Homeಅಂತರಾಷ್ಟ್ರೀಯತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

ತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

- Advertisement -
- Advertisement -

ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ ಜನರು ಚೀನಾಕ್ಕೆ ಹೋಗಿ ಬಂದಿದ್ದಾರೆ.) ಆದರೆ ಅಚ್ಚರಿ ನೋಡಿ: ಅಲ್ಲಿ ಕೇವಲ 395 ಜನರಲ್ಲಿ ರೋಗಲಕ್ಷಣ ಕಂಡಿದೆ. 155 ಜನರು ಗುಣಮುಖರಾಗಿದ್ದಾರೆ. 6 ಜನ ಮಾತ್ರ ಸಾವಪ್ಪಿದ್ದಾರೆ. ಹಾಗೆಂದು ಅಲ್ಲಿನ ಪ್ರಜೆಗಳ ಮೇಲೆ ತುರ್ತುಸ್ಥಿತಿಯನ್ನು ಹೇರಿಲ್ಲ. ಯಾವ ಊರನ್ನೂ ಲಾಕ್‌ಡೌನ್ ಮಾಡಲಿಲ್ಲ. ಮನೆಮನೆಗೆ ಹೊಕ್ಕು ಟೆಸ್ಟಿಂಗ್ ಮಾಡಿಲ್ಲ. ಪೊಲೀಸರ ದಬ್ಬಾಳಿಕೆ ಇಲ್ಲ (ಅಲ್ಲಿ ಮಿಲಿಟರಿ ಆಡಳಿತವಿಲ್ಲ, ಪ್ರಜಾಪ್ರಭುತ್ವ ಇದೆ). ವಲಸೆ ಹೊರಟವರ ಗೋಳಿನ ಕತೆಗಳಿಲ್ಲ.

ಜಗತ್ತಿನ ಇತರೆಲ್ಲ ದೇಶಗಳಿಗೆ ಮಾದರಿಯಾಗುವಂಥ ಅದೇನು ಮ್ಯಾಜಿಕ್ ಅಲ್ಲಿ ನಡೆದಿದೆ ಗೊತ್ತೆ?

1. ಕೊರೊನಾದ ಹೊಸ ಅವತಾರ ತಲೆ ಎತ್ತಿದೆ ಎಂಬುದು ಗೊತ್ತಾದ ತಕ್ಷಣವೇ ಜನವರಿಯಲ್ಲೇ ತೈವಾನ್ ವಿಶೇಷ ನಿಗಾ ದಳವನ್ನು ಸೃಷ್ಟಿಸಿ, ಬಿಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತು. ಅಲ್ಲಿಂದ ಬರುವ ವಿಮಾನಗಳಲ್ಲಿ ಜ್ವರ ಪೀಡಿತರ ತಪಾಸಣೆಯನ್ನು ಆರಂಭಿಸಿತು. ವಿಮಾನ ನೆಲಕ್ಕಿಳಿಯುವ ಮೊದಲೇ ತಪಾಸಣೆ ನಡೆದಿದ್ದರಿಂದ ಉದ್ದುದ್ದ ಕ್ಯೂ ಇರಲಿಲ್ಲ.

2. ಫೆಬ್ರುವರಿ 10ರ ವೇಳೆಗೆ ಚೀನಾದಲ್ಲಿ 30 ಸಾವಿರ ಮಂದಿ ಕಾಯಿಲೆ ಬಿದ್ದಾಗ ತೈವಾನ್ನಲ್ಲಿ ಕೇವಲ 16 ರೋಗಿಗಳು ಪತ್ತೆ ಆಗಿದ್ದೇ ತಡ, ಚೀನಾದಿಂದ ಬರುವ ಎಲ್ಲ ಉಡ್ಡಾಣಗಳನ್ನೂ ಸ್ಥಗಿತಗೊಳಿಸಿ, ಹಾಂಗ್‌ಕಾಂಗ್ ಮೂಲಕ ಬರುವವರ ಪರೀಕ್ಷೆಯನ್ನು ವಿಮಾನದಲ್ಲೇ ನಡೆಸತೊಡಗಿತು. ತನ್ನ ದ್ವೀಪದ ಸುತ್ತ ಲಕ್ಷ್ಮಣ ರೇಖೆಯನ್ನು ಎಳೆಯಿತು.

