ಕೆಟ್ಟ ಟ್ರೋಲಿಂಗ್ ನಂತರ ಹಿಂದೂ-ಮುಸ್ಲಿಂ ದಂಪತಿಗಳು ಮತ್ತು ಅವರ ಕುಟುಂಬಗಳನ್ನು ಒಳಗೊಂಡ ಜಾಹೀರಾತನ್ನು ಹಿಂತೆಗೆದುಕೊಂಡಿರುವ ಟೈಟಾನ್ ಆಭರಣ ಬ್ರಾಂಡ್ ತನಿಷ್ಕ್ನ ಏಕತ್ವಂ ಜಾಹೀರಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಅಂತರ್-ಧರ್ಮೀಯ ಕುಟುಂಬಗಳಲ್ಲಿ ಮದುವೆಯಾದ ಕಲಾವಿದರು, ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಗಳಲ್ಲಿ ಫೋಟೋಗಳನ್ನು ಶೇರ್ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ತನಿಷ್ಕ್ ಏಕತ್ವಂ ಜಾಹೀರಾತನ್ನು ಬೆಂಬಲಿಸುತ್ತಿದ್ದಾರೆ.
ನಟ ಮೊಹಮ್ಮದ್ ಜೀಶನ್ ಅಯೂಬ್ ಅವರನ್ನು ಮದುವೆಯಾದ ನಟಿ, ನಿರ್ದೇಶಕಿ ರಸಿಕಾ ಅಗಾಶೆ ತಮ್ಮ 6 ವರ್ಷಗಳ ಹಿಂದಿನ ಬೇಬಿ ಶವರ್(ಸೀಮಂತ) ಚಿತ್ರವನ್ನು ಹಂಚಿಕೊಂಡಿದ್ದಾರೆ.
Meri godbharai.. socha share kar dun.. and before crying out love jihad, lets learn about special marriage act.. pic.twitter.com/BUykrCriaC
— rasika agashe (@rasikaagashe) October 14, 2020
“ಲವ್ ಜಿಹಾದ್ ಎಂದು ಕೂಗುವ ಮೊದಲು, ವಿಶೇಷ ಮದುವೆ ಕಾಯ್ದೆಯ ಬಗ್ಗೆ ತಿಳಿದುಕೊಳ್ಳೋಣ” ಎಂದು ರಸಿಕಾ ಅಗಾಶೆ ಹೇಳಿದ್ದಾರೆ. ಫೋಟೋದಲ್ಲಿ ಜೀಶನ್ ಅಯ್ಯೂಬ್ ಕೂಡ ಅವರ ಪಕ್ಕದಲ್ಲಿ ಕುಳಿತಿರುವುದನ್ನು ನೋಡಬಹುದು.
ಇದನ್ನೂ ಓದಿ: ಸೌಹಾರ್ದತೆ ಸಾರುವ ’ಏಕತ್ವಂ’ ಜಾಹೀರಾತು ನಿಲ್ಲಿಸಿದ ತನಿಷ್ಕ್ ಆಭರಣ ಕಂಪನಿ: ಅಂತದ್ದೇನಿದೆ ಅದರಲ್ಲಿ?
ಗ್ರಿಹಾ ಅತುಲ್, “ತನೀಶ್ಕ್ ಜಾಹೀರಾತು ಅವಳಂತಹ ಅನೇಕರ ನೈಜತೆಗಳನ್ನು ಆಧರಿಸಿದೆ. ನಾನು ಮುಸ್ಲಿಂ ಮನೆಯೊಂದರಲ್ಲಿ ಮದುವೆಯಾಗಿದ್ದೇನೆ. ಅದು ನನ್ನ ಧಾರ್ಮಿಕ ಗುರುತನ್ನು ಗೌರವಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಆದ್ದರಿಂದ ತನೀಷ್ಕ್ ಜಾಹೀರಾತು ಕಲ್ಪನೆಯಲ್ಲ. ಇದು ಫ್ಯಾಸಿಸ್ಟ್ ಶಕ್ತಿಗಳಿಂದ ಉದ್ದೇಶಪೂರ್ವಕವಾಗಿ ನಿರಾಕರಿಸಲ್ಪಟ್ಟ ನಮ್ಮ ಕಾಲದ ವಾಸ್ತವವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
My two bits on the controversy raging around the #TanishqAd
Also P. S. Ours’ is a marriage and it’s not perfect. We still fight over dishes not done and गीला towel bed पे! We are no aliens bro! Quit making us feel so special… by doing अरे हिंदू मुस्लिम ?✌?or #interfaith pic.twitter.com/psLQKvkVoA— Griha Atul (@GrihaAtul) October 14, 2020
ಇದನ್ನೂ ಓದಿ: ತನಿಷ್ಕ್ ಜಾಹೀರಾತು: ಗುಜರಾತ್ನ ಅಂಗಡಿ ಮಳಿಗೆಗಳಿಗೆ ಬೆದರಿಕೆ!
