Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

ನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

- Advertisement -
ನಿವೇದನೆ
(ಧರ್ಮಾನಂದ ಕೊಸಾಂಬಿ ಆತ್ಮಕಥನ)
ಧರ್ಮಾನಂದ ಕೊಸಾಂಬಿ
ಇಂಗ್ಲೀಷಿಗೆ: ಮೀರಾ ಕೊಸಾಂಬಿ
ಕನ್ನಡಕ್ಕೆ: ಡಾ. ಗೀತಾ ಶೆಣೈ
ನವಕರ್ನಾಟಕ ಪ್ರಕಾಶನ, ಬೆಂಗಳೂರು, 2016
ಕನ್ನಡದಲ್ಲಿ ಆತ್ಮಕಥೆ ಮತ್ತು ಜೀವನ ಚರಿತ್ರೆಗಳ ಓದು ಅಪಾರವಾಗಿದ್ದರೂ, ಗಂಭೀರ ಸಾಹಿತ್ಯದ ಚರ್ಚೆಯ ಸಂದರ್ಭದಲ್ಲಿ ಇವುಗಳನ್ನು ಅಲಕ್ಷಿಸಲಾಗುತ್ತದೆ. ಆತ್ಮಕಥೆ, ಜೀವನ ಚರಿತ್ರೆಯಂತಹ ಬರಹಗಳು ವ್ಯಕ್ತಿಗಳ ವೈಯಕ್ತಿಕ, ಇಲ್ಲವೆ ಖಾಸಗಿ ಸಂಗತಿಗಳ ಕಂತೆ ಎಂಬ ನಂಬಿಕೆಯೂ ಇದಕ್ಕೆ ಕಾರಣವಿರಬಹುದು. ಆದರೆ, ಯಾವುದೇ ಭಾಷೆಯ ಸೃಜನಶೀಲ ಸಾಹಿತ್ಯದ ವೈವಿಧ್ಯವನ್ನು ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ಗಮನಾರ್ಹಗೊಳಿಸುತ್ತಾ ಬಂದಿವೆ. ಇತ್ತೀಚಿಗೆ ನಡೆಯುತ್ತಿರುವ ಆತ್ಮಕಥೆಗಳ ಕುರಿತ ಚರ್ಚೆ ಆಧುನಿಕೋತ್ತರ ಸಾಹಿತ್ಯ ಮೀಮಾಂಸೆಯ ಸಾಧ್ಯತೆಗಳನ್ನು ವಿಸ್ತರಿಸುತ್ತಿದೆ. ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ವ್ಯಕ್ತಿಗತ ವಿವರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವ್ಯಕ್ತಿ ಮತ್ತು ಅವನು ಬದುಕಿದ್ದ ಕಾಲಘಟ್ಟದ ಅನೇಕ ಮಹತ್ವದ ಸಂಗತಿಗಳಿಗೆ ಆತ್ಮಕಥೆಗಳು ಸಾಕ್ಷ್ಯ ಒದಗಿಸುತ್ತವೆ. ವ್ಯಕ್ತಿಯೊಬ್ಬನ ಅನೇಕ ಖಾಸಗಿ ವಿಚಾರಗಳು ಆತ ಬದುಕಿದ್ದ ಚಾರಿತ್ರಿಕ ಕಾಲಘಟ್ಟದ ಉತ್ಪನ್ನಗಳೇ ಆಗಿರುವ ಕಾರಣ ಅವು ಕೇವಲ ಸ್ವಗತಗಳು ಮಾತ್ರವಾಗಿರುವುದಿಲ್ಲ. ಮತ್ತು ಈ ಆತ್ಮಕಥನಗಳು ಕೇವಲ ವ್ಯಕ್ತಿಯೊಬ್ಬನ ಅನುಭವಗಳ ದಾಖಲೆ ಮಾತ್ರವಲ್ಲ. ಗಾಂಧೀಜಿಯ `ನನ್ನ ಸತ್ಯಾನ್ವೇóಣೆಯ ಕಥೆ’ ಕಥನವು ಕೇವಲ ಭಾರತದ ಗಡಿಯೊಳಗಿನ ಅನುಭವಗಳ ಅಭಿವ್ಯಕ್ತಿ ಮಾತ್ರವಲ್ಲ. ಅಮೃತಾ ಪ್ರೀತಮ್ ಅವರ `ರಸೀದಿ ತಿಕೇಟ್’ ಕೋಟ್ಯಾಂತರ ದಿಟ್ಟ ಹೆಣ್ಣುಗಳ ಕಥೆಯಾಗಿ ಸಾಮಾಜೀಕರಣಗೊಂಡು ಬಿಡುತ್ತದೆ. ಹಾಗಾಗಿ ಈ ಕಥನಗಳು ಕಾಲ ದೇಶಗಳನ್ನು ಮೀರಿ ವಿಭಿನ್ನ ಜನಾಂಗ ಮತ್ತು ಸಮುದಾಯಗಳ ಪ್ರಜ್ಞೆಯ ಭಾಗವಾಗಿಬಿಡುತ್ತವೆ. ವೈಯಕ್ತಿಕ ಇಲ್ಲವೆ ಖಾಸಗಿ ಅನುಭವಗಳ ಹಂಚಿಕೊಳ್ಳುವಿಕೆಯು ಹೀಗೆ ದೇಶಕಾಲಗಳನ್ನು ಏಕತ್ರಗೊಳಿಸಿಬಿಡುತ್ತದೆ. ಯಾವುದೋ ದೇಶದ ಮ್ಯಾಕ್ಸಿಂ ಗೋರ್ಕಿ, ಟಾಲ್‍ಸ್ಟಾಯ್, ಅಚಿಬೆ, ಚೆಗುವೆರಾ ನಮ್ಮವರೇ ಆಗಿಬಿಡುತ್ತಾರೆ. ವ್ಯಕ್ತಿಯ ಅನುಭವದ ಕಥನಗಳಗೆ ಹೀಗೆ ಜನಾಂಗ ಮತ್ತು ಸಮುದಾಯಗಳನ್ನು ಬೆಸೆದುಬಿಡುವ ಮಾಂತ್ರಿಕ ಗುಣವಿದೆ. ಈ ಕಾರಣಕ್ಕಾಗಿ ಆತ್ಮಕಥಾನಕಗಳು ವ್ಯಕ್ತಿಗತ ವಿವರಗಳ ಹಂಗಿನಿಂದ ಬಿಡುಗಡೆಗೊಂಡು ಸಮಕಾಲೀನ ಚರಿತ್ರೆಯ ನಿರೂಪಣೆಗಳಾಗಿ ಬಿಡುತ್ತವೆ. `ನನ್ನ ಬಾಲ್ಯ’ `ನನ್ನ ವಿಶ್ವವಿದ್ಯಾಲಯಗಳು’ ಮತ್ತು `ಜನರ ನಡುವೆ’ ಎಂಬ ಮೂರು ಸಂಪುಟಗಳಲ್ಲಿರುವ ಮ್ಯಾಕ್ಸಿಂ ಗೋರ್ಕಿಯ ಆತ್ಮಕಥನವು ಹೀಗೆ ಕಾಲ ದೇಶಗಳ ಹಂಗನ್ನು ತೊರೆದು ಆಯಾ ಜನಾಂಗಗಳ ಅನುಭವಗಳ ಕಥನವೂ ಆಗಿಬಿಡುತ್ತದೆ. ಧರ್ಮಾನಂದ ಕೊಸಾಂಬಿಯವರ ‘ನಿವೇದನೆ’ ಆತ್ಮಕಥನ ಇಂತಹುದ್ದೇ ಒಂದು ಅಪರೂಪದ ಚಾರಿತ್ರಿಕ ದಾಖಲೆಯಾಗಿದೆ.