2. ಮುಖವಾಡಗಳ ರಫ್ತನ್ನು ನಿಲ್ಲಿಸಿತು. ಉತ್ಪಾದನೆಯನ್ನು ಎಂಟು ಪಟ್ಟು ಹೆಚ್ಚಿಸಿತು. ಅವುಗಳ ತಯಾರಿಕೆಯನ್ನು ಮೊದಲು ಕೈದಿಗಳಿಗೆ (ಕೆಳಗಿನ ಚಿತ್ರ – ಹೊಲಿಗೆ ಕೆಲಸದಲ್ಲಿ ನಿರತರಾದ ಕೈದಿಗಳದ್ದು), ಆನಂತರ ಮಿಲಿಟರಿಗೇ ಒಪ್ಪಿಸಿತು. ಪ್ರತಿಯೊಬ್ಬ ಪ್ರಜೆಗೂ ವಾರಕ್ಕೆ ಮೂರು ನಾಲ್ಕು ಮುಖವಾಡಗಳ ವ್ಯವಸ್ಥೆ ಮಾಡಿತು. ಅದು ಎಲ್ಲಿ ಸಿಗುತ್ತದೆ ಎಂಬುದನ್ನು ಅವರವರ ಮೊಬೈಲ್‌ನಲ್ಲೇ ಮಾಹಿತಿ ಸಿಗುವಂತೆ ಮಾಡಿತು.

3. ಕೊರೊನಾ ಪೀಡಿತರನ್ನು ವೈರಸ್ ಥರಾ ಪರಿಗಣಿಸದೆ ಅವರನ್ನು ಪ್ರಜೆಗಳಂತೇ ನೋಡಿಕೊಂಡಿತು. ಅವರಿಗೆ ಅತ್ಯುತ್ತಮ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿತು. ಅವರ ನಿವಾಸಕ್ಕೆ ಅನ್ನಾಹಾರ ಹಾಗೂ ಅಗತ್ಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಂಡಿತು. ಪುಸ್ತಕಗಳನ್ನೂ ಒದಗಿಸಿತು. ದಿನಭತ್ಯೆಯನ್ನೂ ಘೋಷಿಸಿತು. ಜನರು ತಾವಾಗಿ ಖುಷಿಯಿಂದ ಕ್ವಾರಂಟೈನ್‌ಗೆ ಒಳಪಡುವಂತೆ ಮನವೊಲಿಸಿತು. ಅವರ ಫೋನ್ ನಂಬರನ್ನು ಪಡೆದು ಅದರಲ್ಲಿ ವಿಶೇಷ ಆಪ್ ಹಾಕಿತು. ಮನೆಬಿಟ್ಟು ಆಚೆ ಹೋದರೆ ಅವರ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ದಂಡ ವಜಾ ಆಗುತ್ತದೆಂದು ಟಿವಿ ಮೂಲಕ ಪ್ರಚಾರ ಕೊಟ್ಟಿತು. ಕಾಯಿಲೆ ಉಲ್ಪಣಗೊಂಡರೆ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿತು.

4. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುವದಂತಿಗಳನ್ನು ಪತ್ತೆ ಹಚ್ಚಬಲ್ಲ ವಿಶೇಷ ಅಲ್ಗೊರಿದಮ್ಮನ್ನು ಅದು ಸೃಷ್ಟಿಸಿತು. ಅದು ಚೀನಾದಿಂದ ಬರುವ ಸುಳ್ಳುಸುದ್ದಿಗಳನ್ನು ಫಿಲ್ಟರ್ ಮಾಡತೊಡಗಿತು. ದೇಶದೊಳಕ್ಕೆ ಬರುವ ಎಲ್ಲರ ಡೇಟಾಗಳನ್ನು ವಿಮಾ ಕಂಪನಿಗಳಿಂದ ತರಿಸಿಕೊಂಡು, ಅದನ್ನು ವೀಸಾ ವಿಭಾಗದ ಡೇಟಾ ಜೊತೆ ಜೋಡಿಸಿ, ಜ್ವರಪೀಡಿತರ ಕುರಿತ ಮಾಹಿತಿ ಎಲ್ಲ ಆಸ್ಪತ್ರೆ, ಔಷಧಾಲಯಗಳಿಗೂ ಮುಂಚಿತವಾಗಿಯೇ ಲಭಿಸುವಂತೆ ನೋಡಿಕೊಂಡಿತು.

