Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

ನಿವೇದನೆ: ದಣಿವರಿಯದ ಜ್ಞಾನ ಯಾತ್ರೆಯ ಕಥೆ

- Advertisement -
ನಿವೇದನೆ
(ಧರ್ಮಾನಂದ ಕೊಸಾಂಬಿ ಆತ್ಮಕಥನ)
ಧರ್ಮಾನಂದ ಕೊಸಾಂಬಿ
ಇಂಗ್ಲೀಷಿಗೆ: ಮೀರಾ ಕೊಸಾಂಬಿ
ಕನ್ನಡಕ್ಕೆ: ಡಾ. ಗೀತಾ ಶೆಣೈ
ನವಕರ್ನಾಟಕ ಪ್ರಕಾಶನ, ಬೆಂಗಳೂರು, 2016
ಕನ್ನಡದಲ್ಲಿ ಆತ್ಮಕಥೆ ಮತ್ತು ಜೀವನ ಚರಿತ್ರೆಗಳ ಓದು ಅಪಾರವಾಗಿದ್ದರೂ, ಗಂಭೀರ ಸಾಹಿತ್ಯದ ಚರ್ಚೆಯ ಸಂದರ್ಭದಲ್ಲಿ ಇವುಗಳನ್ನು ಅಲಕ್ಷಿಸಲಾಗುತ್ತದೆ. ಆತ್ಮಕಥೆ, ಜೀವನ ಚರಿತ್ರೆಯಂತಹ ಬರಹಗಳು ವ್ಯಕ್ತಿಗಳ ವೈಯಕ್ತಿಕ, ಇಲ್ಲವೆ ಖಾಸಗಿ ಸಂಗತಿಗಳ ಕಂತೆ ಎಂಬ ನಂಬಿಕೆಯೂ ಇದಕ್ಕೆ ಕಾರಣವಿರಬಹುದು. ಆದರೆ, ಯಾವುದೇ ಭಾಷೆಯ ಸೃಜನಶೀಲ ಸಾಹಿತ್ಯದ ವೈವಿಧ್ಯವನ್ನು ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ಗಮನಾರ್ಹಗೊಳಿಸುತ್ತಾ ಬಂದಿವೆ. ಇತ್ತೀಚಿಗೆ ನಡೆಯುತ್ತಿರುವ ಆತ್ಮಕಥೆಗಳ ಕುರಿತ ಚರ್ಚೆ ಆಧುನಿಕೋತ್ತರ ಸಾಹಿತ್ಯ ಮೀಮಾಂಸೆಯ ಸಾಧ್ಯತೆಗಳನ್ನು ವಿಸ್ತರಿಸುತ್ತಿದೆ. ಆತ್ಮಕಥೆ ಮತ್ತು ಜೀವನ ಚರಿತ್ರೆಗಳು ವ್ಯಕ್ತಿಗತ ವಿವರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವ್ಯಕ್ತಿ ಮತ್ತು ಅವನು ಬದುಕಿದ್ದ ಕಾಲಘಟ್ಟದ ಅನೇಕ ಮಹತ್ವದ ಸಂಗತಿಗಳಿಗೆ ಆತ್ಮಕಥೆಗಳು ಸಾಕ್ಷ್ಯ ಒದಗಿಸುತ್ತವೆ. ವ್ಯಕ್ತಿಯೊಬ್ಬನ ಅನೇಕ ಖಾಸಗಿ ವಿಚಾರಗಳು ಆತ ಬದುಕಿದ್ದ ಚಾರಿತ್ರಿಕ ಕಾಲಘಟ್ಟದ ಉತ್ಪನ್ನಗಳೇ ಆಗಿರುವ ಕಾರಣ ಅವು ಕೇವಲ ಸ್ವಗತಗಳು ಮಾತ್ರವಾಗಿರುವುದಿಲ್ಲ. ಮತ್ತು ಈ ಆತ್ಮಕಥನಗಳು ಕೇವಲ ವ್ಯಕ್ತಿಯೊಬ್ಬನ ಅನುಭವಗಳ ದಾಖಲೆ ಮಾತ್ರವಲ್ಲ. ಗಾಂಧೀಜಿಯ `ನನ್ನ ಸತ್ಯಾನ್ವೇóಣೆಯ ಕಥೆ’ ಕಥನವು ಕೇವಲ ಭಾರತದ ಗಡಿಯೊಳಗಿನ ಅನುಭವಗಳ ಅಭಿವ್ಯಕ್ತಿ ಮಾತ್ರವಲ್ಲ. ಅಮೃತಾ ಪ್ರೀತಮ್ ಅವರ `ರಸೀದಿ ತಿಕೇಟ್’ ಕೋಟ್ಯಾಂತರ ದಿಟ್ಟ ಹೆಣ್ಣುಗಳ ಕಥೆಯಾಗಿ ಸಾಮಾಜೀಕರಣಗೊಂಡು ಬಿಡುತ್ತದೆ. ಹಾಗಾಗಿ ಈ ಕಥನಗಳು ಕಾಲ ದೇಶಗಳನ್ನು ಮೀರಿ ವಿಭಿನ್ನ ಜನಾಂಗ ಮತ್ತು ಸಮುದಾಯಗಳ ಪ್ರಜ್ಞೆಯ ಭಾಗವಾಗಿಬಿಡುತ್ತವೆ. ವೈಯಕ್ತಿಕ ಇಲ್ಲವೆ ಖಾಸಗಿ ಅನುಭವಗಳ ಹಂಚಿಕೊಳ್ಳುವಿಕೆಯು ಹೀಗೆ ದೇಶಕಾಲಗಳನ್ನು ಏಕತ್ರಗೊಳಿಸಿಬಿಡುತ್ತದೆ. ಯಾವುದೋ ದೇಶದ ಮ್ಯಾಕ್ಸಿಂ ಗೋರ್ಕಿ, ಟಾಲ್‍ಸ್ಟಾಯ್, ಅಚಿಬೆ, ಚೆಗುವೆರಾ ನಮ್ಮವರೇ ಆಗಿಬಿಡುತ್ತಾರೆ. ವ್ಯಕ್ತಿಯ ಅನುಭವದ ಕಥನಗಳಗೆ ಹೀಗೆ ಜನಾಂಗ ಮತ್ತು ಸಮುದಾಯಗಳನ್ನು ಬೆಸೆದುಬಿಡುವ ಮಾಂತ್ರಿಕ ಗುಣವಿದೆ. ಈ ಕಾರಣಕ್ಕಾಗಿ ಆತ್ಮಕಥಾನಕಗಳು ವ್ಯಕ್ತಿಗತ ವಿವರಗಳ ಹಂಗಿನಿಂದ ಬಿಡುಗಡೆಗೊಂಡು ಸಮಕಾಲೀನ ಚರಿತ್ರೆಯ ನಿರೂಪಣೆಗಳಾಗಿ ಬಿಡುತ್ತವೆ. `ನನ್ನ ಬಾಲ್ಯ’ `ನನ್ನ ವಿಶ್ವವಿದ್ಯಾಲಯಗಳು’ ಮತ್ತು `ಜನರ ನಡುವೆ’ ಎಂಬ ಮೂರು ಸಂಪುಟಗಳಲ್ಲಿರುವ ಮ್ಯಾಕ್ಸಿಂ ಗೋರ್ಕಿಯ ಆತ್ಮಕಥನವು ಹೀಗೆ ಕಾಲ ದೇಶಗಳ ಹಂಗನ್ನು ತೊರೆದು ಆಯಾ ಜನಾಂಗಗಳ ಅನುಭವಗಳ ಕಥನವೂ ಆಗಿಬಿಡುತ್ತದೆ. ಧರ್ಮಾನಂದ ಕೊಸಾಂಬಿಯವರ ‘ನಿವೇದನೆ’ ಆತ್ಮಕಥನ ಇಂತಹುದ್ದೇ ಒಂದು ಅಪರೂಪದ ಚಾರಿತ್ರಿಕ ದಾಖಲೆಯಾಗಿದೆ.
