Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

ನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

- Advertisement -
ನಿವೇದನೆ
(ಧರ್ಮಾನಂದ ಕೊಸಾಂಬಿ ಆತ್ಮಕಥನ)
ಧರ್ಮಾನಂದ ಕೊಸಾಂಬಿ
ಇಂಗ್ಲೀಷಿಗೆ: ಮೀರಾ ಕೊಸಾಂಬಿ
ಕನ್ನಡಕ್ಕೆ: ಡಾ. ಗೀತಾ ಶೆಣೈ
ನವಕರ್ನಾಟಕ ಪ್ರಕಾಶನ, ಬೆಂಗಳೂರು, 2016
ಕನ್ನಡದಲ್ಲಿ ಆತ್ಮಕಥೆ ಮತ್ತು ಜೀವನ ಚರಿತ್ರೆಗಳ ಓದು ಅಪಾರವಾಗಿದ್ದರೂ, ಗಂಭೀರ ಸಾಹಿತ್ಯದ ಚರ್ಚೆಯ ಸಂದರ್ಭದಲ್ಲಿ ಇವುಗಳನ್ನು ಅಲಕ್ಷಿಸಲಾಗುತ್ತದೆ. ಆತ್ಮಕಥೆ, ಜೀವನ ಚರಿತ್ರೆಯಂತಹ ಬರಹಗಳು ವ್ಯಕ್ತಿಗಳ ವೈಯಕ್ತಿಕ, ಇಲ್ಲವೆ ಖಾಸಗಿ ಸಂಗತಿಗಳ ಕಂತೆ ಎಂಬ ನಂಬಿಕೆಯೂ ಇದಕ್ಕೆ ಕಾರಣವಿರಬಹುದು. ಆದರೆ, ಯಾವುದೇ ಭಾಷೆಯ ಸೃಜನಶೀಲ ಸಾಹಿತ್ಯದ ವೈವಿಧ್ಯವನ್ನು ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ಗಮನಾರ್ಹಗೊಳಿಸುತ್ತಾ ಬಂದಿವೆ. ಇತ್ತೀಚಿಗೆ ನಡೆಯುತ್ತಿರುವ ಆತ್ಮಕಥೆಗಳ ಕುರಿತ ಚರ್ಚೆ ಆಧುನಿಕೋತ್ತರ ಸಾಹಿತ್ಯ ಮೀಮಾಂಸೆಯ ಸಾಧ್ಯತೆಗಳನ್ನು ವಿಸ್ತರಿಸುತ್ತಿದೆ. ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ವ್ಯಕ್ತಿಗತ ವಿವರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವ್ಯಕ್ತಿ ಮತ್ತು ಅವನು ಬದುಕಿದ್ದ ಕಾಲಘಟ್ಟದ ಅನೇಕ ಮಹತ್ವದ ಸಂಗತಿಗಳಿಗೆ ಆತ್ಮಕಥೆಗಳು ಸಾಕ್ಷ್ಯ ಒದಗಿಸುತ್ತವೆ. ವ್ಯಕ್ತಿಯೊಬ್ಬನ ಅನೇಕ ಖಾಸಗಿ ವಿಚಾರಗಳು ಆತ ಬದುಕಿದ್ದ ಚಾರಿತ್ರಿಕ ಕಾಲಘಟ್ಟದ ಉತ್ಪನ್ನಗಳೇ ಆಗಿರುವ ಕಾರಣ ಅವು ಕೇವಲ ಸ್ವಗತಗಳು ಮಾತ್ರವಾಗಿರುವುದಿಲ್ಲ. ಮತ್ತು ಈ ಆತ್ಮಕಥನಗಳು ಕೇವಲ ವ್ಯಕ್ತಿಯೊಬ್ಬನ ಅನುಭವಗಳ ದಾಖಲೆ ಮಾತ್ರವಲ್ಲ. ಗಾಂಧೀಜಿಯ `ನನ್ನ ಸತ್ಯಾನ್ವೇóಣೆಯ ಕಥೆ’ ಕಥನವು ಕೇವಲ ಭಾರತದ ಗಡಿಯೊಳಗಿನ ಅನುಭವಗಳ ಅಭಿವ್ಯಕ್ತಿ ಮಾತ್ರವಲ್ಲ. ಅಮೃತಾ ಪ್ರೀತಮ್ ಅವರ `ರಸೀದಿ ತಿಕೇಟ್’ ಕೋಟ್ಯಾಂತರ ದಿಟ್ಟ ಹೆಣ್ಣುಗಳ ಕಥೆಯಾಗಿ ಸಾಮಾಜೀಕರಣಗೊಂಡು ಬಿಡುತ್ತದೆ. ಹಾಗಾಗಿ ಈ ಕಥನಗಳು ಕಾಲ ದೇಶಗಳನ್ನು ಮೀರಿ ವಿಭಿನ್ನ ಜನಾಂಗ ಮತ್ತು ಸಮುದಾಯಗಳ ಪ್ರಜ್ಞೆಯ ಭಾಗವಾಗಿಬಿಡುತ್ತವೆ. ವೈಯಕ್ತಿಕ ಇಲ್ಲವೆ ಖಾಸಗಿ ಅನುಭವಗಳ ಹಂಚಿಕೊಳ್ಳುವಿಕೆಯು ಹೀಗೆ ದೇಶಕಾಲಗಳನ್ನು ಏಕತ್ರಗೊಳಿಸಿಬಿಡುತ್ತದೆ. ಯಾವುದೋ ದೇಶದ ಮ್ಯಾಕ್ಸಿಂ ಗೋರ್ಕಿ, ಟಾಲ್‍ಸ್ಟಾಯ್, ಅಚಿಬೆ, ಚೆಗುವೆರಾ ನಮ್ಮವರೇ ಆಗಿಬಿಡುತ್ತಾರೆ. ವ್ಯಕ್ತಿಯ ಅನುಭವದ ಕಥನಗಳಗೆ ಹೀಗೆ ಜನಾಂಗ ಮತ್ತು ಸಮುದಾಯಗಳನ್ನು ಬೆಸೆದುಬಿಡುವ ಮಾಂತ್ರಿಕ ಗುಣವಿದೆ. ಈ ಕಾರಣಕ್ಕಾಗಿ ಆತ್ಮಕಥಾನಕಗಳು ವ್ಯಕ್ತಿಗತ ವಿವರಗಳ ಹಂಗಿನಿಂದ ಬಿಡುಗಡೆಗೊಂಡು ಸಮಕಾಲೀನ ಚರಿತ್ರೆಯ ನಿರೂಪಣೆಗಳಾಗಿ ಬಿಡುತ್ತವೆ. `ನನ್ನ ಬಾಲ್ಯ’ `ನನ್ನ ವಿಶ್ವವಿದ್ಯಾಲಯಗಳು’ ಮತ್ತು `ಜನರ ನಡುವೆ’ ಎಂಬ ಮೂರು ಸಂಪುಟಗಳಲ್ಲಿರುವ ಮ್ಯಾಕ್ಸಿಂ ಗೋರ್ಕಿಯ ಆತ್ಮಕಥನವು ಹೀಗೆ ಕಾಲ ದೇಶಗಳ ಹಂಗನ್ನು ತೊರೆದು ಆಯಾ ಜನಾಂಗಗಳ ಅನುಭವಗಳ ಕಥನವೂ ಆಗಿಬಿಡುತ್ತದೆ. ಧರ್ಮಾನಂದ ಕೊಸಾಂಬಿಯವರ ‘ನಿವೇದನೆ’ ಆತ್ಮಕಥನ ಇಂತಹುದ್ದೇ ಒಂದು ಅಪರೂಪದ ಚಾರಿತ್ರಿಕ ದಾಖಲೆಯಾಗಿದೆ.