ಧರ್ಮಾನಂದ ಕೊಸಾಂಬಿಯವರು ಖ್ಯಾತ ವಿಜ್ಞಾನಿ, ಮಾಕ್ರ್ಸವಾದಿ ಇತಿಹಾಸಕಾರ ದಾಮೋದರ್ ಧರ್ಮಾನಂದ್ ಕೊಸಾಂಬಿಯವರು (ಡಿ ಡಿ ಕೊಸಾಂಬಿ) ತಂದೆ. ಈ ಇಬ್ಬರೂ ಇಂಡಿಯಾದ ಸಾರಸ್ವತ ಜಗತ್ತಿನ ಬೌದ್ಧಿಕ ಜೀನಿಯಸ್‍ಗಳು. ಸಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಶೈಕ್ಷಣಿಕ ವಲಯವನ್ನು ತಂದೆ ಮಕ್ಕಳಿಬ್ಬರೂ ತಮ್ಮ ಅಗಾಧ ಬೌದ್ಧಿಕ ಪರಿಶ್ರಮದಿಂದ ವಿಸ್ತರಿಸುತ್ತಲೇ ಬಂದಿದ್ದಾರೆ. ಧರ್ಮಾನಂದ ಕೊಸಾಂಬಿ ಗೋವಾದ ಸಾಂಖವಾಳದಲ್ಲಿ 1876 ಅಕ್ಟೋಬರ್ 9ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದ ಅನಾರೊಗ್ಯ ಮತ್ತು ವ್ಯಾಕುಲತೆಯನ್ನು ಅವರು ಸಂತ ತುಕಾರಾಮ ಮತ್ತು ಬುದ್ಧನ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ನೀಗಿಸಿಕೊಳ್ಳಲು ನೋಡುತ್ತಾರೆ. ಧರ್ಮಾನಂದ ಅವರು ವೈಯಕ್ತಿಕ ಕಾರಣಗಳಿಗಾಗಿ ಕೈಗೊಂಡ ಅಧ್ಯಯನದ ಆಸಕ್ತಿ ಮುಂದೆ ಅವರನ್ನು ಜಗತ್ತಿನ ಶ್ರೇಷ್ಠ ಚಿಂತಕರ ಸಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಕೊಂಕಣಿ ಮಾತೃಭಾಷೆಯಾದರೂ, ಇಂಡಿಯಾವನ್ನೂ ಒಳಗೊಂಡಂತೆ ಜಗತ್ತಿನ ಅನೇಕ ಭಾಷೆಗಳನ್ನು ಕಲಿತ ಧರ್ಮಾನಂದರು ಮರಾಠಿಯಲ್ಲಿ ಬರೆದದ್ದೇ ಹೆಚ್ಚು. ಬಾಲ್ಯದಲ್ಲಿಯೇ ಇಂಡಿಯಾದ ಜಾತಿ ಅಸಮಾನತೆ ಮತ್ತು ಸಾಮಾಜಿಕ ಪಿಡುಗುಗಳಿಂದ ರೋಸಿ ಹೋದ ಧರ್ಮಾನಂದ್ ಬುದ್ಧನ ಚಿಂತನೆಗಳ ಕಡೆಗೆ ನಡೆದು ಹೋದರು.
`ನಿವೇದನೆ’ ಧರ್ಮಾನಂದರ ಬದುಕಿನ 1910 ರಿಂದ 1931ರವರೆಗಿನ ವಿವರಗಳನ್ನು ಒಳಗೊಂಡಿದೆ. ಗೋವೆಯ `ಭಾರತ’ ಎಂಬ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಆತ್ಮಕಥೆಯನ್ನು ಧರ್ಮಾನಂದರ ಮೊಮ್ಮಗಳು ಮೀರಾ ಕೊಸಾಂಬಿ ಮರಾಠಿಯಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಹದಿನೆಂಟು ಅಧ್ಯಾಯಗಳ ಈ ಪುಸ್ತಕವನ್ನು ಗೀತಾಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಧರ್ಮಾನಂದ ಅವರು 71 ವರ್ಷ (1876-1947) ಬದುಕಿದರೂ ಪ್ರಸ್ತುತ ಆತ್ಮಕಥೆಯಲ್ಲಿ 21 ವರ್ಷದ ಅವರ ಜೀವನದ ವಿವರಗಳು ಮಾತ್ರ ಇವೆ. ಧರ್ಮಾನಂದರ ಬದುಕು, ದೇಶ ವಿದೇಶಗಳ ಅವರ ನಿರಂತರ ಪ್ರಯಾಣ ಮತ್ತು ಬೌದ್ಧ ಧರ್ಮದ ಮೂಲತತ್ವಗಳನ್ನು ಹುಡುಕುವುದರಲ್ಲಿಯೇ ಮುಗಿದು ಹೋಯಿತು. ಆದರೆ ಬೌದ್ಧ ಧರ್ಮದ ಅನ್ವೇಷಣೆಯಲ್ಲಿ ಧರ್ಮಾನಂದರು ಮಾಡಿದ ತಿರುಗಾಟವಿದೆಯಲ್ಲ, ಅದು ಯಾವುದೇ ಜ್ಞಾನಾಕಾಂಕ್ಷಿಗೆ ಒಂದು ಶಾಶ್ವತ ಮಾದರಿ. ಹದಿನಾಲ್ಕನೇ ವಯಸ್ಸಿನಲ್ಲಿ ಲಗ್ನವಾಗುವ ಧರ್ಮಾನಂದರು ತಮ್ಮ ಮೊದಲ ಮಗಳು ಹುಟ್ಟಿದ ನಂತರ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಮನೆ ಬಿಡುತ್ತಾರೆ. ಪಾಲಿ ಮತ್ತು ಸಂಸ್ಕøತಗಳನ್ನು ಕಲಿಯಲು ಬ್ರಾಹ್ಮಣ ಪಂಡಿತರ ಮನೆಗಳಿಗೆ ಅಲೆಯುತ್ತಾರೆ. ಸಾರಸ್ವತ ಬ್ರಾಹಣರು ಮಾಂಸಾಹಾರಿಗಳು, ಮೀನು ತಿನ್ನುತ್ತಾರೆ ಎಂಬ ಕಾರಣಕ್ಕಾಗಿ ಧರ್ಮಾನಂದರಿಗೆ ಹಲವು ಬ್ರಾಹ್ಮಣ ಪಂಡಿತರು ಸಂಸ್ಕøತ ಕಲಿಸಲು ನಿರಾಕರಿಸುತ್ತಾರೆ. ಆದರೆ, ಧರ್ಮಾನಂದರು ತಮ್ಮ ಎಡಬಿಡದ ಪ್ರಯತ್ನದ ಮೂಲಕ ಆ ಎರಡೂ ಪ್ರಾಚೀನ ಭಾಷೆಗಳನ್ನು ಕಲಿಯುತ್ತಾರೆ. ಹೆಂಡತಿ ಬಾಲಬಾಯಿ, ಮಗಳು ಮಾಣಿಕಳನ್ನು ಬಿಟ್ಟು ಪುಣೆ,  ಉಜ್ಜಯನಿ, ನಾಗಪುರ, ಗ್ವಾಲಿಯಾರ್, ಬರೋಡ, ಕಾಶಿ, ಬುದ್ಧಗಯಾ, ಕಲ್ಕತ್ತ, ನೇಪಾಳ, ಬರ್ಮಾ, ಮದ್ರಾಸ್, ಶ್ರೀಲಂಕಾ ಹೀಗೆ ಐದಾರು ವರ್ಷ ನಿರಂತವಾಗಿ ಅಲೆದಾಡುತ್ತಾರೆ. ಅದರಲ್ಲೂ ನೇಪಾಳದ ಅವರ ಕಾಲ್ನಡಿಗೆ ಪ್ರಯಾಣ ಅತ್ಯಂತ ಧಾರುಣವಾಗಿತ್ತು. ಸುರಿವ ಹಿಮದಲ್ಲಿ ಬರಿಗಾಲಲ್ಲಿ ನಡೆದು ಅವರು ನೇಪಾಳ ತಲುಪುತ್ತಾರೆ. ನಂತರ ಅವರು ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಶ್ರೀಲಂಕಾಕ್ಕೆ ತೆರಳುತ್ತಾರೆ. ಶ್ರೀಲಂಕಾದಲ್ಲಿ ಬೌದ್ಧ ಭಿಕ್ಷುವಾಗಿ ದೀಕ್ಷೆ ಪಡೆದರೂ ಕೆಲವು ವರ್ಷಗಳ ನಂತರ ಅದನ್ನು ತೊರೆದು ಗೋವೆಗೆ ಹಿಂದಿರುಗುತ್ತಾರೆ. 