ಧರ್ಮಾನಂದ ಕೊಸಾಂಬಿಯವರು ಖ್ಯಾತ ವಿಜ್ಞಾನಿ, ಮಾಕ್ರ್ಸವಾದಿ ಇತಿಹಾಸಕಾರ ದಾಮೋದರ್ ಧರ್ಮಾನಂದ್ ಕೊಸಾಂಬಿಯವರು (ಡಿ ಡಿ ಕೊಸಾಂಬಿ) ತಂದೆ. ಈ ಇಬ್ಬರೂ ಇಂಡಿಯಾದ ಸಾರಸ್ವತ ಜಗತ್ತಿನ ಬೌದ್ಧಿಕ ಜೀನಿಯಸ್‍ಗಳು. ಸಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಶೈಕ್ಷಣಿಕ ವಲಯವನ್ನು ತಂದೆ ಮಕ್ಕಳಿಬ್ಬರೂ ತಮ್ಮ ಅಗಾಧ ಬೌದ್ಧಿಕ ಪರಿಶ್ರಮದಿಂದ ವಿಸ್ತರಿಸುತ್ತಲೇ ಬಂದಿದ್ದಾರೆ. ಧರ್ಮಾನಂದ ಕೊಸಾಂಬಿ ಗೋವಾದ ಸಾಂಖವಾಳದಲ್ಲಿ 1876 ಅಕ್ಟೋಬರ್ 9ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದ ಅನಾರೊಗ್ಯ ಮತ್ತು ವ್ಯಾಕುಲತೆಯನ್ನು ಅವರು ಸಂತ ತುಕಾರಾಮ ಮತ್ತು ಬುದ್ಧನ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ನೀಗಿಸಿಕೊಳ್ಳಲು ನೋಡುತ್ತಾರೆ. ಧರ್ಮಾನಂದ ಅವರು ವೈಯಕ್ತಿಕ ಕಾರಣಗಳಿಗಾಗಿ ಕೈಗೊಂಡ ಅಧ್ಯಯನದ ಆಸಕ್ತಿ ಮುಂದೆ ಅವರನ್ನು ಜಗತ್ತಿನ ಶ್ರೇಷ್ಠ ಚಿಂತಕರ ಸಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಕೊಂಕಣಿ ಮಾತೃಭಾಷೆಯಾದರೂ, ಇಂಡಿಯಾವನ್ನೂ ಒಳಗೊಂಡಂತೆ ಜಗತ್ತಿನ ಅನೇಕ ಭಾಷೆಗಳನ್ನು ಕಲಿತ ಧರ್ಮಾನಂದರು ಮರಾಠಿಯಲ್ಲಿ ಬರೆದದ್ದೇ ಹೆಚ್ಚು. ಬಾಲ್ಯದಲ್ಲಿಯೇ ಇಂಡಿಯಾದ ಜಾತಿ ಅಸಮಾನತೆ ಮತ್ತು ಸಾಮಾಜಿಕ ಪಿಡುಗುಗಳಿಂದ ರೋಸಿ ಹೋದ ಧರ್ಮಾನಂದ್ ಬುದ್ಧನ ಚಿಂತನೆಗಳ ಕಡೆಗೆ ನಡೆದು ಹೋದರು.
