Homeಅಂತರಾಷ್ಟ್ರೀಯತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

ತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

- Advertisement -
- Advertisement -

ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ ಜನರು ಚೀನಾಕ್ಕೆ ಹೋಗಿ ಬಂದಿದ್ದಾರೆ.) ಆದರೆ ಅಚ್ಚರಿ ನೋಡಿ: ಅಲ್ಲಿ ಕೇವಲ 395 ಜನರಲ್ಲಿ ರೋಗಲಕ್ಷಣ ಕಂಡಿದೆ. 155 ಜನರು ಗುಣಮುಖರಾಗಿದ್ದಾರೆ. 6 ಜನ ಮಾತ್ರ ಸಾವಪ್ಪಿದ್ದಾರೆ. ಹಾಗೆಂದು ಅಲ್ಲಿನ ಪ್ರಜೆಗಳ ಮೇಲೆ ತುರ್ತುಸ್ಥಿತಿಯನ್ನು ಹೇರಿಲ್ಲ. ಯಾವ ಊರನ್ನೂ ಲಾಕ್‌ಡೌನ್ ಮಾಡಲಿಲ್ಲ. ಮನೆಮನೆಗೆ ಹೊಕ್ಕು ಟೆಸ್ಟಿಂಗ್ ಮಾಡಿಲ್ಲ. ಪೊಲೀಸರ ದಬ್ಬಾಳಿಕೆ ಇಲ್ಲ (ಅಲ್ಲಿ ಮಿಲಿಟರಿ ಆಡಳಿತವಿಲ್ಲ, ಪ್ರಜಾಪ್ರಭುತ್ವ ಇದೆ). ವಲಸೆ ಹೊರಟವರ ಗೋಳಿನ ಕತೆಗಳಿಲ್ಲ.

ಜಗತ್ತಿನ ಇತರೆಲ್ಲ ದೇಶಗಳಿಗೆ ಮಾದರಿಯಾಗುವಂಥ ಅದೇನು ಮ್ಯಾಜಿಕ್ ಅಲ್ಲಿ ನಡೆದಿದೆ ಗೊತ್ತೆ?

1. ಕೊರೊನಾದ ಹೊಸ ಅವತಾರ ತಲೆ ಎತ್ತಿದೆ ಎಂಬುದು ಗೊತ್ತಾದ ತಕ್ಷಣವೇ ಜನವರಿಯಲ್ಲೇ ತೈವಾನ್ ವಿಶೇಷ ನಿಗಾ ದಳವನ್ನು ಸೃಷ್ಟಿಸಿ, ಬಿಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತು. ಅಲ್ಲಿಂದ ಬರುವ ವಿಮಾನಗಳಲ್ಲಿ ಜ್ವರ ಪೀಡಿತರ ತಪಾಸಣೆಯನ್ನು ಆರಂಭಿಸಿತು. ವಿಮಾನ ನೆಲಕ್ಕಿಳಿಯುವ ಮೊದಲೇ ತಪಾಸಣೆ ನಡೆದಿದ್ದರಿಂದ ಉದ್ದುದ್ದ ಕ್ಯೂ ಇರಲಿಲ್ಲ.

2. ಫೆಬ್ರುವರಿ 10ರ ವೇಳೆಗೆ ಚೀನಾದಲ್ಲಿ 30 ಸಾವಿರ ಮಂದಿ ಕಾಯಿಲೆ ಬಿದ್ದಾಗ ತೈವಾನ್ನಲ್ಲಿ ಕೇವಲ 16 ರೋಗಿಗಳು ಪತ್ತೆ ಆಗಿದ್ದೇ ತಡ, ಚೀನಾದಿಂದ ಬರುವ ಎಲ್ಲ ಉಡ್ಡಾಣಗಳನ್ನೂ ಸ್ಥಗಿತಗೊಳಿಸಿ, ಹಾಂಗ್‌ಕಾಂಗ್ ಮೂಲಕ ಬರುವವರ ಪರೀಕ್ಷೆಯನ್ನು ವಿಮಾನದಲ್ಲೇ ನಡೆಸತೊಡಗಿತು. ತನ್ನ ದ್ವೀಪದ ಸುತ್ತ ಲಕ್ಷ್ಮಣ ರೇಖೆಯನ್ನು ಎಳೆಯಿತು.

2. ಮುಖವಾಡಗಳ ರಫ್ತನ್ನು ನಿಲ್ಲಿಸಿತು. ಉತ್ಪಾದನೆಯನ್ನು ಎಂಟು ಪಟ್ಟು ಹೆಚ್ಚಿಸಿತು. ಅವುಗಳ ತಯಾರಿಕೆಯನ್ನು ಮೊದಲು ಕೈದಿಗಳಿಗೆ (ಕೆಳಗಿನ ಚಿತ್ರ – ಹೊಲಿಗೆ ಕೆಲಸದಲ್ಲಿ ನಿರತರಾದ ಕೈದಿಗಳದ್ದು), ಆನಂತರ ಮಿಲಿಟರಿಗೇ ಒಪ್ಪಿಸಿತು. ಪ್ರತಿಯೊಬ್ಬ ಪ್ರಜೆಗೂ ವಾರಕ್ಕೆ ಮೂರು ನಾಲ್ಕು ಮುಖವಾಡಗಳ ವ್ಯವಸ್ಥೆ ಮಾಡಿತು. ಅದು ಎಲ್ಲಿ ಸಿಗುತ್ತದೆ ಎಂಬುದನ್ನು ಅವರವರ ಮೊಬೈಲ್‌ನಲ್ಲೇ ಮಾಹಿತಿ ಸಿಗುವಂತೆ ಮಾಡಿತು.

3. ಕೊರೊನಾ ಪೀಡಿತರನ್ನು ವೈರಸ್ ಥರಾ ಪರಿಗಣಿಸದೆ ಅವರನ್ನು ಪ್ರಜೆಗಳಂತೇ ನೋಡಿಕೊಂಡಿತು. ಅವರಿಗೆ ಅತ್ಯುತ್ತಮ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿತು. ಅವರ ನಿವಾಸಕ್ಕೆ ಅನ್ನಾಹಾರ ಹಾಗೂ ಅಗತ್ಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಂಡಿತು. ಪುಸ್ತಕಗಳನ್ನೂ ಒದಗಿಸಿತು. ದಿನಭತ್ಯೆಯನ್ನೂ ಘೋಷಿಸಿತು. ಜನರು ತಾವಾಗಿ ಖುಷಿಯಿಂದ ಕ್ವಾರಂಟೈನ್‌ಗೆ ಒಳಪಡುವಂತೆ ಮನವೊಲಿಸಿತು. ಅವರ ಫೋನ್ ನಂಬರನ್ನು ಪಡೆದು ಅದರಲ್ಲಿ ವಿಶೇಷ ಆಪ್ ಹಾಕಿತು. ಮನೆಬಿಟ್ಟು ಆಚೆ ಹೋದರೆ ಅವರ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ದಂಡ ವಜಾ ಆಗುತ್ತದೆಂದು ಟಿವಿ ಮೂಲಕ ಪ್ರಚಾರ ಕೊಟ್ಟಿತು. ಕಾಯಿಲೆ ಉಲ್ಪಣಗೊಂಡರೆ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿತು.

4. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುವದಂತಿಗಳನ್ನು ಪತ್ತೆ ಹಚ್ಚಬಲ್ಲ ವಿಶೇಷ ಅಲ್ಗೊರಿದಮ್ಮನ್ನು ಅದು ಸೃಷ್ಟಿಸಿತು. ಅದು ಚೀನಾದಿಂದ ಬರುವ ಸುಳ್ಳುಸುದ್ದಿಗಳನ್ನು ಫಿಲ್ಟರ್ ಮಾಡತೊಡಗಿತು. ದೇಶದೊಳಕ್ಕೆ ಬರುವ ಎಲ್ಲರ ಡೇಟಾಗಳನ್ನು ವಿಮಾ ಕಂಪನಿಗಳಿಂದ ತರಿಸಿಕೊಂಡು, ಅದನ್ನು ವೀಸಾ ವಿಭಾಗದ ಡೇಟಾ ಜೊತೆ ಜೋಡಿಸಿ, ಜ್ವರಪೀಡಿತರ ಕುರಿತ ಮಾಹಿತಿ ಎಲ್ಲ ಆಸ್ಪತ್ರೆ, ಔಷಧಾಲಯಗಳಿಗೂ ಮುಂಚಿತವಾಗಿಯೇ ಲಭಿಸುವಂತೆ ನೋಡಿಕೊಂಡಿತು.