ಧರ್ಮಾನಂದ ಕೊಸಾಂಬಿಯವರು ಖ್ಯಾತ ವಿಜ್ಞಾನಿ, ಮಾಕ್ರ್ಸವಾದಿ ಇತಿಹಾಸಕಾರ ದಾಮೋದರ್ ಧರ್ಮಾನಂದ್ ಕೊಸಾಂಬಿಯವರು (ಡಿ ಡಿ ಕೊಸಾಂಬಿ) ತಂದೆ. ಈ ಇಬ್ಬರೂ ಇಂಡಿಯಾದ ಸಾರಸ್ವತ ಜಗತ್ತಿನ ಬೌದ್ಧಿಕ ಜೀನಿಯಸ್‍ಗಳು. ಸಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಶೈಕ್ಷಣಿಕ ವಲಯವನ್ನು ತಂದೆ ಮಕ್ಕಳಿಬ್ಬರೂ ತಮ್ಮ ಅಗಾಧ ಬೌದ್ಧಿಕ ಪರಿಶ್ರಮದಿಂದ ವಿಸ್ತರಿಸುತ್ತಲೇ ಬಂದಿದ್ದಾರೆ. ಧರ್ಮಾನಂದ ಕೊಸಾಂಬಿ ಗೋವಾದ ಸಾಂಖವಾಳದಲ್ಲಿ 1876 ಅಕ್ಟೋಬರ್ 9ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದ ಅನಾರೊಗ್ಯ ಮತ್ತು ವ್ಯಾಕುಲತೆಯನ್ನು ಅವರು ಸಂತ ತುಕಾರಾಮ ಮತ್ತು ಬುದ್ಧನ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ನೀಗಿಸಿಕೊಳ್ಳಲು ನೋಡುತ್ತಾರೆ. ಧರ್ಮಾನಂದ ಅವರು ವೈಯಕ್ತಿಕ ಕಾರಣಗಳಿಗಾಗಿ ಕೈಗೊಂಡ ಅಧ್ಯಯನದ ಆಸಕ್ತಿ ಮುಂದೆ ಅವರನ್ನು ಜಗತ್ತಿನ ಶ್ರೇಷ್ಠ ಚಿಂತಕರ ಸಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಕೊಂಕಣಿ ಮಾತೃಭಾಷೆಯಾದರೂ, ಇಂಡಿಯಾವನ್ನೂ ಒಳಗೊಂಡಂತೆ ಜಗತ್ತಿನ ಅನೇಕ ಭಾಷೆಗಳನ್ನು ಕಲಿತ ಧರ್ಮಾನಂದರು ಮರಾಠಿಯಲ್ಲಿ ಬರೆದದ್ದೇ ಹೆಚ್ಚು. ಬಾಲ್ಯದಲ್ಲಿಯೇ ಇಂಡಿಯಾದ ಜಾತಿ ಅಸಮಾನತೆ ಮತ್ತು ಸಾಮಾಜಿಕ ಪಿಡುಗುಗಳಿಂದ ರೋಸಿ ಹೋದ ಧರ್ಮಾನಂದ್ ಬುದ್ಧನ ಚಿಂತನೆಗಳ ಕಡೆಗೆ ನಡೆದು ಹೋದರು.
`ನಿವೇದನೆ’ ಧರ್ಮಾನಂದರ ಬದುಕಿನ 1910 ರಿಂದ 1931ರವರೆಗಿನ ವಿವರಗಳನ್ನು ಒಳಗೊಂಡಿದೆ. ಗೋವೆಯ `ಭಾರತ’ ಎಂಬ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಆತ್ಮಕಥೆಯನ್ನು ಧರ್ಮಾನಂದರ ಮೊಮ್ಮಗಳು ಮೀರಾ ಕೊಸಾಂಬಿ ಮರಾಠಿಯಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಹದಿನೆಂಟು ಅಧ್ಯಾಯಗಳ ಈ ಪುಸ್ತಕವನ್ನು ಗೀತಾಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಧರ್ಮಾನಂದ ಅವರು 71 ವರ್ಷ (1876-1947) ಬದುಕಿದರೂ ಪ್ರಸ್ತುತ ಆತ್ಮಕಥೆಯಲ್ಲಿ 21 ವರ್ಷದ ಅವರ ಜೀವನದ ವಿವರಗಳು ಮಾತ್ರ ಇವೆ. ಧರ್ಮಾನಂದರ ಬದುಕು, ದೇಶ ವಿದೇಶಗಳ ಅವರ ನಿರಂತರ ಪ್ರಯಾಣ ಮತ್ತು ಬೌದ್ಧ ಧರ್ಮದ ಮೂಲತತ್ವಗಳನ್ನು ಹುಡುಕುವುದರಲ್ಲಿಯೇ ಮುಗಿದು ಹೋಯಿತು. ಆದರೆ ಬೌದ್ಧ ಧರ್ಮದ ಅನ್ವೇಷಣೆಯಲ್ಲಿ ಧರ್ಮಾನಂದರು ಮಾಡಿದ ತಿರುಗಾಟವಿದೆಯಲ್ಲ, ಅದು ಯಾವುದೇ ಜ್ಞಾನಾಕಾಂಕ್ಷಿಗೆ ಒಂದು ಶಾಶ್ವತ ಮಾದರಿ. ಹದಿನಾಲ್ಕನೇ ವಯಸ್ಸಿನಲ್ಲಿ ಲಗ್ನವಾಗುವ ಧರ್ಮಾನಂದರು ತಮ್ಮ ಮೊದಲ ಮಗಳು ಹುಟ್ಟಿದ ನಂತರ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಮನೆ ಬಿಡುತ್ತಾರೆ. ಪಾಲಿ ಮತ್ತು ಸಂಸ್ಕøತಗಳನ್ನು ಕಲಿಯಲು ಬ್ರಾಹ್ಮಣ ಪಂಡಿತರ ಮನೆಗಳಿಗೆ ಅಲೆಯುತ್ತಾರೆ. ಸಾರಸ್ವತ ಬ್ರಾಹಣರು ಮಾಂಸಾಹಾರಿಗಳು, ಮೀನು ತಿನ್ನುತ್ತಾರೆ ಎಂಬ ಕಾರಣಕ್ಕಾಗಿ ಧರ್ಮಾನಂದರಿಗೆ ಹಲವು ಬ್ರಾಹ್ಮಣ ಪಂಡಿತರು ಸಂಸ್ಕøತ ಕಲಿಸಲು ನಿರಾಕರಿಸುತ್ತಾರೆ. ಆದರೆ, ಧರ್ಮಾನಂದರು ತಮ್ಮ ಎಡಬಿಡದ ಪ್ರಯತ್ನದ ಮೂಲಕ ಆ ಎರಡೂ ಪ್ರಾಚೀನ ಭಾಷೆಗಳನ್ನು ಕಲಿಯುತ್ತಾರೆ. ಹೆಂಡತಿ ಬಾಲಬಾಯಿ, ಮಗಳು ಮಾಣಿಕಳನ್ನು ಬಿಟ್ಟು ಪುಣೆ,  ಉಜ್ಜಯನಿ, ನಾಗಪುರ, ಗ್ವಾಲಿಯಾರ್, ಬರೋಡ, ಕಾಶಿ, ಬುದ್ಧಗಯಾ, ಕಲ್ಕತ್ತ, ನೇಪಾಳ, ಬರ್ಮಾ, ಮದ್ರಾಸ್, ಶ್ರೀಲಂಕಾ ಹೀಗೆ ಐದಾರು ವರ್ಷ ನಿರಂತವಾಗಿ ಅಲೆದಾಡುತ್ತಾರೆ. ಅದರಲ್ಲೂ ನೇಪಾಳದ ಅವರ ಕಾಲ್ನಡಿಗೆ ಪ್ರಯಾಣ ಅತ್ಯಂತ ಧಾರುಣವಾಗಿತ್ತು. ಸುರಿವ ಹಿಮದಲ್ಲಿ ಬರಿಗಾಲಲ್ಲಿ ನಡೆದು ಅವರು ನೇಪಾಳ ತಲುಪುತ್ತಾರೆ. ನಂತರ ಅವರು ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಶ್ರೀಲಂಕಾಕ್ಕೆ ತೆರಳುತ್ತಾರೆ. ಶ್ರೀಲಂಕಾದಲ್ಲಿ ಬೌದ್ಧ ಭಿಕ್ಷುವಾಗಿ ದೀಕ್ಷೆ ಪಡೆದರೂ ಕೆಲವು ವರ್ಷಗಳ ನಂತರ ಅದನ್ನು ತೊರೆದು ಗೋವೆಗೆ ಹಿಂದಿರುಗುತ್ತಾರೆ. 