 

* ಇತರ ಕೆಲವು ಮಹತ್ವದ ಮಾಹಿತಿಗಳು: ತೈವಾನ್ ದೇಶದ ಅಧ್ಯಕ್ಷರು ವಿಶ್ವವಿಖ್ಯಾತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ ಅರ್ಥತಜ್ಞ. ಉಪಾಧ್ಯಕ್ಷರು ಸ್ವತಃ ಎಪಿಡೀಮಿಯಾಲಜಿ ಡಾಕ್ಟರು- ಅಂದರೆ ಸಾಂಕ್ರಾಮಿಕ ರೋಗತಜ್ಞ. ಅಲ್ಲಿ ಕೊರೊನಾ ಸಂದರ್ಭದ ಅವರ TTT ಘೋಷವಾಕ್ಯ ಏನೆಂದರೆ ಟ್ರಸ್ಟ್, ಟ್ರಾನ್ಸಪರೆನ್ಸಿ ಮತ್ತು ಟೆಕ್ನಾಲಜಿ. ಜನರೊಂದಿಗಿನ ವಿಶ್ವಾಸ, ಪಾರದರ್ಶಕತೆ ಮತ್ತು ತಂತ್ರಜ್ಞಾನ. ಅಲ್ಲಿ ಕೇವಲ 20 ನಿಮಿಷಗಳಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಬರುವಂಥ ವೈದ್ಯಕೀಯ ವಿಧಾನ ಚಾಲ್ತಿಗೆ ಬಂದಿದೆ (ನಮ್ಮಲ್ಲಿ ಫಲಿತಾಂಶ ಬರಲು 6 ಗಂಟೆಯಿಂದ 24 ಗಂಟೆ ಬೇಕು).

*ತೈವಾನ್ ಜನಸಂಖ್ಯೆ 238 ಲಕ್ಷ ನಿಜ. ಆದರೆ ವುಹಾನ್‌ನಿಂದ ಕೇವಲ 943 ಕಿ.ಮೀ. ದೂರದಲ್ಲಿದೆ. ಅದಕ್ಕೆ ಹೋಲಿಸಿದರೆ ವುಹಾನ್ನಿಂದ 7500 ಕಿ.ಮೀ. ದೂರದ, ಕೇವಲ 192 ಲಕ್ಷ ಜನರಿರುವ ರುಮೇನಿಯಾದಲ್ಲಿ 7700 ರೋಗಿಗಳಿದ್ದು 392 ಮೃತರಾಗಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಇನ್ನೂ ಕಡಿಮೆ ಜನಸಂಖ್ಯೆಯ ಕತಾರ್ ದೇಶದಲ್ಲಿ 4103 ರೋಗಿಗಳಿದ್ದಾರೆ, 7 ಮಂದಿ ಗತಿಸಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಬಹ್ರೇನ್ ದೇಶದಲ್ಲೂ 1703 ರೋಗಿಗಳಿದ್ದು 7 ಮಂದಿ ಗತಿಸಿದ್ದಾರೆ. ಕೊನೆಯ ಈ ಎರಡೂ ದೇಶಗಳು ಭಾರೀ ತೈಲಧನಿಕ ಅಷ್ಟೇ ಅಲ್ಲ, ಮುನ್ನೆಚ್ಚರಿಕೆಗೆ ಅವಕ್ಕೆ ಮೂರು ತಿಂಗಳು ಕಾಲಾವಧಿ ಇತ್ತು.

ಕೊನೆಯ ಕುಟುಕು: ವುಹಾನ್ ಮಹಾಮಾರಿಯ ಅಲೆ ದಶದಿಕ್ಕುಗಳಲ್ಲಿ ಹಬ್ಬುತ್ತಿದ್ದಾಗ, ಎಲ್ಲ ಬಿಬಿಸಿ-ಸಿಎನ್‌ಎನ್‌ಗಳಲ್ಲಿ ಅದರದೇ ಪ್ರಮುಖ ಸುದ್ದಿ ಬರುತ್ತಿದ್ದಾಗ ನಮ್ಮ ಮಾಧ್ಯಮಗಳ ಗಮನವೆಲ್ಲ ಕಮಲನಾಥ್ ಸರಕಾರವನ್ನು ಕೆಡವುವ ಕಮಲದ ಸರ್ಕಸ್ ಕಡೆ, ಹಾಗೂ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಟ್ರಂಪ್ ಮಹಾಶಯನ ಟ್ರಂಪೆಟ್‌ ಕಡೆ ನೆಟ್ಟಿತ್ತು.

(ಕೃಪೆ: ನಾಗೇಶ್ ಹೆಗಡೆ ಅವರ ಫೇಸ್‌ಬುಕ್‌ ವಾಲ್‌ನಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...