1907ರಲ್ಲಿ ದಾಮೋದರ ಧರ್ಮಾನಂದ ಕೊಸಾಂಬಿ ಜನಿಸುತ್ತಾರೆ. ಆನಂತರ ಮಕ್ಕಳ ಜೊತೆ ಅಮೇರಿಕಾದ ಹಾರ್ವರ್ಡ ವಿಶ್ವವಿದ್ಯಾಲಯಕ್ಕೆ ತೆರಳಿ ಬೌದ್ಧ ಧರ್ಮದ ಅಧ್ಯಯನವನ್ನು ಮುಂದುವರೆಸುತ್ತಾರೆ. 1910ರಲ್ಲಿ `ದಿ ಬುದ್ಧ, ದಿ ದಮ್ಮ, ಅಂಡ್ ದಿ ಸಂಘ’ ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಬರೋಡಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆವರು ಈ ಗ್ರಂಥ ಪ್ರಕಟಣೆಯಲ್ಲಿ ನೆರವಾಗುತ್ತಾರೆ. ಹಾರ್ವರ್ಡ ವಿಶ್ವವಿದ್ಯಾಲಯದಲ್ಲಿನ ಪಾಧ್ಯಾಪಕರಿಗೆ ಪಾಲಿ ಕಲಿಸಲು ಮತ್ತು ಬುದ್ಧಘೋಷನ `ವಿಸುದ್ಧಿ ಮಗ್ಗ’ ಗ್ರಂಥ ಸಂಪಾದನೆಯಲ್ಲಿ ನೆರವಾಗಲು ಅಮೇರಿಕಾಕ್ಕೆ ತೆರಳುತ್ತಾರೆ. 1922ರಲ್ಲಿ ಅಮೆರಿಕಾದಿಂದ ಹಿಂದಿರುಗಿದ ನಂತರ ವಾರ್ದಾದ ಗಾಂಧಿ ಆಶ್ರಮದಲ್ಲಿ ನೆಲೆಸಿ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ದಂಡಿ ಸತ್ಯಾಗ್ರಹದ ಜೊತೆ ಮುಂಬಯಿ ನಗರದ ಗಿರಣಿ ಕಾರ್ಮಿಕರನ್ನು ಸಂಘಟಿಸಲು ಮುಂದಾಗುತ್ತಾರೆ. 1940ರಲ್ಲಿ ಅವರ ಮಹಾತ್ವಾಕಕ್ಷೆಯ `ಭಗವಾನ್ ಬುದ್ಧ’ ಕೃತಿಯು ಎರಡು ಸಂಪುಟಗಳಲ್ಲಿ ಪ್ರಕಟವಾಗುತ್ತದೆ. (ಆದ್ಯರಂಗಾಚಾರ್ಯರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.) ನೆಹರು ಅವರ ಪ್ರೇರಣೆಯಿಂದ ರಷ್ಯಾಕ್ಕೆ ಬೇಟಿ ನೀಡಿ ಅಲ್ಲಿ ಪಾಲಿ ಭಾಷೆಯನ್ನು ಕಲಿಸುವುದರ ಜೊತೆಗೆ ರಷ್ಯಾದ ಜನಜೀವನದ ಅಧ್ಯಯನದಲ್ಲಿ ತೊಡಗುತ್ತಾರೆ. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ರಷ್ಯಾದಿಂದ ಹಿಂದಿರುಗುವ ಧರ್ಮಾನಂದರು ವಾರ್ದಾದಲ್ಲಿ ನೆಲೆಸಿ ಅಲ್ಲಿಯೇ ತಮ್ಮ ಅಂತಿಮ ದಿನಗಳನ್ನು ಕಳೆಯುತ್ತಾರೆ. ದೈಹಿಕ ಅನಾರೋಗ್ಯದ ಕಾರಣ ಧರ್ಮಾನಂದರು 1947ರಲ್ಲಿ ಸಲ್ಲೇಖನದ ಮೂಲಕ ದೇಹತ್ಯಾಗ ಮಾಡುತ್ತಾರೆ.