ಮದುವೆಯಾಗಿ 44 ವರ್ಷಗಳಾದ ಇನ್ನೊಂದು ದಂಪತಿ ತಮ್ಮ ಕಥೆಯನ್ನೂ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹೋರಾಟದ ನಂತರ ಈ ದಂಪತಿ ಈಗ ಶಾಂತಿಯನ್ನು ಕಂಡುಕೊಂಡಿದ್ದಾರೆ. ಗೋವಾದಲ್ಲಿ ತಮ್ಮ ಮನೆಗೆ ಹಿಂದಿಯಲ್ಲಿ “ಹಮ್” ಎಂದು ಹೆಸರಿಸಿದ್ದಾರೆ. ಅಲ್ಲಿ “ಎಚ್” ಎಂದರೆ ಹಿಂದೂ ಮತ್ತು”ಎಂ” ಮುಸ್ಲಿಂ.
“I saw her for the first time before Dussehra– we were neighbours and family friends. But because I was away at boarding…
Posted by Humans of Bombay on Wednesday, October 14, 2020
ತನಿಷ್ಕ್ ಜಾಹೀರಾತು ಲವ್ ಜಿಹಾದ್ ಎಂಬ ಕಾಮೆಂಟುಗಳಳ ಹಿನ್ನೆಲೆ ಈ ಸುಂದರ ಕಥೆಯನ್ನು ಅಕ್ಟೋಬರ್ 14, 2020 ರಂದು ಹ್ಯೂಮನ್ಸ್ ಆಫ್ ಬಾಂಬೆ ಪೋಸ್ಟ್ ಮಾಡಿದೆ.
ಇವುಗಳ ಜೊತೆಗೆ ಅನೇಕ ಮಂದಿ ತನಿಷ್ಕ್ನಲ್ಲಿ ಆಭರಣಗಳನ್ನು ಕೊಳ್ಳುವ ಮೂಲಕ, ಅಲ್ಲೇ ಆಭರಣ ಕೊಳ್ಳುವ ಯೋಜನೆಗಳ ಮೂಲಕ ತನಿಷ್ಕ್ಗೆ ಬೆಂಬಲ ಸೂಚಿಸುತ್ತಿದ್ದಾರೆ.
I support the #tanishq ad. Will continue buying from them.
Maybe a bit more.#TanishqAd @TanishqJewelry
— Abhishikta (@IamAbhishikta) October 13, 2020
ಇನ್ನು ಕೆಲವರು ತಾವು ತನಿಷ್ಕ್ನಲ್ಲಿ ಆಭರಣ ಕೊಂಡುಕೊಂಡಿರುವುದಕ್ಕೆ ಹೆಮ್ಮೆಯಿದೆ ಎಂದು ಪೋಸ್ಟ್ ಮಾಡಿದ್ದಾರೆ.
Feel elated that my recent jewelry purchase is from Tanishq. #TanishqEkatvam
— Rubab(رباب) (@irubabkhan) October 12, 2020
ಏಕತ್ವಂ ಅಭಿಯಾನದ ಜಾಹೀರಾತಿನ ಮೂಲಕ ತನಿಷ್ಕ್ ‘ಲವ್ ಜಿಹಾದ್’ ಹಾಗೂ ‘ನಕಲಿ ಜಾತ್ಯತೀತತೆ’ಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹಲವು ಟ್ವಿಟ್ಟಿರಿಗರು ಆರೋಪಿಸಿದ್ದರು. ಇದನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್, ಲೇಖಕ ಚೇತನ್ ಭಗತ್, ಖ್ಯಾತ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಸೇರಿದಂತೆ ಹಲವು ಮಂದಿ ಖಂಡಿಸಿದ್ದಾರೆ.
’ತನಿಷ್ಕ್ ತಮ್ಮ ಉದ್ಯೋಗಿಗಳು ಮತ್ತು ಮಳಿಗೆಗಳ ಸುರಕ್ಷತೆಗಾಗಿ ಜಾಹೀರಾತನ್ನು ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡರು. ನಾವು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇವೆ ಮತ್ತು ತನಿಷ್ಕ್ ಹಲವು ಆಭರಣ ಮಳಿಗೆಗಳನ್ನು ಹೊಂದಿದೆ. ಇವುಗಳ ಸುರಕ್ಷತೆ ಮುಖ್ಯ ಹಾಗಾಗಿ ಜಾಹೀರಾತು ವಾಪಸ್ ಪಡೆದಿದ್ದಾರೆ’ ಎಂದು ಜಾಹೀರಾತು ನಿರ್ದೇಶಕಿ ಜೊಯೀತಾ ಹೇಳಿದ್ದಾರೆ.