1907ರಲ್ಲಿ ದಾಮೋದರ ಧರ್ಮಾನಂದ ಕೊಸಾಂಬಿ ಜನಿಸುತ್ತಾರೆ. ಆನಂತರ ಮಕ್ಕಳ ಜೊತೆ ಅಮೇರಿಕಾದ ಹಾರ್ವರ್ಡ ವಿಶ್ವವಿದ್ಯಾಲಯಕ್ಕೆ ತೆರಳಿ ಬೌದ್ಧ ಧರ್ಮದ ಅಧ್ಯಯನವನ್ನು ಮುಂದುವರೆಸುತ್ತಾರೆ. 1910ರಲ್ಲಿ `ದಿ ಬುದ್ಧ, ದಿ ದಮ್ಮ, ಅಂಡ್ ದಿ ಸಂಘ’ ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಬರೋಡಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆವರು ಈ ಗ್ರಂಥ ಪ್ರಕಟಣೆಯಲ್ಲಿ ನೆರವಾಗುತ್ತಾರೆ. ಹಾರ್ವರ್ಡ ವಿಶ್ವವಿದ್ಯಾಲಯದಲ್ಲಿನ ಪಾಧ್ಯಾಪಕರಿಗೆ ಪಾಲಿ ಕಲಿಸಲು ಮತ್ತು ಬುದ್ಧಘೋಷನ `ವಿಸುದ್ಧಿ ಮಗ್ಗ’ ಗ್ರಂಥ ಸಂಪಾದನೆಯಲ್ಲಿ ನೆರವಾಗಲು ಅಮೇರಿಕಾಕ್ಕೆ ತೆರಳುತ್ತಾರೆ. 1922ರಲ್ಲಿ ಅಮೆರಿಕಾದಿಂದ ಹಿಂದಿರುಗಿದ ನಂತರ ವಾರ್ದಾದ ಗಾಂಧಿ ಆಶ್ರಮದಲ್ಲಿ ನೆಲೆಸಿ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ದಂಡಿ ಸತ್ಯಾಗ್ರಹದ ಜೊತೆ ಮುಂಬಯಿ ನಗರದ ಗಿರಣಿ ಕಾರ್ಮಿಕರನ್ನು ಸಂಘಟಿಸಲು ಮುಂದಾಗುತ್ತಾರೆ. 1940ರಲ್ಲಿ ಅವರ ಮಹಾತ್ವಾಕಕ್ಷೆಯ `ಭಗವಾನ್ ಬುದ್ಧ’ ಕೃತಿಯು ಎರಡು ಸಂಪುಟಗಳಲ್ಲಿ ಪ್ರಕಟವಾಗುತ್ತದೆ. (ಆದ್ಯರಂಗಾಚಾರ್ಯರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.) ನೆಹರು ಅವರ ಪ್ರೇರಣೆಯಿಂದ ರಷ್ಯಾಕ್ಕೆ ಬೇಟಿ ನೀಡಿ ಅಲ್ಲಿ ಪಾಲಿ ಭಾಷೆಯನ್ನು ಕಲಿಸುವುದರ ಜೊತೆಗೆ ರಷ್ಯಾದ ಜನಜೀವನದ ಅಧ್ಯಯನದಲ್ಲಿ ತೊಡಗುತ್ತಾರೆ. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ರಷ್ಯಾದಿಂದ ಹಿಂದಿರುಗುವ ಧರ್ಮಾನಂದರು ವಾರ್ದಾದಲ್ಲಿ ನೆಲೆಸಿ ಅಲ್ಲಿಯೇ ತಮ್ಮ ಅಂತಿಮ ದಿನಗಳನ್ನು ಕಳೆಯುತ್ತಾರೆ. ದೈಹಿಕ ಅನಾರೋಗ್ಯದ ಕಾರಣ ಧರ್ಮಾನಂದರು 1947ರಲ್ಲಿ ಸಲ್ಲೇಖನದ ಮೂಲಕ ದೇಹತ್ಯಾಗ ಮಾಡುತ್ತಾರೆ.