 

* ಇತರ ಕೆಲವು ಮಹತ್ವದ ಮಾಹಿತಿಗಳು: ತೈವಾನ್ ದೇಶದ ಅಧ್ಯಕ್ಷರು ವಿಶ್ವವಿಖ್ಯಾತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ ಅರ್ಥತಜ್ಞ. ಉಪಾಧ್ಯಕ್ಷರು ಸ್ವತಃ ಎಪಿಡೀಮಿಯಾಲಜಿ ಡಾಕ್ಟರು- ಅಂದರೆ ಸಾಂಕ್ರಾಮಿಕ ರೋಗತಜ್ಞ. ಅಲ್ಲಿ ಕೊರೊನಾ ಸಂದರ್ಭದ ಅವರ TTT ಘೋಷವಾಕ್ಯ ಏನೆಂದರೆ ಟ್ರಸ್ಟ್, ಟ್ರಾನ್ಸಪರೆನ್ಸಿ ಮತ್ತು ಟೆಕ್ನಾಲಜಿ. ಜನರೊಂದಿಗಿನ ವಿಶ್ವಾಸ, ಪಾರದರ್ಶಕತೆ ಮತ್ತು ತಂತ್ರಜ್ಞಾನ. ಅಲ್ಲಿ ಕೇವಲ 20 ನಿಮಿಷಗಳಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಬರುವಂಥ ವೈದ್ಯಕೀಯ ವಿಧಾನ ಚಾಲ್ತಿಗೆ ಬಂದಿದೆ (ನಮ್ಮಲ್ಲಿ ಫಲಿತಾಂಶ ಬರಲು 6 ಗಂಟೆಯಿಂದ 24 ಗಂಟೆ ಬೇಕು).

*ತೈವಾನ್ ಜನಸಂಖ್ಯೆ 238 ಲಕ್ಷ ನಿಜ. ಆದರೆ ವುಹಾನ್‌ನಿಂದ ಕೇವಲ 943 ಕಿ.ಮೀ. ದೂರದಲ್ಲಿದೆ. ಅದಕ್ಕೆ ಹೋಲಿಸಿದರೆ ವುಹಾನ್ನಿಂದ 7500 ಕಿ.ಮೀ. ದೂರದ, ಕೇವಲ 192 ಲಕ್ಷ ಜನರಿರುವ ರುಮೇನಿಯಾದಲ್ಲಿ 7700 ರೋಗಿಗಳಿದ್ದು 392 ಮೃತರಾಗಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಇನ್ನೂ ಕಡಿಮೆ ಜನಸಂಖ್ಯೆಯ ಕತಾರ್ ದೇಶದಲ್ಲಿ 4103 ರೋಗಿಗಳಿದ್ದಾರೆ, 7 ಮಂದಿ ಗತಿಸಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಬಹ್ರೇನ್ ದೇಶದಲ್ಲೂ 1703 ರೋಗಿಗಳಿದ್ದು 7 ಮಂದಿ ಗತಿಸಿದ್ದಾರೆ. ಕೊನೆಯ ಈ ಎರಡೂ ದೇಶಗಳು ಭಾರೀ ತೈಲಧನಿಕ ಅಷ್ಟೇ ಅಲ್ಲ, ಮುನ್ನೆಚ್ಚರಿಕೆಗೆ ಅವಕ್ಕೆ ಮೂರು ತಿಂಗಳು ಕಾಲಾವಧಿ ಇತ್ತು.

ಕೊನೆಯ ಕುಟುಕು: ವುಹಾನ್ ಮಹಾಮಾರಿಯ ಅಲೆ ದಶದಿಕ್ಕುಗಳಲ್ಲಿ ಹಬ್ಬುತ್ತಿದ್ದಾಗ, ಎಲ್ಲ ಬಿಬಿಸಿ-ಸಿಎನ್‌ಎನ್‌ಗಳಲ್ಲಿ ಅದರದೇ ಪ್ರಮುಖ ಸುದ್ದಿ ಬರುತ್ತಿದ್ದಾಗ ನಮ್ಮ ಮಾಧ್ಯಮಗಳ ಗಮನವೆಲ್ಲ ಕಮಲನಾಥ್ ಸರಕಾರವನ್ನು ಕೆಡವುವ ಕಮಲದ ಸರ್ಕಸ್ ಕಡೆ, ಹಾಗೂ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಟ್ರಂಪ್ ಮಹಾಶಯನ ಟ್ರಂಪೆಟ್‌ ಕಡೆ ನೆಟ್ಟಿತ್ತು.

(ಕೃಪೆ: ನಾಗೇಶ್ ಹೆಗಡೆ ಅವರ ಫೇಸ್‌ಬುಕ್‌ ವಾಲ್‌ನಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...