`ನಿವೇದನೆ’ ಧರ್ಮಾನಂದರ ಬದುಕಿನ 1910 ರಿಂದ 1931ರವರೆಗಿನ ವಿವರಗಳನ್ನು ಒಳಗೊಂಡಿದೆ. ಗೋವೆಯ `ಭಾರತ’ ಎಂಬ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಆತ್ಮಕಥೆಯನ್ನು ಧರ್ಮಾನಂದರ ಮೊಮ್ಮಗಳು ಮೀರಾ ಕೊಸಾಂಬಿ ಮರಾಠಿಯಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಹದಿನೆಂಟು ಅಧ್ಯಾಯಗಳ ಈ ಪುಸ್ತಕವನ್ನು ಗೀತಾಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಧರ್ಮಾನಂದ ಅವರು 71 ವರ್ಷ (1876-1947) ಬದುಕಿದರೂ ಪ್ರಸ್ತುತ ಆತ್ಮಕಥೆಯಲ್ಲಿ 21 ವರ್ಷದ ಅವರ ಜೀವನದ ವಿವರಗಳು ಮಾತ್ರ ಇವೆ. ಧರ್ಮಾನಂದರ ಬದುಕು, ದೇಶ ವಿದೇಶಗಳ ಅವರ ನಿರಂತರ ಪ್ರಯಾಣ ಮತ್ತು ಬೌದ್ಧ ಧರ್ಮದ ಮೂಲತತ್ವಗಳನ್ನು ಹುಡುಕುವುದರಲ್ಲಿಯೇ ಮುಗಿದು ಹೋಯಿತು. ಆದರೆ ಬೌದ್ಧ ಧರ್ಮದ ಅನ್ವೇಷಣೆಯಲ್ಲಿ ಧರ್ಮಾನಂದರು ಮಾಡಿದ ತಿರುಗಾಟವಿದೆಯಲ್ಲ, ಅದು ಯಾವುದೇ ಜ್ಞಾನಾಕಾಂಕ್ಷಿಗೆ ಒಂದು ಶಾಶ್ವತ ಮಾದರಿ. ಹದಿನಾಲ್ಕನೇ ವಯಸ್ಸಿನಲ್ಲಿ ಲಗ್ನವಾಗುವ ಧರ್ಮಾನಂದರು ತಮ್ಮ ಮೊದಲ ಮಗಳು ಹುಟ್ಟಿದ ನಂತರ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಮನೆ ಬಿಡುತ್ತಾರೆ. ಪಾಲಿ ಮತ್ತು ಸಂಸ್ಕøತಗಳನ್ನು ಕಲಿಯಲು ಬ್ರಾಹ್ಮಣ ಪಂಡಿತರ ಮನೆಗಳಿಗೆ ಅಲೆಯುತ್ತಾರೆ. ಸಾರಸ್ವತ ಬ್ರಾಹಣರು ಮಾಂಸಾಹಾರಿಗಳು, ಮೀನು ತಿನ್ನುತ್ತಾರೆ ಎಂಬ ಕಾರಣಕ್ಕಾಗಿ ಧರ್ಮಾನಂದರಿಗೆ ಹಲವು ಬ್ರಾಹ್ಮಣ ಪಂಡಿತರು ಸಂಸ್ಕøತ ಕಲಿಸಲು ನಿರಾಕರಿಸುತ್ತಾರೆ. ಆದರೆ, ಧರ್ಮಾನಂದರು ತಮ್ಮ ಎಡಬಿಡದ ಪ್ರಯತ್ನದ ಮೂಲಕ ಆ ಎರಡೂ ಪ್ರಾಚೀನ ಭಾಷೆಗಳನ್ನು ಕಲಿಯುತ್ತಾರೆ. ಹೆಂಡತಿ ಬಾಲಬಾಯಿ, ಮಗಳು ಮಾಣಿಕಳನ್ನು ಬಿಟ್ಟು ಪುಣೆ,  ಉಜ್ಜಯನಿ, ನಾಗಪುರ, ಗ್ವಾಲಿಯಾರ್, ಬರೋಡ, ಕಾಶಿ, ಬುದ್ಧಗಯಾ, ಕಲ್ಕತ್ತ, ನೇಪಾಳ, ಬರ್ಮಾ, ಮದ್ರಾಸ್, ಶ್ರೀಲಂಕಾ ಹೀಗೆ ಐದಾರು ವರ್ಷ ನಿರಂತವಾಗಿ ಅಲೆದಾಡುತ್ತಾರೆ. ಅದರಲ್ಲೂ ನೇಪಾಳದ ಅವರ ಕಾಲ್ನಡಿಗೆ ಪ್ರಯಾಣ ಅತ್ಯಂತ ಧಾರುಣವಾಗಿತ್ತು. ಸುರಿವ ಹಿಮದಲ್ಲಿ ಬರಿಗಾಲಲ್ಲಿ ನಡೆದು ಅವರು ನೇಪಾಳ ತಲುಪುತ್ತಾರೆ. ನಂತರ ಅವರು ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಶ್ರೀಲಂಕಾಕ್ಕೆ ತೆರಳುತ್ತಾರೆ. ಶ್ರೀಲಂಕಾದಲ್ಲಿ ಬೌದ್ಧ ಭಿಕ್ಷುವಾಗಿ ದೀಕ್ಷೆ ಪಡೆದರೂ ಕೆಲವು ವರ್ಷಗಳ ನಂತರ ಅದನ್ನು ತೊರೆದು ಗೋವೆಗೆ ಹಿಂದಿರುಗುತ್ತಾರೆ. 