`ನಿವೇದನೆ’ಯಲ್ಲಿ ಧರ್ಮಾನಂದರ ಖಾಸಗಿ ಬದುಕಿನ ವಿವರಗಳಿಲ್ಲ. ಇದು, ಧರ್ಮಾನಂದರು ಬೌದ್ಧ ಧರ್ಮವನ್ನು ಹುಡುಕಿ ಹೊರಟ ಮತ್ತು ಬೌದ್ಧ ಧರ್ಮದ ತಿಳಿವನ್ನು ಅರಸಿ ಹೊರಟ ಅಸೀಮ ಪ್ರಯಾಣದ ಕಥೆ ಮಾತ್ರ. ಆದರೆ ಈ ದಣಿವರಿಯದ ಪ್ರಯಾಣದ ಉದ್ದಕ್ಕೂ ಇವರು ತಮ್ಮ ಖಾಸಗಿ ಬದುಕಿನ ತಲ್ಲಣಗಳನ್ನು ದಾಖಲಿಸಿಲ್ಲ. ಕುಟುಂಬದ ಹೊಣೆಗಾರಿಕೆಗಳಿಗೆ ಬೆನ್ನು ಹಾಕಿ, ಹೆಂಡತಿ ಮಕ್ಕಳನ್ನು ತೊರೆದು ದೇಶಾಂತರ ತಿರುಗಾಟ ಕೈಗೊಂಡ ಧರ್ಮಾನಂದರ ಕುರಿತು ಅವರ ಮಗಳು ಮತ್ತು ಪತ್ನಿ ಬಾಲಬಾಯಿಯವರ ಅಭಿಪ್ರಾಯಾಗಳೇನು? ಮಗ ದಾಮೋದರ್ ಕೊಸಾಂಬಿ ಅಥವಾ ಕುಟುಂಬದ ಬೇರೆ ಯಾರಾದರು ಧರ್ಮಾನಂದರ ಜೀವನ ಚರಿತ್ರೆ ಬರೆದಿದ್ದರೆ ಅದು ಹೇಗಿರುತ್ತಿತ್ತು? ಎಂಬ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಆದರೆ, `ನಿವೇದನೆ’ಯ ಒಟ್ಟಾರೆಯ ಬರವಣಿಗೆಯಲ್ಲಿ ಧರ್ಮಾನಂದರು ಕೌಟುಂಬಿಕ ಮತ್ತು ಸಾಮಾಜಿಕ ಸೂಕ್ಷ್ಮಗಳ ಕುರಿತು ಏನನ್ನೂ ದಾಖಲಿಸಿಲ್ಲ. ಬದುಕಿರವವರೆಗೂ ಬ್ರಾಹ್ಮಣ್ಯವನ್ನು ಆಚರಿಸದ ಧರ್ಮಾನಂದರು, ಸಾರಸ್ವತರೆಂಬ ಕಾರಣಕ್ಕೆ ಮಾಂಸಹಾರಿಗಳೆಂದು ಜರಿದು ತಮಗೆ ಸಂಸ್ಕøತ ಹೇಳಿಕೊಡದ ಚಿತ್ಪಾವನ ಬ್ರಾಹ್ಮಣರ ತಾರತಮ್ಯದ ಕುರಿತು ಮಾತೇ ಆಡುವುದಿಲ್ಲ. ಇದೆಲ್ಲದರ ಹೊರತಾಗಿ ಧರ್ಮಾನಂದ ಕೊಸಾಂಬಿಯವರ ಆತ್ಮಕಥೆ ಆಧುನಿಕಪೂರ್ವ ಇಂಡಿಯಾದ ಒಬ್ಬ ಅಪ್ರತಿಮ ಚಿಂತಕನ ದಣಿವರಿಯದ ಜ್ಞಾನ ಯಾತ್ರೆಯ ಅಪೂರ್ವ ಕಥನ ಎಂಬುದರಲ್ಲಿ ಎರಡು ಮಾತಿಲ್ಲ.
– ಎ ಎಸ್ ಪ್ರಭಾಕರ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...