`ನಿವೇದನೆ’ಯಲ್ಲಿ ಧರ್ಮಾನಂದರ ಖಾಸಗಿ ಬದುಕಿನ ವಿವರಗಳಿಲ್ಲ. ಇದು, ಧರ್ಮಾನಂದರು ಬೌದ್ಧ ಧರ್ಮವನ್ನು ಹುಡುಕಿ ಹೊರಟ ಮತ್ತು ಬೌದ್ಧ ಧರ್ಮದ ತಿಳಿವನ್ನು ಅರಸಿ ಹೊರಟ ಅಸೀಮ ಪ್ರಯಾಣದ ಕಥೆ ಮಾತ್ರ. ಆದರೆ ಈ ದಣಿವರಿಯದ ಪ್ರಯಾಣದ ಉದ್ದಕ್ಕೂ ಇವರು ತಮ್ಮ ಖಾಸಗಿ ಬದುಕಿನ ತಲ್ಲಣಗಳನ್ನು ದಾಖಲಿಸಿಲ್ಲ. ಕುಟುಂಬದ ಹೊಣೆಗಾರಿಕೆಗಳಿಗೆ ಬೆನ್ನು ಹಾಕಿ, ಹೆಂಡತಿ ಮಕ್ಕಳನ್ನು ತೊರೆದು ದೇಶಾಂತರ ತಿರುಗಾಟ ಕೈಗೊಂಡ ಧರ್ಮಾನಂದರ ಕುರಿತು ಅವರ ಮಗಳು ಮತ್ತು ಪತ್ನಿ ಬಾಲಬಾಯಿಯವರ ಅಭಿಪ್ರಾಯಾಗಳೇನು? ಮಗ ದಾಮೋದರ್ ಕೊಸಾಂಬಿ ಅಥವಾ ಕುಟುಂಬದ ಬೇರೆ ಯಾರಾದರು ಧರ್ಮಾನಂದರ ಜೀವನ ಚರಿತ್ರೆ ಬರೆದಿದ್ದರೆ ಅದು ಹೇಗಿರುತ್ತಿತ್ತು? ಎಂಬ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಆದರೆ, `ನಿವೇದನೆ’ಯ ಒಟ್ಟಾರೆಯ ಬರವಣಿಗೆಯಲ್ಲಿ ಧರ್ಮಾನಂದರು ಕೌಟುಂಬಿಕ ಮತ್ತು ಸಾಮಾಜಿಕ ಸೂಕ್ಷ್ಮಗಳ ಕುರಿತು ಏನನ್ನೂ ದಾಖಲಿಸಿಲ್ಲ. ಬದುಕಿರವವರೆಗೂ ಬ್ರಾಹ್ಮಣ್ಯವನ್ನು ಆಚರಿಸದ ಧರ್ಮಾನಂದರು, ಸಾರಸ್ವತರೆಂಬ ಕಾರಣಕ್ಕೆ ಮಾಂಸಹಾರಿಗಳೆಂದು ಜರಿದು ತಮಗೆ ಸಂಸ್ಕøತ ಹೇಳಿಕೊಡದ ಚಿತ್ಪಾವನ ಬ್ರಾಹ್ಮಣರ ತಾರತಮ್ಯದ ಕುರಿತು ಮಾತೇ ಆಡುವುದಿಲ್ಲ. ಇದೆಲ್ಲದರ ಹೊರತಾಗಿ ಧರ್ಮಾನಂದ ಕೊಸಾಂಬಿಯವರ ಆತ್ಮಕಥೆ ಆಧುನಿಕಪೂರ್ವ ಇಂಡಿಯಾದ ಒಬ್ಬ ಅಪ್ರತಿಮ ಚಿಂತಕನ ದಣಿವರಿಯದ ಜ್ಞಾನ ಯಾತ್ರೆಯ ಅಪೂರ್ವ ಕಥನ ಎಂಬುದರಲ್ಲಿ ಎರಡು ಮಾತಿಲ್ಲ.
– ಎ ಎಸ್ ಪ್ರಭಾಕರ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರದೇಶ: ಬುಡಕಟ್ಟು ವಿಶ್ವವಿದ್ಯಾಲಯ ಹಾಸ್ಟೆಲ್ ಒಳಗೆ ಅಸ್ಸಾಮಿ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು...

ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌ ಪ್ರಯಾಣ, ಗ್ರಾಮೀಣರಿಗೆ 150 ಕೂಲಿ ದಿನ : ಎಐಎಡಿಎಂಕೆ ಚುನಾವಣಾ ಭರವಸೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯ ಬೆಟ್ಟಗಳಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಹಿರಿಯ...

ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಮತಾ...

ಕೋಮುವಾದ ಕಾರಣಕ್ಕೆ ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ; ರೆಹಮಾನ್ ಹೇಳಿಕೆ ತಳ್ಳಿಹಾಕಿದ ಜಾವೇದ್ ಅಖ್ತರ್

ಯಶಸ್ವೀ ಸಂಗೀತಗಾರನಾಗಿ ಹಲವು ಕೊಡುಗೆ ನೀಡಿದ್ದರೂ ಕೆಲವರಿಗೆ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್‌ನ ಕದ ಮುಚ್ಚಿದೆ ಎಂಬ ಬಗ್ಗೆ ಎ.ಆರ್. ರೆಹಮಾನ್ ಹೇಳಿಕೆಯನ್ನು ಹಿರಿಯ ಗೀತೆ ರಚನೆಕಾರ...

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....