1907ರಲ್ಲಿ ದಾಮೋದರ ಧರ್ಮಾನಂದ ಕೊಸಾಂಬಿ ಜನಿಸುತ್ತಾರೆ. ಆನಂತರ ಮಕ್ಕಳ ಜೊತೆ ಅಮೇರಿಕಾದ ಹಾರ್ವರ್ಡ ವಿಶ್ವವಿದ್ಯಾಲಯಕ್ಕೆ ತೆರಳಿ ಬೌದ್ಧ ಧರ್ಮದ ಅಧ್ಯಯನವನ್ನು ಮುಂದುವರೆಸುತ್ತಾರೆ. 1910ರಲ್ಲಿ `ದಿ ಬುದ್ಧ, ದಿ ದಮ್ಮ, ಅಂಡ್ ದಿ ಸಂಘ’ ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಬರೋಡಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆವರು ಈ ಗ್ರಂಥ ಪ್ರಕಟಣೆಯಲ್ಲಿ ನೆರವಾಗುತ್ತಾರೆ. ಹಾರ್ವರ್ಡ ವಿಶ್ವವಿದ್ಯಾಲಯದಲ್ಲಿನ ಪಾಧ್ಯಾಪಕರಿಗೆ ಪಾಲಿ ಕಲಿಸಲು ಮತ್ತು ಬುದ್ಧಘೋಷನ `ವಿಸುದ್ಧಿ ಮಗ್ಗ’ ಗ್ರಂಥ ಸಂಪಾದನೆಯಲ್ಲಿ ನೆರವಾಗಲು ಅಮೇರಿಕಾಕ್ಕೆ ತೆರಳುತ್ತಾರೆ. 1922ರಲ್ಲಿ ಅಮೆರಿಕಾದಿಂದ ಹಿಂದಿರುಗಿದ ನಂತರ ವಾರ್ದಾದ ಗಾಂಧಿ ಆಶ್ರಮದಲ್ಲಿ ನೆಲೆಸಿ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ದಂಡಿ ಸತ್ಯಾಗ್ರಹದ ಜೊತೆ ಮುಂಬಯಿ ನಗರದ ಗಿರಣಿ ಕಾರ್ಮಿಕರನ್ನು ಸಂಘಟಿಸಲು ಮುಂದಾಗುತ್ತಾರೆ. 1940ರಲ್ಲಿ ಅವರ ಮಹಾತ್ವಾಕಕ್ಷೆಯ `ಭಗವಾನ್ ಬುದ್ಧ’ ಕೃತಿಯು ಎರಡು ಸಂಪುಟಗಳಲ್ಲಿ ಪ್ರಕಟವಾಗುತ್ತದೆ. (ಆದ್ಯರಂಗಾಚಾರ್ಯರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.) ನೆಹರು ಅವರ ಪ್ರೇರಣೆಯಿಂದ ರಷ್ಯಾಕ್ಕೆ ಬೇಟಿ ನೀಡಿ ಅಲ್ಲಿ ಪಾಲಿ ಭಾಷೆಯನ್ನು ಕಲಿಸುವುದರ ಜೊತೆಗೆ ರಷ್ಯಾದ ಜನಜೀವನದ ಅಧ್ಯಯನದಲ್ಲಿ ತೊಡಗುತ್ತಾರೆ. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ರಷ್ಯಾದಿಂದ ಹಿಂದಿರುಗುವ ಧರ್ಮಾನಂದರು ವಾರ್ದಾದಲ್ಲಿ ನೆಲೆಸಿ ಅಲ್ಲಿಯೇ ತಮ್ಮ ಅಂತಿಮ ದಿನಗಳನ್ನು ಕಳೆಯುತ್ತಾರೆ. ದೈಹಿಕ ಅನಾರೋಗ್ಯದ ಕಾರಣ ಧರ್ಮಾನಂದರು 1947ರಲ್ಲಿ ಸಲ್ಲೇಖನದ ಮೂಲಕ ದೇಹತ್ಯಾಗ ಮಾಡುತ್ತಾರೆ.
