡೆಯಿರೊ ಮುಸಲ್ಮಾನರನ್ನ ಮಾತಾಡಿಸಿ ಕಷ್ಟ ಸುಖ ಕೇಳಿ ಸಾರ್. ನೀವಂಗೆ ಮಾಡಿದ್ರೆ ಮುಂದೆ ಪಕ್ಷೇತರವಾಗಿ ನಿಂತ್ರು ಗೆಲ್ತೀರಿ.”

“ಪಕ್ಷೇತರವಾಗಿ ಈಶ್ವರಪ್ಪನ ಶರೀರದಲ್ಲಿ ಉಸಿರಿರೊವರಿಗೂ ನಿಲ್ಲಲ್ಲ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...