`ನಿವೇದನೆ’ಯಲ್ಲಿ ಧರ್ಮಾನಂದರ ಖಾಸಗಿ ಬದುಕಿನ ವಿವರಗಳಿಲ್ಲ. ಇದು, ಧರ್ಮಾನಂದರು ಬೌದ್ಧ ಧರ್ಮವನ್ನು ಹುಡುಕಿ ಹೊರಟ ಮತ್ತು ಬೌದ್ಧ ಧರ್ಮದ ತಿಳಿವನ್ನು ಅರಸಿ ಹೊರಟ ಅಸೀಮ ಪ್ರಯಾಣದ ಕಥೆ ಮಾತ್ರ. ಆದರೆ ಈ ದಣಿವರಿಯದ ಪ್ರಯಾಣದ ಉದ್ದಕ್ಕೂ ಇವರು ತಮ್ಮ ಖಾಸಗಿ ಬದುಕಿನ ತಲ್ಲಣಗಳನ್ನು ದಾಖಲಿಸಿಲ್ಲ. ಕುಟುಂಬದ ಹೊಣೆಗಾರಿಕೆಗಳಿಗೆ ಬೆನ್ನು ಹಾಕಿ, ಹೆಂಡತಿ ಮಕ್ಕಳನ್ನು ತೊರೆದು ದೇಶಾಂತರ ತಿರುಗಾಟ ಕೈಗೊಂಡ ಧರ್ಮಾನಂದರ ಕುರಿತು ಅವರ ಮಗಳು ಮತ್ತು ಪತ್ನಿ ಬಾಲಬಾಯಿಯವರ ಅಭಿಪ್ರಾಯಾಗಳೇನು? ಮಗ ದಾಮೋದರ್ ಕೊಸಾಂಬಿ ಅಥವಾ ಕುಟುಂಬದ ಬೇರೆ ಯಾರಾದರು ಧರ್ಮಾನಂದರ ಜೀವನ ಚರಿತ್ರೆ ಬರೆದಿದ್ದರೆ ಅದು ಹೇಗಿರುತ್ತಿತ್ತು? ಎಂಬ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಆದರೆ, `ನಿವೇದನೆ’ಯ ಒಟ್ಟಾರೆಯ ಬರವಣಿಗೆಯಲ್ಲಿ ಧರ್ಮಾನಂದರು ಕೌಟುಂಬಿಕ ಮತ್ತು ಸಾಮಾಜಿಕ ಸೂಕ್ಷ್ಮಗಳ ಕುರಿತು ಏನನ್ನೂ ದಾಖಲಿಸಿಲ್ಲ. ಬದುಕಿರವವರೆಗೂ ಬ್ರಾಹ್ಮಣ್ಯವನ್ನು ಆಚರಿಸದ ಧರ್ಮಾನಂದರು, ಸಾರಸ್ವತರೆಂಬ ಕಾರಣಕ್ಕೆ ಮಾಂಸಹಾರಿಗಳೆಂದು ಜರಿದು ತಮಗೆ ಸಂಸ್ಕøತ ಹೇಳಿಕೊಡದ ಚಿತ್ಪಾವನ ಬ್ರಾಹ್ಮಣರ ತಾರತಮ್ಯದ ಕುರಿತು ಮಾತೇ ಆಡುವುದಿಲ್ಲ. ಇದೆಲ್ಲದರ ಹೊರತಾಗಿ ಧರ್ಮಾನಂದ ಕೊಸಾಂಬಿಯವರ ಆತ್ಮಕಥೆ ಆಧುನಿಕಪೂರ್ವ ಇಂಡಿಯಾದ ಒಬ್ಬ ಅಪ್ರತಿಮ ಚಿಂತಕನ ದಣಿವರಿಯದ ಜ್ಞಾನ ಯಾತ್ರೆಯ ಅಪೂರ್ವ ಕಥನ ಎಂಬುದರಲ್ಲಿ ಎರಡು ಮಾತಿಲ್ಲ.
– ಎ ಎಸ್ ಪ್ರಭಾಕರ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...